Saturday, September 24, 2016

ವೇದಗಳ ರಹಸ್ಯ

(ಶ್ರೀ ಅರಬಿಂದೋರವರ 'Secret of The Veda' ಪುಸ್ತಕದ  ಮೊದಲ ಪುಟದ ಅನುವಾದ)

ವೇದಗಳಲ್ಲಿ ಏನಾದರೂ ರಹಸ್ಯ ಅಡಗಿದೆಯೇ? ಅದು ಇನ್ನೂ ಗುಪ್ತವಾಗಿ ಉಳಿದಿದೆಯೇ?

ಪ್ರಾಚೀನ ಸಂಸ್ಕೃತಿಯ ಹೃದಯದೊಳಕ್ಕೆ ಇಳಿದು ನೋಡಿದರೆ, ಅಲ್ಲಿ ಯಾವುದೇ ರಹಸ್ಯ ಎಂದಿಗೂ ಇದ್ದಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ವೇದಗಳಲ್ಲಿನ ಶ್ಲೋಕಗಳು ಮತ್ತು ಯಜ್ಞಗಳ ಆಚರಣೆಗಳು, ಪ್ರಕೃತಿಯ ಶಕ್ತಿಗಳಿಗೆ ಹೆಸರಿಟ್ಟು ಸಮರ್ಪಿಸುವ ವಿಧಾನಗಳು ಆಗಿದ್ದವು. ವೇದಗಳು ಹುಟ್ಟಿದಾಗ, ಅಂದಿನ ಸಮಾಜ ಇನ್ನೂ ಪೂರ್ಣ ಪ್ರಮಾಣದ ನಾಗರೀಕತೆಯ ಬದಲಾವಣೆಗೆ ಒಳಪಟ್ಟಿರಲಿಲ್ಲ. ಆದರೆ ಅವುಗಳ ಸುತ್ತ ಬೆಳೆದ ಮೂಢ-ನಂಬಿಕೆ ಮತ್ತು ಕಟ್ಟು ಕಥೆಗಳು ಅಪಾರ. ವೇದಗಳ ಕೊನೆಯಲ್ಲಿ ಬರುವ ಕೆಲವು ಶ್ಲೋಕಗಳಲ್ಲಿ ನಾವು ನೈತಿಕ ಮತ್ತು ಆತ್ಮ ವಿಶ್ಲೇಷಣೆಯ ಭಾವಗಳನ್ನು ಗಮನಿಸಬಹುದು. ಕೆಲವರ ಅಭಿಪ್ರಾಯದ ಪ್ರಕಾರ, ಆ ವಿಚಾರಗಳು, ದ್ರಾವಿಡರಿಂದ ಎರವಲು ಪಡೆದದ್ದು. ಆದರೆ ವೇದಗಳಲ್ಲಿನ ಶ್ಲೋಕಗಳು ದ್ರಾವಿಡರನ್ನು 'ವೇದ-ಶತ್ರುಗಳು' ಎಂದೇ ದೂಷಿಸುತ್ತವೆ. ಆ ವಿಚಾರಗಳ ಮೂಲ ಯಾವುದೇ ಆಗಿರಲಿ, ಆದರೆ ವೇದಾಂತದ ಪ್ರಥಮ ಚಿಂತನೆಯ ಎಳೆಗಳನ್ನು ಆ ಶ್ಲೋಕಗಳಲ್ಲಿ ಗಮನಿಸಬಹುದು. ಆ ವೇದಾಂತದ ಸಿದ್ಧಾಂತಗಳು ಅಂದಿನ ಸಮಾಜ ವೇಗ ಗತಿಯಲ್ಲಿ ನಾಗರೀಕತೆಯ ಬದಲಾವಣೆಗೆ ಒಳಪಟ್ಟಿದನ್ನು ಮತ್ತು ಅದು ವೇದಗಳ ಮೇಲೆ ಪ್ರಭಾವ ಬೀರಿದ್ದನ್ನು ಸೂಚಿಸುತ್ತದೆ. ಅದು ಭಾಷಾ-ಶಾಸ್ತ್ರ, ಪುರಾಣಗಳು ಮತ್ತು ಧರ್ಮಶಾಸ್ತ್ರದ ಅಧ್ಯಯನದ ಮೂಲಕವೂ ಧೃಢ ಪಡುತ್ತದೆ.

ಈ ಪ್ರಾಚೀನ ಸಮಸ್ಯೆಗೆ ಒಂದು ಹೊಸ ನೋಟ ಕೊಡುವುದು ನನ್ನ ಪುಸ್ತಕದ ಉದ್ದೇಶ. ಇದಕ್ಕೆ ಋಣಾತ್ಮಕವಾದ ಮತ್ತು ವಿನಾಶಕಾರಿಯಾದ ಪದ್ದತಿಯನ್ನು ಅನುಸರಿಸದೆ, ಬದಲಿಗೆ ನಿರ್ದಿಷ್ಟವಾದ ಮತ್ತು ರಚನಾತ್ಮಕವಾದ ಅಡಿಪಾಯದ ಮೇಲೆ ಒಂದು ಅಭಿಪ್ರಾಯವನ್ನು ಕಟ್ಟಿ ಕೊಡುವುದಾಗಿದೆ. ಅಲ್ಲದೇ ಪುರಾತನ ಕಾಲದ ವಿಚಾರಗಳ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಸಮರ್ಪಕವಾಗಿ ವಿಶ್ಲೇಷಿಸುವುದಾಗಿದೆ.


ಪಾಶ್ಚ್ಯಾತ್ಯ ಪಂಡಿತರು ಮೂಲ ಮತ್ತು ಏಕೈಕ ವೇದ ಎಂದು ಪರಿಗಣಿಸುವ ಋಗ್ವೇದದಲ್ಲಿ ಇರುವ ಕೆಲವು ಶ್ಲೋಕಗಳು ಮತ್ತು ಅವುಗಳು ಉಪಯೋಗಿಸುವ ಪ್ರಾಚೀನವಾದಂತ ಭಾಷೆ, ಪದ-ಪುಂಜಗಳು, ಸಮರ್ಪಕವಾಗಿ ಪರಿಹರಿಸಲು ಸಾಧ್ಯವಾಗದಂತ ಸಮಸ್ಯೆಗಳನ್ನೂ ತಂದು ಒಡ್ಡುತ್ತವೆ. ಅಲ್ಲಿಯ ಕೆಲವು ಶಬ್ದಗಳು ಮುಂದಿನ ಶ್ಲೋಕಗಳಲ್ಲಿ ಉಪಯೋಗವಾಗದೇ, ಮತ್ತು ನಂತರ ಕಾಲದಲ್ಲಿ ಬೆಳವಣಿಗೆಗೊಂಡ ಭಾಷೆಯಾದ ಸಂಸ್ಕೃತದದಲ್ಲಿನ ಪದದ ಅರ್ಥಗಳಿಗೂ ತಾಳೆಯಾಗದೇ, ಆ ಶಬ್ದಗಳಿಗೆ ಬಹು ಅರ್ಥಗಳಿದ್ದವು ಎನ್ನುವ ಭಾವನೆ ಮೂಡಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಓದುಗನಿಗೂ, ಅವನ ಅನುಭವ ಹಾಗೂ ಭಾಷಾ ಸಾಮರ್ಥ್ಯದ ಅನುಗುಣವಾಗಿ, ಬೇರೆ ಬೇರೆ ರೀತಿಯಲ್ಲಿ ಆ ಶ್ಲೋಕದ ಮತ್ತು ವೇದದ ಅರ್ಥ ಮಾಡಿಸುವ ಸಂಕೀರ್ಣ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ವೇದಗಳು ಹುಟ್ಟಿ ಸಾವಿರಾರು ವರ್ಷಗಳ ನಂತರದ ಕಾಲ ಘಟ್ಟದಲ್ಲಿ ಅವುಗಳನ್ನು ಅರ್ಥ ಮಾಡಿಕೊಳ್ಳುವ ಮೂರು ಗಮನಾರ್ಹ ಪ್ರಯತ್ನಗಳಾಗಿವೆ. ಅಂತ ಮೊದಲನೇ ಪ್ರಯತ್ನ ಆಗಿದ್ದು ಉಪನಿಷತ್ತು ಮತ್ತು ಬ್ರಾಹ್ಮಣ ಶಾಸ್ತ್ರಗಳಿಂದ. ಈ ಪ್ರಯತ್ನ ವೇದ ನಂತರದ ಕಾಲದಲ್ಲಿ ಆದರೆ ಇನ್ನೂ ಪುರಾತನ ಎನ್ನಬಹುದಾದ ಕಾಲಘಟ್ಟದಲ್ಲಿ ಆಗಿದ್ದು ಮತ್ತು ಆ ಪ್ರಯತ್ನ ಪೂರ್ಣ ಪ್ರಮಾಣದ್ದು ಆಗಿರದೆ ವೇದಗಳ ಕೆಲವು ಭಾಗಗಳನ್ನು ಮಾತ್ರ ಒಳಗೊಂಡಿದೆ. ನಂತರ ವೇದಗಳ ಸಂಪೂರ್ಣ ವ್ಯಾಖ್ಯಾನ ಮತ್ತು ಅರ್ಥ ವಿವರಣೆ ಮಾಡಿದ್ದು ಭಾರತೀಯ ವಿದ್ವಾಂಸನಾದ ಸಾಯಣ. ಇತ್ತೀಚಿನ ಪ್ರಯತ್ನ ಯುರೋಪ್ ಮೂಲದ ಹಲವಾರು ವಿದ್ವಾಂಸರ ಶ್ರಮದ ಫಲ. ಆದರೆ ಶ್ಲೋಕದಲ್ಲಿನ ಶಬ್ದಗಳು ಸಂಧರ್ಭಕ್ಕಾನುಸಾರವಾಗಿ ಬೇರೆ ಬೇರೆ ಅರ್ಥ ಹೊಮ್ಮಿಸುವುದರಿಂದ, ಅವುಗಳ ಸಾಲು ಸಾಲಿನ ವಿವರಣೆ ಆ ಪ್ರಯತ್ನಗಳಲ್ಲಿ ಬೇರೆ ಬೇರೆಯಾಗಿ ಮೂಡಿ ಬರುತ್ತವೆ. ಕೆಲವು ಶಬ್ದಗಳ ಗ್ರಹಿಕೆ ಸಾಧ್ಯವಾಗದಾಗ, ಅವುಗಳ ಅರ್ಥ ನಿರೂಪಣಕಾರನ ಕಲ್ಪನಾ ಶಕ್ತಿಯ ಉಪಯೋಗ ಪಡೆಯುತ್ತವೆ.

ಹೀಗೆ ವೇದಗಳ ಅರ್ಥ ಗ್ರಹಿಕೆ ಅಸ್ಪಷ್ಟವಾಗಿದ್ದರೂ, ಧರ್ಮ ಮತ್ತು ಸಾಹಿತ್ಯದ ಇತಿಹಾಸಗಳಲ್ಲಿ  ಅವುಗಳಿಗೆ ಒಂದು ವೈಭವದ ಸ್ಥಾನ ದೊರಕಿದೆ. ಅಗಾಧವಾದ ಧರ್ಮಗಳಿಗೆ ಮತ್ತು ಆಳವಾದ ಆಧ್ಯಾತ್ಮ ಮತ್ತು ತತ್ವ ಶಾಸ್ತ್ರಗಳಿಗೆ ವೇದಗಳು ಮೂಲ ಎನಿಸಿಕೊಂಡಿವೆ. ಬ್ರಹ್ಮಣ, ಉಪನಿಷತ್ತು, ತಂತ್ರ, ಪುರಾಣ ಅಲ್ಲದೇ ಪ್ರಸಿದ್ಧವಾದ ಸಾಕಷ್ಟು ಋಷಿ-ಮುನಿಗಳ ಬೋಧನೆಗಳಿಗೆ ಪ್ರಮಾಣಿತ ಮೂಲ ಎನಿಸಿಕೊಂಡಿವೆ. ಜ್ಞಾನದ ಅರಿವೇ ವೇದ. ಅದು ಮನುಷ್ಯನ ಗ್ರಹಿಕೆಗೆ ಸಾಧ್ಯವಾದಂತ ಪರಮೊತ್ಕೃಷ್ಟ ಆಧ್ಯಾತ್ಮಿಕ ಸತ್ಯ.

ವೇದಗಳ ನಿಜವಾದ ಪ್ರಭಾವ ಧರ್ಮ ಹಾಗೂ ವೇದಾಂತದ ಮೇಲೆ ಪ್ರಾರಂಭವಾಗಿದ್ದು ಉಪನಿಷತ್ತುಗಳ ಮೂಲಕ. ಹೀಗಾಗಿ ವೇದಗಳು ಲೌಕಿಕ ಅರ್ಥದಿಂದ ವೇದಾಂತದ ಅರ್ಥ ಪಡೆದದ್ದು ಉಪನಿಷತ್ತುಗಳ ಮಹತ್ವ. ಮನುಷ್ಯನ ಮನಸ್ಸು ಹೊಸ ವಿಷಯಗಳನ್ನು ಕಲಿಯುತ್ತ ಜ್ಞಾನವನ್ನು ನವೀಕರಣಗೊಳಿಸುತ್ತ ಸಾಗುತ್ತದೆ. ಅದು ಹಳೆಯ ಅಸಮರ್ಪಕ ವಿಷಯಗಳನ್ನು ಹೊಸ ಆವಿಷ್ಕಾರಗೊಳೊಂದಿಗೆ ಸಮೀಕರಣಗೊಳಿಸುತ್ತ ಜ್ಞಾನವನ್ನು ವಿಸ್ತಾರಗೊಳಿಸುತ್ತದೆ.

 ಋಗ್ವೇದ ಒಂದು ಮಹತ್ವದ ಕೃತಿ. ಅದು ಮಾನವ ಕುಲದಲ್ಲಿ ಆದ ವಿಚಾರ ಶಕ್ತಿಯ ಬೆಳವಣಿಗೆಯನ್ನು ತೋರಿಸುತ್ತದೆ. ಆದರೆ ಆ ಕಾಲದಲ್ಲಿ ಆಧ್ಯಾತ್ಮ ಜ್ಞಾನವನ್ನು ರಹಸ್ಯವಾಗಿಡಲು ಏನು ಕಾರಣಗಳಿದ್ದವು ಎಂದು ಈಗ ಊಹಿಸುವುದು ಕಷ್ಟ. ಆಗಿನ ಯೋಗಿಗಳ ಪ್ರಮುಖ ಉದ್ದೇಶ ಪವಿತ್ರವಾದ ಆತ್ಮ-ಜ್ಞಾನವನ್ನು ಮತ್ತು ದೇವರ ಬಗ್ಗೆ ಸರಿಯಾದ ತಿಳುವಳಿಕೆ ಹೊಂದುವುದು ಆಗಿತ್ತು. ಆದರೆ ಈ ವಿವೇಕ ಸಾಮಾನ್ಯ ಮನುಷ್ಯನಿಗೆ ಅರ್ಥವಾಗದೇ ಹೋಗಬಹುದು ಅಥವಾ ದುರಾತ್ಮರ ಕೈಯಲ್ಲಿ ಇದು ವಿರೂಪಗೊಳ್ಳಬಹುದು ಎನ್ನುವ ಉದ್ದೇಶದಿಂದ ಅವರು ಬಾಹ್ಯ ಪೂಜೆ ಮತ್ತು ವಿಧಿ-ವಿಧಾನಗಳಿಗೆ ಒತ್ತು ಕೊಟ್ಟರು. ಮತ್ತು ತಮ್ಮ ಶ್ಲೋಕಗಳನ್ನು ಕಠಿಣ ಭಾಷೆಯ ಮುಸುಕಿನಲ್ಲಿ, ಆಯ್ದವರಿಗೆ ಅದರಲ್ಲಿ ಅಡಗಿರುವ ಅಧ್ಯಾತ್ಮದ ಅರಿವು ಮೂಡಿಸುವಂತೆ ಉಳಿದವರಿಗೆ ಅದು ಒಂದು ಪೂಜಿಸುವ ಪರಿ ಎನ್ನುವ ಭಾವನೆ ಮೂಡಿಸಿದರು. ವೇದಗಳ ಎಲ್ಲಾ ಶ್ಲೋಕಗಳೂ ಇದನ್ನೇ ಸಾಮಾನ್ಯ ನಿಯಮವನ್ನಾಗಿಸಿಕೊಂಡು ರಚಿತವಾಗಿವೆ.

Wednesday, September 21, 2016

ಹಳೇ ಬೈಕು, ಗಣೇಶ ಗುಡಿ ಮತ್ತು ರಾಜೇಶ್ ಖನ್ನಾ ಹಾಡು

ನನ್ನ ಬೈಕು ಹಳೆಯದು. ಅದಕ್ಕೆ ಈಗಾಗಲೇ ೧೬ ವರ್ಷಗಳು. ಅದು ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ, ಸಂಬಳದಲ್ಲಿ ಉಳಿಸಿದ ಹಣದ ಜೊತೆಗೆ ಸಾಲ ಸೇರಿಸಿ ತೆಗೆದುಕೊಂಡಿದ್ದು. ಈಗಿನ ಪೀಳಿಗೆಯವರು ಕೆಲಸ ಸಿಕ್ಕ ತಕ್ಷಣ, ಒಂದು ಒಳ್ಳೆಯ ಮೊಬೈಲ್ ಖರೀದಿ ಮಾಡಬಹುದು. ಆದರೇ ಆ ಕಾಲಕ್ಕೆ ಮೊಬೈಲ್ ಗಳು ಸಾಮಾನ್ಯ ಜನ ತೆಗೆದುಕೊಳ್ಳುವ ದರದಲ್ಲಿ ಇರಲಿಲ್ಲ. ಸಿಟಿ ಬಸ್ಸಿನ ನೂಕು ನುಗ್ಗಲು ತಪ್ಪಿಸಿಕೊಳ್ಳಲು, ಇತರೆ ಅನುಕೂಲಕ್ಕಾಗಿ ನನಗೆ ಒಂದು ಬೈಕ್ ನ ಅವಶ್ಯಕತೆ ಇತ್ತು. ಆಗ ತೆಗೆದುಕೊಂಡ ಬೈಕ್ ಅದು. ಅದಾದ ಮೇಲೆ ನಾಲ್ಕು ಕಾರುಗಳನ್ನು ಬದಲಾಯಿಸಿದ್ದೇನೆ. ಆದರೆ ಈ ಬೈಕ್ ನ್ನು ಮಾರುವ ವಿಚಾರ ನನಗೆ ಏಕೋ ಬರಲೇ ಇಲ್ಲ. ಅವಾಗಾವಾಗ ತನಗೂ ವಯಸ್ಸಾಗುತ್ತಿದೆ ಸಂದೇಶ ರವಾನಿಸಿದರೂ, ಇನ್ನೂ ನನ್ನ ಹೊತ್ತುಕೊಂಡು ತಿರುಗುತ್ತಿದೆ.

ಮೊದ ಮೊದಲಿಗೆ, ಬೈಕ್ ಇಲ್ಲದೇ ಹೊರಗೆ ಹೊರಡುತ್ತಿದ್ದದ್ದೇ ಇಲ್ಲ. ಊರ ಸುತ್ತ ಮುತ್ತಲಿನ ಚಿಕ್ಕ ಪುಟ್ಟ ಪ್ರವಾಸಗಳಿಗೂ ಅದೇ ಸಂಗಾತಿ. ಆದರೆ ಟ್ರಾಫಿಕ್ ಹೆಚ್ಚಾದ ನಂತರ, ಜೊತೆಗೆ ಆಫೀಸ್ ಗೆ ತಲುಪಲು ಕಂಪನಿ ಬಸ್ಸು ವ್ಯವಸ್ಥೆಯಾದ ನಂತರ, ಬೈಕ್ ನ ಉಪಯೋಗ ಕಡಿಮೆಯಾಯಿತು. ವಾರದ ಕೊನೆಯಲ್ಲಿ ಅಥವಾ ಸಂಜೆ ಎಲ್ಲೋ ಹೋಗಲು ಮಾತ್ರ ಅದರ ಬಳಕೆ ಆಗುತ್ತಿತ್ತು. ಆದರೆ ಅದಕ್ಕೆ ಸವತಿ ಎನ್ನುವಂತೆ ಬಂದಿದ್ದು ನಾನು ತೆಗೆದುಕೊಂಡ ಕಾರು. ನಾಲ್ಕು ಗಾಲಿಯ, ಐದು ಜನರನ್ನು ಹೊತ್ತು ಒಯ್ಯುವ, ಮಳೆ-ಗಾಳಿಯಿಂದ ರಕ್ಷಣೆ ನೀಡುವ ಕಾರಿಗೂ ಬೈಕ್ ಗೂ ಎಲ್ಲಿಯ ಹೋಲಿಕೆ ಮತ್ತು ಸಾಮ್ಯತೆ? ತನಗೆ ಸಿಗುತ್ತಿದ್ದ ಪ್ರಾತಿನಿಧ್ಯ ಕಾರಿಗೆ ಬದಲಾಗಿರುವುದನ್ನು ಕಂಡೂ ಕಾಣದಂತೆ, ಮನೆ ಕಂಪೌಂಡ್ ಒಳಗೆ ಸುಮ್ಮನೆ ನಿಂತಿರುತ್ತಿತ್ತು. ಆದರೂ ಯಾವಾಗಲೋ ತೆಗೆದಾಗ ಖುಷಿಯಿಂದ ಗುರುಗುಡುತ್ತಾ, 'ನಡಿ ಹೋಗೋಣ' ಎಂದು ನೆಗೆಯುತ್ತಿತ್ತು. ವರ್ಷಕ್ಕೆ ಒಂದೆರಡು ಸಲ ಸರ್ವಿಸ್ ಮಾಡಿಸಿಕೊಂಡು, ಯಾವ ಹೊತ್ತಿನಲ್ಲೂ, ಯಾವ ಪಯಣಕ್ಕೂ ತಾನು ತಯ್ಯಾರು ಎನ್ನುವ ಸ್ಥಿತಿಯಲ್ಲಿ ಇತ್ತು. ಆ ನಂಬಿಕೆಯ ಗೆಳೆಯನನ್ನು ಮೂಲೆ ಗುಂಪು ಮಾಡಿದ್ದು ನಾನೇ ಆದರೂ, ಪ್ರತಿ ಅಮವ್ಯಾಸೆಗೆ ಸಾಧ್ಯವಾಗದಿದ್ದರೂ ಕನಿಷ್ಠ ಆಯುಧ ಪೂಜೆ ದಿನವಾದರೂ ಅದಕ್ಕೆ ಎಣ್ಣೆ-ನೀರು ಸ್ನಾನ ಮಾಡಿಸಿ ಪೂಜೆ ಮಾಡುತ್ತಿದ್ದೆ. ನಂತರ ಅದು ತನಗೆ ಯಾವುದೇ ಕೆಲಸವಿಲ್ಲದೇ ಮತ್ತೆ ತನ್ನ ಜಾಗಕ್ಕೆ ಮರಳಿ ನಿಲ್ಲುತ್ತಿತ್ತು. ತನ್ನ ಬಂಗಾರದ ಯುಗದ ಕಥೆ ಇನ್ನು ಮುಗಿಯುತು ಎಂದು ಅದು ಅಂದುಕೊಳ್ಳುತ್ತಿರುವಾಗಲೇ ನನ್ನ ಸೋದರಳಿಯ ಅದರ ಸವಾರಿ ಆರಂಭಿಸಿದ. ಆಗ ಅದರ ಮೇಲಿನ ಧೂಳು ಹಾರಿ ಹೋಗಿ ಮತ್ತೆ ಲವಲವಿಕೆ ಯಿಂದ ಕಂಗೊಳಿಸತೊಡಗಿತು. ಅದು ಸುಮ್ಮನೆ ಮನೆಯಲ್ಲಿ ನಿಂತಾಗ, ನಾನು ನನ್ನ ಚಿಕ್ಕ ಮಗುವನ್ನು ಅದರ ಸೀಟಿನ ಮೇಲೆ ಕೂಡಿಸುವಾಗ, ಅದರ ಕನ್ನಡಿಯಲ್ಲಿ ನನ್ನ ಪ್ರತಿಬಿಂಬ ಕಾಣಿಸುತ್ತಿತ್ತು. ಅದು ಹಳೆ ಸ್ನೇಹಿತನ ಕರೆ ಎಂಬ ಸೂಚನೆ ಸಿಕ್ಕರೂ, ನಾನು ಬೈಕ್ ಉಪಯೋಗ ಸಂಪೂರ್ಣ ಕಡಿಮೆ ಮಾಡಿಬಿಟ್ಟಿದ್ದೆ. ಏನಾದರೂ ಸಾಮಾನು ತರಲು, ಹೊಸದಾಗಿ ಕೊಂಡಿದ್ದ ನನ್ನ ಪತ್ನಿಯ ಸ್ಕೂಟರ್ ಅನುಕೂಲ ಎನ್ನಿಸುತ್ತಿತ್ತು. ಹೀಗೆ ನನ್ನ ಅದರ ಭಾಂಧವ್ಯ ಉತ್ತಮಗೊಳ್ಳಲೇ ಇಲ್ಲ. ಅದು ಹಾಗೆಯೇ ಸಾಕಷ್ಟು ವರ್ಷಗಳವರೆಗೆ ಮುಂದುವರೆಯಿತು.

ಇನ್ನೇನು ಅದು ಅನಾಥ ಸ್ಥಿತಿ ತಲುಪಿತು ಎನ್ನುವಷ್ಟರಲ್ಲಿ, ಮತ್ತೆ ಅದರ ಮತ್ತು ನನ್ನ ಕಾಲ ಕೂಡಿ ಬಂತು. ಅಷ್ಟರಲ್ಲಿ ನಾವು ಬೆಂಗಳೂರು ಹೊರ ವಲಯದಲ್ಲಿ ಮನೆ ಕಟ್ಟಿಕೊಂಡು ಆ ಮನೆಯಲ್ಲಿ ವಾಸಕ್ಕೆ ಬಂದೆವು. ಆಫೀಸು ಬಸ್ಸು ನಮ್ಮನ್ನು ಹತ್ತಿಸಿಕೊಳ್ಳುವ ಜಾಗ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರ. ಈ ಪಯಣಕ್ಕೆ ಮೊದಲು ಡ್ರಾಪ್ ತೆಗೆದುಕೊಳ್ಳುತ್ತಿದ್ದೆ. ಆದರೆ ಅದು ಅಷ್ಟು ಪ್ರಾಯೋಗಿಕ ಎನಿಸಲಿಲ್ಲ. ಮತ್ತೆ ನನ್ನ ಬೈಕ್ ಹತ್ತಿ, ಬಸ್ ಸ್ಟಾಪ್ ಹತ್ತಿರ ಎಲ್ಲಾದರೂ ಅದನ್ನು ನಿಲ್ಲಿಸಿ ಬಸ್ಸು ಹತ್ತುವುದು ಉತ್ತಮ ಎನಿಸಿತು. ಬಸ್ ಸ್ಟಾಪ್ ಹತ್ತಿರದ ಗಣೇಶ ಗುಡಿಯ ಸುತ್ತ ಇರುವ ಖಾಲಿ ಜಾಗದಲ್ಲಿ, ಜನ ತಮ್ಮ ಬೈಕ್ ನಿಲ್ಲಿಸಿ ಬೇರೆ ಕೆಲಸಗಳಿಗೆ ಹೋಗುವುದನ್ನು ಗಮನಿಸಿದೆ. ಮರು ದಿನವೇ ಬಂತು ಬೈಕ್ ಅಲ್ಲಿಗೆ ನನ್ನ ಹೊತ್ತುಕೊಂಡು. ಬೈಕ್ ಅಲ್ಲಿ ನಿಲ್ಲಿಸಿ ಗಣೇಶನಿಗೆ ವಂದಿಸಿದೆ. ನನ್ನ ಗೆಳೆಯನನ್ನು ನಿನ್ನ ಮಡಿಲಲ್ಲಿ ಬಿಟ್ಟು ಹೋಗುತ್ತಿದ್ದೇನೆ ನಾನು ಸಂಜೆ ಮರಳುವವರೆಗೂ, ಅದರ ಹೊಣೆ ನಿನ್ನದು ಎಂದು ಆತನಿಗೇ ಜವಾಬ್ದಾರಿ ಹೊರಿಸಿದೆ. ಗಣೇಶ ನಿರ್ವಿಕಾರ ಭಾವದಿಂದ ನನ್ನ ನೋಡುತ್ತಿದ್ದ. ಎಷ್ಟೋ ಜನ ಏನೇನೋ ಕೇಳಲು ಬರುತ್ತಾರೆ, ನಿನ್ನ ವಾಹನ ನನ್ನ ಕಣ್ಮುಂದೆ ಇರುವುದು ಯಾವ ಮಹಾ ಎಂದು ಆತನಿಗೆ ಅನ್ನಿಸಿತೋ ಏನೋ, ಆದರೆ ಅದನ್ನೆಲ್ಲ ತೋರಗೊಡದೆ, ಆತ ತನ್ನ ಪ್ರಸನ್ನ ಮುಖದ ಮಂದಹಾಸ ಚಹರೆಯನ್ನು ಬದಲಿಸಲಿಲ್ಲ. ಸಂಜೆಯಾಯಿತು, ಬಸ್ಸಿ ನಿಂದ ಇಳಿದು ಗಣೇಶ ಗುಡಿಯ ಅಂಗಳಕ್ಕೆ ಹೋದೆ. ಸ್ವಲ್ಪವೂ ಕೊಂಕದಂತೆ, ಬೈಕ್ ಅಲ್ಲಿಯೇ ನಿಂತಿತ್ತು. ಗಣೇಶನಿಗೆ ಮತ್ತೊಮ್ಮೆ ವಂದಿಸಿದೆ. ಆತನನ್ನು ಜವಾಬ್ದಾರಿ ಮುಕ್ತಗೊಳಿಸಿ, ಬೈಕ್ ನ್ನು ಮನೆಗೆ ಓಡಿಸಿದೆ. ತಾನು ಮತ್ತೆ ಪ್ರವರ್ಧಮಾನಕ್ಕೆ ಬಂದಿರುವುದು ತನಗೆ ಖುಷಿ ತಂದಿದೆ ಎಂದು ಬೈಕ್ ತಾನು ಮಾಡುವ ಸದ್ದಿನಿಂದಲೇ ತಿಳಿಸಿತು.

ಈ ದಿನಚರಿಯ ಪುನರಾವರ್ತನೆ ಸುಮಾರು ಒಂದು ವರ್ಷದಿಂದ ನಡೆದಿದೆ. ಮನೆಯಿಂದ ಗಣೇಶ ಗುಡಿಯ ಅಂಗಳಕ್ಕೆ, ಗಣೇಶನ ಸುಪರ್ದಿಗೆ ಬೈಕ್ ಬಿಟ್ಟು ಆಫೀಸು ಬಸ್ಸು ಏರುವುದು, ನಂತರ ಸಾಯಂಕಾಲ ಮತ್ತೆ ಗಣೇಶನ ಉಪಕಾರ ಸ್ಮರಣೆ ಮಾಡುತ್ತಾ, ಬೈಕ್ ಹತ್ತಿ ಮನೆಗೆ ಮರಳುವುದು. ಆದರೆ ಒಂದು ಬದಲಾವಣೆ ಎಂದರೆ ಈಗ ಅಲ್ಲಿ ಗಣೇಶನ ಅಂಗಳದಲ್ಲಿ ನನ್ನ ಬೈಕ್ ಗೆ ಜೊತೆಯಾಗಿ ಬಹಳಷ್ಟು ಗಾಡಿಗಳು ನಿಲ್ಲುತ್ತವೆ. ಅವರೆಲ್ಲರೂ ನನ್ನ ಹಾಗೆ ಗಣೇಶನ ಉಪಕಾರ ಸ್ಮರಣೆ ಮಾಡುವವರೇ. ಇನ್ನು ತಿಂಗಳಿಗೊಮ್ಮೆ ಮಾತ್ರ ಪೆಟ್ರೋಲ್ ಕೇಳುವ ನನ್ನ ಬೈಕ್ ಇತ್ತೀಚಿಗೆ ಕೆಲವು ವಿಚಿತ್ರ ಶಬ್ದಗಳನ್ನು ಹೊರಡಿಸತೊಡಗಿದೆ, ಸಾಕಷ್ಟು ದುಡಿದ ಅದರ ಅಂಗಾಂಗಗಳು ಸೋಲುತ್ತಿವೆ. ಕಡಿಮೆ ವೇಗದಲ್ಲಿ ಎಂದಿನಂತೆ ಇದ್ದರೂ, ಸ್ವಲ್ಪ ವೇಗ ಹೆಚ್ಚಾದರೂ ಅದು ತನ್ನ ವಯಸ್ಸಿನ ಹೊರೆಯನ್ನು ಏದುಸಿರಿನ ಮೂಲಕ ತೋರಿಸುತ್ತದೆ. ಇಳಿ ಸಂಜೆಯ ವಯಸ್ಸಿಗೆ ತಲುಪಿರುವ ಆ ನನ್ನ ನಂಬಿಕೆಯ ಗೆಳೆಯ ಮುಳುಗುತ್ತಿರುವ ಸೂರ್ಯನೆಡೆಗೆ ನಡೆಯುತ್ತಿದ್ದಾನೆ. ಮತ್ತು ಹಿಂದಿ 'ಆನಂದ್' ಚಿತ್ರದ ರಾಜೇಶ್ ಖನ್ನಾ ನ ಹಾಡು ನೆನೆಪಿಗೆ ತರುತ್ತಾನೆ. 


'ಕಹಿ ದೂರ್ ಜಬ್ ದಿನ್ ಢಲ್ ಜಾಯೆ
ಸಾಂಜ್ ಕಿ ದುಲ್ಹನ್ ಬದನ್ ಚುರಾಯೇ
ಚುಪ್ ಕೆ ಸೆ ಆಯೆ'

Tuesday, September 20, 2016

ಕಾಂತಪುರ

(ರಾಜಾರಾವ್ ರವರ ಕಾಂತಪುರ ಕಾದಂಬರಿಯ ಮೊದಲ ಕೆಲವು ಪುಟಗಳ ಅನುವಾದ)

ಸ್ಥಳ ಪುರಾಣವಿಲ್ಲದ ಊರು ಅಥವಾ ಹಳ್ಳಿ ಭಾರತದಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಅದು ಎಷ್ಟೇ ಕುಗ್ಗಳ್ಳಿಯಾಗಿರಲಿ, ಅದಕ್ಕೇ ತನ್ನದೇ ಆದ ದಂತ ಕಥೆ ಇದ್ದೆ ಇರುತ್ತದೆ. ಒಬ್ಬ ದೇವರು ಅಥವಾ ದೇವತಾ ಪುರುಷ ಆ ಊರಿನ ಮಾರ್ಗವಾಗಿ ಸಂಚಾರ ಮಾಡಿರಬಹುದು. ರಾಮಾಯಣದ ರಾಮ ವಿಶ್ರಾಂತಿ ತೆಗೆದುಕೊಂಡಿದ್ದು ಆ ಊರಿನ ಅರಳಿ ಮರದ ಕೆಳಗೆ, ಸೀತೆ ತನ್ನ ಸ್ನಾನದ ನಂತರ ಬಟ್ಟೆಗಳನ್ನೂ ಒಣಗಿಸಿಕೊಂಡಿದ್ದು ಆ ಚಿಕ್ಕ ಬೆಟ್ಟದ ಕಲ್ಲುಗಳ ಮೇಲೆ, ಇಲ್ಲವೇ ಮಹಾತ್ಮಾ ಗಾಂಧಿ ತನ್ನ ದೇಶ ಪರ್ಯಟನೆಯ ಹೊತ್ತಿನಲ್ಲಿ ಈ ಊರಿನ ಮಾರ್ಗವಾಗಿ ಬಂದಾಗ, ಉಳಿದುಕೊಂಡದ್ದು ಆ ಚಿಕ್ಕ ಗುಡಿಸಿಲಿನಲ್ಲಿ. ಹೀಗೆ ಇತಿಹಾಸ ಮತ್ತು ವರ್ತಮಾನ ಕಾಲಗಳ ನಡುವೆ ಬೆಸುಗೆ ಹಾಕುವ, ದೇವರು ಮನುಷ್ಯರೊಡನೆ ಬೆರೆಯುವ ಸಂಗತಿಗಳು, ಪ್ರತಿ ಊರಿನ ಹಿರಿಯ ಜೀವಗಳ ನೆನಪಿನ ಭಂಡಾರದಲ್ಲಿ ಪ್ರಕಾಶಿಸುತ್ತಲೇ ಇರುತ್ತವೆ. ಅಂತಹುದೇ ಒಂದು ಊರಿನ ಕಥೆ ಇಲ್ಲಿದೆ.

ನಮ್ಮ ಹಳ್ಳಿ, ಇದರ ಹೆಸರು ಬಹುಶ ನೀವು ಕೇಳಿರದೇ ಇರಬಹುದು, ಅದು ಕರಾವಳಿ ಪ್ರದೇಶದ ಕಾಂತಪುರ.

ಅದು ಇರುವುದು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶದಲ್ಲಿ, ಅರಬ್ಬೀ ಸಮುದ್ರಕ್ಕೆ ಮುಖ ಕೊಟ್ಟು ನಿಂತ ಪರ್ವತ ಶ್ರೇಣಿಗಳ ಮಧ್ಯದಲ್ಲಿ. ಮಂಗಳೂರು ಮತ್ತು ಪುತ್ತೂರು ಊರುಗಳ ನಡುವೆ, ಏಲಕ್ಕಿ, ಕಾಫಿ, ಭತ್ತ, ಕಬ್ಬಿನ ಗದ್ದೆಗಳ ನಡುವಿನಿಂದ ಸಾಗಿ ಹೋಗುವ ಚಿಕ್ಕ ಮತ್ತು ಧೂಳು ತುಂಬಿದ ರಸ್ತೆಗಳ ಮಾರ್ಗವಾಗಿ, ಹೊನ್ನೆ, ಹಲಸು, ತೇಗು, ಗಂಧದ ಗಿಡಗಳಿಂದ ತುಂಬಿದ ಕಾಡುಗಳನ್ನು ದಾಟುತ್ತ, ಗಿರಿಕಂದರ ಪ್ರಪಾತಗಳ ಅಂಚಿನಲ್ಲಿ ಓಲಾಡುತ್ತಾ, ಆನೆ ಕಾಟವಿರುವ ಕಣಿವೆಗಳಲ್ಲಿ ಬಿರುಸಿನಿಂದ ಸಾಗುತ್ತ, ಅಲ್ಲಿ ಎಡಕ್ಕೆ ಮುಂದೆ ಬಲಕ್ಕೆ, ಹೀಗೆ ಸಾಗಿದಾಗ ನಮ್ಮೂರಿನ ಬಯಲಿಗೆ ಬಂದಿರುತ್ತೀರಿ. ಅಲ್ಲಿ ಇರುವ ಗೋದಾಮುಗಳಿಂದ ಮಸಾಲೆ ಪದಾರ್ಥಗಳನ್ನು, ನೀಲಿ ಸಮುದ್ರದಲ್ಲಿ ನಿಂತಿರುವ ತಮ್ಮ ಹಡಗುಗಳಿಗೆ ತುಂಬಿಸಿ, ಫರಂಗಿಗಳು ಸಪ್ತ ಸಾಗರದಾಚೆ ಇರುವ ತಮ್ಮ ದೇಶದೆಡೆಗೆ ಸಾಗುತ್ತಾರೆ.

ಒಂದಾದ ನಂತರ ಒಂದರಂತೆ ಸಾಗುವ ಚಕ್ಕಡಿ ಬಂಡಿಗಳ ಸದ್ದು ಕಾಂತಪುರದ ರಸ್ತೆಗಳಲ್ಲಿ ನಿರಂತರ. ಸಾಕಷ್ಟು ರಾತ್ರಿ, ಕಣ್ಣುಗಳು ಮುಚ್ಚುವ ಮುಂಚೆ ನೋಡುವ ಕೊನೆಯ ನೋಟ ಆ ಬಂಡಿಗಳ ಸಾಲು ಸಾಲು ದೀಪಗಳದ್ದೇ ಆಗಿರುತ್ತದೆ. ಹಾಗೇಯೇ, ಕಿವಿಗಳಿಗೆ ಬೀಳುವ ಕೊನೆಯ ಸದ್ದು, ರಾತ್ರಿಯನ್ನು ಸೀಳಿ ಬರುವ ಆ ಚಕ್ಕಡಿ ಚಾಲಕರ ಹಾಡುಗಳದ್ದೇ ಆಗಿರುತ್ತದೆ. ಆ ಚಕ್ಕಡಿಗಳು ಊರಿನ ಮುಖ್ಯ ರಸ್ತೆಯಿಂದ ಸಾಗಿ, ಕುಂಬಾರ ಓಣಿಯನ್ನು ದಾಟಿಕೊಂಡು, ಚೆನ್ನಯ್ಯನ ಕೆರೆಯ ಹತ್ತಿರ ಬಲಕ್ಕೆ ತಿರುಗಿ, ಅಲ್ಲಿಂದ ಮೇಲಕ್ಕೆ ಸಾಗುತ್ತಾ, ಸಮುದ್ರದಿಂದ ಸೂರ್ಯ ಮೇಲೇಳುವ ಹೊತ್ತಿಗೆಲ್ಲ ತಮ್ಮ ಗುರಿ ತಲುಪುತ್ತಾರೆ.

ಕೆಲವೊಂದು ಸಲ ರಾಮ ಚೆಟ್ಟಿ ಅಥವಾ ಸುಬ್ಬ ಚೆಟ್ಟಿಯವರ ಮಾರಾಟ ಸರಕು ಸಾಗಿಸುವದಿದ್ದರೆ, ಚಕ್ಕಡಿ ಬಂಡಿಗಳು ಊರಿನಲ್ಲಿ ನಿಲ್ಲುತ್ತವೆ ಮತ್ತು ಉಭಯ ಕುಶಲೋಪರಿಯ ಉಪಚಾರಗಳಾಗುತ್ತವೆ. ಆಗ ಸುಬ್ಬ ಚೆಟ್ಟಿಯ ೩೫೦ ರೂಪಾಯಿ ಬೆಲೆ ಬಾಳುವ ಎತ್ತುಗಳು ನೊಗ ಹೊರುವ ಮುಂಚೆ ಹೊರಡುವ ಅವುಗಳ ಕತ್ತಿನ ಗಂಟೆಗಳ ಸದ್ದು ಊರಿನ ಪ್ರತಿ ಮನೆಯಲ್ಲೂ ಕೇಳಿಸುತ್ತದೆ. 'ಹೇ-ಹೋ' ಎಂದು ಅರಚುವ ಸುಬ್ಬ ಚೆಟ್ಟಿಯ ಧ್ವನಿ ಕೇಳಿಸಿಕೊಂಡ ಎತ್ತುಗಳು, ಬಲವಾಗಿ ಕಂಪಿಸುತ್ತ ಪ್ರಯಾಣದ ಆರಂಭ ಮಾಡುತ್ತವೆ. ನಿಧಾನ ಗತಿಯಲ್ಲಿ ಅಂಧಕಾರದಲ್ಲಿ ಸಾಗುವ ಚಕ್ಕಡಿ ಬಂಡಿಗಳು ಮಾಡುವ ನಿರಂತರ ಸದ್ದು ಕೇಳತೊಡಗುತ್ತದೆ. ಅವು ಊರಿನ ಬೆಟ್ಟದ ಆ ಬದಿಗೆ ಸಾಗಿದ ನಂತರ, ಅವುಗಳ ಧ್ವನಿ ಕ್ಷೀಣವಾಗುತ್ತಾ, ಹೇಮಾವತಿ ನದಿ ಮೃದುವಾಗಿ ಹರಿಯುವ ಸದ್ದು ಏಳತೊಡಗುತ್ತದೆ. ಈ ಊರಿನ ಜನ ನಂಬಿರುವ ಪ್ರಕಾರ, ಹೇಮಾವತಿ ನದಿ ದೇವತೆಯು ಬೆಟ್ಟದ ದೇವತೆ ಕೆಂಚಮ್ಮಳ ಜೊತೆ ರಾತ್ರಿಯಿಡಿ ನಲಿಯುತ್ತಾಳೆ. ಏಕೆಂದರೆ ಕೆಂಚಮ್ಮ ದೇವಿ ಹೇಮಾವತಿಯ ತಾಯಿ. ಆ ತಾಯಿಯ ಕರುಣೆ ನಮ್ಮ ಮೇಲೆ ಸದಾ ಇರಲಿ.

ಕೆಂಚಮ್ಮ ನಮ್ಮೂರಿನ ದೇವತೆ. ಬಹು ಉದಾರ ಮನಸ್ಸಿನವಳು. ಎಷ್ಟೋ ಕಾಲದ ಹಿಂದೆ, ಈ ಊರಿನ ಜನರನ್ನು ಪೀಡಿಸುತ್ತಿದ್ದ, ಈ ಊರಿನ ಮಕ್ಕಳನ್ನು ತನ್ನ ಆಹಾರ ಮಾಡಿಕೊಂಡಿದ್ದ ಒಬ್ಬ ರಾಕ್ಷಸನನ್ನು ಸಂಹಾರ ಮಾಡಿದವಳು. ಕೆಂಚಮ್ಮ ಬಂದಿದ್ದು ಸ್ವರ್ಗ ಲೋಕದಿಂದ. ನಮ್ಮ ಊರಿನ ಋಷಿ ಮಾಡಿದ ಕಠಿಣ ತಪಸ್ಸಿನ ಫಲವಾಗಿ ಅವಳು ಇಲ್ಲಿಗೆ ಇಳಿದು ಬಂದು, ಎಷ್ಟೋ ರಾತ್ರಿಗಳು ನಡೆದ ಭಯಂಕರ ಕದನದಲ್ಲಿ, ರಾಕ್ಷಸನ ರಕ್ತ ಚೆಲ್ಲಾಡಿದಳು. ಅದೇ ಕಾರಣಕ್ಕಾಗಿ, ಕೆಂಚಮ್ಮ ಗುಡ್ಡ ಪೂರ್ತಿ ಕೆಂಪಾಗಿ ಕಾಣುವುದು. ಇಲ್ಲದಿದ್ದರೆ ಸುತ್ತ ಮುತ್ತ ಬರಿ ಕಪ್ಪು ಮಣ್ಣು ತುಂಬಿದ ಜಾಗದ ನಡುವೆ, ಕೆಂಪು ಬಣ್ಣ ಬರಲು ಬೇರೆ ಯಾವ ಕಾರಣವಿದ್ದೀತು? ಹೇಳಿ, ನೀವೇ ಹೇಳಿ.





Saturday, September 17, 2016

ಅನುವಾದಿತ ಕಥೆ: ಏನು ನಿನ್ನ ಕನಸು? (ಮೂಲ: ರಸ್ಕಿನ್ ಬಾಂಡ್)

ಒಬ್ಬ ಮುದುಕ, ಆತ ಬೆನ್ನು ಪೂರ್ತಿ ಬಾಗಿದ ಭಿಕ್ಷುಕ. ಅವನದು ಉದ್ದನೇಯ ಬಿಳಿ ಗಡ್ಡ, ಗುಳಿ ಬಿದ್ದ ಕಣ್ಣುಗಳು. ಆತ ನಾನು ಕೂತಿದ್ದ ಲಿಚ್ಛಿ ಹಣ್ಣಿನ ಮರದ ರೆಂಬೆಯ ಕೆಳಗಡೆ ನಿಂತು, ತಲೆ ಎತ್ತಿ ನನ್ನನ್ನು ನೋಡಿದ.

'ಏನು ನಿನ್ನ ಕನಸು?' ಆತ ಕೇಳಿದ.

ಬೀದಿಯಲ್ಲಿ ಹಾದು ಹೋಗುವ ಒಬ್ಬ ಮುದುಕನ ಆ ಪ್ರಶ್ನೆ ನನ್ನನ್ನು ಚಕಿತಗೊಳಿಸಿತು.

'ಏನು ನಿನ್ನ ಕನಸು?' ಆತ ಮತ್ತೆ ಕೇಳಿದ.

'ನನಗೆ ನೆನಪಿಲ್ಲ' ನಾನು ಹೇಳಿದೆ. 'ನನಗೆ ನಿನ್ನೆ ರಾತ್ರಿ ಯಾವ ಕನಸೂ ಬಿದ್ದ ನೆನಪಿಲ್ಲ'.

'ಅದಲ್ಲ ನಾನು ಕೇಳಿದ್ದು. ಅದು ನಿನಗೂ ಗೊತ್ತು. ನೀನು ಒಬ್ಬ ಕನಸುಗಾರ ಎನ್ನುವುದು ಕಾಣುತ್ತಿದೆ. ಇದು ಲಿಚ್ಛಿ ಮರ ಹಣ್ಣು ಬಿಡುವ ಕಾಲವಲ್ಲ. ಆದರೆ ನೀನು ಈ ಮಧ್ಯಾಹ್ನದ ವೇಳೆ, ಇದರಲ್ಲಿ ಕೂತು ಕನಸು ಕಾಣುತ್ತಿರುವೆ.'

'ನನಗೆ ಇಲ್ಲಿ ಕೂಡುವುದು ಇಷ್ಟ' ನಾನು ಹೇಳಿದೆ ನಾನು ಒಬ್ಬ ಕನಸುಗಾರ ಎನ್ನುವ ವಿಷಯವನ್ನು ಒಪ್ಪಿಕೊಳ್ಳದೆ. ಬೇರೆ ಹುಡುಗರಿಗೆ ಕನಸುಗಳಿರಲಿಲ್ಲ, ಅವರ ಕೈಯಲ್ಲಿ ಕಲ್ಲು ಬೀಸುವ ಕವಣೆಗಳಿದ್ದವು.

'ಒಂದು ಕನಸು, ಬೇರೆ ಎಲ್ಲದಕ್ಕಿಂತ ಅದೇ ಬೇಕೆನ್ನುವ ಕನಸು ನಿನಗಿಲ್ಲವೇ?' ಮುದುಕ ಕೇಳಿದ.

'ಇದೆ' ನಾನು ತಡವಿಲ್ಲದೆ ಹೇಳಿದೆ. 'ನನಗೆ ನನ್ನದೇ ಆದ ಜಾಗ, ಒಂದು ಕೋಣೆ ಬೇಕು'

'ಓ! ನಿನ್ನದೇ ಆದ ಜಾಗ, ನಿನ್ನದೇ ಆದ ಮರ, ಅವೆಲ್ಲ ಒಂದೇ. ಆದರೆ ಎಲ್ಲರಿಗೂ ಅವರದೇ ಆದ ಜಾಗ ಸಿಗಲು ಸಾಧ್ಯವಿಲ್ಲ, ಅದೂ ಜನರಿಂದ ತುಂಬಿದಂಥ ನಮ್ಮ ಈ ದೇಶದಲ್ಲಿ'

'ಕೇವಲ ಒಂದು ಚಿಕ್ಕ ಕೋಣೆ'

'ಹಾಗಾದರೆ ನೀನು ಈಗ ಇರುವ ಕೋಣೆ ಎಂಥದ್ದು?'

'ಅದು ದೊಡ್ಡ ಕೋಣೆ. ಆದರೆ ಅದು ನನಗೊಬ್ಬನಿಗಲ್ಲ. ನನ್ನ ಸೋದರ, ಸೋದರಿ ಜೊತೆಗೆ ಅದನ್ನು ಹಂಚಿ ಕೊಳ್ಳಬೇಕು. ಅದಲ್ಲದೆ ಊರಿಗೆ ಚಿಕ್ಕಮ್ಮ ಬಂದಾಗ ಉಳಿದುಕೊಳ್ಳುವುದು ಅದೇ ಕೋಣೆಯಲ್ಲೇ!'

'ಸರಿ. ನಿನಗೆ ನಿಜವಾಗಲೂ ಬೇಕಿರುವುದು  ಸ್ವಾತಂತ್ರ್ಯ. ನಿನ್ನದೇ ಆದ ಮರ, ಕೋಣೆ. ನಿನ್ನದೇ ಎನಿಸುವ ಒಂದು ಜಾಗ. '

'ಹೌದು, ಅಷ್ಟೇ'

'ಅಷ್ಟೇ? ಅದೇ ಎಲ್ಲ. ಅದು ನಿನಗೆ ಸಿಕ್ಕ ದಿನ ನಿನಗೆ ನಿನ್ನ ಕನಸು ನನಸಾದ ಹಾಗೆ'

'ಅದು ಸಿಗುವ ಬಗೆ ಹೇಗೆ?'

'ನನಗೆ ಯಾವುದೇ ಮಂತ್ರ-ವಿದ್ಯೆ ಗೊತ್ತಿಲ್ಲ ನನ್ನ ಗೆಳೆಯ. ನಾನು ಒಬ್ಬ ದೇವತಾ ಪುರುಷನಾಗಿದ್ದರೆ ನಿನ್ನ ಜೊತೆ ಕಾಲ ಹರಣ ಮಾಡುತ್ತಿದ್ದೇನೆಯೇ? ನೀನು ನಿನ್ನ ಕನಸಿನ ಸಾಕಾರಕ್ಕಾಗಿ ಪ್ರಯತ್ನಿಸಬೇಕು, ಹಗಲು-ಇರುಳು ಎನ್ನದೇ. ಆ ದಾರಿಯಲ್ಲಿ ಬರುವ ಅಡೆ-ತಡೆಗಳಿಗೆ ಅವಕಾಶ ಕೊಡಕೂಡದು.  ಅಲ್ಲಿಗೆ ನೀನು ಬಹಳಷ್ಟನ್ನು ಕಡಿಮೆ ಸಮಯದಲ್ಲಿ ನೀರಿಕ್ಷಸಿಸದಿದ್ದರೆ, ನಿನಗೆ ನಿನ್ನ ಸ್ವಾತಂತ್ರ್ಯ, ನಿನ್ನದೇ ಆದ ಜಾಗ, ಕೋಣೆ ದೊರಕುವುದು. ಆದರೆ ಕಷ್ಟಕರ ಸಮಯ ಶುರುವಾಗುವುದು ಅಲ್ಲಿಂದ.’

'ಅಲ್ಲಿಂದ?'

'ಹೌದು. ಏಕೆಂದರೆ, ದೊರಕಿದ್ದು ಸುಲಭದಲ್ಲಿ ಕಳೆದುಕೊಳ್ಳಬಹುದು, ಅದು ಬೇರೆಯವರ ಸ್ವತ್ತಾಗಬಹುದು. ನೀನು ದುರಾಸೆಗೆ ಬಿದ್ದರೆ ಅಥವಾ ಉಪೇಕ್ಷೆ ಮಾಡಿದರೆ, ಇಲ್ಲವೇ ಎಲ್ಲವನ್ನು ಲಘುವಾಗಿ ಪರಿಗಣಿಸಿದರೆ, ಓಹ್!,  ನಿನ್ನ ಕನಸು ಹಠಾತ್ತಾಗಿ, ಇನ್ನಿಲ್ಲದಂತೆ ಕಣ್ಮರೆಯಾಗಿಬಿಡುತ್ತದೆ.'

'ಅದೆಲ್ಲ ನಿನಗೆ ಹೇಗೆ ಗೊತ್ತು?'

'ಏಕೆಂದರೆ ನನಗೆ ಒಂದು ಕನಸು ಇತ್ತು. ಅದನ್ನು ನಾನು ಕಳೆದುಕೊಂಡೆ'

'ನೀನು ಎಲ್ಲ ಕಳೆದುಕೊಂಡೆಯ?'

'ಹೌದು. ನನ್ನನ್ನು ನೋಡು ಗೆಳೆಯ. ನಾನು ಒಬ್ಬ ರಾಜನ ಹಾಗೆ ಕಾಣುವೇನೆ? ನನಗೆ ಬೇಕಿದ್ದೆಲ್ಲ ಇತ್ತು. ಆದರೆ ನನಗೆ  ಇನ್ನೂ ಬೇಕಿತ್ತು. ಮತ್ತಷ್ಟೂ ... ನಿನಗೆ ನಿನ್ನ ಕೋಣೆ ಸಿಕ್ಕ ಮೇಲೆ, ನಿನಗೆ  ನಿನ್ನದೇ ಆದ ಕಟ್ಟಡ ಇದ್ದರೆ ಚೆನ್ನ ಅನಿಸುತ್ತದೆ. ಅಲ್ಲಿಂದ ನಿನ್ನದೇ ಆದ ಸೀಮೆ, ರಾಜ್ಯ, ಸಾಮ್ರಾಜ್ಯ ಹೀಗೆ ನಿನ್ನ ಕನಸು ವಿಸ್ತಾರಗೊಳ್ಳುತ್ತ ಹೋಗುತ್ತದೆ. ಅದು ಸಾಕಾರಗೊಂಡ ಹಾಗೆಲ್ಲ ಅದನ್ನು ಉಳಿಸುಕೊಳ್ಳುವುದು ಕಷ್ಟವಾಗುತ್ತ ಹೋಗುತ್ತದೆ. ಆದರೆ ಅದನ್ನು ಕಳೆದುಕೊಂಡ ದಿನ, ನಿನಗೆ ನಿನ್ನ ಕೋಣೆಯೂ ಉಳಿದಿರುವಿದಿಲ್ಲ.'

'ನಿನಗೆ ನಿನ್ನದೇ ಆದ ಸಾಮ್ರಾಜ್ಯವಿತ್ತೇ?'

'ಅದೇ ತರಹದ್ದು. ನೀನು ನಿನ್ನ ಕನಸಿನ ಬೆನ್ನು ಹತ್ತು. ಆದರೆ ಬೇರೆಯವರ ಕನಸಿಗೆ ಅಡ್ಡಿಯಾಗಬೇಡ. ಯಾವುದೇ ಮನುಷ್ಯನ ದಾರಿಯಲ್ಲಿ ಅಡ್ಡ ನಿಲ್ಲಬೇಡ. ಇನ್ನೊಬ್ಬರ ಜಾಗ, ಧರ್ಮ, ಹಾಡುಗಳನ್ನು ಕಸಿಯಬೇಡ.' ಇಷ್ಟು ಹೇಳಿದ ಆ ಮುದುಕ, ಪ್ರಯಾಸದಿಂದ ಹೆಜ್ಜೆ ಹಾಕುತ್ತ ಮೆಲ್ಲಗೆ ಕಣ್ಮರೆಯಾದ. ಹಾಗೆ ಹೋಗುವಾಗ ಅವನು ಒಂದು ಹಾಡನ್ನು ಅವನು ತನಗೆ ತಾನೇ ಗುನುಗಿಕೊಳ್ಳುತ್ತಿದ್ದ. ಆ ಹಾಡನ್ನು ನಾನು ಮೊದಲು ಎಲ್ಲೂ ಕೇಳಿಲ್ಲವಾದ್ದರಿಂದ ಅದು ಅವನದೇ ಹಾಡು ಇರಬಹುದು ಎನ್ನಿಸಿತು.

‘’ನೂರು ಕಾಲ ಬಾಳು ಓ ಗೆಳೆಯ, ವಿವೇಕದಿಂದ,
ಹಾಡು ಕಸಿಯಬೇಡ ನೀನು ಬೇರೆಯವರಿಂದ’’

ಆ ಮುದುಕನ ಬುದ್ದಿ ಮತ್ತೆಯ ಬಗ್ಗೆ ವಿಚಾರ ಮಾಡುತ್ತ ನಾನು ಗಿಡದ ರೆಂಬೆಯ ಮೇಲೆ ಕುಳಿತೆ ಇದ್ದೆ. ಒಬ್ಬ ಮನುಷ್ಯನಲ್ಲಿ ವಿವೇಕ ಹಾಗೂ ದಾರಿದ್ರ್ಯ ಒಟ್ಟಿಗೆ ಇರುವುದು ಹೇಗೆ ಸಾಧ್ಯ ಎನ್ನುವ ವಿಷಯ ನನ್ನನ್ನು ಆಶ್ಚರ್ಯ ಚಕಿತನನ್ನಾಗಿ ಮಾಡಿತ್ತು. ಅವನು ಸ್ವತಂತ್ರನಾಗಿದ್ದ, ಹಾಗೆ ನಾನು ಕೂಡ. ಮರ ಇಳಿದು ಮನೆಗೆ ಹೋಗಿ ನನಗೆ ಬೇರೆ ಕೋಣೆ ಬೇಕೆಂದು ಹಕ್ಕೊತ್ತಾಯ ಮಾಡಿ ಪಡೆದುಕೊಂಡೆ. ಸ್ವಾತಂತ್ರ್ಯ ಎನ್ನುವ ಹಕ್ಕು, ಒತ್ತಾಯ ಪೂರ್ವಕವಾಗಿಯೇ ಸಿಗುವುದು ಎನ್ನುವ ಸತ್ಯದ ಅರಿವು ನನಗಾಗ ತೊಡಗಿತ್ತು.

Monday, September 12, 2016

Deficits = Increase in Money Supply = Inflation Rate (India’s macroeconomics)

Though I studied Economics as a subject in my MBA and have read several books on the subject of Macro-economics, it took a while for me to figure out the equation, well suited for India’s macroeconomics. 
Deficits = Increase in Money Supply = Inflation. 
This is an approximate estimate and not a perfect match in numbers. Objective is to show that they influence each other. Deficit is the cause, increase in money supply is the means and rising inflation is the result.
It is the twin deficits (fiscal deficit and current account deficit) at the root which will demand an increase in money supply which will result in inflation. If you look at text book definitions, they would explain things academically but I would like to provide a different perspective on how these are interrelated.
Responsibility of managing fiscal deficit lies with Govt. And no Govt. borrows the money directly from their central banks. But this is what happens:
Fiscal Deficit Cash Flow:
o   Govt. needs excess money (deficit) to spend than its income (taxes, other incomes). It borrows from banks and public issuing bonds.
o   When bonds reach maturity phase, central bank (RBI) buys it from banks with the newly printed money. It expands its balance sheet (increases M3 Money Supply). Banks get cash for swapping the bonds.
o   Govt. borrows again from banks and newly printed money is used to fund deficit spending.
Current Account Deficit Cash Flow:
o   Trade Deficit: Difference in trade account balance resulting in international trade (India’s imports are higher than exports so there is a trade deficit)
o   Capital Flows: India sees inward cash flows through remittances, FDI etc. There is outflow too. Though this is positive, it is not big enough to pay for trade deficit.
o   Resulting deficit (negative trade balance and lesser positive cash flow) has to be funded. Businesses borrow from banks which in turn borrows from RBI. There is expansion of balance sheet in the central bank again.
These twin deficits put together will ask for new money creation and the inflation catches up with it. To check if my hypothesis holds true, let us look at data.

Year
Fiscal
Deficit
% of GDP
Current
Account
Deficit %
Both
Deficits %
Inflation
rate %
2009
7.8%
2.8%
10.6%
10.9%
2010
6.9%
2.8%
9.7%
12.0%
2011
5.1%
4.3%
9.4%
8.9%
2012
5.8%
4.8%
10.6%
9.3%
2013
4.9%
1.7%
6.6%
10.9%
2014
4.5%
1.3%
5.8%
6.4%
2015
3.9%
1.3%
5.2%
5.9%

Yes, though numbers do not match closely, they are comparable. Since this is an approximation and not a direct measure, they would not match. Moreover, inflation has two causes, monetary causes (which is covered in this blog post) and supply side reasons (which is not scope of this post). As the objective is to establish the relationship, it would serve the purpose and it would help us in getting an idea of how different components of macro economy influence each other.


Here is another check. During 2009-2015, the total twin deficits were approximately summed up to $1 trillion. If you look at increase in M3 money supply, it is around the same. (Below chart is in INR).


After synthesizing the data and the relationships, you will wonder how the deficit funded economic growth does not change the purchasing power of consumers as inflation robs away the benefits and the currency too deflates in the process. If deficits are low or trade is surplus, there would not be much rise in inflation while economy expands and it would result in currency appreciation too, resulting in positive benefits. Present Govt. is doing a better job at it than its predecessor. But when the larger economies are having an inflation of less than 1-2%, India recording 5-6% numbers seems high. Now you know why inflation is high and who is using that newly created money. If that money had created an equivalent asset, it would not have resulted in Inflation.