Wednesday, June 28, 2023

ಹಾಳೂರಿನಲ್ಲಿ ಉಳಿದವರು

ಊರುಗಳು ಏತಕ್ಕೆ ಪಾಳು ಬೀಳುತ್ತವೆ? ನಮ್ಮ ಹಂಪೆಯನ್ನು ಶತ್ರುಗಳು ಹಾಳುಗೆಡವಿದರು. ಹಿರೋಷಿಮಾ, ನಾಗಸಾಕಿ ಪಾಳು ಬೀಳುವುದಕ್ಕೆ ಪರಮಾಣು ಬಾಂಬ್ ಗಳು ಕಾರಣವಾದವು. ಒಂದು ಯುದ್ಧ ಮುಗಿಯುವುದಕ್ಕೆ ಕೆಲ ಊರುಗಳು ಪಾಳು ಬೀಳಬೇಕೇನೋ? ಅದನ್ನೇ ಇಂದಿಗೂ ಉಕ್ರೇನ್ ನಲ್ಲಿ ಕೂಡ ಕಾಣಬಹುದು. ಆದರೆ ಅದು ಅಷ್ಟೇ ಅಲ್ಲ. ಅಕ್ಬರ್ ಕಟ್ಟಿದ ಫತೇಪುರ್ ಸಿಕ್ರಿ ಯಲ್ಲಿ ನೀರು ಸಾಕಾಗದೆ ಮೊಗಲ್ ದೊರೆಯಿಂದ ಸಾಮಾನ್ಯ ಪ್ರಜೆಗಳವರೆಗೆ ಎಲ್ಲರೂ ಊರು ಬಿಟ್ಟರು. ಹಿಂದೆ ಪ್ಲೇಗ್ ಬಂದಾಗ ಜನ ಊರು ತೊರೆಯುತ್ತಿದ್ದರು. ಭೂಕಂಪಗಳು ಕೂಡ ಊರುಗಳನ್ನು  ಕ್ಷಣಾರ್ಧದಲ್ಲಿ ಪಾಳು ಬೀಳಿಸಿಬಿಡುತ್ತವೆ. ಇಂದಿಗೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜನ ದುಡಿಮೆ ಅರಸಿ ಬೆಂಗಳೂರಿಗೆ ಗುಳೆ ಹೊರಡುತ್ತಾರಲ್ಲ. ಅವರು ತಮ್ಮ ಹಳ್ಳಿಗಳಿಗೆ ಹಿಂತಿರುಗದಿದ್ದರೆ ಅವುಗಳು ಸ್ವಲ್ಪ ಮಟ್ಟಿಗಾದರೂ ಪಾಳು ಬೀಳದೆ ಏನು ಮಾಡುತ್ತವೆ?


ಬಹು ಕಾಲದ ಹಿಂದೆ ಆದಿ ಮಾನವ ಬೆಟ್ಟ, ಗುಡ್ಡಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿರಲಿಲ್ಲವೇ? ಅವನು ಬೆಟ್ಟ ಇಳಿದು, ನೀರಿನ ವ್ಯವಸ್ಥೆ ಇದ್ದಲ್ಲಿ ವ್ಯವಸಾಯ ಆರಂಭಿಸಿದ. ಕ್ರಮೇಣ ಬಯಲಲ್ಲಿ ಮನೆಗಳನ್ನು ಕಟ್ಟಿಕೊಂಡ. ಅವುಗಳು ಊರಾಗಿ ಬೆಳೆದವು. ವಾಸಕ್ಕೆ ಅನುಕೂಲ ಹೆಚ್ಚಿದ್ದರೆ ಹೊಸ ಊರು ಕಟ್ಟಿಕೊಂಡು ಹಳೆ ಊರು ತೊರೆಯಲು ಹಿಂದೆ ಮುಂದೆ ಯೋಚಿಸಲಿಲ್ಲ. ನಂತರ ಸಮಾಜ ರೂಪುಗೊಂಡು, ಪ್ರದೇಶಗಳು ಸಾಮ್ರಾಜ್ಯಗಳ ಸೀಮೆ ರೇಖೆಗಳಾದವು. ಗೆದ್ದವರು ಸೋತವರ ಊರನ್ನು  ಹಾಳುಗೆಡವುತ್ತಿದ್ದರು. ಆ ಸಂಪ್ರದಾಯ ಮುಂದೆ ಹಲವು ಊರುಗಳು ಅಳಿಯಲು ಮತ್ತು ಹೊಸ ಊರುಗಳು ಹುಟ್ಟಿಕೊಳ್ಳಲು ಕಾರಣವಾದವು.


ಆದರೆ ಹಾಳೂರಿನಲ್ಲಿ ಒಬ್ಬಿಬ್ಬರು ಉಳಿದುಕೊಂಡರೆ ಅವರೇ ಊರ ಗೌಡರು ಎನ್ನೋದು ಗಾದೆ ಮಾತು. ಆದರೆ ಆ ಊರಿನಲ್ಲಿ ಉಳಿದುಕೊಳ್ಳಲು ಕಾರಣಗಳು ಮುಗಿದು ಹೋಗಿವೆ. ಹಳೆ ನೆನಪಿಗಳಿಗೆ, ಸಂಪ್ರದಾಯಗಳಿಗೆ, ಮುಲಾಜಿಗೆ ಬಿದ್ದು ಉಳಿದುಕೊಂಡರೆ ಅವರು ಸಾಧಿಸುವುದೇನು? ಬೇರೆಲ್ಲ ಜನ ಊರು ಬಿಟ್ಟು ಹೋಗಿ ಆಗಿದೆಯಲ್ಲವೇ? ಮತ್ತೆ ಆ ಊರಲ್ಲಿ ಹಳೆಯ ಅನುಕೂಲಗಳು ಉಳಿಯುವುದಿಲ್ಲ. ಪರಸ್ಪರ ಸಹಾಯ, ವ್ಯಾಪಾರ ಯಾವುದು ಸಾಧ್ಯವಿಲ್ಲ. ಹಾಗಿದ್ದಲ್ಲಿ ಪಾಳು ಬಿದ್ದ ಕೋಟೆ ಕಾಯುವೆದೇಕೆ? ಸತ್ತ ಹೆಣಕ್ಕೆ ಶೃಂಗಾರ ಮಾಡಿದರೆ ಏನುಪಯೋಗ?


ನಮ್ಮ ಪೂರ್ವಜರು ಅವರ ಹಿರಿಯರು ಬದುಕಿದ್ದಲ್ಲಿಯೇ ಇರುತ್ತೇವೆ ಎಂದು ನಿಶ್ಚಯ ಮಾಡಿದ್ದರೆ, ಇಂದಿಗೆ ನಾವು ಕೂಡ ಗುಹೆಗಳಲ್ಲಿ ವಾಸ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ. ಸಮಾಜಕ್ಕೆ ಬೇಡದ ಊರುಗಳನ್ನು ಅವನು ತೊರೆದು ಹೊಸ ಜೀವನ ಕಟ್ಟಿಕೊಂಡ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ಹಾಳೂರಿನಲ್ಲೂ ಗೌಡರಾಗಿ ಉಳಿದುಕೊಂಡರು. ಅದು ಯಾವುದೊ ಪ್ರತಿಷ್ಠೆಗೋ, ಅಥವಾ ಮುಲಾಜಿಗೆ ಬಿದ್ದು. ಅವರಿಗೆ ತಾವು ಕಳೆದುಕೊಂಡಿದ್ದು ಏನು ಎಂದು ತಿಳಿಯಲಿಲ್ಲ. 


ಸಂಪ್ರದಾಯಗಳನ್ನು ಮರೆಯಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಸಂಪ್ರದಾಯಗಳಿಗಾಗಿ ಸಾಯಬಾರದು ಎನ್ನುವುದಷ್ಟೆ ನನ್ನ ಅಭಿಪ್ರಾಯ. ಇಲ್ಲಿ ಊರುಗಳಷ್ಟೇ ಹಾಳು ಬೀಳುವುದಿಲ್ಲ ಎನ್ನುವುದು ಗಮನಿಸಬೇಕು. ಕುಟುಂಬಗಳು ಹಾಳು ಬಿದ್ದಾಗ ಅವರ ಮನೆಗಳು ಕೂಡ ಹಾಳು ಬೀಳುತ್ತವೆ. ಒಬ್ಬ ಮನುಷ್ಯ ಹಾಳು ಬಿದ್ದರೆ ಅವನ ಸಂಬಂಧಗಳು ಕೂಡ ಹಾಳು ಬೀಳುತ್ತವೆ. ಅಂತಹ ಹಾಳೂರುಗಳನ್ನು ಬಿಟ್ಟು ಮುನ್ನಡೆದಷ್ಟೂ ಹೊಸ ಜೀವನಕ್ಕೆ ಅವಕಾಶ.


ಹಾಳೂರು, ಪಾಳು ಬಿದ್ದ ಮನೆ, ಮನುಷ್ಯ ಅಲ್ಲಿ ಗೌಡರಾಗಿ ಉಳಿದು ಯಾವ ಪ್ರಯೋಜನ?

Monday, June 26, 2023

ಕಥೆ: ಹುಲಿಯೊಂದರ ಡೈರಿಯ ಪುಟಗಳು

ನೀವು ಮನುಷ್ಯರೆಲ್ಲ ಹುಲಿಗಳು ಬೆಕ್ಕಿನ ಜಾತಿಗೆ ಸೇರಿದ್ದು ಎನ್ನುತ್ತೀರಿ. ಅದೇಕೋ ನನಗೆ ಒಂಚೂರು ಇಷ್ಟವಾಗುವುದಿಲ್ಲ. ನನಗೆ ಬೆಕ್ಕಿನ ಹಾಗೆ ಮನುಷ್ಯರ ಮಕ್ಕಳ ಜೊತೆಗೆ ಆಟವಾಡುವುದು ಅಥವಾ ಹೆಣ್ಣು ಮಕ್ಕಳಿಂದ ಮುದ್ದಿಸಿಕೊಳ್ಳುವುದು ಅವೆಲ್ಲ ಆಗಿ ಬರುವುದಿಲ್ಲ. ಅವರನ್ನು ಬೇಕಾದರೆ ಬೆಳಗಿನ ಉಪಹಾರಕ್ಕೆ ತಿನ್ನುತ್ತೇನೆ. ನನಗೆ ಬೆಕ್ಕಿನ ಜಾತಿ ಎನ್ನುವುದಕ್ಕಿಂತ ಹುಲಿ ಜಾತಿಯೇ ಎನ್ನುವುದು ಸೂಕ್ತ. ಅಥವಾ ಅದಕ್ಕಿಂತ ಭಯಂಕರವಾಗಿ 'ವ್ಯಾಘ್ರ' ಎಂದು ಕರೆಸಿಕೊಳ್ಳಲು ಇಷ್ಟ. ನಾನು 'ಜಂಗಲ್ ಬುಕ್' ಕಥೆಯನ್ನು ಮನುಷ್ಯರು ತಾವು-ತಾವು ಮಾತನಾಡುವಾಗ ಕೇಳಿಸಿಕೊಂಡಿದ್ದೇನೆ. ಅದರಲ್ಲಿನ 'ಶೇರ್ ಖಾನ್' ಗಿಂತ ವಿಭಿನ್ನವಾಗಿ ನಾನು ಏನು ನಡೆದುಕೊಳ್ಳುತ್ತಿರಲಿಲ್ಲ. 'ಮೌಗ್ಲಿ' ಜೊತೆಗೆ ನನ್ನ ಸ್ನೇಹ ಎಂದಿಗೂ ಸಾಧ್ಯವಿಲ್ಲ.


ನನ್ನ ಮತ್ತು ಮನುಷ್ಯರ ಭೇಟಿ ಅತ್ಯಂತ ಆಕಸ್ಮಿಕವಾದದ್ದು. ನಾನು ಚಿಕ್ಕವನಿದ್ದಾಗ ನನಗೆ ಮನುಷ್ಯ ಜಾತಿ ಇದೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ತಾಯಿಯ ಆರೈಕೆಯಲ್ಲಿ ಸೋದರರ ಜೊತೆ ಆಟವಾಡುವುದೇ ನನ್ನ ಜಗತ್ತಾಗಿತ್ತು. ಮರೆಯಲ್ಲಿ ಅಡಗಿ ತಾಯಿ ಬೇಟೆಯಾಡುವುದನ್ನು ಗಮನಿಸುತ್ತಿದ್ದೆ. ಎಲ್ಲಾ ನಾಲ್ಕು ಕಾಲಿನ ಪ್ರಾಣಿಗಳು, ಸಣ್ಣ ಕಾಲುಗಳು-ದೊಡ್ಡ ಹೊಟ್ಟೆ ಇದ್ದರೆ ಅದು ನಮಗೆ ಒಳ್ಳೆ ಊಟ. ಬೇಟೆಯ ಹತ್ತಿರಕ್ಕೆ ಸದ್ದಿಲ್ಲದೇ ಹೋಗಿ, ಅದರ ಗಮನ ಬೇರೆ ಕಡೆಗೆ ತಿರುಗಿದ ಕ್ಷಣದಲ್ಲಿ, ಅದರ ಮೈ ಮೇಲೆ ಎರಗಿ, ಕುತ್ತಿಗೆ ಮುರಿದರೆ ಅಂದಿನ ಬೇಟೆ ಮುಗಿದೇ  ಹೋಯಿತು. ತಾಯಿ ನಮ್ಮನ್ನು ಚೆನ್ನಾಗಿ ತರಬೇತಿಗೊಳಿಸಿದ್ದಳು. ಸಂತೋಷಮಯವಾಗಿರುವ  ಕಾಲ ಬಹು ಬೇಗ ಕಳೆದು ಹೋಗಿ ಬಿಡುತ್ತದೆ ಅಲ್ಲವೇ? ನಾನು ಸ್ವತಂತ್ರವಾಗಿ ಬೇಟೆಯಾಡುವುವುದನ್ನು ಗಮನಿಸಿದ ನನ್ನ ತಾಯಿ, ನನ್ನ ಮೇಲಿನ ಪ್ರೀತಿಯನ್ನು ಮರೆತು, ತನ್ನ ವ್ಯಾಪ್ತಿ ಪ್ರದೇಶದಿಂದ ಹೊರಗೆ ಅಟ್ಟಿದಳು.


ಸ್ವತಂತ್ರ ಜೀವನ ಆರಾಮದಾಯಕ ಕೂಡ ಆಗಿತ್ತು. ನೀರು ಕುಡಿಯಲು ಬರುವ ಪ್ರಾಣಿಗಳು ಮೈ ಮರೆತಾಗ ಹೊಂಚಿನ ಧಾಳಿ ಮಾಡಿದರೆ, ಅದು ಕೆಲ ದಿನಗಳ ಹಸಿವನ್ನು ನೀಗಿಸುತ್ತಿತ್ತು. ಉಳಿದೆಲ್ಲ ವಿಶ್ರಾಂತಿ ಸಮಯ. ನನ್ನ ಪ್ರದೇಶದಲ್ಲಿ ತಿರುಗಾಡುವಾಗ, ಉಳಿದೆಲ್ಲ ಪ್ರಾಣಿಗಳು ನನ್ನ ನೋಡಿ ಭಯ ಪಡುವುದು ಗಮನಿಸುತ್ತಿದ್ದೆ. ನಾನು ಕಾಡಿನ ರಾಜಕುಮಾರನೇ? ಇರಬಹುದೇನೋ? ನೋಡಲು ವ್ಯಗ್ರವಾಗಿದ್ದಷ್ಟು ಹೆಚ್ಚಿನ ಮರ್ಯಾದೆ. ಅದು ಕಾಡಿನ ನಿಯಮ. ಸುಮ್ಮನೆ ಒಮ್ಮೆ ಗ್ರ್ರ್ರ್ ಅಂದರೆ ಸಾಕು. ನಾನು ಹೋಗಬೇಕಾದ ದಾರಿಯಲ್ಲಿ ಯಾರೂ ಅಡ್ಡಿ ನಿಲ್ಲುತ್ತಿದ್ದಿಲ್ಲ. ರಾಜಕುಮಾರನಾಗಿದ್ದ ನಾನು ಕ್ರಮೇಣ ರಾಜನೇ ಆಗಿಬಿಟ್ಟೆ.


ಹುಲಿಗಳು ಅದೃಷ್ಟ ಅಥವಾ ಹಣೆಬರಹಗಳನ್ನು ನಂಬಿ ಬದುಕುವುದಿಲ್ಲ. ಎಲ್ಲ ಸರಿಯಿತ್ತು. ಈ ಮನುಷ್ಯರನ್ನು ಅಕಸ್ಮಾತ್ ಆಗಿ ಭೇಟಿ ಆಗುವವರೆಗೆ. ಒಬ್ಬನಲ್ಲ, ಹಲವರು ಇದ್ದರು. ಅವರು ದೊಡ್ಡ ಕೋತಿಗಳ ತರಹ ಕಾಣುತ್ತಿದ್ದರು. (ನೀವು ನನಗೆ ಬೆಕ್ಕಿನ ಜಾತಿ ಅಂದದ್ದು ನೆನಪು ಮಾಡಿಕೊಳ್ಳಿ). ಆದರೆ ಅವರು ಮರದಿಂದ ಮರಕ್ಕೆ ಹಾರುತ್ತಿದ್ದಿಲ್ಲ. ನೋಡಲು ತುಂಬಾ ನಿಶ್ಶಕ್ತರ ಹಾಗೆ ಕಾಣುತ್ತಿದ್ದರು. ಅವರನ್ನು ತಿನ್ನಲು ನನಗೇನು ಇಷ್ಟವಿದ್ದಿಲ್ಲ. ಆದರೆ ನನಗೆ ಅವರನ್ನು ನೋಡಿ ಅಸಹನೆಯಿಂದ ರೇಗುವಂತೆ ಆಗಿತ್ತು. ಅವರನ್ನು ಓಡಿಸುವ ಉದ್ದೇಶದಿಂದ ನಾನು ಒಬ್ಬನ ಮುಂದೆ ಧುತ್ತನೆ ನಿಂತು, ಮೆಲ್ಲಗೆ ಗುರ್ರ್  ಎಂದೆ. ಅವನು ಗಲಾಟೆ ಮಾಡಿ ಎಲ್ಲ ಜನರ ಗಮನ ಸೆಳೆಯುವಂತೆ ಮಾಡಿಬಿಟ್ಟ. ಮನುಷ್ಯರ ಗುಂಪು ಅಲ್ಲಿ ಸೇರತೊಡಗಿದ್ದಂತೆ ನಾನು ಅಲ್ಲಿಂದ ಜಿಗಿದು ಮರೆಯಾದೆ. ಹೆದರಿಕೆಯಿಂದಲ್ಲ, ಅಸಹ್ಯದಿಂದ, ಜಿಗುಪ್ಸೆಯಿಂದ.


ಆ ಘಟನೆ ನಡೆದಾಗಿಂದ, ನನ್ನನ್ನು ಮನುಷ್ಯ ಕಣ್ಣುಗಳು ಗಮನಿಸುವುದು ನನ್ನ ಅರಿವಿಗೆ ಬರುತ್ತಿತ್ತು. ನನ್ನ ಮತ್ತು ಮನುಷ್ಯರ ಮುಖಾ-ಮುಖಿ ಸ್ವಲ್ಪೇ ದಿನಗಳಲ್ಲಿ ಮತ್ತೆ ಆಯಿತು. ಅವನು ಗೋಪುರ ಒಂದರ ಮೇಲೆ ಒಂದು ಉದ್ದನೆಯ ಕೋಲೊಂದನ್ನು ನನಗೆ ಗುರಿ ಮಾಡಿ ಹಿಡಿದಿದ್ದ. ತಡೆಯಲಾರದ ಕೋಪ ನನ್ನ ನೆತ್ತಿಗೇರಿ, ಅವನ ಮೇಲೆ ಆ ಕ್ಷಣದಲ್ಲೇ ಹಾರಿದೆ. ಏನಾಶ್ಚರ್ಯ! ಅವನು ಹಿಡಿದ ಕೋಲಿನಿಂದ ಬೆಂಕಿಯ ಉಂಡೆ ಸಿಡಿದು ನನ್ನ ಹಿಂಗಾಲನ್ನು ಸೇರಿತು. ಅಪಾರ ನೋವಿನಿಂದ ಕೆಳಗೆ ಬಿದ್ದ ನನಗೆ ಮತ್ತೆ ಓಡಲು ಆಗಲಿಲ್ಲ. ಕೆಲ ಸಮಯದಲ್ಲೇ ನನ್ನ ಪ್ರಜ್ಞೆ ಕಳೆದು ಹೋಯಿತು.


ಎಷ್ಟೋ ದಿನಗಳ ದೀರ್ಘ ನಿದ್ದೆಯ ನಂತರ ನನಗೆ ಎಚ್ಚರವಾದಾಗ ನಾನು ಕಾಡಿನಲ್ಲಿ ಇದ್ದಿಲ್ಲ. ಅದು ಒಂದು ಚಿಕ್ಕ ನಡುಗಡ್ಡೆಯ ಹಾಗೆ ತೋರುತ್ತಿತ್ತು. ಅದರ ಸುತ್ತ ಆಳವಾಗಿ ತೋಡಿಬಿಟ್ಟಿದ್ದರು. ಅದರಾಚೆಗೆ ಎತ್ತರದ ಗೋಡೆ ಮತ್ತು ಅದರ ಮೇಲೆ ಕಬ್ಬಿಣದ ಕಂಬಿಗಳು. ಎಷ್ಟು ಚಿಕ್ಕ ಜಾಗ. ಎರಡು ಸಲ ನೆಗೆದರೆ ಆ ಪ್ರದೇಶ ಮುಗಿದೇ ಹೋಗುತ್ತಿತ್ತು. ಸುಮ್ಮನೆ ನಡೆಯಬೇಕು. ಅಲ್ಲಿಯೇ ಸುತ್ತಬೇಕು. ನಾನು ಅಲ್ಲಿ ಬಂದಿಯಾಗಿದ್ದೇನೆ ಎನ್ನುವುದು ಅರಿವಾಯಿತು. ಹತ್ತಿರದಲ್ಲಿ ಇತರ ಪ್ರಾಣಿ-ಪಕ್ಷಿಗಳ ಸದ್ದು ಕೇಳಿಬರುತ್ತಿತ್ತು. ಅವರುಗಳು ಕೂಡ ನನ್ನ ಹಾಗೆ ಬಂದಿಯಾಗಿರಬಹುದು ಎನ್ನಿಸಿತು. ಭೂಮಿ ಮೇಲೆ ಇಂತಹ ಜಾಗವೂ ಉಂಟೆ? ನೆಮ್ಮದಿಯ ವಿಷಯ ಎಂದರೆ ಊಟ ಮಾತ್ರ ಪ್ರತಿ ದಿನ ಇದ್ದಲ್ಲಿಗೆ ಬರುತ್ತಿತ್ತು. ಮೈ-ಕೈಗೆ ಕೆಲಸವಿಲ್ಲದೇ, ಬೇಟೆಯಾಡದೆ, ಉಗುರುಗಳಿಂದ, ಕೋರೆ ಹಲ್ಲುಗಳಿಂದ ಪ್ರಾಣಿಗಳ ಚರ್ಮವನ್ನು ಹರಿಯದೆ ಪ್ರತಿ ದಿನ ಅದೇ ಸಮಯಕ್ಕೆ ಹಾಕಿದ ಮಾಂಸ ತಿನ್ನುವುದು ಬೇಸರದ ಸಂಗತಿ. ಪ್ರತಿ ದಿನ ಊಟ ಸಿಗದೇ ಇದ್ದರು ಕಾಡಿನ ಅನಿಶ್ಚಿತ ಬದುಕು ಚೆನ್ನಾಗಿತ್ತು ಅನಿಸುತ್ತಿತ್ತು.


ಗೋಡೆಯ ಆಚೆಗಿನ ಕಬ್ಬಿಣದ ಸರಳಿನ ಹಿಂದೆ ನಿಂತು ಮನುಷ್ಯರು ನನ್ನನ್ನು ನೋಡಲು ಬರುತ್ತಾರೆ. ಈ ಪ್ರಪಾತವನ್ನು ಜಿಗಿಯುವುದು ನನಗೆ ಕಷ್ಟ ಏನಲ್ಲ. ಆದರೆ ಕಬ್ಬಿಣದ ಸರಳುಗಳು ನನ್ನನ್ನು ಘಾಸಿಗೊಳಿಸುತ್ತವೆ ಎನ್ನುವ ಅರಿವು ನನಗಿದೆ. ಅದಿಲ್ಲದಿದ್ದರೆ ಈ ಮನುಷ್ಯರನ್ನು ಹುರಿ ಮುಕ್ಕಿ ಬಿಡುತ್ತಿದ್ದೆ. ಅವರು ನನ್ನನ್ನು ದಿಟ್ಟಿಸಿ ನೋಡುವುದು ನನಗೆ ಇಷ್ಟ ಆಗುವುದಿಲ್ಲ. ಆದರೆ ನನಗೆ ಬೇರೆ ದಾರಿ ಇಲ್ಲ. ಅದಕ್ಕೆ ಅವರ ಮೇಲೆ ಗಮನ ಹರಿಸಲು ಹೋಗುವುದಿಲ್ಲ. ಅತ್ತಿತ್ತ ತಿರುಗುತ್ತೇನೆ. ಇಲ್ಲವೇ ಮಲಗಿ ನಿದ್ದೆ ಹೊಡೆಯುತ್ತೇನೆ.


ನೋಡಿ, ಯಾವ ಹುಲಿಯೂ ಡೈರಿ ಬರೆಯುವುದಿಲ್ಲ. ಓದುವುದು. ಬರೆಯುವುದು ಮಾಡಲಿಕ್ಕೆ ಅವುಗಳು ಭೂಮಿಗೆ ಬಂದಿಲ್ಲ. ಆದರೆ ಬೇಟೆಯಾಡಲು ಅವಕಾಶ ಇಲ್ಲದ ನನಗೆ ಹೊತ್ತು ಕಳೆಯುವುದೆಂತು? ನಿರುತ್ಸಾಹದ ಬದುಕು ನನ್ನದಾಗಿದೆ. ಬೇಟೆ ಪ್ರಾಣಿಗಳನ್ನು ಕೊಲ್ಲದಿದ್ದರೆ ಸಮಯವನ್ನಾದರೂ ಹೇಗಾದರೂ ಕೊಲ್ಲಬೇಕಲ್ಲವೇ? ಅದಕ್ಕೋಸ್ಕರ ಈ ಡೈರಿ ಬರೆಯುತ್ತಿದ್ದೇನೆ ಅಷ್ಟೇ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ಹೇಗೋ ಜೀವನ ನೂಕಬೇಕು. ಮೃಗಾಲಯದಲ್ಲಿ ಪ್ರಾಣಿಗಳು ಹೆಚ್ಚಿನ ಕಾಲ ಬದುಕುತ್ತವಂತೆ. ಅದಕ್ಕೆ ಸ್ವಾತಂತ್ರದ ಬೆಲೆ ತೆರಬೇಕು ನೋಡಿ. ಹಿಂದೆ ಮುಂದೆ ನೋಡದೆ ಪ್ರಾಣಿಗಳನ್ನು ಸಿಗಿದು ಹಾಕುತ್ತಿದ್ದ ನನಗೆ ಅಭಿಪ್ರಾಯ ಹಂಚಿಕೊಳ್ಳುವುದು ಏನಂತಲೇ ಗೊತ್ತಿರಲಿಲ್ಲ. ಹೆಚ್ಚಿಗೆ ವಿಚಾರ ಮಾಡುವುದು ನನಗೆ ಒಗ್ಗುವುದಿಲ್ಲ. ಇಂದು ಮಾತನಾಡಿದ್ದು ಜಾಸ್ತಿಯೇ ಆಯಿತು. ನಾನು ಸ್ವಲ್ಪ ಮಲಗುತ್ತೇನೆ.

Sunday, June 18, 2023

Content Creators in the times of Chat GPT

Most schools conduct ‘Essay Writing’ competitions. And at the Graduate level, a student has to write Research Papers. Such activities needed visiting libraries, going through multiple books, magazines, content on the web, and any other form of available content, digest them, taking notes, summarize them and produce a new content in the form of a new essay or a paper. That would mean effort of few days to couple of weeks. Now in the times of practical AI, Chat GPT will do that for you in a matter of few seconds. Why only an essay, it can write a new book on your subject.

It is not limited to text content, there are AI applications which can create images, videos, sounds as well. Earlier movie making needed many diverse talents coming together such as song writer, music composer, singer, choreographer, director and many others in the backstage. Now there are apps for each of those functions. Even a sci-fi movie can produced on your laptop. Though it may appear like lacking human touch, those applications learnt from the earlier content created by human beings. So, they cannot be too off from human world of wonder and blunders.

 

Self-publishing created many new writers (not all of them were successful anyway). Similarly, with a smartphone and YouTube account any one can create short videos and share them with the world instantly. Not all of those content creators became superstars, but it threw open the opportunity to all. But with the new set of AI tools, you won’t need to be creative, as your computer with AI applications helps to give you an idea of what all can be done. It can be a supplement if you are creative, and it can be a substitute for those lacking creativity.

 

Now the innate human talents you have fail to give you the edge you had before these AI tools came into picture. New AI tool will lead to flood of content creation. In the coming days, there will be more writers than readers, more painters than who will hoard them, many movies without watchers.

 

An author researching for couple of years to write a book will become obsolete. People will not only stop searching on Google, they will stop buying any books on Amazon too. There is Chat GPT which will offer customized text for their need.

 

While Stephen Spielberg and Disney World might remain as influencers, their movies will stop becoming blockbuster hits. There will be million versions of Lion King movie being watched only by their creators.

 

Smartphones killed MP3 players, Digital Cameras, Pen Drives, Scanners, Pagers, Fax machines and many other devices. That happened in just a decade. Now new wave of AI applications will make content creators and related professions obsolete. They will make the artists who are digital savvy very powerful in the same time. Quite similar to what the past revolutions had done, they will make the lives of a common man much easier, improving productivity. And also leave those not participating in this revolution much poorer.

Thursday, June 15, 2023

Rich people but fallen angels

What do you call a person with 3 wives and 10 kids? Well, that is Elon Musk for you. Going by Indian standards, he would be considered immoral, arrogant, against society’s values etc. But in the US (and all over the world too), he has a great fan following for many reasons. His technical skills, business skills and the wealth he has gathered because of them are not a point of discussion here. In India (or may be in few Asian countries), even if someone is extremely rich, marrying multiple times would not be acceptable. At least he is not considered a good person or a person to be looked up to. But the most advanced country in the world (US) does not seem to care about it.

Elon is not alone or just one exceptional case. Bill Gates another richest person in the world got divorced at such an old age. You would wonder why. His (former) wife surely had her own reasons which need not be expressed openly to everyone.

If you read biography of Steve Jobs, you would know that at first, he abandoned his first daughter, did not accept paternity only to accept it during final years of his life. But no one seems to pay attention to the blunders Steve Jobs had done to his family. He was and is still a legendary visionary this world has ever seen. He too has been embraced all over the world despite questionable values in his personal life.

In India, if someone is too rich and famous, people look at that person with wonder. But at the same time, if that person lives a personal life not acceptable to the larger society, he is criticized in the same breath he is praised. They would treat him like a fallen angel and not a person to be looked up to blindly.

Every society has its own values. What is acceptable in the US, need not be acceptable here. And at the same time, people of India might be seen as emotional fools by the people living in the US. Each to his own.

This problem would be a pain for the immigrants, who grew up in India but moved on to US for a better future. They would have better access to learning and employment opportunities. But they get wrong ideals for their kids. They just don’t see Elon Musk as only technically competent and rich guy but also as the one who had multiple affairs, who thinks liberally about marriage, and as a cool guy posing with different models every other year.

Well, everything comes at a cost. Give one to get one. 

Saturday, June 10, 2023

ಸತ್ತ ಮೇಲೆ ಸಮರಾದಾರು

"ಕುಲ ಕುಲ ಕುಲವೆಂದು ಹೊಡೆದಾಡದಿರಿ,
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ?"
-ಕನಕದಾಸ

ಜಾತಿ-ವರ್ಗ ಬೇಧಗಳಿದ್ದರಿಂದಲೇ ಕನಕದಾಸರು ಈ ಗೀತೆ ರಚಿಸಿದರಲ್ಲವೇ? ಈ ಜಾತಿ ಪದ್ದತಿ ತುಂಬಾನೇ ಹಳೆಯದು. ವೇದ, ಪುರಾಣಗಳಲ್ಲಿ ಇದರ ಉಲ್ಲೇಖವಿದೆ.

ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ
- ಸ್ಕಂದ ಪುರಾಣ

ಹುಟ್ಟಿನಿಂದಲ್ಲ, ಸಂಸ್ಕಾರದಿಂದ ಬ್ರಾಹ್ಮಣ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಹುಟ್ಟಿನಿಂದಲೇ ಜಾತಿಯನ್ನು ಪುರಸ್ಕರಿಸುವ ಪದ್ಧತಿಯೇ ಜನ ಸಾಮಾನ್ಯರಲ್ಲಿ ಬಳಕೆಗೆ ಬಂತು. ಅಷ್ಟೇ ಅಲ್ಲದೆ ಒಳ ಪಂಗಡಗಳು ಹುಟ್ಟಿಕೊಂಡವು. ಮತ್ತು ಅವುಗಳು ಆಯಾ ಧರ್ಮ ಸಂಸ್ಥಾಪಕರ ವಿಚಾರಗಳಿಗೆ ವಿರುದ್ಧವಾಗಿದ್ದವು.

ಬುದ್ಧನ ವಿಚಾರಗಳಿಗೆ ವಿರುದ್ಧವಾಗಿ ಬೌದ್ಧ ಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ ಎನ್ನುವ ಎರಡು ಪಂಗಡಗಳಾದವು. ಕ್ರಿಶ್ಚಿಯನ್ ಧರ್ಮ ಶುರು ಆದಾಗ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಅನ್ನುವ ಬೇಧ ಭಾವ ಇರಲಿಲ್ಲ. ಹಾಗೆಯೆ ಮುಸ್ಲಿಮರಲ್ಲಿ ಶಿಯಾ-ಸುನ್ನಿ ಎನ್ನುವ ಪಂಗಡಗಳಿರಲಿಲ್ಲ. ಕಾಲ ಕಳೆದ ಹಾಗೆ ಬ್ರಾಹ್ಮಣರಲ್ಲಿ ಕೂಡ ಶೈವ-ವೈಷ್ಣವ ಪಂಗಡಗಳು ಹುಟ್ಟಿಕೊಂಡವು.

ಜಾತಿ ಅಸಮಾನತೆಯನ್ನು ವಿರೋಧಿಸಿ ಹೊಸ ಧರ್ಮವನ್ನು ಹುಟ್ಟು ಹಾಕಿದಾತ ಬಸವಣ್ಣ. ದಲಿತರ ಮನೆಯಲ್ಲಿ ಊಟ ಮಾಡಿ, ಅಂತರಜಾತಿಯ ವಿವಾಹ ಮಾಡಿಸಿ, ರಾಜನ ಕೆಂಗಣ್ಣಿಗೆ ಗುರಿಯಾದಾತ ಆತ. ಆದರೆ ಇಂದು ನೋಡಿ. ಎಷ್ಟು ಜನ ಲಿಂಗಾಯತರು ಅಂತರಜಾತಿಯ ವಿವಾಹ ಒಪ್ಪಿಕೊಳ್ಳುತ್ತಾರೆ? ಲಿಂಗಾಯತರು, ಲಿಂಗಾಯತ ಮಠಗಳು ಕಟ್ಟಿದ ಸಂಸ್ಥೆಗಳು ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡುತ್ತವೆ. ಅದು ಜಾತಿ-ಬೇಧ ಮಾಡದೆ ದಾಸೋಹ ನಡೆಸಿದ ಬಸವಣ್ಣನ ಇಚ್ಛೆಗೆ ವಿರೋಧವಾಗಿಲ್ಲವೇ? ಜಾತಿಗಳು ತರುವ ಅಸಮಾನತೆಯನ್ನು ತೊಡೆಯಲು ಕಟ್ಟಿದ ಲಿಂಗಾಯತ ಧರ್ಮದಲ್ಲಿ ಇಂದಿಗೆ ಅನೇಕ ಒಳ ಪಂಗಡಗಳಿವೆ.

ಪ್ರಪಂಚದ ಎಲ್ಲ ಜಾತಿಗಳು ಅವುಗಳ ಸಂಸ್ಥಾಪಕರ ಮೂಲ ವಿಚಾರಗಳಿಗೆ ಅನುಗುಣ ಆಗಿರದೆ, ಸಮಾಜದ ಜನರ ಅನುಕೂಲಕ್ಕೆ ತಕ್ಕಂತೆ ಬದಲಾಗಿವೆ. ಇರುವ ಜಾತಿಗಳಲ್ಲಿಯೇ ಒಳ ಪಂಗಡಗಳಾಗಿವೆ. ಹಾಗಾಗಿ ಜಾತಿ ಪದ್ದತಿ ಮತ್ತು ಮೇಲು-ಕೀಳು ಭಾವನೆಗಳು ದೂರವಾಗುವುದೆಂತು? ಅನೇಕ ಸಾಧು-ಸಂತರ, ಶಂಕರ-ಬಸವ-ಶರೀಫರಂತಹ ಸಮಾಜ ಸುಧಾರಕರ ಪ್ರಯತ್ನಗಳು ಅವರು ಬಯಸಿದ ನಿಜ ಬದಲಾವಣೆ ತರಲೆ ಇಲ್ಲ.

ಅಷ್ಟೆಲ್ಲ ಜಾತಿ ಮೇಲು-ಕೀಳು ಎಂದು ಹೊಡೆದಾಡುವ ಜನರ ಕೊನೆ ಮಾತ್ರ 'ಸತ್ಯ ಹರಿಶ್ಚಂದ್ರ ' ಚಿತ್ರದ 'ಕುಲದಲ್ಲಿ ಮೇಲ್ಯಾವುದೋ' ಗೀತೆಯ ಹಾಗೆ:

"ಇಟ್ಟ ಗಂಧಾ ಬೂದಿ ನಾಮ
ಚಟ್ಟ ಕಟ್ಟಲು ನಿರನಾಮಾ

ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾದಾರು

ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾದರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ"

Friday, June 9, 2023

ಋಷಿಗಳು vs ಬುದ್ಧ

ಹಿಂದಿನ ಕಾಲದಲ್ಲಿ ಋಷಿಗಳು ಹೇಗೆ ಬದುಕಿದ್ದರು ಎನ್ನುವ ಚಿತ್ರಗಳನ್ನು ಗಮನಿಸಿ ನೋಡಿ. ಅವರುಗಳು ಉದ್ದನೆಯ ಗಡ್ಡ ಬಿಟ್ಟಿರುತ್ತಿದ್ದರು. ಅವರು ವೇದ-ಉಪನಿಷತ್ತುಗಳ  ಕರ್ತೃಗಳು  ಅಥವಾ ಅವುಗಳನ್ನು ಭೋಧಿಸುವವರು ಆಗಿದ್ದರು. ಅವರುಗಳು ಊರ ಹೊರಗಡೆ ಆಶ್ರಮಗಳಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರ ಜೊತೆ ಅವರ ಹೆಂಡತಿ-ಮಕ್ಕಳು ಕೂಡ ವಾಸ ಆಗಿರುತ್ತಿದ್ದರು. ಅವರುಗಳು ತಮ್ಮ ದೇಶದ ರಾಜನಿಗೆ ಉಪದೇಶ ಮಾಡುವುದು, ಅವನ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದು ಇತ್ಯಾದಿ ಕೆಲಸಗಳಿಗೆ ನೆರವಾಗುತ್ತಿದ್ದರು. ಹಾಗೆಯೇ ಅವರಿಗೆ ತೊಂದರೆ ಕೊಟ್ಟವರಿಗೆ ಶಾಪ ಕೊಟ್ಟ ಉದಾಹರಣೆಗಳು ಏನೂ ಕಡಿಮೆ ಇಲ್ಲ. ಎಷ್ಟು ದೊಡ್ಡ ಋಷಿಯೊ, ಶಾಪ ಕೂಡ ಅಷ್ಟೇ ದೊಡ್ಡದಾಗಿರುತ್ತಿತ್ತು.


ಬುದ್ಧನ ಚಿತ್ರಗಳು ಅವನಿಗೆ ಮೀಸೆ-ಗಡ್ಡ ಇರುವುದು ತೋರಿಸಲಿಲ್ಲ.ಅವನು ಮೂರ್ತಿ ಪೂಜೆಯ ವಿರೋಧಿ ಆಗಿದ್ದ. ಅವನು ಹೆಂಡತಿ-ಮಕ್ಕಳನ್ನು ಬಿಟ್ಟು ಬಂದಿದ್ದ. ಅವನು ಒಂದು ಸ್ಥಳದಲ್ಲಿ ವಾಸ ಮಾಡದೆ ಅಲೆಮಾರಿಯಾಗಿದ್ದ. ಅವನು ರಾಜ ಮತ್ತು ಸಾಮಾನ್ಯರ ನಡುವೆ ಭೇಧ-ಭಾವ  ತೋರಿಸಲಿಲ್ಲ. ಅವನು ವೇದಾಭ್ಯಾಸ ಮಾಡಲಿಲ್ಲ. ದೇವರನ್ನು ನಂಬು ಎಂದು ಹೇಳಲಿಲ್ಲ. ಬದಲಿಗೆ ನಮ್ಮ ಆಸೆಗಳಿಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿದ. ಅವನು ಸಿಟ್ಟಾದ ಅಥವಾ ಶಾಪ ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಬುದ್ಧ ಗುರುವಿನ ಬಳಿ ಕಲಿತು ಜ್ಞಾನಿ ಆಗಲಿಲ್ಲ ಮತ್ತು ಜ್ಞಾನದ ಬಗ್ಗೆ ಭೋದಿಸಲಿಲ್ಲ. ಆದರೆ ಅವನು ಸ್ವಂತ ಅನುಭವದ ಜ್ಞಾನಿಯಾಗಿದ್ದ. ಅದನ್ನೇ ಸರಳ ಮಾತುಗಳಲ್ಲಿ ಹೇಳಿದ.


ಬುದ್ಧ ಯಾವ ಅವಮಾನಕ್ಕೂ ಸ್ಪಂದಿಸಲಿಲ್ಲ. ಅವನು ಕ್ಷಮಿಸಿದನೋ ಅಥವಾ ನಿರ್ಲಕ್ಷ್ಯ ಮಾಡಿದನೋ ಕೂಡ ಯಾರಿಗೂ ತಿಳಿಯಲಿಲ್ಲ.

ಬೆಂಗಳೂರಿನ ನಾನಾ ಮುಖಗಳು

ಸುಮಾರು ಒಂದೂವರೆ ಕೋಟಿ ಜನ ಜೀವನ ಸಾಗಿಸುವ ಬೆಂಗಳೂರು ನಗರಿಯಲ್ಲಿವಾಸಿಸುವ ಎಲ್ಲ ಜನರ ಅನುಭವಗಳು ಒಂದೇ ಆಗಿರಲು ಸಾಧ್ಯ ಇಲ್ಲ. ಇಲ್ಲಿ ಕೆಲವೇ ಸಾವಿರದಲ್ಲಿ ತಿಂಗಳ ಖರ್ಚು ನೀಗಿಸುವ ಕುಟುಬಗಳು ಇವೆ. ಹಾಗೆಯೇ ಕೋಟಿ ಹಣ ಖರ್ಚು ಮಾಡುವ ಕುಟುಂಬಗಳು ಕೂಡ ಇವೆ. ಮಂದ ಗತಿಯಲ್ಲಿ ಸಾಗುವ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಜನ ಇದ್ದಾರೆ. ಅದೇ ರಸ್ತೆಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುವ ಜನ ಕೂಡ ಅಷ್ಟೇ ಇದ್ದಾರೆ. ವಿಕ್ಟೋರಿಯಾ-ಬೌರಿಂಗ್ ಆಸ್ಪತ್ರೆಗಳಲ್ಲಿ ವಾರಸುದಾರರಿಲ್ಲದ ಶವಗಳು ಇವೆ. ಲಕ್ಸುರಿ ಆಸ್ಪತ್ರೆಗಲ್ಲಿ ಸತ್ತವರಿಗೆ ಕಣ್ಣೀರು ಸುರಿಸದ ಆದರೆ ಅಪಾರ ಸಂಪತ್ತಿಗೆ ವಾರಸುದಾರರು ಆದವರು ಕೂಡ ಇದ್ದಾರೆ. ಇಲ್ಲಿ ಹಳ್ಳಿ-ಚಿಕ್ಕ ಊರುಗಳಲ್ಲಿ ಇರುವ ಹಾಗೆ ಒಂದು ತರಹದ ಸಂಸ್ಕೃತಿ ಇಲ್ಲವೇ ಇಲ್ಲ. ಇದು ಅನೇಕ ವಿರೋಧಾಭಾಸಗಳು ಒಟ್ಟಿಗೆ ಕಾಣುವ ಊರು.

ನಿಮಗೆ ಬೆಂಗಳೂರು ಅಂದರೆ ಏನು? ಗಿಜಿಗುಟ್ಟುವ ಮೆಜೆಸ್ಟಿಕ್ ಅಷ್ಟೇನಾ? ಜೇಬಿಗೆ ಭಾರ ಎನ್ನಿಸುವ ಮಹಾತ್ಮಾ ಗಾಂಧೀ ರಸ್ತೆಯ ಅಂಗಡಿಗಳಾ? ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ವಿಧಾನ ಸೌಧವಾ? ಅನೇಕ ಸಿನಿಮಾ ನಟರ ಮನೆಗಳಾ? ವೈಟ್ ಫೀಲ್ಡ್ ನಲ್ಲಿ ಓಡಾಡಿ ಇದು ಅಮೆರಿಕಕ್ಕೆ ಕಡಿಮೆ ಇಲ್ಲ ಅಂದು ಕೊಳ್ಳುವುದಾ? ಜಯದೇವ ಅಥವಾ ನಾರಾಯಣ ಆಸ್ಪತ್ರೆಗೆ ಓಡಾಡಿ ಸಂಬಂಧಿಕರ ಜೀವ ಉಳಿಸಿಕೊಳ್ಳಲು ಹೆಣಗುವುದಾ?  ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಹೋಗಿ, ಇದು ಭಾರತ ಎನ್ನುವ ಬಡ ದೇಶದ ಭಾಗವೇ ಎಂದು ನಿಮಗೆ ನೀವೇ ಪ್ರಶ್ನೆ ಕೇಳಿಕೊಳ್ಳುವುದಾ?

ರವಿ ಬೆಳಗೆರೆ ಪುಟಗಟ್ಟಲೆ ಬರೆದ ಬೆಂಗಳೂರಿನ ಭೂಗತ ಲೋಕ ಇನ್ನೂ ಮರೆಯಾಗಿಲ್ಲ ಎನ್ನುವುದು ನನಗೆ ಇತ್ತೀಚಿಗೆ ಚಿತ್ರಮಂದಿರದಲ್ಲಿ 'ಹೆಡ್ ಬುಷ್' ಎನ್ನುವ ಚಿತ್ರ ನೋಡುವಾಗ ಅಲ್ಲಿ ನೋಡುಗರಲ್ಲಿ ನಡೆದ ವಾಗ್ವಾದ ನೋಡಿ ಮನೆವರಿಕೆ ಆಯಿತು. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಸಾವಿರಾರು ಪ್ರಯಾಣಿಕರನ್ನು ವ್ಯವಸ್ಥಿತವಾಗಿ ನಿರ್ವಹಿಸಿವುದು ನೋಡಿ ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಜನಸಂದಣಿಗೆ ಏನು ಕಡಿಮೆ ಇಲ್ಲ ಎನಿಸಿತು. ನಮ್ಮ ಮನೆ ಹತ್ತಿರ ಒಬ್ಬ ಗಂಡ-ಮಕ್ಕಳಿಲ್ಲದ ಹೆಣ್ಣು ಮಗಳು ನಡೆಸುವ ಅನಾಥಾಶ್ರಮ ನೋಡಿ ಇದೆ ದೇಶದಲ್ಲಿ ಮದರ್ ತೆರೇಸಾ ಬದುಕಿದ್ದಲ್ಲವೇ ಎಂದು ನೆನಪಾಯಿತು.

ನಾನು ಮೊದಲು ಬೆಂಗಳೂರಿಗೆ ಬಂದದ್ದು ಶಾಲೆ ಪ್ರವಾಸದ ವೇಳೆ. ನಂತರ ಕಾಲೇಜು ಕಲಿಯುವಾಗ ತರಬೇತಿಗೆ ಎಂದು ಒಂದು ತಿಂಗಳು ಇದ್ದೆ. ನಂತರ 1999 ಆಗಸ್ಟ್  ೧೫ ರಂದು ನೌಕರಿ ಹುಡುಕಿಕೊಂಡು ಬಂದ ಮೇಲೆ ಇದೆ ನನ್ನ ಮನೆಯಾಗಿದೆ. ಬರೀ ನನ್ನ  ಜೀವನೋಪಾಯಕ್ಕಲ್ಲದೆ ಅವಲಂಬಿತರಿಗೆ ಸಹಾಯ ಮಾಡುವಷ್ಟು ಶಕ್ತಿ ತುಂಬಿದೆ. ಸುಮಾರು ಇಪ್ಪತ್ತು ನಾಲ್ಕು ವರುಷಗಳನ್ನು ಇಲ್ಲಿ ಕಳೆದ ಮೇಲೂ, ಈ ನಗರ ನನಗೆ ಅಚ್ಚರಿ ತರುತ್ತದೆ.

ಹಿಂದೆ ನಾನ್ನು ಜೀವನ ಕಳೆದ ಊರುಗಳಲ್ಲಿ ಇದ್ದ ಹಾಗೆ ಇಲ್ಲಿ ಯಾರು ಸಾಧು-ಸಂತರಿಲ್ಲ. ಹಿಂದೆ ನಾನು ಇದ್ದ ಕಲ್ಬುರ್ಗಿಯಲ್ಲಿ ಶರಣಬಸವ ಅಪ್ಪನ ಗುಡಿಯಿತ್ತು. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಮಠ ಇತ್ತು. ಬೆಂಗಳೂರಿನಲ್ಲಿ ಇರುವುದು ಭಕ್ತರನ್ನು ಯಾಮಾರಿಸುವ ನಕಲಿ ಸ್ವಾಮಿಗಳು. ಇಲ್ಲಿ ಬೆವರನ್ನು ನಂಬಿ ಬದುಕುವ ಸಾಮಾನ್ಯರ ಹಾಗೆಯೇ ಮೋಸ ಮಾಡಿಯೇ ಜೀವನ ಸಾಗಿಸುವ ಜನರ ಸಂಖ್ಯೆ ಕೂಡ ಕಡಿಮೆ ಇಲ್ಲ. ಆದರೆ ಅವೆಲ್ಲ ವಿರೋಧಾಭಾಸಗಳ ನಡುವೆ ಇದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ.

ನಮ್ಮ ಆಫೀಸಿನ ಹೊರಗಡೆ ವೀರಭದ್ರೇಶ್ವರ ಖಾನಾವಳಿ ಇದ್ದ ಹಾಗೆ, ಆಂಧ್ರ ಬಿರಿಯಾನಿ ಊಟ ಕೂಡ ಅಷ್ಟೇ ಫೇಮಸ್. ಪಕ್ಕದಲ್ಲೇ ಬಂಗಾಳಿಯ ಶೈಲಿಯ ಮೀನು ಮಾಡುವ ಅಂಗಡಿ ಇದೆ. ಪಂಜಾಬಿ ಊಟ ಕೂಡ ಅದರ ಪಕ್ಕದಲ್ಲೇ. ಭಾರತದಲ್ಲಿ ಇರುವ ಎಲ್ಲ ತರಹದ ಅಡುಗೆ ಶೈಲಿಯ ಊಟಗಳು ಇಲ್ಲಿ ಲಭ್ಯ. ಅಷ್ಟೇ ಅಲ್ಲ. ಇಲ್ಲಿಗೆ ಭೇಟಿ ನೀಡುವ ವಿದೇಶಿಗರ ಅನುಕೊಲಕ್ಕಾಗಿ ಕಾಂಟಿನೆಂಟಲ್ ರುಚಿಗಳು ಕೂಡ ಲಭ್ಯ.

ಜೋಪಡಿಗಳಲ್ಲಿ, ತಾತ್ಕಾಲಿಕ ಶೆಡ್ ಗಳಲ್ಲಿ ಜನ ವಾಸ ಮಾಡಿದ ಹಾಗೆ  ಮಯ ನಿರ್ಮಿಸಿದ ಇಂದ್ರಪ್ರಸ್ಥದ ಹಾಗಿರುವ ಮನೆಗಳಲ್ಲಿ ಕೂಡ ಜನ ವಾಸ ಮಾಡುವುದು ನೀವು ಇಲ್ಲಿ ಗಮನಿಸಬಹುದು. ನಿಮಗೆ ದೇಶ ಸುತ್ತಲು ಸಾಧ್ಯ ಆಗದಿದ್ದರೆ, ಬೆಂಗಳೂರನ್ನು ಒಂದೆರಡು ಸಲ ಸುತ್ತಿ ಬಂದರೆ ಅಡ್ಡಿ ಇಲ್ಲ ಎನ್ನಬಹುದು. ತರಹೇವಾರಿ ಜನರನ್ನು ಮತ್ತು ವಿಶಿಷ್ಟ ಅನುಭವಗಳನ್ನು ಒಂದೇ ಸ್ಥಳದಲ್ಲಿ ಕೊಡುವ ಊರು ನಮ್ಮ ಬೆಂಗಳೂರು. ಇದು ನನಗೆ ಕೊಟ್ಟ ಅವಕಾಶಕ್ಕೆ ನಾನು ಋಣಿ.

ಮಗಳ ದೌರ್ಬಲ್ಯಗಳನ್ನು ಮುಚ್ಚಿ ಹಾಕಿದ ನಂತರ

'ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯ ಇಲ್ಲ' ಎನ್ನುವುದು ಸಾಕಷ್ಟು ಜನರ ಅನುಭವದ ಮಾತು. ಹಾಗೆಯೇ ಮುಂದೆ ಹೋಗಿ 'ಕೆಟ್ಟ ಮಗ ಹುಟ್ಟಬಹುದು ಆದರೆ ಕೆಟ್ಟ ಮಗಳು ಹುಟ್ಟಲು ಸಾಧ್ಯ ಇಲ್ಲ' ಎಂದು ಕೂಡ ಹೇಳಬಹುದು. ಸಾಕಷ್ಟು ಜನ ತಂದೆಯರಿಗೆ ತಮ್ಮ ಹೆಣ್ಣು ಮಕ್ಕಳೆಂದರೆ ಹೆಮ್ಮೆ. ಕಡೆಯ ಕಾಲದಲ್ಲಿ ಗಂಡು ಮಕ್ಕಳು - ಸೊಸೆಯಂದಿರು ಊಟ ಹಾಕದಿದ್ದಾಗ ತಮ್ಮ ತಂದೆ-ತಾಯಿಯನ್ನು ಸಲಹುವ ಹಲವಾರು ಹೆಣ್ಣು ಮಕ್ಕಳನ್ನು ನಾನು ನೋಡಿದ್ದೇನೆ. ತಂದೆ-ತಾಯಿಗೆ ಧೈರ್ಯ ಹೇಳುವ ಕೆಲಸ ಬೆಳೆದ ಹೆಣ್ಣು ಮಕ್ಕಳು ಮಾಡಿದರೆ, ಹೆಚ್ಚಿನ ಗಂಡು ಮಕ್ಕಳು ಅವರ ಪೋಷಕರಿಗೆ ತಲೆ ನೋವಾಗಿರುತ್ತಾರೆ.

ಹೆಣ್ಣು ಮಕ್ಕಳ ಮೇಲೆ ಇರುವ ಪ್ರೀತಿ, ತಂದೆಗೆ ಗಂಡು ಮಕ್ಕಳ ಮೇಲೆ ಇರಲು ಸಾಧ್ಯ ಇಲ್ಲ.  ಹಾಗೆಯೆ ಹೆಣ್ಣು ಮಕ್ಕಳಿಗೆ ಕೂಡ ತಂದೆಯೇ ಅವರ ಜೀವನದ ಮೊದಲ ಹೀರೋ. ಬೇರೆ ಯಾರು ಆ ಸ್ಥಾನಕ್ಕೆ ಪೈಪೋಟಿ ನೀಡಲು ಸಾಧ್ಯ ಇಲ್ಲವೇ ಇಲ್ಲ. ಇದನ್ನು ಬಹಳಷ್ಟು ಕುಟುಂಬಗಳಲ್ಲಿ ಗಮನಿಸಬಹುದು. ತಂದೆಯ ದೌರ್ಬಲ್ಯಗಳನ್ನು ಮಗಳು ಮುಚ್ಚಿ ಹಾಕಿದರೆ, ತಂದೆಗೆ ಅವನ ಮಗಳಲ್ಲಿ ದೌರ್ಬಲ್ಯಗಳನ್ನು ಹುಡುಕುವುದು ಸಾಧ್ಯವೇ ಆಗುವುದಿಲ್ಲ. ಪ್ರಕೃತಿ ಹುಟ್ಟು ಹಾಕಿದ ಈ ತಂದೆ-ಮಗಳ ಸಂಬಂಧ, ಮಗಳು ಮದುವೆ ಆಗುವವರೆಗೆ ಚೆನ್ನಾಗಿಯೇ ಇರುತ್ತದೆ. ಆದರೆ ಅಲ್ಲಿಂದ ಅದು ಬೇರೆಯೇ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.

ಮಗಳು ತನ್ನ ತಂದೆಯ ಮೇಲೆ ತೋರಿದ ಪ್ರೇಮ, ಮದುವೆ ಆದ ನಂತರ ಮಗಳು ತನ್ನ ಗಂಡ ಮತ್ತು ಅವನ ಕುಟುಂಬದವರ ಜೊತೆ ತೋರಲು ಸಾಧ್ಯ ಇಲ್ಲ. ತಂದೆ ಸೋಂಭೇರಿ ಆಗಿದ್ದರೂ ಸಹಿಸಿಕೊಳ್ಳುವ ಮಗಳು, ತನ್ನ ಗಂಡ-ಮಾವ-ಅತ್ತೆ ಸೋಂಭೇರಿಗಳಾಗಿದ್ದರೆ ಯಾವುದೇ ಮುಲಾಜಿಲ್ಲದೆ ಮಾನ ಹರಾಜು ಮಾಡಿಬಿಡುತ್ತಾಳೆ. ಇದು ಕೂಡ ಸಾಕಷ್ಟು ಮನೆಗಳ ಸಂಗತಿ.

ಆದರೆ ಆ ಮಗಳಲ್ಲಿ ಕೂಡ ಲೋಪ-ದೋಷಗಳು ಇರುತ್ತಲ್ಲವೇ? ಅದನ್ನು ಮಗಳು ತನ್ನ ಮನೆಯಲ್ಲಿದ್ದಾಗ ಮುಚ್ಚಿ ಹಾಕಿದ ಹಾಗೆ, ಮದುವೆ ಆದ ನಂತರ ಕೂಡ ಅವನ ಮಗಳ ಕುಟುಂಬದಲ್ಲಿ ತಲೆ ಹಾಕಿ ಅವುಗಳನ್ನು ಮುಚ್ಚಿ ಹಾಕುತ್ತ ಹೋದರೆ, ಆ ತಂದೆ ಬಹು ಬೇಗ ಮರ್ಯಾದೆ ಕಳೆದು ಕೊಳ್ಳುತ್ತಾನೆ. ಅವನಿಗೆ ಮಗಳು ಮಾಡುವ ಕೆಲಸಗಳು ಸಹಜ ಅನ್ನಿಸಬಹುದು. ಆದರೆ ಅದೇ ಕೆಲಸಗಳನ್ನು ಅವನ ಸೊಸೆ ಮಾಡಿದರೆ ಅವನು ಸಹಿಸಿಕೊಳ್ಳುವುದಿಲ್ಲ. ಈ ತರಹದ ವಿರೋಧಾಭಾಸಗಳು ಅವನ ಮಗಳು ತಪ್ಪು ತಿದ್ದಿಕೊಳ್ಳುವುದು ಬಿಟ್ಟು, ಅವುಗಳನ್ನು ಹೆಚ್ಚಿಗೆ ಮಾಡುವಂತೆ ಪ್ರಚೋದಿಸುತ್ತವೆ. ಇತ್ತೀಚಿಗೆ ಮದುವೆ ಮುರಿದು ಬಿದ್ದ ಕುಟುಂಬಗಳನ್ನು ಗಮನಿಸುತ್ತಾ ಹೋದರೆ ಅಲ್ಲಿ ಮಗಳಿಗೆ ಬುದ್ಧಿ ಹೇಳದ ತಂದೆಯ ಪಾತ್ರ ಕೂಡ ಗಮನಿಸಬಹುದು.

ತಂದೆಯ ಹತ್ತಿರ ಮಗಳು ಹೇಗೆ ನಡೆಕೊಳ್ಳುತ್ತಾಳೋ, ಅವಳು ಇತರರ ಜೊತೆ ಹಾಗೆ ನಡೆದು ಕೊಳ್ಳುತ್ತಿರುವುದಿಲ್ಲ. ಇದನ್ನು ಗಮನಿಸಲು ತಂದೆ ಸೋತು ಹೋಗುತ್ತಾನೆ. ಮಗಳ ಮೇಲಿನ ಕುರುಡು ಪ್ರೇಮ ಕೂಡ ಅದಕ್ಕೆ ಕಾರಣ ಆಗಿರುತ್ತದೆ. ಅವನು ಮಗಳು ಕೂಡ ತಂದೆ ಜೊತೆ ಸಂಬಂಧ ನಿಭಾಯಿಸಿದ ಹಾಗೆ ಉಳಿದ ಸಂಬಂಧಗಳನ್ನು ನಿಭಾಯಿಸಲು ಸೋತು ಹೋಗುತ್ತಾಳೆ.

ತಂದೆ ಸತ್ತ ಮೇಲೆ ಮಗಳ ಜೀವನ ಮುಂದುವರೆಯಬೇಕಲ್ಲವೇ? ಮಗಳಿಗೆ ಬೇಕಿರುವುದು ತಂದೆಯ ವಿವೇಕ ಮತ್ತು ಅನುಭವ ಅಲ್ಲದೇ ತಂದೆಯ ಮಿತಿ ಮೀರಿದ ಪ್ರೇಮ ಅಲ್ಲ. ಕ್ಷಮಿಸಿ, ಇದು ಎಲ್ಲ ಮನೆಯಲ್ಲಿ ನಡೆಯುವ ಸಂಗತಿ ಅಲ್ಲ. ಆದರೆ ಅನವಶ್ಯಕ ಎನ್ನಿಸುವಷ್ಟು ಮಗಳಿಗೆ ಬೆಂಬಲ ನೀಡುವ ತಂದೆ ಇದ್ದರೆ, ಆ ಮಗಳು ತನ್ನ ಗಂಡನ ಮನೆ ಬಿಟ್ಟು ಬರುವ ಸಾಧ್ಯತೆಗಳು ಕೂಡ ಅಷ್ಟೇ ಜಾಸ್ತಿ ಎನ್ನುವುದು ನನ್ನ ಸ್ವಂತ ಅನುಭವ.