Tuesday, December 28, 2021

ಕುರಿಯಲ್ಲಿ ಕುರಿ ಬುದ್ಧಿ ತುಂಬಿದವರಾರು?

ಸುಮಾರು ೭೦,೦೦೦ ವರುಶಗಳಷ್ಟು ಹಿಂದೆ ಆದಿವಾಸಿ ಮನುಷ್ಯ ಗುಡ್ಡಗಾಡು ಅಲೆಯುತ್ತ, ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುತ್ತಿರಲಿಲ್ಲವೇ? ಗುಹೆಗಳಲ್ಲಿ ವಾಸಿಸುತ್ತಿದ್ದ ಅವನು ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಅಸಮರ್ಥನಾಗಿದ್ದ. ಹುಲಿ, ಸಿಂಹಗಳಿಗಿದ್ದಷ್ಟು ದೈಹಿಕ ಸಾಮರ್ಥ್ಯ, ಬಲವಾದ ಉಗುರುಗಳು, ಕೋರೆ ಹಲ್ಲುಗಳು ಅವನಿಗಿರಲಿಲ್ಲ. ತನ್ನ ದೌರ್ಬಲ್ಯ ನೀಗಿಸಲು ಅವನು ಸಂಘ ಜೀವಿಯಾದ. ಗುಂಪಾಗಿ ಬೇಟೆಯಾಡುವುದು ಆ ಕಾಲದ ಮನುಷ್ಯನಿಗೆ ಅನುಕೂಲ ಎನಿಸಿತು. ಬೆಂಕಿಯ ಉಪಯೋಗ ಕಲಿತ ಮೇಲೆ, ಮಾಂಸ ಬೇಯಿಸಿ ತಿನ್ನುವುದನ್ನು ಕಲಿತ. ಅದರಿಂದ ಅವನ ಜೀರ್ಣ ಶಕ್ತಿಯ ಮೇಲೆ ಒತ್ತಡ ಕಡಿಮೆಯಾಗಿ, ಹಲ್ಲುಗಳು ಚಿಕ್ಕವಾಗಿ, ಕರುಳಿನ ಉದ್ದ ಕಡಿಮೆ ಆಗಿ ಅಲ್ಲಿ ವ್ಯಯವಾಗುತ್ತಿದ್ದ ಶಕ್ತಿಯನ್ನು, ಇಂದ್ರಿಯಗಳಿಗೆ ಮತ್ತು ಮೆದುಳಿಗೆ ವರ್ಗಾಯಿಸಲು ಸಾಧ್ಯ ಆಯಿತು. ಅಲ್ಲಿಂದ ಅವನ ವಿಚಾರ ಶಕ್ತಿ ಮತ್ತು ಹೊಸ ವಿಷಯ ಗ್ರಹಿಸುವ ಶಕ್ತಿ ಹೆಚ್ಚಾಗುತ್ತಾ ಹೋಯಿತು.

 

ಕಾಲ ಕ್ರಮೇಣ ತನ್ನೊಂದಿಗೆ ಬೇಟೆಗೆ ಸ್ಪರ್ಧಿಸುತ್ತಿದ್ದ ಒಂದು ಜಾತಿಯ ತೋಳಗಳ ಗುಂಪನ್ನು ಪಳಗಿಸಿಕೊಂಡ. ಅವು ನಂಬಿಕಸ್ಥ ನಾಯಿಯಾಗಿ ಬದಲಾದವು. ನಾಯಿಗಳು ಅವನಿಗೆ ಬೇಟೆಯಲ್ಲಿ ಸಹಾಯ ಮಾಡುವುದರ ಜೊತೆಗೆ, ರಾತ್ರಿ ಕಾವಲು ಕಾಯಲು, ಇತರೆ ಪ್ರಾಣಿಗಳು ಬಂದಾಗ ಎಚ್ಚರಿಸಲು ಸಹಾಯ ಮಾಡುತ್ತಿದ್ದವು. ತಾನು ಬೇಟೆಯಾಡುತ್ತಿದ್ದ ಮೊಲ, ಕೋಳಿ, ಆಡು-ಕುರಿಗಳನ್ನು ಸಾಕಲು ಆರಂಭಿಸಿದ. ಹಸು-ಎಮ್ಮೆಗಳನ್ನು ಹಾಲಿಗಾಗಿ ಸಾಕಲಾರಂಭಿಸಿದ. ಕುದುರೆಗಳು ಅವನಿಗೆ ಸಾಮಾನು ಸಾಗಿಸಲು, ವೇಗವಾಗಿ ಓಡಾಡಲು ಸಹಾಯವಾಗತೊಡಗಿದವು.

 

ಮೊದಲಿಗೆ ವನ್ಯ ಜೀವಿಗಳಾಗಿದ್ದ ಅವುಗಳಿಗೆ ಮಾನವನಿಗೆ ಹೊಂದಾಣಿಕೆ ಇರಲಿಲ್ಲ. ಆದರೆ ಮಾನವನ ಗ್ರಹಣ ಶಕ್ತಿ ಹೆಚ್ಚುತ್ತಾ ಹೋಗುತ್ತಿತ್ತಲ್ಲವೇ? ಅವನು ಕುರಿ ಮರಿಗಳನ್ನು ಕೊಲ್ಲದೇ, ಅವುಗಳ ದೊಡ್ಡವು ಆಗುವವರೆಗೆ ಸಹನೆ ತೋರಿಸಲು ಆರಂಭಿಸಿದ. ಹಾಗೆಯೆ ಮರಿ ಹಾಕುವ ಹೆಣ್ಣು ಕುರಿಗಳನ್ನು ಕೊಲ್ಲುವುದಕ್ಕಿಂತ ಕಾಯುವುದು ಮೇಲು ಎನ್ನುವುದು ಗ್ರಹಿಸಿದ. ದೊಡ್ಡ ಕುರಿ ಹಿಂಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಗಂಡು ಕುರಿಗಳು, ಮುದಿ ಕುರಿಗಳು ಅವನಿಗೆ ಮೊದಲು ಬಲಿಯಾದವು. ಆಕ್ರಮಣಕಾರಿ ಪ್ರವೃತ್ತಿಯ ಗಂಡು ಕುರಿಗಳನ್ನು ಕಂಡ ಕೂಡಲೇ ಕೊಂದು ಹಾಕುತ್ತಿದ್ದ ಅವನು ಅಂತಹ ಗುಣಗಳು ಕುರಿಗಳಲ್ಲಿ ವಂಶವಾಹಿಯಾಗುವುದನ್ನು ಕಡಿಮೆ ಮಾಡಿದ. ಮನುಷ್ಯನಿಗೆ ಸಹನೆ ತೋರಿಸುವ ಗಂಡು ಕುರಿ ಮತ್ತು ಮಂದ ಗತಿಯಲ್ಲಿ ಓಡುವ ಹೆಣ್ಣು ಕುರಿಗಳನ್ನು ಜೊತೆ ಮಾಡಿದ. ಮುಂದೆ ಹುಟ್ಟುವ ಕುರಿ ಮರಿಗಳು ಮನುಷ್ಯನಿಗೆ ಅನುಕೂಲ ಆಗುವ ಗುಣಗಳನ್ನು ಹೊಂದುತ್ತ ಹೋದವು. ಅವುಗಳ ಕಾಡು ಪ್ರವೃತ್ತಿ ಕ್ರಮೇಣ ಮರೆಯಾಗುತ್ತಾ ಹೋಗಿ ಸಾಕು ಪ್ರಾಣಿಗಳಾಗಿ ಬದಲಾದವು. 'Natural Selection' ಎನ್ನುವ ಪ್ರಾಕೃತಿಕ ಕ್ರಿಯೆಯ ಮಧ್ಯಕ್ಕೆ ಕೈ ಹಾಕಿದ ಮಾನವ, ಕೆಲ ಪ್ರಾಣಿ, ಪಕ್ಷಿಗಳಲ್ಲಿ ತನಗೆ ಬೇಕಾದ ಗುಣಗಳು ವಿಕಾಸ ಹೊಂದುವಂತೆ ಮಾಡಲು ಸಫಲನಾದ.

 

ಮನುಷ್ಯ ತಾನು ಪ್ರಕೃತಿಯ ಕೈಗೊಂಬೆಯಾದರೂ, ಇತರೆ ಕೆಲವು ಪ್ರಾಣಿಗಳನ್ನು ತನ್ನ ಅಂಕೆಯಂತೆ ಆಡಿಸಲು ಯಶಸ್ವಿಯಾದ. ಕುರಿಯಲ್ಲಿ ಕುರಿ ಬುದ್ಧಿಯನ್ನು ತುಂಬಿದವರಾರು ಎನ್ನುವ ಪ್ರಶ್ನೆಗೆ ನೀವು ದೇವರು ಅಥವಾ ಪ್ರಕೃತಿ ಎನ್ನುವ ಉತ್ತರ ಕೊಟ್ಟಿರಿ ಜೋಕೆ. ಅದು ನಿಸ್ಸಂದೇಹವಾಗಿ ಮಾನವನದೇ ಕೆಲಸ.

Reference: ‘Sapience’ by Yuval Noah Harrari

ಪ್ರಕೃತಿಯ ಕೈಗೊಂಬೆ ಮಾನವ

ನೀವು ದಟ್ಟ ಕಾಡಿನಲ್ಲಿ ಸಫಾರಿಗೆಂದು ಹೊರಟಿರುವಿರಿ. ಅಲ್ಲಿ ನಿಮ್ಮ ಅದೃಷ್ಟಕ್ಕೆ ಹುಲಿ ಕಣ್ಣಿಗೆ ಬೀಳುತ್ತದೆ. ನೀವು ಸುರಕ್ಷಿತ ಗಾಡಿಯಲ್ಲಿ ಕುಳಿತಿದ್ದು, ನಿಮಗೆ ಯಾವ ಅಪಾಯವಿಲ್ಲದಿದ್ದರೂ ನಿಮ್ಮ ಹೃದಯ ಬಡಿತ ಏರುತ್ತದೆ ಮತ್ತು ಉಸಿರಾಟ ತೀವ್ರವಾಗುತ್ತದೆ. ಅವಶ್ಯಕತೆ ಇರದಿದ್ದರೂ ನಿಮ್ಮ ದೇಹ ಓಡಿ ಹೋಗಲು, ಅಥವಾ ತಪ್ಪಿಸಿಕೊಳ್ಳಲು ಸಜ್ಜು ಮಾಡಿಕೊಳ್ಳುತ್ತದೆ. ಏಕೆ ಹೀಗೆ? ಉತ್ತರ ಸುಲಭ. ಮನುಷ್ಯ ಆದಿವಾಸಿಯಾಗಿ ಕಾಡಿನಲ್ಲಿ ಬದುಕುತ್ತಿದ್ದಾಗ, ಹುಲಿಯನ್ನು ಕಂಡರೆ ಹೇಗೆ ಪ್ರತಿಕ್ರಿಯಿಸುತ್ತಿದ್ದನೋ ಅದೇ ಪ್ರತಿಕ್ರಿಯೆ ಇಂದಿಗೂ ಕೂಡ ಮನುಷ್ಯನಲ್ಲಿ ಹಾಸು ಹೊಕ್ಕಾಗಿದೆ. ಲಕ್ಷಾಂತರ ವರುಷಗಳಿಂದ ವಿಕಾಸ ಹೊಂದುತ್ತಿರುವ ಮಾನವ ಕಾಡು ಬಿಟ್ಟು ನಾಗರಿಕತೆಗೆ ಬಂದು ಕೆಲ ಸಾವಿರ ವರುಶಗಳಷ್ಟೇ ಕಳೆದಿವೆ. ಸುಮಾರು ೪೦೦ ಕೋಟಿ ವರುಷ ಇತಿಹಾಸ ಹೊಂದಿರುವ ಜೀವ ವಿಕಾಸಕ್ಕೆ, ಸಾವಿರ ವರುಷಗಳು ಅಲ್ಪ ಸಮಯ ಮಾತ್ರ. ಇಷ್ಟು ಕಡಿಮೆ ಸಮಯದಲ್ಲಿ ಮನುಷ್ಯನ ಜೀನ್ ಗಳು ಮಾರ್ಪಾಡಾಗುವುದು ಅಸಾಧ್ಯ. ಹಾಗಾಗಿ ಅಲೆಮಾರಿ ಮನುಷ್ಯನ ಪ್ರವೃತ್ತಿಗಳು ಆಧುನಿಕ ಮನುಷ್ಯನಲ್ಲಿ ಕೂಡ ಬದಲಾಗದೆ ಹಾಗೆ ಉಳಿದಿವೆ.


ಪ್ರಕೃತಿಯು ಎಲ್ಲ ಜೀವಿಗಳಲ್ಲಿ ತಾನು ಜೀವ ಉಳಿಸಿಕೊಳ್ಳುವದಕ್ಕೆ ಮತ್ತು ವಂಶ ಮುಂದುವರೆಸುವುದಕ್ಕೆ ಏನು ಬೇಕು ಅದನ್ನು ಮಾತ್ರ ಜೀನ್ ಗಳಲ್ಲಿ ಸಾಂಕೇತಿಕ ಭಾಷೆಯಲ್ಲಿ ಬರೆದುಬಿಟ್ಟಿದೆ. ಅದಕ್ಕೆ ನೋಡಿ ಆಧುನಿಕ ಮನುಷ್ಯ ಎಲ್ಲ ಸವಲತ್ತುಗಳ ನಡುವೆಯೂ ಕೂಡ ನೆಮ್ಮದಿಯಿಲ್ಲದೆ ಒದ್ದಾಡುವುದು. ನೀವು ಬೆಳಿಗ್ಗೆ ಹೊತ್ತಿಗೆ ದೊಡ್ಡ ಲಾಟರಿ ಗೆದ್ದಿರುವಿರಿ ಎಂದುಕೊಳ್ಳೋಣ. ಆದರೆ ಅಂದು ಮಧ್ಯಾಹ್ನ ನೀವು ಊಟ ಮಾಡುವುದು ತಡ ಮಾಡಿದರೆ, ನಿಮ್ಮ ದೇಹ ಸಂಕಟ ಉಂಟು ಮಾಡಿ ನಿಮ್ಮ ಲಾಟರಿ ಗೆದ್ದ ಸಂತೋಷ ಮರೆತು ಹೋಗುವಂತೆ ಮಾಡುತ್ತದೆ. ಏಕೆಂದರೆ ಪ್ರಕೃತಿಗೆ ಮುಖ್ಯವಾಗಿರುವುದು ನೀವು ಊಟ ಮಾಡಿ ಜೀವ ಉಳಿಸಿಕೊಳ್ಳುವುದು. ಹಾಗೆಯೇ ಅದು ಮೈಥುನದಲ್ಲಿ ಆನಂದವನ್ನು ಕ್ಷಣಿಕವಾಗಿಸಿದೆ. ಅದು ಉಂಟುಮಾಡುವ ಸಂವೇದನೆಗೆ ಮತ್ತೆ ಮತ್ತೆ ಹಾತೊರೆಯುವಂತೆ ಮಾಡುತ್ತದೆ. ಪ್ರಕೃತಿಗೆ ಬೇಕಾಗಿರುವುದು ನೀವು ಜೀವ ಉಳಿಸಿಕೊಳ್ಳುವುದು ಮತ್ತು ನಿಮ್ಮ ವಂಶ ಮುಂದುವರೆಯುವುದು ಮಾತ್ರ. ನೀವು ಸಂತೋಷವಾಗಿರುವುದು ಅಲ್ಲ. ನೀವು ಸಂತೋಷದಲ್ಲಿ ಮೈ ಮರೆತು ಬಿಟ್ಟರೆ ಹೇಗೆ? ಹಾಗಾಗಿ ಅದು ಸಂತೋಷವನ್ನು ಕ್ಷಣಿಕವನ್ನಾಗಿಸಿ, ಮತ್ತೆ ಊಟ ಹುಡುಕಿಕೊಳ್ಳುವಂತೆ, ಸಂಗಾತಿಯನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತ ಹೋಗುತ್ತದೆ. ದುಃಖ ಸಂವೇದನೆಗಳನ್ನು ಹೆಚ್ಚಿಸಿ, ಕ್ಷಣಿಕ ಸಂತೋಷದ ಸಂವೇದನೆಗಳಿಗೆ ಹಾತೊರೆಯುವಂತೆ ಮಾಡುತ್ತದೆ.


ಪ್ರಕೃತಿ ವಿಕಾಸ ಸೃಷ್ಟಿಸಿದ ಜೀವಿಗಳು ಸಂಪೂರ್ಣ ನೆಮ್ಮದಿಯಿಂದ ಬದುಕಲಾರವು. ನೆಮ್ಮದಿ ಪ್ರಕೃತಿಯ ಉದ್ದೇಶ ಅಲ್ಲ. ಬದಲಿಗೆ ಅದು ಜೀವಿಗಳನ್ನು ಸ್ಪರ್ಧೆಗೆ, ಪೈಪೋಟಿಗೆ ಹಚ್ಚುತ್ತದೆ. ಮನುಷ್ಯರಲ್ಲಿ ದುಡ್ಡು, ಆಸ್ತಿ, ಸಾಮಾಜಿಕ ಸ್ಥಾನಮಾನ ಇವುಗಳಿಗೆ ಪ್ರತಿ ದಿನ ಪೈಪೋಟಿ ಏರ್ಪಡುತ್ತದೆ. ಅದರಲ್ಲಿ ಗೆದ್ದವರ ಸಂತೋಷ ಕ್ಷಣಿಕ. ಅವರು ಮತ್ತೆ ಹೆಚ್ಚಿನ ಸ್ಪರ್ಧೆಗೆ ಬೀಳುತ್ತಾರೆ. ಆದರೆ ಸೋತವರ ವೇದನೆ ಮಾತ್ರ ದೀರ್ಘ ಕಾಲಿಕ. ವೇದನೆಯ ಸಂವೇದನೆಗಳನ್ನು ಮರೆಯಲು ಮಾನಸಿಕವಾಗಿ ದುರ್ಬಲನಾದ ಮನುಷ್ಯ ತನ್ನ ಸಂಕಟ ಮರೆಯಲು ನಶೆ ಮಾರ್ಗಗಳನ್ನು ಹುಡುಕುತ್ತಾನೆ. ಅವು ಮನುಷ್ಯನಲ್ಲಿ ಉಂಟು ಮಾಡುವ ರಾಸಾಯನಿಕ ಕ್ರಿಯೆಗಳು, ಸಂವೇದನೆಗಳನ್ನು ತಾತ್ಕಾಲಿಕವಾಗಿ ಬದಲು ಮಾಡಿದರೂ, ಪ್ರಕೃತಿ ಮತ್ತೆ ಮರು ದಿನ ಬೆಳಿಗ್ಗೆ ತನ್ನ ನೋವಿನೊಂದಿಗೆ ವಾಪಸ್ಸು ಆಗುತ್ತದೆ.


ಸಂತೋಷ ಎನ್ನುವುದು ಹೊರಗಡೆ ಸಿಗುವ ವಸ್ತುವಲ್ಲ ಅದು ನಮ್ಮಲ್ಲೇ ಇರಬೇಕು ಎಂದು ಹೇಳಿದ್ದು ಬುದ್ಧ. ಈಗ ಇರುವ ಪರಿಸ್ಥಿತಿಯಲ್ಲಿ ನೀವು ಸಂತೋಷವಾಗಿಲ್ಲ ಎಂದರೆ ನೀವು ಯಾವತ್ತೂ ಕೂಡ ಸಂತೋಷವಾಗಿರಲು ಸಾಧ್ಯವಿಲ್ಲ ಎನ್ನುವುದು ಅವನ ಅಭಿಪ್ರಾಯ. ನೀವು ಏನು ಗಳಿಸಿದರು ಅದರ ಆನಂದ ಸ್ವಲ್ಪ ಸಮಯದಲ್ಲಿ ಕಳೆದು ಹೋಗಿ, ಮತ್ತೆ ಹೆಚ್ಚಿನ ಗಳಿಕೆಗೆ ಮುಂದಾಗುವಂತೆ ನಿಮ್ಮ ಮನಸ್ಸನ್ನು ಪ್ರಕೃತಿ ಪ್ರೇರೇಪಿಸುತ್ತದೆ. ಹೀಗೆ ಬಯಸುವುದನ್ನು ನಿಲ್ಲಿಸದಿದ್ದರೆ, ಬಳಲುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಬುದ್ಧ ಕಂಡುಕೊಂಡಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಗಮನಿಸಿ ನೋಡಿ, ಆಸೆಯನ್ನು ಹುಟ್ಟು ಹಾಕುವುದು ಪ್ರಕೃತಿಯ ಮೂಲ ಗುಣ. ನೀವು ಅದರ ಕೈಗೊಂಬೆಯಾದರೆ, ಅದು ನಿಮ್ಮನ್ನು ಆಟ ಆಡಿಸುತ್ತದೆಯೇ ಹೊರತು ನೆಮ್ಮದಿ ಕೊಡುವುದಿಲ್ಲ. ಪ್ರಕೃತಿಯ ವಿರುದ್ಧ ನಿಮಗೆ ಈಜಲು ಸಾಧ್ಯವಾದರೆ ಮಾತ್ರ ನಿಮಗೆ ಮುಕ್ತಿ ದೊರಕಲು ಸಾಧ್ಯ.


ಪ್ರಕೃತಿಯ ವಿರುದ್ಧ ನೀವು ಈಜುತ್ತಾ ಹೋದಷ್ಟು ಅದು ನಿಮ್ಮನ್ನು ಮತ್ತೆ ತನ್ನ ದಾರಿಗೆ ಎಳೆದು ತರುತ್ತಾ ಹೋಗುತ್ತದೆ. ಬಯಕೆಗಳನ್ನು ಅದುಮಿಕಂಡಷ್ಟೂ ಅವು ಹೆಚ್ಚುತ್ತಾ ಹೋಗುತ್ತವೆ. ಹಾಗಾಗಿ ಬುದ್ಧನ ಹಿಂಬಾಲಕರೆಲ್ಲ ಅವನ ಹಾಗೆ ಜ್ಞಾನಿಗಳಾಗಲಿಲ್ಲ. ಅದು ಕಷ್ಟದ ಹಾದಿ. ಆದರೆ ಸಾಧ್ಯವೇ ಇಲ್ಲ ಎನ್ನುವ ಹಾಗಿಲ್ಲ. ಅದು ಬುದ್ಧನ ಮಾರ್ಗವೇ ಆಗಬೇಕೆಂದಿಲ್ಲ. ಭಕ್ತಿ ಮಾರ್ಗವಾದರೂ ಆದೀತು. ನಿಸ್ವಾರ್ಥ ಸೇವೆಯ ಕರ್ಮ ಮಾರ್ಗವಾದರೂ ಆದೀತು. ಧ್ಯಾನ ಮಾರ್ಗವಾದರೂ ಆದೀತು. ಜ್ಞಾನ ಸಂಪಾದಿಸುವ ಮಾರ್ಗವಾದರೂ ಆದೀತು. ಅವುಗಳ ಭೋದನೆ ಬೇರೆ ಬೇರೆಯಾದರು ಗುರಿ ಮಾತ್ರ ಒಂದೇ. ಪ್ರಕೃತಿ ನಮ್ಮನ್ನು ಬಂಧಿಸಿಡುವ ಪ್ರಕ್ರಿಯೆಯಗಳಿಂದ ಹೊರ ಬರುವುದು. ಪ್ರಕೃತಿಯನ್ನು ಗೆದ್ದವರನ್ನು ಹಸಿವು, ನೋವು ಬಾಧಿಸುವುದಿಲ್ಲ ಎಂದೇನಿಲ್ಲ. ಆದರೆ ಅದನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸುವುದು ಅವರಿಗೆ ಸಾಧ್ಯವಾಗಿರುತ್ತದೆ.


ಪ್ರಕೃತಿಗೆ ತನ್ನನ್ನು ಮೀರಿದ ಸಾಧು-ಸಂತರಿಂದ ಏನು ಉಪಯೋಗ? ಅವರನ್ನು ತನ್ನಲ್ಲಿ ಲೀನವಾಗಿಸಿಕೊಂಡು, ಹೆಚ್ಚಿನ ಸ್ವಾರ್ಥಿಗಳನ್ನು ಹುಟ್ಟು ಹಾಕುತ್ತ ಹೋಗುತ್ತದೆ. ಜೀವಿಗಳನ್ನು ನೆಮ್ಮದಿಯಾಗಿರಲು ಬಿಡದೆ ತನ್ನ ಯೋಜನೆಗೆ ಬಳಸಿಕೊಳ್ಳುತ್ತದೆ. ಗಂಡು ಜಿಮ್ ಗೆ ಹೋಗಿ ದೇಹ ಧಾರ್ಡ್ಯ ಬೆಳೆಸಿಕೊಳ್ಳುತ್ತಾನೆ. ಧನ ಸಂಪಾದಿಸುವ ಹೊಸ ಮಾರ್ಗಗಳನ್ನು ಹುಡುಕುತ್ತ ಹೋಗುತ್ತಾನೆ. ಹೆಣ್ಣು ಬಟ್ಟೆ ಅಂಗಡಿಗೆ, ಆಭರಣ ಅಂಗಡಿಗೆ ಧಾಳಿಯಿಟ್ಟು ತಾನು ಇನ್ನೂ ಸುಂದರ ಕಾಣುವ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾಳೆ. ಅವರಿಬ್ಬರ ಜೋಡಿಯನ್ನು ನೋಡಿ ಪ್ರಕೃತಿ ಮರೆಯಲ್ಲೇ ನಗುತ್ತದೆ. ಅವರ ಯೌವನ ಕಳೆದು ಹೋಗಿ ಜೀವನದ ಅರ್ಥ ಏನು ಎಂದು ಗ್ರಹಿಸುವಷ್ಟರಲ್ಲಿ, ಹೊಸ ಪೀಳಿಗೆಗೆ ತನ್ನ ಮೋಡಿಯನ್ನು ವರ್ಗಾಯಿಸಿರುತ್ತದೆ. ಬುದ್ಧ ಮಂದಹಾಸ ಬೀರಿದರೆ, ಪ್ರಕೃತಿ ಗಹಗಹಿಸಿ ನಗುತ್ತದೆ.

Tuesday, December 21, 2021

Book Review: The beginning of Infinity by David Deutsch

Human beings have been staring at the sky since time immemorable. Our ancestors felt everything went around them. So, they said the Sun rises and sets. Few centuries ago, that misconception was corrected with a better explanation. Though we can’t confirm with our bare eye experience how the Solar system looks, students in school now are taught about solar system with a better explanation than that existed many centuries ago.

 

Newton’s laws of motion and his explanation about gravity have a universal appeal. All that is fine for those dwelling on the Earth. But for those traveling in a space shuttle or studying astrophysics, they begin to lose accuracy. If someone is traveling across a Galaxy and is nearby a Blackhole, Newton’s explanation becomes hopelessly wrong. Thanks to Einstein who offered a better explanation about time-space warping.

 

Science advances with error correction and better explanations. Nature packs the evolutionary progress in the form of genes and leads to biological evolution. But human beings have a special gift – creativity. Human beings are not limited by biological evolution and that is why we are so advanced than all other living beings on the Earth. Our ability to learn new things, communicate it with others, correct misconceptions with better explanations puts us on the path of progress. We move from infinite ignorance to infinite possibilities.

 

Naval Ravikant had mentioned about this book in his podcast. This book took few weeks of intensive reading for me. I had to re-read many of the paragraphs to digest the information and close my eyes to ponder about it. Not an easy book to read but no knowledge comes without toil. Physics, Astronomy, Microbiology, Evolution and Philosophy are all merged in this book and makes the reader understand the evolution of human beings and the advancement of science are interwoven.

 

Author of this book David Deutsch was born in Israel, now lives and works at Oxford. His research in Quantum Physics has been highly influential and highly acclaimed.




Sunday, December 12, 2021

Book Review: Don’t kill him by Sheela Bernstiel

I have read many books of Osho. I have watched lots of his discourses on Youtube. I have listened to his lectures on Podcasts for hundreds of hours. He has an unimaginable influence on my psyche. But all of that I know of him are his teachings only and not of the man who he was. Though I did read his autobiography, it did not give me a complete picture of his weaknesses or vulnerabilities. But this book by Sheela made me see the unknown side of Osho which was largely kept private.

 

Sheela was a close aide, a personal secretary and an ardent devotee of Osho. When Osho was becoming uncomfortable in his Pune ashram, Sheela was very instrumental in making the arrangements for Osho’s relocation to the US. Also, she was hands on in setting up the ashram there. Not just identifying and buying the land in the state of Oregon for Osho, she was completely immersed and dedicated in raising the funds, building the premises, setting up the environment as per Osho’s instructions and successfully administering it for few years. That brought Sheela close to Osho and see personal life of Osho which others could not.

 

In the eye of the public, Osho never seemed to be interested in micro-managing the affairs of the ashram. But he was getting it done through his puppets and one of them was his secretary Sheela. She explains in this book how she and her fellow sanyasin’s dedication towards Osho made them do everything asked of them. They also had to manage a mad side of Osho. His sexual relationship with an associate, his unending desire for luxury cars, his tantrums about him leaving his body soon, his impatience and rage when things were not done to his satisfaction and so on. Though Sheela accepts the enlightened man to be a divine being, but in the same breath she exposes Osho's limitations and compulsions as a human being which made him no better than any other common person.

 

She also reveals the tactics employed by Osho in calling some of his rich followers as enlightened beings. That was only to empty their pockets to fulfil his personal desires and lavish lifestyle and he would soon deflate their egos once his task was accomplished. Nonetheless, there was no dearth of followers and the flow of money towards Osho. Tired of his tantrums, Sheela separated herself from Osho and his organization she had helped to build. Later Osho accused Sheela on several fronts and she got convicted and went through a jail term. Many years later, she has put forward her side of story through this book.

 

Osho’s teachings are unquestionable but his conduct and personal life is not. He remained controversial throughout his life and openly admitted that he was a Guru for rich people. But beyond that, his personal life was unknown to even people lived in his ashram except a very few in his closest circle. And one of them has put forward her version of story. Osho is no more to defend or give any response. But the interesting takeaway from this book is, Osho went through the same emotions of a normal person though he was spiritually evolved. Though his knowledge had known no bounds, his charm was artificial. He showed pathway to spiritual seekers but also emptied the pockets of the unsuspecting rich. He was an enlightened Guru but also a cunning businessman. This makes me think the Bhagawan was also a common man in many aspects as he could not live a life of austerity.



Wednesday, December 8, 2021

Book Review: The Audacity of Hope by Barrack Obama

Politics without doing politics

 

When Barrack Obama was calling for press meets during earlier days of his political career, no one would turn up. He had to drive for hours to deliver a speech only to find that there are only two people sitting across a kitchen table. But he had the audacity to hope that his ideals would be noticed, and his thoughts accepted sooner than later. So began his journey into politics while he remained humble throughout his journey to the Whitehouse.

 

His thoughts, ideas, opinions, and struggles are all documented in this book ‘The Audacity of Hope’. This is not just his account or biography. It is much more than that. It is about American dream. It is about the oppressed. It is about Democrats vs. Republicans. It is about those who built the constitution. It is about what politics can do and cannot do to uplift the lives of those at the bottom of pyramid. It is about the values one brings to the table. It is about identifying the opportunities and taking bold steps to realize them. It is about representing his voters and constituency. It is about why few politicians change their personalities and become corrupt on the way. It is about how to influence the larger society to bring in a change. It is about bringing in policies that would show results only after a decade. It is about his religion and race. It is about remaining empathetic while being in control of political power.

 

If you had liked Obama delivering his speeches, he would further impress you in this book with his finer arguments, care for the underprivileged, and his ideas about a broader society not limiting to citizens of America. I wish I had read this book earlier but nevertheless better late than never. I wish that my sons read this book too when they are ready, to get a broader view of what life offers. For budding politicians, this book could be an inspiration. And for any other regular readers, this book will surely expand their horizons and refine their thoughts and perspectives.



Wednesday, December 1, 2021

Surviving the Psychological Warfare

There was Dara Shukoh, prince of Mughal Kingdom, son of emperor Shah Jahan. He was designated to take the throne after his father. He was well versed with religion, philosophy, and many other subjects. He had built a library in Kashmir, a first of its kind. He was well known for his kindness and wisdom. He was a well-rounded personality liked by his people. But he lacked one important skill – fighting the war. And his younger brother Aurangzeb excelled at it while he lacked Dara Shukoh’s knowledge, wisdom, and calmness. When the war began between brothers, Dara Shukoh had to flee the war field, but he was soon caught and brutally killed by Aurangzeb. History thus taught us one important lesson: If you don’t have survival skills, all other skills, knowledge, and poise do not matter. They won’t help you survive. You are killed and forgotten.

 

In today’s world, we face more psychological warfare’s than the physical one’s. So instead of sharpening the physical weapons, we need to train our mind and senses to identify the abusers and defend ourselves. My recent experience was with a small group of abusers who wanted to manipulate me for their own benefit. Here is what my manipulators were doing.

  • There were heap of lies and false accusations. They were fighting as a group and managed to keep it in private. If they were caught in logical argument, they would deny that they had lied, or such an incident ever had happened. If you produced proofs, they would further argue that that is not what they intended and in turn accuse me of understanding them wrongly.
  • They never took accountability for their actions. All the blames were passed to me. And they would continue to distort facts and badmouth, creating a sympathy for themselves while portraying me as the person troubling them. But in private they were aggressive and manipulating.

After going through intense pain, I began to observe same trends repeating all over again and again. Soon I could understand their games. And thanks to Google and many people who had shared their similar experiences. I learnt that narcissism is for real. Then I began to make few changes to my ways when I encountered my manipulators again.

 

  • Expose: I began to expose them and their tantrums with a slightly larger audience. It was no more secret and private. And it made the manipulators to work hard on their part.
  • Make them aware of consequences: Rather than pleasing them, I too took an aggressive path and invited them for a fight, be it legal or an escalated physical aggression. And I made it clear to them that I was aware of all their lies. I had ample proofs to fight a legal war with them and also has the necessary support needed to endure a physical fight as well.
  • Bring in supporters: I brought in my group of supporters too which conveyed them a message that I am not alone. I too got emotional support and practical advices in beating my abusers in their own game.

Surprisingly I learnt that the moral discussions could not help but things like exposing them, inviting them for an open war and bringing in supporters did help. They are withdrawing and calling for peace now as they are more worried about their loss. They understood they are fighting a losing battle and they misjudged their target. These abusers with a moral mask were shattered and they were made come to terms by turning the tables on them.

 

I wish Dara Shukoh had learnt battle skills along with those what he was praised for. Had he done so, India would have got a better emperor than Aurangzeb. But it did not turn out that way. That is history now. If we don't learn form history, it keeps repeating all over. We need to keep sharpening our fighting skills to survive. Just being moral won’t help.

Saturday, November 27, 2021

The Satanic world of Narcissists

Definition

Google searches define a narcissist as a person who is self-centered, lies easily to put others in pain, lacks empathy and emotionally blackmail others regularly. They are well known for manipulating the facts to their advantage. They do not accept any accountability for themselves and pass on the entire blame to the other party. More the pain their victims go through, higher the satisfaction the narcissist gets. They just suck the spirit out of their victims by causing fear and guilt in them.

 

Tactics they employ

One of the major methods they employ is gaslighting. An example of this would be a narcissist doing something abusive and then denying it happened. Narcissist may also convince their victims that they're too sensitive or think too much to instill self-doubt in them.

 

They are also aided with flying monkeys. These flying monkeys are the people who take side of the narcissists. They do not give a hearing to the other party and jump into argument with the victim to support the objective of the narcissist. This is the trick narcissists employ to confuse the victims that their thinking is wrong and make them yield.

 

Narcissist set a trap creating anger in the victims by getting into arguments with them, make their victims lose emotional control and say unwanted things and use it later for their advantage. They instill guilt in their victims and play it repeatedly to emotionally crush the souls of their victims.

 

Identification and Defense

The irony is it is not easy to spot a narcissist. They look normal and fair people to the outside world. Only after someone goes through the emotional abuse by the narcissist, he/she can identify him or her. Any of your efforts to change him/her or make him aware of his/her personality disorder will only make things worse. Narcissists never admit any of their mistakes and skillfully pass it to the other party.

 

Though you spotted a narcissist after going through the emotional abuse, you need to quickly set-up boundaries as a defense, both physical and emotional. You should take care not to divulge with any sensitive information with them. Avoid arguments with them and don't try to explain. Just remain calm and emotionally stable to break their game. Even when they change their tactics, you should not fall for them. Most importantly, you should not lose self-confidence in you and move on your life leaving them behind.

 

Summary

It would be painful if the narcissist is a close family member but there is not much option left for you. They are unlikely to change for their life. And for those narcissists outside of your family, you should know that they exist, become aware of their characteristics and intentions as early as possible, and get out of their way at the first instance. You should be nice to everyone but should not give them opportunity to abuse. If it becomes unavoidable, you should use their own tactics on them and make them leave you.

 

This quote summarizes it in a sentence:

Love everybody but never sell your sword




Wednesday, November 24, 2021

ದೇಹದ ಗುಡಿಯ ನೋಡಿರಣ್ಣ

ಕನಕದಾಸರ ರಚನೆ ಹೀಗಿದೆ:


"ಏಸು ಕಾಯಂಗಳ ಕಳೆದು

ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು

ದಾಟಿ ಬಂದ ಈ ಶರೀರ ...


ದಾಸನಾಗು, ವಿಶೇಷನಾಗು"


ಆಧುನಿಕ ವಿಕಾಸ ವಿಜ್ಞಾನ (Evolutionary Science) ಕೂಡ ಇದನ್ನೇ ಹೇಳುವುದು. ಜಲಚರಗಳಿಂದ, ಉಭಯವಾಸಿ, ಪಕ್ಷಿಗಳು, ಪ್ರಾಣಿಗಳು, ಸಸ್ತನಿಗಳು ಮತ್ತು ಕೊನೆಗೆ ಅವು ಮಾರ್ಪಾಡಾಗಿ ಮಾನವ ವಿಕಾಸ ಹೊಂದಿದ್ದು. ನಮ್ಮ ವಿಷ್ಣು ಪುರಾಣ ಕೂಡ ಅದನ್ನೇ ಹೇಳುತ್ತದೆ. ವಿಷ್ಣುವಿನ ದಶಾವತಾರ ಆರಂಭ ಆಗುವುದು "ಮತ್ಸ್ಯಾವತಾರ" ದಿಂದ. ನಂತರ ಕೂರ್ಮಾವತಾರ. ಹೀಗೆ ಕೊನೆಯಲ್ಲಿ "ಕೃಷ್ಣ" ಬರುತ್ತಾನೆ.


ಮಾನವನ ದೇಹದಲ್ಲಿರುವ ಸಂಕೀರ್ಣ ನರಮಂಡಲ, ಹೊಸ ವಿಷಯಗಳನ್ನು ಗ್ರಹಿಸಬಲ್ಲ ಮೆದುಳು ಮತ್ತು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡಾದ ಅಂಗಾಂಗಗಳು, ಪಂಚೇಂದ್ರಿಯಗಳು ಬೇರೆ ಯಾವುದೇ ಪ್ರಾಣಿ-ಪಕ್ಷಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಅದಕ್ಕೆ ಮಾನವ ಬೇರೆ ಜೀವ ಸಂಕುಲಕ್ಕಿಂತ ಹೆಚ್ಚಿನ ಅನುಭವಗಳನ್ನು ಹೊಂದುತ್ತಾನೆ. ಮನುಷ್ಯನ ಮೆದುಳು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ತನ್ನನ್ನು ಕೂಡ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.


ದೇಹ ಮತ್ತು ಮನಸ್ಸು ಬೇರೆ ಬೇರೆಯಲ್ಲ. ದೇಹದ ಅಭಿವೃದ್ಧಿ ಹೊಂದಿದ ಭಾಗವೇ ಮನಸ್ಸು. ಅದಕ್ಕೆ ನೋಡಿ ಮನಸ್ಸು ಭಾರವಾದಾಗ ದೇಹ ನಿಶ್ಚಲವಾಗುತ್ತದೆ. ಮತ್ತು ದೇಹ ರೋಗದಿಂದ ಬಳಲಿದಾಗ ಮನಸ್ಸು ಮಂಕಾಗುತ್ತದೆ. ದೇಹ ಮತ್ತು ಮನಸ್ಸು ಒಂದರೊಂದಿಗೆ ಇನ್ನೊಂದು ಸಂಪೂರ್ಣ ಬೆಸೆದುಕೊಂಡಿವೆ. ಆರೋಗ್ಯವಂತ ಮನಸ್ಸು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುತ್ತದೆ. ಅರೋಗ್ಯವಂತ ದೇಹ, ಮನಸ್ಸು ಹೊಸ ಅನುಭವಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ದೇಹ ಅರ್ಥವಾದರೆ ಮನಸ್ಸು ಕೂಡ ಅರ್ಥವಾಗುತ್ತಾ ಹೋಗುತ್ತದೆ.


ದೇಹವನ್ನು ಅರ್ಥ ಮಾಡಿಕೊಳ್ಳಲು, ದಂಡಿಸಲು ಮತ್ತು ಅದರಿಂದ ಮನಸ್ಸು ಹೊಸ ಪ್ರಪಂಚಕ್ಕೆ ತೆರೆದೆಕೊಳ್ಳುವಂತೆ ಮಾಡಲು ಹುಟ್ಟಿದ್ದೇ ಹಠ ಯೋಗ, ಯೋಗಾಸನಗಳು. ಸಾಧು, ಸಂತರು ಅಧ್ಯಾತ್ಮ ಸಾಧನೆಗೆ ತೊಡಗಿದ್ದೆ ದೇಹವನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ. ಅದಕ್ಕೆ ಸಂತ ಶಿಶುನಾಳ ಶರೀಫರು ಹಾಡಿದ್ದು:


"ಗುಡಿಯ ನೋಡಿರಣ್ಣ 

ದೇಹದ ಗುಡಿಯ ನೋಡಿರಣ್ಣ,

ಗುಡಿಯ ನೋಡಿರಿದು

ಪೊಡವಿಗೆ ಒಡೆಯನು,

ಅಡಗಿಕೊಂಡು

ಕಡುಬೆಡಗಿನಲಿರುತಿಹ,

ಗುಡಿಯ ನೋಡಿರಣ್ಣ

ದೇಹದ ಗುಡಿಯ ನೋಡಿರಣ್ಣ" 


ಈ ಹಾಡು ನನಗೆ ಇನ್ನೂ ಸಂಪೂರ್ಣ ಅರ್ಥ ಆಗಿಲ್ಲ. ಅರ್ಥ ಆದ ದಿನ, ನನ್ನ ಜೀವನವು ಮುಗಿದಿರುತ್ತದೆ ಎನ್ನುವ ಅರಿವು ನನಗಿದೆ.

Monday, November 22, 2021

ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು

ಹಾಗೆ ಕೆಲವು ಹೆಂಡತಿಯರಿರುತ್ತಾರೆ (ಎಲ್ಲರೂ ಅಲ್ಲ). ಅವರಿಗೆ ತವರು ಮನೆ ಪ್ರೇಮಲೋಕ. ಗಂಡನ ಮನೆ ರಣರಂಗ. ಅವರಿಗೆ ತಮ್ಮ ತಂದೆ ಎಂದರೆ ಹೀರೋ. ಗಂಡ ಎಂದರೆ ಶುದ್ಧ ಶನಿ. ಗಂಡನ ಮನೆಯವರೆಲ್ಲ ಸೋಂಭೇರಿಗಳು. ತವರು ಮನೆಯಲ್ಲಿರುವ ತಮ್ಮಂದಿರು ಎಷ್ಟೋ ವರ್ಷ ಖಾಲಿ ಅಡ್ಡಾಡಿದರೂ, ಅವರಿಗಿನ್ನೂ ಸಮಯ ಬಂದಿರಲಿಲ್ಲ ಅಷ್ಟೇ. ಅವರ ತಾಯಿ ಕರುಣಾಮಯಿ. ಆದರೆ ಅತ್ತೆ ಮಾತ್ರ ಜಗತ್ತಿನಲ್ಲಿ ಎಲ್ಲೂ ಇಲ್ಲದ ಕ್ರೂರಿ.


ಹಾಲುಂಡ ತವರಿಗೆ ಮಾತ್ರ ಅವರಲ್ಲಿ ಎಲ್ಲೂ ಇಲ್ಲದ ಮಮಕಾರ. ಗಂಡನ ಮನೆಯವರೆದ್ದೆಲ್ಲ  ಸುಮ್ಮನೆ ಹಾಹಾಕಾರ. ತಮ್ಮ ಸೋದರ-ಸೋದರಿಯರು ಪ್ರೀತಿ ಸೂಸುವ ಚಂದನೆಯ ಗಿಳಿಗಳು. ಗಂಡನ ಸೋದರ-ಸೋದರಿಯರು ಕಾ-ಕಾ ಎಂದು ಅರಚುವ ಕಾಗೆಗಳು.


ತವರು ಮನೆಯ ಅಸ್ತಿ ತಮ್ಮಂದಿರಿಗೆ ಇರಲಿ ಎನ್ನುವ ಔದಾರ್ಯತೆ. ಗಂಡನ ಮನೆಯ ಆಸ್ತಿಯೋ? ಕಾನೂನು-ಕೋರ್ಟ್ ಎಂದು ವೀರಾವೇಶ ತೋರುವ ಝಾನ್ಸಿ ರಾಣಿ ಲಕ್ಷ್ಮೀಬಾಯಿಯರು. ತಮ್ಮ ತಂದೆ ತಪ್ಪು ಮಾತನಾಡಿದನೋ, ಅದು ಏನೋ ಬಾಯಿ ತಪ್ಪಿನಿಂದ ಬಂದ ಮಾತು ಅಷ್ಟೇ. ಅದೇ ಗಂಡ ಮಾತನಾಡಿದನೋ, ಜೈಲಿಗೆ ಕಳಿಸದೆ ಹಾಗೆ ಬಿಟ್ಟರೆ ಬುದ್ಧಿ ಬರದು ಎನ್ನುವ ಕ್ರೋಧ. ತಮ್ಮ ತಮ್ಮಂದಿರು ತಪ್ಪು ಮಾಡಿದರೋ, ಅದು ಆವೇಶ ಅಷ್ಟೇ. ಅದನ್ನು ಬೇಗ ಮರೆತಷ್ಟು ವಾಸಿ. ಅದೇ ಗಂಡನ ಮನೆಯವರು ಮಾಡಿದರೆ, ಅವರನ್ನು ಆಗಿಂದಾಗಲೇ ಮನೆಯಿಂದ ಆಚೆ ತಳ್ಳಿ ಬಿಡಬೇಕು.


ತಾವೇ ತಪ್ಪು ಮಾತನಾಡಿದರೆ, ಅದನ್ನು ಅಲ್ಲೇ ಕ್ಷಮಿಸಿಬಿಟ್ಟರೆ ವಾಸಿ. ಇಲ್ಲವೆಂದರೆ ಎಷ್ಟು ಸಲ ಅದೇ ಮಾತು ಆಡುವಿರಿ ಎಂದು ಗಂಡನ ಮೇಲೆ ಅಪವಾದ ಹೊರಿಸುತ್ತಾರೆ. ಅದೇ ಗಂಡ ಮಾತನಾಡಿದನೋ, ಅವನನ್ನು ಚುಚ್ಚಿ, ಚುಚ್ಚಿ ಹುಚ್ಚನನ್ನಾಗಿ ಮಾಡದಿದ್ದರೆ ಕೇಳಿ.


ಒಂದೇ ನಾಣ್ಯಕ್ಕೆ ಎರಡು ಮುಖವಿದ್ದ ಹಾಗೆ ಹೆಂಡತಿಯರಿಗೆ ಕೂಡ ಎರಡು ಮುಖ ಉಂಟು. ಕೆಲವರಲ್ಲಿ ಆ ಮುಖಗಳ ನಡುವೆ ಹೆಚ್ಚು ವ್ಯತ್ಯಾಸ ಇರದಿದ್ದರೆ, ಇನ್ನು ಕೆಲವರು ಮಾತ್ರ ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು.

ವಿಪರ್ಯಾಸಗಳು

೧. ಪುನೀತ್ ರಾಜಕುಮಾರ್ ಅಕಾಲ ಮರಣಕ್ಕೆ ಈಡಾದಾಗ ಸಂತಾಪ ವ್ಯಕ್ತ ಪಡಿಸಿದ ಕೆಲವರು ತಾವು ಮಾತ್ರ ೮೦ ವರ್ಷ ಬದುಕುವ ಭ್ರಮೆಯಲ್ಲಿರುತ್ತಾರೆ.


೨. ಪುನೀತ್ ರಾಜಕುಮಾರ್ ಮಾಡಿದ ಸಮಾಜ ಸೇವೆ ಕೊಂಡಾಡುವ ಕೆಲವು ಹೆಣ್ಣು ಮಕ್ಕಳು, ತಮ್ಮ ಗಂಡ ಯಾವುದೊ ಸಾಮಾಜಿಕ ಸಂಸ್ಥೆಗೆ ೨೦೦೦ ರೂಪಾಯಿ ದೇಣಿಗೆ ನೀಡಿದರೆ ಆಕಾಶವೇ ಕಳಚಿ ಬಿದ್ದ ಹಾಗೆ ಆಡುತ್ತಾರೆ.


೩. ಬೇರೆಯವರ ಮಕ್ಕಳ ಮೇಲೆ ಘೋರ ಅಪವಾದ ಹೊರಿಸುವ ಕೆಲವರು, ತಮ್ಮ ಮಕ್ಕಳೇ ತಪ್ಪು ಮಾಡಿದಾಗ ಅದು ಆವೇಶದಲ್ಲಿ ಆದ ತಪ್ಪು ಅಷ್ಟೇ ಎಂದು ಸಮರ್ಥಿಸಿಕೊಳ್ಳುತ್ತಾರೆ.


೪. ಬೇರೆಯಯವರಿಗೆ ಆಸ್ತಿ ಪಾಲು ವಿಷಯದಲ್ಲಿ ಸಲಹೆ ನೀಡುವ ಕೆಲವು ವಕೀಲರು, ತಮ್ಮ ಮಕ್ಕಳಿಗೆ ನ್ಯಾಯ ಸಮ್ಮತವಾಗಿ ಪಾಲು ನೀಡಿರುವುದಿಲ್ಲ.


೫. ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು - ಕೆಲವು ಹೆಂಡತಿಯರು
ನಿಮ್ಮ ಅನುಭವಕ್ಕೆ ಬಂದ ವಿಪರ್ಯಾಸಗಳು ಯಾವು?

Tuesday, November 16, 2021

ಬರಲಿರುವ ಅತಿಥಿಗೆ ಕಾಯದೆ

ಕವಿ ಕುವೆಂಪು ಬರೆದರು:

 

'ತೆರೆದಿದೆ ಮನೆ

ಓ, ಬಾ ಅತಿಥಿ

ಹೊಸ ಬೆಳಕಿನ

ಹೊಸ ಗಾಳಿಯ

ಹೊಸ ಬಾಳನು

ತಾ ಅತಿಥಿ'


ಇದು ಒಬ್ಬ ಆಶಾವಾದಿಯ ಗೀತೆ. ಆದರೆ ಬಂದಿರುವ ಅತಿಥಿ ಸಂತೋಷ ತರಲಿದ್ದಾನೋ ಅಥವಾ ಪಾಪದ ಕೂಪಕ್ಕೆ ತಳ್ಳಲಿದ್ದಾನೋ ಅನುಭವಿಸಿದ ಮೇಲೆಯಷ್ಟೇ ಗೊತ್ತಾಗುವುದು. ಸಂತೋಷ ನಮ್ಮಲ್ಲಿರದೆ ಅದನ್ನು ಒಬ್ಬ ಅತಿಥಿ ತಂದು ಕೊಡುತ್ತಾನೆ ಎಂದುಕೊಂಡರೆ ಬದುಕು ನಮಗೆ ಪಾಠ ಕಲಿಸದೇ ಬಿಡದು. ಒಂದು ವೇಳೆ ನಿಮಗೆ ಬೇಕಾದ ಅತಿಥಿ ನಿಮ್ಮಿಂದ ದೂರವಾಗಿ, ಬೇಡವಾದ ಅತಿಥಿ ನಿಮ್ಮ ಮನೆಗೆ ವಕ್ಕರಿಸಿಕೊಂಡರೆ ಆಗೇನು ಮಾಡುವಿರಿ? ಆಗ ಇದೇ ಹಾಡನ್ನು ಹಾಡಲು ಸಾಧ್ಯವೇ? ನಾವು ಕಲಿಯದ ಪಾಠಗಳನ್ನು ಬದುಕು ಮತ್ತೆ ಮತ್ತೆ ಕಲಿಸದೇ ಬಿಡುವುದಿಲ್ಲ. ಹತ್ತಿರದವರ ಅಗಲಿಕೆ, ಬಲವಾಗಿ ನಂಬಿದ್ದಲ್ಲಿ ಮೋಸ, ಮನಸ್ಸಿಟ್ಟು ಮಾಡಿದ ಕೆಲಸದಲ್ಲಿ ಸೋಲು ಇವುಗಳು ಸ್ವಾರ್ಥಭರಿತ ಸಂಬಂಧಗಳ ಅರ್ಥಹೀನ ಬದುಕನ್ನು ಮನದಟ್ಟು ಮಾಡಿಕೊಡುತ್ತವೆ. 'ನಾನು' ಎನ್ನುವ 'ಅಹಂ' ಕರಗಿದಷ್ಟು 'ಮಾಯೆ' ಎನ್ನುವ ಪೊರೆಯು ಕಳಚುತ್ತಾ ಹೋಗುತ್ತದೆ. ಆಗ ನಮಗೆ ಗೋಪಾಲಕೃಷ್ಣ ಅಡಿಗರ ಕಾವ್ಯ ಅರ್ಥವಾಗುತ್ತಾ ಹೋಗುತ್ತದೆ.

 

'ಸಪ್ತಸಾಗರದಾಚೆ ಎಲ್ಲೊ

ಸುಪ್ತ ಸಾಗರ ಕಾದಿದೆ'

 

ಕವಿ ಆಶಾವಾದಿ. ಕವಿ ನಿರಾಶಾವಾದಿ. ಭಾವನೆಗಳು ಉಯ್ಯಾಲೆಯ ಹಾಗೆ. ಮುಂದೆ ಜೀಕಿದಷ್ಟು ಬಲವಾಗಿ ಹಿಂದೆ ತಳ್ಳುತ್ತವೆ. ಭಾವನೆಗಳೆಂಬ ಸಪ್ತ ಸಾಗರಗಳನ್ನು ಗೆದ್ದು ತಟಸ್ಥ ಸ್ಥಿತಿಗೆ ತಲುಪಿದಾಗ ಅದುವರೆಗೆ ಅರಿವಿಗೆ ಬರದಿದ್ದ ಸುಪ್ತ ಸಾಗರ ನಮ್ಮ ಅನುಭವಕ್ಕೆ ಬರತೊಡಗುತ್ತದೆ. ಅದು ನಮ್ಮದೇ ಸುಪ್ತ ಮನಸ್ಸು. ಮನದಾಳದ ರಾಗ-ದ್ವೇಷಗಳು ತಮ್ಮ ಅಲೆಯ ಬಡಿತ ನಿಲ್ಲಿಸಿದಾಗ, ಕಂಪನವಿಲ್ಲದ ನೀರಿನ ಭಾವಿಯ ತಳ ಗೋಚರವಾಗತೊಡಗುತ್ತದೆ. ಬೀಸುವ ಗಾಳಿಗೆ ನೀರು ಕಂಪಿಸಿದರೆ ಮತ್ತೆ ಎಲ್ಲವೂ ಅಸ್ಪಷ್ಟ. ತಹಬದಿಗೆ ಬಂದಾಗ ಸುಪ್ತ ಮನಸ್ಸಿನ ಆಳ, ಅಗಲಗಳು ಸ್ಪಷ್ಟ. ಸ್ಪಷ್ಟತೆಯೊಡನೆ  'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎನ್ನುವ ಕವಿಯ ಮಾತು ನಮ್ಮ ಅನುಭವಕ್ಕೆ ಬರತೊಡಗುತ್ತದೆ. ಆ ಸತ್ಯ ಅರ್ಥವಾದ ಮೇಲೂ ಮತ್ತೆ ಸ್ವಾರ್ಥ ತುಂಬಿದ ಸಂಬಂಧಗಳಿಗೆ ಹಾತೊರೆದರೆ ನಮ್ಮ ಕಲಿಕೆ ಅಪೂರ್ಣ.

 

'ಇಂತಾದರೂ ಬಾ

ಅಂತಾದರೂ ಬಾ

ಎಂತಾದರೂ ಬಾ'

 

ಎಂದು ಬರಲಿರುವ ಅಥವಾ ಬಾರದಿರುವ ಅತಿಥಿಗೆ ಕಾಯದೆ, ಬದುಕಿನ ತಿರುಗಣಿಗೆ ಸಿಕ್ಕು ಸುತ್ತದೆ, ನಮ್ಮ ಸುಪ್ತ ಮನಸಿನ ಭಾವಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದಲ್ಲವೇ? ಬೇಕಿದ್ದ ಅತಿಥಿ ಸಂತೋಷ ತರಬಹುದು ಹಾಗೆಯೇ ಬೇಡದ ಅತಿಥಿ ನಮ್ಮ ಭಾವಿಗೆ ಕಲ್ಲು ಹಾಕಬಹುದು. ಆದರೆ ಎಷ್ಟು ಬೇಗನೆ ಕಂಪನ ನಿಲ್ಲಿಸಬೇಕು ಎನ್ನುವುದು ಮಾತ್ರ ನಮಗೆ ಇರುವ ಸ್ವಾತಂತ್ರ್ಯ. ನಮ್ಮ ಸಂತೋಷ, ನಮ್ಮ ಸ್ವಾತಂತ್ರ್ಯ ಯಾವುದೋ ಅತಿಥಿ ನಿರ್ಧರಿಸಬಾರದಲ್ಲವೇ?


ಕುವೆಂಪು ರಚಿಸಿದ ಆ ಗೀತೆ ಕೇಳಲು ನನಗೆ ಇಷ್ಟ. ಆದರೆ ಅದು ಬದುಕುವ ದಾರಿಯಲ್ಲ ಎನ್ನುವುದು ಮಾತ್ರ ನನಗೆ ಜೀವನ ಕಲಿಸಿ ಕೊಟ್ಟ ಪಾಠ. ಹಾಗೆಯೇ ಅಡಿಗರ ಕಾವ್ಯ ಎಲ್ಲರಿಗೂ ಸಿದ್ಧಾಂತ ಆಗಬೇಕೆಂದು ಏನಿಲ್ಲ. ಬದುಕು ಕೊಡಮಾಡುವ ವಿಶಿಷ್ಟ ಅನುಭವ ಎಲ್ಲರಿಗೂ ಒಂದೇ ಆಗಬೇಕೆಂದಿಲ್ಲ. ನಮ್ಮ ನಮ್ಮ ಬುತ್ತಿ ನಾವು ಉಣ್ಣಬೇಕು ಅಷ್ಟೇ.

Thursday, November 11, 2021

Book Summary: Autobiography of a Yogi

This book is not just the tale of Sri Paramahansa Yogananda. It is also account of his lineage of Guru’s, Sri Yukteshwar Giri and Lahiri Mahasaya. And many numerous yogis who had supernatural powers.

Determined to be a Yogi from childhood, Sri Paramahansa Yogananda captures vivid memories of his meetings with various yogi’s during his spiritual journey. One yogi who levitated during meditation, another who appeared in two different places at the same time, one who tamed wild tigers, one who never slept, another who never ate, and the list goes on and on. All these fetes appear to be supernatural to us which science can’t explain yet but are quite common in the world of spiritual practitioners. For those who could transcend materialistic inclinations and practice meditation for long periods, certain siddhis come naturally. That would be to foresee the future or the power to heal the ailing. But they are more interested in their spiritual sadhana than showing off their supernatural powers.

This book provides insight into the world of numerous such yogis, their ways of thinking and living which are very different than that of common men driven by sensual pleasures and hoarding of wealth. For those on the spiritual path, this book would certainly be a motivation and the yogi’s mentioned in this book would only increase their resolve to remain committed to the spiritual path.



Tuesday, November 9, 2021

ಎಲ್ಲಮ್ಮನ ಮಕ್ಕಳು

(William Dalrymple ಬರೆದ 'Nine Lives' ಪುಸ್ತಕದ 'The Daughters of Yellamma' ಅಧ್ಯಾಯದ ಭಾವಾನುವಾದ ಮತ್ತು ಕಿರು ರೂಪ)

 

"ಹೌದು, ಕೆಲವೊಂದು ಸಲ ಅದರಲ್ಲಿ ಸುಖ ಇದೆ" ಎಂದಳು ರಾಣಿಬಾಯಿ. "ಯಾರಿಗೆ ದೈಹಿಕ ಸುಖ ಹೊಂದುವುದು ಇಷ್ಟವಿಲ್ಲ? ಸುಂದರ ಯುವಕ, ಸೌಮ್ಯವಾಗಿ ನಡೆಸಿಕೊಳ್ಳುವಾಗ..."

 

ತನ್ನ ಮಾತನ್ನು ಅರೆಕ್ಷಣ ನಿಲ್ಲಿಸಿ, ಕೆರೆಯ ಕಡೆ ನೋಡುತ್ತಾ ತನ್ನಲ್ಲೇ ನಕ್ಕಳು. ಮರು ಘಳಿಗೆ ಅವಳ ಮುಖ ಕಪ್ಪಿಟ್ಟಿತು "ಇಲ್ಲಿನ ಜನ ಒರಟರು, ಬಾಂಬೆ ಯ ಹುಡುಗರ ಹಾಗಲ್ಲ"

 

"ದಿನಕ್ಕೆ ಎಂಟು ಜನ" ಎಂದು ಸೇರಿಸಿದಳು ಅವಳು ಸ್ನೇಹಿತೆ ಕಾವೇರಿ. "ಕೆಲವೊಂದು ಸಲ ಹತ್ತು. ಎಲ್ಲ ಗೊತ್ತಿಲ್ಲದ ಜನರು. ಅದೆಂತಹ ಜೀವನ?" ರಾಣಿಬಾಯಿ ಹೇಳಿದಳು "ಎಲ್ಲರು ನಮ್ಮ ಜೊತೆ ಮಲಗುತ್ತಾರೆ ಆದರೆ ಮದುವೆಯಾಗುವುದಿಲ್ಲ. ನಮ್ಮನ್ನು ಅಪ್ಪಿಕೊಳ್ಳುತ್ತಾರೆ ಆದರೆ ರಕ್ಷಿಸುವುದಿಲ್ಲ"

 

"ಇದನ್ನು ಬಿಟ್ಟು ನಮಗೆ ಬದಲಿ ದಾರಿಯೆಲ್ಲಿದೆ? ಓದು, ಬರಹ ಗೊತ್ತಿರದ ನಮಗೆ ಯಾರು ಕೆಲಸ ಕೊಡುತ್ತಾರೆ? ದೇಹ ಸೌಂದರ್ಯ ಕಳೆದು ಹೋದಾಗ ನಾವು ಒಂಟಿಯಾಗಿ ಹೋಗುತ್ತೇವೆ. ಮತ್ತೆ ರೋಗಗಳು? ಕಳೆದ ವಾರವಷ್ಟೇ ಗುಪ್ತ ರೋಗಕ್ಕೆ ದೇವದಾಸಿಯೊಬ್ಬಳು ತೀರಿ ಹೋದಳು"

 

"ಎಲ್ಲಮ್ಮ ಇದು ಹೀಗಾಗಲು ಬಯಸಿರಲಿಲ್ಲ. ಜಗತ್ತು ಇದನ್ನು ಮಾಡಿದ್ದು. ಮತ್ತು ರೋಗಗಳನ್ನು ಕೂಡ ಅದೇ ತಂದದ್ದು. ನಮ್ಮ ದೇವಿಗೆ ನಮ್ಮ ಕಣ್ಣೀರು ಒರೆಸುವುದು ಬಿಟ್ಟು ಬೇರೇನು ಮಾಡಲು ಸಾಧ್ಯ?"

 

ಬೆಳಗಾಂ ನಿಂದ ನಾವು ಬಂದಿದ್ದು ಸವದತ್ತಿಯ ಎಲ್ಲಮ್ಮಳ ದರುಶನಕ್ಕೆ. ರಾಣಿಬಾಯಿ, ಕಾವೇರಿ ಮತ್ತು ನಾನು. ಬೆಟ್ಟದ ಮೇಲೆ ದೇವಸ್ಥಾನ, ಪಕ್ಕದಲ್ಲೊಂದು ಹೊಂಡ. ಋಷಿ ಜಮದಗ್ನಿಯ ಹೆಂಡತಿ ಎಲ್ಲಮ್ಮ ಕಾಮದಾಸೆಗೆ ಸಿಲುಕಿ, ಗಂಡನಿಂದ ಶಾಪಗ್ರಸ್ಥಳಾದ ಕಥೆ ಇಲ್ಲೇ ನಡೆದಿದ್ದು ಎಂದು ಪ್ರತೀತಿ.

 

"ನನ್ನ ಹೆತ್ತವರು ನನ್ನನು ದೇವರಿಗೆ ಅರ್ಪಿಸಿದಾಗ ನನಗೆ ಕೇವಲ ಆರು ವರುಷ" ತನ್ನ ಕಥೆ ಹೇಳಲು ಶುರುವಿಟ್ಟಳು ರಾಣಿಬಾಯಿ. "ಅಂದಿಗೆ ನನಗೆ ಯಾವ ವಿಚಾರಗಳು ತಿಳಿದಿರಲಿಲ್ಲ. ನನ್ನ ಅಪ್ಪ ಇದರಿಂದ ನಮ್ಮ ಬಡತನ ಕಳೆದು ಹೋಗುವುದು ಎಂದು ಹೇಳಿದ್ದಷ್ಟೇ ಗೊತ್ತು. ದುಡ್ಡು ಗಳಿಸುವ ವಿಚಾರ ಇಷ್ಟ ಆದರೂ ಅದು ಎಲ್ಲಿಂದ ಬರುವುದು ಎಂದು ತಿಳಿದಿರಲಿಲ್ಲ"

 

"ನಾನು ಋತುಮತಿಯಾದ ಕೆಲವೇ ದಿನಗಳಿಗೆ, ನನ್ನನ್ನು ಪಕ್ಕದ ಹಳ್ಳಿಯ ಕುರಿ ಕಾಯುವವನಿಗೆ ೫೦೦ ರೂಪಾಯಿಗೆ ಮಾರಿ ಬಿಟ್ಟ. ಅಷ್ಟೊತ್ತಿಗೆಲ್ಲ ನಮ್ಮ ಪಕ್ಕದ ಗುಡಿಸಲುಗಳಿಗೆ ಗಂಡಸರು ಬಂದು ಹೋಗುವುದನ್ನು ಗಮನಿಸಿದ್ದ ನನಗೆ ಮುಂದೆ ಇರುವ ಜೇವನದ ಅಂದಾಜು ಸಿಗಲಾರಂಭಿಸಿತ್ತು. ಒಂದು ದಿನ ನನ್ನನ್ನು ಪಕ್ಕದ ಹಳ್ಳಿಗೆ ಕರೆದುಕೊಂಡು ಹೋಗಿ, ನನ್ನ ಚಿಕ್ಕಮ್ಮ, ಅವಳೂ ಕೂಡ ದೇವದಾಸಿ, ಅವಳ ಮನೆಯಲ್ಲಿ ಬಿಟ್ಟು ನನ್ನ ಮನೆಯವರೆಲ್ಲ ವಾಪಸ್ಸು ಹೋಗಿಬಿಟ್ಟರು. ಆಗ ಏನೋ ನಡೆಯುವುದರ ಸುಳಿವು ಸಿಕ್ಕ ನಾನು ದೊಡ್ಡ ದನಿಯಲ್ಲಿ ರೋದಿಸತೊಡಗಿದೆ. ನನ್ನ ದೇವದಾಸಿ ಚಿಕ್ಕಮ್ಮ, ನಾನು ಅಳಬಾರದು, ಇದು ನಮ್ಮ ಧರ್ಮ, ಅಳುವುದು ಮಂಗಳವಲ್ಲ ಎಂದು ಭೋದಿಸಿದಳು. ಗಂಡಸು ಬಂದೊಡನೆ ಮನೆಯಿಂದ ಹೊರ ನಡೆದಳು ಚಿಕ್ಕಮ್ಮ. ಬಂದವನು ಬಲಿಷ್ಠ, ಏನು ಹೊಡೆದರು, ಚೂರಿದರೂ ಬಿಡಲಿಲ್ಲ. ನನ್ನನ್ನು ಉಪಯೋಗಿಸಿಕೊಂಡು, ಒಪ್ಪಿಕೊಂಡಿದ್ದ ೫೦೦ ರೂಪಾಯಿ ಕೂಡ ಕೊಡದೆ ಓಡಿ ಹೋದ"

 

"ಮರುದಿನ ನನ್ನ ಚಿಕ್ಕಮ್ಮಳ ಮೇಲೆ ಕೂಗಾಡಿದೆ, ನೀನು ಒಬ್ಬ ಸೂಳೆ. ನನ್ನನ್ನು ಕೂಡ ಒಬ್ಬ ಸೂಳೆ ಮಾಡಿಬಿಟ್ಟೆ. ಅದಾಗಿ ಕೆಲ ದಿನಗಳಿಗೆ ಅದೇ ಚಿಕ್ಕಮ್ಮ ನನ್ನನ್ನು ಬಾಂಬೆ ಗೆ ಸುತ್ತಾಡಿಸಿವುದಕ್ಕೆ ಎಂದು ಕರೆದುಕೊಂಡು ಹೋದಳು. ಅದು ಕೂಡ ಒಂದು ಉಪಾಯ ಎಂದು ನನಗೆ ತಿಳಿಯದೆ ಹೋಯಿತು. ಸೀದಾ ಒಬ್ಬ ಘರವಾಲಿ ಮನೆಗೆ ಕರೆದುಕೊಂಡು ಹೋಗಿ ೨೦೦೦ ರೂಪಾಯಿಗೆ ನನ್ನನ್ನು ಮಾರಿಬಿಟ್ಟಳು. ಆ ಘರವಾಲಿ ನನಗೆ ಸೀದಾ ದಂಧೆಗೆ ಇಳಿಸಲಿಲ್ಲ. ಕೆಲವು ದಿನ ಅಲ್ಲಿ ಅಡಿಗೆ, ಮನೆ ಕೆಲಸ ಮಾಡಿಕೊಂಡಿದ್ದೆ. ಕ್ರಮೇಣ ದಂಧೆಗೆ ಇಳಿಯದೆ ಬೇರೆ ದಾರಿ ಇರಲಿಲ್ಲ. ಇಬ್ಬರು ಮಕ್ಕಳಾದವು. ಅಲ್ಲಿ ದುಡಿದ ದುಡ್ಡಿನಲ್ಲಿ ತಂಗಿಯ ಮದುವೆ ಮಾಡಿದೆ. ಊರಲ್ಲಿ ಎಂಟು ಎಕರೆ ಜಮೀನು ಖರೀದಿ ಮಾಡಿ, ಎಮ್ಮೆ ಸಾಕಿದ್ದೇನೆ. ಇಷ್ಟರಲ್ಲೇ ಈ ಕೆಲಸ ಬಿಟ್ಟು ಎಮ್ಮೆ ಹಾಲು ಮಾರಿ ಜೀವನ ಮಾಡುತ್ತೇನೆ."

 

"ನನ್ನ ದೊಡ್ಡ ಮಗಳು ಸಣ್ಣ ವಯಸ್ಸಿನಲ್ಲೇ ಯಾರದೋ ಜೊತೆ ಓಡಿ ಹೋದಳು. ಅವಳು ವಾಪಸ್ಸು ಬಂದ ಮೇಲೆ ಅವಳನ್ನು ಯಾರೂ ಮದುವೆ ಆಗಲು ಒಪ್ಪಲಿಲ್ಲ. ಅವಳನ್ನು ದೇವದಾಸಿ ಮಾಡಿಬಿಟ್ಟೆ. ಚಿಕ್ಕ ಮಗಳಿಗೆ ಚರ್ಮದ ಮೇಲೆ ಬಿಳಿ ಮಚ್ಛೆಗಳಿದ್ದವು. ಅವಳಿಗೆ ಮದುವೆ ಮಾಡಲು ಆಗದೆ ಅವಳನ್ನು ಕೂಡ ದೇವದಾಸಿಯನ್ನಾಗಿ ಮಾಡಿಬಿಟ್ಟೆ. ನನ್ನನ್ನು ದೇವರಿಗೆ ಅರ್ಪಿಸಿದಾಗ ನನ್ನ ತಾಯಿಯನ್ನು ಬೈದುಕೊಂಡಿದ್ದ ನಾನು ಅದೇ ಕೆಲಸ ಮಾಡದೆ ಬೇರೆ ದಾರಿಯೇ ಇರಲಿಲ್ಲ"

 

"ನಾನು ಮಾಡಿದ್ದ ಪಾಪಗಳಿಗೋ ಏನೋ, ಇಂದಿಗೆ ಅವರಿಬ್ಬರೂ ಜೀವಂತ ಇಲ್ಲ". ಅದೇನಾಯಿತು ಎಂದು ಸ್ಪಷ್ಟವಾಗಿ ರಾಣಿಬಾಯಿ ಹೇಳದಿದ್ದರೂ, ನನಗೆ ಬೇರೆಯವರಿಂದ ತಿಳಿಯಿತು ಅವರು ಬಲಿಯಾಗಿದ್ದು ಏಡ್ಸ್ ಗೆ ಎಂದು.

 

ಸಂಜೆ ಹೊತ್ತಿಗೆ ಕಾವೇರಿಯನ್ನು ಅವಳ ಮನೆ ತಲುಪಿಸಿ, ರಾಣಿಬಾಯಿ ಯನ್ನು ಅವಳ ಊರಿಗೆ ತಲುಪಿಸಲು ಕಾರು ಹತ್ತಿದೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದಳು ರಾಣಿಬಾಯಿ. "ನಮಗೆ, ದೇವದಾಸಿಯರಿಗೆ ಕೆಲ ಸೌಲಭ್ಯಗಳಿವೆ. ಹಬ್ಬಗಳಲ್ಲಿ ಜನ ನಮ್ಮ ಆಶೀರ್ವಾದ ತೆಗೆದುಕೊಳ್ಳುತ್ತಾರೆ. ನಾವು ದೇವಿಯ ಅವತಾರ ಎಂದು ಪೂಜೆ ಮಾಡುತ್ತಾರೆ. ನಾವು ಸಾಧಾರಣ ಸೂಳೆಯರಲ್ಲ. ನಮಗೆ ಘನತೆಯಿದೆ. ಆದರೆ ಸಂಭೋಗ, ಸಂಭೋಗವೇ. ಅಲ್ಲಿ ಯಾವ ದೈವತ್ವವು ಇಲ್ಲ."

 

"ರೋಗಗಳ ಬಗ್ಗೆ ನಿನಗೆ ಹೆದರಿಕೆ ಇಲ್ಲವೇ?" ನಾನು ಕೇಳಿದೆ.

 

"ಏಕಿಲ್ಲ? ಆದರೆ ನಾವು ಊಟ ಮಾಡಬೇಕೆಂದರೆ ನಮ್ಮ ಕೆಲಸ ಮುಂದುವರೆಸಲೇ ಬೇಕು. ದುಃಖ ಭರಿಸುವುದು ನಮ್ಮ ಕರ್ಮ. ಸಂತೋಷದ ಮುಖ ಹೊತ್ತು ಆಕರ್ಷಿಸಿಸದಿದ್ದರೆ ನಮ್ಮ ಹತ್ತಿರ ಬರುವರಾರು?" ರಾಣಿಬಾಯಿ ಉತ್ತರ ಕೊಟ್ಟಳು.

 

"ನಿನಗೆ ಭವಿಷ್ಯದ ಬಗ್ಗೆ ಆಸೆ ಇಲ್ಲವೇ?"

 

"ಏಕಿಲ್ಲ? ಅದಕ್ಕೆಂದೇ ಹೊಲ ಕೊಂಡುಕೊಂಡು ಎಮ್ಮೆ ಸಾಕಿದ್ದೇನೆ. ಇನ್ನು ಸ್ವಲ್ಪ ಹಣ ಉಳಿಸಿಕೊಂಡು ಅಲ್ಲಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುತ್ತೇನೆ"

 

ರಾಣಿಬಾಯಿಯನ್ನು ಅವಳ ಮನೆಗೆ ಬಿಟ್ಟು ಬೆಳಗಾಂ ಗೆ ಮರಳಿದೆ. ಅಲ್ಲಿ ದೇವದಾಸಿಯರ ಜೊತೆ ಕೆಲಸ ಮಾಡುವ NGO ಸಂಸ್ಥೆಯಲ್ಲಿ ರಾಣಿಬಾಯಿಯ ಬಗ್ಗೆ ಮತ್ತು ಅವಳ ನಿವೃತ್ತಿ ಯೋಜನೆ ಬಗ್ಗೆ  ವಿಚಾರಿಸಿದೆ. ಅಲ್ಲಿ ತಿಳಿದು ಬಂತು ಈಗಾಗಲೇ ರಾಣಿಬಾಯಿಗೆ ಅವಳ ಮಕ್ಕಳಿಗೆ ಇದ್ದ ರೋಗ ಅಂಟಿಕೊಂಡು ಕೆಲವು ತಿಂಗಳುಗಳೇ ಕಳೆದಿವೆ. ಔಷಧಗಳು ಕೆಲ ದಿನಗಳ ಮಟ್ಟಿಗೆ ರೋಗ ಲಕ್ಷಣಗಳನ್ನು ಕಡಿಮೆ ಮಾಡಿದರು, ಸಂಪೂರ್ಣ ಗುಣ ಮಾಡಲಾರವು. ಅವಳು ತನ್ನ ಜಮೀನಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುವುದಕ್ಕೆ ಈಗಾಗಲೇ ಕಾಲ ಮಿಂಚಿ ಹೋಗಿದೆ.

Saturday, November 6, 2021

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ

"ತುತ್ತು ಅನ್ನ ತಿನ್ನೋಕೆ, 

ಬೊಗಸೆ ನೀರು ಕುಡಿಯೋಕೆ,

ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ,

ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ"


ವಿಷ್ಣುವರ್ಧನ್ ಹಾಡಿದ ಈ ಹಾಡು ಅಂದಿಗೆ ಜನಪ್ರಿಯವಾಗಿತ್ತು. ಇಂದಿಗೂ ಕೇಳಲು ಯೋಗ್ಯವಾಗಿದೆ. ಇರುವ ಸ್ವಲ್ಪದರಲ್ಲೇ ಮನುಷ್ಯ ನೆಮ್ಮದಿಯಾಗಿ ಬದುಕಬಹುದು ಎನ್ನುವುದು ಅದರ ಸಂದೇಶವಾಗಿತ್ತು. ಆದರೆ ನಾವು ಬದುಕುವ ರೀತಿ ನೋಡಿ? ಇಂದಿಗೆ ತಿನ್ನುವುದಕ್ಕೆ ತುತ್ತು ಅನ್ನ ಸಾಕಾದರೂ, ನಾಳೆಗೆ, ನಾಡಿದ್ದಕ್ಕೆ ಹೀಗೆ ಮತ್ತೆ ತುತ್ತು ಅನ್ನ ಬೇಕಲ್ಲ. ಅದಕ್ಕೆ ಸಾಧ್ಯವಾದಷ್ಟು ಅಕ್ಕಿ ಪ್ಯಾಕೆಟ್ ಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಗೋದಾಮುಗಳಲ್ಲಿ ಕೆಲ ವರುಷಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ದಾಸ್ತಾನು ಲಭ್ಯ. ಕುಡಿಯುವುದು ಬೊಗಸೆ ನೀರೇ ಆದರೂ, ಮನೆಯಲ್ಲಿ ಸಾವಿರಾರು ಲೀಟರ್ ನೀರು ಹಿಡಿದಿಡುವ ಟ್ಯಾಂಕ್ ಕಟ್ಟಿಸುತ್ತೇವೆ. ಹಾಗೆಯೇ ಊರಿಗೊಂದು ಕೆರೆ, ನದಿಗೊಂದು ಆಣೆಕಟ್ಟು. ಅವೆಲ್ಲ ಮನುಷ್ಯನ ದಾಹ ನೀಗಿಸುವುದಕ್ಕೆ. ಒಂದು ದಿನಕ್ಕಲ್ಲ. ಬರಲಿರುವ ದಿನಗಳಿಗೂ ಕೂಡ. ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ. ಆದರೆ ನಮ್ಮ ಅಂದ ಚೆಂದಕೆ ಬೇಕು ಹಲವಾರು ಡಜನ್ ಬಟ್ಟೆಗಳು. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ. ಆದರೆ ನಮಗೆ ಬೇಕು ಕನಿಷ್ಠ ೩೦ x ೪೦ ಅಡಿಯ ಮನೆ. ಉಳ್ಳವರಿಗೆ ಅವರಿಗೆ ಅಂತಸ್ತಿಗೆ ತಕ್ಕಂತೆ ವಿಶಾಲವಾದ ಮನೆ.


ಪ್ರಕೃತಿ ಸೃಷ್ಟಿಸಿದ ಜೀವ ಸಂಕುಲದಲ್ಲಿ ಮನುಷ್ಯನನ್ನು ಹೊರತು ಪಡಿಸಿದರೆ, ಇಂತಹ ಅನುಕೂಲಗಳು  ಯಾವುದೇ ಪ್ರಾಣಿ, ಪಕ್ಷಿಗಿಲ್ಲ. ಅವುಗಳೆಲ್ಲ ಅಂದಿನ ಆಹಾರ ಅಂದೇ ಹುಡುಕಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸ. ಅವಕ್ಕೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವುದು ಕೂಡ ಗೊತ್ತಿಲ್ಲ. ಯಾವ ಹುಲಿ, ಸಿಂಹಕ್ಕೂ ಜಗತ್ತಿನಲ್ಲಿರುವ ಕಾಡಿಗೆಲ್ಲ ತಾನೊಬ್ಬನೇ ರಾಜ ಆಗಬೇಕೆನ್ನುವ ಆಸೆ ಇಲ್ಲ. ಆದರೆ ಮನುಷ್ಯ ಪ್ರಪಂಚದಲ್ಲಿ ಉಂಟು ಅಲೆಕ್ಸಾಂಡರ್, ನೆಪೋಲಿಯನ್, ಹಿಟ್ಲರ್. 


ಕಾಡು ಪೋಷಿಸಿದಷ್ಟು ಮಾತ್ರ ಜಿಂಕೆಗಳ ಇರಲು ಸಾಧ್ಯ. ಅವುಗಳ ಸಂಖ್ಯೆ ಹೆಚ್ಚಾಗದಂತೆ ಆಹಾರ ಸರಪಣಿಯ ಪಿರಮಿಡ್ ನಲ್ಲಿ ಹುಲಿಗಳಿವೆ. ಮನುಷ್ಯನನ್ನು ಬೇಟೆ ಆಡುವ ಪ್ರಾಣಿಗಳಿಗೆ ಉಳಿಗಾಲ ಎಲ್ಲಿದೆ? ಕಾಳ್ಗಿಚ್ಚು ಬಿದ್ದಾಗ ಅಳಿಲಿನಿಂದ ಆನೆಯವರೆಗೆ ಎಲ್ಲವೂ ಜೀವ ಕಳೆದುಕೊಳ್ಳುತ್ತವೆ. ಆದರೆ ಮನುಷ್ಯನಿಗೆ ಇಂತಹ ಅವಘಡಗಳಿಂದ ಪಾರಾಗುವ ಬಗೆ ಗೊತ್ತಿದೆ. ಮನುಷ್ಯ ಜನಸಂಖ್ಯೆಗೆ ಮಾತ್ರ ಇಲ್ಲ ಮಿತಿ.


ಮನುಷ್ಯ ಜನಸಂಖ್ಯೆ ಜಾಸ್ತಿಯಾದಂತೆಲ್ಲ, ಪ್ರಕೃತಿ ಮತ್ತು ಇತರ ಪ್ರಾಣಿ ಸಂಕುಲದ ಮೇಲೆ ಮನುಷ್ಯನ ದಬ್ಬಾಳಿಕೆ ಕೂಡ ಹೆಚ್ಚುತ್ತಾ ಹೋಗುತ್ತದೆ. ಕೆಲವು ಚಲನಚಿತ್ರಗಳಲ್ಲಿ ಮನುಷ್ಯ ನಿರ್ಮಿತ ರೋಬೋಟ್ ಗಳು ತಾವೇ ಪರಿಸ್ಥಿತಿಯನ್ನು ಕೈಗತ್ತಿಗೊಂಡು ತಮ್ಮನ್ನು ನಿರ್ಮಿಸಿದವರ ಮೇಲೆ ಧಾಳಿಗೆ ಮುಂದಾಗುತ್ತವಲ್ಲ. ಇಂದಿಗೆ ಪ್ರಕೃತಿಗೆ ಕೂಡ ಮನುಷ್ಯನ ಬಗ್ಗೆ ಹಾಗೆಯೇ ಅನಿಸುತ್ತಿರಬಹುದಲ್ಲವೇ?


ಮನುಷ್ಯರ ಜನಸಂಖ್ಯೆ ಮತ್ತು ದುರಾಸೆ ಕಡಿಮೆ ಆಗದಿದ್ದಲ್ಲಿ, ಪ್ರಕೃತಿ ತನ್ನ ಯೋಜನೆ ಬದಲಿಸದೆ ಇರದು. ಡೈನೋಸಾರ್ ಭೂಮಿಗೆ ಭಾರವಾದಾಗ ಪ್ರಕೃತಿಯ ಯಾವುದೊ ಯೋಜನೆಗೆ ಸಿಕ್ಕಿ ಕಣ್ಮರೆಯಾದವು. ಎಷ್ಟೋ ಮನುಷ್ಯ ನಾಗರಿಕತೆಗಳು (ಉದಾಹರಣೆಗೆ ಮಾಯನ್ ನಾಗರೀಕತೆ) ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ತಮ್ಮ ಅಸ್ತಿತ್ವ ಕಳೆದುಕೊಂಡವು. ಪ್ರಕೃತಿಯನ್ನು ಗೆಲ್ಲಲು ಹೊರಟವರು ತಾವೇ ಮರೆಯಾಗಿ ಹೋದರು. ತುತ್ತು ಅನ್ನ, ಬೊಗಸೆ ನೀರು ಸಾಕೆನಿಸಿದಿದ್ದರೆ ಅದಕ್ಕೂ ಕಲ್ಲು ಬೀಳುವ ಕಾಲ ಬರಬಹುದು. ಇದು ಬರೀ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಸಮಾಜದಲ್ಲಿ ಪ್ರತಿಷ್ಠೆಯ ಸ್ಪರ್ಧೆಗೆ ಬಿದ್ದ ಪ್ರತಿಯೊಬ್ಬರಿಗೂ ತುತ್ತು ಅನ್ನ, ಬೊಗಸೆ ನೀರು ಇವುಗಳ ಮಹತ್ವ ತಿಳಿಯದೆ ಹೋದರೆ ಅದನ್ನು ಕಲಿಸುವ ಕಾಲ ಬಂದೇ ಬಿಡುತ್ತದೆ.

Sunday, October 31, 2021

ಮೋಸಗಾರರ ತಣ್ಣನೆಯ ಕ್ರೌರ್ಯ ಗುರುತಿಸದೆ ಹೋದರೆ

ಹಣಕಾಸಿನ ವಿಚಾರದಲ್ಲಿ ಮೋಸ ಹೋದ ಅನುಭವಗಳು ಸಾಕಷ್ಟು ಜನರಿಗೆ ಆಗಿರುತ್ತದೆ. ಹಾಗೆಯೆ ಯಾವುದೊ ಕೆಲಸ ಮಾಡಿಕೊಡುತ್ತೇನೆ ಎಂದು ಕರೆದುಕೊಂಡು ಹೋಗಿ ನಡು ನೀರಿನಲ್ಲಿ ಕೈ ಬಿಟ್ಟು ಹೋಗುತ್ತಾರಲ್ಲ. ಅಂತಹ ಅನುಭವಗಳ ಬಗ್ಗೆ ಸಾಕಷ್ಟು ಸ್ನೇಹಿತರಿಂದ ಕೇಳಿ ತಿಳಿದುಕೊಂಡಿದ್ದೇನೆ. ಮರಾ ಮೋಸದಲ್ಲಿ ಆಗುವ ಕೊಲೆ, ಸುಲಿಗೆಗಳ ಬಗ್ಗೆ ದಿನ ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಇವೆಲ್ಲ ಘಟನೆಗಳಲ್ಲಿ ಮೋಸ ಹೋದವರು ಒಂದು ಮುಗ್ದರು ಇಲ್ಲವೇ ಯಾವುದೊ ಕುರುಡು ನಂಬಿಕೆಯಿಂದ ಬಂದು ಸಿಕ್ಕಿ ಹಾಕಿಕೊಂಡವರು. ಆದರೆ ಮೋಸ ಮಾಡುವವರು ಮಾತ್ರ ಚಾಣಾಕ್ಷರು. ಅವರಿಗೆ ಯಾರನ್ನು ಹೇಗೆ ಹಳ್ಳಕ್ಕೆ ಬೀಳಿಸಬೇಕು ಎನ್ನುವುದರಲ್ಲಿ ಪರಿಣಿತಿ ಇದೆ. ಮೋಸಗಾರರು ಯಾಕೆ ಮೋಸ ಮಾಡುತ್ತಾರೆ ಎಂದು ವಿಚಾರ ಮಾಡಿ ನೋಡಿದರೆ, ಅವರು ಕಷ್ಟ ಪಟ್ಟು ದುಡಿಯುವುದಕ್ಕೆ ಇಷ್ಟ ಪಡದೆ ಸುಲಭದ ಮಾರ್ಗಗಳನ್ನೇ ಆಯ್ದುಕೊಂಡಿರುತ್ತಾರೆ. ಆ ಕಲೆ ಒಮ್ಮೆ ಕರಗತವಾದರೆ ಸಾಕು, ಅವರು ಮನುಷ್ಯ ರಕ್ತದ ರುಚಿ ನೋಡಿದ ಹುಲಿಯ ಹಾಗೆ ನರಭಕ್ಷಕರಾಗಿ ತಯಾರಾಗಿ ಹೋಗುತ್ತಾರೆ. ಅಲ್ಲಿಂದ ಅವರಿಗೆ ಬೇರೆ ಯಾವ ವೃತ್ತಿಯು ರುಚಿಸುವುದಿಲ್ಲ. ಬೇಟೆ ಹುಲಿಯ ತಣ್ಣನೆಯ ಕ್ರೌರ್ಯ ಅವರಲ್ಲಿ ಮೈಗೂಡಿ ಬಿಡುತ್ತದೆ. ಮಿಕ ಬಲೆಗೆ ಬೀಳುವವರೆಗೆ ಬೇರೆಯೇ ಮುಸುಕು ಧರಿಸುವ ಅವರು, ತಮ್ಮ ನಿಜ ಗುಣವನ್ನು ತೋರಿಸಿಕೊಡುವುದು ತಮ್ಮ ಬೇಟೆಯನ್ನು ಸವಿಯುವಾಗಲೇ.

 

ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ, ಮೋಸಗಾರರ ಜಾಡನ್ನು ಗ್ರಹಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಅವರು ನಿಮ್ಮ ಜೊತೆಗೆ ಹಲವಾರು ವರುಷ ಪ್ರಾಮಾಣಿಕತೆಯಿಂದ ವ್ಯವಹರಿಸಿ, ನಿಮ್ಮ ನಂಬಿಕೆ ಗಳಿಸಿಕೊಂಡಿದ್ದರೆ, ಅವರ ಜೊತೆಗೆ ನಿಮ್ಮ ಮುನ್ನೆಚ್ಚರಿಕೆಗಳು ಕಡಿಮೆ ಮಟ್ಟದಲ್ಲಿ ಇರುತ್ತವೆ. ಹೀಗೆ ಒಂದು ನಿಮ್ಮ ಅಜಾಗರೂಕತೆಯ ಕ್ಷಣದಲ್ಲಿ, ನಂಬಿಕೆಯ ಸಂಪೂರ್ಣ ಲಾಭ ಪಡೆದು ನಿಮ್ಮನ್ನು ಅವರು ದೊಡ್ಡ ಕುತ್ತಿಗೆ ಸಿಕ್ಕಿಸಿಬಿಡುತ್ತಾರೆ. ಆಗ ನಿಮಗೆ ಬೇಟೆ ಹುಲಿಯ ಮತ್ತು ಅದರ ತಣ್ಣನೆಯ ಕ್ರೌರ್ಯದ ದರ್ಶನವಾಗುತ್ತ ಹೋಗುತ್ತದೆ. ನಿಮಗೆ ಸಾಮರ್ಥ್ಯವಿದ್ದಲ್ಲಿ ಅವರ ಕಪಿ ಮುಷ್ಟಿಯಿಂದ ಹೊರ ಬಂದು, ಅವರನ್ನು ದೂರ ಇಡುತ್ತೀರಿ.

 

ಒಂದು ವೇಳೆ ಈ ಮೋಸಗಾರರು ನಿಮ್ಮ ಕುಟುಂಬದವರೇ, ಅಥವಾ ನಿಮ್ಮ ಪತಿ, ಪತ್ನಿಯೇ ಆಗಿದ್ದರೆ? ಆಗ ಮೋಸದಿಂದ ಆದ ನಷ್ಟಕ್ಕಿಂತ, ನಂಬಿಕೆಗೆ ಆದ ಮೋಸ ಹೆಚ್ಚು ಇರಿಯುತ್ತದೆ. ಚಾಕು ಬೆನ್ನಿಗೆ ಬಿದ್ದಿದ್ದರು, ಅದು ಎದೆಗೆ ಇರಿದಿರುತ್ತದೆ. ಅರೆ, ಏಕೆ ಹೀಗಾಯ್ತು ಎಂದು ಅವಲೋಕಿಸಿದಾಗ, ಮೋಸದ ಹೆಜ್ಜೆ ಜಾಡುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಎಂತಹ ವ್ಯಕ್ತಿಯನ್ನು ನಂಬಿ ಬಿಟ್ಟೆನೆಲ್ಲಾ ಎಂದು ನಮಗೆ ನಾವೇ ಅಂದುಕೊಳ್ಳುತ್ತೇವೆ. ಆ ವ್ಯಕ್ತಿಗೆ ಕಷ್ಟ ಕಾಲದಲ್ಲಿ ನೀವು ಸಹಾಯ ಮಾಡಿದ್ದರಂತೂ ಮುಗಿದೇ ಹೋಯಿತು. 'ನೀನೆ ಸಾಕಿದ ಗಿಣಿ' ಹಾಡಿನ ಪ್ರತಿ ಪದದ ಭಾವಾರ್ಥ ನೀವು ಬಿಡಿಸಿ ಹೇಳಬಲ್ಲಿರಿ.

 

ಆಗಿ ಹೋದದ್ದಕ್ಕೆ ಕೊರಗುವುದಕ್ಕಿಂತ, ಮುಂದೆ ಮಾಡಬೇಕಾದ್ದರ ಬಗ್ಗೆ ಯೋಚಿಸುವುದು ಜಾಣತನ. ಆದರೆ ಮುಂದಿನ ದಾರಿಗಳು ಎಲ್ಲವೂ ನೋವಿನಿಂದ ಕೂಡಿರುತ್ತವಲ್ಲ. ನೀವು ಅವರನ್ನು ಕ್ಷಮಿಸಿದರೂ, ಅವರು ಮತ್ತೆ ಕತ್ತಿ ಮಸೆಯತೊಡಗುತ್ತಾರೆ. ಮತ್ತೆ ಅವರನ್ನು ನಂಬುವುದು ರಾತ್ರಿ ಕಂಡ ಭಾವಿಯಲ್ಲಿ ಹಗಲು ಬಿದ್ದ ಹಾಗೆ. ತಣ್ಣನೆಯ ಕ್ರೌರ್ಯದ ನರಭಕ್ಷಕ ಹುಲಿ ಬದಲಾದ ಕಥೆ ಎಲ್ಲಾದರೂ ಕೇಳಿದ್ದೀರಾ? ಸಾಧ್ಯವಾದಲ್ಲಿ ಆ ಸಂಬಂಧದಿಂದ ಹೊರ ಬರುವುದು ಇಲ್ಲವಾದಲ್ಲಿ ಮನಸ್ಸಿನಿಂದ ಕಿತ್ತು ಹಾಕುವುದು ನಿಮಗೆ ಉಳಿದಿರುವ ದಾರಿ. ಅವರಿಗಿರುವ ಆಯುಧಗಳನ್ನೆಲ್ಲ ಕಿತ್ತು ಹಾಕಿ, ಅವರಿಗೆ ನಿಮ್ಮನ್ನು ಘಾಸಿಗೊಳಿಸುವ ಮಾರ್ಗಗಳನ್ನೆಲ್ಲ ಮುಚ್ಚಿ ಹಾಕದಿದ್ದರೆ, ಮತ್ತೆ ಹಳೇ ಅನುಭವಗಳಿಗೆ ನೀವು ತಯಾರಾಗಬೇಕು. 'ಬ್ಲಾಕ್ ಮೇಲ್' ಮಾಡುವವರನ್ನು ನೀವು ಹೊರ ಸಮಾಜಕ್ಕೆ ಬಹಿರಂಗ ಪಡಿಸಿದಾಗ, ಅವರ ಆಟಗಳು ಮತ್ತು ಅವುಗಳಿಗಿರುವ ಕಿಮ್ಮತ್ತು ಇವುಗಳ ಸತ್ಯ ದರ್ಶನ ಅವರಿಗೆ ಆಗಿಯೇ ತೀರುತ್ತದೆ. ಆಗ ನಿಮ್ಮನ್ನು ಬಿಟ್ಟು ಬೇರೆ ಬಲಿಪಶುವನ್ನು ಅವರು ಹುಡುಕತೊಡಗುತ್ತಾರೆ. ಅವರೆಂದಿಗೂ ಬದಲಾಗುವುದಿಲ್ಲ. ಬದಲಾಗಬೇಕಾದದ್ದು ನಾವುಗಳು ಅಷ್ಟೇ.

Friday, October 29, 2021

ಆಡಿಸಿ ನೋಡು, ಬೀಳಿಸಿ ನೋಡು, ಒಡೆಯದೆ ಬಿಡದು

ಲವವಿಕೆಯ ಅಪ್ಪು ಇನ್ನಿಲ್ಲ ಎಂದರೆ ಅದು ಬೇಸರಕ್ಕೂ ಮೀರಿದ ನೋವಿನ ಸಂಗತಿ. ದೈವದಾಟವೋ, ವಿಧಿಯ ಬರಹವೋ, ರಾಜಕುಮಾರನೆಂಬ ಗೊಂಬೆ ಉರುಳಿ ಬಿದ್ದು ಒಡೆದು ಹೋಗಿದೆ. 'ವಸಂತ ಗೀತ', 'ಎರಡು ನಕ್ಷತ್ರಗಳು', 'ಯಾರಿವನು?', 'ಭಕ್ತ ಪ್ರಹ್ಲಾದ', 'ಚಲಿಸುವ ಮೋಡಗಳು', 'ಹೊಸ ಬೆಳಕು' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಪ್ಪು ವನ್ನು ನೋಡುತ್ತಾ ಬೆಳೆದ ನನಗೆ, ಅಪ್ಪು ಒಬ್ಬ ನಟನಲ್ಲ, ಬದಲಿಗೆ ಕನ್ನಡ ಚಲನಚಿತ್ರರಂಗ ಪರಂಪರೆಯ ಒಂದು ಭಾಗ. 'ಬೆಟ್ಟದ ಹೂ' ಇಷ್ಟು ಬೇಗ ಬಾಡಿ ಹೋಗಬಾರದಿತ್ತು ಎಂದು ನಮಗೆ ಅನ್ನಿಸಿದರೂ, ಆಡಿಸುವಾತನ ಕರೆಗೆ ಯಾರು ಇಲ್ಲವೆನ್ನಲಾಗದು ಎನ್ನುವ ಸತ್ಯ ಅಪ್ಪು ನಮಗೆ ನೆನಪಿಸಿ ಹೋಗಿದ್ದಾರೆ. ಆತನಿಗೊಂದು ಭಾವಪೂರ್ಣ ಶೃದ್ಧಾಂಜಲಿ.


'ಕತ್ತಲಲ್ಲಿ ನ್ಯಾಯವಿಟ್ಟನು, 

ನಮ್ಮ ಶಿವ ಕಣ್ಣುಗಳ ಕಟ್ಟಿಬಿಟ್ಟನು

  

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು'




Thursday, October 7, 2021

ಕನಸು, ವಾಸ್ತವ ಮತ್ತು ಮಾಯೆ

ನಿಮಗೆ ನಡು ರಾತ್ರಿಯಲ್ಲಿ ಭೀಕರವಾದ ದುಃಸ್ವಪ್ನ ಬೀಳುತ್ತದೆ. ಅದು ನಿಮ್ಮಲ್ಲಿ ಭಯ ಹುಟ್ಟಿಸಿ, ನಿಮ್ಮ ಉದ್ವೇಗ ಹೆಚ್ಚಾಗಿ ನಿದ್ದೆಯಿಂದ ಎಚ್ಚರವಾಗುತ್ತದೆ. ಎದ್ದ ಮೇಲೆ ಕ್ರಮೇಣ ಅದು ಒಂದು ಕನಸು ಮಾತ್ರ ಎನ್ನುವುದು ನಿಮಗೆ ಅರಿವಿಗೆ ಬರುತ್ತದೆ. ಆಗ ನಿರಾಳವಾಗುತ್ತೀರಿ. ದೇವರಿಗೆ ಧನ್ಯವಾದ ಸಲ್ಲಿಸುತ್ತೀರಿ. ಆದರೆ ಕನಸು ನಡೆದಷ್ಟೂ ಹೊತ್ತು ಅದು ಕನಸು ಎನ್ನುವ ಅರಿವೆಯೇ ನಿಮಗೆ ಇದ್ದಿಲ್ಲ. ಅರಿವು ಬಂದಿದ್ದು ಕನಸಿನಿಂದ ಹೊರ ಬಂದ ಮೇಲೆಯಷ್ಟೇ ಅಲ್ಲವೇ?


ಸಾವಿನ ಅನುಭವವು ಹೀಗೆಯೇ ಇರಬಹುದಲ್ಲವೇ? ಸತ್ತ ನಂತರ ಎಚ್ಚರವಾಗಿ, ನಿರಾಳವಾಗಿ, ಬದುಕಿದ್ದು ಒಂದು ಕನಸಿನ ತರಹ, ಅದು ನಿಜವಲ್ಲ ಎಂದು ಅನಿಸಲು ಸಾಧ್ಯವಿದೆ ಅಲ್ಲವೇ? ಕನಸಿನಲ್ಲಿ ಇದ್ದಷ್ಟು ಹೊತ್ತು ಅದು ವಾಸ್ತವವೇ ಎಂದು ತೋರುತ್ತಿತ್ತು. ಅದು ಮುಗಿದ ಮೇಲೆಯೇ ಅದು ವಾಸ್ತವವಲ್ಲ ಎನ್ನುವುದು ಅರಿವಿಗೆ ಬಂದಿದ್ದು. ಹಾಗೆಯೆ ನಮ್ಮ ಜೀವನವು ಕೂಡ, ಬದುಕಿರುವಾಗ ವಾಸ್ತವ ಎಂದು ಅನ್ನಿಸಿದರೂ ಅದು ಮುಗಿದ ಮೇಲೆ ಅದರ ನಿಜ ಗತಿ ಗೊತ್ತಾಗುವುದು ಅಲ್ಲವೇ?


ಕನಸು, ಜೀವನ ಎರಡು ವಾಸ್ತವ ಅಲ್ಲ ಅಂದರೆ ಅವು ಏನು? ಅದು ಮಾಯೆ ಎನ್ನುವ ಉತ್ತರ ನೀಡುತ್ತವೆ ನಮ್ಮ ವೇದ-ಉಪನಿಷತ್ ಗಳು. Elon Musk ಎನ್ನುವ ಆಧುನಿಕ ಕಾಲದ ಮೇಧಾವಿ "We're Probably Living in a Simulation " ಎಂದು ಹೇಳಿದನಲ್ಲ. ಹಾಗಾದರೆ ನಾವು ನಾಟಕದ ವೇಷಧಾರಿಗಳೇ? ಅನ್ಯಲೋಕದಲ್ಲಿರುವ ಯಾರೋ ನಮ್ಮನ್ನು ವಿಡಿಯೋ ಗೇಮ್ ತರಹ ಆಡುತ್ತಿರಬಹುದೇ? ಈ ಆಟವನ್ನು ಬಲ್ಲವರು, ಜೋತಿಷ್ಯ ಶಾಸ್ತ್ರ ಬರೆದರೆ? ಎಷ್ಟೋ ಸಲ ಜೋತಿಷ್ಯ ಹೇಳಿದಂತೆ ಕರಾರುವಕ್ಕಾಗಿ ನಡೆಯುತ್ತದೆಯಲ್ಲ. ಹಾಗಾದರೆ ಇಲ್ಲಿ ನಮಗೊಪ್ಪಿಸಿದ ಸಂಭಾಷಣೆಯನ್ನು ಹೇಳಿ ಹೋಗವುದು ಮಾತ್ರ ನಮ್ಮ ಕರ್ತವ್ಯವೇ? ಹಾಗಂತ ನಮ್ಮ ಪ್ರಯತ್ನಕ್ಕೆ ಫಲ ಇಲ್ಲ ಎಂದೇನಿಲ್ಲ. ಹಾಗಾದರೆ ಈ ಮಾಯೆ ಎನ್ನುವ ಚಿತ್ರದ ನಟರು, ನಿರ್ದೇಶಕರುಗಳು ನಾವುಗಳೇ? ನಮ್ಮ ಕರ್ಮಗಳಿಗೆ ತಕ್ಕಂತೆ ನಮಗೆ ಇಲ್ಲಿ ಪಾತ್ರ ಸಿಕ್ಕಿತೇ? ಪಾತ್ರ ಚೆನ್ನಾಗಿ ನಿಭಾಯಿಸಿದರೆ ಹೆಚ್ಚಿನ ಮಹತ್ವದ ಪಾತ್ರಗಳು ಸಿಗುವವೇ? ಸಿಕ್ಕಿದ ಪಾತ್ರ ಬಿಟ್ಟು ನಮಗೆ ಬೇರೆ ಏನಾದರು ವ್ಯಕ್ತಿತ್ವ ಇರಲು ಸಾಧ್ಯವೇ?


ವೇದಾಂತ, ವಿಜ್ಞಾನ ಎರಡು ಸಂಧಿಸಿದಾಗ ತರ್ಕಬದ್ಧವಾದ ಉತ್ತರಗಳನ್ನು ಪಡೆಯಬಹುದು. ಆದರೆ ಅಲ್ಲಿಯವರೆಗೆ ಕಾಯುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ನಮ್ಮ ಸಾಧು-ಸಂತರು. ಈ ಪ್ರಶ್ನೆಗಳಿಗೆ ಅವರು ಹುಡುಕಿಕೊಂಡ ಮಾರ್ಗ 'ಧ್ಯಾನ'. ಧ್ಯಾನ ಉತ್ತರ ಕೊಡುವ ಬದಲು, ನಮ್ಮ ಪ್ರಶ್ನೆಗಳಿಗೆ ಸ್ಪಷ್ಟತೆ ಕೊಡಲಾರಂಭಿಸುತ್ತದೆ. ಕ್ರಮೇಣ ನಮ್ಮ ಪ್ರಶ್ನೆಗಳೇ ಇಲ್ಲವಾಗಿ ಹೋಗಿಬಿಡುತ್ತವೆ. ಭಾಷೆ-ತರ್ಕವನ್ನು ಮೀರಿದ ಮೌನಕ್ಕೆ ಅಲ್ಲಿ ಪ್ರಾಶಸ್ತ್ಯ. ಆ ದಿವ್ಯ ಮೌನ ನಮ್ಮನ್ನು ಮಾಯೆಯಿಂದ ಹೊರದೂಡುತ್ತದೆ. ಇದು ಯೋಗಿಗಳ ಅನುಭವ. ನನಗೆ ಇದರ ಅನುಭವ ಇನ್ನು ಆಗಿರದಿದ್ದರೂ, ಅದು ನಿಜ ಅನ್ನಿಸತೊಡಗಿದೆ.

Tuesday, October 5, 2021

ಎಲ್ಲೂ ಇರದ ಆದರ್ಶ ಸಂಗಾತಿಯ ಬಯಸುತ್ತ

ನಾನು ೫-೬ ವರ್ಷದವನಿದ್ದಾಗ ನನ್ನ ಅಕ್ಕ ಚಿತ್ರ ಮಂದಿರಕ್ಕೆ ಒಬ್ಬಳೇ ಹೋಗಲಾಗದೆ, ನನಗೆ ಒಂದು  ಪಾರ್ಲೆ-ಜಿ ಬಿಸ್ಕಿಟ್ ಕೊಡಿಸಿಕೊಂಡು ಜೊತೆಗೆಂದು ಕರೆದುಕೊಂಡು ಹೋಗುತ್ತಿದ್ದಳು. ಒಂದೇ ಚಿತ್ರ ಅದು ಆಗ ನನಗೆ ಅರ್ಥವಾಗದದಿದ್ದರೂ ಹಲವಾರು ಬಾರಿ ನೋಡಿದ್ದ ನೆನಪಿದೆ. ಅದು ೧೯೮೩ ರಲ್ಲಿ ಬಿಡುಗಡೆಯಾದ 'ಬೆಂಕಿಯ ಬಲೆ' ಚಿತ್ರ. ಗಂಡ-ಹೆಂಡತಿ ನಡುವಿನ ನವಿರು ಪ್ರೇಮ ದುಃಖಾಂತ ಕಾಣುವ ಚಿತ್ರ. ಆ ಚಿತ್ರದಲ್ಲಿ ನಾಯಕ-ನಾಯಕಿ 'ಬಿಸಿಲಾದರೇನು, ಮಳೆಯಾದರೇನು' ಎಂದು ಯಾವ ಕಷ್ಟವನ್ನು ಜೊತೆಯಲ್ಲೇ ಎದುರಿಸುವ ಹಾಡು ಹಾಡುತ್ತಾರೆ. ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದಾಗ, ಹೆಂಡತಿ  ಅವನ ಹೆಣ ಸಾಗಿಸುವ ಬಂಡಿಯಲ್ಲೇ ಪ್ರಾಣ ತ್ಯಜಿಸುತ್ತಾಳೆ. ಅಂದಿಗೆ ಆ ಚಿತ್ರ ನೋಡಿದವರು ಗಂಡ-ಹೆಂಡತಿ ಅಂದರೆ ಅನಂತನಾಗ್, ಲಕ್ಷ್ಮಿ ತರಹ ಇರಬೇಕು ಎಂದು ಮಾತನಾಡಿಕೊಂಡಿದ್ದರು.

 

ಕಥೆ, ಕಾದಂಬರಿಗಳು, ಚಲನಚಿತ್ರಗಳಲ್ಲಿ ಅದರ ಕರ್ತೃಗಳು ಸದುದ್ದೇಶದಿಂದ ಆದರ್ಶ ತುಂಬುತ್ತಾರೆ. ಅವರ ಉದ್ದೇಶ ಸಮಾಜ ಅದನ್ನು ಅನುಕರಿಸಲಿ ಎನ್ನುವುದು. ಆದರೆ ಅವು ವಾಸ್ತವ ಕಥೆಯಿಂದ ದೂರ ಇರುತ್ತವೆ. ಆ ಚಿತ್ರದ ನಾಯಕಿ ಲಕ್ಷ್ಮಿ ನಿಜ ಜೀವನದಲ್ಲಿ ಮೂರು ಮದುವೆಯಾಗಿ, ಯಾವ ಗಂಡ ಸತ್ತರೆ ತನಗೇನು ಎನ್ನುವಂತೆ ಹಾಯಾಗಿಲ್ಲವೇ? ಹಾಗೆಯೇ ಅನಂತನಾಗ್ ಕೂಡ ತಮ್ಮ ನಿಜ ಜೀವನದ ಹೆಂಡತಿಗೆ 'ನೀನಿಲ್ಲದೆ ಬದುಕುವ ಶಕ್ತಿ ನನಗಿಲ್ಲ' ಎಂದು ಹೇಳಿದ್ದಾರೆಯೇ ಎನ್ನುವುದು ಅನುಮಾನ. ಚಿತ್ರಕಥೆಯೇ ಬೇರೆ. ನಿಜ ಜೀವನವೇ ಬೇರೆ. ಏಕೆ ಹೀಗೆ?

 

ಪ್ರತಿಯೊಬ್ಬ ಮನುಷ್ಯ, ಗಂಡಾಗಲಿ, ಹೆಣ್ಣಾಗಲಿ ಅವರದೇ ಆದ ವೈಯಕ್ತಿಕ ಆಸೆ, ಹಂಬಲಗಳನ್ನು ಹೊಂದಿರುತ್ತಾರೆ. ಬೇರೆ ಬೇರೆ ಕುಟುಂಬಗಳಲ್ಲಿ, ಬೇರೆ ವಾತಾವರಣದಲ್ಲಿ ಬೆಳೆದ ಇಬ್ಬರು, ಮದುವೆಯಲ್ಲಿ ಜೊತೆಯಾದಾಗ ಅವರಿಬ್ಬರ ನಡುವೆ ಸಾಮ್ಯತೆಗಳಿಗಿಂತ, ಬೇರೆ ಬೇರೆ ಪ್ರವೃತ್ತಿಗಳೇ ಹೆಚ್ಚಾಗಿರುತ್ತವೆ. ಇಬ್ಬರ ಆಸೆಗಳು ವಿರುದ್ಧ ದಿಕ್ಕಿನ ಕಡೆಗೆ ಸೆಳೆದಾಗ, ಮದುವೆ ಇಬ್ಬರ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇಬ್ಬರಲ್ಲಿ ಒಬ್ಬರು ಸಹನೆ ಕಳೆದುಕೊಂಡರೂ ಸಾಕು. ದಾಂಪತ್ಯದ ಬಿರುಕು ಅವರಿಬ್ಬರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಅಲ್ಲಿಂದ ಶುರುವಾಗುವ ದೋಷಾರೋಪಣೆಗಳು ಕುಟುಂಬದ ಇತರೆ ಸದಸ್ಯರನ್ನು ಸೆಳೆದುಕೊಂಡುಬಿಡುತ್ತವೆ. ಆದರ್ಶ ದಂಪತಿಗಳ ಜೀವನ ದ್ವೇಷಮಯವಾಗುತ್ತದೆ.

 

ಇದಕ್ಕೆಲ್ಲ ಮೂಲ ಕಾರಣ, ಗಂಡ ತನಗೆ ತಕ್ಕ ಹೆಂಡತಿ ಸಿಕ್ಕಿಲ್ಲವೆಂದುಕೊಳ್ಳುವುದು. ಮತ್ತು ಹೆಂಡತಿ ನಾನಾದಕ್ಕೆ ಇವರ ಜೊತೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುವ ಭಾವದಲ್ಲಿ ಬದುಕುವುದು. ಎಂತಹ ಹೆಂಡತಿ ಸಿಕ್ಕಿದ್ದರೂ, ತಾನು ಜಗಳವಾಡುತ್ತಿದ್ದ ಎನ್ನುವುದು ಗಂಡ ಒಪ್ಪುವುದಿಲ್ಲ. ಇವನನ್ನು ಬಿಟ್ಟು, ಇನ್ನೂ ಮೂರು ಮದುವೆಯಾದರು ತಾನು ಹೊಸ ಗಂಡನಲ್ಲಿ ಸಮಸ್ಯೆ ಹುಡುಕದೆ ಬಿಡುತ್ತಿದ್ದಿಲ್ಲ ಎನ್ನುವುದು ಹೆಂಡತಿ ಒಪ್ಪುವುದಿಲ್ಲ. ಸಮಸ್ಯೆ ಅವರ ಮದುವೆಯಲ್ಲಿಲ್ಲ. ಅವರ ವ್ಯಕ್ತಿತ್ವದಲ್ಲಿದೆ. ಅವರಿಬ್ಬರೂ 'ಬೆಂಕಿಯ ಬಲೆ' ಚಿತ್ರದ ಆದರ್ಶ ದಂಪತಿಗಳನ್ನು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅನಂತನಾಗ್, ಲಕ್ಷ್ಮಿ ಬೇರೆಯೇ ತರಹದ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದು ಮರೆತು ಹೋಗಿದ್ದಾರೆ. ಚಿತ್ರಕಥೆಯಲ್ಲಿರುವ ನಾಯಕ-ನಾಯಕಿಗಿರುವ ಹೊಂದಾಣಿಕೆಯನ್ನು ಕಂಡು ಬೆರಗಾಗುತ್ತಾರೆ. ಆದರೆ ತಾವು ಮಾತ್ರ ಸಣ್ಣ-ಪುಟ್ಟ ಹೊಂದಾಣಿಕೆಗೂ ತಯ್ಯಾರು ಇರುವುದಿಲ್ಲ. ಎಲ್ಲೂ ಇರದ ಆದರ್ಶ ಸಂಗಾತಿ ತಮಗೆ ಸಿಕ್ಕಿದ್ದರೆ ಎಷ್ಟು ಚೆನ್ನ ಇತ್ತು ಎನ್ನುವ ಕೊರಗಿನಲ್ಲೇ ಸಮಯ ದೂಡುತ್ತಾರೆ. ಇರುವ ಸಂಬಂಧಗಳನ್ನು ಆದರ್ಶವಾಗಿಸಿಕೊಳ್ಳಲು ಪ್ರಯತ್ನ ಮಾಡುವುದರಲ್ಲಿ ಸೋತು ಹೋಗುತ್ತಾರೆ.

Saturday, October 2, 2021

ಗೀತೆಯ ಹಿಂದಿನ ಸಾಹಿತಿ: ಕಣಗಾಲ್ ಪ್ರಭಾಕರ ಶಾಸ್ತ್ರಿ

ಹಳೆಯ ಹಾಡುಗಳು ಮಧುರ ಮತ್ತು ಅರ್ಥಪೂರ್ಣ ಇದ್ದವಲ್ಲವೇ? ಅದರ ಹಿಂದಿನ ಕಾರಣ ಗೀತೆ ರಚನೆಕಾರರಿಗಿದ್ದ ಆಳವಾದ ಜೀವನ ಅನುಭವ, ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಗೀತೆಯ ಸವಿಯನ್ನು ಪ್ರೇಕ್ಷಕರಿಗೆ ಸರಳ ಪದಗಳಲ್ಲಿ, ಪ್ರಾಸಬದ್ಧವಾಗಿ ಮುಟ್ಟಿಸುವ ಕಲೆ. ೬೦ ಮತ್ತು ೭೦ ರ ದಶಕದಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಮತ್ತು ಗೀತೆಗಳನ್ನು ಬರೆದವರು ಕಣಗಾಲ್ ಪ್ರಭಾಕರ ಶಾಸ್ತ್ರಿ. ಇವರು ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣ. ಕಡು ಬಡತನದ ಕುಟುಂಬದಲ್ಲಿ ಬೆಳೆದ ಇವರು, ತಾತನ ತೊಡೆಯ ಮೇಲೆ ಕುಳಿತು ಕೇಳಿದ ಕಥೆಗಳು ಇವರಲ್ಲಿ ಸಾಹಿತ್ಯನ್ನು ಹುಟ್ಟು ಹಾಕಿದವು. ಹೊಟ್ಟೆ ಪಾಡಿಗಾಗಿ ಚಿಕ್ಕ ವಯಸ್ಸಿನಲ್ಲೇ ನಾಟಕ ಕಂಪನಿ ಸೇರಿದ ಇವರು ಸರಸ್ವತಿಯನ್ನು ಒಲಿಸಿಕೊಂಡು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


೧೯೫೮ ರಲ್ಲಿ ತೆರೆ ಕಂಡ 'ಸ್ಕೂಲ್ ಮಾಸ್ಟರ್' ಎನ್ನುವ ಚಿತ್ರಕ್ಕೆ ಇವರು ಬರೆದ ಗೀತೆ 'ಅತಿ ಮಧುರ ಅನುರಾಗ' ಜನಪ್ರಿಯವಾಯಿತು. ೧೯೬೩ ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ 'ಕುಲ ವಧು' ಚಿತ್ರದ 'ಒಲವಿನ ಪ್ರಿಯಲತೆ' ಹಾಡು ಗಮನ ಸೆಳೆಯಿತು. ೧೯೭೦ ರಲ್ಲಿ ಬಂದ 'ನನ್ನ ತಮ್ಮ' ಚಿತ್ರದ 'ಇದೆ ಹೊಸ ಹಾಡು, ಹೃದಯಸಾಕ್ಷಿ ಹಾಡು, ಎದೆಯಾಸೆ ಭಾಷೆ ಈ ಹಾಡು' ಎನ್ನುವ ಗೀತೆ ಇವರ ಅಂತರಂಗವನ್ನೇ ಪ್ರತಿನಿಧಿಸುತ್ತಿತ್ತು. 'ಶ್ರೀ ಕೃಷ್ಣದೇವರಾಯ' ಚಿತ್ರದ 'ತಿರುಪತಿ ಗಿರಿ ವಾಸ ಶ್ರೀ ವೆಂಕಟೇಶ' ಹಾಡು ಕೂಡ ಇವರ ರಚನೆಯೇ. ಅಲ್ಲಿಂದ ಸಾಲು ಸಾಲು ಚಿತ್ರಗಳಿಗೆ ಗೀತೆ, ಸಂಭಾಷಣೆ ರಚಿಸುವುದರಲ್ಲಿ ಪ್ರಭಾಕರ ಶಾಸ್ತ್ರಿ ಸಂಪೂರ್ಣ ಮುಳುಗಿ ಹೋದರು. ಆದರೆ ಇವರ ದೈತ್ಯ ಪ್ರತಿಭೆಯ ಅನಾವರಣವಾಗಿದ್ದು ಅವರ ತಮ್ಮ ಪುಟ್ಟಣ್ಣ ಅವರು ತಮ್ಮ ಚಿತ್ರಗಳಿಗೆ ಇವರಿಂದ ಹಾಡು ಬರೆಸಲು ಆರಂಭ ಮಾಡಿದಾಗ.


'ಶರಪಂಜರ' ಚಿತ್ರದ 'ಬಿಳಿಗಿರಿ ರಂಗಯ್ಯ, ನೀನೇ ಹೇಳಯ್ಯ' ಎನ್ನುವ ಮನೋಜ್ಞ ಹಾಡು ಇವರಿಂದ ಹುಟ್ಟಿ ಬಂತು. 'ಸಾಕ್ಷಾತ್ಕಾರ' ಚಿತ್ರಕ್ಕೆ ಇವರು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಹೀಗೆ ಸಮಗ್ರ ಸಾಹಿತ್ಯದ ಜವಾಬ್ದಾರಿ ಹೊತ್ತರು. 'ರಂಗನಾಯಕಿ', 'ಶುಭ ಮಂಗಳ' ಚಿತ್ರಗಳಿಗೆ ಇವರು ರಚಿಸಿದ ಹಾಡುಗಳು ಚಿತ್ರಕ್ಕೆ ಮೆರುಗು ತಂದು ಕೊಟ್ಟವು. ಭಾಷಾ ಪ್ರಜ್ಞೆಯನ್ನು, ಭಾವನೆಗಳ ಜೊತೆ ಮೇಳೈಸಿ ಇವರು ರಚಿಸಿದ 'ಶುಭ ಮಂಗಳ' ಚಿತ್ರದ ಈ ಗೀತೆ ನನಗೆ ಅಚ್ಚು ಮೆಚ್ಚು.


"ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ


ಚೈತ್ರ ವಸಂತವೇ ಮಂಟಪ ಶಾಲೆ 

ತಾರಾಲೋಕದ ದೀಪಮಾಲೆ

ಸದಾನುರಾಗವೇ ಸಂಬಂಧ ಮಾಲೆ

ಬದುಕೇ ಭೋಗದ ರಸರಾಸ ಲೀಲೆ


ಭಾವತರಂಗವೇ ಸಪ್ತಪದಿ ನ ಓಲೆ 

ಭಾವೈಕ್ಯ ಗಾನವೇ ಉರುಟಣೆ ಉಯ್ಯಾಲೆ 

ಭಾವೋನ್ಮಾದವೇ ಶೃಂಗಾರ ಲೀಲೆ 

ಬದುಕೇ ಭಾವದ ನವರಾಗಮಾಲೆ


ಈ ಜೀವನವೇ ನವರಂಗ ಶಾಲೆ

ಯೌವನ ಕಾಲವೇ ಆನಂದ ಲೀಲೆ 

ಹೃದಯ ಮಿಲನವೇ ಹರುಷದ ಹಾಲೆಲೆ

ಬದುಕೇ ಸುಮಧುರ ಸ್ನೇಹ ಸಂಕೋಲೆ


ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ"


ನಮ್ಮ ನಿಮ್ಮ ಜೀವನವನ್ನು ಒಂದೆರಡು ಭಾವಗಳು ಆಳಿದರೆ, ಕಣಗಾಲ್ ಪ್ರಭಾಕರ ಶಾಸ್ತ್ರಿ ತರಹದ ಕವಿಗಳ ಬದುಕೇ ಭಾವದ ನವರಾಗಮಾಲೆ.

Sunday, September 26, 2021

ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

 ಹಿಂದಿಯ 'ಹಮ್ ದೋನೋ' ಚಿತ್ರದ ಒಂದು ಹಾಡು 'ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ'. ಈ ಹಾಡನ್ನು ಒಬ್ಬ ಉಪೇಕ್ಷೆಯ ವ್ಯಕ್ತಿ ಹಾಡುವ ಹಾಡಿನಂತೆ ಚಿತ್ರೀಕರಿಸಲಾಗಿದೆ. ಆದರೆ ಲೌಕಿಕದಲ್ಲಿ ಎಲ್ಲವನ್ನು ನಿರ್ಲಕ್ಷಿಸುವುದನ್ನೇ ಅಧ್ಯಾತ್ಮ ಕೂಡ ಹೇಳಿಕೊಡುತ್ತದೆ. ಆದ್ದರಿಂದ ಅದನ್ನು ಯಾವ ತರಹ ಬೇಕಾದರೂ ಸ್ವೀಕರಿಸಬಹುದು. ಸಾಹಿರ್ ಲುಧಿಯಾನ್ವಿ ರಚಿಸಿದ, ಮೊಹಮ್ಮದ್ ರಫಿ ಹಾಡಿದ ಈ ಹಾಡು ಇಷ್ಟವಾಯಿತು.  


https://www.youtube.com/watch?v=ZwDvIZA-H9A


ಎಲ್ಲ ಹಾಡುಗಳನ್ನು ಯಥಾವತ್ತಾಗಿ ಭಾಷಾಂತರ ಮಾಡಲು ಎಲ್ಲಿ ಸಾಧ್ಯ? ಆದರೆ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ


ವಿನಾಶದ ಬಗ್ಗೆ ಕೊರಗುವುದಲ್ಲಿ ಏನಿದೆ ಅರ್ಥ?

ಅದಕ್ಕೆ ನನ್ನ ವಿನಾಶವನ್ನೇ ಮೆರೆಸತೊಡಗಿದೆ


ಸಿಕ್ಕಿದ್ದೇ ನನ್ನ ದೈವ ಎಂದುಕೊಂಡೆ

ಕಳೆದು ಹೋದದ್ದನ್ನು ನಾನು ಮರೆತುಬಿಟ್ಟೆ


ಸುಖ-ದುಃಖದ ನಡುವೆ ಭೇದವನ್ನೇ ಕಾಣದ

ಸ್ಥಿತಿಗೆ ಹೃದಯವನ್ನು ತಳ್ಳಿಕೊಂಡು ಬಂದೆ


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ

Saturday, September 25, 2021

ಮುಸ್ಸಲೋನಿ ಎಂಬ ಸರ್ವಾಧಿಕಾರಿ - ಭಾಗ ೨

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)


೧೯೩೦ ರ ಹೊತ್ತಿಗೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಮುಸ್ಸಲೋನಿ. ಅವನು ಹೋದ ಕಡೆಯೆಲ್ಲ ಜನ ಸಾಗರ ಮತ್ತು ಚಪ್ಪಾಳೆಗಳ ಸುರಿಮಳೆ. ಅಲ್ಲೊಬ್ಬರು, ಇಲ್ಲೊಬ್ಬರು ಮುಸ್ಸಲೋನಿ ಕಟ್ಟಿದ ಪಕ್ಷವನ್ನು ಟೀಕೆ, ವಿಮರ್ಶೆ ಮಾಡುವವರು ಇದ್ದರೂ ಮುಸ್ಸಲೋನಿಯನ್ನು ಟೀಕೆ ಮಾಡುವವರು ಮಾತ್ರ ಸಮಾಜದ ಹೊರ ನೋಟಕ್ಕೆ ಕಾಣುತ್ತಿರಲಿಲ್ಲ. ಏಕೆಂದರೆ ಮುಸ್ಸಲೋನಿ ಅವರಿಗೆಲ್ಲ ಆರಾಧ್ಯ ದೈವ ಆಗಿಬಿಟ್ಟಿದ್ದ. ಅವನಲ್ಲಿ ಏನು ತಪ್ಪು ಹುಡುಕುವುದು?

ಮುಸ್ಸಲೋನಿ ಮತ್ತು ಅವನ ಪಕ್ಷ ಬಿಟ್ಟರೆ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲಿಗೆ ಮಂತ್ರಮುಗ್ಧರಾಗಿ ಮುಸ್ಸಲೋನಿಯ ಭಾಷಣ ಕೇಳುತ್ತಿದ್ದ ಜನರಿಗೆ ಕ್ರಮೇಣ ಮುಸ್ಸಲೋನಿಯ ನಿಜಮುಖದ ಗೋಚರವಾಗತೊಡಗಿತು. ಅವನೊಬ್ಬ ಅದ್ಭುತ ನಟ ಮತ್ತು ಅವನು ಹಿಂಬಾಲಕರು  ನಾಟಕದ ಇತರ ಪಾತ್ರಧಾರಿಗಳು ಎನ್ನುವ ಅರಿವು ಬರತೊಡಗಿತು. ಬಹಿರಂಗವಾಗಿ ವಿರೋಧಿಸಿದರೆ ಕಠಿಣ ಶಿಕ್ಷೆಗಳಿದ್ದವಲ್ಲ. ಹೀಗಾಗಿ ಹೊರಗೆ ಏನು ಮಾತನಾಡದೆ ಇದ್ದರೂ ತಮ್ಮ ತಮ್ಮ ಜನರೊಡನೆ ಇದ್ದಾಗ M for Mussolini ಅಲ್ಲ ಅದು M for Misery ಎಂದು ನಗೆಯಾಡತೊಡಗಿದರು. ತನ್ನ ಜನಪ್ರಿಯತೆ ಕುಗ್ಗುತ್ತಿರುವುದರ ಸುಳಿವನ್ನು ರಹಸ್ಯ ಏಜೆಂಟ ರಿಂದ ಪಡೆದ ಮುಸ್ಸಲೋನಿ, ಜನರ ಗಮನ ಬೇರೆ ಕಡೆ ಹರಿಸಲು ಹೊಸ ಯೋಜನೆಯೊಂದನ್ನು ಹೆಣೆದ. ಅದು ಪಕ್ಕದ ದೇಶವಾದ ಗ್ರೀಸ್ ಮೇಲೆ ಧಾಳಿ ನಡೆಸುವುದು. ಆದರೆ ಮುಸ್ಸಲೋನಿಯ ದುರಾದೃಷ್ಟಕ್ಕೆ ಅವನ ಸೈನಿಕರು ಪ್ರತಿಕೂಲ ಪರಿಸ್ಥಿತಿಯಿಂದ ಮರಳಿ ಬಂದರು. ತನ್ನ ಸ್ನೇಹಿತ ಹಿಟ್ಲರ್ ನ ಸಹಾಯ ಕೋರಿದ ಮುಸ್ಸಲೋನಿ, ಗ್ರೀಸ್ ದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸಫಲನಾದ. ಆದರೆ ಹಿಟ್ಲರ್ ನ ಸೈನಿಕರು ಅಲ್ಲಿ ತಮ್ಮ ಅಧಿಪತ್ಯ ಸಾಧಿಸಿ ಮುಸ್ಸಲೋನಿ ಯನ್ನು ಮೂಲೆಗುಂಪು ಮಾಡಿಬಿಟ್ಟರು. ಒಂದು ಕಾಲದ ಸರ್ವಾಧಿಕಾರಿ ಮುಸ್ಸಲೋನಿ ಸುಮ್ಮನೆ ಶಬ್ದ ಮಾಡುವ ಖಾಲಿ ಪಾತ್ರೆಯಾದ. 

ಇಟಲಿ ದೇಶದ ಜನರು ತಮ್ಮ ನಾಯಕನ ಮಾತುಗಳನ್ನು ನಂಬದೆ ನಿಜ ಸುದ್ದಿ ತಿಳಿಯಲು ಬ್ರಿಟಿಷ್ ದೇಶದ ರೇಡಿಯೋ ಸ್ಟೇಷನ್ ಗಳಿಂದ ಸುದ್ದಿ ಕೇಳತೊಡಗಿದದರು. ಇತ್ತ ಆಫ್ರಿಕಾ ದೇಶಗಳ ಕಡೆ ಆಕ್ರಮಣಕ್ಕೆ ಹೋಗಿದ್ದ ಮುಸ್ಸಲೋನಿಯ ಸೇನೆ ಸೋತು ಸುಣ್ಣವಾಯಿತು. ಒಂದು ಕಾಲದಲ್ಲಿ 'ಅತಿ ಹೆಚ್ಚು ಫೋಟೋ ತೆಗೆಸಿಕೊಂಡ ವ್ಯಕ್ತಿ' ಎಂದು ಪ್ರಸಿದ್ಧಿ ಪಡೆದಿದ್ದ ಮುಸ್ಸಲೋನಿಯ ಚಿತ್ರಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗದೆ ತಿಂಗಳುಗಳು ಸವೆದವು. ಸ್ವತಃ ಮುಸ್ಸಲೋನಿ ತನ್ನ ಭಾಷಣಗಳನ್ನು ನಿಲ್ಲಿಸಿಬಿಟ್ಟ. ಅವನು ಬದುಕಿದ್ದಾನೋ, ಇಲ್ಲವೋ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ಅವನಿಂದ ಯಾವುದೇ ಸುದ್ದಿ ಬರುವುದು ನಿಂತು ಹೋಯಿತು. 

ಹದಿನೆಂಟು ತಿಂಗಳ ನಂತರ ತನ್ನ ಮೌನ ಮುರಿದು ಮಾತನಾಡಿದ ಮುಸ್ಸಲೋನಿ ಯ ಧ್ವನಿಯಲ್ಲಿ ಯಾವುದೇ ಮಾಂತ್ರಿಕತೆ ಉಳಿದಿರಲಿಲ್ಲ. ಆ ಹೊತ್ತಿಗೆ ಇಟಲಿಯ ದೊಡ್ಡ ಪಟ್ಟಣಗಳ ಮೇಲೆ ಪಕ್ಕದ ದೇಶಗಳ ಧಾಳಿ ನಡೆದಿತ್ತು. ಅದರಿಂದ ಜನರನ್ನು ಉಳಿಸುವ ಶಕ್ತಿ ಮುಸ್ಸಲೋನಿ ಯಲ್ಲಿ ಉಳಿದಿರಲಿಲ್ಲ. ಅವನನ್ನು ಆರಾಧಿಸಿದ ಜನರೇ ಅವನು ಸತ್ತರೆ ಚೆನ್ನ ಎಂದು ಮಾತನಾಡುವಂತೆ ಆಯಿತು. ಇಟಲಿ ದೇಶದ ಜನನಾಯಕರೆಲ್ಲ ಸೇರಿ ಮುಸ್ಸಲೋನಿಯನ್ನು ಕೆಳಗಿಳಿಸುವ ನಿರ್ಧಾರಕ್ಕೆ ಬಂದರು. ಆದರೆ ಮುಸ್ಸಲೋನಿಗೆ ಇನ್ನೂ ಒಬ್ಬ ಸ್ನೇಹಿತ ಉಳಿದೆ ಇದ್ದ. ಅವನು ಹಿಟ್ಲರ್. ಅವನ ಸಹಾಯದಿಂದ ತನ್ನ ಕೆಲವು ವೈರಿಗಳನ್ನು ಮುಸ್ಸಲೋನಿ ಮುಗಿಸಿದರೂ, ಅವನ ಕಾಲ ಮಿಂಚಿ ಹೋಗಿತ್ತು. ಅವನ ವಿರೋಧಿಗಳು ಮುಸ್ಸಲೋನಿಯನ್ನು ಮತ್ತು ಅವನ ಹಿಂಬಾಲಕರನ್ನು ಶೂಟ್ ಮಾಡಿ ಸಾಯಿಸಿ, ಮಿಲಾನ್ ನಗರದಲ್ಲಿ ತಲೆ ಕೆಳಗೆ, ಕಾಲು ಮೇಲೆ ಮಾಡಿ ಜನರ ವೀಕ್ಷಣೆಗೆಂದು ನೇತು ಹಾಕಿದರು. ಅದಕ್ಕೆ ಮೊದಲೇ ಮುಸ್ಸಲೋನಿ ತನ್ನ ಆಪ್ತರಲ್ಲಿ ತನ್ನ ನಟನೆ ಮುಗಿದಿರುವುದಾಗಿ ಮತ್ತು ತಾನು ಜೀವಂತ ಶವ ಅಷ್ಟೇ ಎಂದು ಹೇಳಿಕೊಂಡಿದ್ದ.

ಮುಸ್ಸಲೋನಿ ಎಂಬ ಸರ್ವಾಧಿಕಾರಿ

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)

 

ಮುಸ್ಸಲೋನಿ ಜನ ಸಾಮಾನ್ಯರನ್ನು ತನ್ನ ಮೋಡಿಗೆ ಒಳಪಡಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ಅವನು ದೇಶಾದ್ಯಂತ ಪ್ರವಾಸ ಕೈಗೊಂಡ. ಕಾರ್ಯಕರ್ತರ ಸಾಮೂಹಿಕ ಸಭೆಗಳು, ಸರ್ಕಾರೀ ಕೆಲಸಗಳ ಉದ್ಘಾಟನೆಗಳು ಹೀಗೆ ಯಾವುದೇ ಅವಕಾಶ ಇರಲಿ, ಅವುಗಳ ಮೂಲಕ ನೂರಾರು ಪಟ್ಟಣ, ಹಳ್ಳಿಗಳಲ್ಲಿ ಅವನು ಚಿರಪರಿಚಿತನಾಗಿ ಹೋದ. ತನ್ನ ಓಡಾಟಕ್ಕೆಂದೇ ಒಂದು ರೈಲನ್ನು ನಿಯಮಿಸಿಕೊಂಡ. ಮಾರ್ಗ ಮದ್ಯದಲ್ಲಿ ಜನಸಂದಣಿ ಎಲ್ಲೆಲ್ಲಿ ಇರುತ್ತಿತ್ತೋ, ಅಲ್ಲಿ ಅವನಿದ್ದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅವನು ಕಿಟಕಿಯಲ್ಲಿ ನಿಂತು ಕೈ ಬೀಸುತ್ತ ಜನರ ಕಣ್ಣಿಗೆ ತಾನು ಬಿದ್ದಿದ್ದೇನೆ ಎನ್ನುವುದನ್ನು ಖಚಿತಗೊಳಿಸಿಕೊಳ್ಳುತ್ತಿದ್ದ. ಮೊದಲಿಗೆ ಯಾವುದು ರಾಜಕೀಯ ಅವಶ್ಯಕತೆಯಾಗಿತ್ತೋ ಅದು ಕಾಲ ಕ್ರಮೇಣ ಒಂದು ಗೀಳಾಗಿ ಮಾರ್ಪಟ್ಟಿತ್ತು.

 

ತನ್ನ ನಂಬಿಕಸ್ಥರಿಗೆ ಕೆಲವು ಕೆಲಸಗಳ ಜವಾಬ್ದಾರಿ ವಹಿಸಿದ. ಅದರಲ್ಲಿ ಮೊದಲನೆಯದು, ತನ್ನ ಅವಶ್ಯಕತೆ ಎಷ್ಟು ಇದೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ತೋರಿಸುವುದು, ಅದಕ್ಕೆ ನೆರವಾದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು, ಸಹಾಯ ಮಾಡದವರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಚುಕಿ ಹಾಕುವುದು. ಎರಡನೆಯದು, ತನ್ನ ರಾಜಕೀಯ ವೈರಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ಮೂಲ ಮಾಡುವುದು. ಇವೆಲ್ಲದರ ನಡುವೆ ಮುಸ್ಸೊಲೊನಿ ಜನರ ಮಧ್ಯೆ ಆವೇಶದಿಂದ ಭಾಷಣ ಮಾಡುತ್ತಿದ್ದ. ಜನರ ಮನಸ್ಸಿನಿಂದ ತಾನು ಕಣ್ಮರೆಯಾಗದಂತೆ, ಅವರಿಗೆ ಉಳಿದಿರುವ ಕೊನೆಯ ಆಶಾಕಿರಣ, ಭರವಸೆ ತಾನೊಬ್ಬನೇ ಎನ್ನುವ ಸಂದೇಶ ಪರೋಕ್ಷವಾಗಿ ನೀಡಲು ಮರೆಯುತ್ತಿರಲ್ಲ. ಪಕ್ಷದ, ಸರಕಾರದ ಎಲ್ಲ ಕಾರ್ಯಗಳು ಅವನ ಹತೋಟಿಗೆ ಬರಲು ಬಹಳ ಸಮಯ ಏನೂ ತಗುಲಲಿಲ್ಲ. ಆಮೇಲಿಂದ ಅವನ ಮಾತೇ ಅಂತಿಮ ಆಗಿ ಹೋಯಿತು. ಎಲ್ಲ ಊರಿನ, ಎಲ್ಲ ಜನ ಸಂಪರ್ಕ ಸ್ಥಳಗಳಲ್ಲಿ ಅವನ ಫೋಟೋಗಳು ರಾರಾಜಿಸತೊಡಗಿದವು. ಮಾಧ್ಯಮಗಳು ಅವನನ್ನು ಹೊಗಳಿ ಪುಟಗಟ್ಟಲೆ ಬರೆದವು. ಅವನ ಜೀವನ ಚರಿತ್ರೆಯ ಪುಸ್ತಕಗಳು ಒಂದಾದರ ನಂತರ ಇನ್ನೊಂದರಂತೆ ಬಿಡುಗಡೆಯಾದವು. ಅಂತರರಾಷ್ಟ್ರೀಯ ಗಣ್ಯ ವ್ಯಕ್ತಿಗಳೆಲ್ಲ ಅವನಿಗೆ ಭೇಟಿಯ ಗೌರವ ಕೊಡಲು ಬಂದರು. ಅವನ ಜೊತೆ ಕಳೆದ ಕೆಲವೇ ಕ್ಷಣಗಳಿಗೆ, ಅವನದು ಸೂಜಿಗಲ್ಲಿನ ವ್ಯಕ್ತಿತ್ವ ಎಂದು ಹೊಗಳಿದರು.

 

ಹೊರಗಿನ ಶತ್ರುಗಳು ಇಲ್ಲವಾದ ಮೇಲೆ, ತನ್ನದೇ ಪಕ್ಷದಲ್ಲಿ ತನಗೆ ಯಾವುದೇ ಉತ್ತರಾಧಿಕಾರಿ ಹುಟ್ಟದಂತೆ ನೋಡಿಕೊಳ್ಳುವುದನ್ನು ಮುಸ್ಸಲೋನಿ ಮರೆಯಲಿಲ್ಲ. ಯಾರಾದರೂ ತನಗಿಂತ ಜನಮನ್ನಣೆ ಪಡೆದರೆ ಸಾಕು ಅವರನ್ನು ಆ ಜಾಗದಿಂದ ಕೆಳಗಿಳಿಸಿ, ಅಲ್ಲಿ ಒಬ್ಬ ಅನಾಮಿಕನನ್ನು ತಂದು ಕೂರಿಸುತ್ತಿದ್ದ. ಅವನಿಗೆ ಸ್ವಾಮಿ ನಿಷ್ಠೆ ತೋರಿಸದವರೆಲ್ಲ ಮೂಲೆ ಗುಂಪಾಗಿ ಹೋದರು. ಪಕ್ಷದ, ದೇಶದ, ಜನ ಹಿತದ ಧ್ಯೇಯಗಳೆಲ್ಲ ಬದಲಾಗಿ 'ಮುಸ್ಸಲೋನಿ ಎಲ್ಲ ವಿಷಯದಲ್ಲೂ ಸರಿ' ಎನ್ನುವುದೇ ವೇದವಾಕ್ಯವಾಗಿ ಹೋಯಿತು. ಅವನೀಗ ತನ್ನ ಭಾಷಣಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ಇಡೀ ಇಟಲಿ ದೇಶ ಒಂದೇ ಸಲಕ್ಕೆ ತನ್ನ ಮಾತು ಕೇಳುವಂತೆ ಮಾಡಿಕೊಂಡ. ಜನ ನಿಬಿಡ ಸ್ಥಳಗಳಲ್ಲಿ ಬೃಹತ್ ಸ್ಪೀಕರ್ ಗಳು ಅವನ ಭಾಷಣವನ್ನು ಬಿತ್ತರಿಸತೊಡಗಿದವು.


ಅವನು ಸಾರ್ವಜನಿಕವಾಗಿ ಯಾವುದಾದರೂ ಊರಲ್ಲಿ ಭಾಷಣ ಮಾಡುವುದು ಇತ್ತೆಂದರೆ, ಅಂದು ಅಲ್ಲಿ ಶಾಲೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಅವನ ಭಾಷಣ ಕೇಳುವುದು ಎಲ್ಲರಿಗೂ ಕಡ್ಡಾಯವಾಗಿತ್ತು. ಅವನು ಭಾಷಣ ಮಾಡುವ ವೇದಿಕೆಯಲ್ಲಿ ಅವನು ಪ್ರಕಾಶಮಾನವಾಗಿ ಕಾಣುವಂತೆ ದೀಪಗಳಿಂದ ಸಜ್ಜುಗೊಳಿಸಲಾಗುತ್ತಿತ್ತು. ಅಲ್ಲಿ ಸೇರಿದ ಜನ ಸಮೂಹ ಅವನ ಹೆಸರನ್ನೇ ಜಪಿಸುವಂತೆ ಹಿನ್ನೆಲೆ ಸಂಗೀತ ನೀಡಲಾಗುತ್ತಿತ್ತು. ಜನರ ಉನ್ಮಾದ ತಾರಕಕ್ಕೇರಿದ ಮೇಲೆ ಮುಸ್ಸಲೋನಿ ವೇದಿಕೆಯ  ಮೇಲೆ ಪ್ರತ್ಯಕ್ಷನಾಗಿ ಅವರ ಹುಚ್ಚನ್ನು ಇನ್ನು ಅಧಿಕಗೊಳಿಸುತ್ತಿದ್ದ.

Thursday, September 23, 2021

ಕ್ಯಾನ್ಸರ್ ಆದವರ ಮುಂದೆ ನೆಗಡಿ ಎಂಥ ದೊಡ್ಡ ರೋಗ ಎಂದು ಹೇಳುವವರಿಗೆ

ನೀವು ಹಳೇ ಚಿತ್ರಗಳನ್ನು ನೋಡುತ್ತೀರಾ? ನನಗೆ ಭೂತಕಾಲ ಕಾಡಿದಷ್ಟು, ವರ್ತಮಾನ, ಭವಿಷ್ಯ ಕಾಡುವುದಿಲ್ಲ. ಹಾಗಾಗಿ ಟಿ.ವಿ.ಯಲ್ಲಿ ಬರುವ ಹಳೆಯ ಚಿತ್ರಗಳನ್ನು ಆಗಾಗ ನೋಡುತ್ತಿರುತ್ತೇನೆ. ೧೯೭೨ರಲ್ಲಿ ಬಿಡುಗಡೆಯಾದ 'ಬಂಗಾರದ ಮನುಷ್ಯ' ಚಿತ್ರ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಒಂದು ಸನ್ನಿವೇಶದಲ್ಲಿ ರಾಜಕುಮಾರ್ ತಮ್ಮ ಅಕ್ಕನ ಮಗನಿಗೆ ಬರುವ ೬೦೦ ರೂಪಾಯಿ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುದಿಲ್ಲವೇ ಎಂದು ದಬಾಯಿಸುತ್ತಾರೆ. ಆ ಕಾಲ ಹಾಗಿತ್ತೇನೋ? ಅದಾಗಿ ೧೫ ವರುಷ ಕಳೆದಿರಲಿಲ್ಲ. ೧೯೮೬ ರಲ್ಲಿ ತೆರೆ ಕಂಡ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರದಲ್ಲಿ, ಅದೇ ರಾಜಕುಮಾರ್, ಸ್ಪರ್ಧೆಯಲ್ಲಿ ಗೆದ್ದರೆ ಸಿಗುವ ೧೦,೦೦೦ ಸಾವಿರ ರೂಪಾಯಿಗಾಗಿ ಸಾವಿರ ಸುಳ್ಳು ಹೇಳುವ ಹಾಸ್ಯಮಯ ಪಾತ್ರವನ್ನು ನಿಭಾಯಿಸುತ್ತಾರೆ. ಕೆಲವು ನೂರು ಅಥವಾ ಕೆಲವು ಸಾವಿರ ರೂಪಾಯಿಗೆ ಎಷ್ಟೊಂದು ಬೆಲೆಯಿತ್ತಲ್ಲವೇ? ದುಡ್ಡಿಗಿದ್ದ ಆ ಬೆಲೆ, ಹೋಟೆಲಿನ ಗಾಜುಗಳನ್ನು ಒಡೆದು, ಸಾವಿರಾರು ರೂಪಾಯಿ ಖರ್ಚು ಮಾಡುವ 'ಅಂಜದ ಗಂಡು' ಚಿತ್ರದ ರವಿಚಂದ್ರನ್ ಅವರ ಪಾತ್ರದಲ್ಲಿ ಕಾಣುವುದಿಲ್ಲ. ಅದೇಕೆ ಎನ್ನುವುದು ಸುಲಭ. ಆ ಚಿತ್ರದ ನಾಯಕನಿಗೆ ಬಡತನ ಎಂದರೆ ಏನು ಎಂದರೆ ಗೊತ್ತಿರುವುದಿಲ್ಲ ಅಷ್ಟೇ. ನಿಜ ಕಷ್ಟಗಳನ್ನು ನೋಡದ ಮನುಷ್ಯರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ದೊಡ್ಡದೇ ಎಂದುಕೊಳ್ಳುತ್ತಾರೆ.


ನಾನು ಬೆಂಗಳೂರಿಗೆ ಬಂದದ್ದು ೧೯೯೯ ರಲ್ಲಿ. ವಾಪಸ್ಸು ಊರಿಗೆ ಹೋಗುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದ ನನಗೆ, ಬಂದ ಮೂರೇ ದಿನಕ್ಕೆ ಕೆಲಸ ಸಿಕ್ಕಿತ್ತು. ಭರ್ತಿ ೨,೫೦೦ ರೂಪಾಯಿ ಸಂಬಳ. ತಿಂಗಳ ಕೊನೆಗೆ ೨೦೦-೩೦೦ ರೂಪಾಯಿ ಉಳಿದರೆ ಅದೇ ಹೆಚ್ಚು. ಅದನ್ನೇ ಪೂರ್ತಿ ಒಂದು ವರುಷ ಉಳಿಸಿ, ಅದರಲ್ಲಿ ಒಂದು ಚಿಕ್ಕ ಟಿ.ವಿ. ಖರೀದಿಸುವ ಆಸೆಯಿಂದ ಮಾರುಕಟ್ಟೆಗೆ ಹೋದರೆ ನನ್ನಲ್ಲಿ ಇದ್ದ ಹಣಕ್ಕೆ ಖರೀದಿಸಲು ಸಾಧ್ಯವಾಗಿದ್ದು ಒಂದು ಟೇಪ್ ರೆಕಾರ್ಡರ್ ಮಾತ್ರ. ಅದು ನನ್ನ ಹಲವಾರು ವರುಷಗಳ ಸಂಗಾತಿಯಾಗಿತ್ತು. ಅದಾಗಿ ಇಪ್ಪತ್ತು ವರುಷ ನಂತರದ ಇಂದಿನ ವರ್ತಮಾನಕ್ಕೆ ಬಂದರೆ, ನನ್ನ ಮಗ ತನಗೆ ಆಟ ಆಡಲು ಎರಡು ಸಾವಿರ ರೂಪಾಯಿ ಬೆಲೆಯ ಆಟಿಕೆ ಸಾಮಾನು ಕೇಳುತ್ತಿದ್ದ. ಹಿಂದೆ ನನಗೆ ಅಷ್ಟು ಹಣ ಉಳಿಸಲು ಪೂರ್ತಿ ಒಂದು ವರುಷ ಬೇಕಾಗಿತ್ತು ಎನ್ನುವ ವಿಷಯ ನಾನು ಅವನಿಗೆ ತಿಳಿಸುವುದು ಸಾಧ್ಯವೇ? ನೂರು ರೂಪಾಯಿ ಬಿಡಿ, ಸಾವಿರ ರೂಪಾಯಿಗೆ ಏನು ಬೆಲೆ ಎಂದು ಕೂಡ ಅವನಿಗೆ ತಿಳಿಸುವುದು ಕಷ್ಟ.


ಈ ಬೆಲೆಯ ಮಹತ್ವ ಬರಿ ದುಡ್ಡಿನ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ಅದು ಬದುಕಿನ ಇತರ ವಿಷಯಗಳಿಗೂ ಅನ್ವಯಿಸುತ್ತದೆ. ತೆಲುಗು ಚಿತ್ರರಂಗದ ಸಮಂತಾ ಎನ್ನುವ ನಟಿ ಇಂದು ತನ್ನ ಮದುವೆಯನ್ನು ಕೊನೆಗೊಳ್ಳಿಸುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆಯಲ್ಲ. ಅವಳಿಗೆ ಇರುವ ಸೌಂದರ್ಯ, ಕುರೂಪದಿಂದ ಮದುವೆಯಾಗದೆ ಹಾಗೆಯೆ ಉಳಿದು ಹೋದ ಹುಡುಗಿಗೆ, ಅಥವಾ ಮುಖದ ಮೇಲೆ ಆಸಿಡ್ ಸುರಿಸಿಕೊಂಡ ನತದೃಷ್ಟರಿಗೆ ಇದ್ದರೆ ಹೇಗಿರುತ್ತಿತ್ತು? ಸಮಂತಾಗಿರುವ ಅಭಿನಯ ಪ್ರತಿಭೆ, ಹಿಂದೆ ಕನ್ನಡ ಚಿತ್ರರಂಗವನ್ನಾಳಿದ ಜಯಂತಿ, ಕಲ್ಪನಾರಿಗೆ ಕೂಡ ಇತ್ತಲ್ಲ. ಅವರಿಗೆ ವೈವಾಹಿಕ ಜೀವನ ಬೇಕು ಎಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಟಿ ಸಮಂತಾರಿಗೆ ಅವರದೇ ಆದ ವೈಯಕ್ತಿಕ ಕಾರಣಗಳು ಇರಬಹುದು. ಹಾಗೆಯೇ ಅವರ ಜೀವನ ಅವರ ವೈಯಕ್ತಿಕ ವಿಚಾರ. ಆದರೆ ಅವರ ಸಮಸ್ಯೆಗಳು ದುಃಖವನ್ನೇ ನೋಡದ ಮನುಷ್ಯರ ಕಸಿವಿಸಿಯಂತಹವು ಎನ್ನುವುದು ಮಾತ್ರ ನನ್ನ ಅಭಿಪ್ರಾಯ. ಅವರು ಬೇರೆ ಮದುವೆಯಾದರೂ ಅಥವಾ ಹಾಗೆ ಉಳಿದರೂ ಅವರ ವೈಯಕ್ತಿಕ ಜೀವನ ಈಗಿರುವುದಕ್ಕಿಂತ ಉತ್ತಮ ಆಗಲು ಸಾಧ್ಯವೇ ಎನ್ನುವುದು ಸಾಮಾನ್ಯರ ವಿಚಾರಕ್ಕೂ ನಿಲುಕುವಂತಹದ್ದು.


ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಆದರೆ ಅವುಗಳು ದೊಡ್ಡ ಸಮಸ್ಯೆ ಹೌದೋ ಅಲ್ಲವೋ ಎಂದು ಅರಿವಾಗಲು ಸಾಕಷ್ಟು ಜನರಿಗೆ ಜೀವನ ಅನುಭವದ ಕೊರತೆ ಇದೆ. ತಮಗೆ ಆಗಿರುವ ನೆಗಡಿ ಎಂತಹ ಭೀಕರದ್ದು ಎಂದು ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ ಮುಂದೆ ಹೇಳಲು ಹೊರಡುತ್ತಾರೆ. ತಮಗೆ ಕ್ಯಾನ್ಸರ್ ಆದಾಗ ಅವರು ಇನ್ನೇನು ಮಾಡುತ್ತಾರೋ?

Tuesday, September 21, 2021

ರೂಮಿಯ ಸೂಕ್ತಿಗಳು ಮತ್ತು ಕಿರು ಕವಿತೆಗಳ ಅನುವಾದ

ನೀವು ಸಮುದ್ರದ ಹನಿಯಲ್ಲ

ಹನಿಯೊಳಗಿರುವ ಸಮುದ್ರ

--೦--


ನೀವು ಏನನ್ನು ಹುಡುಕುತ್ತಿರುವಿರೋ 

ಅದು ನಿಮ್ಮನ್ನು ಹುಡುಕುತ್ತಿದೆ

--೦--


ಸರಿ-ತಪ್ಪುಗಳ ಆಚೆ ಇದೆ ಒಂದು ಬಯಲು

ನಾನು ನಿಮಗೆ ಅಲ್ಲಿಯೇ ಸಿಗುವೆ


ಆ ಹಸಿರಿನಲ್ಲಿ ಮಲಗಿದಾಗ

ಜಗತ್ತಿನ ಭಾಷೆ, ವಿಚಾರ, ಕಲ್ಪನೆಗಳು

ನಾವು-ನೀವು ಎಲ್ಲವೂ ಅಪ್ರಸ್ತುತ

--೦--


ಮುಂಜಾನೆಯ ತಂಗಾಳಿ

ಬಿಟ್ಟು ಕೊಡಲಿದೆ ಯಾವುದೊ ರಹಸ್ಯ

ಮಲಗಿ ನಿದ್ದೆ ಹೋಗಬೇಡಿ


ನಿಮಗೆ ಏನು ಬೇಕು

ನೀವು ಕೇಳಿಯೇ ಪಡೆಯಬೇಕು

ಮಲಗಿ ನಿದ್ದೆ ಹೋಗಬೇಡಿ


ಎರಡು ಜಗತ್ತುಗಳು ಸಂಧಿಸುವ ಬಾಗಿಲಿನಿಂದ

ಜನ ಒಳಗೆ-ಹೊರಗೆ ಚಲಿಸುತ್ತಲೇ ಇದ್ದಾರೆ


ಬಾಗಿಲು ತೆರೆದೇ ಇದೆ

ಮಲಗಿ ನಿದ್ದೆ ಹೋಗಬೇಡಿ

--೦--


ವಿಚಾರ ಮಾಡಬೇಡಿ

ಕಳೆದು ಹೋಗಬೇಡಿ


ಚಂದ್ರ ನಿಮ್ಮ ಹೃದಯ

ವಿಚಾರಗಳು ಅದರ ಮೇಲಿನ ಮುಸುಕು


ಮುಸುಕು ಸರಿಯಲಿ

ವಿಚಾರಗಳು ನೀರಲ್ಲಿ ಬಿದ್ದು ಹೋಗಲಿ

--೦--


ನಿನ್ನೆ ನಾನು ಮೇಧಾವಿ

ಜಗತ್ತನ್ನೇ ಬದಲಿಸ ಹೊರಟಿದ್ದೆ


ಇಂದು ನಾನು ಬುದ್ದಿವಂತ

ನನ್ನನ್ನು ಮಾತ್ರ ಬದಲಿಸುವೆ

--೦--


ಮಾತು ನದಿ

ಮೌನ ಸಮುದ್ರ


ಹುಡುಕುವುದು ಸಮುದ್ರವಾದರೆ

ನದಿಯಲ್ಲಿ ಕಳೆದು ಹೋಗುವುದೇಕೆ

--೦--

Monday, September 20, 2021

ಹಿರಿ ಮಗ, ಕಿರಿ ಸೊಸೆ ಮತ್ತು ಬಂಗಾರದಂತ ತಮ್ಮ

ಹಿರಿ ಮಗ, ಕಿರಿ ಸೊಸೆ ಆಗಬಾರದು ಎನ್ನುವುದು ಹಳೇ ಕಾಲದ ಗಾದೆ. ಆದರೆ ಆ ಕಾಲ ಈಗೆಲ್ಲಿ? ಹಿರಿ ಮಗ ಜವಾಬ್ದಾರಿ ತೆಗೆದುಕೊಳ್ಳುವುದು ಇರಲಿ, ಒಣ ಅಹಂಕಾರ ತೋರಿಸಿ ಮನೆಯರನ್ನೆಲ್ಲ ದಾರಿ ತಪ್ಪಿಸುವ ಉದಾಹರಣೆಗಳೇ ಹೆಚ್ಚು. ಹಾಗೆಯೇ ಕಿರಿ ಸೊಸೆ, ಮನೆಯವರನ್ನೆಲ್ಲ ಆರೈಕೆ ಮಾಡುವುದಕ್ಕಿಂತ, ಮನೆ ಗುಟ್ಟನ್ನು ರಟ್ಟು ಮಾಡಿ ಕುಟುಂಬದ ಮರ್ಯಾದೆ ಬೀದಿಗೆ ತಂದು ನಿಲ್ಲಿಸುವುದಕ್ಕೆ ಹಿಂದೂ ಮುಂದು ನೋಡುವುದಿಲ್ಲ. ಕಾಲಕ್ಕೆ ತಕ್ಕಂತೆ ಈ ಗಾದೆ ಮಾರ್ಪಾಡು ಮಾಡುವುದು ಅವಶ್ಯ ಇದೆಯೋನೋ?


ಆದರೆ ಸ್ವಲ್ಪ ವಿಚಾರ ಮಾಡಿ. ಹಿರಿ ಮಗ, ಕಿರಿ ಸೊಸೆ ಎಂದು ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿ ಹೊರಿಸುವ ತಾಯಂದಿರು ತಾವು ಸಣ್ಣವರಾಗಿದ್ದಾಗ ಅವರಿಗೆ ಅವರ ಅಪ್ಪನೇ ಜೀವನದಲ್ಲಿ ಮೊದಲ ಹೀರೋ ಆಗಿದ್ದ. ಆವರಿಗೆ ಅಪ್ಪನಿಗಿಂತ ಆದರ್ಶ ಪುರುಷ ಶ್ರೀರಾಮನೂ ಕೂಡ ಅಲ್ಲ. ಅವರು ಬೆಳೆದು ದೊಡ್ಡವರಾದಂತೆಲ್ಲ ಅವರ ಅಪ್ಪನಿಗೂ ಕೂಡ ವಯಸ್ಸಾಗಿಬಿಡುತ್ತದಲ್ಲವೇ? ಆಗ ಹೆಣ್ಣು ಮಕ್ಕಳು ತಮ್ಮ ತಮ್ಮನನ್ನು ಹೀರೋ ಮಾಡಿಬಿಡುತ್ತಾರೆ. ತಮ್ಮನ ವಾರಿಗೆಯ ಹುಡುಗರೆಲ್ಲ ಅವರ ಕಣ್ಣಿಗೆ ಪೋಲಿಗಳು, ಕುಡುಕರು, ಕೆಲಸಕ್ಕೆ ಬಾರದವರಂತೆ ಕಂಡರೆ, ಅಂತಹವರ ನಡುವಿನ ಅವರ ತಮ್ಮ ಮಾತ್ರ ಬಂಗಾರ. ಅದೆಂತ ಕುರುಡು ಪ್ರೀತಿಯೋ? ಮುಂದೆ ಅವರ ತಮ್ಮನಿಗೆ ಮದುವೆಯಾಗಿ ಅವನ ಸಂಸಾರ ಬೇರೆಯಾದಾಗ, ಅದೇ ಹೆಣ್ಣು ಮಕ್ಕಳು ತಮ್ಮ ದೊಡ್ಡ ಮಗನನ್ನು ಮುಂಚೂಣಿಗೆ ತರುತ್ತಾರೆ.


ಒಂದು ವೇಳೆ ನೀವು ನಿಮ್ಮ ಕುಟುಂಬದಲ್ಲಿ ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ಅಲ್ಲಿ ನಿಮ್ಮ ತಾಯಿಯೇ ನಿಮ್ಮನ್ನು ಹೀರೋ ಮಾಡಿರುತ್ತಾಳೆ. ಒಂದು ವೇಳೆ ನೀವು ಕಿರಿಯ ಮಗನಾಗಿದ್ದರೆ, ನಿಮ್ಮದೇ ಅದೃಷ್ಟ. ಮನೆಯಲ್ಲಿ ಬೇರೆಯವರ ಪ್ರೀತಿ ಸಿಗುತ್ತದೋ ಇಲ್ಲವೋ, ನಿಮ್ಮ ತಾಯಿ ಸಮಯಕ್ಕೆ ಸರಿಯಾಗಿ, ಬಿಸಿ ಬಿಸಿಯಾಗಿ ನೀವು ಕೇಳಿದ್ದು ಮಾಡಿ ಬಡಿಸುತ್ತಾಳೆ. ಒಂದು ವೇಳೆ ನೀವು ಹಿರಿ ಮಗ ಅಲ್ಲ ಆದರೆ ನಿಮಗೆ ಅಕ್ಕ ಇದ್ದರೆ, ಅವಳು ಅಲ್ಪ ಸಮಯಕ್ಕಾದರೂ ನಿಮ್ಮನ್ನು ಕೇಂದ್ರ ಬಿಂದುವನ್ನಾಗಿ ಮಾಡುತ್ತಾಳೆ. ನೀವು ಹಿರಿ ಮಗನೂ ಅಲ್ಲ, ನಿಮಗೆ ಸೋದರಿಯೂ ಇಲ್ಲ ಎಂದರೆ ಏನು ಚಿಂತೆ ಇಲ್ಲ. ನಿಮ್ಮನ್ನು ಹೀರೋ ಮಾಡಲು ಇದ್ದಾಳೆ ನಿಮ್ಮ ಮಗಳು.


ಒಂದು ವೇಳೆ ನೀವು ನಡುವಿನ ಮಗನಾಗಿದ್ದರೆ, ನೀವು ಮಕ್ಕಳೆಷ್ಟು ಎಂದು ಕೇಳಿದಾಗ ಮಾತ್ರ ಲೆಕ್ಕಕ್ಕೆ ಉಂಟು. ನೀವು ಏನು ಸಾಧಿಸಿದರೂ ಅದನ್ನು ನಿಮ್ಮ ತಾಯಿ ಒಪ್ಪುವುದಿಲ್ಲ. ಅವಳಿಗೆ ದೊಡ್ಡ ಮಗನೇ ಹೀರೋ. ನಿಮ್ಮ ಸೋದರಿಗೆ ಹಲವಾರು ಸೋದರರಿದ್ದರೆ, ಸರ್ಕಸ್ ನಲ್ಲಿ ಜೋಕರ್ ನಾಲ್ಕಾರು ಚೆಂಡುಗಳನ್ನು ಒಂದಾದರ ನಂತರ ಒಂದರಂತೆ ತೂರುತ್ತಾ ಕೈ ಬದಲಾಯಿಸುತ್ತಾನಲ್ಲ. ಆ ಚೆಂಡಿನ ಪರಿಸ್ಥಿತಿ ನಿಮ್ಮದು. ನಿಮಗೆ ಮಗಳು ಕೂಡ ಇರದಿದ್ದರೆ, ನಿಮ್ಮಷ್ಟು ದುರದೃಷ್ಟವಂತರು ಬೇರಿಲ್ಲ. ಏಕೆಂದರೆ ನಿಮ್ಮನ್ನು ಹೀರೋ ಮಾಡಲು ನಿಮ್ಮ ತಾಯಿ, ಸೋದರಿ, ಮಗಳು ಯಾರು ನಿಮ್ಮ ಜೊತೆಗಿಲ್ಲ. ನಿಮ್ಮ ಹೆಂಡತಿಗೆ ಹೀರೋ ಆಗಲು ಅವಳ ಅಪ್ಪ, ತಮ್ಮ ಮತ್ತು ಮಗ ಇದ್ದಾರೆ. ಹಾಗಾಗಿ ನಿಮ್ಮ ಹೆಂಡತಿಗೆ ನೀವು ಗಂಟು ಬಿದ್ದ ಶನಿ ಮಾತ್ರ. ನಾನಾದಕ್ಕೆ ಇವರ ಜೊತೆ ಸಂಸಾರ ಮಾಡುತ್ತಿದ್ದೇನೆ ಎನ್ನುವಂತೆ ಅವಳು ವರ್ತಿಸುತ್ತಿರುತ್ತಾಳೆ. ನೀವು ಏನೇ ಕೆಲಸ ಸಾಧಿಸಿದರೂ, ಅದರ ಕ್ರೆಡಿಟ್ಟು ತನ್ನ ತಂದೆಗೆ, ತಮ್ಮನಿಗೆ ಇಲ್ಲವೇ ಮಗನಿಗೆ ಕೊಡುತ್ತಾಳೆ.


ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ನೀವು ಹೀರೋ ಆಗುವುದರಲ್ಲಿ ನೀವು ಸಾಧಿಸಿದ್ದಕ್ಕಿಂತ ನಿಮ್ಮ ತಾಯಿಯೇ ಪಾತ್ರವೇ ಹೆಚ್ಚಿತ್ತು. ಅದು ಕುಂತಿ ಧರ್ಮರಾಯನನ್ನು ಮುಂದಿಟ್ಟ ಹಾಗೆ. ನೀವು ಕಿರಿಯ ಮಗನಾಗಿದ್ದರೆ, ನಿಮ್ಮ ತಾಯಿಯ ಸಾವಿನ ನಂತರ ನಿಮ್ಮ ಬದುಕು ಧುರ್ಭರವಾಗುತ್ತದೆ. ನಿಮಗೆ ಸೋದರಿ ಇದ್ದರೆ ಜೀವನದ ಮೊದಲ ಭಾಗದಲ್ಲಿ ಮತ್ತು ಮಗಳು ಇದ್ದರೆ ಜೀವನದ ಕೊನೆಯಲ್ಲಿ ಮರ್ಯಾದೆ. ಅವೆರಡು ಇಲ್ಲದೆ ಹೋದರೆ ನೀವು ಮನೆಯಲ್ಲಿ ಯಾರಿಂದಲೂ, ಯಾವ ಕಾಲಕ್ಕೂ ಸೈ ಅನ್ನಿಸಿಕೊಳ್ಳದ ಅಂತರ್ ಪಿಶಾಚಿ ಮಾತ್ರ.

ಉದ್ವೇಗಗಳು ಕಡಿಮೆಯಾದಾಗ ಆ ಜಾಗದಲ್ಲಿ ವಿವೇಕ ತುಂಬಿಕೊಳ್ಳುತ್ತದೆ

ನೀವು ಯಾವುದೊ ಸಿನಿಮಾ ನೋಡಲು ಹೋಗಿರುತ್ತೀರಿ. ಅದು ನಿಮಗೆ ಇಷ್ಟವಾಗಿ ಬಿಡುತ್ತದೆ. ಸ್ವಲ್ಪ ಸಮಯದ ನಂತರ ಅದನ್ನು ಇನ್ನೊಮ್ಮೆ ನೋಡಲು ಹೋಗುತ್ತೀರಿ. ಈ ಸಲ ನಿಮಗೆ ಆ ಸಿನಿಮಾ ಮೊದಲ ಸಲ ನೋಡಿದ್ದಕ್ಕಿಂತ ಚೆನ್ನಾಗಿ ಅರ್ಥವಾಗುತ್ತದೆ. ಅದೇಕೆ? ನೋಡಿದ್ದು ಅದೇ ಸಿನಿಮಾ, ಅವೇ ಕಣ್ಣುಗಳ ಮೂಲಕ. ಬದಲಾಗಿದ್ದು ಏನು? ಅಲ್ಲಿ ಬದಲಾಗಿದ್ದು ನಿಮ್ಮ ಮನಸ್ಥಿತಿ. ಮೊದಲ ಸಲ ಕುತೂಹಲದಿಂದ ಸಿನಿಮಾ ನೋಡಿರುತ್ತೀರಿ. ಅದು ನಿಮ್ಮ ಭಾವನೆಗಳನ್ನು ಬಡಿದೆಬ್ಬಿಸಿರುತ್ತದೆ. ಆಗ ನಿಮ್ಮ ಕಣ್ಣು ನೋಡಿದ್ದು ನಿಮ್ಮ ಮನಸ್ಸು ಸಂಪೂರ್ಣ ಗ್ರಹಿಸಲು ಸಾಧ್ಯವಾಗದೆ ಹೋಗುತ್ತದೆ. ಎರಡನೆಯ ಸಲ ಸಿನಿಮಾ ನೋಡಿದಾಗ ನಿಮಗೆ ಮೊದಲಿನ ಕುತೂಹಲ ಇಲ್ಲ. ಮತ್ತು ನಿಮ್ಮ ಭಾವನೆಗಳು, ಉದ್ವೇಗಗಳು ನಿಮ್ಮ ಹಿಡಿತದಲ್ಲಿ ಇವೆ. ಹಾಗಾಗಿ ನಿಮ್ಮ ಕಣ್ಣು ನೋಡಿದ್ದು, ನಿಮ್ಮ ಮನಸ್ಸಿನ ಗ್ರಹಿಕೆಗೆ ಸಂಪೂರ್ಣ ಬರಲು ಸಾಧ್ಯವಾಯಿತು. ಕಣ್ಣು ಮತ್ತು ಗ್ರಹಿಕೆಯ ನಡುವೆ ತಡೆಗೋಡೆಯಾಗಿದ್ದು ಭಾವನೆಗಳು. ಆ ಪರದೆ ಸರಿದ ಮೇಲೆ, ನೀವು ವಾಸ್ತವಕ್ಕೆ ಹತ್ತಿರವಾದಿರಿ.


ನಮ್ಮ ಮನಸ್ಸು ಹಲವಾರು ಕಾರ್ಯಗಳನ್ನು ನಿಭಾಯಿಸುತ್ತದೆ. ವಿಷಯಗಳನ್ನು ಗ್ರಹಿಸುವುದು, ನೆನಪಿಡುವುದು, ವಿಚಾರ ಮಾಡುವುದು, ಭಾವನೆಗಳನ್ನು ಹೊಮ್ಮಿಸುವುದು ಹೀಗೆ ಇವೆಲ್ಲವುಗಳನ್ನು ಒಟ್ಟಾಗಿ ನಾವು ಮನಸ್ಸು ಎನ್ನುತ್ತೇವೆ. ಇವುಗಳಲ್ಲಿ ಭಾವನೆಗಳು ಅವಶ್ಯಕವು ಹೌದು ಆದರೆ ಅವು ಅತಿಯಾದಾಗ ಮನಸ್ಸಿನ ಉಳಿದ ಕಾರ್ಯಗಳು ಮಸುಕಾಗಿ ಬಿಡುತ್ತವೆ. ಭಾವನೆಗಳು ಹೆಚ್ಚಾದಾಗ ಅವು ಉದ್ವೇಗಗಳಾಗಿ ಬದಲಾಗಿ ನಮ್ಮ ಅಹಂ ಅನ್ನು ಪೋಷಿಸುತ್ತವೆ. ಉದ್ವೇಗಗಳು ಹಿಡಿತದಲ್ಲಿ ಇರದ ಮನುಷ್ಯನನ್ನು ಗಮನಿಸಿ ನೋಡಿ. ಅವನಲ್ಲಿ ವಿವೇಕ ಎನ್ನುವುದು ಸಂಪೂರ್ಣ ಮರೆಯಾಗಿ ಹೋಗಿರುತ್ತದೆ. ಆದರೆ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು, ದೊಡ್ಡ ದೊಡ್ಡ ಸೋಲುಗಳು, ಹತ್ತಿರದವರ ಮರಣ ಇತ್ಯಾದಿ ಮನುಷ್ಯನ ಅಹಂ ಅನ್ನು ಘಾಸಿಗೊಳಿಸುತ್ತವೆ. ಅಹಂ ಕುಗ್ಗಿದಾಗ, ಆ ಜಾಗದಲ್ಲಿ ಕ್ರಮೇಣ ವಿವೇಕ ತುಂಬಿಕೊಳ್ಳುತ್ತದೆ. ಪ್ರಜ್ಞೆ ಜಾಗೃತವಾಗುತ್ತ ಹೋಗುತ್ತದೆ. ಏಕೆಂದರೆ ಈಗ ಅವನಿಗೆ ಉದ್ವೇಗಗಳ ತೀವ್ರತೆ ಕಡಿಮೆಯಾಗಿ, ವಾಸ್ತವದ ಸರಿಯಾದ ಗ್ರಹಿಕೆ ಸಾಧ್ಯವಾಗಿದೆ. ಅಲ್ಲಿಂದ ಮುಂದೆ ಅವನು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಲು ಸಾಧ್ಯ. ಅವನೀಗ ಅಹಂ ಅನ್ನು ಪೋಷಿಸುವ ಭಾವನೆಗಳನ್ನು ಮೀರಿ ಬೆಳೆದಿದ್ದಾನೆ.


ಈ ವಿಷಯ ಬೇಗ ಅರ್ಥವಾದಷ್ಟು ನಮಗೆ ಒಳ್ಳೆಯದು. ಭಾವನೆಗಳು ಹುಟ್ಟಿಸುವ ಭ್ರಮಾಲೋಕಕ್ಕಿಂತ, ವಾಸ್ತವದಲ್ಲಿ ಬದುಕಿದಷ್ಟು ವಾಸಿ. ನಿಮ್ಮ ಮನೆಯಲ್ಲಿ ತಾನೇ ದೊಡ್ಡವನು ಎನ್ನುವ ಅಹಂ  ಯಾರಿಗಾದರೂ ಇದ್ದರೆ, ಅವರನ್ನು ಮೊದಲು ಸೋಲಲು ಬಿಡಿ. ಅದೇ ಅವರಿಗೆ ನೀವು ನೀಡುವ ದೊಡ್ಡ ನೆರವು. ಸೋತ ನಂತರ ಕ್ರಮೇಣ ಅವರು ಪ್ರಜ್ಞಾವಂತರಾಗಲು ಸಾಧ್ಯ. ಅದು ಬಿಟ್ಟು ಅವರ ಅಹಂ ಅನ್ನು ಪೋಷಿಸದರೆ ಅವರು ಬದಲಾಗುವುದು ಸಾಧ್ಯವೇ ಇಲ್ಲ. ಹಾಗೆಯೇ ನಮ್ಮ ಮಕ್ಕಳು ಏನಾದರೂ ಕೇಳಿದಾಗ, ಅದನ್ನು ಕೇಳಿದ ತಕ್ಷಣ ಕೊಡಿಸಿಬೇಡಿ. ಮುಂದೊಂದು ದಿನ ನೀವು ಕೊಡಿಸುವುದಿಲ್ಲ ಎಂದಾಗ ಅವರು ಭಾವನಾತೀತರಾಗಿ, ಉದ್ವೇಗಕ್ಕೆ ಬಿದ್ದು ನಿಮ್ಮ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಅದರ ಬದಲು, ಕಾಯುವಿಕೆ ಹುಟ್ಟಿಸುವ ವಿವೇಕವನ್ನು ಸಣ್ಣ ವಯಸ್ಸಿನಿಂದಲೇ ಕಲಿಸಿ ಕೊಡಿ. ಅದು ಅವರನ್ನು ಪ್ರಜ್ಞಾವಂತರನ್ನಾಗಿಸುವದಕ್ಕೆ ಸಹಾಯವಾಗುತ್ತದೆ.


ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಭಾವನೆಗಳನ್ನು, ಉದ್ರೇಕಗಳನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು ಅಲ್ಲವೇ? ಅದು ಮಾತನಾಡಿದಷ್ಟು ಸುಲಭ ಅಲ್ಲ. ಆದರೆ ನಮ್ಮನ್ನು ನಾವು ಗಮನಿಸುತ್ತಾ ಹೋದಾಗ ಕ್ರಮೇಣ ಅವುಗಳ ತೀವ್ರತೆ ಕಡಿಮೆಯಾಗಲು ಸಾಧ್ಯ. ಆದರೆ ಅದನ್ನು ಗೆದ್ದ ನಂತರ, ನಮ್ಮ ಮನಸ್ಸಿಗೆ ಹತ್ತು ಆನೆ ಬಲ ಬರುತ್ತದೆ. ಅಲ್ಲಿಂದ ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮನ್ನು ಪ್ರಗತಿಯ ಪಥಕ್ಕೆ ಒಯ್ಯುತ್ತವೆ.

Sunday, September 19, 2021

Nine Unknown Men of Ashoka

We are aware of the 8 jewels in the court of Srikrishnadevaraya. Akbar and Vikramaditya had ‘Navaratna’ – nine gems in their courts. All of that is documented in history. But the secret organization of 9 men built by King Ashoka is not documented anywhere. We can’t say for sure if it was a plain myth or such an attempt was made by the king who was known for his reputation for nation building. Let us look at some information available.


Myth says, these 9 men had responsibilities for developing nine different fields of science and sociology, preserving them, and ensuring they don’t fall into wrong hands. These nine men before their retirement had to pass on their work and responsibilities to the newly recruited men who would remain anonymous and continue their work. It was designed to be secretive and never ending.


Look on the internet, you will find many novels written about these nine men and interestingly most of those authors are non-Indians. There are several videos and short movies made on these nine men asking us to believe that they exist and operate even today.


One of the videos describes the nine streams which the secret organizations worked on were:

1. Propaganda (Including Psychological Warfare)

2. Physiology (Skills like how to kill a person by touching nerve pulse)

3. Microbiology (Developing vaccines)

4. Alchemy (Transmutation of metals)

5. Communication (With other members of space, cosmos)

6. Gravity (Building anti-gravity flying machines)

7. Cosmogony (Secrets of Universe and time travel)

8. Light (Changing speed of light to use it as a weapon)

9. Sociology (Create, nurture, and destroy civilizations)


These nine fields would be of interest to any dictator in today’s world. Most of the scientific research in the modern world is going on in these streams only. We know King Ashoka was ambitious but was it possible for him and his 9 men to have the understanding that these streams would gain prominence with the advancement of civilization?


All of Ashoka’s edicts convey that he was a peace-lover, but they don’t give any clues about his nine men. I went through multiple biographies of Ashoka and the history of contemporary people lived in his time, there are no slightest evidences that he had either dreamed of this secret organization or worked towards it. Well, you can ask if it was meant to be secretive, why would they leave traces of it? Agree, but look at what happened after Ashoka. The Maurya kingdom itself fell soon after the demise of Ashoka. His grandson was the only successor to Ashoka who died in a battlefield and with that most of Ashoka’s work too fell on the wayside. Was it bad luck of these nine men who could not prevent downfall of their master's works? Do you think they tried but failed? Or is it safe to say, they chose to distance themselves but continued their work?


My opinion is, though King Ashoka’s work was admired by most, it is unlikely that he had built such an organization. My heart wishes he had the vision to build such a thing. That would have helped India and the global population advance at a rapid pace and peacefully as well. But the fact is, there are no gatekeepers to science or knowledge of any subject. Looking at how advancement of science has been used for war and destructions, the purpose of nine men and that of Ashoka has been defeated throughout the history which renders that these nine men were nothing but an impressive fiction. Even if they existed, they were not successful in their mission.

Saturday, September 18, 2021

ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ

"ಕಲ್ಲರಳಿ ಹೂವಾಗಿ,

ಹೂವರಳಿ ಹೆಣ್ಣಾಗಿ"


ಹೀಗೆ ಸಾಗುತ್ತದೆ 'ಕಲ್ಲರಳಿ ಹೂವಾಗಿ' ಚಲನಚಿತ್ರದ ಒಂದು ಗೀತೆ. ಇದು ಒಳ್ಳೆ ಗೀತೆ, ಅದರಲ್ಲೇನಿದೆ ವಿಶೇಷ ಎನ್ನುತ್ತೀರಾ? ನೂರಾರು ಕೋಟಿ ವರುಷಗಳ ದೀರ್ಘ ಕಾಲದಲ್ಲಿ ಮನುಜ ಕುಲ ವಿಕಾಸ ಹೊಂದಿದ ಬಗೆಯನ್ನು ಒಬ್ಬ ಕವಿ ಎರಡು ಸಾಲುಗಳಲ್ಲಿ ಹೇಳಿದ ಬಗೆ ಅಚ್ಚರಿ ಮೂಡಿಸಿತು. ಹಾಡಿನ ಮೊದಲು ಎರಡು ಸಾಲುಗಳು ಅಕ್ಷರಶ ಸತ್ಯ ಎನ್ನುವುದು ಜೀವಶಾಸ್ತ್ರ ಓದಿ ನಾನು ಧೃಢಪಡಿಸಿಕೊಂಡೆ. 


ನಾವು ಉಸಿರಾಡುವುದು ಆಕ್ಸಿಜನ್. ಅದು ನಮಗೆ ಜೀವ ಕೊಟ್ಟರೂ, ಆಕ್ಸಿಜನ್ ಅಣು ಮಾತ್ರ ನಿರ್ಜಿವ ವಸ್ತು. ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿ ಆಗುವ ನೀರು ನಮ್ಮ ಜೀವನಕ್ಕೆ ಅವಶ್ಯಕ. ಆದರೆ ಅದು ಕೂಡ ನಿರ್ಜಿವ ವಸ್ತು. ಇವೆರಡಕ್ಕೆಇನ್ನೆರಡು ನಿರ್ಜಿವ ಕಾರ್ಬನ್ ಮತ್ತು ನೈಟ್ರೋಜನ್ ವಸ್ತುಗಳ ಅಣುಗಳು ಒಟ್ಟಾಗಿ ಸೇರಿ ಅಮೈನೊ ಆಸಿಡ್ ಆಯಿತು. ಈ ಅಮೈನೊ ಆಸಿಡ್ ಸರಪಣಿಯ ಹಾಗೆ ಜೊತೆಗೊಂಡು, ಪ್ರೊಟೀನ್ ಆಯಿತು. ಅದು ಜೀನ್ ಬೆಳವಣಿಗೆಗೆ ಕಾರಣವಾಯಿತು. ಅಲ್ಲಿಂದ ಏಕ ಕೋಶ ಜೀವಿಗಳ ಉಗಮ ಆಯಿತು. ನಿರ್ಜಿವ ಕಲ್ಲರಳಿ ಜೀವ ವಿಕಾಸವಾಯಿತು. 


ಆ ಜೀವಗಳು ವಿಕಾಸ ಹೊಂದುತ್ತ ಹಲವಾರು ವೈವಿಧ್ಯಮಯ ಜಲಚರ, ಸರಿಸೃಪಗಳು, ಮರಗಳು ಸೃಷ್ಟಿಗೊಂಡವು. ಮರಗಳಲ್ಲೇ ವಿವಿಧ ಬಗೆಯ ಮರಗಳ ಸೃಷ್ಟಿಯಾಯಿತು. ಆ ಮರಗಳು ದುಂಬಿಗಳನ್ನು ಆಕರ್ಷಿಸಲು ಪೈಪೋಟಿ ನಡೆಸಲೆಂದು ಹುಟ್ಟಿಕೊಂಡಿದ್ದೇ ಹೂವು. ಕಣ್ಣುಸೆಳೆಯುವ ಬಣ್ಣಗಳು,  ಆಕರ್ಷಕ ವಿನ್ಯಾಸ, ಘಮ್ಮೆನ್ನುವ ಸುವಾಸನೆ ಇವೆಲ್ಲವುಗಳು ಹೂಗಳಲ್ಲಿ ಅಡಕಗೊಂಡವು.  ಪ್ರಕೃತಿ ವಿಕಾಸ ಕಲ್ಲಿಗೆ ಜೀವ ತುಂಬಿ, ಸೌಂದರ್ಯದ ಹೂ ಅರಳಿಸಿತು.


ಪ್ರಕೃತಿ ವಿಕಾಸದ ಇತ್ತೀಚಿನ ಹಂತದಲ್ಲಿ ಹುಟ್ಟಿ ಬಂದದ್ದು ಸಸ್ತನಿಗಳು ಮತ್ತು ಕೊನೆಯಲ್ಲಿ ಮಾನವ. ಪ್ರಕೃತಿ ಅಲ್ಲಿಯವೆರೆಗೂ ಕಲಿತುಕೊಂಡು ಬಂದದ್ದೆನ್ನೆಲ್ಲಾ ಮಾನವನ ಸೃಷ್ಟಿಯಲ್ಲಿ ಧಾರೆ ಎರೆಯಿತು. ಹೂವಿನ ಸೌಂದರ್ಯ, ಆಕರ್ಷಣೆಗಳನ್ನು ವಿವೇಕದ ಜೊತೆಗೂಡಿಸಿ ಹೆಣ್ಣಾಗಿಸಿತು. ಹೂ ಅರಳಿ ಹೆಣ್ಣಾಯಿತು. ಪ್ರಕೃತಿ ಹೆಣ್ಣಿನಲ್ಲಿ ಬರಿ ಅಂದವನ್ನಷ್ಟೇ ತುಂಬದೇ, ಕಂದಮ್ಮಗಳ ಆರೈಕೆಯ ಜವಾಬ್ದಾರಿಯನ್ನು ಹೊರಿಸಿತು. ಗಮನಿಸಿ ನೋಡಿ. ನಾವು ನೀರಿಗೆ ಗಂಗೆ, ಭಾಗೀರಥಿ ಎನ್ನುತ್ತೇವೆ. ಆಹಾರಕ್ಕೆ ಅನ್ನಪೂರ್ಣೆಯನ್ನು ಪೂಜಿಸುತ್ತೇವೆ. ಸಂಪತ್ತಿಗೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ ಮಾನವ ಕಲ್ಯಾಣದ ಜವಾಬ್ದಾರಿಯನ್ನು ಪ್ರಕೃತಿ ಹೆಣ್ಣಿನ ಹೆಗಲೇರಿಸಿತು. ಇನ್ನೊಂದು ಅರ್ಥದಲ್ಲಿ ಪ್ರಕೃತಿಯೇ ಹೆಣ್ಣಾಗಿ ಬದಲಾಯಿತು.


ಹೀಗೆ ಕಲ್ಲು, ಹೂವಾಗಿ, ಹೆಣ್ಣಾಗಿ ಬದಲಾಗಲು ಕೋಟ್ಯಂತರ ವರುಷ ತೆಗೆದುಕೊಂಡರೂ, ಆ ಪ್ರಕ್ರಿಯೆಯನ್ನು ಪ್ರಾಸಬದ್ಧ ಪದಗಳಲ್ಲಿ ಒಂದು ಹಾಡಾಗಿ ಕೇಳುವುದು ಎಷ್ಟು ಚೆಂದ ಅಲ್ಲವೇ?

Thursday, September 16, 2021

ಗೈಡ್ ಎನ್ನುವ ವಿಲಕ್ಷಣ ಚಿತ್ರ

'ಮಾಲ್ಗುಡಿ ಡೇಸ್' ಬರೆದ ಆರ್.ಕೆ.ನಾರಾಯಣ್ ಸೃಜನಶೀಲ ಕಥೆಗಳಿಗೆ ಹೆಸರಾದವರು. ಅವರ ಶೈಲಿ, ಸ್ವಭಾವಕ್ಕೆ ವಿರುದ್ಧ ಎನ್ನಿಸುವ ಕಥಾ ವಸ್ತು ಹೊಂದಿದ್ದ 'ಗೈಡ್'  ಎನ್ನುವ ಕಿರುಕಾದಂಬರಿಯನ್ನು ಅವರು ಬರೆದರು. ಅದೇ ಆಶ್ಚರ್ಯ ಎಂದರೆ ಇನ್ನೂ ಆಶ್ಚರ್ಯವೆನ್ನುವಂತೆ ಅದು ೧೯೬೫ ರಲ್ಲಿ ಹಿಂದಿಯಲ್ಲಿ ಚಲನ ಚಿತ್ರವಾಗಿ ಬಿಟ್ಟಿತು ಕೂಡ. ಅದರ ಕಥಾ ವಸ್ತು ಹೀಗಿದೆ.


ನಾಟ್ಯ ಪ್ರವೀಣೆಯಾದ ನಾಯಕಿಗೆ, ಅವಳನ್ನು ಆದರಿಸದ ಗಂಡ. ಪ್ರವಾಸದ ಸಮಯದಲ್ಲಿ ಊರು ಸುತ್ತಾಡಿಸುವ ಲವಲವಿಕೆಯ 'ಗೈಡ್' ನಲ್ಲಿ ಅವಳಿಗೆ ಪ್ರೇಮಾಂಕುರವಾಗುತ್ತದೆ. ಮದುವೆಯನ್ನು ತೊರೆದು ಹೊರ ಬಂದು ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾಳೆ. ಕಥಾನಾಯಕ ಗೈಡ್ ನ ಸಹಾಯದಿಂದ ಯಶಸ್ಸಿನ ಮೆಟ್ಟಿಲೇರುತ್ತಾಳೆ. ಅವಳ ನೃತ್ಯ ಪ್ರದರ್ಶನ ನೋಡಲು ಜನ ಮುಗಿಬೀಳುತ್ತಾರೆ. ಆಗ ಹರಿದು ಬಂದ ದುಡ್ಡನ್ನು ನಾಯಕ ದುರುಪಯೋಗ ಮಾಡಿಕೊಳ್ಳುತ್ತಾನೆ. ನಾಯಕಿ ನೀಡಿದ ದೂರಿನ ಆಧಾರದ ಮೇಲೆ ನಾಯಕ ಜೈಲು ಪಾಲಾಗುತ್ತಾನೆ. ಸಮಾಜವನ್ನು ಎದುರು ಹಾಕಿಕೊಂಡು ನಾಯಕಿಗೆ ಆಶ್ರಯ ನೀಡಿದ ನಾಯಕನಿಗೆ ಅದರಿಂದ ಆಘಾತವಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ ಗೊತ್ತು ಗುರಿಯಿಲ್ಲದೆ ಅಲೆಯುತ್ತಾನೆ. ದಾರಿಯಲ್ಲಿ ಅವನ ಬಟ್ಟೆಗಳು ಹರಿದು ಅವನ ಅವತಾರವೇ ಬದಲಾಗುತ್ತದೆ. ಒಂದು ಹಳ್ಳಿಯಲ್ಲಿ ಮುಗ್ಧ ಜನರು ಅವನನ್ನು ಸಂತ ಎಂದುಕೊಳ್ಳುತ್ತಾರೆ. ನಾಯಕ ಅದನ್ನು ನಿರಾಕರಿಸುವುದಿಲ್ಲ. ಅವನು ಸಂತನಾಗಿ ಪ್ರಸಿದ್ಧಿಯಾಗಿ, ನಾಯಕಿ ಮತ್ತೆ ಅವನನ್ನು ಹುಡುಕಿ ಬರುವಷ್ಟರಲ್ಲಿ ನಾಯಕನ ಕಥೆಯು ಮುಗಿಯುತ್ತದೆ.


ವಿಲಕ್ಷಣ ಎನ್ನಿಸುವ ಈ ಕಥೆಯಲ್ಲಿ, ನಾಯಕ-ನಾಯಕಿ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದು ದೇವ್ ಆನಂದ್ ಮತ್ತು ವಹೀದಾ ರೆಹಮಾನ್. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಹಾಡಿದ ಹಾಡುಗಳು ಅಜರಾಮರ ಎನ್ನುವ ಹಾಗಿವೆ. ಈ ಚಿತ್ರ ಮತ್ತು ಅದರ ಹಾಡುಗಳು ಹಿಂದಿ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾದವು. ಹೆಣ್ಣಿನ ಮನಸ್ಸಿನ ಕಂದಕಗಳನ್ನು ಮತ್ತು ಗಂಡಿನ ಸ್ವಭಾವದ ವಿಚಿತ್ರ ತಿರುವುಗಳನ್ನು ಸೇರಿಸಿ ಇಂತಹ ಒಂದು ಕಥೆ ಹೆಣೆದ ಆರ್.ಕೆ.ನಾರಾಯಣ್ ಮತ್ತು ಅದನ್ನು ಚಲನಚಿತ್ರವನ್ನಾಗಿಸಿ ಜನರಿಗೆ ತಲುಪಿಸಿದ ದೇವ್ ಆನಂದ್ ಇಬ್ಬರ ಧೈರ್ಯ ಮೆಚ್ಚುವಂತಹದ್ದು. ಮದುವೆಯಾಗದೆ ಜೊತೆಗಿರುವ ಗಂಡು-ಹೆಣ್ಣಿನ ಸಂಘರ್ಷಗಳನ್ನು ಹೊತ್ತ ಈ ಚಿತ್ರ  ೬೦ ರ ದಶಕದಲ್ಲಿ ತೆರೆ ಕಂಡಿದ್ದು, ಅದು ಸಮಯಕ್ಕೂ ಬಹಳ ಮುನ್ನವೇ ಬಂದ ಹಾಗಿತ್ತು. ಆದರೂ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಗಳಿಸುವುದರ ಜೊತೆಗೆ ಚಿತ್ರದಲ್ಲಿ ಭಾಗಿಯಾದ ಎಲ್ಲರಿಗೂ ಹೆಸರು ತಂದು ಕೊಟ್ಟಿತು. ಈಗಾಗಲೇ ನೀವು ಈ ಚಿತ್ರ ನೋಡಿರದಿದ್ದರೆ, ಒಮ್ಮೆ ಯಾಕೆ ನೋಡಬಾರದು?

  


ಪಾತ್ರಗಳ ನಡುವಿನ ಶುಭ್ರ ಬಿಳಿಯ ವಸ್ತ್ರ

'ಭಕ್ತ ಕುಂಬಾರ' ಚಿತ್ರದಲ್ಲಿ 'ಹರಿ ನಾಮವೇ ಚಂದ, ಅದ ನಂಬಿಕೊ ಕಂದಾ' ಎಂದು ಹಾಡುವ ರಾಜಕುಮಾರ್, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ 'ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ' ಎಂದು ಹಾಡುತ್ತಾರೆ. ಎಂಥಹ ವಿರೋಧಾಭಾಸ? ಒಂದರಲ್ಲಿ ಹರಿ ಭಕ್ತ, ಇನ್ನೊಂದರಲ್ಲಿ ಹರಿಯ ಪರಮ ವೈರಿ. ನೀರು ತಾನಿಟ್ಟ ಪಾತ್ರೆಯ ಆಕಾರಕ್ಕೆ ಒಗ್ಗಿಕೊಳ್ಳುವಂತೆ, ಅಣ್ಣಾವ್ರಿಗೆ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುತ್ತ ಹೋಗಲು ಹೇಗೆ ಸಾಧ್ಯವಾಯಿತು? ಏಕೆಂದರೆ ಅವರು ಯಾವುದೇ ಪ್ರತಿಷ್ಠೆಗೆ ಗಂಟು ಬೀಳಲಿಲ್ಲ. ಮೇಕಪ್ ಅಳಿಸಿದ ಮೇಲೆ ಅವರು ತಾವು ನಟಿಸಿದ ಪಾತ್ರಗಳಿಂದ ಹೊರ ಬಂದು ಬಿಡುತ್ತಿದ್ದರು. ಶುಭ್ರ ಬಿಳಿಯ ಬಟ್ಟೆ ಧರಿಸಿ ತಮ್ಮ ವ್ಯಕ್ತಿತ್ವವನ್ನು ಸರಳವಾಗಿಟ್ಟು ಕೊಂಡಿದ್ದರು. ಹೊಸ ಪಾತ್ರಕ್ಕೆ ತಕ್ಕಂತೆ ಬಣ್ಣದ ಬಟ್ಟೆ, ಪಾತ್ರ ಮುಗಿದ ನಂತರ ವಾಪಸ್ಸು ಬಿಳಿಯ ಬಟ್ಟೆ. ಅದಕ್ಕೆ ಅವರಿಗೆ ವೈವಿಧ್ಯಮಯ ಮತ್ತು ವಿರೋಧಾಭಾಸದ ಪಾತ್ರಗಳನ್ನು ತನ್ಮಯತೆಯಿಂದ ಮಾಡಲು ಸಾಧ್ಯವಾಯಿತು.


ನಮ್ಮ ಜೀವನ ಅಷ್ಟೊಂದು ವೈವಿಧ್ಯಮಯ ಅಲ್ಲದಿದ್ದರೂ, ಹಲವು ಪಾತ್ರಗಳನ್ನು ನಾವು ಕೂಡ ನಿಜ ಜೀವನದಲ್ಲಿ ನಿಭಾಯಿಸಬೇಕಾಗುತ್ತದೆ. ಹಿಂದೆ ನನ್ನ ತಲೆಯ ಮೇಲೆ ಕೂಡಿಸಿಕೊಂಡು ಮೆರೆಸಿದ ವ್ಯಕ್ತಿಗಳ ವಿರುದ್ಧ ಇಂದು ನಾನು ತಿರುಗಿ ಬಿದ್ದಿದ್ದೇನೆ. ಎಲ್ಲವು ಸರಿ ಇದ್ದಾಗ ರಾಗ, ಅದು ಮುಗಿದ ಮೇಲೆ ದ್ವೇಷ, ಈ ಹಗ್ಗ ಜಗ್ಗಾಟ ನಾನು ಮಾಡದಿದ್ದರೆ ಸರಿ ಇತ್ತೇನೋ ಅನ್ನಿಸಿದೆ. ಆದರೆ ಆ ಎರಡೂ ಪಾತ್ರಗಳ ನಡುವೆ ನಮಗೆ ಇನ್ನೊಂದು ವ್ಯಕ್ತಿತ್ವ ಇರಲು ಸಾಧ್ಯ ಎಂದು ನನಗೆ ಮೊದಲೇ ತಿಳಿದಿರಲಿಲ್ಲ. ಇಷ್ಟಕ್ಕೂ ನಾವು ಪಾತ್ರ ಮುಗಿದ ಮೇಲೆ ಅದರಿಂದ ಹೊರ ಬಂದು ಬಿಡಬೇಕು ಎನ್ನುವ ತಿಳುವಳಿಕೆ ಕೂಡ ತಡವಾಗಿ ಬಂತು.


ಪ್ರತಿಷ್ಠೆಗೆ, ನಾವು ಅಂದುಕೊಂಡ ಇಮೇಜ್ ಗೆ ಗಂಟು ಬೀಳುವುದನ್ನು ಮನಃಶಾಸ್ತ್ರದಲ್ಲಿ 'ego ' ಎಂದು ಹೇಳಿದರೆ, ಅಧ್ಯಾತ್ಮ ಪ್ರಪಂಚದಲ್ಲಿ ಅದೇ ಅಹಂ. ಯಾವುದರ ಜೊತೆಗೆ ನಾವು ಗುರುತಿಸಿಕೊಳ್ಳುತ್ತೇವೋ, ಅದು ನಮ್ಮನ್ನು ಯಶಸ್ಸಿನ ಶಿಖರಕ್ಕೆ ತಲುಪಿಸಬಹುದು ಅಥವಾ ಸೋಲಿನ ಪ್ರಪಾತಕ್ಕೂ ತಳ್ಳಬಹುದು. ಅದು ನಮ್ಮನ್ನು ಸೋಲು-ಗೆಲುವು, ರಾಗ-ದ್ವೇಷಗಳ ಮಾಯೆಯಲ್ಲಿ ಸಿಲುಕಿಸುತ್ತದೆ. ಯಶಸ್ಸು ತಲೆಗೇರಿ ಅಹಂಕಾರವಾಗಲೂಬಹುದು ಅಥವಾ ಸೋಲು ಹೃದಯದಾಳದಲ್ಲಿ ನೋವು, ಸಂಕಟಗಳ ಕಂದಕ ಸೃಷ್ಟಿಸಬಹುದು. ಅದೇ ನಾವು ಆ ಪಾತ್ರವಾಗದೆ ಹೋದರೆ, ಆ ಪಾತ್ರಕ್ಕೆ ಸಿಕ್ಕುವ ಮರ್ಯಾದೆ-ಅವಮರ್ಯಾದೆ ಎರಡನ್ನು ದೂರದಿಂದ ನಿಂತು ಗಮನಿಸಬಹದು.


ಇತ್ತೀಚಿಗೆ ಈ ಕಲಿಕೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತಿದ್ದೇನೆ. ನನ್ನನ್ನು ಮೆಚ್ಚುವವರನ್ನು, ನನ್ನ ಯಾವ ಪಾತ್ರವನ್ನು ಅವರು ಮೆಚ್ಚಿದ್ದು ಎಂದು ನಾನು ಗಮನಿಸುತ್ತಾ ಹೋಗುತ್ತೇನೆ. ಹಾಗೆಯೆ ನನ್ನನ್ನು ದ್ವೇಷಿಸುವವರು ಕೂಡ ನನ್ನ ಯಾವ ಪಾತ್ರವನ್ನು ಅವರು ದ್ವೇಷಿಸುತ್ತಾರೆ ಎನ್ನುವುದು ಕೂಡ ಗಮನಕ್ಕೆ ಬರುತ್ತಾ ಹೋಗುತ್ತದೆ. ನನಗೆ ಈಗ ಗೊತ್ತಾಗಿದೆ. ಲೌಕಿಕವಾಗಿ ಅವೆರಡು ನಾನೇ ಆದರೂ, ಮನದಾಳದಲ್ಲಿ ಅವೆರಡು ಪಾತ್ರಗಳು ನಾನಲ್ಲ. ಅವಶ್ಯಕತೆ ತಕ್ಕಂತೆ ಬಣ್ಣದ ಬಟ್ಟೆ ಧರಿಸುತ್ತೇನೆ. ಪಾತ್ರ ಮುಗಿದ ಮೇಲೆ ಬಿಳಿ ಬಟ್ಟೆ ಧರಿಸಲು ಮರೆಯುವುದಿಲ್ಲ. ರಾಜಕುಮಾರ್ ರಂತೆ ವೈವಿಧ್ಯಮಯ ಪಾತ್ರ ಅಭಿನಯಿಸುವಷ್ಟು ಪ್ರತಿಭೆ ನನಗಿಲ್ಲ. ಆದರೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಮತ್ತು ಆ ಪಾತ್ರಗಳು ನಾವಾಗದಂತೆ ಎಚ್ಚರ ವಹಿಸಬೇಕು ಎನ್ನುವುದನ್ನು ಮಾತ್ರ  ಅವರಿಂದ ಕಲಿತುಕೊಂಡಿದ್ದೇನೆ.