Monday, February 11, 2019

Visit to Ilkal




ಶ್ರೀ ವಿಜಯ ಮಹಾಂತ ಸ್ವಾಮಿಗಳ ಗದ್ದುಗೆ
ಚಿತ್ತರಗಿಯ ಚರತಾತ 
ಇಳಕಲ್ಲ ಪುರ ವಿರತ 
ಆದಿ ಅಂತ್ಯ ರಹಿತ 
ಶ್ರೀ ವಿಜಯ ಮಹಾಂತ


ಉತ್ತರ ಕರ್ನಾಟಕದ ನೆಲದಲ್ಲಿ ರಾಜ ಮಹಾರಾಜರುಗಳು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದು ಇಲ್ಲಿನ ಸಾಧು-ಸಂತರು. ಇವರು ಕಟ್ಟಿದ್ದು ಕೋಟೆ-ಅರಮನೆಗಳಲ್ಲ. ಬದಲಿಗೆ ಸಮಾಜದ ಹಸಿವು ನೀಗಿಸುತ್ತ, ಬಡವರ ವಿದ್ಯೆ- ಶಿಕ್ಷಣದ ಅಗತ್ಯಗಳನ್ನು ಪೂರೈಸುತ್ತಾ, ಬದುಕಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳನ್ನು. ಹಾಗಾಗಿಯೇ ಇವು ರಾಜ ಮನೆತನಗಳಂತೆ ಕಾಲನ ವಿನಾಶಕ್ಕೊಳಗಾಗದೆ, ಇಂದಿಗೂ ಜೀವಂತವಾಗಿವೆ. ಇದಕ್ಕೆ ಇಳಕಲ್ ಸಂಸ್ಥಾನ ಒಂದು ಉದಾಹರಣೆ. ಬಸವ ತತ್ವ ಸಾರುವ ಈ ವಾಕ್ಯ ಇಂಥ ಸಂಸ್ಥೆಗಳ ತಳಹದಿ ಎಷ್ಟು ಭದ್ರವಾಗಿದೆ ಎಂಬುದರ ಸಂಕೇತ.

1 comment: