Monday, November 30, 2020

Esteem Needs: Becoming Rich, Famous and Powerful

Take a look at Maslow’s hierarchy of needs. The one step before you reach self-actualization is the Esteem needs. I would like to focus on it in this blog post. Three desires or needs to become Rich (financial strength, freedom), Famous (recognition) and Powerful (respect, status) shape your self-esteem.

 

Maslow's Hierarchy of Needs


It does not matter which part of the world you belong to or what your religion is or whether you are young or old, if you are a human being, you are driven by the desire of becoming “rich, famous and powerful”. Definition of becoming rich is gathering more wealth than you currently possess (and not to become wealthiest person of the world). Similarly, becoming famous can be known well in your own circles. Becoming powerful would mean expanding your control and influence beyond your own family and community to bigger span of things.


There are few who work on all three desires simultaneously. But there are many who would prioritize one among these three and you can easily spot them by the professions they choose. Those who chose to be wealthy (over fame and power) are likely to be found in business or trade. Those who want to be famous first are attracted to movie industry or sports. Those who prefer power, you will see them in key Govt jobs, politics or in the dreaded underworld.


You can say this theory is rubbish. But read little further before you conclude. Hippies who wander throughout the world do not want to conform to anything. They don’t want to become someone or something. When people started asking the reasons for this behavior, one hippie gave such a pleasing response, people started listening to him and he was sought after. He started becoming rich, famous and influential. See, that is what he wanted to avoid in the first place. Though he appeared rebel in the beginning, becoming rich or famous was driving him unconsciously. Better acknowledge these desires before they express themselves.


No matter where you start, your inclination towards these desires lets you pick relevant skills on the go. Manipulating people or situations becomes your natural part if you are power hungry and similarly you would know how to impress people if you wanted to become famous. And you would not leave money on the table and make best use of opportunities if you wanted to become wealthy. These characters will become part of your personality. You can see the same things from opposite angle too. If you had to lose money you would be a lot stressed if your root desire is to become wealthy. Losing your reputation would give you sleepless nights if you wanted to be famous and losing the position would drive you nuts if you are power oriented. These root desires will give you immense satisfaction when you achieve them and can cause great stress when challenged. 


These desires impact everyone. They let scientists make better inventions, sportsmen break older records, politicians solve societal issues. Scratch the surface of any person, you are sure to see them. With efforts, you will clearly identify the motivating factors of everyone around you (including yourself). They need to be transcended before you reach the final stage of self-actualization as defined by Maslow. This would roughly translate into becoming a spiritual being in another parlance.


Saturday, November 28, 2020

ಮುತ್ತು ರತ್ನ ಮಾರಿದ ನೆಲದ ಮಣ್ಣನ್ನೇ ಮಾರಿಕೊಳ್ಳುವ ದುರಾದೃಷ್ಟ

ಇಂದಿಗೆ ವಿಜಯನಗರ ಹೊಸ ಜಿಲ್ಲೆಯಾಗಿದೆ. ಆದರೆ ಐದು ಶತಮಾನಗಳ ಹಿಂದೆ ಇದು ಒಂದು ಸಾಮ್ರಾಜ್ಯವಾಗಿತ್ತಲ್ಲವೇ? ಮುತ್ತು ರತ್ನಗಳನ್ನು ಬೀದಿಯಲ್ಲಿ ವ್ಯಾಪಾರ ಮಾಡಿದ ಅಲ್ಲಿನ ಜನರು ಇಂದಿಗೆ ಹಿಂದುಳಿದ ಜಿಲ್ಲೆಗಳ ಜನರಾಗಿ ಪರಿವರ್ತತವಾದದ್ದು ಹೇಗೆ? ಹಂಪಿಯು ಭಾರತಕ್ಕೆ ಅಷ್ಟ ಅಲ್ಲ, ಬದಲಿಗೆ ಆವತ್ತಿನ ಕಾಲದಲ್ಲಿ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿತ್ತು. ಸಾಕಷ್ಟು ವಿದೇಶಿ ಪ್ರವಾಸಿಗರು ಹಂಪೆಯನ್ನು ರೋಮ್ ಗೆ ಹೋಲಿಸಿ ಕೊಂಡಾಡಿದ್ದರು. ಅಲ್ಲಿ ಆಡಳಿತ ಇದ್ದದ್ದು ಯಾವುದೊ ಸಣ್ಣ ಸಾಮಂತ ಅಥವಾ ಪಾಳೇಗಾರನದ್ದೋ ಅಲ್ಲವಲ್ಲ. ದಕ್ಷಿಣ ಭಾರತದ ಕೇಂದ್ರ ಬಿಂದು ಎನ್ನುವಂತೆ ೨೩೦ ವರ್ಷಗಳ ಕಾಲ ಗುರುತಿಸಿಕೊಂಡ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಬೀಳುವಂತೆ ಮಾಡಿದ, ಮತ್ತೆ ಯಾವುದೇ ಕಾರಣಕ್ಕೆ ಪುನರುಜ್ಜಿವಿತಗೊಳ್ಳದಂತೆ ತಡೆದ ಕಾರಣಗಳು ಏನು? ಲಕ್ಷಾಂತರ ಜನ ಬದುಕಿದ ಒಂದು ಪಟ್ಟಣ ದುರಾದಷ್ಟದ ಹಣೆ ಪಟ್ಟಿ ಕಟ್ಟಿಕೊಂಡು ನೇಪಥ್ಯಕ್ಕೆ ಸರಿದು ಹೋದದ್ದು ಏಕೆ?


ದೆಹಲಿಯ ಚರಿತ್ರೆ ಗಮನಿಸಿ ನೋಡಿ. ಅಲ್ಲಿ ಸಾಕಷ್ಟು ರಾಜವಂಶಗಳು ಅಧಿಕಾರ ನಡೆಸಿ ಹೋಗಿವೆ. ಕೆಲವು ಹಿಂದೂ, ಕೆಲವು ಮುಸ್ಲಿಂ, ಆಮೇಲೆ ಬ್ರಿಟಿಷರು. ಆದರೂ ದೆಹಲಿ ಸ್ವತಂತ್ರ ಭಾರತದ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಎಷ್ಟು ಬಾರಿ ಆಕ್ರಮಣಕ್ಕೊಳಗಾದರೂ ಮತ್ತೆ ಎದ್ದು ನಿಂತಿದೆ. ಅಥವಾ ಕಾಶಿ ಪಟ್ಟಣವನ್ನು ಗಮನಿಸಿ ನೋಡಿ. ಪುರಾತನ ಕಾಲದ ಈ ಪಟ್ಟಣ ಅಂದಿಗೂ, ಇಂದಿಗೂ ತನ್ನ ಇರುವಿಕೆಯನ್ನು ಮತ್ತು ಸ್ವಂತಿಕೆಯನ್ನು, ಕಾಲಾತೀತವೆನ್ನುವಂತೆ ಉಳಿಸಿಕೊಂಡು ಬಂದಿದೆ. ಬಹು ಜನ ಬದುಕಿದ್ದ ಪಟ್ಟಣಗಳೆಲ್ಲವೂ ತಮ್ಮ ವೈಭವವನ್ನು ಕಳೆದುಕೊಂಡರೂ ಜನರ ವಾಸಕ್ಕೆ ದೂರ ಎನ್ನುವಂತೆ ಮರೆಯಾಗಿ ಹೋಗಲಿಲ್ಲ.


ಆದರೆ ನಮ್ಮ ಹಂಪಿಯನ್ನೇ ನೋಡಿ, ಅದು ಇಂದಿಗೆ ಕರ್ನಾಟಕದ ಅಥವಾ ಆಂಧ್ರ ಪ್ರದೇಶದ ರಾಜಧಾನಿಯಾಗಿ ಬದಲಾಗಬೇಕಿತ್ತು. ಅದಿಲ್ಲದಿದ್ದರೆ, ಒಂದು ಜಿಲ್ಲಾ ಕೇಂದ್ರವೋ ಅಥವಾ ಒಂದು ದೊಡ್ಡ ಪಟ್ಟಣವೋ ಆಗಬೇಕಿತ್ತು. ಅವ್ಯಾವವೂ ಆಗಲಿಲ್ಲ. ೧೫೬೫ ರಲ್ಲಿ ಹಂಪಿಯನ್ನು ತೊರೆದ ಸಾಕಷ್ಟು ಜನ  ಆಶ್ರಯಿಸಿದ್ದು, ಹೊಸ ಊರನ್ನು ಕಟ್ಟಿಕೊಂಡಿದ್ದು ಹತ್ತಿರದ ಹೊಸಪೇಟೆಯಲ್ಲಿ. ಆದರೆ ಒಂದು ಸಾಮ್ರಾಜ್ಯವನ್ನು ಕಟ್ಟಬಲ್ಲ ಮತ್ತು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಲ್ಲ ಚಾತುರ್ಯ ಮತ್ತು ನೈಪುಣ್ಯತೆ ಇದ್ದ ಜನರು ಈ ಪ್ರದೇಶವನ್ನು ಶಾಶ್ವತವಾಗಿ ಎನ್ನುವಂತೆ ತೊರೆದು ಹೋದರು. ಏಕೆಂದರೆ ಅವರನ್ನು ಹಿಡಿದಿಡುವ ಶಕ್ತಿ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಮುಗಿದು ಹೋಗಿತ್ತು. ಯುದ್ಧ ಗೆದ್ದವರಿಗೂ, ಹಂಪಿಯನ್ನು ಹಾಳುಗೆಡುವುದರಲ್ಲಿ ಇದ್ದ ಉತ್ಸಾಹ ಅದನ್ನು ಕಾಪಾಡಿ ತಮ್ಮ ಆಳ್ವಿಕೆಗೆ ಒಳಪಡಿಸಿಕೊಳ್ಳುವದರ ಬಗ್ಗೆ ಇರಲಿಲ್ಲ. ಹಂಪಿಯು ಅವರ ಕಣ್ಣನ್ನು ಶತಮಾನಗಳ ಕಾಲ ಕುಕ್ಕಿತ್ತಲ್ಲ. ವೈಭವದ ಉತ್ತುಂಗ ಹೆಚ್ಚಿನ ಶತ್ರುಗಳನ್ನು ಸೃಷ್ಟಿ ಮಾಡುವುದು ಸಾಮಾನ್ಯ ವಿಷಯ ತಾನೇ? ಯುದ್ಧ ಸೋತ ಸುದ್ದಿ ತಲುಪಿದ ತಕ್ಷಣ, ರಾಮರಾಯನ ತಮ್ಮಂದಿರು, ವಂಶಸ್ಥರು ಸಾಧ್ಯವಾದಷ್ಟು ಸಂಪತ್ತನ್ನು ಆನೆಗಳ ಮೇಲೆ ಹೇರಿಕೊಂಡು ಪೆನುಗೊಂಡಗೆ ಸಾಗಿದರು. ಹಂಪಿಯ ರಕ್ಷಣೆ ವಿರೂಪಾಕ್ಷನ ಪಾಲಿಗೆ ಬಿತ್ತು. ಮೊದಲಿಗೆ ಸುತ್ತ ಮುತ್ತಲಿನ ಕಳ್ಳ-ಕಾಕರೇ ಹಂಪಿಯನ್ನು ದೋಚಿದರು. ನಂತರದ ದಿನಗಳು ಹಂಪಿಯ ಚರಿತೆಯಲ್ಲಿ ಕರಾಳ ದಿನಗಳು. ಆಗ ನಡೆದ ದೌರ್ಜನ್ಯದ ಭೀಕರತೆಗೆ ಸಾಕ್ಷಿಯಾಗಿ ಇಂದಿಗೂ ಭಗ್ನ ಅವಶೇಷಗಳು ನಿಂತಿವೆ. ತುಂಗಭದ್ರೆಯು ಹಂಪೆಯ ಎಲ್ಲ ರಕ್ತದ ಕಲೆಗಳನ್ನು ತೊಳೆದು ಹಾಕಿದರೂ, ಜನರ ಭೀತಿ ಮರೆಯಾಗಿ ಹೋಗಲೇ ಇಲ್ಲ. ಯಾರಿಗೂ ಬೇಡವಾಗಿ ಹೋದ ಹಂಪೆಯನ್ನು ಮತ್ತಷ್ಟು ಹಾಳುಗೆಡವಿದ್ದು ಕಾಲನ ಮಹಿಮೆ.


ಕಳೆದು ಹೋದ ಗತ ವೈಭವದ ಬಗ್ಗೆ ಮಾತನಾಡುವ ನಾವು, ವಿಜಯನಗರದ ಅರಸರಿಗೆ ಸಾಧ್ಯವಾಗಿದ್ದು ಅವರ ನಂತರದ ಸಮಾಜಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಯೋಚಿಸುವುದಿಲ್ಲ. ಮುತ್ತು ರತ್ನ ಬೀದಿಗಳಲ್ಲಿ ಮಾರಿ ವೈಭವದ ತುದಿ ತಲುಪಿದ ಕೀರ್ತಿ ಅಂದಿನ ಅರಸರದಾದರೆ, ಅದೇ ಪ್ರದೇಶದ ಮಣ್ಣನ್ನು ವಿದೇಶಗಳಿಗೆ ಮಾರಿಕೊಳ್ಳುವ ಅಪಕೀರ್ತಿ ನಮ್ಮ ಇಂದಿನ ಸಮಾಜದ್ದು ಎನ್ನುವುದೇ ದುರಾದೃಷ್ಟ.


Picture Credit: Shivashankar Banagar

Monday, November 23, 2020

ಗಾನಕೆ ಮಣಿಯದ ಜೀವವೇ ಇಲ್ಲ

ಗಾನಕೆ ನಲಿಯದ ಮನಸೇ ಇಲ್ಲ,

ಗಾನಕೆ ಮಣಿಯದ ಜೀವವೇ ಇಲ್ಲ,

ಗಾನಕೆ ಒಲಿಯದ ದೇವರೇ ಇಲ್ಲ,

ಗಾನವೇ ತುಂಬಿದೆ ಈ ಜಗವೆಲ್ಲಾ

('ಉಪಾಸನೆ' ಚಿತ್ರದ 'ಭಾವವೆಂಬ ಹೂವು ಅರಳಿ' ಹಾಡಿನ ಸಾಲುಗಳು)


ಎಲ್ಲರಿಗೂ ಅವರ ಮನ ತಣಿಸುವ ಒಂದು ಹಾಡು ಇದ್ದೇ ಇರುತ್ತದೆ. ಅದು ಚಲನ ಚಿತ್ರದ ಹಾಡಾಗಿರಬಹುದು ಅಥವಾ ಭಾವಗೀತೆ ಇಲ್ಲವೇ ವಚನಗಳೋ ಇಲ್ಲವೋ ಭಕ್ತಿಗೀತೆಗಳೋ ಹೀಗೆ ಒಂದು ಹಾಡು ಕೇಳಿದ ತಕ್ಷಣ ಮನಸ್ಸು ಅದರಲ್ಲಿ ಲೀನವಾಗಿ ನಮ್ಮ ಭಾವನೆಗಳೆಲ್ಲ ಒಟ್ಟಾಗಿ ಹಾಡಾಗಿ ಹರಿಯುತಿದೆಯೋನೋ ಎನ್ನಿಸಿದ್ದರೆ ಅದು ನಿಮ್ಮ ಸುಪ್ತ ಮನಸ್ಸಿನ ಪ್ರತೀಕವಾದ ಹಾಡು. ಹಾಡನ್ನು ಆಸ್ವಾದಿಸುವುದರ ಜೊತೆಗೆ ಯಾವ ವಿಷಯ ಈ ಹಾಡನ್ನು ನಿಮಗೆ ಇಷ್ಟು ಹತ್ತಿರಕ್ಕೆ ತಂದಿದೆ ಎನ್ನುವ ಕಾರಣಗಳನ್ನು ಅವಲೋಕಿಸಿ ನೋಡಿ. ನೀವು ವ್ಯಕ್ತ ಪಡಿಸಲು ಸಾಧ್ಯವಾಗದ ಅನುಭೂತಿಗಳನ್ನು ಆ ಹಾಡು ಹೊರ ತಂದಿರುತ್ತದೆ ಮತ್ತು ನಿಮ್ಮ ಅಂತರಾಳದ ವಿಚಾರಗಳನ್ನು ಪ್ರತಿಬಿಂಬಿಸುತ್ತಿರುತ್ತದೆ.


ಕಥೆ-ಕಾದಂಬರಿಕಾರರಿಗಿಂತ, ಕವಿಗಳಿಗೆ ಭಾಷೆಯನ್ನು ಬಳಸುವ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಬರಿ ಪ್ರಾಸಬದ್ಧ ಪದಗಳನ್ನು ಹುಡುಕುವುದಷ್ಟೇ ಅಲ್ಲವಲ್ಲ, ಬದಲಿಗೆ ಉಲ್ಲಾಸಗೊಳಿಸುವ ಇಲ್ಲವೇ ವಿಷಾದದ ಕೂಪಕ್ಕೆ ನೂಕುವ ಕೆಲಸ ಹಾಡಿನಿಂದಾಗಬೇಕು. ಅದಕ್ಕೆ ಕವಿಯ ಜೊತೆಗೆ, ಭಾವನೆಗಳಿಗೆ ಜೀವ ತುಂಬುವ ಕೆಲಸ ಗಾಯಕ/ಗಾಯಕಿಯರಿಂದ ಮತ್ತು ಹಾಡಿಗೆ ರಾಗ, ಪ್ರಾಸ ಜೋಡಿಸಿ ಸಂಗೀತ ಸಂಯೋಜಿಸುವವರ ಪ್ರಯತ್ನವೂ ಒಟ್ಟುಗೂಡಬೇಕು. ಆ ತಂಡ ಒಂದೇ ಲಹರಿಗೆ ಬಂದಾಗ ಒಂದು ಅದ್ಭುತ ಹಾಡು ಹುಟ್ಟುತ್ತದೆ.


ಇದನ್ನು ಮನಗಂಡಿದ್ದ ವಚನಕಾರರು, ಗ್ರಂಥಗಳನ್ನು ರಚಿಸದೇ ಸಾಮಾನ್ಯ ಮನುಷ್ಯನ ಮೇಲೇ ಅಳಿಯದ ಪ್ರಭಾವ ಬೀರುವಂತ ಗಾನಮಯವಾದ ವಚನಗಳನ್ನು, ಭಕ್ತಿ ಗೀತೆಗಳನ್ನು ರಚಿಸಿ ಅಜರಾಮರರಾದರು. ಇಂದಿಗೆ ಬಸವಣ್ಣನವರ ವಚನಗಳನ್ನು ವಿಮರ್ಶಿಸಿ, ಅರ್ಥೈಸಿ ನೂರಾರು ಪುಸ್ತಕಗಳು ಬಂದಿದ್ದರೂ, ಬಸವಣ್ಣನವರೇ ನಮಗೆ ಹೆಚ್ಚು ಹತ್ತಿರ  ಅಲ್ಲವೇ? ಅಕ್ಕ, ಸರ್ವಜ್ಞ, ಪುರಂದರ ದಾಸರು ಇದಕ್ಕೆ ಹೊರತಲ್ಲ. ಋಗ್ವೇದವನ್ನು ವ್ಯಾಖ್ಯಾನಗೊಳಿಸಲು ೧೦೮ ಉಪನಿಷತ್ತುಗಳು ಬಂದಿದ್ದರೂ, ಋಗ್ವೇದದ ಒಂದು ಮಂತ್ರವಾದ 'ಗಾಯತ್ರಿ ಮಂತ್ರ' ದ ಹಾಗೆ ಅವನ್ನು ಜಪಿಸಲು ಸಾಧ್ಯವೇ? ಶಿಶುನಾಳ ಶರೀಫರು ಆಧ್ಯಾತ್ಮದ ಸಾರವನ್ನು ತಮ್ಮ ಹಾಡೊಳಗೆ ತುಂಬಲಿಲ್ಲವೇ? ಜಾನಪದ ಜನರ ನಾಲಿಗೆಯ ಮೇಲೆ ಉಳಿದ ಬಗೆಯೂ ಇದೆ ಅಲ್ಲವೇ? ಮಂತ್ರಗಳಿಗೆ ಶಕ್ತಿ ಇದೆಯೋ ಇಲ್ಲವೋ, ಆದರೆ ಹಾಡುಗಳಿಗೆ ಮಂತ್ರಶಕ್ತಿ ಇದೆ ಅನ್ನಿಸುವುದು, ಎಷ್ಟೋ ವಚನ, ಕೀರ್ತನೆ ರಚಿಸಿದ ಕರ್ತೃಗಳು ಕಾಲವಾಗಿ ಶತಮಾನಗಳು ಕಳೆದು ಹೋದರೂ, ಅವರ ರಚನೆಗಳು ಕಾಲಾತೀತ ಎನ್ನುವಂತೆ ಉಳಿದುಕೊಂಡಿರುವುದನ್ನು ನೋಡಿ.


ನೀವು ಗಮನಿಸಿಯೇ ಇರ್ತೀರಿ. 'ಸಂಗೀತ ಸಂಜೆ' ಕಾರ್ಯಕ್ರಮಗಳಿಗೆ ಜನರನ್ನು ಒಟ್ಟುಗೂಡಿಸಲು ಯಾವ ಪ್ರಯತ್ನವೂ ಬೇಕಿಲ್ಲ. ಅವರು ತಾವಾಗಿಯೇ ಬರುತ್ತಾರೆ. ಒತ್ತಡದ ಚಾಕಟ್ಟು ದಾಟಿ, ಮನದಣಿಯೇ ಹಾಡು ಕೇಳಿ ಮೈ ಮರೆಯಲು ಮುತುವರ್ಜಿಯ ಆಹ್ವಾನ ಬೇಕೇ? ಬರೀ ಮನುಷ್ಯರಿಗೆ ಇಲ್ಲವೇ ದೇವರಿಗೆ ಪ್ರಿಯವಾದದ್ದು ಈ ಹಾಡು ಎಂದುಕೊಳ್ಳಬೇಡಿ. ಡಾ. ರಾಜಕುಮಾರ್ ರ ಹಾಡುಗಳನ್ನು ಕೇಳುತ್ತ ಹೆಚ್ಚು ಹಾಲು ಕರೆದ ಹಸು-ಎಮ್ಮೆಗಳ ಬಗ್ಗೆ ಓದಿದ್ದ ನೆನಪು ನನಗೆ ಇದೆ. ಹಿಂದೆ ದ್ವಾಪರ ಯುಗದಲ್ಲಿ, ಕೃಷ್ಣನ ಮುರಳಿಯ ಕರೆ ಕೂಡ ಗೋಕುಲದ ಹಸುಗಳಿಗೆ ಇದೆ ರೀತಿಯ ಮೋಡಿ ಮಾಡಿರಬೇಕು. ಹಾಗೆ ಕಿಂದರಿ ಜೋಗಿಯು ಮೊದಲಿಗೆ ಮೂಷಿಕಗಳನ್ನು, ನಂತರ ಊರಿನ ಮಕ್ಕಳನ್ನು ಮೋಹಿತಗೊಳಿಸಿದ್ದು ಸಣ್ಣ ವಿದ್ಯೆಯೇ?


ಕಲೆಯ ಪ್ರಾಕಾರಗಳಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಎನ್ನುವ ಜಿಜ್ಞಾಸೆ ನನ್ನದಲ್ಲ. ಆದರೆ ಸಾಮಾನ್ಯ ಜನರಲ್ಲಿ ಹೆಚ್ಚಿನ ಪರಿಣಾಮ ಬೀರುವುದು ಸಾಧ್ಯ ಎನ್ನಿಸುವುದು ಗೀತೆ-ಸಂಗೀತದ ಮೂಲಕ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.


ಜೀವನದಲ್ಲಿ ಬೇಸರವಾದಾಗ, ಕಳೆದು ಹೋದ ಭಾವನೆ ಬಂದಾಗ ಮಾತ್ರ ಇಷ್ಟದ ಹಾಡುಗಳನ್ನು ಕೇಳಬೇಕು ಎಂದೆನಿಲ್ಲವಲ್ಲ. ಅದಕ್ಕಾಗಿಯೇ ನಾನು ಕಳೆದು ಹೋಗುವ ಮುನ್ನವೇ, ನನ್ನತನ ತುಂಬುವ ಹಾಡುಗಳ ಮೊರೆ ಹೋಗುತ್ತೇನೆ. ಎದೆಯ ಲಹರಿಯ ಪ್ರತಿಧ್ವನಿ ಆಗುತ್ತವೆ ಈ ಹಾಡುಗಳು ಮತ್ತು ಬದುಕುವ ಉತ್ಸಾಹ ಬಾಡಿ ಹೋಗದಂತೆ ನನ್ನನ್ನು ಕಾಪಾಡುತ್ತವೆ. ಅಂದ ಹಾಗೆ ನಿಮ್ಮ ಇಷ್ಟದ ಹಾಡುಗಳು ಯಾವವು?

 

Friday, November 20, 2020

Breathing efficiency

If we look at the frequency of the inputs we provide to our body, food intake is typically 3 times a day, water is more frequent, 8-10 times a day or even more. But breathing is round the clock, that continues even when we are sleeping. So, it would be interesting to understand the efficiency of breathing.


We inhale through nose, it travels through the passage, reaches lungs and there oxygen is absorbed into the body to join the bloodstream and further it travels to various parts of the body. Note that oxygen it is absorbed at lungs and not in the passage (nasal or throat region). If we are inhaling for 3 seconds on an average, the air we inhaled at the third second will be stopped before it reaches lungs and it will be forced to return halfway as exhalation begins. Similarly, when we exhale, the air which is carbon di-oxide primarily, does not completely get out of our body as some of it in the passage at the third second of exhalation will be forced to return due to inhalation. This suggests what we can make use of, whether inhalation or exhalation, is 2 out 3 seconds only. Thus we arrive at 66% of efficiency number. It does not look great for the thing we do throughout our life. What can be done about this?

 

Before we go to bed, when we are slowing down, we have few minutes to ourselves. Whether you are sitting or lying down, completely free up your body, avoid any smaller movements and ignore all those itches. When your body is at still, energy demand from body drops and breathing rate slows a little, inhale and exhale expands by a second (to 4 seconds from what we considered 3 seconds before). Now if we do the same math, 3 seconds of breathing out of 4 will be useful and efficiency is at 75%. As you know breathing also consumes some energy and when breathing becomes slow and efficiency increases, body’s energy demand drops little further. If you can close your eyes it will greatly help. Not just the energy consumption from eyes is saved, but the information flow from eyes to brain is cut-off and that means the part of the brain which processes information from eye can take rest as well. This would lead to longer breaths of 5-6 seconds of inhalation and exhalation. And efficiency would rise to above 90%. This is a good number and what is suggested by experts. You can further improve it if you can pause and hold breath after every inhalation. But that would require a longer practice before you can comfortably do it.

 

If you can repeat this exercise several times a day, even for small intervals, you will see your breaths begin to become deeper naturally. Deeper breathing has a bunch of benefits. Due to increased energy efficiency, there is a lesser load on your heart which results in lower blood pressure. Deeper breathing also calms and soothes nervous system. After couple of weeks of practice, you would notice a slightly calmer version of yourself. Your emotions would be in control and your brain will have lots of free capacity to do useful stuff. Pick a subject which was difficult for you to digest or get into the conversation which always troubled you in the past, you will be surprised to learn that you are doing a lot better this time. It happened to me and it would do the same thing for you or any other human being.


With few months of practice, energy levels further improve and need to sleep for longer hours will be gone. You will be much calmer. As you gain control over your breath, you will gain control over your mind. You would become aware of all your emotions, thinking patterns and deepest fears. Awareness levels of how you think, what you say or do will rise. You will get to know yourself better.


Along with deep breaths if you can put efforts to improve your emotional maturity (not to react immediately, see things from multiple perspectives etc.), it would transform your personality. Your ability to read other people and situations improves because you are in complete control of yourself, that lets you to see things as they are rather than your own emotions becoming a hindrance leading to misinterpretations. You would not overreact even when faced with difficult situations. You would not only live longer but also healthier and happier.

Tuesday, November 17, 2020

Retraining our intuitions

Thinking big, acting bold and long term does not come naturally for most of us. Why so? Why fear of failure invokes stronger emotions than lure of success? What makes us avoid risks and play safe? Here is what I learnt on this subject.

Roots of our intuitions

The central theme of evolution is survival or adapting oneself to improve chances of survival. Our ancestors in the prehistoric times had to go through the struggle for survival like every other animal. And they developed few instincts to help them survive. But some of them have lost relevance now.

Short term and risk averse tendencies of our ancestors

During the stone age, when humans were hunters-gatherers, food was scarce. The kill was not always enough to satisfy group’s hunger. Whoever got to eat first had better chances of survival. Not only acting selfish, one had to think short term, one meal at a time as no one knew when would be the next meal coming. Also, it paid to avoid great dangers. The noise in the bush would be that of a Rabbit or it could be a hungry Tiger as well. Those who took risks often did not survive long. Those who applied caution survived longer and produced off springs of their own kind. Since this struggle for survival continued for a really long period, these survival instincts got etched into human psyche. We descended from such ancestors. No wonder many of us have selfish, short term thinking and risk averse tendencies.

What happened thereafter?

Humans learnt agriculture and to store the food grains. The need for most of humans to be farmers was gone a few hundred years ago and we got spread into other streams like manufacturing, trade, arts etc. Now we take up a profession or run a business to earn a living. Our worries have shifted to monthly pay check and other things. No more we struggle for food and survival on daily basis. But in the time scale of evolution, this period of non-struggle is not long enough to change what is already hardwired into our thinking. Our intuitions still guide us to play safe often or become short term focused. Even when there is no threat to survival, our intuitions limit us from acting bold or thinking big.

Bucking the convention

Many individuals (and companies) were able to defy these natural tendencies and became counter-intuitive. Warren Buffett is a long-term investor. Long-term denotes he overcame the natural tendency of thinking short term. Investing means he has embraced the risks. Jeff Bezos unconventional thinking has rewarded him hugely.

Are you a Giver or a Taker?

Adam Grant in his book “Give and Take” explains how givers, though small in numbers, build networks and flourish. Takers who act selfishly might gain in the short term, but the givers have an edge in the long run as they build trust, credibility, promote reciprocation and provide a direction. Individuals or organizations who stepped up to solve a problem in unconventional ways produced a ripple effect. Think of big companies like Google and Facebook and how their unconventional business models worked out well for them.

How to become counter-intuitive or retrain our intuition?

Daniel Kahneman, a behavioral psychologist who won a Nobel Prize for his work, explains in his book “Thinking Fast and Slow” that we have two systems of thinking. System 1 thinking which is quick, intuitive but often biased. System 2 thinking is a slow, analytical thinking process where reasoning becomes the focus and that helps to overcome bias. He suggests that until we become proficient or an expert in a field, we should not use System 1 thinking to make decisions. We need to train and retrain with System 2 thinking for our judgements to improve.

Summary

Acknowledging the fact that long term thinking does not come naturally to us and making conscious efforts to overcome our selfish and risk-averse tendencies improves our judgements and actions.


Influences:

1. Sapiens and Homo Deus by Yuval Noah Harrari

2. Naval Ravikant podcast




ಪುಸ್ತಕ ಪರಿಚಯ: ಪೆದ್ದಚೆರುವಿನ ರಾಕ್ಷಸ (ಪೂರ್ಣ ಚಂದ್ರ ತೇಜಸ್ವಿ)

 ಇಂದು ನಾವು ಹುಲಿ ನೋಡಬೇಕೆಂದರೆ ಮೃಗಾಲಯಕ್ಕೆ ಹೋಗಬೇಕು. ಬಂಡೀಪುರ, ನಾಗರಹೊಳೆ ಕಾಡಿನಲ್ಲಿ ಸಫಾರಿ ಹೋದರೂ, ಹುಲಿರಾಯನ ದರ್ಶನವಾಗುವುದು ಅತಿ ವಿರಳ. ಆದರೆ ಕೇವಲ ೬೦- ೭೦ ವರ್ಷಗಳ ಹಿಂದೆ ಕಾಡಿನ ವಿಸ್ತಾರ ದೊಡ್ಡದಿದ್ದು, ಹುಲಿಗಳು ಕಾಡಿನಂಚಿನ ಹಳ್ಳಿಗಳಿಗೆ ನುಗ್ಗಿ ದನಗಳನ್ನು ಬೇಟೆಯಾಡುವುದು ಮತ್ತು ಅಪರೂಪಕ್ಕೆ ನರಭಕ್ಷಕನಾಗುವುದು, ಜನರು ಅದರ ಭೀತಿಯಲ್ಲಿ ಹೊತ್ತಿಗೆ ಮುಂಚೆ ಮನೆ ಸೇರುವುದು ಇವೆಲ್ಲ ಸರ್ವೇ ಸಾಮಾನ್ಯ ಸಂಗತಿಯಾಗಿತ್ತು ಎನ್ನುವುದು ಇಂದಿನ ನವ ಪೀಳಿಗೆಗೆ ಆಶ್ಚರ್ಯಕರ ಸಂಗತಿ ಎನ್ನಿಸಬಹುದು. ಒಂದು ಹುಲಿ ನರಭಕ್ಷಕನಾದಾಗ ಬೇರೆ ದಾರಿಯಿಲ್ಲದೆ ಆ ಹುಲಿಯನ್ನು ಮುಗಿಸಲು ಬೇಟೆಗಾರರಿಗೆ ಕರೆ ಹೋಗುತ್ತಿತ್ತು. ಅದರಲ್ಲಿ ಮುಖ್ಯವಾದವರು - ಉತ್ತರ ಭಾರತದಲ್ಲಿ ಜಿಮ್ ಕಾರ್ಬೆಟ್ ಮತ್ತು ದಕ್ಷಿಣದಲ್ಲಿ ಕೆನೆತ್ ಆಂಡರ್ಸನ್. ನಮ್ಮ ದಕ್ಷಿಣ ಭಾಗದ ಹಲವಾರು ನರಭಕ್ಷಕ ಹುಲಿ-ಚಿರತೆಗಳಿಗೆ ಮುಕ್ತಿ ಕಾಣಿಸಿದವರು ಕೆನೆತ್ ಆಂಡರ್ಸನ್. ಅವರು ಜನರಿಗೆ ತೀವ್ರ ಉಪಟಳ ಕೊಟ್ಟ ಪ್ರಾಣಿಗಳನ್ನು ಬೇಟೆಯಾಡುವುದಲ್ಲದೇ, ಒಳ್ಳೆಯ ಬರಹಗಾರರೂ ಆಗಿದ್ದರು. ಅವರು ಇಂಗ್ಲಿಷ್ ನಲ್ಲಿ ರಚಿಸಿದ ಕಾಡಿನ ಕಥೆಗಳನ್ನು ಕನ್ನಡ ಭಾಷೆಗೆ ರೂಪಾಂತರ ತಂದವರು ತೇಜಸ್ವಿ. ಇದನ್ನು ಅನುವಾದ ಎನ್ನದೇ ರೂಪಾಂತರ ಎಂದು ಕರೆಯುವ ಕಾರಣ ತೇಜಸ್ವಿಯವರಿಗೆ ಕಾಡು-ಪರಿಸರದ ಬಗ್ಗೆ ಇದ್ದ ಜ್ಞಾನ. ಹಾಗಾಗಿ ಈ ಕಥೆಗಳನ್ನು ಕನ್ನಡಕ್ಕೆ ಯಥಾವತ್ತಾಗಿ ಭಟ್ಟಿ ಇಳಿಸುವ ಬದಲಿಗೆ ಜೀವ ತುಂಬುವ ಪ್ರಕ್ರಿಯೆ ಅವರಿಂದ ಸಾಧ್ಯವಾಯಿತು.

 

ಈ ಕಾಡಿನ ಕಥೆಗಳು ನಾಲ್ಕು ಪುಸ್ತಕಗಳಾಗಿ ಹೊರ ಬಂದಿವೆ. ಅದರಲ್ಲಿ ಎರಡನೇ ಭಾಗವಾದ ಪೆದ್ದಚೆರುವಿನ ರಾಕ್ಷಸ ಪುಸ್ತಕವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇದು ಮೂರು ಚಿಕ್ಕ ಕಥೆಗಳನ್ನು (ಪೆದ್ದಚೆರುವಿನ ರಾಕ್ಷಸ, ತಾಳವಾಡಿಯ ಮೂಕರಾಕ್ಷಸ ಮತ್ತು ಲಕ್ಕವಳ್ಳಿಯ ಹೆಬ್ಬುಲಿ) ಹೊಂದಿದೆ. ಅದರಲ್ಲಿನ 'ಲಕ್ಕವಳ್ಳಿಯ ಹೆಬ್ಬುಲಿ' ಯ ಕಥೆಯನ್ನು ಸ್ವಲ್ಪ ವಿವರದಲ್ಲಿ ನೋಡೋಣ.

 

ಕೆನೆತ್ ಆಂಡರ್ಸನ್ ಅವರಿಗೆ  ಲಕ್ಕವಳ್ಳಿಗೆ (ಚಿಕ್ಕ ಮಗಳೂರು ಜಿಲ್ಲೆ- ಭದ್ರ ಜಲಾಶಯ ಹಾಗೂ ಹುಲಿ ಅಭಯಾರಣ್ಯಕ್ಕೆ ಹೊಂದಿಕೊಂಡ ಹಳ್ಳಿ) ಬರಲು ಆಹ್ವಾನ ನೀಡುತ್ತಾರೆ ಅಲ್ಲಿನ ಆಣೆಕಟ್ಟಿನ ಜವಾಬ್ದಾರಿ ಹೊತ್ತ ಇಂಜಿನಿಯರ್ ಒಬ್ಬರು. ವಿಷಯ ಕೆದಕಿದಾಗ ತಿಳಿದು ಬರುವುದು ಇಷ್ಟು. ಒಂದು ದೊಡ್ಡ ಹುಲಿ ಲಕ್ಕವಳ್ಳಿ ರಸ್ತೆಯ ಕಾಡಿನಲ್ಲಿ ಸೇರಿಕೊಂಡು ಅಲ್ಲಿ ಮೇಯಲು ಹೋಗುತ್ತಿದ್ದ ದನಗಳನ್ನು ದಿನಂಪ್ರತಿ ಹಿಡಿದು ತಿನ್ನಲು ಶುರು ಮಾಡಿತ್ತು. ದಿನ ಕಳೆದಂತೆ ದನ ಕಾಯುವರ ಕೋಪ ಹಾಗೂ ಹುಲಿಯ ಧೈರ್ಯ ಎರಡೂ ಹೆಚ್ಚುತ್ತಾ ಹೋಗಿ, ಇಬ್ಬರೂ ಮುಖಾ-ಮುಖಿಯಾದರು. ಹುಲಿ ಅವನನ್ನು ಕೊಂದು ಅರ್ಧಂಬರ್ಧ ತಿಂದು, ದನವನ್ನೂ ಹೊತ್ತುಕೊಂಡು ಹೋಯಿತು. ನಂತರ ಸರಣಿ ಕೊಲೆಗಳನ್ನು ನಡೆಸುತ್ತ ಸಂಪೂರ್ಣ ನರಭಕ್ಷಕನಾಗಿ ಬದಲಾಯಿತು. ಅದನ್ನು ಬೇಟೆಯಾಡಲು ಲಕ್ಕವಳ್ಳಿಗೆ ಬಂದ ಕೆನೆತ್ ರಿಗೆ, ಹುಲಿ ಆಗ ತಾನೇ ಒಬ್ಬ ಕೂಲಿಯವನೊಬ್ಬನನ್ನು ಹೊತ್ತುಕೊಂಡು ಹೋಗಿರುವುದು ತಿಳಿಯುತ್ತದೆ. ಜಾಡು ಹಿಡಿದು ಕಾಡು ಹೊಕ್ಕರೆ, ಕೊಂಚ ಕಾಲದಲ್ಲೇ ಹೆಜ್ಜೆ-ಗುರುತು, ರಕ್ತದ ಕಲೆಗಳು ಕಾಣುವುದು ನಿಂತು ಹೋಗುತ್ತದೆ. ವಾಪಸ್ಸು ಬಂದು ಅರಣ್ಯ ಇಲಾಖೆಯವರಲ್ಲಿ ಅವರು ಯಾವುದಾದರೂ ಗುಹೆಯನ್ನು ನೋಡಿದ್ದಾರೆಯೇ ಎಂದು ವಿಚಾರಿಸಿದಾಗ, ಕಾಡಿನಲ್ಲಿ ಒಂದು ಪಾಳು ಬಿದ್ದ ಗುಡಿಯ ಬಗ್ಗೆ ತಿಳಿಯುತ್ತದೆ. ಅಲ್ಲಿ ಹೋಗಿ ಪರಿಶೀಲಿಸಿದರೆ ಹುಲಿ ಅದನ್ನು ತನ್ನ ವಾಸ ಸ್ಥಾನ ಮಾಡಿಕೊಂಡಿಲ್ಲ ಎಂದು ತಿಳಿಯುತ್ತದೆ. ನಂತರ ಒಬ್ಬ ದನ ಮೇಯಿಸುವವನಿಂದ ಪಾಳು ಗುಡಿಯ ಒಂದು ಮೈಲಿಯಾಚೆ ಗುಹೆ ಇರುವುದಾಗಿ ತಿಳಿಯುತ್ತದೆ. ಆ ಗುಹೆಯ ಹತ್ತಿರ ಹೋದಾಗ ಅತಿ ಸನಿಹದಲ್ಲೇ ಮೇಲೆರಗಲು ಸಿದ್ಧವಾಗಿದ್ದ ಹುಲಿರಾಯನ ದರ್ಶನವಾಗುತ್ತದೆ. ಬದುಕು-ಸಾವಿನ ಕೆಲವು ಕ್ಷಣಗಳ ಮಧ್ಯದಲ್ಲೇ ಗುರಿಯಿಟ್ಟು ಗುಂಡು ಹಾರಿಸಿ ಪಕ್ಕಕ್ಕೆ ಉರುಳುತ್ತಾರೆ ಬೇಟೆಗಾರ ಕೆನೆತ್. ಇವರ ಮೇಲೆ ಹಾರಿದ ಹುಲಿ ಸತ್ತು ಬೀಳುತ್ತದೆ. ಸತ್ತ ಮೇಲೆ ಪರೀಕ್ಷಿಸಿದಾಗ ಅದೊಂದು ವಯಸ್ಸಾದ, ಬೇಟೆಯಾಡಲು ಅಸಮರ್ಥವಾದ ಪ್ರಾಣಿ ಎಂದು ತಿಳಿಯುತ್ತದೆ. ಕತ್ತಲಾದರೂ ನಿರ್ಭಿತಿಯಿಂದ ಮರಳುತ್ತಾರೆ ಬೇಟೆಗಾರ ಮತ್ತು ಅವನ ಜೊತೆಗಾರ.

 

ಈ ಪುಸ್ತಕದ ಕರ್ತೃ ಪೂರ್ಣ ಚಂದ್ರ ತೇಜಸ್ವಿಯವರದು ಬಹು ಮುಖ ಪ್ರತಿಭೆಯ ವ್ಯಕ್ತಿತ್ವ. ಕಥೆ-ಕಾದಂಬರಿಗಳಿಂದ ಜನಪ್ರಿಯರಾಗಿರುವ ತೇಜಸ್ವಿ ಅವರು ಛಾಯಾಗ್ರಾಹಣ, ಸಹಜ ಕೃಷಿ, ಬೇಟೆ, ವೈಜ್ಞಾನಿಕ ಬರಹಗಳನ್ನು ಕೂಡ ಪ್ರಿಯವಾಗುವ ಹಾಗೆ ಬರೆಯಬಲ್ಲರು. ಅದಕ್ಕೆ ಈ ಪುಸ್ತಕ ಒಂದು ಉದಾಹರಣೆ ಮಾತ್ರ.




ಪುಸ್ತಕ ಪರಿಚಯ: ಕುವೆಂಪು ಸಂಚಯ

 "ವಸಂತ ವನದಲಿ ಕೂಗುವ ಕೋಗಿಲೆ

ರಾಜನ ಬಿರುದು ಬಯಸುವುದಿಲ್ಲ;

ಹೂವಿನ ಮರದಲಿ ಜೇನುಂಬುಳುಗಳು

ಮೊರೆವುದು ರಾಜನ ಭಯದಿಂದಲ್ಲ"       ("ಕವಿ" ಕವಿತೆಯಿಂದ)

 

"ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ

ಸರಯೂ ನದಿ ಮೇಲೆ. ಮೆರೆದುದು ವಿಷಯ ಮಧ್ಯೆ

ರಾಜಧಾನಿ ಅಯೋಧ್ಯೆ"         ("ಶ್ರೀ ರಾಮಾಯಣ ದರ್ಶನಂ" ನಿಂದ)

 

"ಧನ್ಯನ್ ನೀನ್, ಏಕಲವ್ಯ, ಧನ್ಯನೆ ದಿಟಂ"    ("ಬೆರಳ್ ಗೆ ಕೊರಳ್" ನಾಟಕದಿಂದ)

 

"ದೂರದ ಗಿರಿಗಳ ಏರುವೆ ನೀನು;

ದೂರದ ಪುರಗಳ ನೋಡುವೆ ನೀನು"          (""ಮೋಡಣ್ಣನ ತಮ್ಮ" ಶಿಶು ಸಾಹಿತ್ಯದಿಂದ)

 

"ರಂಗಯ್ಯನು ಕುಳಿತನು. ಸ್ವಲ್ಪ ಹೊತ್ತು ತನ್ನ ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ದಿಕ್ಕು ದಿಕ್ಕುಗಳನ್ನು ನೋಡಿದನು. ಸುತ್ತಲೂ ವೀಣಾವಾದ್ಯ ಧ್ವನಿಗೈಯುತ್ತ ಸೊಳ್ಳೆಗಳು ಹಾರಾಡಿ ಕಡಿಯುತ್ತಿದ್ದವು"          ("ಬಂದನಾ ಹುಲಿರಾಯನು" ಕಥೆಯಿಂದ)

 

"ಹೂವಯ್ಯನ ಮುಖವು ಭಾವೋತ್ಕರ್ಷದಿಂದಲೂ ಹರ್ಷದಿಂದಲೂ ಆಗ ತಾನೇ ಅಭ್ಯಂಜನ ಮಾಡಿದವನ ಮುಖದಂತೆ ಕೆಂಪಾಗಿತ್ತು. ಕಣ್ಣು ಸಲೀಲಾವೃತವಾಗಿ ಮಿರುಗುತ್ತಿದ್ದವು. ಸೀತೆ ನೋಡುತ್ತಿದ್ದ ಹಾಗೆಯೆ ಮೆಲ್ಲೆಲರು ಬೀಸಿದಾಗ ಹೂವಿನಿಂದ ಹನಿಗಳುದುರುವಂತೆ ಅವನ ಕಣ್ಣುಗಳಿಂದ ವಾರಿಬಿಂದುಗಳೂ ಸೂಸತೊಡಗಿದವು"        ("ಕಾನೂರು ಹೆಗ್ಗಡಿತಿ" ಕಾದಂಬರಿಯಿಂದ)

 

"ಇಂಗ್ಲಿಷ್ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿದವರು ಬೆಕ್ಕಸಬಡುವಂತಹ ಸಾಹಿತ್ಯ ಶೃಂಗಗಳು ಕನ್ನಡದಲ್ಲಿ ಕೆಲವಾದರೂ ಮೂಡಿವೆ"     ("ನಮಗೆ ಬೇಕಾಗಿರುವ ಇಂಗ್ಲಿಷ್" ಲೇಖನದಿಂದ)

 

"ನನಗೆ ಗುಡ್ಡ ಕಾಡುಗಳಲ್ಲಿ ಗದ್ದೆ ತೋಟಗಳಲ್ಲಿ ಹೊಳೆತೊರೆಗಳೆಡೆ ಅಲೆಯುವುದಂದರೆ ಚಿಕ್ಕಂದಿನಿಂದಲೂ ಇಷ್ಟ. ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲ ಚೇತನ ಮರಿ ಮೀನಾಗಿ ಓಲಾಡಿ ತೇಲಾಡುತ್ತಿತ್ತು"     ("ನೆನಪಿನ ದೋಣಿಯಲ್ಲಿ" ಆತ್ಮಚರಿತ್ರೆಯಿಂದ)

 

ಕನ್ನಡದ  ಕಂಪು ಕುವೆಂಪು. ಅವರ ಕಾವ್ಯ, ನಾಟಕ, ಶಿಶು ಸಾಹಿತ್ಯ, ಕಥೆ, ಲೇಖನ, ಕಾದಂಬರಿಗಳ ಆಯ್ದ ಭಾಗಗಳು ಇವೆಲ್ಲವುಗಳನ್ನು "ಕುವೆಂಪು ಸಂಚಯ" ಒಂದೇ ಪುಸ್ತಕದಲ್ಲಿ ಓದುವುದು ಸಾಧ್ಯ. ಸುಮಾರು ಎಂಟು ನೂರು ಪುಟಗಳ ಪುಸ್ತಕವನ್ನು ಸಂಪಾದಿಸಿದ್ದಾರೆ ಕನ್ನಡದ ಮೂವರು ಹಿರಿಯ ಲೇಖಕರು. ಇದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದೆ. (ಪ್ರಾಧಿಕಾರದ ಕಾರ್ಯಾಲಯಗಳಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯುತ್ತದೆ. ನಾನು ಬೆಂಗಳೂರಿನ ಮಲ್ಲತ್ತ ಹಳ್ಳಿಯ ಕೇಂದ್ರದಿಂದ ಖರೀದಿಸಿದ್ದು).

 

ಕುವೆಂಪುರವರ ಕೃತಿಗಳನ್ನು ಓದುತ್ತ ಬೆಳೆದ ನಮಗೆ ಅವರ ಸಾಹಿತ್ಯ ಕೃಷಿಯ ಪರಿಚಯ ಇದ್ದೇ ಇದೆ. ಆದರೆ ಅವರ ಕೃತಿಗಳಲ್ಲಿ ಕಾಣುವ ಪೃಕೃತಿ ಸೌಂದರ್ಯ, ಬಾಳಿನ ಮಾಧುರ್ಯ, ಭಾಷಾ ಸಂಪತ್ತು ಮತ್ತೆ ಮತ್ತೆ ಓದುವ ಪ್ರೇರೇಪಣೆ ಮೂಡಿಸದೆ ಇರದು. ಅದರಲ್ಲೂ ಕುವೆಂಪುರವರ ಕನ್ನಡ ಪ್ರೇಮ ಅಪರಿಮಿತವಾದದ್ದು. ಅದಕ್ಕೇನೇ ಅವರು ನಮಗೆ ಹೇಳಿದ್ದು:

 

"ಎಲ್ಲಾದರೂ ಇರು, ಎಂತಾದರು ಇರು;

ಎಂದೆಂದಿಗೂ ನೀ ಕನ್ನಡವಾಗಿರು"




Monday, November 16, 2020

ಭಾಷೆಗೂ ನಿಲುಕದ ಭಾವನೆ ಮತ್ತು ಅದರ ಹಿಂದಿನ ವಿಜ್ಞಾನ

ಒಮ್ಮೊಮ್ಮೆ ಅನಿಸಿದ್ದನ್ನು ಭಾಷೆಯಲ್ಲಿ ವ್ಯಕ್ತ ಪಡಿಸದೆ ಒದ್ದಾಡುತ್ತೇವೆಯಲ್ಲವೇ? ಸಂಗೀತ ಮೂಡಿಸುವ ಉಲ್ಲಾಸವನ್ನು ಭಾಷೆಯಲ್ಲಿ ಹೇಳುವುದೆಂತು? ಪ್ರಕೃತಿ ಸೌಂದರ್ಯದ ವರ್ಣನೆಗೆ ಕವಿಗಳೇ ಶಬ್ದ ತಡಕಾಡುತ್ತಾರೆ ಅಲ್ಲವೇ? ಕಣ್ಣೋಟ ಹೊರಡಿಸುವ ಸಂದೇಶ ಮನಸ್ಸಿಗೆ ಅರ್ಥವಾದರೂ ಅದನ್ನು ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಮಾತುಗಳಲ್ಲಿ ಹೇಳಲು ಸಾಧ್ಯವೇ? ಕವಿತೆಗೆ ಜೀವ ತುಂಬುವುದು ಹಾಡುಗಾರನ ಭಾವವಲ್ಲವೇ? ಒಬ್ಬ ಅದ್ಭುತ ನಟ, ಯಾವುದೇ ಸಂಭಾಷಣೆ ಇಲ್ಲದೆ, ಮುಖದಲ್ಲಿ ಎಲ್ಲ ಭಾವನೆಗಳನ್ನು ತೋರಿಸುತ್ತ, ಕೆಲ ಸನ್ನಿವೇಶಗಳಲ್ಲಿಯಾದರೂ ಮನೋಜ್ಞ ಅಭಿನಯ ನೀಡಲು ಸಾಧ್ಯ, ಅಲ್ಲವೇ? ಅಂದರೆ ಭಾವನೆಗಳು ಮನಸ್ಸಿನ ಆಳ (ಭಾಷೆ ತಲುಪಿದ್ದಕಿಂತ ಹೆಚ್ಚಿನ ಆಳ) ತಲುಪಲು ಸಾಧ್ಯ ಎಂದಾಯಿತು. ಮನುಷ್ಯ ವಿಕಾಸ ವಿಜ್ಞಾನ (Evolutionary Science) ಇದು ಹೀಗೇಕೆ ಎಂದು ತಕ್ಕ ಮಟ್ಟಿಗೆ ವಿವರಿಸುತ್ತದೆ.


ನಮಗೆ ಗೊತ್ತಿರುವ ಭಾಷೆಗಳಲ್ಲಿ, ಹಳೆಯ ಭಾಷೆ ಎಂದರೆ ಸಂಸ್ಕೃತ. ಅದಕ್ಕೆ ಸುಮಾರು ಐದು ಸಾವಿರ ವರ್ಷ ಇತಿಹಾಸವಿದೆ. ಅದಕ್ಕೂ ಮುಂಚೆ ಬ್ರಾಹ್ಮೀ ಭಾಷೆ, ಅದಕ್ಕೆ ಸಂಪೂರ್ಣ ಲಿಖಿತ ಲಿಪಿ ಇರದಿದ್ದರೂ ಆಡು ಭಾಷೆಯ ರೂಪದಲ್ಲಿತ್ತು. ಆದರೆ ಆಡು ಭಾಷೆಯ ಬೆಳವಣಿಗೆಯ ಮುಂಚೆಯೇ ಮನುಷ್ಯ ಸಂಘ ಜೀವಿಯಾಗಿದ್ದನಲ್ಲವೇ? ಅಂದರೆ ಸುಮಾರು ೬೦,೦೦೦ ವರ್ಷಗಳ ಹಿಂದೆಯೇ ಶಿಲಾಯುಗದ ಮನುಷ್ಯ ಗುಂಪು ಗಟ್ಟಿಕೊಂಡು ಗುಡ್ಡ ಗಾಡುಗಳಲ್ಲಿ ಬೇಟೆಗೆ ಹೊರಡುತ್ತಿದ್ದಾಗ, ಒಬ್ಬರಿಗೊಬ್ಬರು ಸಂದೇಶ ಕಳಿಸುವುದಕ್ಕೆ, ಸಹಕರಿಸುವುದಕ್ಕೆ ಕಲಿತುಕೊಂಡದ್ದು ದೇಹದ ಹಾವ-ಭಾವಗಳ ಮೂಲಕ (Body Language)  ಮತ್ತು ಧ್ವನಿಯ ಏರಿಳಿತದ ಮೂಲಕ. ಕ್ರಮೇಣ ಇದನ್ನು ಸಮರ್ಪಕವಾಗಿ ಬಳಸಲು ಅವರು ಕಲಿತುಕೊಂಡರು. ಭಯಗೊಂಡಾಗ ಒಂದು ತರಹದ, ಸಂತೋಷದ ಸಮಯದಲ್ಲಿ ಇನ್ನೊಂದು ತರಹದ ಸಂದೇಶಗಳನ್ನು ಧ್ವನಿಯ ಏರಿಳಿತದ ಮೂಲಕ ಅವರು ಹಂಚಿಕೊಳ್ಳುತ್ತ, ಒಂದೇ ತರಹದ ಭಾವನೆಗಳು ತಮ್ಮ ಗುಂಪಿನಲ್ಲಿ ಮೂಡಿಸುವ ಪ್ರಕ್ರಿಯೆ ಅವರಲ್ಲಿ ಆರಂಭವಾಯಿತು. ಮತ್ತು ಅದು ಮನುಜನ ವಿಕಾಸಕ್ಕೂ ಕಾರಣವಾಯಿತು. ಮನುಷ್ಯನ ಮೆದುಳಿನ ರಚನೆ ವಿಕಾಸ ಹೊಂದುತ್ತ, ದೇಹದ ಭಂಗಿ, ಹಾವ-ಭಾವ ಮತ್ತು ಧ್ವನಿಯ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಲಾರಂಭಿಸಿತು. ಗುಂಪಿನಲ್ಲಿ ಜೊತೆಗಿರುತ್ತಿದ್ದ ಮನುಷ್ಯರ ಸಂಖ್ಯೆ ಹೆಚ್ಚಾದಂತೆಲ್ಲ, ಮನುಷ್ಯ ಉಪಯೋಗ ಮಾಡುತ್ತಿದ್ದ ಸಂಜ್ಞೆಗಳ ಪ್ರಮಾಣವೂ ಹೆಚ್ಚಾಯಿತು. ಇದಕ್ಕೆ ಸಂಬಂಧಿಸಿದ ಮೆದುಳಿನ ನ್ಯೂರಾನ್ (Neuron) ಗಳ ಸಂಖ್ಯೆಯು ಹೆಚ್ಚುತ್ತಾ ಹೋಯಿತು. ಮುಂದೆ ಮನುಷ್ಯ ಕೃಷಿಯನ್ನು ಕಲಿತುಕೊಂಡ. ಅಲೆಯುತ್ತ ಬದುಕುವುದು ಬಿಟ್ಟು ತನ್ನ ಹೊಲಗಳ ಹತ್ತಿರ ವಾಸ ಮಾಡತೊಡಗಿದ. ಆಗ ಹಳ್ಳಿಗಳು ಹುಟ್ಟಿಕೊಂಡವು. ಅವನ ಸಮಾಜ ದೊಡ್ಡದಾಗುತ್ತ ಹೋಯಿತು. ಆಗ ಬರೀ ಸಂಜ್ಞೆಗಳು ಸಾಕಾಗದೆ, ಭಾಷೆಯ ಅವಶ್ಯಕತೆ ಕಾಣತೊಡಗಿತು ಮತ್ತು ಕಾಲಾಂತರದಲ್ಲಿ ಅವನು ಹೊರಡಿಸುತ್ತಿದ್ದ ಧ್ವನಿಗಳು ಒಂದು ಭಾಷೆಯ ಶಬ್ದಗಳಾಗುತ್ತಾ ಬದಲಾದವು. ಆದರೆ ಎಲ್ಲ ಧ್ವನಿ ಮತ್ತು ಸಂಜ್ಞೆಗಳು ಪದಕೋಶಗಳಾಗಿ ಬದಲಾಗಲಿಲ್ಲ. ಕೆಲವುಗಳ ಅಭಿವ್ಯಕ್ತಿ ಮತ್ತು ಪುನರ್ಬಳಕೆ, ಗಾನ, ನಾಟ್ಯಗಳಿಂದ ಸಾಧ್ಯವಾಯಿತು. ಮನುಷ್ಯ ಕೃಷಿಯನ್ನು ಪಳಗಿಸಿಕೊಂಡು, ಇತರೆ ವೃತ್ತಿಗಳೆಡೆಗೆ ಹೊರಳಿದಾಗ, ಅವನ ಭಾಷೆಯಲ್ಲಿನ ಶಬ್ದ ಸಂಪತ್ತು ದೊಡ್ಡದಾಗುತ್ತ ಹೋಯಿತು. ಅವನು ಪದಾರ್ಥ ವಿನಿಮಯ - ವ್ಯಾಪಾರ ಕಲಿಯುವಷ್ಟರಲ್ಲಿ ಭಾಷೆಗಳು ಸಂಪೂರ್ಣ ಅಭಿವೃದ್ಧಿ ಹೊಂದಿದ್ದವು. ಮುಂದೆ ಆಡು-ಭಾಷೆ ಸಾಕಾಗದೆ ಅವನು ಬರೆಯುವುದನ್ನು ಸಹ ಕಲಿತುಕೊಂಡ.  ಹೀಗೆ ನಾಗರೀಕ ಜೀವನ ಆರಂಭಗೊಂಡಿತು.


ಆದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಸುಮಾರು ೫೦,೦೦೦ ವರ್ಷಗಳಷ್ಟು ಕಾಲ ಸರಿದು ಹೋಗಿತ್ತು. ನಮ್ಮ ಮೆದುಳು ದೈಹಿಕ ಸಂಜ್ಞೆ ಮತ್ತು ಧ್ವನಿಗಳನ್ನು, ಅಷ್ಟು ದೀರ್ಘವಾದ ಕಾಲದಿಂದ ಕಲಿತುಕೊಳ್ಳುತ್ತ ಬಂದಿದೆ. ಅದಕ್ಕೆ ಹೋಲಿಸಿದರೆ ಭಾಷೆಯ ಬೆಳವಣಿಗೆ ಇತ್ತೀಚಿನದು. ಅದಕ್ಕೆ ಏನೋ, ಒಬ್ಬ ಸಾಧಾರಣ ಮನುಷ್ಯ ಒಂದು ಸಿನಿಮಾ ಅಥವಾ ದೂರದಶನವನ್ನು ನೋಡಿ ನಿರಾಯಾಸವಾಗಿ ಅರ್ಥ ಮಾಡಿಕೊಳ್ಳಬಲ್ಲ ಆದರೆ ಒಂದು ಪುಸ್ತಕ ಓದುವುದು ಅವನಿಗೆ ಪ್ರಯಾಸದ ಕೆಲಸ. ಶ್ರಮ ಅಷ್ಟೇ ಅಲ್ಲ, ಅರ್ಥ ಮಾಡಿಕೊಳ್ಳುವ ತಾಕತ್ತಿನಲ್ಲೂ ಬಹು ವ್ಯತ್ಯಾಸವಿದೆ. ಒಂದೆರಡು ಪುಟದ ಬರವಣಿಗೆಗಿಂತ, ಒಂದು ಚಿಕ್ಕ ಚಿತ್ರ ಹೆಚ್ಚು ಪರಿಣಾಮಕಾರಿಯಾಗಿ ಸಂದೇಶ ಮುಟ್ಟಿಸುತ್ತದೆ. ಮನುಷ್ಯನ ಇಂದ್ರಿಯಗಳು ಓದುವದಕ್ಕಿಂತ ಅಥವಾ ಭಾವನೆ ಇಲ್ಲದ ಮಾತಿಗಿಂತ, ಭಾವನಾತ್ಮಕ ದೃಶ್ಯ, ಏರಿಳಿತವಿರುವಂತ ಧ್ವನಿಗೆ ಹೆಚ್ಚು ಸ್ಪಂದಿಸುತ್ತವೆ. ಇದಕ್ಕೆ ಕಾರಣ ಮನುಜ ವಿಕಾಸ ಹೊಂದಿದ ರೀತಿ ಮತ್ತು ಅದಕ್ಕೆ ಮನುಜನ ಅಂಗಾಂಗಗಳು ಮತ್ತು ಮೆದುಳು ಆ ವಿಕಾಸಕ್ಕೆ ಹೊಂದಿಕೊಂಡು ವಿನ್ಯಾಸಗೊಂಡ ಬಗೆ. ಹಾಗಾಗಿ ಕವಿತೆಯನ್ನು ಬರೀ ಓದುವುದಕ್ಕಿಂತ, ಅದನ್ನು ಸುಶ್ರಾವ್ಯ ಸಂಗೀತದೊಂದಿಗೆ ಕೇಳಿದಾಗ ಆಗುವ ಅನುಭವವೇ ಬೇರೆ. ಭಾವನೆಗಳಿಗೆ ೫೦,೦೦೦ ವರ್ಷಗಳ ಇತಿಹಾಸವಿದ್ದರೆ ಭಾಷೆಗೆ ೫,೦೦೦ ವರ್ಷ ಇತಿಹಾಸವಿದೆ. ಭಾಷೆಯನ್ನು ಮನುಷ್ಯ ಪ್ರಯತ್ನ ಪೂರ್ವಕ ಕಲಿತುಕೊಳ್ಳಬೇಕು. ಭಾವನೆಗಳು ಹಾಗಲ್ಲ, ಅವು ಹುಟ್ಟಿನಿಂದ ಬರುತ್ತವೆ. ಪ್ರಕೃತಿಯು ಮನುಷ್ಯ ದೀರ್ಘ ಕಾಲದಲ್ಲಿ ಕಲಿತುಕೊಂಡದ್ದನ್ನು, ಅವನು ಬದುಕುಳಿಯಲು ಅವಶ್ಯ ಎನ್ನಿಸುವ ಮಾಹಿತಿಯನ್ನು, ಜೀನ್ (Gene) ಗಳ ಮುಖಾಂತರ ವಂಶವಾಹಿಯನ್ನಾಗಿ ಮಾಡುತ್ತದೆ.


ಇತರೆ ಬೇಟೆ ಪ್ರಾಣಿಗಳ ಹಾಗೆ, ಮನುಷ್ಯನಿಗೆ ವೇಗವಾಗಿ ಓಡಲು ಅಥವಾ ಕಾದಾಡಲು ಸಾಧ್ಯವಿರಲಿಲ್ಲ. ಆದರೆ ಆಯುಧಗಳ ಸಹಾಯದಿಂದ ಮತ್ತು ಗುಂಪಿನ ಬಲದಿಂದ ಬದುಕುಳಿಯುವುದನ್ನು ಕಲಿತ. ಆಯುಧ ಚೂಪು ಮಾಡುವ ಮತ್ತು ಬಲಿಯನ್ನು ಹೊತ್ತು ತರುವ ಗಂಡಸಿನ ಕೈ-ಕಾಲು ಸ್ನಾಯುಗಳು, ಭುಜ-ಬೆನ್ನುಗಳು ಬಲವಾದವು. ಮನೆ-ಮಕ್ಕಳ ನಿರ್ವಹಣೆ ಹೊತ್ತ ಹೆಂಗಸಿಗೆ ಮಾತು-ಕತೆಯ ಉಪಯೋಗ ಹೆಚ್ಚಿನದಿತ್ತು. ಅದೇ ಅವಳ ಬಲವಾಗಿ ಬದಲಾಯ್ತು. ಇವತ್ತಿಗೂ ನೋಡಿ, ಎಂಥ ಸೂಕ್ಷ್ಮ ಭಾವನೆಯಿರಲಿ, ಅದನ್ನು ತಾಯಿ ಗುರುತಿಸದಷ್ಟು ಸುಲಭವಾಗಿ ತಂದೆ ಗುರುತಿಸುವುದಿಲ್ಲ. ತಾಯಿ ಮಗುವಿಗೆ ಮಾತು ಕಲಿಸಿದರೆ, ಅಜ್ಜಿ ಕಥೆ ಹೇಳಿ ಮನು ಕುಲದ ಸಮಾಜ ಜೀವನಕ್ಕೆ ತಳಪಾಯ ಹಾಕಿದಳು. ಭಾವನೆ ಅರಿತು ಮಾತನಾಡುವ ವ್ಯಕ್ತಿಗಳು ಸಮಾಜದ ನಾಯಕರಾಗುತ್ತಾ ಬಂದರು. ಇವೆಲ್ಲ ಬೆಳವಣಿಗೆಗಳು ಮನುಷ್ಯನ ದೇಹವನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿ ಮಾರ್ಪಾಡಾಗುವಂತೆ ಮಾಡಿತು. ಮನುಷ್ಯನ ಮೆದುಳಿನ ಗಾತ್ರ ಹೆಚ್ಚುತ್ತಾ ಹೋಗಿ ಅವನ ನರಜಾಲ (Nervous System) ಸಂಕೀರ್ಣಗೊಳ್ಳುತ್ತ ಹೋಯಿತು. ಪ್ರಾಣಿಗಳಿಗಿಂತ ಹೆಚ್ಚು ಭಾವನೆಗಳನ್ನು, ವಿಚಾರಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಮತ್ತು ವ್ಯಕ್ತಪಡಿಸುವ ಶಕ್ತಿ ಅವನದಾಯಿತು. ಅದರ ಒಂದು ಮಾಧ್ಯಮ ಎನ್ನುವಂತೆ ಭಾಷೆ ಬೆಳೆಯಿತು.


ಭಾಷೆ ಮತ್ತು ಭಾವನೆ ಇವೆರಡರಲ್ಲಿ ಹೆಚ್ಚು ಶಕ್ತಿಯುತವಾದದ್ದು ಭಾವನೆಯೇ ಎನ್ನಲು ಅಡ್ಡಿಯಿಲ್ಲ. ಭಾಷೆ ಕೇವಲ ಒಂದು ಮಾಧ್ಯಮವಾದರೆ, ಭಾವನೆ ನಮ್ಮನ್ನಾಳುವ ಕೇಂದ್ರೀಯ ಶಕ್ತಿ. ಭಾಷೆ ಅರಿಯುವ ತಂತ್ರಜ್ಞಾನವನ್ನು ಮನುಷ್ಯ ಈಗಾಗಲೇ ಅಭಿವೃದ್ಧಿಗೊಳಿಸಿದ್ದಾನೆ. (ಉದಾಹರಣೆಗೆ - ಅಲೆಕ್ಸಾ ಡಿವೈಸ್. ಅಥವಾ ಆಪಲ್ ಫೋನ್ ನಲ್ಲಿರುವ 'ಸಿರಿ'. ಅದು ನನ್ನ ಜೊತೆಗೆ ಮಾತನಾಡಿದಷ್ಟೇ ಸುಲಭವಾಗಿ, ನನ್ನ ನಾಲ್ಕು ವರ್ಷದ ಮಗನ ಜೊತೆಗೂ ಮಾತನಾಡುತ್ತದೆ). ಆದರೆ ಭಾಷೆಯ ಹಿಂದಿರುವ ಭಾವನೆ? ಇದನ್ನು ಅರಿಯಲು ಮನಶಾಸ್ತ್ರದ ಸಹಾಯ ಬೇಕು. ಮತ್ತು ಇದರ ಬಳಕೆ ಸದುಪಯೋಗಕ್ಕಿಂತ, ದುರುಪಯೋಗಗಳಿಗೆ ಹೆಚ್ಚು. ಉದಾಹರಣೆಗೆ, ದ್ವೇಷ ಭಾವನೆ ಬಿತ್ತುವ ಭಯೋತ್ಪಾದನೆ ಕೆಲಸ ಮಾಡುವುದು ಮನಸ್ಸನ್ನು ಆಳುವ ಭಾವನೆಗಳ ಮೇಲೆ. ಹಾಗೆಯೇ ಜಾಹಿರಾತು ಉದ್ಯಮ ನಿಂತಿರುವುದು ಭಾವನೆಗಳ ತಳಹದಿಯ ಮೇಲೆ. ಇಲ್ಲದಿದ್ದರೆ, ಹುಟ್ಟಿದಾಗಿಂದ ಚಹಾ ಕುಡಿಯುತ್ತಿರುವ ನಿಮಗೆ ಯಾವ ಬ್ರಾಂಡ್ ಚಹಾ ಕುಡಿಯೇಬೇಕೆಂದು ಒಬ್ಬ ಸಿನಿಮಾ ನಟ ಹೇಳಲು ಸಾಧ್ಯವಿತ್ತೇ? ಹಾಗೆಯೇ ನಿಮ್ಮ ಕಾರಿಗೆ ಯಾವ ಟೈಯರ್ ಸೂಕ್ತ ಎಂದು ಡ್ರೈವರ್ ಗೆ ಹೆಚ್ಚು ಗೊತ್ತೋ  ಅಥವಾ ಕ್ರಿಕೆಟ್ ಆಟಗಾರನಿಗೋ? ಆದರೂ ನೋಡಿ, ಈ ಜಾಹಿರಾತುಗಳು ಮನುಷ್ಯನ ಮೇಲೆ ಭಾಷೆಗೂ ನಿಲುಕದ ಒಂದು ಸೂಕ್ಷ್ಮ ಪರಿಣಾಮ ಬೀರುತ್ತವೆ. ಹಾಗೆಯೇ ರಾಜಕೀಯ ಪಕ್ಷಗಳ ಉದ್ದೇಶಗಳು ಭಾವನೆಗಳನ್ನು ಕೆದಕಿ, ಸಮಾಜದ ಮೇಲೆ ಹತೋಟಿ ಸಾಧಿಸುವ ಯೋಜನೆ ಹೊಂದಿರುತ್ತವೆ. ಒಂದು ಒಳ್ಳೆಯ ಕಥೆಗಿಂತ, ಭಾವನೆ ಉದ್ರೇಕಿಸುವ ಚಲನಚಿತ್ರ ಹೆಚ್ಚು ಜನಪ್ರಿಯವಾಗುತ್ತದೆ.


ಹಾಗೆಯೇ ಇದನ್ನು ಸದುಪಯೋಯುಗಕ್ಕೆ ಬಳಸುವ ಕೆಲಸವೂ ಹಿಂದಿನ ಕಾಲದಿಂದಲೂ ಸಾಗುತ್ತ ಬಂದಿದೆ. ಋಗ್ವೇದದ ಮಂತ್ರಗಳನ್ನು ಉಚ್ಚರಿಸುವ ರೀತಿಗೆ ಪ್ರಾಮುಖ್ಯತೆ ಕೊಡುತ್ತದೆ ಸಾಮವೇದ. ಓಂಕಾರ ಹೊರಡಿಸುವ ಕಂಪನ, ಮನಸ್ಸಿನ ಭಾವನೆಗಳನ್ನು ಹತೋಟಿಗೆ ತರುವುದಲ್ಲದೆ, ಅನಿವರ್ಚನೀಯ ಆನಂದ ಕೊಡುವುದನ್ನು ಕಂಡುಕೊಂಡಿದ್ದರು ಹಿಂದಿನ ಯೋಗಿಗಳು. ಸಾಮಾನ್ಯ ಜನರು ಭಾವನೆ ತಣಿಸಲು ಹಾಡು-ನೃತ್ಯದ ಮನರಂಜನೆಯ ಮೊರೆ ಹೋದರು. ಭಾಷೆಯನ್ನು ಮೀರಿ ಭಾವನೆ ವ್ಯಕ್ತಪಡಿಸುವುದು ಕಲೆಗಳಿಂದ ಸಾಧ್ಯವಾಯಿತು. ಕಲೆಯ ಎಲ್ಲ ಪ್ರಕಾರಗಳು (ಗಾನ, ಸಂಗೀತ, ನಾಟ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ) ಭಾವನೆಯ ಅಭಿವ್ಯಕ್ತಿಗೆ ಪ್ರಾಮುಖ್ಯತೆ ಕೊಡುತ್ತವೆ. ಭಾಷೆಯಿಂದ ಸಾಧ್ಯವಿಲ್ಲದ್ದನ್ನು ಕಲೆಯ ಮೂಲಕ ವ್ಯಕ್ತಗೊಳಿಸುತ್ತಾನೆ ಕಲಾವಿದ. ಹಾಗಾಗಿ ಹೆಚ್ಚಿನ ಕಲೆಗಳಿಗೆ ಭಾಷೆಯ ಇತಿ-ಮಿತಿಗಳಿಲ್ಲ.

ಮುಂದೆ ಯಾವುದಾದರೂ ಅಂದದ ವರ್ಣಚಿತ್ರವನ್ನು ನೀವು ನೋಡಿದಾಗ ಅದನ್ನು ವಿವರಿಸಲು ಭಾಷೆ ಒಂದು ಅಸಮರ್ಪಕ ಮಾಧ್ಯಮ ಎನ್ನಿಸಿದರೆ, ಅದು ನಿಜ ಮತ್ತು ಅದರ ಕಾರಣ ಏನೆಂದು ನೀವು ಈಗಾಗಲೇ ಬಲ್ಲಿರಿ.

A painting by Vincent Van Gogh


References:

1. Homo Deus by Yuval Noah Harrari

2. Gene: An Intimate History by Dr. Siddhartha Mukherjee

3. Brainwashing by Kathleen Taylor

4. Guns, Germs and Steel by Jared Diamond

Saturday, November 14, 2020

ಸುಮಧುರ ಗೀತೆಗಳ ರಚನಕಾರ: ದೊಡ್ಡರಂಗೇಗೌಡ

 'ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ...'

'ನಮ್ಮೂರ ಮಂದಾರ ಹೂವೆ ...'

'ತೇರ ಏರಿ ಅಂಬರದಾಗೇ ...'

'ಶ್ರೀ ರಾಮ ಬಂದವ್ನೆ, ಸೀತೆಯ ಕಾಣಲಿಕ್ಕೆ ...'

'ಕೊಲುಮಂಡೆ ಜಂಗಮದೇವರು ...'

 

ಕೇಳಲು ಇಂಪಾದ, ಪದ ಜೋಡಣೆಯ ಮಾಧುರ್ಯ ಹೊಂದಿದ ಇವೆಲ್ಲ ಜನಪ್ರಿಯ ಚಿತ್ರ ಗೀತೆಗಳನ್ನು ನೀವು ಕೇಳಿಯೇ ಇರ್ತೀರಿ. ಇವೆಲ್ಲವುಗಳನ್ನು ರಚಿಸಿದ್ದು  ಕವಿ ದೊಡ್ಡ ರಂಗೇಗೌಡರು. ಇವರು ಹುಟ್ಟಿ ಬೆಳೆದದ್ದು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ. ಕನ್ನಡ ಪ್ರಾಧ್ಯಾಪಕರಾಗಿ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು ಬೆಂಗಳೂರಿನ  ಕಾಲೇಜೊಂದರಲ್ಲಿ. ಆದರೆ ಇವರ ಜನಪ್ರಿಯರಾಗಿದ್ದು ಕವಿತೆಗಳ ಮೂಲಕ.  ಚಲನಚಿತ್ರಗಳಿಗೆ ಗೀತೆ, ಮತ್ತು ಸಂಭಾಷಣೆ ಅಲ್ಲದೆ ಹಲವಾರು ಭಾವಗೀತೆಗಳ ಸಂಕಲನಗಳನ್ನು ರಚಿಸಿದ್ದಾರೆ. ಮೂರು ಬಾರಿ ಅತ್ಯುತ್ತಮ ಗೀತ-ರಚನಾಕಾರ ಪ್ರಶಸ್ತಿ ಹಾಗೂ 'ಪದ್ಮ ಶ್ರೀ' ಪ್ರಶಸ್ತಿ ಇವರನ್ನು ಅರಸಿ ಬಂದಿವೆ. ಕವಿಯಾಗಿ ಅವರ ಅನುಭವಗಳು, ಅವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಮತ್ತು ಕವಿತೆ ಬರೆದಂತ ಸಂದರ್ಭಗಳು, ಇವುಗಳ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡರೆ ಎಷ್ಟು  ಚೆನ್ನ ಅಲ್ಲವೇ? ಅದಕ್ಕಾಗಿ ಈ ವಿಡಿಯೋ ವನ್ನು ನೋಡಿ.


https://www.youtube.com/watch?v=Dai-YsAIKTo






 

ಪುಸ್ತಕ ಪರಿಚಯ: ಜಿ.ಎಸ್.ಶಿವರುದ್ರಪ್ಪ ಸಂಚಯ

"ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ-ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ"

 

"ಹಾಡು ಹಳೆಯದಾದರೇನು

ಭಾವ ನವನವೀನ"

 

ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. "ವಚನಕಾರರ ವಿಚಾರಕ್ರಾಂತಿ" ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ.

 "ವಚನಕಾರರು ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಸ್ವಾನುಭವವೇ ಎಲ್ಲಕಿಂತ ಮಿಗಿಲಾದುದು ಎಂದು ಕಂಡು ಕೊಂಡರು.

 ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ - ಎಂದು ಬಸವಣ್ಣ ನವರು ಸವಾಲು ಹಾಕಿದರು.

 ವೇದಶಾಸ್ತ್ರ ಪುರಾಣಾಗಮಗಳೆಂಬ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ - ಎಂದು ಅಕ್ಕಮಹಾದೇವಿ ಅವುಗಳ ನಿರರ್ಥಕತೆಯನ್ನು ಘೋಷಿಸಿದಳು.

 ಧರ್ಮವೆಂದರೆ ಬದುಕಿಗೆ ಇಳಿಯಲಾರದ ಆದರ್ಶಗಳ, ವಿಚಾರಗಳ, ನಂಬಿಕೆಗಳ ಒಂದು ಕಂತೆ ಎಂದು ವಚನಕಾರರು ಭಾವಿಸಲಿಲ್ಲ. ಧ್ಯಾನ, ಪೂಜೆ, ಪ್ರಾರ್ಥನೆಗಳು ಇರುವುದು ವ್ಯಕ್ತಿಯ ಅಂತರಂಗವನ್ನು ಪರಿಶುದ್ಧಗೊಳಿಸಲು. ಇವು ಬಹಿರಂಗದ ನಡುವಳಿಕೆಗಳಲ್ಲಿ ಪ್ರಕಟವಾಗದಿದ್ದರೆ ಅಂತರಂಗದ ಆಧ್ಯಾತ್ಮಿಕ ಸ್ಥಿತಿಗೆ ಏನೂ ಅರ್ಥವಿಲ್ಲ."

 ಹೀಗೆ ಇತರೆ ಕವಿಗಳಾದ ಪಂಪ, ಹರಿಹರ, ರಾಘವಾಂಕ, ಸರ್ವಜ್ಞ, ಕುವೆಂಪು, ಬೇಂದ್ರೆಯವರ ಕಾವ್ಯ ವಿಮರ್ಶೆಗಳು ಪುಸ್ತಕದಲ್ಲಿವೆ.

 ಜಾನಪದ, ನವೋದಯ, ಹೊಸಗನ್ನಡ ಕಾವ್ಯ, ಸಾಹಿತ್ಯ ಚಳವಳಿಗಳು ಮತ್ತು ಸಾಹಿತ್ಯ ಪರಂಪರೆ ಇವೆಲ್ಲ ವಿಷಯಗಳ ಮೇಲೆ ಲೇಖಕರು ರಚಿಸಿರುವ ಹಲವಾರು ಮೀಮಾಂಸೆಗಳು ಪುಸ್ತಕದಲ್ಲಿವೆ. ಅವು ಓದುಗರಿಗೆ ಜ್ಞಾನಾರ್ಜನೆ ಮತ್ತು ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡಬಲ್ಲವು.

 ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಲೇಖಕರು ರಚಿಸಿದ ನಾಲ್ಕು ಕೃತಿಗಳು - "ಟಾಲ್ ಸ್ಟಾಯ್ ಬೆಳೆದ ಮಲೆನಾಡಿನಲ್ಲಿ", "ವಿವೇಕಾನಂದರ ಹೆಜ್ಜೆಯ ಹಿಂದೆ", "ಸರೋವರ ಮಂಡಲಗಳ ಮಧ್ಯೆ" ಮತ್ತು "ಕೇದಾರನಾಥಕ್ಕೆ" ಕೂಡ ಪುಸ್ತಕದ ಭಾಗವಾಗಿವೆ.

 ಲೇಖಕರು ರಚಿಸಿದ "ಶಿವಯೋಗಿ ಸಿದ್ಧರಾಮ" ಕಾದಂಬರಿಯ ಆಯ್ದ ಭಾಗ ಆಕರ್ಷಿತವಾಗಿದೆ ಮತ್ತು  ಲೇಖಕರಿಗಿದ್ದ ಅಧ್ಯಾತ್ಮದ ಒಲವನ್ನು ಸ್ಪಷ್ಟ ಪಡಿಸುತ್ತದೆ. ಲೇಖಕರ ಆತ್ಮಕಥೆಯಾದ "ಚತುರಂಗ" ಆಯ್ದ ಭಾಗ, ಲೇಖಕರ ಶಾಲಾ ದಿನಗಳು, ಅವರು ಬಾಲಕರಾಗಿದ್ದಾಗ ರಚಿಸಿದ ಕವಿತೆಗಳು, ಅವರ ಸಾಹಿತ್ಯಾಸಕ್ತಿ ರೂಪುಗೊಂಡ ಬಗೆ ಇವುಗಳ ಪರಿಚಯ ಮಾಡಿಸುತ್ತದೆ.

 ಸುಮಾರು ೪೫೦ ಪುಟಗಳ, ಅತ್ಯುತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಲ್ಪಟ್ಟ ಪುಸ್ತಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದು, ರಿಯಾಯಿತಿ ದರದಲ್ಲಿ ಲಭ್ಯವಿದೆ.

  ಪುಸ್ತಕ ಒಂದೇ ಸಲಕ್ಕೆ ಓದಿ ಮುಗಿಸುವ ಕಾದಂಬರಿಯಲ್ಲ. ಬದಲಿಗೆ ನಿಧಾನವಾಗಿ ಮತ್ತು ನಿರಂತರವಾಗಿ ಓದಿದರೆ ಹೃದಯಕ್ಕೆ ತಂಪನ್ನು ತಂದುಕೊಡಬಲ್ಲ ಪುಸ್ತಕ. ಕವಿಗಳ ಮತ್ತು ವಚನಕಾರರ ಮನದಾಳಕ್ಕೆ ಇಳಿಯುತ್ತ, ಸಾಹಿತ್ಯ ಪ್ರೇಮವನ್ನು ಗಟ್ಟಿಗೊಳಿಸಲು ನೆರವಾಗುವ ಪುಸ್ತಕ.




ದೇವಾನಾಂಪ್ರಿಯ ಅಶೋಕನ ಕುರಿತು ನೆಹರು

(ನೆಹರುರವರು ೧೯೩೦ ರಿಂದ ೧೯೩೩ ರವರೆಗೆ ಜೈಲಿನಿಂದ, ಶಾಲೆಯಲ್ಲಿ ಓದುತ್ತಿದ್ದ ತಮ್ಮ ಮಗಳು ಇಂದಿರಾಗೆ ಪ್ರಪಂಚದ ಇತಿಹಾಸ ತಿಳಿಸುತ್ತ ನಿರಂತರವಾಗಿ ಬರೆದ ಪತ್ರಗಳನ್ನು ಒಟ್ಟುಗೂಡಿ "Glimpses of World History" ಎನ್ನುವ ಪುಸ್ತಕವಾಗಿದೆ. ಅದರಲ್ಲಿ ಒಂದು ಪತ್ರ ಅಶೋಕ ಮತ್ತು ಆತನ ಶಾಸನಗಳನ್ನು ಉಲ್ಲೇಖಿಸಿ ಬರೆದಿದ್ದಾಗಿದೆ. ಅದನ್ನು ಸಂಕ್ಷಿಪ್ತ ವಾಗಿ ಇಲ್ಲಿ ಅನುವಾದಿಸಿದ್ದೇನೆ.)

 ಪತ್ರ ೨೪: ಅಶೋಕ, ದೇವರಿಗೆ ಪ್ರಿಯನಾದವನು, ಮಾರ್ಚ್ ೩೦, ೧೯೩೨

 ಬಿಂದುಸಾರನ ನಂತರ ಕ್ರಿ. ಪೂ. ೨೬೮ ರಲ್ಲಿ ಅಧಿಕಾರಕ್ಕೆ ಬಂದವನು ಅಶೋಕ. ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವ ಉದ್ದೇಶದಿಂದ ಕಳಿಂಗ ಯುದ್ಧವನ್ನು ಮಾಡಿದ್ದೆ ಕೊನೆ. ಯುದ್ಧ ತರುವ ಸಾವು ನೋವುಗಳಿಗೆ ಜಿಗುಪ್ಸೆಗೊಂಡು ತನಗಿನ್ನು ಆ ನೋವು ಸಾಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಗೆಲುವಿನ ನಂತರವೂ ಯುದ್ಧ ತ್ಯಜಿಸಿದ ಏಕೈಕ ರಾಜ ಅಶೋಕ. ಆತನ ಮನದಾಳದಲ್ಲಿದ್ದ ವಿಷಯ ಅರಿಯಲು ನಾವು ಇತಿಹಾಸಕಾರರ ಮೇಲೆ ಅವಲಂಬಿತವಾಗಬೇಕಿಲ್ಲ. ಅಶೋಕನೇ ಕೆತ್ತಿಸಿದ ಶಾಸನಗಳು ಆತನ ಸಂದೇಶವನ್ನು ಸಾರಿ ಹೇಳುತ್ತವೆ.  ನಿಜವಾದ ವಿಜಯವೆಂದರೆ, ಅಶೋಕನ ಪ್ರಕಾರ, ನಿಮ್ಮನ್ನು ನೀವು ಗೆಲ್ಲುವುದು ಮತ್ತು ಧರ್ಮ ಮಾರ್ಗದ ಮೂಲಕ ಜನರ ಹೃದಯ ಗೆಲ್ಲುವುದು.

 ಬುದ್ಧ ಧರ್ಮದ ಆರಾಧಕನಾಗಿ ಹೋದ ಅಶೋಕ, ಧರ್ಮ ಪ್ರಚಾರದ ಕಾರ್ಯ ಕೈಗೊಳ್ಳುತ್ತಾನೆ. ಬಲವಂತಿಕೆ ಅಥವಾ ಶಕ್ತಿ ಪ್ರದರ್ಶನದಿಂದಲ್ಲ, ಬದಲಿಗೆ ಜನರ ಹೃದಯ ಸೂರೆಗೊಳ್ಳುವುದರ ಮೂಲಕ. ಧರ್ಮ ಪ್ರಚಾರಕರನ್ನು ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳಿಗೆ ಕಳುಹಿಸಿಕೊಡುತ್ತಾನೆ. ಅವನ ತಮ್ಮ ತಂಗಿಯಯರೇ ದಕ್ಷಿಣ ಭಾರತ ಮತ್ತು ಶ್ರೀಲಂಕಾಗೆ ಅಶೋಕನ ಸಂದೇಶ ಹೊತ್ತು ಸಾಗುತ್ತಾರೆ. ಇದು ಭಾರತದಲ್ಲಿ ಬೌದ್ಧ ಧರ್ಮ ಕ್ಷಿಪ್ರ ವಾಗಿ ಹಬ್ಬಲು ಕಾರಣವಾಗುತ್ತದೆ. ಅವನ ಯೋಜನಗಳು ಬರಿ ಪ್ರಾರ್ಥನೆ, ಆಚರಣೆಗಳಿಗೆ ಸೀಮಿತಗೊಳ್ಳದೆ, ಸಮಾಜದ ಉನ್ನತಿಗೆ ಕಾರಣವಾಗುವಂತೆ ಸಾರ್ವಜನಿಕ ಅನೂಕೂಲಕ್ಕಾಗಿ ಉತ್ತಮ ಆಸ್ಪತ್ರೆಗಳು, ಉದ್ಯಾನಗಳು, ರಸ್ತೆಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ. ಶಿಕ್ಷಣದ ಪೋಷಣೆಗೆಂದು ನಾಲ್ಕು ವಿಶ್ವ ವಿದ್ಯಾನಿಲಯಗಳು - ತಕ್ಷಶಿಲಾ, ಮಥುರಾ, ಉಜ್ಜಯಿನಿ ಮತ್ತು ನಳಂದ ಪಟ್ಟಣಗಳಲ್ಲಿ ನಿರ್ಮಿತವಾಗುತ್ತವೆ. ದೇಶದ ಉದ್ದಗಲಕ್ಕೂ ಬೌದ್ಧ ಧರ್ಮದ ವಿಹಾರಗಳು ನಿರ್ಮಿಸಲ್ಪಡುತ್ತವೆ.

 ಅಶೋಕನ ಕಾರ್ಯಕ್ಷೇತ್ರ ಮನುಜರಿಗೆ ಸೀಮಿತವಾಗದೆ, ಪ್ರಾಣಿಗಳಿಗೂ ದಯೆ ತೋರುವ, ಅವುಗಳನ್ನು ಬಲಿ ಕೊಡದಂತೆ ತಡೆಯುವ ಮತ್ತು ಅವುಗಳಿಗೆಂದೇ ಆಸ್ಪತ್ರೆಗಳನ್ನು ನಿರ್ಮಿಸುವುದರಲ್ಲೂ ಕಂಡು ಬರುತ್ತದೆ. ಅವನ ಈ ಕಾರ್ಯಗಳು ಮತ್ತು ಬೌದ್ಧ ಧರ್ಮದ ಹರಡುವಿಕೆ, ಭಾರತೀಯರಲ್ಲಿ ಹೆಚ್ಚಿನವರು ಸಸ್ಯಹಾರಿಗಳು ಆಗುವಂತೆ ಮಾಡುತ್ತದೆ.

 ಹೀಗೆ ಮೂವತ್ತೆಂಟು ವರುಷಗಳ ಕಾಲ ರಾಜ್ಯಭಾರ ಮಾಡಿದ ಅಶೋಕ, ತನ್ನ ಜೀವನ ಶಾಂತಿ, ಸೌಹಾರ್ದತೆ ಮತ್ತು ಸಮಾಜದ ಏಳಿಗೆಗಾಗಿ ಮೀಸಲಿಟ್ಟ.  ಕ್ರಿ. ಪೂ. ೨೨೬ ರಲ್ಲಿ ಕಾಲವಾಗುವ ಕೆಲ ಸಮಯದ ಮುನ್ನ ಬೌದ್ಧ ಧರ್ಮದ ಸನ್ಯಾಸತ್ವ ಸ್ವೀಕರಿಸಿದ್ದ.

 ಇಂದಿಗೆ ಮೌರ್ಯ ಸಾಮ್ರಾಜ್ಯದ ಗತ ವೈಭವ ಸಾರುವ ಅವಶೇಷಗಳು ಅಲ್ಲಿ-ಇಲ್ಲಿ ಸ್ವಲ್ಪ ಉಳಿದುಕೊಂಡಿವೆ. ಆದರೆ ಅಶೋಕನ ರಾಜಧಾನಿಯಾಗಿದ್ದ ಪಾಟಲೀಪುತ್ರದಲ್ಲಿ ಯಾವ ಅವಶೇಷಗಳು  ಉಳಿದಿಲ್ಲ. ಅಶೋಕನು ಕಾಲವಾಗಿ ೬೦೦ ವರುಷಗಳ ನಂತರ ಅಲ್ಲಿಗೆ ಭೇಟಿ ಕೊಟ್ಟಿದ್ದ ಫಾ-ಹಿಯೆನ್ ಎನ್ನುವ ಚೀನಾದ ಪ್ರವಾಸಿಯ ಪ್ರಕಾರ ಅದು ಅಭಿವೃದ್ಧಿ ಹೊಂದಿದ್ದ ಒಂದು ಶ್ರೀಮಂತ ನಗರವಾಗಿತ್ತು. ಅಷ್ಟೊತ್ತಿಗಾಗಲೇ ಅಶೋಕನ ಕಲ್ಲಿನ ಅರಮನೆ ಶಿಥಿಲಗೊಂಡಿತ್ತು, ಆದರೂ ಅದು ಮನುಜ ಮಾತ್ರರಿಂದ ಕಟ್ಟಲು ಸಾಧ್ಯವೇ ಎನ್ನುವಂತಿತ್ತು.

 ಅಶೋಕನ ಬೃಹದಾಕಾರವಾದ ಕಲ್ಲಿನ ಅರಮನೆ ಇಂದಿಗೆ ಸಂಪೂರ್ಣ ಅಳಿದು ಹೋಗಿದ್ದರೂ, ಅಶೋಕನ ಜೀವನ, ಅವನ ಸಂದೇಶಗಳು ಮತ್ತು ಎಂದಿಗೂ ಅಳಿಸಲಾಗದಾರದ ಅವನ ಸಾಧನೆಗಳನ್ನು ಭಾರತದಲ್ಲಿ ಅಲ್ಲದೆ ಏಷ್ಯಾ ಖಂಡದ ಹಲವು ದೇಶಗಳಲ್ಲಿ ಬದಲಾದ ಜನ ಜೀವನ ತೋರಿಸುತ್ತವೆ. ಅವನ ಶಾಸನಗಳು ಇಂದಿಗೂ ಅಶೋಕನನ್ನು ನಮ್ಮ ಹತ್ತಿರಕ್ಕೆ ತರುತ್ತವೆ.