Wednesday, May 26, 2021

ಕಥೆ: ಅದೃಷ್ಟ

ಅವಳ ಹೆಸರು ಗಿರಿಜೆ. ಅವಳು ಇದ್ದಿದ್ದೇ ನಾಲ್ಕೂವರೆ ಅಡಿ ಎತ್ತರ. ಕಪ್ಪು ಹಣೆಯ ಮೇಲೆ ಕೆಂಪನೆಯ ದೊಡ್ಡ ಕುಂಕುಮವಿನ್ನಿಟ್ಟುಕೊಂಡು ಮಟ್ಟಸ ಎನ್ನುವ ಹಾಗಿದ್ದಳು. ಅವಳು ನಡು ಬಾಗುವ ಪ್ರಶ್ನೆಯೇ ಇರಲಿಲ್ಲ. ಅಲ್ಲದೆ ಮಾತು ತಮಾಷೆಯದು ಬೇರೆ. ಹಾಗಾಗಿ ಅವಳ ವಯಸ್ಸು ನಲವತ್ತೋ, ಐವತ್ತೋ ಅಥವಾ ಇನ್ನು ಹೆಚ್ಚೊ ಎಂದು ಯಾರಿಗೂ ತಿಳಿಯುತ್ತಿದ್ದಿಲ್ಲ. ಅವಳಿಗೆ ಗಂಡ ಇದ್ದ ಎಂದು ಓಣಿಯ ಹಿರಿಯರು ಹೇಳುತ್ತಿದ್ದರಾದರೂ, ಅವನನ್ನು ಅಲ್ಲಿ ಯಾರೂ ನೋಡಿರಲಿಲ್ಲ. ಅವಳಿಗೆ ಮಕ್ಕಳು ಇರಲಿಲ್ಲ. ವಠಾರದಲ್ಲಿನ ಒಂಟಿ ಕೋಣೆಯೇ ಅವಳ ಮನೆ. ಬೆಳಿಗ್ಗೆಯೇ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೊರಟು ಬಿಡುತ್ತಿದ್ದ ಅವಳು ಮತ್ತೆ ಮನೆ ಸೇರುವುದು ಸಂಜೆಯೇ. ಹತ್ತು ಅಡಿ ಅಗಲದ ಕೋಣೆ ಸ್ವಚ್ಛಗೊಳಿಸಿ, ತನ್ನೊಬ್ಬಳಿಗೆ ಅಡುಗೆ ಮಾಡುವುದಕ್ಕೆ ಯಾವ ಮಹಾ ಸಮಯ ಬೇಕು? ಚುರುಕಾಗಿದ್ದ ಅವಳು ತನ್ನ ಕೆಲಸ ಬೇಗನೆ ಮುಗಿಸಿಕೊಂಡು ಕತ್ತಲಾಗುವುದಕ್ಕೆ ಮುಂಚೆಯೇ ಮನೆ ಹೊರಗಿನ ಕಟ್ಟೆಯ ಮೇಲೆ ಹಾಜರಾಗಿಬಿಡುತ್ತಿದ್ದಳು. ಸುತ್ತ ಮುತ್ತಲಿನ ಮನೆ ಹುಡುಗರು ಅಲ್ಲಿ ಬೀದಿಯಲ್ಲಿ ಆಟವಾಡಿರುಕೊಂಡಿರುತ್ತಿದ್ದರಲ್ಲ. ಅವರನ್ನು ಗಮನಿಸುತ್ತಾ, ಯಾರಾದರೂ ಹೆಣ್ಣು ಮಕ್ಕಳು ಸಹಾಯಕ್ಕೆ ಕರೆದರೆ, ಅವರಿಗೆ ಮನೆ ಕೆಲಸದಲ್ಲಿ ನೆರವಾಗುತ್ತ, ಅವರ ಜೊತೆ ಸಮಯ ಕಳೆಯುವುದು ಅವಳ ಸಾಯಂಕಾಲದ ದಿನಚರಿ.


ಓಣಿಯ ಹೆಣ್ಣು ಮಕ್ಕಳೆಲ್ಲರೂ, ಅವರಿವರೆನ್ನದೆ  ಅಕ್ಕ ಪಕ್ಕದ ಎಲ್ಲ ಮನೆಗಳವರು, ಅವಶ್ಯಕತೆ ಬಿದ್ದಾಗ ಗಿರಿಜೆಯ ಸಹಾಯ ತೆಗೆದುಕೊಂಡರೂ, ಅವಳನ್ನು ತಮ್ಮ ಕುಟುಂಬದಲ್ಲಿ ಒಬ್ಬರಂತೆ ಕಂಡದ್ದು ಇಲ್ಲ.  ಅಲ್ಲದೇ ಅವಳನ್ನು ಉದ್ದೇಶಿಸಿ 'ಮಕ್ಕಳಿಲ್ಲದಿದ್ದರೆ ಒಂದು ಚಿಂತೆ, ಮಕ್ಕಳಿದ್ದರೆ ನೂರಾರು ಚಿಂತೆ' ಎಂದು ಗಾದೆ ಮಾತು ಹೇಳುವುದೇ ಬೇರೆ. ಆ ಮಾತು ತನ್ನ ಕಿವಿಗೆ ಬಿದ್ದೆ ಇಲ್ಲ ಎನ್ನುವಂತೆ ಗಿರಿಜೆ ಹೋಗಿ ಬಿಡುತ್ತಿದ್ದಳಲ್ಲ. ಆಗ ಆ ಹೆಣ್ಣು ಮಕ್ಕಳ ಹೊಟ್ಟೆ ಉರಿ ಇನ್ನು ಹೆಚ್ಚಾಗುತಿತ್ತು. ಒಂದು ದಿನವೂ ಖಾಯಿಲೆ ಬೀಳದ, ಎಲ್ಲರಿಗೂ ತಮಾಷೆ ಮಾಡುತ್ತ ಜೀವನ ಸವೆಸುವ ಅವಳನ್ನು ಕಂಡರೆ ವಯಸ್ಸಾದವರಿಗೂ ಅಸೂಯೆ. ಗಂಡ-ಮಕ್ಕಳು ಇರದಿದ್ದರೆ, ಒಂಟಿಯಾದರೂ, ನಿಶ್ಚಿಂತೆಯ, ನೆಮ್ಮದಿಯ ಜೀವನ ಸಾಧ್ಯ ಅಲ್ಲವೇ ಎಂದು ಅವರೆಲ್ಲ ಬೆರಗಾಗುತ್ತಿದ್ದರು. ಅವಳದೇ ಅದೃಷ್ಟ ಎನ್ನುವ ತೀರ್ಮಾನಕ್ಕೂ ಬರುತ್ತಿದ್ದರು.


ಆ ಓಣಿಯ ಮನೆಗಳಲ್ಲಿ ಯಾರದರಾದರೊಬ್ಬರದು ಮನೆಯಲ್ಲಿ ಮದುವೆ ನಿಶ್ಚಯ ಆದರೆ, ಆಗ ಗಿರಿಜೆಗೆ ಕೂಲಿಗೆ ಹೋಗದೆ ತಮ್ಮ ಮನೆ ಕೆಲಸಕ್ಕೆ ಬರುವಂತೆ ಹೇಳಲಾಗುತ್ತಿತ್ತು. ಅಲ್ಲಿ ಕೆಲಸದಲ್ಲಿರುವಾಗ, ಮಕ್ಕಳಿಗೆ ಮದುವೆ ಮಾಡುವ ತಾಪತ್ರಯ ಅವಳಿಗಿಲ್ಲ ಎನ್ನುವ ಮಾತಿಗೂ ಅವಳು ನಕ್ಕು ಸುಮ್ಮನಾಗುತ್ತಿದ್ದಳು. ಪಕ್ಕದ ಓಣಿಯಲ್ಲಿ, ಗಂಡನ ಕಿರುಕುಳ ತಾಳದೆ ಒಬ್ಬಳು ಬೆಂಕಿ ಹಚ್ಚಿಕೊಂಡು ತನ್ನನ್ನೇ ಸುಟ್ಟುಕೊಂಡಾಗ, ಆ ಘೋರ ದೃಶ್ಯವನ್ನು ನೋಡಿ ಹೆಣ್ಣು ಮಕ್ಕಳೆಲ್ಲ, ಇಂತಹ ತಾಪತ್ರಯ ಗಿರಿಜೆ ಒಬ್ಬಳಿಗೆ ಮಾತ್ರ ಇಲ್ಲ ಎಂದು ಮಾತನಾಡಿಕೊಂಡರು. ಎಂದಿನಂತೆ ತನಗೂ ಅಂತಹ ಮಾತುಗಳಿಗೂ ಸಂಬಂಧ ಇಲ್ಲವೆನ್ನುವಂತೆ ಗಿರಿಜೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತನ್ನ ಸಂಬಂಧದ ಒಬ್ಬರ ಕೂಸು ಖಾಲಿಯಾದಾಗ, ಸಮಾಧಾನ ಹೇಳಲಿಕ್ಕೆ ಹೋದ ಗಿರಿಜೆ "ಹೊರಲಿಲ್ಲ, ಹೆರಲಿಲ್ಲ, ಸಂಕಟ ಹೇಗೆ ತಿಳಿದೀತು?" ಎಂದು ಮಾತು ಕೇಳಿದಾಗ ಕೂಡ ಬೇಸರ ಮಾಡಿಕೊಳ್ಳಲಿಲ್ಲ. ವಯಸ್ಸಾದ ಅತ್ತೆ, ಮಾವಂದಿರ ಸೇವೆ ಮಾಡುವ ಹೆಣ್ಣು ಮಕ್ಕಳು ಗಿರಿಜೆಯ ಹತ್ತಿರ ಬಂದು ತಮ್ಮ ಗೋಳು ಹೇಳಿಕೊಂಡು, ತಮ್ಮದು ಪಾಪದ ಬದುಕು, ಅಂತಹ ಕಷ್ಟ ನಿನಗಿಲ್ಲ ಎಂದು ಅಲವತ್ತು ಕೊಂಡಾಗ ಕೂಡ ಅವಳು ತಮಾಷೆಯ, ತೇಲಿಕೆಯ ಮಾತು ಹೇಳಿ ಕಳಿಸಿಬಿಡುತ್ತಿದ್ದಳು.  


ಅದೊಂದು ಮಳೆಗಾಲದ ದಿನದಂದು, ಬೆಳಿಗ್ಗೆ ಕೂಲಿಗೆಂದು ಗಿರಿಜೆ ಹೋದದ್ದನ್ನು ಆ ಓಣಿಯ ಜನ ನೋಡಿದ್ದೇ ಕೊನೆ. ಆ ದಿನ ಮಧ್ಯಾಹ್ನ ಹೊತ್ತಿಗೆಲ್ಲ, ದಟ್ಟಣೆಯ ಕಪ್ಪು ಮೋಡ ಜಮಾವಣೆ ಆಗಿ, ಸಾಯಂಕಾಲಕ್ಕೆ ಮೊದಲೇ ಕತ್ತಲು ಆವರಿಸಿ ಧೋ ಎಂದು ಮಳೆ ಸುರಿಯಿತಲ್ಲ. ಬಾಗಿಲು ಮುಚ್ಚಿಕೊಂಡು ತಮ್ಮ ಮನೆಗಳಲ್ಲಿ ಬಂದಿಯಾಗಿಬಿಟ್ಟರು ಜನ. ಸರಿ ರಾತ್ರಿಯಲ್ಲಿ ಧಡಾಲ್ ಎಂದು ಅಕ್ಕ ಪಕ್ಕದಲ್ಲಿ ಮನೆಗಳು ಬಿದ್ದ ಸದ್ದು. ಬೆಳಿಗ್ಗೆ ಹೊತ್ತಿಗೆ ಮೋಡ ಸರಿದು, ಸೂರ್ಯ ಇಣುಕುವ ಹೊತ್ತಿಗೆ, ಯಾರ ಮನೆ ಬಿದ್ದದ್ದು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಮನೆಯಿಂದ ಹೊರಗೆ ಬಂದರು ಜನ. ಬಿದ್ದ ನಾಲ್ಕಾರು ಮನೆಗಳಲ್ಲಿ ಗಿರಿಜೆಯದು ಒಂದು. ಅವಳಿದ್ದ ಮನೆಯ ಮಣ್ಣಿನ ಮಾಳಿಗೆ ರಾತ್ರಿ ಬಿದ್ದ ದೊಡ್ಡ ಮಳೆಗೆ, ಸಂಪೂರ್ಣ ಕರಗಿ ಹೋಗಿತ್ತು. ಸುಣ್ಣ ಕಾಣದ ಗೋಡೆಗಳು, ಆಕಾಶಕ್ಕೆ ತೆರೆದುಕೊಂಡು ನಿಂತಿದ್ದವು. ಚೆಲ್ಲಾ ಪಿಲ್ಲಿಯಾಗಿದ್ದ ಸಾಮಾನುಗಳು, ಗಿರಿಜೆ ಮನೆಗೆ ವಾಪಸ್ಸು ಬಂದಿಲ್ಲ ಎಂದು ಸೂಚಿಸುತ್ತಿದ್ದವು. ಆ ಮನೆ ಜಂತಿಯಲ್ಲಿ ಓಡಾಡಿಕೊಂಡಿದ್ದ ಹಾವೊಂದು  ಮತ್ತೆಲ್ಲಿಗೆ ಹೋಗುವೊದೋ ಎನ್ನುವ ಚಿಂತೆಯಲ್ಲಿತ್ತು. ಅಲ್ಲಿಯವರೆಗೆ ಗಿರಿಜೆಯದೇ ಅದೃಷ್ಟ ಎಂದು ಮಾತನಾಡಿಕೊಳ್ಳುತ್ತಿದ್ದ ಓಣಿಯ ಹೆಂಗಸರಿಗೆ ಅಂದು ಯಾವ ಪ್ರತಿಕ್ರಿಯೆ ನೀಡಬೇಕೋ ಎಂದು ತಿಳಿಯದೇ ಹೋಯಿತು.

Sunday, May 23, 2021

Book Summary: Delhi by Khushwant Singh

This is a monumental literary work by Khushwant Singh. It took more than 20 years for him to write this novel. For me, it took many weeks to read. Initially I was reading few pages a day, only to put it down and get something else to read. It went on like this for some time, until I got into the groove. Then pages just flipped and I was gripped feverishly till end.

This book is written in first person where the narrator tells the plot in autobiographical tone. It moves back and forth between history and current times with each chapter. One must tolerate the adultery and erratic behavior of the narrator in this book as everything else here is a great piece of work. Not sure adding ample erotic scenes were necessary for the plot, but that is the style of this author.

Delhi has been the seat of power for many centuries. Many kings have looted it and destroyed it. Many others made it their home and built monuments making their names permanent in the history of Delhi. There were few kings who got destroyed by Delhi for the comforts it did provide. They all have many interesting stories to tell. This novel makes use of the opportunity to recreate the life and livelihood of people who lived during different times in the same town.

What is more interesting to observe in this book is, author’s deep understanding of the religions – Hindu, Muslim and Sikh. The characters in this book depict the conflict and cooperation among these religions during different times.

If the reader appreciates the knowledge and style of Khushwant Singh, this book is a treat. Also, one gets a perspective on how the city of Delhi got shaped and evolved over many generations.




Thursday, May 20, 2021

ಯಾವ ದೇಶದಲ್ಲಿ ಗಂಗೆ ಹರಿಯುತ್ತಾಳೋ

ಹಿಂದಿ ಚಿತ್ರರಂಗದಲ್ಲಿ ರಾಜ್ ಕಪೂರ್ ಮುಂಚೂಣಿಗೆ ಬಂದದ್ದು 'ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ' ಚಿತ್ರದ ಮೂಲಕ. ಹಾಗೆಯೆ ಅವರ ಕೊನೆಯ ದಿನಗಳಲ್ಲಿ ಅವರು ನಿರ್ದೇಶಿಸಿದ ಚಿತ್ರ 'ರಾಮ್ ತೇರಿ ಗಂಗಾ ಮೈಲಿ'. ರಾಜ್ ಕಪೂರ್ ಅವರ ವೃತ್ತಿ ಜೀವನದ ಎರಡು ತುದಿಗಳ ಚಿತ್ರಗಳ ಹೆಸರುಗಳು ಗಂಗಾ ನದಿಯನ್ನು ಉಲ್ಲೇಖಿಸುವುದು ಒಂದು ವಿಶೇಷ. ಆದರೆ ಕಾಕತಾಳೀಯ ಎನ್ನುವಂತೆ ಭಾರತದ ಮೊದಲು ಮತ್ತು ಕೊನೆ ಎರಡೂ ಗಂಗಾ ನದಿಯ ಇರುವಿಕೆಯ ಜೊತೆಗೆ ಬೆಸೆದುಕೊಂಡಿದೆ.


ಭಾರತದಲ್ಲಿ ಮನುಷ್ಯ ನಾಗರೀಕತೆ ಬೆಳೆದು ಬಂದ ದಾರಿಯನ್ನು ಗಮನಿಸಿ ನೋಡಿ. ಇತಿಹಾಸಕಾರರು 'ಸಿಂಧು ಕಣಿವೆಯ ನಾಗರಿಕತೆ' ಯನ್ನು ಉಲ್ಲೇಖಿಸುತ್ತಾರಾದರೂ, ಭಾರತದ ನಾಗರೀಕತೆ ಬೆಳೆದು ಬಂದಿದ್ದು ಗಂಗಾ ನದಿಯ ದಡದ ಮೇಲೆ. ಹಿಮಾಲಯದಿಂದ ಬಂಗಾಲ ಕೊಲ್ಲಿಯವರೆಗೆ  ೨,೫೦೦ ಕಿ.ಮೀ. ಉದ್ದದ, ವರ್ಷ ಪೂರ್ತಿ ತುಂಬಿ ಹರಿವ ನದಿ ಮನುಷ್ಯ ಜೀವ ಸಂಕುಲ ವಿಕಾಸನವಾಗಲು ಕಾರಣವಾಯಿತು. ಅಲ್ಲಿ ಬೆಳೆದ ಜನ ಸಂಖ್ಯೆ ಮುಂದೆ ಉದ್ದಗಲಕ್ಕೂ ಹರಡಿ ಹೋಗಿ ಒಂದು ದೇಶವಾಯಿತು.  ಹಾಗೆ ಹಂಚಿ ಹೋದ ಜನ ಯಾರೂ ಕೂಡ ಗಂಗಾ ನದಿಯನ್ನು ಮರೆಯಲಿಲ್ಲ. ಇಂದಿಗೆ ಭಾರತದ ಯಾವುದೇ ಪಟ್ಟಣ, ಹಳ್ಳಿಯಲ್ಲಿ 'ಗಂಗಾ' ಹೆಸರಿನ ಹುಡುಗಿಯರು ಸಿಕ್ಕೇ ಸಿಗುತ್ತಾರೆ. ಹಾಗೆಯೇ ಇಂದಿಗೂ ಶುಭ ಸಮಾರಂಭಗಳಲ್ಲಿ ನಮ್ಮ ನಲ್ಲಿ, ಭಾವಿ ನೀರಿಗೂ 'ಗಂಗೆ ಪೂಜೆ' ಮಾಡುತ್ತೇವೆ. ಗಂಗಾ ನದಿಯ ತಟದಲ್ಲಿನ ದೇವಸ್ಥಾನಗಳು ಪವಿತ್ರತೆಯ ಸ್ಥಾನ ಪಡೆದಿವೆ. ಗಂಗೆಯಲ್ಲಿ ಮುಳುಗು ಹಾಕಿದರೆ ನಮ್ಮ ಪಾಪ ನಾಶ ಎನ್ನುವ ನಂಬಿಕೆ ನಮ್ಮಲ್ಲಿದೆ. ಕೊನೆ ಉಸಿರು ಬಿಡುವ ಮುನ್ನ ಗಂಗೆಯ ನೀರು ಬಾಯಲ್ಲಿ ಹಾಕಿದರೆ ಜನ್ಮ ಸಾರ್ಥಕ ಎನ್ನುವ ನಂಬಿಕೆಯು ಇದೆ. ಹಾಗೆ ಸತ್ತವರ ಅಸ್ಥಿ ವಿಸರ್ಜನೆಗೂ ಗಂಗಾ ನದಿಯೇ ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿ ಬೇರೂರಿ ಬಿಟ್ಟಿದೆ. ಇದೆಲ್ಲ ತೋರಿಸುವುದು ಒಂದೇ ವಿಷಯವನ್ನು. ನಾವೆಲ್ಲ ಗಂಗೆ ಮಡಿಲಲ್ಲಿ ಹುಟ್ಟಿ ಬೆಳೆದವರು. ನಾವು ಕೊನೆಗೆ ಅಲ್ಲಿಗೆ ಹೋಗಿ ವಿಲೀನವಾದರೆ ನಮಗೆ ನೆಮ್ಮದಿ.


ಭಾರತ ದೇಶದ ನಾಗರೀಕತೆ ಸಲಹಿದ ಗಂಗೆ, ಎಲ್ಲಿಯವರೆಗೆ ಸ್ವಚ್ಛ ಇರುತ್ತಾಳೋ, ಅಲ್ಲಿಯವರೆಗೆ ನಮಗೂ ಕೂಡ ಉಳಿಗಾಲ. ವಿಪರೀತ ಎನ್ನಿಸುವಷ್ಟು ಕಲುಷಿತ ಗಂಗೆಗೆ ಹರಿಬಿಡುವುದನ್ನು ಗಂಗೆ ಕ್ಷಮಿಸುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಪ್ರಕೃತಿಯ ವೈಪರೀತ್ಯದಿಂದ ಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿ, ಮನುಷ್ಯ ನಿರ್ಮಿತ ಅಣೆಕಟ್ಟುಗಳನ್ನು ಮುರಿದು ಹಾಕಿ, ಹಿಮಾಲಯ ಪ್ರದೇಶದಲ್ಲಿ ಸಾಕಷ್ಟು ಸಾವು ನೋವು ಉಂಟು ಮಾಡಿದಳಲ್ಲ. ಅದು ಆಕೆ ನಮಗೆ ಕೊಟ್ಟ ಮುನ್ನೆಚ್ಚರಿಕೆಯೇ? 


ಇಂದಿಗೆ ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ಹೆಣಗಳ ಸುದ್ದಿಯನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ ಮತ್ತು ದೂರದರ್ಶನದಲ್ಲಿ ನೋಡುತ್ತಿದ್ದೇವೆ. ಉಳ್ಳವರು ಶ್ರಾದ್ಧ ಮಾಡಿದರೆ, ಬಡವರು ತಮ್ಮ ಸತ್ತ ಸಂಬಂಧಿಕರನ್ನು ಗಂಗೆಯ ಮಡಿಲಿಗೆ ಸೇರಿಸಿ ಕೈ ಮುಗಿದಿದ್ದಾರೆ. ಇಂದಿಗೆ ತೇಲಿ ಬರುವ ಹೆಣಗಳಿಗೆ, ಪಾಪನಾಶಿನಿ ಗಂಗೆ ಬಡವ ಬಲ್ಲಿದರೆಂದು ಬೇಧ ತೋರದೆ ಎಲ್ಲರನ್ನೂ ತನ್ನ ಒಡಲಿಗೆ ಸೇರಿಸಿಕೊಂಡು ಮೋಕ್ಷ ಕರುಣಿಸಿದ್ದಾಳೆ ಎಂದು ನಾವು ಅಂದುಕೊಳ್ಳುತ್ತೇವೆ. ಮತ್ತೆ ಗಂಗೆ ಒಡಲಿಗೆ ವಿಷ ಸುರಿಯಲು ಮುಂದಾಗುತ್ತೇವೆ. ನಮಗೆ ಜೀವನ ಕೊಟ್ಟ ಗಂಗೆ ಕಲುಷಿತವಾದಾಗ ನಮ್ಮ ಜೀವನದ ಅಂತ್ಯವೂ ಸನಿಹವಾಗುತ್ತದೆ ಎಂಬ ಸತ್ಯ ಮಾತ್ರ ನಮಗೆ ಏಕೋ ಕಾಣುತ್ತಿಲ್ಲ.

Tuesday, May 18, 2021

Book Summary: Gandhi, A Spiritual Biography by Arvind Sharma

There are more than 400 biographies written on Gandhi. But this one focuses on the spiritual aspect of Gandhi’s life, the making of a saint.

At a very young age, the play of “Shravanakumara” had made a long-lasting impression on Gandhi, so was another play of ‘Satya Harishcandra’. Pursuit for truth had begun very early for him. As an adolescent, he had read ‘Ramayana’ to make Rama’s resolve to keep the promises made his as well. When he had travelled to England for studies to become a barrister, he could keep the promises made to his mother, to stay away from meat, wine and women. His first mentor Ray Chand and whose practices of Jain religion too had a subtle impact on Gandhi. Jains used fasting to purify themselves, also to protest which became a Gandhi’s way as well later in his life and set his moral compass.

The transforming point arrived in South Africa where he was working on legal matters of a client. Getting pushed out from a train was not just another event for Gandhi. He did not seek revenge but justice. A leader was born in him that night. He called a meeting of all Indians staying in South Africa and delivered his first ever speech. He said, if they desired to be treated properly, they must deserve it. Change was not coming easily. Gandhi was beaten up badly many a times and during his protests, he was arrested and released multiple times. Gradually people on Gandhi’s side increased and finally Govt. offered negotiations to mend their ways. ‘Satyagraha’ – asking for truth began to yield results. Whatever values Gandhi had learnt in his childhood, he could put into practice for the welfare of a larger society.

Upon his return to India, he traveled around entire country to acquaint and then plunged himself into the struggle for independence. The salt march and Gandhi’s ways of protests where no killing was involved surprised the British. Not just them, Gandhi had stirred the local feudal system with campaign against untouchability. Whether it was fight for independence or the social reforms, it was Gandhi’s way of pursuing God. In ‘Bhagavad Gita’, Arjuna was offered spiritual redemption in the battlefield. Gandhi used this expression to say he was doing what he did to attain ‘Moksha’ – salvation through his work.

Thus, this book explores spiritual side of Mahatma Gandhi. Any political decisions and the consequences thereafter are not the scope of this book. For those who want to learn spiritual dimensions of Gandhi, this book makes a good read.




Sunday, May 16, 2021

ಸಹಜ ಸತ್ಯ

ಸಾವಿರದ ಮನೆಯ ಸಾಸಿವೆ ತಾರೆಂದ ಬುದ್ಧ,

ನೋವ ಮರೆಸುವುದಕ್ಕಲ್ಲ,

ಸಾವು ಸಹಜ ಎಂದು ತಿಳಿಸುವ ಪ್ರಬುದ್ಧ

ಸತ್ಯ ಮೆರೆಸುವುದಕ್ಕೆ;


ಆಸೆಯೇ ದುಃಖಕ್ಕೆ ಮೂಲವಾದರೆ, ಅತಿಯಾಸೆ?

ಮುಳುಗಿಸಿಬಿಡುವಷ್ಟು ದೊಡ್ಡ ಸಾಗರ,

ಮನೆ ಮನದ ನಾಲ್ಕು ಮೂಲೆಯಾದರೆ, ಆಕಾಶ?

ಬ್ರಹ್ಮಾಂಡವನ್ನೇ ಮನೆಯಾಗಿಸುವ ಆಗರ;

ಅಸ್ಥಿರ

 ಆನೆ ಇದ್ದರೂ ಸಾವಿರ, 

ಸತ್ತರೂ ಸಾವಿರ;


ಮರ ಇದ್ದಾಗ ತರುವುದು ಹಸಿರ, 

ಸತ್ತಾಗ ಕಿಟಕಿ ಬಾಗಿಲಾಗಿ ಅಮರ;


ಮಾನವ ಇರುವಾಗ ಅಸ್ಥಿರ,

ಸತ್ತಾಗ ಕೂಡ ನಶ್ವರ;


ಪ್ರಕೃತಿಯ ನಡೆ ಒಂದೇ ಸ್ಥಿರ,

ಅರಿತು ನಡೆದವರಿಗಿಲ್ಲ ಬರ;

Saturday, May 15, 2021

ಟಾಗೋರ್ ಮತ್ತು ಟಾಲ್ಸ್ಟಾಯ್

ನನ್ನ ಅಚ್ಚು ಮೆಚ್ಚಿನ ಬರಹಗಾರರೆಂದರೆ, ರವೀಂದ್ರನಾಥ್ ಟಾಗೋರ್ ಮತ್ತು ಲಿಯೋ ಟಾಲ್ಸ್ಟಾಯ್.  


ಟಾಗೋರ್ ರವರು (೧೮೬೧-೧೯೪೧) ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ - ಕಥೆ, ಕವನ, ಕಾದಂಬರಿ, ನಾಟಕ ಹೀಗೆ ಎಲ್ಲದರಲ್ಲೂ ತಮ್ಮ ಛಾಪು ಮೂಡಿಸಿದವರು. ರಾಷ್ಟ್ರೀಯತೆ, ಧರ್ಮ, ಶೈಕ್ಷಣಿಕ ವ್ಯವಸ್ಥೆ ಹೀಗೆ ಹತ್ತು ಹಲವಾರು ವಿಷಯಗಳ ಮೇಲೆ ನೂರಾರು ಪ್ರಬಂಧಗಳನ್ನು ರಚಿಸಿದ್ದಾರೆ. ಅವರು ಬರೆದ ಗೀತೆಗಳು ಎರಡು ದೇಶಗಳಲ್ಲಿ ರಾಷ್ಟ್ರ ಗೀತೆಗಳಾಗಿವೆ. ನೊಬೆಲ್ ಪಾರಿತೋಷಕವನ್ನು ಪಡೆದ ಮೊದಲ ಭಾರತೀಯ ಅವರು. ಆ ಪ್ರಶಸ್ತಿಯ ದುಡ್ಡಿನಲ್ಲೇ ಕಟ್ಟಿದ ಶಾಂತಿ ನಿಕೇತನ ಇಂದಿಗೆ ಶಿಕ್ಷಣ-ಕಲೆ-ಸಂಸ್ಕೃತಿಯ ತವರೂರಾಗಿದೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಟಾಗೋರ್, ಹಣದ ಕಡೆಗೆ ಆಕರ್ಷಿತರಾಗದೆ ಕಲೆಯ ಆರಾಧಕರಾದರು. ನಾಟಕ ರಚಿಸುವುದಷ್ಟೇ ಅಲ್ಲ, ಬಣ್ಣ ಹಚ್ಚಿ ಪಾತ್ರಧಾರಿಯಾಗಲು ಕೂಡ ಹೊರಟು ಬಿಡುತ್ತಿದ್ದರು. ಅವರು ಆಸಕ್ತಿ ಚಿತ್ರಕಲೆ ಕಡೆಗೆ ಕೂಡ ಹೊರಳಿ, ಹಲವಾರು ವರ್ಣಚಿತ್ರಗಳನ್ನು ಬಿಡಿಸಲು ಕಾರಣವಾಯಿತು.


ಟಾಲ್ಸ್ಟಾಯ್ (೧೮೨೮-೧೯೧೦) ಮೊದಲು ಸೇವೆ ಸಲ್ಲಿಸಿದ್ದು ರಷ್ಯಾದ ಸೇನೆಯಲ್ಲಿ. ಯುದ್ಧದ ಅನುಭವಗಳನ್ನು ಆಧರಿಸಿ ಬರೆದ ಅವನ ಕೃತಿ ಜನಪ್ರಿಯವಾಗಿ ಅವನನ್ನು ಒಬ್ಬ ಬರಹಗಾರನಾಗಿ ಪ್ರಸಿದ್ಧಿಗೊಳಿಸಿತು. ಅವನಿಗೆ ಶ್ರೀಮಂತಿಕೆ, ಸಂತೋಷ, ಯಾವುದರ ಕೊರತೆಯು ಆಗದೆ ಅವನ ಬರವಣಿಗೆಯು ಸಹ ಮುಕ್ಕಾಗದಂತೆ ಸಾಗಿತು. ಎರಡು ಮಹಾನ್ ಕಾದಂಬರಿಗಳು ಮೂಡಿ ಬಂದವು. ಲೆಕ್ಕವಿಲ್ಲದಷ್ಟು ಕಥೆಗಳು, ಅಸಂಖ್ಯಾತ ಎನ್ನುವಷ್ಟು ಪ್ರಬಂಧಗಳು ಪ್ರಕಟವಾದವು. ಬರಿ ರಷ್ಯಾದಲ್ಲಷ್ಟೇ ಅಲ್ಲದೆ ಅವನ ಕೃತಿಗಳು ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡು, ಅವನು ಜಗದ್ವಿಖ್ಯಾತನಾಗಿ ಹೋದ.


ಟಾಗೋರ್ ರಿಗೆ ಸಣ್ಣ ವಯಸ್ಸಿನಿಂದಲೇ ಜೀವನ ಪೆಟ್ಟು ಕೊಡಲಾರಂಭಿಸಿತ್ತು. ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಅವರು, ತಮ್ಮನ್ನು ಸಾಕಿದ ಅತ್ತಿಗೆಯನ್ನು ಕೂಡ ಬೆಳೆದು ನಿಲ್ಲುವಷ್ಟರಲ್ಲೇ ಕಳೆದುಕೊಂಡರು. ಮುಂದೆ ಅವರು ಪ್ರೀತಿಯ ಮಗಳು, ಪತ್ನಿಯ ಅಕಾಲಿಕ ವಿಯೋಗದ ನೋವನ್ನು ಕೂಡ ಉಂಡರು. ಟಾಲ್ಸ್ಟಾಯ್ ಗೆ ಮಧ್ಯ ವಯಸ್ಸನ್ನು ದಾಟಿದ ಮೇಲೆ ಆಧ್ಯಾತ್ಮಿಕ ಬಿಕ್ಕಟ್ಟು ತಲೆದೋರಿತ್ತು. ಅದನ್ನು ಅವರು ತಮ್ಮ ಪುಸ್ತಕಗಳಲ್ಲಿ ವಿವರವಾಗಿ ದಾಖಲಿಸಿದ್ದಾರೆ.


ಟಾಗೋರ್ ಮತ್ತು ಟಾಲ್ಸ್ಟಾಯ್ ತಮ್ಮ ಜೀವನ ಅನುಭವವನ್ನೇ ಆಧರಿಸಿ ಕಥೆ-ಕಾದಂಬರಿ ರಚಿಸಿದರು. ಟಾಗೋರ್ ಮನುಷ್ಯ ಸಂಬಂಧದ ನೋವು-ನಲಿವನ್ನು ತಮ್ಮ ವಿಷಯ ವಸ್ತುವಾಗಿಸಿದರೆ, ಟಾಲ್ಸ್ಟಾಯ್ ಮನುಷ್ಯನ ರಾಗ-ದ್ವೇಷಗಳನ್ನು ಪ್ರಮುಖ ವಸ್ತುವನ್ನಾಗಿ ಕೃತಿಗಳನ್ನು ರಚಿಸಿದರು. ಇಬ್ಬರ ಕೃತಿಗಳಲ್ಲೂ ತತ್ವಶಾಸ್ತ್ರದ ಗಾಢ ಛಾಯೆಯನ್ನು ಓದುಗರು ಗಮನಿಸಬಹುದು. ಮನುಷ್ಯ ಸ್ವಭಾವದ ಯಾವುದೇ ಮಜಲನ್ನು ಇವರಿಬ್ಬರು ಪರಿಶೋಧಿಸದೆ ಬಿಟ್ಟಿಲ್ಲ.


ಯಾರಾದರೂ ನನಗೆ ಕೆಲವೇ ಪುಟಗಳ, ಆದರೆ ಗಾಢ ಪರಿಣಾಮ ಬೀರುವ ಪುಸ್ತಕದ ಸಲಹೆ ಕೇಳಿದರೆ, ಅವರಿಗೆ ನಾನು ಸೂಚಿಸುವುದು ಟಾಗೋರ್ ರ ಸಣ್ಣ ಕಥೆಗಳನ್ನು. ಹಾಗೆಯೇ ದೊಡ್ಡ ಗಾತ್ರದ್ದು ಆದರೂ ಸರಿ, ಆದರೆ ಒಂದೇ ಒಂದು ಪುಸ್ತಕದ ಸಲಹೆ ಕೇಳಿದರೆ ಅವರಿಗೆ ನಾನು ಸೂಚಿಸುವುದು ಟಾಲ್ಸ್ಟಾಯ್ ರವರ 'ಅನ್ನಾ ಕರೆನಿನಾ' ಕೃತಿ.

ಲಾಕ್ ಡೌನ್ ಡೈರಿ

ಈ ವರ್ಷದ ಲಾಕ್ ಡೌನ್ ನೀವು ಹೇಗೆ ಕಳೆಯುತ್ತಿದ್ದಿರಿ? ನನ್ನ ದಿನದ ಆರಂಭ ಮಾತ್ರ ಪ್ರತಿದಿನವೂ ಒಂದೇ ತರಹ ಎನ್ನುವಂತೆ ಸಾಗುತ್ತಿದೆ. ಊರಾಚೆ ಒಂದು ಆಲದ ಮರ. ಅಲ್ಲಿ ಕಟ್ಟೆಯನ್ನುಕಟ್ಟಿಸಿ, ಒಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದು ಒಬ್ಬ ಪುಣ್ಯಾತ್ಮ. ಅದು ತನ್ನ ಪತ್ನಿಯ ನೆನಪಿಗಾಗಿ ಕಟ್ಟಿದ್ದು ಎಂದು ಅಲ್ಲಿ ಕಲ್ಲಿನ ಫಲಕ ಇದೆ. ಹಿಂದೆ ಅಲ್ಲಿಗೆ ನನ್ನ ಜೊತೆ ಬಂದಿದ್ದ ಸ್ನೇಹಿತನೊಬ್ಬ ಇದು ಅವರ 'ತಾಜ್ ಮಹಲ್' ಎಂದು ತಮಾಷೆ ಮಾಡಿದ್ದಿದೆ. ಆ ಕಟ್ಟೆಯ ಮೇಲೆ ಕುಳಿತರೆ ಬೀಸುವ ತಂಗಾಳಿ, ಸುಮ್ಮನೆ ಮಲಗಿದರೆ ಸಿಗುವ ವಿಶ್ರಾಂತಿ, ಕಣ್ಣು ಮುಚ್ಚಿ ಪ್ರಾಣಾಯಾಮ ಮಾಡಿದಾಗ ಆಗುವ ವಿಶೇಷ ಅನುಭವ ಇವೆಲ್ಲವುಗಳನ್ನು ಗಮನಿಸಿ ಇನ್ನೊಬ್ಬ ಸ್ನೇಹಿತ ಇದಕ್ಕೆ 'ಬೋಧಿ ವೃಕ್ಷ' ಎಂದು ಹೆಸರಿಟ್ಟಿದ್ದಾನೆ.


ನಾನು ಮತ್ತು ನೆರೆಯ ಸ್ನೇಹಿತರೊಬ್ಬರು ದಿನವೂ ಅಲ್ಲಿಗೆ ಸುಮಾರು ೪೫ ನಿಮಿಷದ ನಡಿಗೆಯಿಂದ ತಲುಪುತ್ತೇವೆ. ಅಲ್ಲಿ ೧೫ ನಿಮಿಷದ ವಿಶ್ರಾಂತಿ. ನಮ್ಮ ಶ್ವಾಸಕೋಶಗಳು ಸ್ವಚ್ಛ ಗಾಳಿಯನ್ನು ತುಂಬಿಕೊಂಡು ದಣಿದ ಮೈಗೆ ಮತ್ತೆ ಉಲ್ಲಾಸವನ್ನು ತುಂಬುತ್ತವೆ. ಅಲ್ಲಿಯ ಶಾಂತ ಪರಿಸರ ನಮ್ಮ ಮನಸ್ಸನ್ನೂ ಕೂಡ ಶಾಂತಗೊಳಿಸುತ್ತದೆ. ಮತ್ತೆ ಮನೆಗೆ ವಾಪಸ್ಸಾಗಲು ೪೫ ನಿಮಿಷ ತಗುಲುತ್ತದೆ. ದಾರಿಯಲ್ಲಿರುವ ನವಿಲುಗಳು ಕಲರವ ಮಾಡುತ್ತ ನಮ್ಮನ್ನು ಚಕಿತಗೊಳಿಸುತ್ತವೆ. ರಸ್ತೆಯ ಹಾದಿಗೆ ಬಂದಾಗ ದಾರಿಯಲ್ಲಿ ಸಿಗುವ ಪರಿಚಿತರು ಕೈ ಬೀಸುತ್ತಾರೆ. ಮನೆ ಮುಟ್ಟಿದಾಗ ನಾವು ಸವೆಸಿದ್ದು ಸುಮಾರು ೮ ಕಿ.ಮೀ. ದೂರದ ಹಾದಿ ಎಂದು ನನ್ನ ಫೋನ್ ಹೇಳುತ್ತದೆ. ಮತ್ತೆ ಲೌಕಿಕ ಜೀವನ ನಮ್ಮನ್ನು ಆವರಿಸಿ ಬಿಡುತ್ತದೆ.


ನಿಮ್ಮ ದಿನಚರಿ ಏನು? ಲಾಕ್ ಡೌನ್ ಕೊಟ್ಟಿರುವ ಬಿಡುವಿನಲ್ಲಿ ಏನು ಮಾಡುತ್ತಿರುವಿರಿ?





Why meditation makes you a better investor?

As an investor, you will have to make 3 decisions continuously. Which stock to buy, at what price and when to exit? But that is not it.

 

Things do not go as you anticipate, and markets routinely surprise everyone. Stock that you bought goes down beyond your expectation, making you wonder what to do. Few go up too much in too little time, again you begin to wonder if there is any upside left. Many times, the stocks you bought do not move at all, boring you and making you to switch counter.

 

Exactly when things do not go as anticipated, you become emotional, misjudge the situation and make investment mistakes. This is when meditation can be of great help. Meditation teaches you to have patience, so when your stocks do not move, you won’t act out of boredom but make a rational choice. When market moves against you, you would not lose hope and probably add to your investments. And when things are working in your favor, you would not be caught in euphoria but remain grounded and book some decent profits.

 

Meditation basically calms you down. It removes chaos and brings clarity. It brings stability to your being by avoiding emotional tantrums and that reflects in the choices you make in everyday life. You would not only become a better person but a better investor too. The less biased, the less emotional person you become, the better investor you would transform into.

 

Get into meditation and know yourself. The clarity you get lets you understand why you are in the market and what the crowd does won’t bother you anymore. Then assess the investment opportunities available in the market. More likely you would get them right.

Friday, May 14, 2021

ವೈಪರೀತ್ಯಗಳ ಸಮಯ

ಚಾರ್ಲ್ಸ್ ಡಿಕನ್ಸ್ ಬರೆದ 'A Tale of Two Cities ' ಕಾದಂಬರಿಯ ಮೊದಲ ಕೆಲವು ಸಾಲುಗಳನ್ನು ತುಂಬಾ ಸಲ ಮತ್ತೆ ಮತ್ತೆ ಓದಿಕೊಂಡಿದ್ದೇನೆ. ಪ್ರಸ್ತುತ ಸಮಯಕ್ಕೆ ಅದು ತುಂಬಾ ಹೊಂದಿಕೊಳ್ಳುತ್ತದೆ ಕೂಡ. ಅದನ್ನು ನಿಮಗೂ ಓದಿಸಬೇಕೆನ್ನುವ ಆಸೆಯಿಂದ ಅದರ ಅನುವಾದದ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಹಾಗೆ ಅದರ 'Original' ಅನ್ನು ಕೂಡ ಕೊಟ್ಟಿದ್ದೇನೆ.
"ಅದು ಅತ್ಯುತ್ತಮವಾದ ಕಾಲ, ಅದು ಅತ್ಯಂತ ಕೆಟ್ಟ ಕಾಲ. ಅದು ವಿವೇಕತನದ ಸಮಯ, ಅದು ಕಡು ಮೂರ್ಖತನದ ಸಮಯ. ಅದು ನಂಬಿಕೆಯ ಯುಗ, ಅದು ಸದಾ ಸಂದೇಹ ಪಡುವ ಯುಗ. ಅದು ಬೆಳಕಿನ ಸಮಯ, ಅದು ಕಗ್ಗತ್ತಲಿನ ಸಮಯ. ಅದು ಭರವಸೆ ತರುವ ವಸಂತ, ಅದು ಹತಾಶೆ ತರುವ ಚಳಿಗಾಲ. ನಮ್ಮ ಮುಂದೆ ಎಲ್ಲ ಇದೆ, ನಮ್ಮ ಮುಂದೆ ಏನೂ ಇಲ್ಲ. ನಾವೆಲ್ಲರೂ ಸೀದಾ ಸ್ವರ್ಗಕ್ಕೆ ಹೋಗುತ್ತಿದ್ದೇವೆ, ನಾವೆಲ್ಲರೂ ಅದನ್ನು ಬಿಟ್ಟು ಇರುವ ಇನ್ನೊಂದು ಜಾಗಕ್ಕೆ ಹೋಗುತ್ತಿದ್ದೇವೆ"

"It was the best of times, it was the worst of times. It was the age of wisdom, it was the age of foolishness. It was the epoch of belief, it was the epoch of incredulity. It was the season of Light, it was the season Darkness. It was the spring of hope, it was the winter of despair. We had everything before us, we had nothing before us. We were all going direct to Heaven, we were all going direct the other way."

Wednesday, May 12, 2021

Reconstructing History: The Siege of Krishnapur

Ninety years before India got freedom, in 1857, many dramatic events led to ‘Sepoy Mutiny’. With struggle and losses, East India Company managed to quell the storm of rebellion. That story is reconstructed in this book and is told from the perspective of a company official (District Collector) and his companions.

Though it is conveniently called a work of fiction, it is a well-researched book based on facts collected through letters, dairies of East India Company officials of that time and other communications and journals. The city of Kanpur became a fictional town Krishnapur in this book. This book brings to life the culture, lifestyle of the British ruling in India during colonial times. Since this is a British version of the story, native Indians may find many perspectives mentioned in this book a bit unpleasant.

While the British were biased in believing that they had the right to rule India, the natives disagreed with them on many fronts and the suppression led to the spark of rebellion. Though the British were successful in regaining the control, the mutiny firmly led to a new beginning.

This book was awarded Booker Prize in 1973. Author J.G.Farrell produced three books which dealt with political consequences of British colonial rule.









Salman Rushdie: For those who love magic of a language

Even for Salman Rushdie’s fans, his books are hard to read and digest but they enchant and hook them up. While his non-fictional works appear rational, his fictions are very different. He employs ‘Magical Realism’, a style where-in protagonists of his plots have unnatural powers and he mixes up the characters from the real world with imaginary one’s. So, an ordinary reader would find it difficult to make sense of what he is reading. Well, Salman Rushdie is no ordinary writer. The reader should not pick his books like any other regular novel. If one can keep away the common notions, a finer world unravels.

Here is an excerpt from “Midnight’s Children”:

Unless, of course, there’s no such thing as chance; in which case Musa – for all his age and servility – was nothing less than a time-bomb, ticking away softly until his appointed time; in which case, we should either – optimistically – get up and cheer, because if everything is planned in advance, then we all have a meaning, and are spared of the terror of knowing ourselves to be random, without a why; or else, of course, we might – as pessimists – give up right here and now, understanding the futility of thought decision action, since nothing we think makes any difference any way; things will be as they will.




Sunday, May 9, 2021

ಪ್ರಕೃತಿಯ ಪ್ರತಿರೂಪವೇ ತಾಯಿ

ಆಗ ತಾನೇ ಹುಟ್ಟಿದ ಕರುವನ್ನು ನೆಕ್ಕುತ್ತ ಸ್ವಚ್ಛಗೊಳಿಸುವ ಹಸು, ಪ್ರಸವದ ನಂತರ ತನ್ನ ಮರಿಯನ್ನು ಹಿಂಗಾಲಿನಿಂದ ಒದ್ದು ಎಬ್ಬಿಸಿ ಸುರಕ್ಷಿತ ತಾಣಕ್ಕೆ ಕರೆದೊಯ್ಯುವ ಜಿರಾಫೆ, ಚೂಪಾದ ಹಲ್ಲಿದ್ದರೂ, ನೋವಾಗದಂತೆ ಮರಿಯನ್ನು ಬಾಯಲ್ಲಿ ಹಿಡಿದು ಬೇರೆ ಸ್ಥಳಕ್ಕೆ ಸಾಗಿಸುವ ಹುಲಿ, ಮೊಟ್ಟೆ ಒಡೆದು ಹೊರಬರುವವರೆಗೆ ದಿನಗಟ್ಟಲೆ ಕಾಯುವ ಮೊಸಳೆ, ಹುಳುಗಳನ್ನು ಹೆಕ್ಕಿ ತಂದು ಗೂಡಲ್ಲಿರುವ ಮರಿಗಳಿಗೆ ತಿನ್ನಿಸುವ ಪಕ್ಷಿಗಳು, ಮಕ್ಕಳ ಸಂತೋಷವನ್ನೇ ತಮ್ಮ ಸಂತೋಷವನ್ನಾಗಿ ಮಾಡಿಕೊಂಡ ನಮ್ಮ ನಿಮ್ಮೆಲ್ಲರ ತಾಯಂದಿರು ಇವರೆಲ್ಲ ಪ್ರಾಣಿ-ಪಕ್ಷಿ-ಮನುಷ್ಯ ಸಂತತಿಯ ಮುಂದುವರಿಕೆಯಲ್ಲಿ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

 

ಪ್ರಾಯ ಬಂದಾಗ, ಹಾರ್ಮೋನ್ ಬದಲಾವಣೆ ಮಾಡಿ ಸಂಗಾತಿಯನ್ನು ಹುಡುಕುವಂತೆ ಪ್ರೇರೇಪಿಸುವ ಪ್ರಕೃತಿ, ಹೊಸ ಪೀಳಿಗೆಯ ರಕ್ಷಣೆ-ಪೋಷಣೆಗೆ ತಾಯಿಯನ್ನು ಮಗುವಿನ ಜೊತೆಗೆ ಭಾವನೆಯ ಬಂಧದಲ್ಲಿ ಬಿಗಿಯುತ್ತದೆ. ತಾಯಿ ಪ್ರೀತಿಯನ್ನು ಪ್ರಕೃತಿ ಹುಟ್ಟಿಸಿದಿದ್ದರೆ ಹೊಸ ಪೀಳಿಗೆ ಉಳಿಯುವದಂತು? ಹಾಗಾಗಿ ತನ್ನದೇ ಪ್ರತಿರೂಪವನ್ನು ಪ್ರಕೃತಿ ತಾಯಿಯಲ್ಲಿ ಸೃಷ್ಟಿಸಿತು. ಹಾಗೆ ನೋಡಿದರೆ ಪ್ರತಿ ಹೆಣ್ಣಿನಲ್ಲೂ ಒಬ್ಬ ತಾಯಿ ಇರುತ್ತಾಳೆ. ತಮ್ಮಂದಿರ ಬೇಕು-ಬೇಡಗಳನ್ನು ತಾಯಿಯಷ್ಟೇ ಸೂಕ್ಷ್ಮವಾಗಿ ಗ್ರಹಿಸಬಲ್ಲ ಅಕ್ಕಂದಿರು, ಶಾಲೆಯಲ್ಲಿ ಪ್ರೀತಿಯಿಂದಲೇ ತಿದ್ದುವ ಶಿಕ್ಷಕರು ಹೀಗೆ ಪ್ರತಿಯೊಂದು ಹೆಣ್ಣಿನಲ್ಲಿ ತಾಯಿಯ ಭಾವ ಜಾಗೃತವಾಗಿರುತ್ತದೆ. ಅದು ಮನುಷ್ಯರಲ್ಲಷ್ಟೇ ಅಲ್ಲ. ಆನೆ ಹಿಂಡಿನಲ್ಲಿ ತಾಯಿಯಷ್ಟೇ ಕಾಳಜಿ ವಹಿಸುವ ಇತರೆ ಹೆಣ್ಣು ಆನೆಗಳು ಇರುತ್ತವೆ. ಕೋತಿ, ಗೊರಿಲ್ಲಾ ದಂತಹ ಸಂಘ ಜೀವಿಗಳು ಗುಂಪಲ್ಲಿರುವ ಮರಿಗಳನ್ನೆಲ್ಲ ಒಟ್ಟಿಗೆ ಬೆಳೆಸುತ್ತವೆ.

 

ಪ್ರಾಣಿ ಸಂಕುಲಕ್ಕೂ, ಮನುಷ್ಯರಿಗೂ ಇರುವ ವ್ಯತ್ಯಾಸ ಎಂದರೆ ತಾಯಿ ಪ್ರಾಣಿಗಳು, ತಮ್ಮ ಮರಿಗಳು ದೊಡ್ಡವರಾದ ಮೇಲೆ ತಮ್ಮ ಭಾವನೆಯನ್ನು ಕಡಿದುಕೊಂಡು ಮುಂದೆ ಸಾಗುತ್ತವೆ. ಆದರೆ ಮನುಷ್ಯರಲ್ಲಿ, ಜನ್ಮ ಕೊಟ್ಟ ತಾಯಿ ದೇವಕಿಗಾಗಲಿ, ಬೆಳೆಸಿದ ತಾಯಿ ಯಶೋದೆಗಾಗಲಿ ತಮ್ಮ ಮಕ್ಕಳು ಎಷ್ಟು ದೊಡ್ಡವರಾದರು ಪ್ರೀತಿ ಕರಗುವುದೇ ಇಲ್ಲ. ಕೆಲವೊಂದು ಸಲ ಅದು ಅತಿಯಾದದ್ದು ಉಂಟು. ಕುರುಡು ಪ್ರೇಮದ ತಾಯಿ ರಾಮಾಯಣಕ್ಕೆ ಕಾರಣವಾದರೆ, ಮಹತ್ವಾಕಾಂಕ್ಷೆ ಉಳ್ಳ ತಾಯಂದಿರು ಮಹಾಭಾರತಕ್ಕೆ ಕಾರಣರಾದರು. ಹಾಗೆಯೆ ಅದು ಹಲವು ಒಳ್ಳೆಯ ಬದಲಾವಣೆಗೂ ದಾರಿಯಾಗಿದೆ. ಛತ್ರಪತಿ ಶಿವಾಜಿ ಒಬ್ಬ ಸಾಹಸಿ ಆಗುವುದಕ್ಕೆ ಕಾರಣ ಆತನ ತಾಯಿಯೇ.

 

ಹೀಗೆ ಇತಿಹಾಸದ ಉದ್ದಕ್ಕೂ ತಾಯಿಯ ಪಾತ್ರ, ಅವರ ನಿಸ್ವಾರ್ಥ ಪ್ರೀತಿ, ಹೊಸ ಪೀಳಿಗೆಗಳನ್ನು ಪೋಷಿಸುವ ಅವರ ಆರೈಕೆಯ ಗುಣ, ಜಗತ್ತಿನಲ್ಲಿ ಜೀವ ಸಂಕುಲ ಮುಂದುವರೆಯಲು ಕಾರಣವಾಗಿದೆ. ಎಲ್ಲ ತಾಯಂದಿರಿಗೂ ಮತ್ತು ತಾಯಿ ಮನಸ್ಸಿನ ಸಹೃದಿಯಿಗಳಿಗೂ ನಮನ.

Saturday, May 1, 2021

ಆಸೆಬುರುಕರಿಗೆ ಅವಕಾಶ ಕೊಟ್ಟಿದ್ದು ನಾವೇ

೧೭೫೭ ನೇ ವರ್ಷದ ಜೂನ್ ತಿಂಗಳು. ವ್ಯಾಪಾರಕ್ಕೆಂದು ಕಲ್ಕತ್ತೆಗೆ ಬಂದಿಳಿದ ಬ್ರಿಟಿಷರು, ಕೋಟೆ ಕಟ್ಟಿ, ಯುದ್ಧ ಸಾಮಗ್ರಿ ಸಂಗ್ರಹಿಸುವುದನ್ನು ವಿರೋಧಿಸಿದ್ದು ಅಂದಿನ ಬಂಗಾಳದ ನವಾಬ ಸಿರಾಜುದ್ದೌಲ. ಬ್ರಿಟಿಷರು ಅಲ್ಲಿ ಸ್ವ-ರಕ್ಷಣೆಯ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ ಎಂದಿದ್ದು ನವಾಬನಿಗೆ ಸಮಂಜಸ ಅನ್ನಿಸಲಿಲ್ಲ. ಆಗ ನವಾಬನಿನ್ನು ಬಿಸಿ ರಕ್ತದ ಯುವಕ. ಯಾವುದೇ ಯುದ್ಧ ಗೆಲ್ಲಬಲ್ಲನೆಂಬ ಧೈರ್ಯ ಮತ್ತು ತಾಕತ್ತು ಅವನಿಗಿತ್ತು. ಆದರೆ ಇರದೇ ಇದ್ದದ್ದು  ಅನುಭವ ಮತ್ತು ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದೆಂಬ ಎಂಬ ಅಂದಾಜು. ಇತ್ತ ಬ್ರಿಟಿಷರ ಮುಂದಾಳತ್ವ ವಹಿಸಿದ್ದು ರಾಬರ್ಟ್ ಕ್ಲೈವ್. ಶ್ರೀಮಂತಿಕೆ, ಅಧಿಕಾರದ ಹಂಬಲದ ಹೊತ್ತು ಭಾರತಕ್ಕೆ ಬಂದವನು. ಲೂಟಿ ಹೊಡೆದ್ದರಲ್ಲಿ ತನಗೂ ಒಂದು ಪಾಲು ಇದೆ ಎನ್ನುವ ಮನಸ್ಥಿತಿ ಇದ್ದವನು.


ಪರಸ್ಪರರ ಅಸಮಾಧಾನ ಯುದ್ಧಕ್ಕೆ ಬಂದು ತಲುಪಲು ಹೆಚ್ಚು ಸಮಯ ಬೇಕಿರಲಿಲ್ಲ. ಹೂಗ್ಲಿ ನದಿಯ ದಡದಲ್ಲಿ, ಪ್ಲಾಸ್ಸಿ ಎನ್ನುವ ಸ್ಥಳದಲ್ಲಿ ಇಬ್ಬರು ಮುಖಾಮುಖಿಯಾದರು. ನವಾಬನದೊ ದೊಡ್ಡ ಸೈನ್ಯ. ೩೫,೦೦೦ ಜನ ಕಾಲಾಳುಗಳು, ೧೫,೦೦೦ ಕುದುರೆ ಸವಾರರು, ೫೩ ಫಿರಂಗಿಗಳೊಡನೆ ಬ್ರಿಟಿಷರ ನಾಶಕ್ಕಾಗಿ ಬಂದಿದ್ದ ನವಾಬ. ಬ್ರಿಟಿಷರ ಸೈನ್ಯದಲ್ಲಿದ್ದು ಮೂರು ಸಾವಿರ ಜನ ಮಾತ್ರ. ಆದರೂ ಯುದ್ಧ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದ್ದ ರಾಬರ್ಟ್ ಕ್ಲೈವ್ ದುರ್ಮಾರ್ಗಗಳನ್ನು ಹುಡುಕತೊಡಗಿದ್ದ. ನವಾಬನ ಸೈನ್ಯಾಧಿಕಾರಿಯಲ್ಲೊಬ್ಬನಾದ ಮಿರ್ ಜಾಫರ್ ಗೆ ನವಾಬನನ್ನಾಗಿ ಮಾಡುವ ಆಸೆ ತೋರಿಸಿ ಸೆಳೆದೇಬಿಟ್ಟ. ಒಂದು ವೇಳೆ ಮಿರ್ ಜಾಫರ್ ಕೊನೆ ಕ್ಷಣದಲ್ಲಿ ಹಿಂಜರಿದರೆ, ಯುದ್ಧ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದದ್ದರಿಂದ ನವಾಬನ ಜೊತೆ ಸಂಧಾನ ಮಾಡಿಕೊಂಡರಾಯಿತು ಎಂದು ಯೋಚಿಸಿದ್ದ ರಾಬರ್ಟ್ ಕ್ಲೈವ್. 


ಯುದ್ಧರಂಗದಲ್ಲಿ ಮುಖಾಮುಖಿಯಾದ ಸ್ವಲ್ಪ ಹೊತ್ತಿಗೆ ಮಿರ್ ಜಾಫರ್ ನ ಜೊತೆಗಿದ್ದ ದೊಡ್ಡ ಸೈನ್ಯ ಯುದ್ಧದಲ್ಲಿ ಪಾಲ್ಗೊಳದೇ ಹಿಂದಿರುಗಿತು. ಆಗ ಉಂಟಾದ ಗೊಂದಲ ಯುದ್ಧಕ್ಕೆ ಸನ್ನದ್ದರಾದವನ್ನು ಕೂಡ ಗಾಬರಿಗೊಳಿಸಿತು. ಬ್ರಿಟಿಷರ ಫಿರಂಗಿಗಳನ್ನು ಎದುರಿಸಿ ಹೋರಾಡುತ್ತಿದ್ದವರೂ ಕೂಡ, ಯುದ್ಧ ಬಿಟ್ಟು ಕಾಲ್ಕಿತ್ತರು. ನವಾಬನ ಸೈನ್ಯದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಬ್ರಿಟಿಷರಲ್ಲಿ ಆಗಿದ್ದು ೨೨ ಪ್ರಾಣ ಹಾನಿ ಮಾತ್ರ. ಒಂದು ನಿರ್ಣಾಯಕ ಯುದ್ಧವನ್ನು ಮೊದಲ ಬಾರಿಗೆ  ಸುಲಭದಲ್ಲಿ ಗೆದ್ದಿತ್ತು ಬ್ರಿಟಿಷ್ ಮೂಲದ ಈಸ್ಟ್ ಇಂಡಿಯಾ ಕಂಪನಿ. ಹಾಗೆಯೇ ಮಿರ್ ಜಾಫರ್ ನವಾಬನಾದರೂ, ತಾನು ಬ್ರಿಟಿಷರ ಕೈಗೊಂಬೆ ಎನ್ನುವುದು ಅರಿವಾಗಲು ತಡವಾಗಲಿಲ್ಲ.


ಅಲ್ಲಿಯವರೆಗೆ ವ್ಯಾಪಾರ ತರುವ ಲಾಭವನ್ನೇ ನೆಚ್ಚಿಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ ಯುದ್ಧ ಮಾಡುವುದು, ರಾಜ್ಯಭಾರ ಮಾಡುವುದು ಹೆಚ್ಚು ಲಾಭದಾಯಕ ಎನ್ನುವುದು ಕಂಡುಕೊಂಡಿತು. ಕ್ರಮೇಣವಾಗಿ ಇಡೀ ಭಾರತವನ್ನೇ ಆಳುವ ಅವರ ಯೋಜನೆಗೆ ಅಡಿಪಾಯ ಹಾಕಿದ್ದು ರಾಬರ್ಟ್ ಕ್ಲೈವ್ ಎನ್ನುವ ಲೂಟಿಕೋರ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮಾತ್ರ ನಮ್ಮ ಅರಾಜಕತೆ, ಒಳ-ಜಗಳ, ಸಮರ್ಥವಲ್ಲದ ಯುದ್ಧ ಕೌಶಲಗಳು, ದೊಡ್ಡ ಸಂಖ್ಯೆಯಲ್ಲಿದ್ದರೂ ಶಿಸ್ತಿರದ ಸೇನೆ, ಫಿರಂಗಿ-ಬಂದೂಕುಗಳನ್ನು ಭರ್ಚಿ ಹಿಡಿದು ಎದುರಿಸುವ ದಡ್ಡತನ.


ನಮ್ಮ ಮೂರ್ಖತನವನ್ನೇ ಬಂಡವಾಳ ಮಾಡಿಕೊಂಡು ಬ್ರಿಟಿಷರು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದು ಇತಿಹಾಸ. ಶಾಲಾ ಪುಸ್ತಕಗಳಲ್ಲಿ ಸಿಗದಂತಹ ಹಲವಾರು ಮಾಹಿತಿಗಳನ್ನು ನಾನು ಓದಿ ತಿಳಿದುಕೊಂಡಿದ್ದು 'The Anarchy'  ಎನ್ನುವ ಪುಸ್ತಕದ ಮೂಲಕ.