Showing posts with label Science. Show all posts
Showing posts with label Science. Show all posts

Monday, October 23, 2023

Innovate and survive

In a one-to-one fight with a Tiger, an average man has little or no chance of survival. But he used tools, developed weapons to fight from a distance. It all started with long sharpened sticks in the beginning, then with bow and arrows and by shooting bullets in the modern times. That is how human beings survived against the odds. By innovating, he overcame the shortfalls of deficiency in his physical strength against that of a Tiger and other larger & stronger animals. Necessity is the mother of innovation. The survival instincts made man innovate in order to survive.

Let us look at man's fight against similar species. Neanderthals were much stronger in built, aggressive in attitude, violent and ruthless in fighting when compared to Homo Sapiens. Despite those advantages, Neanderthals did not survive as Homo Sapiens learned to step back and observe. Sapiens learned to coordinate and fight in groups. They developed language for them to communicate effectively. Communication tools, ability to form larger groups, fighting from a place of advantage (like in ambush fights), helped Sapiens to take on much stronger species of human beings and survive. We, being decedents of such smart warrior species have further honed our survival skills.    

If you look at struggles within human beings, those communities and nations learned to innovate have come out stronger. For example, millions of Jews in Poland had died in the hands of Hitler. Fast forward a few decades to current times, Jews in Israel put up a strong fight if someone provokes them. Continuous struggles with neighbors made them build an iron dome, an ability to intercept the rockets fired into their borders. That system might not be entirely foolproof, but it improved their chances of survival and reduce the damage which their enemies intended to cause. Struggle to survive made them innovate new war strategies, build sophisticated weapons and handle their enemies with ease despite disadvantageous location of their country being surrounded by enemies in all directions. Enemies of Israel did not innovate at the pace of Israel, so in the recent war they fired crude rockets into Israel and got back much precise and powerful missiles in return. It is much of a war of innovation than a hand to hand or eyeball to eyeball fight between the soldiers.

Ability to innovate decided who will survive and thrive in the past and so will be in the future. The disability to innovate put us at risk. Struggles and threats do not cease to exist. Tigers in the jungle are no longer threats to us and Neanderthals do not exist in the mountains anymore. Our ancestors did their job well. But in the modern times, it is man against man. It is our own kind of people (sometimes countries in our own neighborhood) can pose real threats to our existence. Innovation helps us defend, if not  offend.

What is happening to Israel has been happening to India for many centuries. Invaders looted India multiple times for India’s inability to fight back effectively. Though India did survive, its potential to shine was dented. India has been rebuilt several times. Had India been successful in controlling their borders, it would have been a much stronger country.

Lesson or takeaway is written on the wall. Innovate else get ready to be wiped out from existence. Peace is the outcome of war, and not a precursor. Innovate and survive. Innovate and thrive.

Monday, December 28, 2020

My Walking Statistics of 2020

More than an year ago, I had installed the pedometer app "Step Set Go" on my cell phone. That started giving me a track of how much I walk on daily and weekly basis. Except occasional misses, my walking has been more or less consistent throughout 2020 and here are the consolidated numbers for the year.



It shows I clocked an average of 8 km per day. And 2,925 km's of walking in the year of 2020. This number surprised me for a while. If I could reach this number walking for less than 2 hours a day, what about those travelers in the past who almost walked from one town to another throughout the year? History documents many travelers like Marco Polo who had traveled from Europe to Mongolia twice on foot (mostly). And the Chinese traveler to India - Hiuen Tsang, who had walked thousands of kilometers. I had always wondered how they could achieve this and why they did not get tired out? Now my own statistics shows that walking few thousand kilometers a year is an easily achievable task. Just one needs to be willing and consistent.


Biology and Evolution indicate that human body is designed or evolved for walking. Our legs are way stronger than our hands. It shows our ancestors used legs more often than hands that made legs pack higher muscular power. As the transition from monkey to humans happened and our ancestors climbed down from tree to land, our feet structure got shaped differently than other four legged animals, helping us to stand up and not yet lose balance. That improved our survival rate as we could walk long distances searching for food. Though we took shelter in agriculture for food later, legs were the primary mode of transporting oneself. Though man tamed horses and invented bullock carts, majority of the population still walked. This continued till bicycles and later motor cars helped us improve our moving speeds and gradually replaced walking in the recent past. Our current generation rarely walks to work but our bodies which got shaped through thousands of years of evolution demand us to walk (or do any other physical exercise) to keep up in a better shape. No wonder what was natural to us in the past has become Doctor's prescription to keep us fit again.


Though walking has been part of my routine for many years, I was not this consistent before and did not record the statistics either. The year of pandemic made me more health conscious and the app on the phone helped me keep a track of the numbers and form a perspective. What is your fitness regime?

Wednesday, December 16, 2020

ಕೊರೊನ ವೈರಸ್ ಮತ್ತು ಮಾಲ್ತಸ್ ನ ಜನಸಂಖ್ಯೆಯ ಸಿದ್ಧಾಂತ

೧೮ ನೇ ಶತಮಾನದ ತಜ್ಞ ಥಾಮಸ್ ರಾಬರ್ಟ್ ಮಾಲ್ತಸ್ ಹೇಳಿದ್ದು, ಪ್ರಪಂಚದ ಜನಸಂಖ್ಯೆಯ ಬೆಳವಣಿಗೆಯ ವೇಗಕ್ಕೆ ಸರಿ ಸಮನಾಗಿ ಆಹಾರ ಪೂರೈಕೆಯ  ಬೆಳವಣಿಗೆಯಾಗುವುದಿಲ್ಲ . ಅದು ಏರು ಪೇರಾದಾಗ, ಆಹಾರ ಕೊರತೆಯ ಕಾರಣಕ್ಕೋ, ಯುದ್ಧಗಳ ಕಾರಣವೋ ಅಥವಾ ಸಾಂಕ್ರಾಮಿಕ ರೋಗಗಳ ಕಾರಣದಿಂದಲೋ ಜನಸಂಖ್ಯೆ ಇಳಿಕೆಯಾಗಿ ಮತ್ತೆ ಅದು ಸಮತೋಲನಕ್ಕೆ ಬರುವ ಏರ್ಪಾಡನ್ನು ಪ್ರಕೃತಿ ಮಾಡುತ್ತದೆ. ಈ ಸಿದ್ದಾಂತ ಸಾಕಷ್ಟು ಜನಪ್ರಿಯಗೊಂಡು ಜಗತ್ತಿನಾದ್ಯಂತ ಸಾಕಷ್ಟು ಪಠ್ಯ ಪುಸ್ತಕಗಳಲ್ಲಿ ಸೇರಿ ಹೋಗಿದೆ. ಈಗಾಗಲೇ ಕೊರೊನ ವೈರಸ್ ಗೆ ೧೬ ಲಕ್ಷಕ್ಕೂ ಜನ ವಿಶ್ವದಾದ್ಯಂತ ಅಸು ನೀಗಿದ್ದಾರಲ್ಲ. ಅದು ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಕೃತಿ ಉಂಟು ಮಾಡಿದ ಏರ್ಪಾಡೇ? ಹಾಗಿದ್ದಲ್ಲಿ ಆಹಾರದ ಕೊರತೆ ನಮಗೆ ಕಾಡಿತ್ತೆ? ಮಾಲ್ತಸ್ ನ ಜನಸಂಖ್ಯೆಯ ಸಿದ್ದಾಂತ ಇಂದಿಗೂ ಅನ್ವಯಿಸುತ್ತದೆಯೇ? ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದು ಏಕೆ ಎನ್ನುವುದರ ವಿವರಣೆ ಮುಂದಿದೆ.


ಪ್ರಾಣಿ ಜಗತ್ತಿನಲ್ಲಿ ಮಾಲ್ತಸ್ ನ ಸಿದ್ದಾಂತ ಯಾವತ್ತಿಗಾದರು ಅನ್ವಯಿಸುತ್ತದೆ ಎಂದು ಹೇಳಬಹುದು. ಉದಾಹರಣೆಗೆ, ಒಂದು ಕಾಡಿನಲ್ಲಿನ ಹುಲಿಗಳ ಸಂಖ್ಯೆ ಅವು ಬೇಟೆಯಾಡುವ ಪ್ರಾಣಿಗಳಾದ ಜಿಂಕೆ, ಕಡವೆ ಇತ್ತ್ಯಾದಿ ಪ್ರಾಣಿಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ಮತ್ತು ಆ ಪ್ರಾಣಿಗಳ ಸಂಖ್ಯೆ ಕಾಡಿನ ವಿಸ್ತಾರ, ಹುಲ್ಲುಗಾವಲಿನ ಮೇಲೆ ಅವಲಂಬಿತವಾಗಿರುತ್ತದೆ. ಕಾಡು ದೊಡ್ಡದಾಗದ ಹೊರತು ಅಲ್ಲಿನ ಜಿಂಕೆ, ಕಡವೆಗಳ ಸಂಖ್ಯೆ ಜಾಸ್ತಿಯಾಗದು ಹಾಗೆಯೆ ಅಲ್ಲಿನ ಹುಲಿಗಳ ಸಂಖ್ಯೆಗೂ ಒಂದು ಮಿತಿಯಿರುತ್ತದೆ. ಅದಕ್ಕೂ ಮೀರಿ ಹುಲಿಗಳ ಸಂಖ್ಯೆ ಜಾಸ್ತಿಯಾದರೆ, ಹಸಿವಿನಿಂದಲೋ, ಕಾದಾಟದಿಂದಲೋ ಕೆಲವು ಹುಲಿಗಳು ಸತ್ತು, ಅವುಗಳ ಸಂಖ್ಯೆ ಮತ್ತೆ ಸಮತೋಲನಕ್ಕೆ ಬರುತ್ತದೆ.


ಶಿಲಾಯುಗದ ಕಾಲದಲ್ಲಿ ಮನುಷ್ಯ ಇತರೆ ಪ್ರಾಣಿಗಳ ಹಾಗೆ ಅಲೆದಾಡುತ್ತ, ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುತ್ತಿದ್ದ. ಆಗ ಮನುಷ್ಯರ ಸಂಖ್ಯೆಗೆ ಪ್ರಕೃತಿಯ ಮಿತಿಯಿತ್ತು, ನಂತರ ವ್ಯವಸಾಯ ಕಲಿತುಕೊಂಡ ಮಾನವ, ತನ್ನ ಆಹಾರಕ್ಕೆ ಅಲೆಯದೇ ತಾನೇ ಬೆಳೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡ. ಆದರೂ ವ್ಯವಸಾಯದ ಉತ್ಪನ್ನ ಪ್ರತಿ ವರ್ಷವೂ ಒಂದೇ ರೀತಿಯಿರಲಿಲ್ಲ. ಮಳೆ ಕಡಿಮೆಯಿದ್ದ ವರ್ಷ, ಬರಗಾಲ ಬಂದಾಗ ಆಹಾರದ ಕೊರತೆಯಾಗುತ್ತಿತ್ತು. ಅದೇ ಸಮಯಕ್ಕೆ ಸಾಂಕ್ರಾಮಿಕ ರೋಗಗಳು ಬಂದಾಗ ಸೂಕ್ತ ವೈದ್ಯಕೀಯ ಸೌಕರ್ಯಗಳ ಕೊರತೆಯಿತ್ತು. ಅದು ೧೮ನೆ ಶತಮಾನದಲ್ಲಿ ಮಾಲ್ತಸ್ ಜೀವಿತವಾಗಿದ್ದಾಗ ಇದ್ದಂತ ಪರಿಸ್ಥಿತಿ. ಹಸಿವಿನಿಂದ, ರೋಗದಿಂದ, ಯುದ್ಧದಿಂದ ಜನ ಸತ್ತಾಗ ಅದು ಪ್ರಕೃತಿಯ ಕೈವಾಡ ಎಂದು ಮಾಲ್ತಸ್ ಗೆ ಅನ್ನಿಸಿದ್ದರೆ ಆಶ್ಚರ್ಯವೇನಿಲ್ಲ. 


ಆದರೆ ಇಂದಿನ ಮನುಷ್ಯ, ೧೮ನೆ ಶತಮಾನದ ಇತಿ ಮಿತಿಗಳನ್ನು ಮೀರಿ ಬೆಳವಣಿಗೆ ಸಾಧಿಸಿದ್ದಾನೆ. ಇವತ್ತಿಗೆ ನೀರಾವರಿ ಸೌಲಭವಿದೆ. ಮಳೆಯ ಮೇಲೆ ಅವಲಂಬನೆ ಇದ್ದರೂ ಎರಡು ನೂರು ವರುಷಗಳ ಹಿಂದಕ್ಕೆ ಹೋಲಿಸಿದರೆ ಅದು ಗಣನೀಯವಾಗಿ ಕಡಿಮೆಯಾಗಿದೆ. ಗೊಬ್ಬರದ ಬಳಕೆ, ಕ್ರಿಮಿ ಕೀಟಗಳ ನಾಶಕ್ಕಾಗಿ ಔಷಧಗಳ ಬಳಕೆಯಿಂದ ಅದೇ ವಿಸ್ತೀರ್ಣದಲ್ಲಿ ಹೆಚ್ಚಿನ ಬೆಳೆ ಬೆಳೆಯುವುದು ಮನುಷ್ಯನಿಗೆ ಸಾಧ್ಯವಾಗಿದೆ. ಹೈಬ್ರಿಡ್ ತಳಿಗಳ ಆವಿಷ್ಕಾರದಿಂದ ಆಹಾರ ಉತ್ಪಾದನೆ ಇನ್ನು ಹೆಚ್ಚಾಗಿದೆ. ಅಲ್ಲದೆ ಬೆಳೆದ ಬೇಳೆ ಕಾಳುಗಳನ್ನು ಸಂಸ್ಕರಿಸುವ ಮತ್ತು ಅವುಗಳನ್ನು ಬಹು ಕಾಲದವರೆಗೆ ಕೆಡದಂತೆ ಕಾಪಾಡಿಕೊಳ್ಳುವ ವಿದ್ಯೆಯನ್ನೂ ಮನುಜ ಕಲಿತದ್ದಾಗಿದೆ. ಇಂದಿಗೆ ಆಹಾರದ ಕೊರತೆ ೧೮ನೆ ಶತಮಾನದ ತರಹ ಇಲ್ಲ. ಇಂದು ಸರಿಯಾದ ಬೆಲೆ ಸಿಗದೇ ರಸ್ತೆಗೆ ಸುರಿದು ಹೋದ ಟೊಮೇಟೊ ಬಗ್ಗೆ, ಸರಕಾರದ ಗೋದಾಮುಗಳಲ್ಲಿ ದಾಸ್ತಾನು ಇಟ್ಟಲ್ಲೇ ಹಾಳಾಗಿ ಹೋದ ಅಕ್ಕಿ, ಗೋದಿಯ ಬಗ್ಗೆ ನಾವು ಸುದ್ದಿ ಓದುತ್ತೇವೆ. ಇವುಗಳು ಆಹಾರದ ಕೊರತೆ ಇರುವುದು ಸೂಚಿಸುವುದಿಲ್ಲ.


ಹಾಗೆಯೇ ವೈದ್ಯಕೀಯ ಸೌಲಭ್ಯಗಳು, ರೋಗ ನಿರೋಧಕ ಔಷಧಿಗಳು ಇಂದಿಗೆ ಇರುವ ಹಾಗೆ ೧೮ನೆ ಶತಮಾನದಲ್ಲಿ ಇರಲಿಲ್ಲ. ಆಗ ಸಾಂಕ್ರಾಮಿಕ ರೋಗಗಳಿಗೆ ಇಡೀ ಊರಿಗೆ ಊರೇ ಖಾಲಿ ಮಾಡಿಕೊಂಡು ಗುಳೆ ಹೋಗುವ ಪರಿಸ್ಥಿತಿ ಇಂದು ಎಷ್ಟು ಊರುಗಳಲ್ಲಿದೆ?   ಆದರೆ ೧೮ನೆ ಶತಮಾನದಲ್ಲಿ ಅದು ಸಾಮಾನ್ಯ ಸಂಗತಿಯಾಗಿತ್ತು. 


ಎರಡನೇ ಜಾಗತಿಕ ಮಹಾಯುದ್ಧದ ನಂತರ ಅಷ್ಟು ದೊಡ್ಡ ಪ್ರಮಾಣದ ಯುದ್ಧ ಇಂದಿಗೆ  ಆಗುವ ಸಂಭವವೂ ತೀರಾ ಕಡಿಮೆ. ಈ ಶತಮಾನದಲ್ಲಿ ಮನುಜ ಕಲಿತುಕೊಂಡ ದೊಡ್ಡ ಪಾಠ, ಯುದ್ದದಿಂದ ಆಗುವ ಸಾವು ನೋವು. ಇಂದಿಗೆ ಜಗಳಗಳೇ ಇಲ್ಲ ಎಂದಿಲ್ಲ. ಆದರೆ ಸಣ್ಣ ಪುಟ್ಟ ಯುದ್ದಗಳನ್ನು ಕ್ಷಿಪಣಿಗಳೇ ಮಾಡಿ ಮುಗಿಸುತ್ತವೆ. ಯುದ್ಧ ಎನ್ನುವುದು ಮನುಷ್ಯ ಹೋರಾಟವಲ್ಲ ಬದಲಿಗೆ ಅದು ತಂತ್ರಜ್ಞಾನದ ಹೋರಾಟ ಎನ್ನುವಂತ ಪರಿಸ್ಥಿತಿ ಇಂದಿನದು.


ಆಹಾರದ ಪೂರೈಕೆ, ವೈದ್ಯಕೀಯ ಸೌಲಭ್ಯಗಳು ಮತ್ತು ಯುದ್ಧ ಮಾಡುವ ರೀತಿ ಬದಲಾಗಿರುವ ಈ ಕಾಲಕ್ಕೂ, ಮಾಲ್ತಸ್ ಬದುಕಿದ ಕಾಲಕ್ಕೂ ಅಜ ಗಜಾಂತರ ವ್ಯತಾಸವಿದೆ. ಹಾಗಾದರೆ ಈ ಕೊರೊನ ವೈರಸ್  ಏನು ಅನ್ನುತ್ತೀರಾ? ೧೮ನೆ ಶತಮಾನದ ಪರಿಸ್ಥಿತಿ ಇಂದಿಗೆ ಇದ್ದಿದ್ದರೆ, ಕೊರೊನ ಮಾರಿಗೆ ಸತ್ತವರ ಸಂಖ್ಯೆ ದಶ ಕೋಟಿಗಳಲ್ಲಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ೭೮೦ ಕೋಟಿ ಜನಸಂಖ್ಯೆ ಇರುವ ಜಗತ್ತಿನಲ್ಲಿ, ೧೬ ಲಕ್ಷ ಸಾವು ನಮ್ಮ ಜನಸಂಖ್ಯೆಯನ್ನು ೦.೦೨% ಮಾತ್ರ ಕಡಿಮೆ ಮಾಡಿದೆ. ಇಷ್ಟಕ್ಕೆ ನಾವು ಸರಿಯಾಗಿ ನಿಭಾಯಿಸಿದ್ದೇವೆ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಮಾಲ್ತಸ್ ಇಂದು ಬದುಕಿದ್ದರೆ ತನ್ನ ಸಿದ್ಧಾಂತವನ್ನು ಬದಲಾಯಿಸುತ್ತಿದ್ದ ಮತ್ತು ಕೊರೊನ ವೈರಸ್ ಪ್ರಕೃತಿಯ ಕೈವಾಡ ಎನ್ನುವುದಕ್ಕಿಂತ ಮನುಷ್ಯ ಎದುರಿಸುತ್ತಿರುವ ಒಂದು ಸವಾಲು ಎಂದು ಹೇಳುತ್ತಿದ್ದ ಎನ್ನುವುದಷ್ಟೆ ನನ್ನ ಅಭಿಪ್ರಾಯ.

Tuesday, December 15, 2020

ಹಿಮಾಲಯ: ಅದರ ಪಾಡಿಗೆ ಅದನ್ನು ಬಿಟ್ಟಷ್ಟು ವಾಸಿ

ಕಳೆದ ದಶಕದಲ್ಲಿ ಆದ ಪ್ರಕೃತಿ ವಿಕೋಪಗಳಲ್ಲಿ, ಹಿಮಾಲಯ ವಲಯದಲ್ಲಿನ ಕೇದಾರನಾಥ ಮತ್ತು ನೇಪಾಳದಲ್ಲಿ ಆದ ಭೂಕಂಪ, ಭೂಕುಸಿತ, ನೆರೆ ಹಾವಳಿ ಮಾಡಿದ ನಷ್ಟ ಅಪಾರ. ಅಪಾಯಕಾರಿ ಮಟ್ಟದ ಭೂಕಂಪಗಳು ಇಲ್ಲಿ ಆಗುತ್ತಲೇ ಇವೆ. ೧೯೫೦ ರಲ್ಲಿ ಆದ ಭೂಕಂಪ, ಟಿಬೆಟ್ ಮತ್ತು ಅಸ್ಸಾಂ ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ೨೦೧೩ ರಲ್ಲಿ ಕೇದಾರನಾಥ ಪ್ರದೇಶದಲ್ಲಿ ಆದ ಭೂಕುಸಿತ ಮತ್ತು ನೆರೆಯಿಂದ ಸತ್ತಿದ್ದು ಐದು ಸಾವಿರಕ್ಕೂ ಹೆಚ್ಚಿನ ಜನ. ಅಸ್ತಿ ಹಾನಿಯೇನು ಕಡಿಮೆ ಎನ್ನುವ ಹಾಗಿಲ್ಲ.

 

ಇದು ಅನೀರಿಕ್ಷಿತವಾಗಿ ಆದ ಪ್ರಕೃತಿ ವಿಕೋಪ ಎಂದು ಮೇಲ್ನೋಟಕ್ಕೆ ಎನ್ನಿಸಿದರೂ ವಿವರಗಳನ್ನು ಗಮನಿಸುತ್ತಾ ಹೋದಂತೆ ಮನುಷ್ಯನಿಂದ ಉಂಟಾದ ಅಸಮತೋಲನಗಳನ್ನು ಕಡೆಗಣಿಸುವಂತಿಲ್ಲ. ಹಿಮಾಲಯ ಒಂದು ಸೂಕ್ಷ್ಮವಾದ ಪರಿಸರ ಮತ್ತು ಭೂಕಂಪ ಪೀಡಿತ ಪ್ರದೇಶ. ಇಲ್ಲಿರುವುದು ದಕ್ಷಿಣ ಭಾರತದಲ್ಲಿನ ಬೆಟ್ಟಗಳ ಹಾಗೆ ಗಟ್ಟಿ ನಿಲ್ಲುವ ಕಲ್ಲು ಗುಡ್ಡಗಳಲ್ಲ. ಬದಲಿಗೆ ಕಲ್ಲು ಮಣ್ಣುಗಳ ರಾಶಿ  ಮಾಡಿ ಒಂದರ ಮೇಲೆ ಒಂದರಂತೆ ಪೇರಿಸಿದ ಮೆದು ಮಣ್ಣಿನ ಶ್ರೇಣಿ. ಇಲ್ಲಿ ಹೆಚ್ಚಿಗೆ ಮಳೆ ಆದರೆ, ಬೆಟ್ಟದ ಮಣ್ಣು ಕರಗಿ, ಅಲ್ಲಿನ ಕಲ್ಲುಗಳು ಉರುಳಲಾರಂಭಿಸುತ್ತವೆ. ಭಾರತದಲ್ಲೇ ಎತ್ತರದ ಪ್ರದೇಶ ಇದಾಗಿರುವರಿಂದ, ಮಾನ್ಸೂನ್ ಮೋಡಗಳು ಅರಬ್ಬೀ ಸಮುದ್ರದಲ್ಲಿ ಹುಟ್ಟಿ ಈಶಾನ್ಯ ದಿಕ್ಕಿಗೆ ಚಲಿಸಿ, ಮಳೆಯಾಗದೆ ಹಾಗೆ ಉಳಿದ ಮೋಡಗಳು ಇಲ್ಲಿ ಜಮಾವಣೆಗೊಂಡು ಹೆಚ್ಚಿನ ಮಳೆ ಸುರಿಸುತ್ತವೆ. ಇಲ್ಲವೇ ಘರ್ಷಣೆ ಹೆಚ್ಚಾದರೆ ಸ್ಪೋಟಗೊಳ್ಳುತ್ತವೆ. ನಾನು ಹಿಮಾಲಯ ಪ್ರವಾಸ ಹೋದಾಗ, ಮೇಘ ಸ್ಪೋಟವಾಗಿ (Cloud Burst), ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿ ದಾರಿಯಲ್ಲೇ ಇಡೀ ದಿನ ಸಿಕ್ಕು ಹಾಕಿಕೊಂಡು, ಹತ್ತಿರದ ಹಳ್ಳಿಯಲ್ಲಿ ಮಲಗಿ ಮರು ದಿನ ರಸ್ತೆ ಉಪಯೋಗ ಮಾಡುವಂತಾದಾಗ ಮುಂದೆ ಸಾಗಿದ್ದು ನೆನಪಿದೆ.

ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು


ತರಹದ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವುದು ಹಿಮಾಲಯದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ನೈಸರ್ಗಿಕ ವಿಕೋಪಗಳು ಅಣೆಕಟ್ಟನ್ನು ಒಡೆದು ಹಾಕದಿದ್ದರೂ ಅದು ಸುರಕ್ಷಿತವಾಗಿ ಕೆಲಸ ಮಾಡುವ ಅವಧಿಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಮತ್ತು ಭೂಕುಸಿತಗಳು ಆಣೆಕಟ್ಟು ಹಿಡಿದಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಹಿಮಾಲಯದಲ್ಲಿ ನಾವು ಕಟ್ಟುವ ರಸ್ತೆಗಳು ಮತ್ತು ಅದಕ್ಕಾಗಿ ಮರಗಳನ್ನು ಕಡಿಯುವುದು, ಬೆಟ್ಟ ಪ್ರದೇಶದಲ್ಲಿ ಅಸಮತೋಲನ ಉಂಟು ಮಾಡಿ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಿಮಾಲಯವನ್ನು ಒಂದು ಸಂರಕ್ಷಿತ ಪ್ರದೇಶವೆಂದು ಘೋಷಿಸುವುದು ಕ್ಷೇಮಕರ ಎನ್ನುತ್ತಾರೆ ಪರಿಸರ ತಜ್ಞ ಮತ್ತು ಹಿಮಾಲಯವನ್ನು ದಶಕಗಳ ಕಾಲ ಅಭ್ಯಸಿಸಿದ ಮಹಾರಾಜ ಪಂಡಿತ್. (ಲಿಂಕ್: https://www.nature.com/articles/d41586-020-01809-4 )

 

ಪೈಪೋಟಿಗೆ ಬಿದ್ದ ಭಾರತ ಮತ್ತು ಚೀನಾ ದೇಶಗಳು ಪ್ರದೇಶದಲ್ಲಿ ತಮ್ಮ ಬಲ ತೋರಿಸುಕೊಳ್ಳುವ ಕಾದಾಟ ಮತ್ತು ಇಲ್ಲಿಯ ಸಂಪನ್ಮೂಲಗಳನ್ನು ಉಪಯೋಗಿಸುವ ಉದ್ದೇಶದಿಂದ ರಸ್ತೆ, ಅಣೆಕಟ್ಟುಗಳ ನಿರ್ಮಾಣ ಕಾರ್ಯಗಳನ್ನು ಮುಂದುವರೆಸಿವೆ. ಹಾಗೆಯೆ ಮನುಷ್ಯ ವಾಸವು ಹಿಂದಿಗಿಂತ ಹೆಚ್ಚಿಗೆ ಪ್ರದೇಶಗಳಲ್ಲಿ ಕಾಣುತ್ತಿದೆ. ಆದರೆ ಪ್ರಕೃತಿ ಶಕ್ತಿಯ ಮುಂದೆ ಮನುಷ್ಯ ಶಕ್ತಿ ಯಾವ ಲೆಕ್ಕದ್ದು? ಹಿಮಾಲಯವನ್ನು ಅದರ ಪಾಡಿಗೆ ಬಿಡದ ಮನುಜ ಮುಂದೆ ಒಂದು ದಿನ ಭಾರಿ ಬೆಲೆ ತೆತ್ತಬೇಕಾಗಬಹುದು.

 

(ಚಿತ್ರ: ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು)

ವಾಯು ಮಾಲಿನ್ಯ: ಸಹನೀಯವಾಗಿಸುವುದು ಹೇಗೆ?

ಕಳೆದ ದಶಕದಲ್ಲಿ ವಾಯು ಮಾಲಿನ್ಯದ ಬಗ್ಗೆ ವಿಚಾರವೇ ಮಾಡದ ನಾವುಗಳು ಇಂದು ಅದರ ಬಗ್ಗೆ ಚಿಂತಿಸುವ ಕಾಲ ಬಂದಿದೆ. ದೇಶದ್ಯಾಂತ ಸ್ಥಾಪಿಸಲಾಗಿರುವ ನೂರಾರು ಸಂವೇದಕಗಳ (Sensor) ಸಹಾಯದಿಂದ ಇಂದು ನಾವು ನಾವು ಉಸಿರಾಡುವ ಗುಣ ಮಟ್ಟದ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ಕಡೆ ಉತ್ತಮ ಎಂದೆನಿಸಿದರೆ, ಇನ್ನು ಕೆಲವು ಕಡೆ ಅಪಾಯಕಾರಿ ಎನ್ನುವ ಮಟ್ಟಕ್ಕೆ ವಾಯು ಮಾಲಿನ್ಯವಿದೆ.

 

ಸರಕಾರವಾಗಲಿ, ಜನತೆಯಾಗಲಿ ಇದರ ಕಡೆಗೆ ಗಮನ ಹರಿಸಿಲ್ಲ ಎಂದೇನಿಲ್ಲ.  BS -IV ವಾಹನಗಳಿಂದ BS -VI ಕಡೆಗೆ ಸಾಗಿದ್ದು ಮಾಲಿನ್ಯದ ಮಟ್ಟ ಕಡಿಮೆ ಮಾಡಲು. ಕಲ್ಲಿದ್ದಲ್ಲಿಂದ ಉತ್ಪಾದಿಸುವ ವಿದ್ಯುತ್ ಗೆ ಒತ್ತು ನೀಡದೆ ಗಾಳಿ ಯಂತ್ರ (Wind Power) ಮತ್ತು ಸೌರ ಫಲಕ (Solar Panel) ಗಳಿಂದ ವಿದ್ಯುತ್ ಉತ್ಪಾದನೆಯೆಡೆಗೆ ಸಾಗುತ್ತಿರುವುದು ಇದೇ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ಅಡಿಗೆಗೆ ಉರುವಲು ಕಟ್ಟಿಗೆ ಬದಲು, LPG ಉಪಯೋಗಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಇದೆಲ್ಲ ಇದ್ದರೂ, ಕೆಲವು ಕಾರ್ಖಾನೆ ಮತ್ತು ಉದ್ದಿಮೆಗಳು ಅಪಾಯಕಾರಿ ಮಟ್ಟದಲ್ಲಿ ಹೊಗೆ ಉಗುಳುವುದು ನಿಂತಿಲ್ಲ. ಯೂರೋಪ್ ದೇಶಗಳಲ್ಲಿ ಅವುಗಳನ್ನು ಆಕಾಶದಲ್ಲಿರುವ ಉಪಗ್ರಹಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸುತ್ತಾರೆ. ನಮ್ಮ ಉಪಗ್ರಹಗಳು ಆ ಕೆಲಸ ಮಾಡಲಾರವು ಎಂದಲ್ಲ. ಆದರೆ ಆ ಕಾರ್ಖಾನೆಗಳು ರಾಜಕೀಯ ಧುರೀಣರದ್ದೋ, ಅವರ ಸಂಬಂಧಿಗಳದ್ದೋ ಆಗಿದ್ದರೆ ಅದು ಉಂಟು ಮಾಡುವ ರಾಜಕೀಯ ತೊಡಕು ವಾಯು ಮಾಲಿನ್ಯವನ್ನು ಮುಂದುವರೆಸುತ್ತವೆ.

 

ಮಾಲಿನ್ಯ ತಗ್ಗಿಸುವ ತಂತ್ರಜ್ಞಾನದ (Abatement Technology ) ಉಪಯೋಗ ಮತ್ತು ಅವುಗಳ ನಿರಂತರ ನವೀಕರಣದಿಂದ ಉದ್ದಿಮೆಗಳಿಂದ ಆಗುವ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಲು ಸಾಧ್ಯ. ಅವುಗಳಿಗೆ ಆಗುವ ಹೆಚ್ಚಿನ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಅದರಿಂದ ಆಗುವ ಪರೋಕ್ಷ ಲಾಭವೇ ಹೆಚ್ಚಿನದಾಗಿದೆ. ಮಾಲಿನ್ಯ ಉಂಟು ಮಾಡುವ ಅನಾರೋಗ್ಯ, ವೈದ್ಯಕೀಯದ ಖರ್ಚು ಮತ್ತು ಆಗ ನೌಕರರು ಕೆಲಸ ಮಾಡದೇ ಉಂಟಾಗುವ ಆರ್ಥಿಕ ಪೆಟ್ಟು ಇವುಗಳನ್ನು ಲೆಕ್ಕ ಹಾಕಿದರೆ, ವಾಯು ಮಾಲಿನ್ಯ ಕಡಿಮೆ ಮಾಡುವುದಕ್ಕೆ ಮಾಡುವ ಖರ್ಚು ಹೆಚ್ಚು ಎನ್ನಿಸಲಾರದು.

 

ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ತಾಮ್ರ ತಯಾರಿಕೆ ಘಟಕವೊಂದು ತಾಜ್ಯ ವಸ್ತುಗಳನ್ನು ಸರಿಯಾಗಿ ಪರಿಷ್ಕರಿಸದೆ ಇದ್ದುದರಿಂದ, ಆ ಭಾಗದ ಜನರಲ್ಲಿ ಕ್ಯಾನ್ಸರ್ ರೋಗ ಜಾಸ್ತಿ ಆಗಿ, ಕೊನೆಗೆ ಆ ಕಾರ್ಖಾನೆಯನ್ನು ಮುಚ್ಚಿದ ಉದಾಹರಣೆ ಉಂಟಲ್ಲ. ಹಾಗೆಯೇ ಸಿಮೆಂಟ್ ಕಾರ್ಖಾನೆಗಳು, ಲೋಹದ ಕುಲುಮೆಗಳು ಪರಿಸರವನ್ನು ಹಾಳು ಮಾಡಿದ್ದಲ್ಲದೆ ತಮ್ಮ ನೌಕರರ ಜೀವನಾವಧಿಯನ್ನೇ ಕಡಿಮೆ ಮಾಡಿಲ್ಲವೇ? ಅದಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿ, ಸೂಕ್ತ ತಿದ್ದುಪಡಿಗಳು ಆಗುವಂತೆ ಮಾಡುವ ಹೊಣೆ ಸರಕಾರದ್ದು ಎಷ್ಟೋ, ಅಷ್ಟೇ ಜವಾಬ್ದಾರಿ ಜನರದ್ದೂ, ತಾವು ಉಪೇಕ್ಷಿಸದೇ, ಎಚ್ಚತ್ತುಕೊಳ್ಳುವ ಕಡೆಗೆ ಆಗಬೇಕಿದೆ.

 

ಪಟ್ಟಣಗಳಲ್ಲಿ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ವಾಹನಗಳಿಂದಲೇ. ವಾಹನ ಓಡಾಟ ತಗ್ಗಿಸಿ ಮೆಟ್ರೋ ತರಹದ ಸಮೂಹ ಸಾರಿಗೆ ಉಪಯೋಗಿಸಿದಷ್ಟು ಒಳ್ಳೆಯದು. ಆದರೆ ಅದರ ವ್ಯವಸ್ಥೆ ಇಲ್ಲದ ಕಡೆಗೆ ಹೇಗೆ? ನೀವು ವಾಸಿಸುವ ಜಾಗ ಬದಲಿಸುವುದು ಸೂಕ್ತವೇ? ಯೋಚಿಸಿ ನೋಡಿ.

 

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ಈ ಲಿಂಕ್ ನಗರದ ಹಲವು ವಲಯದ ವಾಯು ಗುಣಮಟ್ಟವನ್ನು ತಿಳಿಸಿಕೊಡುತ್ತದೆ. ಮೈಸೂರು ರಸ್ತೆಯ ಬಾಪೂಜಿನಗರ ಭಾಗದಲ್ಲಿ ವಾಯು ಮಾಲಿನ್ಯ ಅನಾರೋಗ್ಯಕರ ಮಟ್ಟದಲ್ಲಿ ಇದೆ ಎಂದು ಅದು ತೋರಿಸುತ್ತಿದೆ.

https://aqicn.org/city/india/bengaluru/bapuji-nagar

Monday, December 14, 2020

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಪ್ಪತ್ತರ ಹರೆಯ

ಕಳೆದ ತಿಂಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಇಪ್ಪತ್ತು ತುಂಬಿತು. ಮುಂದುವರೆದ ದೇಶಗಳಲ್ಲಿ ಇದು ಸುದ್ದಿ ಮಾಡಿದರೂ, ನಮ್ಮ ದೇಶದ ಮಾಧ್ಯಮಗಳಲ್ಲಿ ಇದು ಚರ್ಚೆಯಾಗಲಿಲ್ಲ. ಅದರಲ್ಲಿ ಭಾರತದ ಕೊಡುಗೆ ಏನು ಇರಲಿಲ್ಲ ಎನ್ನುವುದಕ್ಕೋ ಏನೋ? ನಿಜ, ಅದು ಶ್ರೀಮಂತ ದೇಶಗಳ ಯೋಜನೆ. ನೂರು ಬಿಲಿಯನ್ ಡಾಲರ್ ವೆಚ್ಚದ ಯೋಜನೆಯಲ್ಲಿ ಪಾಲ್ಗೊಳ್ಳಲು ನಮಗೆ ಇಪ್ಪತ್ತು ವರುಷಗಳ ಹಿಂದೆ ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಸ್ರೋ ಸಂಸ್ಥೆಯ ವಿಜಯಗಳು ಭಾರತಕ್ಕೆ ವಿಶ್ವಾಸ ತುಂಬಿ ನಮ್ಮದೇ ಒಂದು ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಯೋಜನೆ ಹಾಕಿಕೊಳ್ಳುವಂತಾಗಿದೆ.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮನುಜ ಕುಲದ ವಿಕಾಸ ಮತ್ತು ವಿಜ್ಞಾನದ ಪ್ರಗತಿಯ ಸಂಕೇತ. ಇಪ್ಪತ್ತು ವರ್ಷಗಳಲ್ಲಿ ಮನುಷ್ಯರು ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿ ಜೀವಿಸಿ, ಅಲ್ಲಿರುವ ಸವಾಲುಗಳನ್ನು ಎದುರಿಸಿ, ಸಮಸ್ಯೆಯಿಲ್ಲದೆ ಭೂಮಿಗೆ ಮರಳುವುದು ಸಾಧ್ಯ ಎನ್ನುವುದು ಹಲವಾರು ಬಾರಿ ತೋರಿಸಿಕೊಟ್ಟಿದೆ. ತುಂಬಾ ದುಬಾರಿ ಎನ್ನಿಸುವ ಯೋಜನೆ, ಕೃತಕ ಉಪಗ್ರಹಗಳು ಮಾಡುವ ಕೆಲಸಕ್ಕಿಂತ ಹೆಚ್ಚಿನದನ್ನು ಸಾಧ್ಯವಾಗಿಸುತ್ತದೆ. ಇದು ಆಕಾಶದಲ್ಲಿ ಹಾರಾಡುವ ಒಂದು ಪ್ರಯೋಗಾಲಯ. Microgravity ಯಲ್ಲಿ ಮಾತ್ರ ಸಾಧ್ಯವಾಗುವಂತ ಪ್ರೋಟೀನ್ ಗಳನ್ನು ಇದರಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರಕೃತಿ ವಿಕೋಪಗಳ ಜಾಡು ಹಿಡಿದು ಹೋಗುವುದು ಇದರ ಇನ್ನೊಂದು ಕೆಲಸ. ಭೂಮಿ ಮತ್ತು ಅದರ ಸಮೀಪದ ಆಕಾಶದ ಮೇಲೆ ಸದಾ ಕಣ್ಣಿಟ್ಟು, ಭೂಮಿಯ ಸುತ್ತುವ ಕೇಂದ್ರ ಕಳಿಸುವ ಚಿತ್ರಗಳು ಮತ್ತು ಮಾಹಿತಿ ಅಪಾರ. ಸುಮಾರು ೧೦ ವರುಷಕ್ಕೂ ಹೆಚ್ಚಿನ ಕಾಲ ಆಕಾಶದಲ್ಲಿ ನಿಲ್ದಾಣದ ಜೋಡಣೆಯ ಕಾರ್ಯ ನಡೆಯಿತ್ತಲ್ಲ. ಆಗ ಇದನ್ನು ಕಟ್ಟುವ ಸಲುವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳು ಇಂದು ಮನುಕುಲದ ಕೆಲ ಗಂಭೀರ ಸಮಸ್ಯೆಗಳನ್ನು, ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯವಾಗಿವೆ. ಹೀಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಆಗಿರುವ ೧೫ ಉಪಯೋಗಗಳ ಪಟ್ಟಿಯನ್ನು ಮಾಡಿದೆ ಅಮೇರಿಕಾದ ನಾಸಾ ಸಂಸ್ಥೆ. (Link: https://www.nasa.gov/mission_pages/station/research/news/15_ways_iss_benefits_earth

ಅಲ್ಲದೆ ಕಳೆದ ವಾರದ ಮುಖ್ಯ ಬೆಳವಣಿಗೆಗಳನ್ನು ಲಿಂಕ್ ಮೂಲಕ ವರದಿ ಮಾಡಿದೆ. Link: https://www.nasa.gov/mission_pages/station/research/news/space-station-science-highlights-07dec20

Sunday, December 13, 2020

ಮೈಯಲ್ಲಿನ ತೂಕ ಕಡಿಮೆಯಾದಾಗ ಅದು ಹೋಗುವುದು ಎಲ್ಲಿಗೆ?

ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಲ್ಲವೇ? ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರದೇ ನಿಮ್ಮ ದೇಹದ ತೂಕ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ ಅಲ್ಲವೇ? ಆಗ ತೂಕ ಹೆಚ್ಚಿದ್ದವರು ಏನೆಲ್ಲಾ ಸಾಹಸ ಮಾಡುತ್ತಾರೆ. ಬೆಳಿಗ್ಗೆ ಇಲ್ಲವೇ ಸಂಜೆ ನಡಿಗೆ, ಲಘು ಓಟ, ಜಿಮ್ ಸೇರಿಕೊಳ್ಳುವುದು, ತಿನ್ನುವ ಆಹಾರದ ಕಡೆಗೆ ಕಾಳಜಿ ವಹಿಸುವುದು,  ಕಡಿಮೆ ಕೊಬ್ಬಿನಂಶ ಇರುವ ಪದಾರ್ಥ ಸೇವಿಸುವುದು ಹೀಗೆ ಎಲ್ಲ ಪ್ರಯತ್ನಗಳು ತೂಕ ಕಡಿಮೆ ಮಾಡಿಕೊಳ್ಳುವುದರ ಕಡೆಗೆ ಸಾಗುತ್ತವೆ. ಅದರ ಪ್ರತಿಫಲ ಎಂಬಂತೆ ತೂಕದ ಯಂತ್ರ ಕಡಿಮೆ ತೂಕ ತೋರಿಸಲು ಶುರು ಮಾಡಿದಾಗ 'ಉಸ್ಸಪ್ಪ' ಎನ್ನುತ್ತಾರೋ ಅಥವಾ ಖುಷಿಯಿಂದ ಇನ್ನು ಹೆಚ್ಚು ನಡಿಗೆ, ಓಟ ಪ್ರಾರಂಭ ಮಾಡುತ್ತಾರೋ ಇಲ್ಲವೇ ಹಳೆಯ ಆಲಸ್ಯಕ್ಕೆ ಶರಣು ಹೋಗುತ್ತಾರೋ ಅವರವರ ಮೇಲೆ ಅವಲಂಬಿತವಾಗಿದೆ. ಆದರೆ ನನಗೆ ಮಾತ್ರ ಪ್ರಶ್ನೆ ಕಾಡಿದ್ದು, ಈ ಮೈಯಲ್ಲಿನ ತೂಕ ಕೊಡುವ ಭೌತಿಕ ವಸ್ತು ದೇಹದಿಂದ ಮರೆಯಾಗಿ ಹೋಗಿದ್ದು ಹೇಗೆ ಎನ್ನುವುದು?


ಅದಕ್ಕೆ ನಾನು ಗೂಗಲ್ ಹುಡುಕಾಟ ಆರಂಭಿಸಿದಾಗ ಕೆಲವು ಕುತೂಹಲ ಎನ್ನಿಸುವ ವಿಷಯಗಳು ಗೊತ್ತಾದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಂಡರಾಯಿತು ಎನ್ನುವ ಉದ್ದೇಶ ಈ ಲೇಖನದ್ದು. ಮೊದಲಿಗೆ ನಾವು ತಿಳಿಕೊಳ್ಳಬೇಕಾದದ್ದು ಕೊಬ್ಬು ಹೇಗೆ ನಮ್ಮ ಮೈ ಸೇರಿತು ಎನ್ನುವುದು, ನಂತರ ಅದು ಕರಗಿ ಹೋಗುವ ಬಗೆಯನ್ನು. 


ನಾವು ದೇಹಕ್ಕೆ ಅಗತ್ಯ ಇರುವದಕ್ಕಿಂತ ಹೆಚ್ಚಿನ ಪ್ರೋಟೀನ್, ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದಾಗ ಅದು ಕೊಬ್ಬಿನಂಶವಾಗಿ ಮಾರ್ಪಟ್ಟು ನಮ್ಮ ದೇಹದಲ್ಲಿ ಶೇಖರವಾಗಿ, ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ನಾವು ದೇಹಕ್ಕೆ ಪರಿಶ್ರಮ ಕೊಡುವ ಕೆಲಸದಲ್ಲಿ ತೊಡಗಿದಾಗ, ಆಗ ನಡೆಯುವ ಜೀವರಾಸಾಯನಿಕ ಕ್ರಿಯೆಯಲ್ಲಿ ಅದು ಕರಗಿ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಎರಡು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತದೆ. ಆ ತಾಜ್ಯ ವಸ್ತುಗಳು ನೀರು ಮತ್ತು ಕಾರ್ಬನ್ ಡೈಆಕ್ಸೈಡ್. ನೀರು ಬೆವರಿನ ಮೂಲಕ ಇಲ್ಲವೇ ಮೂತ್ರದ ಮೂಲಕ ದೇಹದಿಂದ ಹೊರಗೆ ಹೋದರೆ, ಕಾರ್ಬನ್ ಡೈಆಕ್ಸೈಡ್ ನ್ನು ನಾವು ಉಸಿರಿನ ಮೂಲಕ ಹೊರ ಹಾಕುತ್ತೇವೆ. 

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಇಲ್ಲಿ ನೀರಿನ ಪ್ರಮಾಣ ಕೇವಲ ಶೇಕಡಾ ೧೬ ರಷ್ಟು ಮಾತ್ರ. ಉಳಿದ ಶೇಕಡಾ ೮೪ ರಷ್ಟು ತೂಕ ದೇಹದಿಂದ  ಮರೆಯಾಗಿದ್ದು ನಮ್ಮ ಶ್ವಾಸಕೋಶಗಳ ಮೂಲಕ ಕಾರ್ಬನ್ ಡೈಆಕ್ಸೈಡ್ ಆಗಿ.

C55H104O6 + 78O2 → 55CO2  + 52H2O  + ಶಕ್ತಿ 

ನೀವು ಈ ರಾಸಾಯನಿಕ ಕ್ರಿಯೆಯ ಸಮೀಕರಣ ಗಮನಿಸಿದರೆ, ಇಲ್ಲಿರುವುದು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಕಣಗಳು ಮಾತ್ರ. ಈ ಮೂರರಲ್ಲಿ ಹೆಚ್ಚಿನ ತೂಕವಿರುವುದು ಕಾರ್ಬನ್ ಅಣುಗಳೇ. ಹಾಗಾಗಿ ತೂಕ ಕಡಿಮೆಯಾದಾಗ, ಅದರಲ್ಲಿ ಕಾರ್ಬನ್ ಅಣುಗಳ ಪಾತ್ರವೇ ಹಿರಿದಾಗಿತ್ತು. 

ಕಾರ್ಬನ್ ನಮ್ಮ ದೇಹ ಸೇರಿದ್ದು ನಮ್ಮ ಊಟದ ಮೂಲಕ ಹಾಗು ಹೈಡ್ರೋಜನ್ ನಾವು ಕುಡಿಯುವ ನೀರಿನ ಮೂಲಕ ಮತ್ತು ಊಟದಲ್ಲಿನ ನೀರಿನಂಶದಿಂದ. ಆಕ್ಸಿಜನ್ ನಮ್ಮ ದೇಹದ ಒಳಗೆ ಬಂದಿದ್ದು, ನಾವು ಉಸಿರು ಒಳಗೆ ಎಳೆದುಕೊಂಡಾಗ. ಆದರೆ ಅದು ಜೀವಕೋಶಗಳ ಶಕ್ತಿ ಉತ್ಪಾದನೆಯ ಕ್ರಿಯೆಯಲ್ಲಿ ಭಾಗವಹಿಸಿ ಹೊರ ಹೋಗುವಾಗ ಕಾರ್ಬನ್ ಡೈಆಕ್ಸೈಡ್ ಆಗಿ ಮಾರ್ಪಟ್ಟು, ಹೆಚ್ಚು ತೂಕದ ಕಾರ್ಬನ್ ಅಣುಗಳನ್ನು ದೇಹದಿಂದ ಹೊರಕ್ಕೆ ಹಾಕಿತು. ಹಾಗೆ ದೇಹದ ಭಾರವೂ ಕಡಿಮೆಯಾಯಿತು. 

ನಾವು ಉಸಿರಾಡುವ ಗಾಳಿ ನಮ್ಮ ಕಣ್ಣಿಗೆ ಕಾಣದೆ ಹೋಗುವುದರಿಂದ, ಅದರ ಬೃಹತ್ ಎನ್ನಿಸುವ ಪ್ರಮಾಣ ನಮ್ಮ ಗಮನಕ್ಕೆ ಬರದೇ ಹೋಗುತ್ತದೆ. ಆದರೆ ನೆನಪಿಡಿ. ನಿಮ್ಮ ಗೆಳೆಯ ಹತ್ತು ಕೆ.ಜಿ. ತೂಕ ಕಳೆದುಕೊಂಡರೆ ಅದರಲ್ಲಿ ೮.೪ ಕೆ.ಜಿ. ತೂಕ ಮರೆಯಾಗಿ ಹೋದದ್ದು ಅವನ ಉಸಿರಾಟದ ಮೂಲಕ. ಒಂದು ತಾಸಿನ ವ್ಯಾಯಾಮ ೩೯ ಗ್ರಾಂ ನಷ್ಟು ತೂಕದ ಕಾರ್ಬನ್ ನ್ನು ದೇಹದಿಂದ ಹೊರಗೆ ಹಾಕುತ್ತದೆ. ಮತ್ತೆ ಅದೇ ಪ್ರಮಾಣ ಊಟದ ಮೂಲಕ ದೇಹ ಸೇರದಂತೆ ನೋಡಿಕೊಂಡರೆ, ಒಂದು ತಿಂಗಳಲ್ಲಿ ಎಷ್ಟು ತೂಕ ಕಳೆದುಕೊಳ್ಳಬಹುದು ಎಂದು ನೀವೇ ಲೆಕ್ಕ ಹಾಕಿ.

 ನಾನು ಈ ವಿಷಯ ತಿಳಿದುಕೊಂಡಿದ್ದು ಲಿಂಕ್ ನಲ್ಲಿರುವ ವಿವರಣೆಯಿಂದ. ಹೆಚ್ಚಿನ ಮಾಹಿತಿಗೆ ಅದನ್ನೇ ಓದಿ ನೋಡಿ.


Source: https://www.bmj.com/content/349/bmj.g7257

Link: https://www.bmj.com/content/349/bmj.g7257

Friday, December 11, 2020

ಕಣ್ಣಿಗೆ ಕಾಣದ್ದು, ಕಿವಿಗೆ ಕೇಳಿಸದ್ದು

ನಾವು ನಮ್ಮ ಪಂಚೇಂದ್ರಿಯಗಳ ಮೂಲಕ ಜಗತ್ತಿನ ಅನುಭವ ಪಡೆಯುತ್ತೇವೆ. ನೀವು ಈಗ   ನೋಡುತ್ತಿರುವುದು ನಿಮ್ಮ ಫೋನ್ (ಅಥವಾ ಕಂಪ್ಯೂಟರ್) ಅಲ್ಲ. ಬದಲಿಗೆ ಅದರ ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನಿಮ್ಮ ಕಣ್ಣಿನ ಒಳಗಡೆ ಮೂಡಿದ ಬಿಂಬವನ್ನ. ಹಾಗೆಯೇ ನಿಮ್ಮ ಪಕ್ಕದವರು ನಿಮ್ಮನ್ನು ಕೈ ಮುಟ್ಟಿ ಮಾತನಾಡಿಸಿದರೆ ನಿಮಗೆ ಅರಿವಾಗುವದು ಅವರ ಕೈ ಸ್ಪರ್ಶ ಅಲ್ಲ. ನಿಮ್ಮ ಅನುಭವಕ್ಕೆ ಬಂದದ್ದು ನಿಮ್ಮ ಚರ್ಮದ ಮೇಲೆ ಮೂಡಿದ ಸಂವೇದನೆ ಮಾತ್ರ. ಪ್ರತಿಯೊಂದು ಇಂದ್ರಿಯವು ಕೆಲಸ ಮಾಡುವ ಬಗೆ ಹಾಗೆಯೇ. ನಮ್ಮ ಇಂದ್ರಿಯಗಳ ಸಾಮರ್ಥ್ಯಕ್ಕೂ ಹಲವಾರು ಇತಿ ಮಿತಿಗಳಿವೆ. ಹಾಗಾಗಿ ನಮ್ಮ ಇಂದ್ರಿಯಗಳ ಗ್ರಹಿಕೆಗೆ ಸಿಕ್ಕದೆ ಹೋಗುವ ಸಾವಿರಾರು ವಿಷಯಗಳ ಅನುಭವ ನಮಗೆ ದಕ್ಕದೆ ಹೋಗುತ್ತದೆ. ಅದು ನನ್ನ ಇಂದಿನ ವಿಷಯ ವಸ್ತು.
 

ಮನೆಯಲ್ಲಿಯ ಮೈಕ್ರೋವೇವ್ ಓವೆನ್ ಹೇಗೆ ಅಡುಗೆ ಬಿಸಿ ಮಾಡುತ್ತದೆ ಎಂದು ಯೋಚಿಸಿದ್ದೀರಾ? ಅಲ್ಲಿ ನೀವು ಕಡ್ಡಿ ಗೀರುವುದಿಲ್ಲ, ಬೆಂಕಿ ಹಚ್ಚುವುದಿಲ್ಲ. ಅದರೊಳಗೆ ಇಟ್ಟ ಪಾತ್ರೆ ಹೆಚ್ಚು ಬಿಸಿಯಾಗದೆ ಇದ್ದರೂ, ಅದರೊಳಗಿನ ಅಡುಗೆ (ಮ್ಯಾಗಿ ನೂಡಲ್ಸ್?) ಮಾತ್ರ ಬಿಸಿ ಬಿಸಿಯಾಗಿ ಹೇಗೆ ತಯಾರಾಗಿರುತ್ತದೆ? ಸುಲಭ ಉತ್ತರ, ಮೈಕ್ರೋವೇವ್ ಕಿರಣಗಳು ಕಣ್ಣಿಗೆ ಕಾಣದೆ ಇದ್ದರೂ, ಶಕ್ತಿಯುತವಾಗಿ ಕೆಲಸ ಮಾಡುತ್ತವೆ. ನಮಗೆ ಕಣ್ಣಿಗೆ ಗೋಚರವಾಗುವುದು VIBGYOR ಬಣ್ಣಗಳ ಕಿರಣಗಳು ಮಾತ್ರ. Violet ಬಣ್ಣದ ಆಚೆಗಿನ ಕಿರಣಗಳು Ultraviolet, X-Ray, Gamma ಹಾಗೆ Red ಬಣ್ಣದ ಈಚೆಗಿನ ಕಿರಣಗಳಿಗೆ Infrared, Microwave, Radio ಎಂದು ಕರೆಯುತ್ತೇವೆ. ನಮ್ಮ ಕಣ್ಣಿಗೆ ಕಾಣುವುದಕ್ಕಿಂತ, ಕಾಣದೆ ಹೋಗುವುದು ಅಗಾಧವಾಗಿರುವುದು ನಿಮಗೆ ಗೊತ್ತೇ? ಅವುಗಳ ಉಪಯೋಗ ಮಾತ್ರ ನಾವು ದಿನ ನಿತ್ಯ ಎನ್ನುವಂತೆ ರೇಡಿಯೋ, ಮೊಬೈಲ್ ಫೋನ್, ಕ್ಷ-ಕಿರಣ ಹೀಗೆ ಹಲವಾರು ಉಪಕರಣಗಳ ಸಹಾಯದಿಂದ ಸಾಧ್ಯವಾಗುತ್ತದೆ.


ನೋಡುವ ವಸ್ತು ಒಂದೇ ಆಗಿದ್ದರೂ, ಅದು ನಮಗೆ ಕಂಡ ಹಾಗೆ ಇತರೆ ಪ್ರಾಣಿಗಳಿಗೆ ಕಾಣುವುದಿಲ್ಲ. ಕೆಲವೊಂದು ಪ್ರಾಣಿಗಳು ಬಣ್ಣ ಗುರುತಿಸಲಾರವು. ಆದರೆ ಬೆಕ್ಕುಗಳು ನಮಗಿಂತ ಹೆಚ್ಚು ಅಗಲದ ೨೦೦ ಡಿಗ್ರಿ ನೋಟವನ್ನು ನೋಡಬಲ್ಲವು. ಕತ್ತಲಾದರೆ ನಾವು ಮನೆ ಸೇರಿದರೆ, ಕಾಡಿನಲ್ಲಿನ ಬೇಟೆ ಪ್ರಾಣಿಗಳು ಹಾಗು ನಿಶಾಚರ ಹಕ್ಕಿಗಳು ಆಗ ಹೊರ ಬೀಳುವುದಿಲ್ಲವೇ? ಪ್ರಕೃತಿಯು ಅವುಗಳ ದೇಹವನ್ನು ಬೇರೆ ತರಹ ವಿನ್ಯಾಸ ಮಾಡಿ ಅವುಗಳ ಇಂದ್ರಿಯಗಳ ಸಾಮರ್ಥ್ಯವನ್ನು ಅವುಗಳ ಜೀವನ ಶೈಲಿಗೆ ಹೊಂದುವಂತೆ ಬದಲಾಯಿಸಿದೆ. ನಾಯಿಗಳ ವಾಸನೆ ಗುರುತು ಹಿಡಿಯುವ ಶಕ್ತಿ ನಮಗಿಂತ  ಹೆಚ್ಚು ಇರುವ ಹಾಗೆ, ಹಾವುಗಳು ಸೂಕ್ಷ್ಮ ಕಂಪನಗಳನ್ನು ಗುರುತಿಸಿದ ಹಾಗೆ ಎಲ್ಲ ಪ್ರಾಣಿ, ಪಕ್ಷಿಗಳು ವಿವಿಧ ಸ್ಥರದಲ್ಲಿ ಇಂದ್ರಿಯ ಸಾಮರ್ಥ್ಯ ಹೊಂದಿವೆ. ಎಲ್ಲ ಜೀವಿಗಳಿಗೂ, ಕಾಣಿಸುವ ಬೆಳಕು, ಕೇಳಿಸುವ ಶಬ್ದ, ವಾಸನೆ, ರುಚಿ ಗುರುತಿಸುವಿಕೆ, ಹಾಗೆಯೆ ಸ್ಪರ್ಶದ ಅನುಭವಕ್ಕೆ ಬೇರೆ ಬೇರೆ ವ್ಯಾಪ್ತಿಗಳಿವೆ. ಅದರಾಚೆಗೆ ಇರುವುದು ಅವುಗಳ ಅನುಭವಕ್ಕೆ ಬರುವುದಿಲ್ಲ ಅಷ್ಟೇ. ಆದರೆ ಇರುವಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.


ಹಾಗೆಯೇ ನಿಮ್ಮ ಶ್ರವಣ ಶಕ್ತಿಗೆ ಒಂದು ಪುಟ್ಟ ಪರೀಕ್ಷೆ. ಲಿಂಕ್ ನಲ್ಲಿರುವ ಧ್ವನಿಯನ್ನು ಆಲಿಸಿ. ಅದರ ಮೊದಲ ಕೆಲವು ಕ್ಷಣಗಳು ಹಾಗು ಕೊನೆಯ ಕ್ಷಣಗಳು ನಿಮಗೆ ಕೇಳಿಸದೇ ಹೋಗಬಹುದು. ಆದರೂ ಸಂಪೂರ್ಣ ಆಲಿಸಿ. ನಂತರ ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ಇದನ್ನು ಕೇಳಿಸಿ ನೋಡಿ. ನಿಮಗಿಂತ ಹೆಚ್ಚಿನ frequency ಅವರಿಗೆ ಕೇಳಿಸುವುದಾಗಿ ಹೇಳುತ್ತಾರೆ. ತರಂಗಾಂತರದಲ್ಲಿ ಶಬ್ದ ಇದ್ದರೂ, ಅದು ಚಿಕ್ಕ ಮಕ್ಕಳಿಗೆ ಕೇಳಿಸಿದರೂ, ನಮಗೆ ಮಾತ್ರ ಕೇಳಿಸದೇ ಹೋಗಿತ್ತು.

https://www.youtube.com/watch?v=PAsMlDptjx8

 



ವಿಜ್ಞಾನದ ತಿಳಿವು ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನುಭೂತಿ ಮತ್ತು ಜ್ಞಾನವನ್ನು ನಮ್ಮದಾಗಿಸುತ್ತ ಹೋಗುತ್ತದೆ. ಪ್ರಕೃತಿಯ ರಹಸ್ಯಗಳು ತಮಗೆ ತಾವೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಇದು ಎಷ್ಟು ಕುತೂಹಲಕಾರಿ ವಿಷಯ ಅಲ್ಲವೇ?

Thursday, December 10, 2020

ವಿಶ್ವದ ಅಗಾಧತೆ: ನಮಗೆಷ್ಟು ಗೊತ್ತು?

ನಾನು ಶಾಲೆ ಓದುತ್ತಿರುವಾಗ, ನಮ್ಮ ಸೌರ ಮಂಡಲವನ್ನೇ (Solar System) ವಿಶ್ವ (Universe) ಎಂದುಕೊಂಡಿದ್ದೆ. ಆದರೆ ಕಾಲೇಜು ಓದುತ್ತಿರುವಾಗ ನಮ್ಮ ಸೌರ ಮಂಡಲದ  ಹಾಗೆ ೫೦೦ಕ್ಕು ಹೆಚ್ಚು ಸೌರ ಮಂಡಲಗಳಿದ್ದು ಅವನ್ನೆಲ್ಲ ಒಟ್ಟುಗೂಡಿ ಮಿಲ್ಕಿ ವೆ ಗ್ಯಾಲಕ್ಸಿ (Milki Way Galaxy) ಎನ್ನುತ್ತಾರೆ ಎಂದು ತಿಳಿಯಿತು. ಮುಂದೆ ಕುತೂಹಲಕ್ಕಾಗಿ ವಿಜ್ಞಾನದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತ ಹೋದಾಗ ಆಂಡ್ರೊಮೆಡಾ ಗ್ಯಾಲಕ್ಸಿ (Andromeda Galaxy) ನಮ್ಮ ಗ್ಯಾಲಕ್ಸಿಗಿಂತ ಹಿರಿದಾದುದು ಎನ್ನುವ ವಿಷಯ ತಿಳಿಯಿತು. ಹೀಗೆ ಕಾಡಿನಲ್ಲಿ ಮರಕ್ಕಿಂತ ಮರ ದೊಡ್ಡದು ಎನ್ನುವ ಹಾಗೆ, ವಿಶ್ವದ ಅಗಾಧತೆ ನಾವು ಅರ್ಥ ಮಾಡಿಕೊಳ್ಳುತ್ತ ಹೋದಷ್ಟು ದೊಡ್ಡದಾಗುತ್ತ ಹೋಗುತ್ತದೆ. ವರ್ಷದ ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ ನಮ್ಮ ಗ್ಯಾಲಕ್ಸಿ ಕೇಂದ್ರ ಬಿಂದು ಒಂದು ಕಪ್ಪು ರಂಧ್ರ (Black Hole) ಎಂದು ಕಂಡು ಹಿಡಿದ ವಿಜ್ಞಾನಿಗಳಿಗೆ ದೊರಕಿತಲ್ಲವೇ. ಇದು ಹೀಗೆ ಇರಲು ಸಾಧ್ಯವೇ ಎಂದು ಆಶ್ಚರ್ಯ ಎನಿಸಿತು.


ವಿಶ್ವದ ಬಗ್ಗೆ ನಮ್ಮ ತಿಳುವಳಿಕೆ ಸಾವಿರಾರು ವರುಷಗಳಿಂದ ಬದಲಾಗುತ್ತ ಬಂದಿದೆ ಮತ್ತು ಹಾಗೆ ಬದಲಾಗುವುದು ಮುಂದುವರೆದಿದೆ. ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದ ಕಾಲವಿತ್ತು. ಹಾಗೆಯೇ ಭೂಮಿಯ ಸುತ್ತ ಸೂರ್ಯ ಸುತ್ತುವುದು ಎಂದು ನಂಬಿದ್ದ ಕಾಲವೂ ಇತ್ತು. ಸೂರ್ಯನೇ ಕೇಂದ್ರ ಬಿಂದು ಎಂದ ಗೆಲಿಲಿಯೋ ಅಂದಿನ ಸಮಾಜಕ್ಕೆ ಅರ್ಥವಾಗದೇ ಹೋದರೂ, ವಿಜ್ಞಾನದ ಬೆಳವಣಿಗೆಗೆ ಅವನ ಕೊಡುಗೆ ಅಪಾರ. ಅವನು ತಯಾರಿಸಿದ ಟೆಲಿಸ್ಕೋಪ್ ಗಳು, ಗ್ರಹಗಳ ಚಲನೆಯನ್ನು ಹಾಗೆಯೇ ವಿಶ್ವದ ರಚನೆಯನ್ನು ತೆರೆದಿಡುತ್ತಾ ಹೋದವು. ಅವನ ಹಾಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿ ಇದ್ದ ಸಾಕಷ್ಟು ವಿಜ್ಞಾನಿಗಳು ಹೊಸ ವಿಷಯಗಳನ್ನು ಕಲಿಯುತ್ತ, ಹಳೆಯ ತಪ್ಪು ತಿಳುವಳಿಕೆಗಳನ್ನು ತಿದ್ದುತ್ತಾ ಸಾಗಿದರು. ನ್ಯೂಟನ್, ಐನ್ ಸ್ಟೀನ್ ರಂತ ದೈತ್ಯ ಪ್ರತಿಭೆಗಳು ವಿಜ್ಞಾನವನ್ನು ಮನುಕುಲದ ಮುಂಚೂಣಿಗೆ ತಂದರು. ಸ್ಟೀಫೆನ್ ಹಾಕಿಂಗ್ ವಿಶ್ವದ ಬಗೆಗಿನ ನಮ್ಮ ತಿಳುವಳಿಕೆಯ ಪರಿಧಿಯನ್ನು ವಿಸ್ತರಿಸಿದರು. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವೇಗದ ಬೆಳವಣಿಗೆ ಕಂಡು, ಹೆಚ್ಚಿನ ಮಾಹಿತಿಯನ್ನು ನಿಖರವಾಗಿ ಕಲೆ ಹಾಕಲು ಸಾಧ್ಯವಾಗಿದೆ.

 

ನಮ್ಮದೇ ಲೋಕದಲ್ಲಿ  ಮುಳುಗಿ ಹೋಗುವ ನಮಗೆ, ನಾವು ಇರುವ ಭೂಮಿ ಎಷ್ಟು ಚಿಕ್ಕದು ಎನ್ನುವ ಅಂದಾಜು ಸಿಗಲಿಕ್ಕೆ ಈ ವಿಡಿಯೋ ನೋಡಿ. ನಾವು ಇರುವ ಭೂಮಿ ಏನು ಅಲ್ಲ, ನಮ್ಮ ಸೂರ್ಯನೇ ಯಾವ ಲೆಕ್ಕಕ್ಕೂ ಅಲ್ಲ ಅನ್ನುವಷ್ಟು ದೊಡ್ಡ ದೊಡ್ಡ ನಕ್ಷತ್ರಗಳಿವೆ ಈ ವಿಶ್ವದಲ್ಲಿ. ಹಾಗೆ ನಕ್ಷತ್ರ  ಉರಿಯುವುದು ಮುಗಿದು ಹೋದ ಮೇಲೆ ಶೂನ್ಯವಾಗಿ ಬದಲಾಗಿ, ಆದರೆ ತಮ್ಮ ಗುರುತ್ವಾಕರ್ಷಣೆಯನ್ನು ಉಳಿಸಿಕೊಂಡು ಹತ್ತಿರದ ಎಲ್ಲವನ್ನು ತಮ್ಮ ಶೂನ್ಯದಲ್ಲಿ ಅರಗಿಸಿಕೊಳ್ಳುವ ಅನೇಕ ಕಪ್ಪು ರಂಧ್ರಗಳಿವೆ. ಹಾಗಿದ್ದರೂ ವಿಶ್ವದ ಅಗಾಧತೆ ಹಿಗ್ಗುತ್ತಲೇ ಇದೆ. ಇದು ವಿಸ್ಮಯದ ಸಂಗತಿ ಅಲ್ಲವೇ? 


ಅಂದ ಹಾಗೆ ನಿಮ್ಮ ಮನೆಯಲ್ಲಿ ಟೆಲಿಸ್ಕೋಪ್ ಇದೆಯೇ? ಇದ್ದಲ್ಲಿ, ಡಿಸೆಂಬರ್ ೨೧ ರಾತ್ರಿ ನಿಮ್ಮ ಮನೆ ಮಾಳಿಗೆ ಹತ್ತಿ, ದೊಡ್ಡ ಗ್ರಹಗಳಾದ ಶನಿ ಹಾಗು ಗುರು ಗ್ರಹಗಳ ಸಂಯೋಗ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದೀರಾ?



https://www.youtube.com/watch?v=i93Z7zljQ7I

Tuesday, December 8, 2020

ಅಜರಾಮರ ಹೈಡ್ರಾ; ಪಾರ್ಕಿನ್ಸನ್ ವಾಸನೆ

'Invisibilia' ಎನ್ನುವ podcast ನಲ್ಲಿ ಕೇಳಿದ ಎರಡು ಅಧ್ಯಾಯಗಳು ( 'An Unlikely Superpower' on Parkinson Disease and 'The Reluctant Immortalist' on Hydra) ವಿಜ್ಞಾನದ ಹೊಸ ವಿಷಯಗಳನ್ನು ತಿಳಿಸಿಕೊಟ್ಟವು. ಅವುಗಳ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.


ಪತ್ನಿ ಮೂಸಿ ನೋಡಿ ಕಂಡು ಹಿಡಿದ ರೋಗ:

ಸ್ಕಾಟ್ಲೆಂಡ್ ನಲ್ಲಿ ಒಂದು ಸುಂದರ ಕುಟುಂಬ, 'ಜಾಯ್' ಮತ್ತು ಅವಳ ಪತಿ 'ಲೆಸ್'. ಅವರಿಬ್ಬರೂ ಕಾಲೇಜು ಓದುತ್ತಿರುವಾಗ ಪ್ರೇಮಿಸಿ ಮದುವೆಯಾಗಿದ್ದು. 'ಲೆಸ್' ಡಾಕ್ಟರ್ ಆದರೆ, 'ಜಾಯ್' ಆಗಿದ್ದು ನರ್ಸ್. ಆ ದಂಪತಿಗೆ ಮೂರು ಜನ ಮಕ್ಕಳು.


ಒಂದು ದಿನ ಮನೆಗೆ ಸೇವೆಯಿಂದ ವಾಪಸ್ಸಾದ ಪತಿ ಲೆಸ್ ನ ಮೈಯಿಂದ ಒಂದು ತರಹದ ವಾಸನೆ ಬರುವುದು ಪತ್ನಿ ಜಾಯ್ ಗಮನಿಸಿದಳು. ಆಸ್ಪತ್ರೆಯ ಯಾವುದೊ ವಾಸನೆ ಮೆಟ್ಟಿಕೊಂಡಿರಬಹುದೆಂದು ಪತಿಯನ್ನು ಸ್ನಾನದ ಮನೆಗೆ ದೂಡಿದಳು. ಆದರೂ ಅದು ಕಡಿಮೆಯಾಗಲಿಲ್ಲ. ದಿನ ಕಳೆದಂತೆ  ವಾಸನೆಯ ಘಾಟು ಹೆಚ್ಚುತ್ತಾ ಹೋಯಿತು ಹಾಗೆಯೇ ಲೆಸ್ ನ ವರ್ತನೆಯಲ್ಲೂ ಬದಲಾವಣೆಗಳು ಕಾಣಲಾರಂಭಿಸಿದವು. ಒಂದು ದಿನ ರಾತ್ರಿ ಲೆಸ್ ಸಹನೆ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಿದಾಗ ಆಸ್ಪತ್ರೆಗೆ ತಪಾಸಣೆಗೆ ಹೋದರು. ಅಲ್ಲಿ ಲೆಸ್ ಗೆ ಪಾರ್ಕಿನ್ಸನ್ ಕಾಯಿಲೆ (ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ರೋಗ) ಇರುವುದು ಗೊತ್ತಾಯಿತು. ಅಲ್ಲಿ ಕುಳಿತಿದ್ದ ಹಲವಾರು ರೋಗಿಗಳ ಮೈಯಿಂದ ಅದೇ ತರಹದ ವಾಸನೆ ಬರುವುದನ್ನು ಜಾಯ್ ಗಮನಿಸಿದಳು. ಮೊದಲಿಗೆ ವೈದ್ಯರು, ವಿಜ್ಞಾನಿಗಳು ಇದನ್ನು ನಿರಾಕರಿಸಿದರೂ, ಜಾಯ್ ನ್ನು ಒಂದು ಪರೀಕ್ಷೆಗೆ ಒಳಪಡಿಸಿದರು. ಈಗಾಗಲೇ ಪಾರ್ಕಿನ್ಸನ್ ಕಾಯಿಲೆ ಇರುವ ಮತ್ತು ಇರದಿರುವ ಸುಮಾರು ೨೫ ಜನರನ್ನು ಒಟ್ಟುಗೂಡಿಸಿ, ಜಾಯ್ ಅವರ ವಾಸನೆಯಿಂದ ಗ್ರಹಿಸಿ ಯಾರಿಗೆ ಕಾಯಿಲೆ ಇದೆ ಮತ್ತು ಯಾರಿಗೆ ಇಲ್ಲ ಎಂದು ನಿಖರವಾಗಿ ಗುರುತಿಸುವುದು ಈ ಪರೀಕ್ಷೆಯ ಉದ್ದೇಶ. ಒಬ್ಬರ ಹೊರತಾಗಿ ಉಳಿದೆಲ್ಲ ಜನರನ್ನು ನಿಖರವಾಗಿ ಗುರುತಿಸಿದಳು ಜಾಯ್. ಸ್ವಲ್ಪ ದಿನದ ನಂತರ ಆ ಇನ್ನೊಬ್ಬರಿಗೂ ಕಾಯಿಲೆ ಇರುವ ಸಂಗತಿ ಪರೀಕ್ಷೆಯ ನಂತರ ತಿಳಿಯಿತು. ಜಾಯ್ ಳ ವಾಸನಾ ಸಾಮರ್ಥ್ಯ ವೈದ್ಯಕೀಯ ಪರೀಕ್ಷೆ ಗುರುತಿಸಿವುದಕ್ಕಿಂತ ಮುಂಚೆಯೇ ಆ ಸಮಸ್ಯೆಯನ್ನು ಗುರುತಿಸಿತ್ತು. ನಂತರದ ಸಂಶೋಧನೆಗಳು ಸಾಬೀತು ಪಡಿಸಿದ್ದು, ಪಾರ್ಕಿನ್ಸನ್ ಕಾಯಿಲೆ ಚರ್ಮದ ಗ್ರಂಥಿಗಳಲ್ಲಿ ಒಂದು ವಿಶಿಷ್ಟ ದ್ರವವನ್ನು ಹೊರಸೂಸಿ ಒಂದು ತರಹದ ವಾಸನೆ ಹೊರಡಿಸುತ್ತದೆ. ಎಲ್ಲರಿಗೂ ಆ ವಾಸನೆಯನ್ನು ಗುರುತಿಸಲು ಆಗದಿದ್ದರು ಜಾಯ್ ತರಹದ ಕೆಲವರಿಗೆ ಸಾಧ್ಯವಾಗುತ್ತದೆ ಎನ್ನುವ ವಿಷಯ. 


ಜಾಯ್ ತನ್ನ ಪತಿಯನ್ನು ಈ ರೋಗಕ್ಕೆ ಕಳೆದುಕೊಂಡರೂ, ಅವಳ ಗ್ರಹಿಕೆ ಇಂದಿಗೆ ಈ ಕಾಯಿಲೆಯ ರೋಗಲಕ್ಷಣಗಳನ್ನು ಮುಂಚಿತವಾಗಿಯೇ ಗುರುತಿಸಲು ವೈದ್ಯಕೀಯ ಲೋಕಕ್ಕೆ ಸಹಾಯವಾಗುತ್ತಿದೆ.

Link:

https://podcasts.google.com/feed/aHR0cHM6Ly9mZWVkcy5ucHIub3JnLzUxMDMwNy9wb2RjYXN0LnhtbA/episode/NTU1MjY5ZTAtODM3Ni00NzAxLWEwNzYtZGJhNWU1NTg5MDI2?sa=X&ved=0CAUQkfYCahcKEwiQ5cqggL7tAhUAAAAAHQAAAAAQAg&fbclid=IwAR0NpB9eYsDdfonS3-mwbkzvp1KpU8LsvsSsBbDAzPdFMBSVyw7bLhwEGZ0


ಅಜರಾಮರ ಹೈಡ್ರಾ:


ಹೈಡ್ರಾ ಇದು ನೀರಿನಲ್ಲಿ ವಾಸಿಸುವ ಸಣ್ಣ ಪ್ರಾಣಿ. ಕೊಳವೆಯಾಕಾರದ, ಬರಿ ೧೦ ಮೀ.ಮೀ. ಉದ್ದ ಬೆಳೆಯುವ ಈ ಪ್ರಾಣಿ ಬಲು ಸೋಜಿಗವಾದದ್ದು. ಇದರ ದೇಹಕ್ಕೆ ವಯಸ್ಸೇ ಆಗುವುದಿಲ್ಲ. ಅಷ್ಟೇ ಎಲ್ಲ, ಇದರ ಬಾಲವನ್ನು ಕಡಿದು ಹಾಕಿದರೆ ಹೊಸ ಬಾಲ ಬೆಳೆಯುತ್ತದೆ. ತಲೆಯನ್ನು ಕಡಿದರೆ, ಹೊಸ ತಲೆ ಬೆಳೆಯುತ್ತದೆ. ತಲೆ, ಬಾಲ ಎರಡನ್ನು ತುಂಡು ಮಾಡಿದರೆ, ನಡುವಿನ ಭಾಗ ತಲೆ ಮತ್ತು ಬಾಲ ಎರಡನ್ನೂ ಬೆಳೆಸಿಕೊಳ್ಳುತ್ತದೆ. ಹೀಗೆ ಇದರ ದೇಹ ಸಂಪೂರ್ಣ ನವೀಕರಣಗೊಳ್ಳುತ್ತ ಸಾಗುವುದರಿಂದ, ಇದಕ್ಕೆ ವಯಸ್ಸಿನ ಸಮಸ್ಯೆ ಕಾಡದೆ, ಅದನ್ನು ಯಾವುದೇ ಮೀನು ಸಂಪೂರ್ಣ ನುಂಗಿ ಜೀರ್ಣಗೊಳಿಸಿ ಕೊಂಡರೆ ಮಾತ್ರ ಅದರ ಜೀವನ ಮುಗಿಯುತ್ತದೆ ಇಲ್ಲದಿದ್ದರೆ ಅಜರಾಮರ ಎನ್ನುವಂತೆ ಜೀವಿಸುತ್ತದೆ. 


ಅದು ಹೇಗೆ ಸಾಧ್ಯ ಎನ್ನುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅವರು ಇದುವರೆಗೂ ಕಂಡುಕೊಂಡಿದ್ದು, ಹೈಡ್ರಾ ನಲ್ಲಿ ಇದು ಸಾಧ್ಯವಾಗುವಂತೆ ಮಾಡುವುದು ಅವುಗಳ 'stem cells ಜೀವಕೋಶಗಳು. ಇವು ಮನುಷ್ಯನಲ್ಲಿ ಭ್ರೂಣಾವಸ್ಥೆಯಲ್ಲಿ ಅಂಗಾಂಗಗಳು ರೂಪುಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿ ನಂತರ ಆಯಾ ಅಂಗಾಂಗಗಳ ಜೀವಕೋಶಗಳಾಗಿ ಬದಲಾಗುತ್ತವೆ. ಆದರೆ ಹೈಡ್ರಾ ನಲ್ಲಿ  stem cells  ಹಾಗೆಯೇ ಉಳಿದುಕೊಂಡು ಅವಶ್ಯಕತೆಗೆ ತಕ್ಕಂತೆ ಹೊಸ ಅಂಗಾಂಗಗಳನ್ನು ಬೆಳೆಸುತ್ತವೆ. ಹಾಗೆಯೇ ಇಡೀ ದೇಹವನ್ನು ನವೀಕರಿಸುತ್ತವೆ. ಅಲ್ಲದೆ ಇಡೀ ಜೀವಕ್ಕೆ ಬೇಕಾದ ಮಾಹಿತಿಯೆಲ್ಲವೂ ಜೀನ್ ಗಳ ಮುಖಾಂತರ ಪ್ರತಿಯೊಂದು ಜೀವಕೋಶದಲ್ಲಿ ಉಳಿದುಕೊಂಡು, ಯಾವುದೇ ಭಾಗ ಹಾನಿಗೊಂಡರೆ ಅದನ್ನು ಮತ್ತೆ ಬೆಳೆಸುವ ಕಾರ್ಯ ಸಾಧ್ಯವಾಗುತ್ತದೆ. ಇದರ ಮೇಲಿನ ಸಂಶೋಧನೆಗಳು, ಇದನ್ನು ಮನುಷ್ಯ ಕುಲದ ಒಳಿತಿಗೆ ಉಪಯೋಗಿಸಬಹುದೇ ಎನ್ನುವ ಕಡೆಗೆ ಸಾಗಿವೆ.


ಮನುಷ್ಯನ ಅಜರಾಮರ ಬಯಕೆ ಒಳ್ಳೆಯದೋ, ಅಲ್ಲವೋ ಹೇಗೆ ಹೇಳುತ್ತೀರಿ? ಆದರೆ ದೇಹದ ಭಾಗ ಹಾನಿಗೊಳಗಾದರೆ, ಅದನ್ನು ಹೈಡ್ರಾದ ಹಾಗೆ ಮತ್ತೆ ಬೆಳೆಸಿಕೊಳ್ಳುವುದು ಸಾಧ್ಯ ಆದರೆ ಎಷ್ಟು ಚೆನ್ನ ಅಲ್ಲವೇ?


Link:

https://podcasts.google.com/feed/aHR0cHM6Ly9mZWVkcy5ucHIub3JnLzUxMDMwNy9wb2RjYXN0LnhtbA/episode/YzliM2ViZDQtN2NiNC00MjFmLThmMTYtZTk5NDI4NGMyMGNl?sa=X&ved=0CAUQkfYCahcKEwiYvrfhmb7tAhUAAAAAHQAAAAAQHQ

Tuesday, October 27, 2020

Mitochondrial Eve and the metamorphosis of human being

When I heard about the Corona virus first time few months ago, I tried to understand what is a virus in the first place and how it differs from a bacteria? I soon realized I did not have foundational knowledge needed to understand this in detail, so began my attempt to make up for the knowledge deficit of microbiology. To understand the biochemical reactions and the building elements of a cell, I had to learn chemistry also in detail. I had to log on to Khan Academy for basic courses in Science and order new books to learn the concepts and fundamentals and also bring out the books already available in my book shelf to the reading table. This has kept me busy for the past few months. And I thought of sharing a new thing I learnt about - the concept of "Mitochondrial Eve". You can google the term and get better answers but I still would like to describe in my own terms.

We, human beings inherit the chromosomes from both of our parents, one pair each from father and mother. Though the genetic information comes from both of them, other cellular structural components (like the membrane structures, cytoplasm, mitochondria, lysosome etc.) comes only from mother. What is interesting is, one of the components - mitochondria has its own genetic structure and it only comes from mother. That makes it easier to track maternal ancestry. As you go backwards in the timescale, the number of mothers reduce and around 200,00 years ago, it stops at a single mother - biologists named her Mitochondrial Eve or the mother of humankind. That gives us a reference to study many other things. Like how much of  biological features began transforming us from cave dwellers into present day human beings. Those things let us discuss in the future posts.