Saturday, December 17, 2022

Schindler’s List: A movie about humanity amidst war

In the same year of 1993, Jurassic Park, a movie directed by Steven Spielberg hit the screen, another movie Schindler’s List too came on screen by the same director. Unlike the former, it was no entertainer set in imagination but was based on the facts. You need a little bit of knowledge about second world war, atrocities of Hitler, situation in war hit Poland and 35 lakh Polish Jews killed during that time by SS Army to understand this movie better. This movie is not for weak hearted and sensitive people as it will shake their humanity to the core. Most of the movie is shot in Black and White. Scenes appear like in a documentary but has much drama in it. And some of them are not easy to digest.

This movie is about Oscar Schindler and the list of Jews he saved from the clutches of Hitler’s SS Army. Hitler never appears on screen, but his army men carry out his instructions throughout the movie, a bit brutally by sending droves of Jews to gas chambers to die. The protagonist manages to save a thousand of them from death.

Schindler is an industrialist and a politician. He is part of Hitler’s Nazi party. He has a wide network including SS Army officials and is an influential person. When SS Army captures Poland and begins to send thousands of civilian Jews to war concentration camps, Schindler manages to get a little more than thousand Jews prisoners giving a reason that they are skilled workers needed to run his factory. His factory does not need so many of them and it is a disguise to save their lives. Aman Goth, SS army official with a horrible psychic personality, knows about this. Though he randomly kills few and it is the influence of Schindler saves the lives of Jews.

There are many scenes which shows the cruelty adopted by SS Army and its commander Aman Goth. Lakhs of Jews lose their lives in Poland after their country loses battle to Hitler’s army. At the end, Russia’s Red Army wins the war against Hitler and they arrive at Krakow, a town where the movie is set. Schindler prepares to flee as he also belongs to Nazi party. And the people he saved, take out gold from a gold filled tooth and turn it to a ring and give it as a parting gift to Schindler. On the ring, it is written in Hebrew that “Whoever saves one life, saves the world entire”. Seeing that Schindler breaks down into tears and says he could have done better and saved few more Jews. And he escapes from the town in the midnight.

Next day morning, a soldier from Soviet arrives and says to the gathered Jews ‘You are liberated’. They all leave to a nearby town. Aman Goth gets hanged by Russian soldiers. In the last scene, the generations of people saved by Schindler arrives at his gravestone and offer their respect.

This movie is on the list of best movies created so far. If you are a history buff or a person moved by badass people who did not lose humanity despite the odds against them, you should not miss to watch it before you die. This movie is available on Netflix.




Saturday, December 10, 2022

ಬೆಳಗಿನ ಜಾವದ ಬೆಂಗಳೂರು ರಸ್ತೆಗಳಲ್ಲಿ

ಬೆಳಗಿನ ಜಾವ ನಾಲ್ಕು ಗಂಟೆ. ಮನೆ ಹೊರಗೆ ನಿಲ್ಲಿಸಿದ ಕಾರು ಯಾವುದೇ ತಕರಾರು ಇಲ್ಲದೆ ಒಂದೇ ಸಲಕ್ಕೆ ಗುರುಗುಟ್ಟತೊಡಗುತ್ತದೆ. ಬೆಂಗಳೂರಿನ ನಿರ್ಜನ ರಸ್ತೆಗಳಲ್ಲಿ ಕಾರು ಓಡಿಸತೊಡಗುತ್ತೇನೆ. ಮುಂದೆ ಅಡ್ಡ ಬರುವವರಿಲ್ಲ. ಹಿಂದೆ ಹಾರ್ನ್ ಹೊಡೆಯುವವರಿಲ್ಲ. ನಿಶಬ್ದ, ಏಕಾಂತ ಬೇಡವೆನಿಸಿ ರೇಡಿಯೋ ಹಚ್ಚುತ್ತೇನೆ. ತಣ್ಣನೆಯ ಕೊರೆಯುವ ಚಳಿಯಲ್ಲಿ ಬೆಚ್ಚನೆಯ ಹಾಡು ಕೇಳಿಸುತ್ತದೆ.

'ಮನಸು ಬರೆದ ಮಧುರ ಗೀತೆ, ನೀನೇ
ಹರೆಯ ಸುರಿದ ಸ್ವಾತಿ ಮುತ್ತು, ನೀನೇ
ಕವಡೆ ಒಳಗೆ ಹನಿಯ ಬೆಸುಗೆ
ಮುತ್ತು ಹಲವು ಬಗೆ'

ನಾನು ಹೋಗಬೇಕಾದ ಜಾಗ ತಲುಪಿ ಆಗಿದೆ. ಹಗಲು ಹೊತ್ತಿನಲ್ಲಿ ಪಾರ್ಕಿಂಗ್ ಸಿಗದ ಆಸ್ಪತ್ರೆ ಬಾಗಿಲ ಮುಂದೆಯೇ ರಾಜಾರೋಷವಾಗಿ ಕಾರು ನಿಲ್ಲಿಸುತ್ತೇನೆ. ಗಿಜಿಗುಡುವ ರಿಸೆಪ್ಶನ್ ನಲ್ಲಿ ಆ ಹೊತ್ತಿನಲ್ಲಿ ಯಾರೂ ಇಲ್ಲ. ಸೆಕ್ಯೂರಿಟಿ ಗಾರ್ಡ್ ಕೂಡ ಮೂಲೆಯಲ್ಲಿ ಹೊದ್ದು ಮಲಗಿದ್ದಾನೆ. ಡಾಕ್ಟರ್ ತಪಾಸಣೆ ನಡೆಸುವ ಕೋಣೆಯಲ್ಲಿ ಜ್ಞಾನಭಾರತಿ ಠಾಣೆಯ ಪೊಲೀಸರು ಒಬ್ಬರನ್ನು ತಪಾಸಣೆಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿಗೆ ಮಾತನಾಡದ, ಆದರೆ ಸೂಕ್ಷ್ಮಗ್ರಾಹಿಯಾದ, ಅದೇ ಕಾರಣಕ್ಕೆ ಅವರನ್ನು ನಾನು ಗೌರವಿಸುವ ವೈದ್ಯ ಭೂಷಣ್ ತಮ್ಮ ಗಡ್ಡ ಕೆರೆದುಕೊಳ್ಳುತ್ತಾ, ತಲೆ ತಗ್ಗಿಸಿ ರಿಪೋರ್ಟ್ ಬರೆಯುತ್ತಿದ್ದಾರೆ. ನಾನು ಮೊದಲ ಮಹಡಿಗೆ ಹೋಗುತ್ತೇನೆ. ಅಲ್ಲಿ ಟೇಬಲ್ ಮೇಲೆಯೇ ತಲೆಯಿಟ್ಟು ಮಲಗಿದ ನರ್ಸ್ ಅನ್ನು ಎಬ್ಬಿಸಿ ನಾನು ತಂದ ಇಂಜೆಕ್ಷನ್ ಗಳನ್ನು ಕೊಡುತ್ತೇನೆ. ಚಿಕ್ಕ ಮಗನಿಗೆ ಬಂದ ವೈರಲ್ ಫೀವರ್ ದೊಡ್ಡ ಮಗನಿಗೂ ಬಂದಾಗಿದೆ. ವೈದ್ಯರು ತಾಕೀತು ಮಾಡಿದಂತೆ ಬೆಳಿಗ್ಗೆ, ಸಾಯಂಕಾಲ ಇಂಜೆಕ್ಷನ್ ಕೊಡಿಸುವುದಷ್ಟೇ ನನ್ನ ಕೆಲಸ. ಸುತ್ತ ಕಣ್ಣು ಹಾಯಿಸುತ್ತೇನೆ. ಒಂದು ವರುಷದ ಹಸುಳೆಯಿಂದ ತೊಂಬತ್ತರ ವೃದ್ಧರವರೆಗೆ ಒಬ್ಬೊಬ್ಬರು ಒಂದು ಹಾಸಿಗೆ ಹಿಡಿದು ಮಲಗಿದ್ದಾರೆ. ಜೀವನ ಆರಂಭ ಆಗುವುದು ಮತ್ತು ಕೊನೆಗೊಳ್ಳುವುದು ಆಸ್ಪತ್ರೆಯಲ್ಲೇ ಅಲ್ಲವೇ? ಆದರೆ ನಡುವೆ? ಅಲ್ಲಿಂದ ಹೊರ ಬಂದು ಮತ್ತೆ ಕಾರು ಸೇರಿ ಹಾಡು ಕೇಳಲು ತೊಡಗುತ್ತೇನೆ. ರಾತ್ರಿ ಬರಬೇಕಾದ ಹಾಡು ನಸುಕಲ್ಲಿ ಬರುತ್ತಿದೆ.

'ಮಲಗು ಮಲಗು ಚಾರುಲತೆ
ನಿನಗೂ ನೆರಳಿದೆ'

ಮಾಡಲು ಬೇರೆ ಕೆಲಸವಿಲ್ಲದ ನಾನು ಹಾಡು ಗಮನವಿಟ್ಟು ಕೇಳತೊಡುಗುತ್ತೇನೆ.

'ಎತ್ತಣ ಭೂಮಿಯ ಬಂಗಾರ
ಎತ್ತಣ ಮುತ್ತದು ಕಡಲೂರ
ಸೇರಿಸಿ ಪೋಣಿಸೋ ಮಣಿಹಾರ
ಸೃಷ್ಟಿಯ ಸುಂದರ ಹುನ್ನಾರ

ನಾನೆಲ್ಲೋ ನೀನೆಲ್ಲೋ ಇದ್ದವರು
ಈಗೊಂದು ಸೂರಡಿ ಸೇರಿದೆವು'

ಎಲ್ಲೋ ಸಿಗುವ ಬಂಗಾರ, ಮುತ್ತು ಹಾರವಾದಂತೆ ಎಲ್ಲೋ ಹುಟ್ಟಿದ ಗಂಡು-ಹೆಣ್ಣು ಜೊತೆಯಾಗುತ್ತಾರೆ. ಆದರೆ ಎಲ್ಲೋ ಹುಟ್ಟಿದ ನಾನು ಬೆಂಗಳೂರು ಸೇರಿದ್ದು ಸೃಷ್ಟಿಯ ಹುನ್ನಾರವೇ? ಅದೆಲ್ಲ ಏನಿಲ್ಲ. ಹೊಟ್ಟೆಪಾಡು ಅಷ್ಟೇ ಎನ್ನುವ ಹಾಗೆ ರಸ್ತೆಗಿಳಿದಿದ್ದ ಹಾಲು, ಪೇಪರ್ ಹಂಚುವ ಮಿತ್ರರು ಓಡಾಡುತ್ತಿದ್ದರು. ಜೀವನ ಸಾಗುವುದು ಕಾರಲ್ಲಲ್ಲ, ರಸ್ತೆಯ ಮೇಲೆ ಎಂದೆನಿಸಿ ರಸ್ತೆಗೆ ಬಂದು ನಿಂತೆ. ದುಡಿಯುವವರಿಗೆ ಬೆಂಗಳೂರು ಸ್ವರ್ಗ. ಆದರೆ ನೆಮ್ಮದಿ ಕೇಳುವವರಿಗೆ ಅಲ್ಲ. ಚಿಕ್ಕ ಊರುಗಳಲ್ಲಿ ಸ್ಪರ್ಧೆ ಕಡಿಮೆ ಹಾಗೆಯೆ ದುಡಿಮೆ ಕೂಡ. ಅದನ್ನು ಸರಿದೂಗಿಸಲು ಎಂಬಂತೆ ನೆಮ್ಮದಿ ಮಾತ್ರ ಧಾರಾಳ. ಆದರೆ ಎಲ್ಲದಕ್ಕೂ ಕೊನೆ ಎಂಬಂತೆ ಹಣದ ದಾಹ ಇರುವವರೆಗೆ ಮಾತ್ರ ಬೆಂಗಳೂರಿನ ಜಂಜಾಟ ಸಹಿಸಲು ಸಾಧ್ಯ. ಹನ್ನೆರಡನೆಯ ಶತಮಾನದಲ್ಲಿ ಗಿಜಿಗುಡುವ ಬಸವಕಲ್ಯಾಣವನ್ನು ಮತ್ತು ಬಿಜ್ಜಳನ ಅಧಿಕಾರವನ್ನು ಧಿಕ್ಕರಿಸಿ ಶರಣರು ಹೊರನಡೆಯಲಿಲ್ಲವೇ? ಬಸವಣ್ಣನವರು ಕೂಡಲ ಸಂಗಮವನ್ನು ಆಯ್ದುಕೊಂಡರೆ, ಅಕ್ಕ ಮಹಾದೇವಿಯನ್ನು ಕೈ ಬೀಸಿ ಕರೆದದ್ದು ಕದಳೀವನ. ಬೆಂಗಳೂರೆಂಬ ಅನುಭವ ಮಂಟಪ ಸಾಕಾಗುವ ಹೊತ್ತಿಗೆ ನಾನು ಕೂಡ ಇಲ್ಲಿಂದ ಹೊರಹೋಗಬೇಕು.

ಕತ್ತಲು ಮರೆಯಾಗಿ ಬೆಳಕು ಹಬ್ಬಲು ಶುರುವಾಯಿತು. ಬೆಂಗಳೂರು ತನ್ನ ದಿನದ ವ್ಯವಹಾರಕ್ಕೆ ಅಣಿಯಾಗಲು ತೊಡಗಿತ್ತು. 'ಇರುವಷ್ಟು ದಿನವಾದರೂ ಇಲ್ಲಿ ಸಂತೋಷದಿಂದ ಇರು ಮಾರಾಯ' ಎನ್ನುವಂತೆ ಅದು ನನ್ನನ್ನು ನೋಡಿ ನಕ್ಕಂತೆ ಅನಿಸಿತು. ಹತ್ತಿರದ ಹೋಟೆಲ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ ನಾನು ಕೂಡ ನಗೆ ಬೀರಿದೆ.

Saturday, November 26, 2022

ಎಚ್ಚರವಿರಲಿ ಎಂದ ಬುದ್ಧ ಬೇರೆ ನಿಯಮ ಹೇಳಲಿಲ್ಲ

ಒಂದು ದಿನ ಬುದ್ಧನ ಶಿಷ್ಯ ಆನಂದ ಕೇಳಿದ 'ಒಂದು ವೇಳೆ ಸ್ತ್ರೀ ಎದುರಾದರೆ ಏನು ಮಾಡಬೇಕು?'

 

ಬುದ್ಧ ಉತ್ತರಿಸಿದ 'ನೆಲ ನೋಡಿ ಮಾತನಾಡು. ಅವಳನ್ನು ನೋಡಬೇಡ'

 

ಆನಂದ ಮರುಪ್ರಶ್ನೆ ಹಾಕಿದ 'ಅವಳನ್ನು ನೋಡಿ ಮಾತನಾಡುವ ಅವಶ್ಯಕತೆ ಬಂದರೆ?'

 

'ನೋಡು. ಆದರೆ ಮುಟ್ಟಬೇಡ' ಬುದ್ಧ ಸಮಾಧಾನದಿಂದ ಹೇಳಿದ.

 

ಆನಂದನ ಸವಾಲು ಮುಂದುವರೆಯಿತು 'ಒಂದು ವೇಳೆ ಮುಟ್ಟುವ ಅವಶ್ಯಕತೆ ಬಂದರೆ?'

 

'ಮೈ ಮೇಲೆ ಎಚ್ಚರವಿರಲಿ' ಎಂದು ಹೇಳಿದ ಬುದ್ಧ ಸುಮ್ಮನಾದ. ಮುಂದೆ ಬೇರೆ ಯಾವುದೇ ನಿಯಮ ಹೇಳಲಿಲ್ಲ.

 

ಬುದ್ಧ ಎಚ್ಚರವಿರಲಿ ಎಂದು ಹೇಳಿದ್ದು ನಮ್ಮ ಮನದ ಕಾಮನೆಗಳಿಂದ. ನಮ್ಮ ಮನದಾಸೆಗಳೇ ನಮ್ಮನ್ನು ದುಃಖಕ್ಕೆ ಈಡು ಮಾಡುತ್ತವೆ ಎಂದು ಅವನಾಗಲೇ ಅರಿತಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಕೂಡ ಸಾರಿದ.

 

ಇಂದಿಗೆ ನಮ್ಮ ಸುತ್ತ ಮುತ್ತಲಿನ ಜನಗಳನ್ನೇ ನೋಡಿ. ಬುದ್ಧನ ಮಟ್ಟಿಗೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಿನ ಎಚ್ಚರ ಹೊಂದಿರುತ್ತಾರೆ. ಎಚ್ಚರವಿರುವವರು ದುಶ್ಚಟಗಳಿಗೆ ದಾಸರಾಗುವಿದಿಲ್ಲ. ಅವಕಾಶ ಇದ್ದಾಗಲೂ ನಯವಾಗಿ ತಿರಸ್ಕರಿಸಿ  ಮುಂದೆ ಸಾಗುತ್ತಾರೆ. ಎಂತಹ ಕಷ್ಟಗಳೇ ಬರಲಿ, ಅವರು ಕೊಲೆ-ಸುಲಿಗೆಗಳಿಗೆ ಇಳಿಯುವುದಿಲ್ಲ. ಅವರನ್ನು ಕಾಯುತ್ತಿರುವುದು ಅದೇ ಎಚ್ಚರ.

 

ಅದೇ ಎಚ್ಚರ ಇರದ ಮನುಷ್ಯರನ್ನು ನೋಡಿ. ಕುಡಿತಕ್ಕೆ ದಾಸರಾಗಿರುತ್ತಾರೆ. ಜೂಜಾಟಕ್ಕೆ ಮನೆ ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ಸ್ವಾರ್ಥಕ್ಕೆ ಯಾರಿಗೆ ಬೇಕಾದರೂ ಅನ್ಯಾಯ ಮಾಡಲು ಹಿಂಜರಿಯುವುದಿಲ್ಲ. ಅವರು ಹೊರಗಡೆ ಎಷ್ಟೇ ಸಂತೋಷದಿಂದ ಇರುವಂತೆ ಕಂಡರೂ ಅದು ತೋರಿಕೆಯದ್ದಾಗಿರುತ್ತದೆ. ಏಕೆಂದರೆ ಸಂತೋಷದಿಂದ ಇರುವವನು ಇನ್ನೊಬ್ಬರಿಗೆ ಅನ್ಯಾಯ ಮಾಡಲು ಹೊರಡುವುದಿಲ್ಲ. ಮನದಲ್ಲಿ ಸಮಾಧಾನ ಇಲ್ಲದವನು ಮಾತ್ರ ಇನ್ನೊಬ್ಬರ ತಂಟೆಗೆ ಹೋಗಲು ಸಾಧ್ಯ.

 

ಎಚ್ಚರದ ಸಾಮರ್ಥ್ಯ ನಮ್ಮ ನಿಮ್ಮಲ್ಲಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಸುಖ ಸಂತೋಷಗಳು ಕೂಡ ಬೇರೆ ಬೇರೆ ಮಟ್ಟದಲ್ಲಿ ಇರುತ್ತವೆ. ಅತಿಯಾಸೆ ಪಟ್ಟವನು ಮಾತ್ರ ಹೆಚ್ಚಿನ ದುಃಖ ಹೊಂದಲು ಸಾಧ್ಯ. ಎಚ್ಚರ ವಹಿಸಿ ಆಸೆ ತೊರೆದವನಿಗೆ, ದುಃಖಗಳು ಅಷ್ಟಾಗಿ ಬಾಧಿಸುವುದಿಲ್ಲಆಸೆ ಪಡುವುದನ್ನು ಪ್ರಕೃತಿ ನಮ್ಮಲ್ಲಿ ಸಹಜ ಗುಣ ಧರ್ಮವನ್ನಾಗಿಸಿದೆ. ಆಸೆ ಪಡುವುದು ಸುಲಭ. ಅದನ್ನು ತೊರೆಯುವುದು ದುರ್ಲಭ. ಅದಕ್ಕೆ ಸಾಧಾರಣ ಮನುಷ್ಯ ಆಸೆಗಳ ತಿರುಗಣಿಗೆ ಬಿದ್ದು ಅದರ ಜೊತೆಗೆ ಬರುವ ದುಃಖಗಳನ್ನು ತಾಳಲಾರದೆ ಒದ್ದಾಡುತ್ತಾನೆ. ಅದಕ್ಕೆ ಬುದ್ಧ ಆಸೆಗಳನ್ನು ಹತೋಟಿಯಲ್ಲಿ ಇಟ್ಟುಕೋ ಎಂದ. ಎಚ್ಚರವಿರಲಿ ಎಂದು ಹೇಳಿದ.

 

ಕಷ್ಟದ ನಿರ್ಧಾರಗಳು ಬದುಕನ್ನು ಸುಲಭವಾಗಿಸುತ್ತವೆ. ಆದರೆ ಸುಲಭದ  ನಿರ್ಧಾರಗಳು ಬದುಕನ್ನು ಕಷ್ಟಮಯವನ್ನಾಗಿಸುತ್ತವೆ. ಎಚ್ಚರವಿರಲಿ ಎಂದು ಹೇಳಿದ ಬುದ್ಧ ಕಷ್ಟದ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದ. ಆಸೆಗಳನ್ನು ಗೆದ್ದ ಮೇಲೆ, ಇಲ್ಲವೇ ಅವುಗಳು ಹತೋಟಿಯಲ್ಲಿದ್ದರೆ ನಮ್ಮ ಜೀವನದಲ್ಲಿ ದುಃಖಗಳು ಕೂಡ ಅಷ್ಟೇ ದೂರದಲ್ಲಿ ಇರುತ್ತವೆ ಎನ್ನುವುದು ಅವನ ಜೀವನದ ಸಂದೇಶವಾಗಿತ್ತು.

 

ಅದಕ್ಕೆ 'ಎಚ್ಚರವಿರಲಿ' ಎನ್ನುವ ನಿಯಮ ಅಷ್ಟೇ ಸಾಕಾಗಿತ್ತು.

Thursday, November 17, 2022

Whitefield traffic woes may soften in 2023

A sleeping village got transformed into a buzzing IT hub. That is Whitefield suburb in Bangalore. Two decades ago, there were farm houses here but today 20 to 30 lakhs people come here everyday for work. It is really difficult for anyone in town planning to do justice in their jobs when the growth rate is so high.


Those who work in Whitefield come from all parts of Bangalore. Naturally the roads were clogged and traffic jams became frequent and average speed dropped to 10-15 km per hour. I am both a contributor to the traffic mess here (I worked 18 out of my 20 years here) and also a victim of lost productivity, health loss due to pollution.


Metro, if it is in Bangalore, it has to come to Whitefield. Work started here too many years ago. But the civil construction occupied half of road space which were already congested making the traffic problem even worse. My office commute time increased from 45 mins (20 years ago) to at least 2 hours in one direction. It was one of the reasons I started looking for a job elsewhere and that helped me stay away from Whitefield for 2 years. But destiny brought me back to Whitefield. Thanks to Corona, I did not have to come to office for two straight years. And now, I come 1-2 times a week.


Things don't remain the same. Civil construction work of Metro is almost complete. So roads do not have barricades bearing the name "Namma Metro", so vehicles can move on much easily. It is such a relief. And when Metro begins operations sometime in 2023, it will take many vehicles off the road. And Whitefield will become like other parts of Bangalore. There will be traffic but you are not scared to come to Whitefield.


When the peripheral ring road comes into action (don't know how many years it will take), it would reduce big trucks coming this way.


But the real change is, IT as an industry is not growing like before. It has become just another industry. New jobs being created in Whitefield won't be astronomical. And there are lots of residential spaces being constructed around Whitefield, people can live here and don't have to go back to center of the town.


All these things would mean the traffic jams in Whitefield were more likely problems of yester years and a part of memory you would not want to recall.


(Photo taken from office window at ITPL, Whitefield showing Metro line passing through and residential spaces coming up at a distance)

Tuesday, November 15, 2022

The pain will end when you’ve learned its lesson

  • Running away from issues won't solve them.
  • What you resist, persists.
  • Once you have learned the lessons, you can break patterns.
  • Be grateful and let go.


Thursday, November 10, 2022

ಆಸ್ತಿ ಎನ್ನುವ ಉರುಳು ಕಂಟಕ

ಎರಡು ವರುಷದ ಹಿಂದೆ 'ಆಸ್ತಿ ಜಗಳಗಳ ಸುತ್ತ' ಎನ್ನುವ ಕಿರು ಲೇಖನ ಬರೆದಿದ್ದೆ. ಮೂರು ತಲೆಮಾರುಗಳಕ್ಕಿಂತ ಹೆಚ್ಚಿಗೆ ಉಳಿಯದ ಆಸ್ತಿಗೆ ಬಡಿದಾಡಿ ಜನ ಹೇಗೆ ನೆಮ್ಮದಿ ಕಳೆದುಕೊಳ್ಳುತ್ತಾರೆ ಎನ್ನುವುದರ ಕುರಿತ ಲೇಖನ ಅದಾಗಿತ್ತು. (https://booksmarketsandplaces.blogspot.com/2020/01/blog-post.html). ಆಗ ಆಸ್ತಿ ಎನ್ನುವುದು ಉರುಳು ಕಂಟಕ ಎನ್ನುವ ಸ್ಪಷ್ಟತೆ ಮೂಡಿರಲಿಲ್ಲ.


ಆಸ್ತಿ ತರುವ ಅಧಿಕಾರ, ದವಲತ್ತು, ಸವಲತ್ತುಗಳು ಯಾರಿಗೆ ಬೇಡ? ಆದರೆ ಅದರ ಜೊತೆಗೆ ಆಪತ್ತುಗಳು ಕೂಡ ಬರುತ್ತವೆ. ಅದು ನಿಮ್ಮನ್ನು ನಿಮ್ಮ ಇಷ್ಟದ ಹಾಗೆ ಬದುಕಲು ಬಿಡುವುದಿಲ್ಲ. ನಿಮ್ಮವರೇ ನಿಮ್ಮಿಂದ ದೂರಾಗುತ್ತಾರೆ. ಅದುವರೆಗೆ ನಿಮ್ಮ ಮೇಲೆ ಬೀಳದ ಬೇಟೆಗಣ್ಣುಗಳು ನಿಮ್ಮ ಮೇಲೆ ಬೀಳತೊಡಗುತ್ತವೆ. ಕ್ರಮೇಣ ನೀವು ವರ್ತಿಸುವ ರೀತಿಯೇ ಬದಲಾಗಿಬಿಡುತ್ತದೆ.


ನೀವು ಶಂಕರ್ ನಾಗ್ ನಿರ್ದೇಶನದ, ಅಣ್ಣಾವ್ರು ಅಭಿನಯದ 'ಒಂದು ಮುತ್ತಿನ ಕಥೆ' ಚಿತ್ರ ನೋಡಿದ್ದೀರಾ? ಅದರಲ್ಲಿ ಸಮುದ್ರಾಳದಲಿ ಮುತ್ತು ಹುಡುಕುವ ಕಥಾ ನಾಯಕನಿಗೆ ಅಸಾಧಾರಣ ಗಾತ್ರದ, ಬೆಲೆ ಕಟ್ಟಲಾಗದ ಒಂದು ಮುತ್ತು ಸಿಗುತ್ತದೆ. ಅದರಿಂದ ತನ್ನ ಬಾಳು ಬದಲಾಗುತ್ತದೆ. ತನ್ನ ಮಗನನ್ನು ಶಾಲೆಗೆ ಕಳುಹಿಸಿ ಓದಿಸಬಹುದು ಎಂದೆಲ್ಲ ಅವನು ಕನಸು ಕಟ್ಟುತ್ತಾನೆ. ಆದರೆ ಅಲ್ಲಿಂದಲೇ ಅವನಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ. ಅದನ್ನು ಕೊಂಡುಕೊಳ್ಳಲು ವ್ಯಾಪಾರಸ್ಥರು ತಂತ್ರಗಾರಿಕೆ ಹೂಡುತ್ತಾರೆ. ಮಗನನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋದರೆ ವೈದ್ಯ ಆ ಮುತ್ತು ಕೊಡದಿದ್ದರೆ ಅವನ ಮಗನನ್ನು ಸಾಯಿಸುವುದಾಗಿ ಬೆದರಿಸುತ್ತಾನೆ. ದೇವಸ್ಥಾನ ಪೂಜಾರಿ ಮುತ್ತು ಕೊಟ್ಟರೆ ಮಾತ್ರ ಪೂಜೆ, ಇಲ್ಲದಿದ್ದರೆ ಇಲ್ಲ ಎಂದು ನಿರಾಕರಿಸುತ್ತಾನೆ. ಅಣ್ಣನ ಹಾಗೆ ಜೊತೆಗಿದ್ದವನು ಆ ಮುತ್ತು ಕದಿಯಲು ಪ್ರಯತ್ನಿಸುತ್ತಾನೆ. ಸ್ನೇಹಿತರೆಲ್ಲ ದೂರಾಗುತ್ತಾರೆ. ನಾಯಕನ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತವೆ. ಕೊನೆಗೆ ಅವನು ಆ ಮುತ್ತನ್ನು ಮತ್ತೆ ಸಮುದ್ರಕ್ಕೆ ಬೀಸಾಡಿ ಬರುವುದರೊಂದಿಗೆ ಆ ಚಿತ್ರ ಮುಗಿಯುತ್ತದೆ.


ಜಗತ್ತಿನ ಅಧಿಕಾರವೆಲ್ಲ ತನ್ನದಾಗಬೇಕು ಎಂದು ಬಯಸಿದ್ದ ಅಲೆಕ್ಸಾಂಡರ್. ಅವನು ಪರ್ಶಿಯಾದ ರಾಜನ ವಿರುದ್ಧ ಯುದ್ಧಕ್ಕೆ ಇಳಿದಾಗ, ಆ ಯುದ್ಧದಲ್ಲಿ ಎಲ್ಲರ ಕಣ್ಣು ಅಲೆಕ್ಸಾಂಡರ್ ಮೇಲೆ. ಕೆಂಪು ಶಿರಸ್ತ್ರಾಣ ಧರಿಸಿ, ಶ್ವೇತ ಕುದುರೆಯ ಬೆನ್ನೇರಿದವನ ಕಥೆ ಮುಗಿಸಲು ಎಲ್ಲ ಶತ್ರು ಸೈನಿಕರ  ಪ್ರಯತ್ನ. ಆದರೆ ಅಲೆಕ್ಸಾಂಡರ್ ತಲೆ ಕಾಯಲು ಒಂದು ದೊಡ್ಡ ಹಿಂಡೇ ಇತ್ತು. ಆ ಯುದ್ಧ ಅವನು ಗೆದ್ದರೂ, ಅವನ ಅದೃಷ್ಟ ಹಾಗೆ ಉಳಿಯುವುದಿಲ್ಲ. ಮುಂದೊಂದು ಯುದ್ಧದಲ್ಲಿ ಎದೆಗೆ ಬಿದ್ದ ಬಾಣ ಮಾಡಿದ ಗಾಯ ವಾಸಿಯಾಗದೆ ಅವನು ಅಸು ನೀಗುತ್ತಾನೆ. ಅವನ ಸೈನಿಕರಲ್ಲೇ ಪಂಗಡಗಳಾಗುತ್ತವೆ. ಅವನ ಹೆಣ ಕೂಡ ತಾಯ್ನಾಡಿಗೆ ಮರಳುವುದಿಲ್ಲ.


ಮೊಗಲ್ ದೊರೆಗಳನ್ನು ಗಮನಿಸಿ ನೋಡಿ. ಶಾಹ್ ಜಹಾನ್ ಮಗನಿಂದ ಬಂದಿಸಲ್ಪುಡುತ್ತಾನೆ. ಔರಂಗಜೇಬ್ ತನ್ನ ಸೋದರ ಸೋದರಿಯನ್ನೆಲ್ಲ ಯಮ ಪುರಿಗೆ ಅಟ್ಟುತ್ತಾನೆ. ವಿಜಯನಗರ ಸಾಮ್ರಾಜ್ಯ ಇತಿಹಾಸ ಗಮನಿಸಿ ನೋಡಿ. ಆ ರಾಜರುಗಳು ಯುದ್ಧ ಭೂಮಿಯಲ್ಲಿ ಪ್ರಾಣ ಬಿಟ್ಟದ್ದಕ್ಕಿಂತ, ಅಣ್ಣ ತಮ್ಮಂದಿರು ಹಾಕಿದ ವಿಷಕ್ಕೆ ಪ್ರಾಣ ಬಿಟ್ಟ ಪ್ರಕರಣಗಳೇ ಹೆಚ್ಚು. ಮುಂದೆ ರಾಜಾಧಿಕಾರದ ಬದಲು ಪ್ರಜಾಪ್ರಭುತ್ವ ಬಂತು. ಐದು ವರ್ಷಕ್ಕೆ ಒಮ್ಮೆ ಒಬ್ಬನಿಗೆ ರಾಜನಾಗುವ ಅವಕಾಶ. ಅದು ರಕ್ತಪಾತಗಳನ್ನು ಕಡಿಮೆ ಮಾಡಿದರೂ, ತಂತ್ರಗಾರಿಕೆ ನಿಲ್ಲಲಿಲ್ಲ. ನಮ್ಮ ಯಡಿಯೂರಪ್ಪನವರು ಎಷ್ಟು ಸಲ ಗದ್ದುಗೆ ಏರಿ ಅದನ್ನು ಕಳೆದುಕೊಂಡರು ನೆನಪಿಸಿಕೊಳ್ಳಿ.


ಇವೆಲ್ಲ ದೊಡ್ಡವರ ಕಥೆ ಆದರೆ, ನಮ್ಮಂತ ಸಾಧಾರಣ ಜನರ ಕಥೆ ಏನು ವಿಭಿನ್ನ ಅಲ್ಲ. ನಿಮಗೆ ಸ್ವಂತ ಮನೆ, ಹೊಲ, ಅಸ್ತಿ-ಪಾಸ್ತಿ ಇಲ್ಲವೇ? ನೀವು ಎಷ್ಟು ಅದೃಷ್ಟವಂತರು ಎಂದು ನಿಮಗೆ ಗೊತ್ತೇ  ಇಲ್ಲ. ನಿಮಗೆ ಇರುವ ನೆಮ್ಮದಿ ಯಾರು ಸುಲಭದಲ್ಲಿ ಕಸಿದುಕೊಳ್ಳಲು ಸಾಧ್ಯ ಇಲ್ಲ. ನೀವು ಪುಟದೊಂದು ಮನೆ ಕಟ್ಟಿಸಿಕೊಂಡಿದ್ದೀರಿ. ಆದರೆ ನಿಮ್ಮ ಸೋದರರಿಗೆ ಅದು ಸಾಧ್ಯ ಆಗಿಲ್ಲವೇ? ಆಗ ನಿಮಗೆ ಅಸೂಯೆಯ ಬಿಸಿ ತಟ್ಟುತ್ತಲೇ ಇರುತ್ತದೆ. ಅವರ-ನಿಮ್ಮ ಸಂಬಂಧದಲ್ಲಿ ವಿಶ್ವಾಸ ಸಾಧ್ಯವಿಲ್ಲ. ನಿಮ್ಮ ಬಂಧುಗಳೆಲ್ಲ ಬಡವರು ಆಗಿದ್ದು, ನೀವೊಬ್ಬರು ಮಾತ್ರ ಅನುಕೂಲಸ್ಥರು ಆಗಿದ್ದರೆ, ನಿಮ್ಮದು ರಣರಂಗದಲ್ಲಿನ ಅಲೆಕ್ಸಾಂಡರ್ ಪರಿಸ್ಥಿತಿ.


ಆಸ್ತಿ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಮೈಸೂರು ಮಹಾರಾಜರು ಮಾಡಿದ್ದ ಆಸ್ತಿ ಏನು ಕಡಿಮೆಯೇ? ಇಂದಿಗೆ ಅವರ ಕುಟುಂಬದವರು ಆ ಆಸ್ತಿ ಉಳಿಸಿಕೊಳ್ಳಲು ಮಾಡುತ್ತಿರುವ ಕಾನೂನು ಸಮರಗಳನ್ನು, ಹರ ಸಾಹಸಗಳನ್ನು ಗಮನಿಸಿ ನೋಡಿ. ಅವರು ತಮ್ಮ ಜೀವನ ಶಕ್ತಿಯನ್ನೆಲ್ಲ ಅದಕ್ಕೆ ವ್ಯಯಿಸುತ್ತಿದ್ದಾರೆ.


ಬೆಂಗಳೂರಿನಲ್ಲಿ ದೊಡ್ಡ ಆಸ್ತಿ ಮಾಡಿ ರಿಯಲ್ ಎಸ್ಟೇಟ್ ಧಂಧೆಯಲ್ಲರುವ ಜನರನ್ನು ಗಮನಿಸಿ ನೋಡಿ. ಅವರು ಎಲ್ಲಿ ಹೋದರೂ ಒಬ್ಬರೇ ಹೋಗುವುದಿಲ್ಲ. ಅವರ ಹಿಂದೇ-ಮುಂದೆ ಹುಡುಗರ ಪಡೆಯನ್ನೇ ಕಟ್ಟಿಕೊಂಡು ಬರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ಜೀವ ಹೋಗಬಹುದು ಎನ್ನುವ ಭಯ. ಅವರು ಶತ್ರುಗಳ ಕೈಯಲ್ಲಿ ಸಾಯುವುದಕ್ಕಿಂತ ತಮ್ಮ ಬಂಧುಗಳ ಹಾಕುವ ವಿಷಕ್ಕೆ ಸತ್ತು ಹೋಗುತ್ತಾರೆ. ಆ ವಿಷಯಗಳು ಖಾಸಗಿ ಆದ್ದರಿಂದ ಅವು ಎಲ್ಲೂ ಸುದ್ದಿಯಾಗುವುದಿಲ್ಲ. ಆಗ ಆಸ್ತಿಗೆ ಇನ್ನೊಬ್ಬ ಒಡೆಯ. ಅವನ ಜೀವನ ಕಾಲ ಎಷ್ಟೋ?


ಸುಮಾರು ೪.೫ ಶತಕೋಟಿ (ಬಿಲಿಯನ್) ವರ್ಷ ಇತಿಹಾಸ ಇರುವ ಭೂಮಿ, ತನಗೆ ಯಾರಾದರೂ ಒಡೆಯನು ಇದ್ದಾನೆ ಎಂದರೆ ಗಹ ಗಹಿಸಿ ನಗುತ್ತದೆ. ಅವನನ್ನು ತನ್ನಲ್ಲಿ ಲೀನವಾಗಿಸಿ ಇನ್ನೊಬ್ಬನಿಗೆ ಅವಕಾಶ ಮಾಡಿಕೊಡುತ್ತದೆ.

ಮನುಷ್ಯ ಕಲಿಯುವುದಿಲ್ಲ. ಕಲಿತ ಮನುಷ್ಯ ಆಸ್ತಿಗೆ ಆಸೆ ಪಡುವುದಿಲ್ಲ.

Sunday, October 30, 2022

ಎರಡು ಚಿತ್ರಗಳು ಮತ್ತು ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ

ಕಳೆದ ಎರಡು ದಿನದಲ್ಲಿ ನಾನು ನೋಡಿದ ಎರಡು ಚಲನ ಚಿತ್ರಗಳಲ್ಲಿ ಕೆಲವು ಸಮಾನ ಅಂಶಗಳಿವೆ.


ಮೊದಲಿಗೆ 'ಕಾಂತಾರ'. ಅದು ಒಂದು ಅದ್ಭುತ ಚಿತ್ರ. ತಲೆ ತಲಾಂತರಗಳ ಹಿಂದೆ ದಾನವಾಗಿ ಕೊಟ್ಟ ಭೂಮಿಯನ್ನು ವಾಪಸ್ಸು ಬಯಸುವ ಇಂದಿನ ತಲೆಮಾರು, ಅದನ್ನು ಆಗಗೊಡದ ಕ್ಷೇತ್ರಪಾಲಕ ದೈವ.


ಎರಡನೆಯದು 'ಹೆಡ್ ಬುಷ್'  ಚಿತ್ರ. ಅದು ಬೆಂಗಳೂರು ಕಂಡ ಮೊದಲ ಭೂಗತ ದೊರೆ ಜಯರಾಜ್ ನ ಕಥೆ.


ಒಂದು ದೈವದ-ಕ್ಷೇತ್ರ ಪಾಲಕನ ಕಥೆ. ಇನ್ನೊಂದು ಬೆಂಗಳೂರು ಕ್ಷೇತ್ರ ತನ್ನದೇ ಎನ್ನುವ ರೌಡಿಯ ಕಥೆ. ಎರಡೂ ಚಿತ್ರಗಳಲ್ಲಿ ಹೋರಾಟ ಇದೆ. ಮತ್ತು ಎರಡು ಚಿತ್ರಗಳ ಮುಖ್ಯ ಪಾತ್ರಗಳು ಕೈಯಲ್ಲಿ ಮಚ್ಚು ಹಿಡಿಯುತ್ತವೆ. ದೈವದ ಜೊತೆಗೆ ರೌಡಿ ಕಥೆಯ ಹೋಲಿಕೆ ನನ್ನ ಉದ್ದೇಶ ಅಲ್ಲ. ಆದರೆ ಅವಶ್ಯಕತೆ ಬಂದಾಗ ಮಚ್ಚು ಹಿಡಿಯಲು ಈ ಎರಡು ಪಾತ್ರಗಳು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳುವುದಷ್ಟೇ ನನ್ನ ಉದ್ದೇಶ.


ಈ ಎರಡೂ ಕಥೆಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ, 'ಕಾಂತಾರ' ದಲ್ಲಿ ನ್ಯಾಯ ಕೊಡಿಸಲು ದೈವವೇ ಬರಬೇಕು. ಆದರೆ ಅನ್ಯಾಯ ಎಸಗಲು ಮಾನವ ಸಾಕು. ಇಲ್ಲಿ ದೈವ ಬರೀ ಒಳ್ಳೆಯತನ ತೋರುವುದಕ್ಕೆ ಸೀಮಿತ ಆಗಿಲ್ಲ. ತಾನು ಯಾವಾಗ ಕೆಟ್ಟವನಾಗಬೇಕು ಎನ್ನುವ ಅಂಶದಲ್ಲಿ ದೈವಕ್ಕೆ ಸ್ಪಷ್ಟತೆ ಇದೆ. ಮತ್ತು ಅದು ಆವಾಹಿಸಿಕೊಳ್ಳುವುದು ಅವಶ್ಯಕತೆ ಬಂದಾಗ ಕೆಟ್ಟವನಾಗಲು ತಯಾರಾಗಿರುವ ಆ ಚಿತ್ರದ ಹೀರೋನನ್ನು.


ಹಾಗೆಯೆ  'ಹೆಡ್ ಬುಷ್' ಚಿತ್ರದಲ್ಲಿ ಜಯರಾಜ್ ಒಬ್ಬ ಹೀರೋ ತರಹ ಕಂಡರೂ ಅವನು ರಾಜಕಾರಣಿಗಳ ಕೈಗೊಂಬೆ ಮಾತ್ರ. ಕೆಟ್ಟವರಿಗೆ ಬುದ್ಧಿ ಕಲಿಸಲು ಯಾವುದೇ ಕೆಡಕು ಮಾಡಲು ಹಿಂದೆ ಮುಂದೆ ನೋಡದ ಜಯರಾಜ್ ನೇ ಆಗಬೇಕು. ಅವನಿಗೆ ರೌಡಿಗಳಷ್ಟೇ ಅಲ್ಲ, ಪೊಲೀಸರು ಮತ್ತು ರಾಜಕಾರಣಿಗಳನ್ನು ಬೆದರಿಸುವ ಸ್ಥೈರ್ಯ ಇದೆ. ಹಾಗೆಯೆ ಬಡವರ ಜೊತೆಗೆ ನಿಲ್ಲುವ ಔದಾರ್ಯ ಕೂಡ ಇದೆ.


ಆದರೆ ನಮ್ಮಂತಹ ಜನರಿಗೆ ಅಷ್ಟು ಗುಂಡಿಗೆ ಇಲ್ಲ. ನಮಗೆ ಎಲ್ಲರಿಂದ ಒಳ್ಳೆಯವರು ಅನಿಸಿಕೊಳ್ಳಬೇಕು ಎನ್ನುವ ಇಚ್ಛೆ. ನಮ್ಮ ಮೇಲೆ ಅನ್ಯಾಯ ಆದಾಗ ನಾವು ಪ್ರತಿಭಟನೆ ಮಾಡುವುದಿಲ್ಲ. ದಬ್ಬಾಳಿಕೆಗಳನ್ನು ಸುಮ್ಮನೆ ಉಗುಳು ನುಂಗಿಕೊಂಡು ಸಹಿಸಿಕೊಂಡುಬಿಡುತ್ತವೆ. ನಮಗೆ ಅನ್ಯಾಯ ಆದಾಗ ನಮಗೆ ಕೆಟ್ಟವರಾಗಲು ಬರುತ್ತದೆ ಎಂದು ತೋರಿಸಿ ಕೊಡಲು ಆಗುವುದಿಲ್ಲ. ಮಚ್ಚು ಹಿಡಿದವರನ್ನು ನಾವು ನೋಡಿದಾಗ ರೋಮಾಂಚಿತರಾಗುತ್ತೇವೆಯೇ ಹೊರತು ನಮಗೆ ಸ್ವತಃ ಮಚ್ಚು ಹಿಡಿದುಕೊಳ್ಳುವ ಧೈರ್ಯ ಇಲ್ಲ. ನಮಗೆಲ್ಲ ಇರುವುದು ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ. ನಮ್ಮಂತವರ ರಕ್ಷಣೆಗೆ 'ಕಾಂತಾರ' ತರಹದ ದೈವಗಳೇ ಬರಬೇಕು. ಇಲ್ಲವೇ ಜಯರಾಜ್ ತರಹದ ಡಾನ್ ಗಳ ಸಹಾಯ ಕೋರಬೇಕು.


ಕಾಂತಾರ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಟಕ್ಕೆ ದೈವ ಹಿಂಸೆಗೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕೆ ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ ಇಲ್ಲ. ಆದರೆ ನಾವುಗಳು ಪಾಪ ಮಾಡಿದವರು ಕರ್ಮ ಅನುಭವಿಸುತ್ತಾರೆ ಎಂದುಕೊಂಡು ಸುಮ್ಮನಾಗುತ್ತೇವೆ. ಹಾಗೆಯೆ 'ಹೆಡ್ ಬುಷ್' ಚಿತ್ರದ ಜಯರಾಜ್ ಪಾಪ-ಕರ್ಮಗಳ ಲೆಖ್ಖ ಮಾಡುವುದಿಲ್ಲ. ಕೈಯಲ್ಲಿ ಮಚ್ಚು ಹಿಡಿದು ಎದಿರೇಟು ಕೊಡುತ್ತಾನೆ. ಅದು ಅವನಿಗೆ ಏಕೆ ಸಾಧ್ಯ  ಆಗುತ್ತದೆ ಎಂದರೆ ಅವನಿಗೆ ಕೂಡ ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ ಇಲ್ಲ. ಅವನು ಮಾಡುವುದು ಸರಿ-ತಪ್ಪು ಎನ್ನುವ ವಿಮರ್ಶೆ ಇಲ್ಲಿ ನಾನು ಮಾಡುತ್ತಿಲ್ಲ. ಆದರೆ ಅವನು ಒಳ್ಳೆಯತನದ ಸೋಗಿನಲ್ಲಿರುವ ಹೇಡಿ ಅಲ್ಲ ಎಂದಷ್ಟೇ ನಾನು ಹೇಳುತ್ತಿರುವುದು.


ಸಮಾಜದ ಹೆಚ್ಚಿನ ಜನ ಒಳ್ಳೆಯತನದ ಸಮಸ್ಯೆಯಿಂದ ನರಳುತ್ತಿರುವವರು. ಅವರಿಗೆ ಪ್ರತಿಭಟಿಸುವ ಆಸೆ ಇದೆ ಆದರೆ ಧೈರ್ಯ ಇಲ್ಲ. ಆ ಸಮಸ್ಯೆ ಇರದ ಹೀರೋಗಳಿರುವ ಚಿತ್ರಗಳನ್ನು ಅವರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಗೆಲ್ಲಿಸುತ್ತಾರೆ. ಆದರೆ ಮನೆಗೆ ಬಂದ ಮೇಲೆ ಮತ್ತೆ ಒಳ್ಳೆಯತನದ ಮುಸುಕು ಹೊತ್ತು ಮಲಗುತ್ತಾರೆ. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಮಚ್ಚು ಹಿಡಿಯಲೇಬೇಕು ಎಂದಿಲ್ಲ. ಅನ್ಯಾಯ ಮಾಡುವವರ ಹಾದಿಯನ್ನು ಅಸಹಕಾರದಿಂದ ಕಠಿಣಗೊಳಿಸಬಹುದು. ಆಗ ಅನ್ಯಾಯಗಳ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತವೆ. 


ಆದರೆ ನಮಗೇಕೆ ಬೇಕು ಹೋರಾಟದ ಉಸಾಬರಿ? ನಾವೆಲ್ಲ 'ಕಾಂತಾರ' ಮತ್ತು 'ಹೆಡ್ ಬುಷ್' ವೀಕ್ಷಿಸಿ ಆನಂದಿಸುವ ಒಳ್ಳೆಯವರು ಅಷ್ಟೇ. ನೀವೇನಂತೀರಿ?

ಮರೆಯಲಾಗದ ನೋವುಗಳಿಗೂ ಮದ್ದುಂಟು

ಕಾಲ ಎಷ್ಟೋ ನೋವುಗಳನ್ನು ಮರೆಸಿಬಿಡುತ್ತದೆ. ಚಿಕ್ಕಂದಿನಲ್ಲಿ ನಾವು ಆಟಿಕೆಗೆ ಜಗಳ ಮಾಡಿದ್ದು ಅವತ್ತಿಗೆ ಅದು ನೋವಿನ ಸಂಗತಿ ಆಗಿದ್ದರು, ಇಂದಿಗೆ ಅದು ನೆನಪಿಗೆ ಬಂದರೆ ನಗು ಬರುತ್ತದೆ. ಅದು ಕಾಲನ ಮಹಿಮೆ. ಇನ್ನು ಕೆಲ ವಿಷಯಗಳಲ್ಲಿ ಪೆಟ್ಟಿಗೆ ಬಿದ್ದದ್ದು, ಹಣಕಾಸಿನ ವಿಷಯಗಳಲ್ಲಿ ಮೋಸ ಹೋಗಿದ್ದು ಇತ್ಯಾದಿಗಳು ಕೆಲ ಕಾಲ ಕಳೆದ ನಂತರ ಅವು ಪಾಠ ಕಲಿಸಿದ ಸಂಗತಿಗಳಾಗಿ ನೆನಪಲ್ಲಿ ಉಳಿಯುತ್ತವೆಯೇ ಹೊರತು ಮತ್ತೆ ಮತ್ತೆ ತೀವ್ರ ನೋವು ತರುವ ವಿಷಯಗಳಾಗುವುದಿಲ್ಲ.

 

ಆದರೆ ಕಾಲ ಮರೆಸಲಾಗದಂತಹ ಕೆಲ ಸಂಗತಿಗಳಿವೆ. ಮೊದಲನೆಯದು, ಬೆಳೆದು ನಿಂತ ಮಗ/ಮಗಳು ಸಾವನ್ನಪ್ಪುವುದು. ಇಪ್ಪತ್ತು ವರುಷದ ಹಿಂದೆ ಆಕ್ಸಿಡೆಂಟ್ ನಲ್ಲಿ ತೀರಿ ಹೋದ ಮಗನನ್ನು ನೆನೆದ ತಕ್ಷಣ ಕಣ್ಣೀರು ಸುರಿಸುವ ಹೆಣ್ಣು ಮಗಳು ನಮ್ಮ ನೆರೆಯಲ್ಲಿದ್ದಾಳೆ. ಅವಳ ನೋವನ್ನು ಕಾಲ ಮರೆಸಿಲ್ಲ ಮತ್ತು ಎಷ್ಟು ಅತ್ತರೂ ಅವಳ ನೋವು ಕಡಿಮೆ ಆಗಿಲ್ಲ. ಎರಡನೆಯದು, ತುಂಬಾ ನಂಬಿಕೊಂಡ ಪ್ರೀತಿಯ ಸಂಗಾತಿ ಮೋಸ ಮಾಡಿ ದೂರಾಗುವುದು. ಆ ಅನುಭವ ಆದ ಜನರನ್ನು ಗಮನಿಸಿ ನೋಡಿ. ಅವರಿಗೆ ಆ ವಿಷಯ ನೆನಪಾದ ತಕ್ಷಣ ಮುಖ ಕಿವಿಚುತ್ತದೆ. ಅದನ್ನು ಮರೆಯಲು ಅವರು ಎಷ್ಟು ಕುಡಿದರೂ ಅದು ಮರೆಯಾಗುವುದಿಲ್ಲ.

 

ಈ ಎರಡು ನೋವುಗಳು ಏಕೆ ಜೀವನಪೂರ್ತಿ ಮನುಷ್ಯನನ್ನು ಕಾಡುತ್ತವೆ ಎಂದು ಹುಡುಕಿ ಹೊರಟರೆ ಅದಕ್ಕೆ ಜೀವ ವಿಕಾಸ ಶಾಸ್ತ್ರದಲ್ಲಿ (Evolutionary Biology) ಉತ್ತರ ದೊರೆಯುತ್ತದೆ. ಲಕ್ಷಾಂತರ ವರುಷ ವಿಕಾಸ ಹೊಂದಿದ ಮಾನವನಲ್ಲಿ ಪ್ರಕೃತಿ ಎರಡು ವಿಷಯಗಳನ್ನು ಅಳಿಸಲಾಗದಂತಹ ಸಾಂಕೇತಿಕ ಭಾಷೆಯಲ್ಲಿ ಬರೆದುಬಿಟ್ಟಿದೆ. ಅವು ಆ ಜೀವಿ ತಾನು ಉಳಿಯಲು ಏನು ಬೇಕೋ ಅದು ಮಾಡುವುದು ಮತ್ತು ತನ್ನ ವಂಶ ಮುಂದುವರೆಯಲು ಬೇಕಾದ ಏರ್ಪಾಡು ಮಾಡಿಕೊಳ್ಳುವುದು. ಇವೆರಡು ಪ್ರತಿಯೊಂದು ಪ್ರಾಣಿ, ಪಕ್ಷಿಯಲ್ಲಿ ಬಹು ಮುಖ್ಯವಾದ ಅಂಶಗಳು. ಇವೆರಡಕ್ಕೆ ಸಂಬಂಧಿಸಿದ ವಿಷಯಗಳು ಜೀವಿಗಳಿಗೆ ಅತಿ ಹೆಚ್ಚು ನೋವು ತರುತ್ತದೆ. ಉಳಿದ ನೋವುಗಳನ್ನು ಕಾಲ ಮರೆಸಿ ಹಾಕುತ್ತದೆ.

 

ಉದಾಹರಣೆಗೆ, ನಿಮಗೆ ಹೊಟ್ಟೆ ಹಸಿವಿನ ಸಂಕಟ ತಾಳಲಾಗುತ್ತಿಲ್ಲ. ಅದೇ ಸಮಯಕ್ಕೆ ನಿಮಗೆ ಆಗದವರು ನಿಮ್ಮನ್ನು ಅವಮಾನ ಪಡಿಸಲು ನೋಡುತ್ತಾರೆ. ಆಗ ನೀವು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೀರಿ? ಆಹಾರ ಮೊದಲು ಹುಡುಕಿಕೊಂಡು ಆಮೇಲೆ ಅವಮಾನಕ್ಕೆ ಪ್ರತಿಕಾರ ತೀರಿಸಬಹುದಲ್ಲವೇ? ಈ ಆದ್ಯತೆಗಳನ್ನು ಜೋಡಿಸಿದ್ದು ಪ್ರಕೃತಿಯು ನಮ್ಮಲ್ಲಿ ಅಳಿಸಲಾಗದಂತೆ ಮೂಡಿಸಿರುವ ಸಾಂಕೇತಿಕ ಭಾಷೆ. ಮೊದಲು ನಾವು ಉಳಿಯಬೇಕು ಆಮೇಲೆ ಸನ್ಮಾನ, ಸತ್ಕಾರ, ಪ್ರತಿಕಾರ ಎಲ್ಲ.

 

ಮನುಷ್ಯನನ್ನು ಜೀವನಪೂರ್ತಿ ಕಾಡುವ ಮಗನ ಸಾವು, ಸಂಗಾತಿಯ ಬೇರ್ಪಡಿಕೆ ವಿಷಯಗಳು ಮನುಷ್ಯನ ಅಳಿವು-ಉಳಿವಿಗೆ ಸಂಬಂಧಿಸಿದ್ದು. ಅವು ಹೃದಯಕ್ಕೆ ತುಂಬಾ ಹತ್ತಿರ ಮತ್ತು ಮನಸ್ಸಿನಾಳದಲ್ಲಿ ಪ್ರಕೃತಿ ಬರೆದು ಬಿಟ್ಟಿರುವ ಭಾಷೆ. ಅವಕ್ಕೆ ಕಾಲನಲ್ಲಿ ಮದ್ದಿಲ್ಲ. ಹಾಗಾಗಿ ಜೀವನದಲ್ಲಿ ಸೋತು ಹೋದ ಹತಾಶೆಯನ್ನು ಅವುಗಳು ಶಾಶ್ವತವಾಗಿ ಇರುವಂತೆ ಮಾಡುತ್ತವೆ. ಹಾಗಾದರೆ ಇದಕ್ಕೆ ಮದ್ದಿಲ್ಲವೇ? ಏಕಿಲ್ಲ?

 

ಸಾಧು-ಸಂತರನ್ನು ನೋಡಿ. ಅವರು ತಮ್ಮ ಕುಟುಂಬವನ್ನು ಹಿಂದೆ ಬಿಟ್ಟು ಬರುವುದಷ್ಟೇ ಅಲ್ಲ. ಅವರು ತಮ್ಮ ಪಾಲಕರು ಇಟ್ಟ ಹೆಸರನ್ನು ಕೂಡ ಬದಲಾಯಿಸಿರುತ್ತಾರೆ. ಅವರಿಗೆ ನೋವಿಲ್ಲ ಎಂದಲ್ಲ. ಆದರೆ ಅವರು ನೋವನ್ನು ಮೀರಿ ಬೆಳೆದಿರುತ್ತಾರೆ. ಅದು ಏಕೆ ಅವರಿಗೆ ಸಾಧ್ಯ ಆಗುತ್ತದೆ ಎಂದರೆ, ಅವರು ತಮ್ಮ ಸಂಬಂಧಗಳಲ್ಲಿ ಇದ್ದು ಇಲ್ಲದೆ ಹಾಗೆ ಇರುವ ಬೇರ್ಪಡಿಕೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗಾಗಿ ಅವರಿಗೆ ನೋವು-ನಲಿವಿನ ಸಂಗತಿಗಳು ಸಮಾನವಾಗಿ ಕಾಣುತ್ತವೆ. 


ನೀವು ನೋವು ಗೆಲ್ಲಲು ಸಾಧು-ಸಂತರೇ ಆಗಬೇಕಿಲ್ಲ. ಕುಟುಂಬದಲ್ಲಿ ಇದ್ದುಕೊಂಡು, ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಂಬಂಧಗಳಿಂದ ಒಂದು ಪ್ರತ್ಯೇಕತೆಯನ್ನು ಕಾಪಾಡಿಕೊಂಡಿದ್ದರೆ ಸಾಕು. ಆಗ ಎಂತಹ ನೋವೇ ಇರಲಿ, ಕಾಲ ವಾಸಿ ಮಾಡದೆ ಇರುವ ಬೇಸರದ ಸಂಗತಿಯಾಗಿರಲಿ, ಅದು ವಿಧಿಯ ಆಟ ಎನ್ನುವ ಅರಿವು ನಿಮಗೆ ಮೂಡುತ್ತದೆ. ನೋವು ಪೂರ್ತಿ ಮರೆಯಾಗುವುದಿಲ್ಲ. ಮನಸ್ಸಿನ ಮೂಲೆಯಲ್ಲಿ ಉಳಿದುಕೊಂಡೆ ಇರುತ್ತದೆ. ಆದರೆ ಅದು ಸದಾ ನಿಮ್ಮನ್ನು ಬಾಧಿಸುವುದಿಲ್ಲ. ಏಕೆಂದರೆ ನಿಮ್ಮ ಪಾಲಿಗೆ ಬಂದದ್ದು ನೀವು ಸ್ವೀಕರಿಸಿದ್ದೀರಿ ಎನ್ನುವ ಮನೋಭಾವ ಅಷ್ಟೇ ಉಳಿದಿರುತ್ತದೆ.

Friday, October 28, 2022

ಶಾಂತಾರಾಮ್: ಒಂದು ವಿಭಿನ್ನ ಕಾದಂಬರಿ

(Gregory David Roberts ಅವರು ಬರೆದ ‘Shantaram’ ಪುಸ್ತಕದ ಮೊದಲ ಪುಟಗಳ ಭಾವಾನುವಾದ. ಬಹಳ ದಿನದ ಮೇಲೆ ಒಂದು ಒಳ್ಳೆಯ ಕಾದಂಬರಿ ಓದಿದ ಅನುಭವ ಆದ್ದರಿಂದ, ಅದರ ಲೇಖಕರು ಬರೆದ ಪರಿಚಯ ಪುಟಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಅನುವಾದಿಸಿದ್ದೇನೆ.)

 

ಬಹುಕಾಲದ ಹಿಂದೆ ಮಾಟಗಾತಿಯೊಬ್ಬಳು ನನಗೆ ಹೇಳಿದ್ದಳು. ಎಲ್ಲಾ ಜನರು ಒಂದಲ್ಲ ಒಂದು  ವರ್ಗಕ್ಕೆ ಸೇರಿರುತ್ತಾರೆ. ಕೆಲವರು ರೈತರು. ಅವರು ಯಾವ ಊರಿಗೆ ಹೋದರು, ಗುಂಡಿ ತೆಗೆಯುವುದು, ಬೀಜ ಬಿತ್ತುವುದು, ಫಸಲು ಕಾಯುವುದು ಇಂತಹ ಕೆಲಸಗಳೇ ಅವರಿಗೆ ಇಷ್ಟವಾಗುವುದು. ಅದೇ ತರಹ ಕೆಲವರು ಕಟ್ಟಡ ನಿರ್ಮಾಣ ಮಾಡುವವರು, ಇನ್ನು ಕೆಲವರು ಸಂಗೀತಗಾರರು. ಹಾಗೆಯೆ ಕೆಲವರು ಕುಶಲಕರ್ಮಿಗಳು, ನಟರು, ಸಾಧು-ಸಂತರು, ಶಿಕ್ಷಕರು. ಹೀಗೆ ಅವರವರ ಕಾಯಕ ಅವರಿಗೆ ಇಷ್ಟ. ಸ್ವಲ್ಪ ಜನ ಮಾಟಗಾತಿಯರು, ನನ್ನ ತರಹ. ಕೆಲವರು ಕ್ಷತ್ರಿಯರು ನಿನ್ನ ತರಹ.

 

ಅವಳು ಹೇಳಿದ್ದು ನಾನು ಆಗ ಪೂರ್ತಿಯಾಗಿ ನಂಬಲಿಲ್ಲ ಹಾಗೆಯೆ ತೆಗೆದು ಹಾಕಲಿಲ್ಲ ಕೂಡ. ಆದರೆ ಅದು ಆತ್ಮದ ಕರೆಗಂಟೆ ಎಂದು ನನಗೆ ಸಮಯ ಕಳೆದಂತೆ ಅರ್ಥವಾಗತೊಡಗಿತು.

 

ಅನಿವಾರ್ಯವೋ ಅಥವಾ ವಿಮೋಚನೇ ಇಲ್ಲವೋ, ಕ್ಷತ್ರಿಯರಿಗೆ ಹೋರಾಟದ ಹಾದಿ ಬಿಟ್ಟು ಬೇರೆ ರುಚಿಸುವುದಿಲ್ಲ. ಹೋರಾಡುವುದನ್ನು ಅವರು ಚಿಕ್ಕಂದಿನಲ್ಲೇ ಕಲಿಯುತ್ತಾರೆ.  ಕರಾಟೆ, ಬಾಕ್ಸಿಂಗ್ ಇತ್ಯಾದಿ ಕ್ರೀಡೆಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಸಮರ ಕಲೆಗಳು ಅವರನ್ನು ಸೆಳೆಯುತ್ತವೆ. ಚಾಕು ಬಳಸುವದು, ಬಡಿಗೆ ಹಿಡಿದು ತಮ್ಮನ್ನು ರಕ್ಷಿಸಿಕೊಳ್ಳುವುದು ಅವರಿಗೆ ಸುಲಭದಲ್ಲಿ ದಕ್ಕುತ್ತವೆ. ಅವರು ಸೈನಿಕರೋ, ಪೊಲೀಸರೋ ಇಲ್ಲವೇ ದರೋಡೆಕೋರರೋ ಆಗುತ್ತಾರೆ ಅಂದಲ್ಲ. ಆದರೆ ಅವರು ದಬ್ಬಾಳಿಕೆಯನ್ನು, ಅನ್ಯಾಯವನ್ನು ಸಹಿಸಿಕೊಳ್ಳಲಾರರು. ಮತ್ತು ದುರ್ಬಲರ ರಕ್ಷಣೆಗೆ ಕಾಳಗಕ್ಕೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ.

 

ಹತ್ತುವರುಷಗಳ ಕಠಿಣ ಜೈಲು ವಾಸದಲ್ಲಿ ಹಲವಾರು ಕ್ಷತ್ರಿಯರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರಲ್ಲಿ ಹೋರಾಟ ಭಾವ ಎಷ್ಟು ದಟ್ಟವಾಗಿದೆಯೋ ಅಷ್ಟೇ ಸರಾಗವಾಗಿ ಅವರು ಕವಿತೆ ರಚಿಸಬಲ್ಲರು. ಮತ್ತು ಕೆಲವರು ಇತಿಹಾಸವನ್ನು ಅರೆದು ಕುಡಿದವರು. ಮತ್ತು ಕೆಲವರು ತತ್ವಜ್ಞಾನ ವಿಷಯದಲ್ಲಿ ಪ್ರಭುದ್ಧ ವಾದ ಮಂಡಿಸಬಲ್ಲವರು.

 

ಸಮವಸ್ತ್ರ ಧರಿಸಿದ ಸೈನಿಕರೆಲ್ಲ ಕ್ಷತ್ರಿಯರಲ್ಲ. ಹಾಗೆಯೆ ಸೂಟು ಬೂಟು ಧರಿಸಿದ್ದರು, ಕೆಲವರಲ್ಲಿ ಕ್ಷತ್ರಿಯರ ರಕ್ತ ಕುದಿಯುತ್ತಿರಬಹುದು. ಮತ್ತೆ ಬೀದಿ ಬದಿಯ ಒರಟರೆಲ್ಲ ಕ್ಷತ್ರಿಯರಲ್ಲ. ಏಕೆಂದರೆ  ಕ್ಷತ್ರಿಯರು ಒರಟರಲ್ಲ ಮತ್ತು ಒರಟರು ಕ್ಷತ್ರಿಯರಲ್ಲ.  

 

'ಶಾಂತಾರಾಮ್' ಪುಸ್ತಕದ ಮುಖ್ಯ ಪಾತ್ರ ಕೂಡ ಒಬ್ಬ ಕ್ಷತ್ರಿಯ. ಜೈಲಿನಿಂದ ತಪ್ಪಿಸಿಕೊಂಡು ತನ್ನ ಧೈರ್ಯ ಮತ್ತು ಬದುಕುವ ಆಸೆಯನ್ನು ಅವನು ನವೀಕರಣಗೊಳಿಸುತ್ತಾನೆ. ಆದರೆ ಕಾನೂನು ಬಾಹಿರ ದುಷ್ಕೃತ್ಯಗಳನ್ನು ಎಸಗಿದ್ದಕ್ಕೆ ಅವನಿಗೆ ನೋವಿದೆ. ಮತ್ತು ತನ್ನ ಘನತೆಯನ್ನು ಬಿಟ್ಟು ಕೊಡದ ಹೋರಾಟ ಅವನಿಗೆ ಅವನ ಜೀವನದ ಗಮ್ಯವನ್ನು ತಲುಪಲು ಸಹಾಯ ಮಾಡುತ್ತದೆ. ಸಮಾಧಾನದ ವಿಷಯ ಎಂದರೆ ಜೀವನದ ಆ ಪಯಣದಲ್ಲಿ ನಾವು ಒಬ್ಬಂಟಿಗರಲ್ಲ.

Tuesday, October 25, 2022

Book Review: Shantaram by Gregory David Roberts

A person convicted of armed robbery escapes from a jail in Australia. He is not a seasoned criminal but a first-time convict who wants to escape the jail term. He gets a fake passport and lands in Bombay. He is fascinated by the vividness the city offers. In no time he becomes part of it. He goes by the name in his fake passport “Lin”. He becomes a part of foreigners group living in Bombay. All of them have a criminal past in their respective home countries and they do not want to go back. They are all people with normal lives who accidentally got into crime and found Bombay as their hideout and a place to heal and thrive. ‘Leopold’ a restaurant in ‘Colaba’ area of Bombay is the place they meet regularly.

 

Lin has a personal tourist guide, Prabhakar, who helps Lin find a hotel and takes him around the town. Not just the regular tourist spots, he takes Lin to the dark side of Bombay too, like the slave market. They become close friends and Lin goes with Prabhakar to his native place, a village in Northern Maharashtra. Not only he enjoys living there, but he also gets an Indian name “Shantaram” chosen by the villagers for him.

 

After he returns to Bombay, he runs out of money and his visa is expired too. He goes on to live in a slum where Prabhakar lives where no one questions his visa status, and he does not have to pay any rent. One day, when the slum is caught on fire, Lin treats those affected with the first aid he has with him. Then on he becomes the doctor, the first person to go for medical assistance in the slum. The goodwill developed attracts the underworld don of Bombay, Khader Bhai (loosely based on the real character of Karim Lala). Lin gets medicine supplies and references to the hospitals and doctors with the help of Khader and he becomes a well-known person in the slum.

 

While trying to help his friend, Karla, with whom Lin is in love, he gets into a negative spiral. He gets jailed in Bombay and severely beaten up by police for four months. Khader helps him to get out. To repay the due, Lin becomes part of the illegal businesses Khader Bhai runs. Li becomes part of foreign currency exchange, passport forgery, and gold smuggling all of them operated by underworld gangs. He becomes confident of Khader Bhai and goes on to fight the war in Afghanistan. There Lin learns that he was part of a bigger scheme of Khader and that meeting him and Karla were no random events. In Afghanistan, Khader dies in the conflict. Lin returns to Bombay. He has a score to settle with a person who had sent him to jail. But he learns that that person is already destroyed mentally. Prabhakar dies in an accident. Love for Karla dies. But life goes on.

 

This is a 930 pages novel set in the Bombay of 1980s. It was on my book rack for years but as it became a TV serial now, my interest got rekindled. I put my hands on it and could not take it off. This book reads like a work of fiction but feels real. In fact, most of this book is real and is loosely based on the author’s real-life experience.

 

Conversations with Didier (a character in the novel) are deeply psychological and the discussions in Khader's council are philosophical. I have learned many things in this novel that I could not grasp in the books of Psychology and Philosophy. The character of Karla is brilliantly crafted. Many of the passages are worth re-reading. Surprisingly for a first-book writer, literary quality is very high. The author has not only lived an interesting life; he has mastered putting it into words also.

 

This book has a sequel (a novel running 870 pages). It has already arrived on my study table.



Saturday, October 1, 2022

ವಿಕ್ರಮನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕು?

'ವಿಕ್ರಮ ಮತ್ತು ಬೇತಾಳ' ಕಥೆಗಳನ್ನು ಮೊದಲು ನಾನು ಓದಿದ್ದು ಚಂದಮಾಮದಲ್ಲಿ. ಹೆಣವನ್ನು ಹೆಗಲಿಗೆ ಹಾಕಿಕೊಂಡು, ಒಂದು ಕೈಯಲ್ಲಿ ಕತ್ತಿ ಹಿರಿದು ಸ್ಮಶಾನದಲ್ಲಿ ಸಾಗಿ ಹೋಗುವ ರಾಜ ವಿಕ್ರಮಾದಿತ್ಯನ ಚಿತ್ರ ಭೀತಿ ಹುಟ್ಟಿಸುತಿತ್ತು. ಹಾಗೆಯೆ ಅವನ ಧೈರ್ಯ, ಸಾಹಸಗಳು ಬೆರಗು ಮೂಡಿಸುತ್ತಿತ್ತು. ಕ್ರಮೇಣ ಗೊತ್ತಾಯಿತು. ಬೇತಾಳ ಹೇಳುತ್ತಿದ್ದ ಕಥೆಗಳು ದೆವ್ವಗಳ ಕಥೆಗಳಲ್ಲ. ಬದಲಿಗೆ ರಾಜನ ಜಾಣ್ಮೆ, ವಿವೇಕ ಪರೀಕ್ಷೆ ಮಾಡುವ ಮತ್ತು ನೈತಿಕ ಸಂಧಿಗ್ದತೆ ಬಂದಾಗ ಸರಿ-ತಪ್ಪುಗಳನ್ನು ಅಳೆದು ನೋಡಿ ನಿರ್ಧಾರಕ್ಕೆ ಬರುವ ಕಥೆಗಳು ಆಗಿದ್ದವು.


ಅವು ನಿಜ ಕಥೆಗಳೋ ಅಥವಾ ದಂತ ಕಥೆಗಳೋ ಅನ್ನುವುದಕ್ಕಿಂತ ಅವುಗಳು ಕಥೆ ಕೇಳುವವರಲ್ಲಿ ಹುಟ್ಟಿಸುವ ಪ್ರಜ್ಞೆಯೇ ಮುಖ್ಯ. ಅದೇ ತರಹದ ಉದ್ದೇಶವನ್ನು ಪಂಚತಂತ್ರದ ಕಥೆಗಳು ಕೂಡ ಹೊಂದಿವೆ. ಸಮಸೆಗಳನ್ನು ಉಪಾಯದಿಂದ ಪರಿಹರಿಸಿಕೊಳ್ಳುವ ಅಕ್ಬರ್-ಬೀರಬಲ್, ತೆನಾಲಿ ರಾಮಕೃಷ್ಣರ ಕಥೆಗಳು ಕೂಡ ನಮ್ಮಲ್ಲಿವೆ.


ಉಜ್ಜಯಿನಿಯ ರಾಜ ವಿಕ್ರಮಾದಿತ್ಯ ನ್ಯಾಯ ನೀತಿಗೆ ಪ್ರಸಿದ್ಧನಾದವನು. ಅವನಿಗೆ ಸವಾಲೊಡ್ಡುವ ಕಥೆಗಳನ್ನು ಹೇಳುವ ಬೇತಾಳ. ಉತ್ತರ ಗೊತ್ತಿದ್ದೂ ಹೇಳದೆ ಹೋದರೆ 'ತಲೆ ಸಿಡಿದು ನೂರು ಚೂರಾಗುವುದು' ಎನ್ನುವ ಅದರ ಬೆದರಿಕೆ ಬೇರೆ. ಮೌನ ಮುರಿದರೆ ಮತ್ತೆ ಬೇತಾಳವನ್ನು ಹೊತ್ತು ಕಥೆ ಕೇಳುವ ಪರಿಸ್ಥಿತಿ ರಾಜನಿಗೆ. ಆದರೂ ಅವನು ಮೌನ ಮುರಿಯುತ್ತಾನೆ. ತನ್ನ ಸರಿ-ತಪ್ಪಿನ ತೀರ್ಪು ನೀಡುತ್ತಾನೆ. ಮತ್ತೆ ಹೊಸ ಕಥೆ ಹುಟ್ಟುತ್ತದೆ. ಆದರೆ ರಾಜನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕಿತ್ತು? ಬೇರೆ ಯಾರೂ ಮಾನವರು ಆ ಕಥೆಗಳನ್ನು ಹೇಳಲು ಸಾಧ್ಯ ಆಗುತ್ತಿರಲಿಲ್ಲವೇ? ಬೇತಾಳ ಹೇಳಿದ ಕಥೆಗಳನ್ನು ಗಮನಿಸಿ ನೋಡಿದರೆ ಸಂದೇಹವೇ ಬೇಡ. ಕಥೆಗಳಲ್ಲಿ ಬರುವ ಸನ್ನಿವೇಶಗಳು, ಸರಿ-ತಪ್ಪಿನ ಸವಾಲುಗಳು ಜೀವನವನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಹುಟ್ಟುವಂತಹವು. ಸಾಮಾನ್ಯ ಮನುಷ್ಯ ಯಾವುದೊ ಆಸೆಯ ಹಿಂದೆ ಬಿದ್ದಿರುತ್ತಾನೆ ಮತ್ತು ಸಮಸ್ಯೆ ಬಂದಾಗ ಸ್ವಾರ್ಥಿಯಾಗಿ ನಡೆದುಕೊಳ್ಳುತ್ತಾನೆ. ಅವನಿಗೆ ಸರಿ-ತಪ್ಪಿನ ವಿವೇಚನೆಗಿಂತ ತನ್ನ ಬೆಳವಣಿಗೆಯೇ ಮುಖ್ಯ. ಸಾಮಾನ್ಯ ಮನುಷ್ಯ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ ಕಥೆಗಳನ್ನು ಬೇತಾಳ ಹೇಳುವುದೇ ಸಮಂಜಸ ಅಲ್ಲವೇ? ಆದರೆ ರಾಜ ವಿವೇಕ ಎತ್ತಿ ಹಿಡಿಯುವವನಾಗಿದ್ದ. ಬೇತಾಳ ಕೇಳುವ ಪ್ರಶ್ನೆಗೆ ಸಮಂಜಸ ಉತ್ತರ ನೀಡುತ್ತಿದ್ದ. ಹೀಗಾಗಿ ಆ ಕಥೆಗಳನ್ನು ಕೇಳಿದವರಲ್ಲಿ ನೈತಿಕ ಪ್ರಜ್ಞೆ ಜಾಗೃತ ಆಗುತ್ತಿತ್ತು. ಇಷ್ಟಕ್ಕೂ ಪ್ರಶ್ನೆ ಕೇಳಲು ಬೇತಾಳನೇ ಆಗಬೇಕಿಲ್ಲ. ನಮ್ಮ ಅಂತಃಪ್ರಜ್ಞೆಯೇ ಸಾಕು. ಮತ್ತು ಕಥೆ ಕೇಳಲು ರಾಜನೇ ಆಗಬೇಕಿಲ್ಲ. ನಮ್ಮಂತ ಸಾಮಾನ್ಯ ಜನರು ದೈನಂದಿನ ಕಾರ್ಯಗಳಲ್ಲಿ ತೆಗೆದುಕೊಳ್ಳುವ ಸರಿ-ತಪ್ಪಿನ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಂಡರೆ ಸಾಕು.


ಇಂದಿಗೆ ನಮ್ಮ ಎಷ್ಟು ಮಕ್ಕಳಿಗೆ ವಿಕ್ರಮ ಮತ್ತು ಬೇತಾಳನ ಕಥೆಗಳು ಗೊತ್ತಿವೆ? ಅವರು 'ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್' ಎಂದು ಹಾಡುತ್ತಾರೆ. ಈ ವಿಷಯ ಪ್ರಸ್ತಾಪಿಸಿದರೆ ನನ್ನ ಸ್ನೇಹಿತರು ಇಂಗ್ಲಿಷ್ ಮತ್ತು ತಂತ್ರಜ್ಞಾನ ಹೊಟ್ಟೆ ತುಂಬಿಸುತ್ತದೆ. ಆದರೆ ನೈತಿಕತೆಯಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಹಾಕುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆ ಅವಶ್ಯಕ ಮತ್ತು ಇಂಗ್ಲಿಷ್ ಅದಕ್ಕೆ ಅನುಕೂಲಕರ. ಆದರೆ ನೋಡಿ ನೈತಿಕತೆ ಇರದ ತಂತ್ರಜ್ಞಾನ ಒಡ್ಡುವ ಅಪಾಯಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ತಂತ್ರಜ್ಞಾನ ಪರಮಾಣು ಬಾಂಬ್ ಗಳನ್ನೂ ಕೂಡ ಸೃಷ್ಟಿಸುತ್ತದೆ. ಮೊದಲಿಗೆ ಅದರ ಉಪಯೋಗ ಶತ್ರುಗಳ ಮೇಲೆ. ಅವರು ನಾಶವಾದ ನಂತರ ತಮ್ಮ-ತಮ್ಮೊಳಗೆ ಜಗಳ ಹುಟ್ಟಿದರೆ?


ಮುಂದೊಂದು ದಿನ ಮಾನವ ಜಗತ್ತು ನಾಶವಾದರೆ, ಅದು ಕೇವಲ ತಂತ್ರಜ್ಞಾನದ ಬೆಳವಣಿಗೆಯಿಂದ ಅಲ್ಲ. ಅದು ನೈತಿಕತೆ ಮತ್ತು ಸರಿ-ತಪ್ಪಿನ ವಿವೇಚನೆ ಮರೆತದ್ದಕ್ಕಾಗಿ. ಮತ್ತು ಚಿಕ್ಕಂದಿನಲ್ಲಿ ವಿಕ್ರಮ ಮತ್ತು ಬೇತಾಳ ತರಹದ ಕಥೆಗಳನ್ನು ಕೇಳದಿದ್ದಕ್ಕಾಗಿ. ಎಲ್ಲ ನಾಶವಾದ ಮೇಲೆ ಕಥೆ ಹೇಳುವ ಬೇತಾಳಗಳು ಸಾಕಷ್ಟು ಹುಟ್ಟುತ್ತವೆ. ಆದರೆ ವಿವೇಚನೆಯಿಂದ ಸರಿ-ತಪ್ಪು ನಿರ್ಧಾರ ಮಾಡುವ ವಿಕ್ರಮಾದಿತ್ಯರು ಇರುವುದಿಲ್ಲ.



Monday, September 5, 2022

ಅಧಿಕಾರ ಹೋದ ಮೇಲೆ ಯಾವ ರಾಜ, ಎಲ್ಲಿಯ ಅಹಂಕಾರ

( "Tears of the Begums" ಪುಸ್ತಕದ ಒಂದು ಅಧ್ಯಾಯದ ಭಾವಾನುವಾದ)


ಮುನ್ನೂರು ವರುಷಗಳ ಕಾಲ ಭಾರತವನ್ನು ಆಳಿ ಮೆರೆದ ಮೊಗಲ್ ವಂಶಂಸ್ಥರ ಕೊನೆಯೂ ಕೂಡ ಅಷ್ಟೇ ಭೀಕರವಾಗಿತ್ತು. ೧೮೫೭ ರ ಸಿಪಾಯಿ ದಂಗೆಯ ನಂತರ ಬ್ರಿಟಿಷರ ಎದಿರೇಟಿಗೆ ಮೊಗಲ್ ಸಾಮ್ರಾಜ್ಯ ಸಂಪೂರ್ಣ ಅವನತಿ ಹೊಂದಿತು. ದೆಹಲಿಯ ಕೆಂಪು ಕೋಟೆಯಲ್ಲಿದ್ದ ರಾಜ ವಂಶಸ್ಥರ ಮನೆಗಳು ನಾಶಗೊಂಡವು. ಅರಮನೆ, ಪಲ್ಲಕ್ಕಿಗಳಿಲ್ಲದೆ ಊಟ ಅರಸಿ ಬೀದಿಗೆ ಬಂದ ಅವರುಗಳು ಪ್ರತಿಕೂಲ ವಾತಾವರಣ ಎದುರಿಸುವಲ್ಲಿ ಸೋತು ಹೋದರು. ಹೊಸ ಶತ್ರು ತಂದೊಡ್ಡಿದ ಕಷ್ಟಗಳನ್ನು ತಾಳಲಾರದೆ ಕಣ್ಮರೆಯಾದ ಇಪ್ಪತ್ತೊಂಬತ್ತು ಜನ ರಾಜ ಕುಟುಂಬದ ಸದಸ್ಯರ ಕಥೆಗಳು ಈ ಪುಸ್ತಕದಲ್ಲಿವೆ. ಅದರಲ್ಲಿ ಮುಖ್ಯವಾದದ್ದು ಮೊಗಲ್ ವಂಶದ ಕೊನೆಯ ರಾಜ ಬಹದ್ದೂರ್ ಶಾಹ್ ನದು.


ಒಂದು ವೇಳೆ ಬಹದ್ದೂರ್ ಶಾಹ್ ಸಿಪಾಯಿ ದಂಗೆಯಲ್ಲಿ ಶಾಮೀಲಾಗದಿದ್ದರೆ, ಅವನ ಜೀವನ ನೆಮ್ಮದಿಯಿಂದ ಮತ್ತು ವೈಭವದಿಂದ ಕೂಡಿರುತ್ತಿತ್ತು. ಆದರೆ ದಂಗೆ ಎದ್ದವರು ಹೆಣೆದ ಬಲೆಯಲ್ಲಿ ಅವನು ಸಿಕ್ಕಿಕೊಂಡು ಕೊನೆಯ ದಿನಗಳಲ್ಲಿ ಅವನು ದುಸ್ಥಿತಿಗೆ ಬಂದುಬಿಟ್ಟ.


ಕೊನೆಯ ಬಾರಿಗೆ ದೆಹಲಿ ಕೋಟೆಯಿಂದ ಹೊರ ನಡೆದಾಗ, ಅವನು ಮೊದಲಿಗೆ ಬಂದದ್ದು ಮೆಹಬೂಬ್-ಈ-ಇಲಾಹಿ ದರಗಾಕ್ಕೆ. ಅವನನ್ನು ಒಂದು ಖುರ್ಚಿಯಲ್ಲಿ ಹೊತ್ತು ತಂದ ಸೇವಕರನ್ನು ಬಿಟ್ಟರೆ ಅವನ ಜೊತೆಗೆ ಬೇರೆ ಯಾರು ಇರಲಿಲ್ಲ. ಅವನ ಮುಖದ ತುಂಬಾ ಚಿಂತೆ ಹೊತ್ತ ಗೆರೆಗಳು. ಹಾಗೆಯೆ ಅವನ ಬಿಳಿ ಗಡ್ಡದಲ್ಲಿ ಮಣ್ಣಿನ ಧೂಳು. ದರಗಾದಲ್ಲಿ ಅವನ ಕ್ಷೇಮ ವಿಚಾರಿಸಿದವರಲ್ಲಿ ಅವನು ಹೇಳಿದ:


"ದಂಗೆ ಎದ್ದವರನ್ನು ಬೆಂಬಲಿಸುವುದರಿಂದ ತಮಗೆ ಕೆಟ್ಟದೇ ಆಗುತ್ತದೆ ಎಂದು ತಿಳಿದಿತ್ತು. ಆದರೆ ಅದು ವಿಧಿ ಲಿಖಿತ ಆಗಿತ್ತೋ ಏನೋ? ಅವರು ಓಡಿ ಹೋದರು. ನಾನು ಭಿಕಾರಿಯಾದೆ. ತಿಮೂರನ ವಂಶಸ್ಥನಾದ ನನಗೆ ಹೋರಾಡುವುದು ರಕ್ತದಲ್ಲೇ ಬಂದಿದೆ. ನನ್ನ ಪೂರ್ವಜರು ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಆಶಾವಾದಿ ಆಗಿದ್ದರು. ಆದರೆ ನನ್ನ ಕೊನೆ ನನಗೆ ಕಾಣುತ್ತಿದೆ. ತಿಮೂರನ ವಂಶದ ಕೊನೆಯ ರಾಜ ನಾನೇ ಎನ್ನುವುದರಲ್ಲಿ ನನಗೆ ಯಾವುದೇ ಸಂಶಯ ಉಳಿದಿಲ್ಲ. ಆ ವಂಶದ ಬೆಳಕು ಇನ್ನು ಕೆಲವು ಘಂಟೆಗಳಲ್ಲಿ ಆರಿ ಹೋಗಲಿದೆ. ಅಂದ ಮೇಲೆ ಮತ್ತೆ ರಕ್ತಪಾತ ಮಾಡಿ ಏನು ಪ್ರಯೋಜನ? ಅದಕ್ಕೆ ನಾನು ಕೋಟೆ ಬಿಟ್ಟು ಬಂದದ್ದು. 


ಈ ದೇಶ ಭಗವಂತನಿಗೆ ಸೇರಿದ್ದು. ಅವನು ಇಚ್ಛಿಸಿದವರು ಇಲ್ಲಿ ಅಧಿಕಾರ ನಡೆಸುತ್ತಾರೆ. ನನ್ನ ವಂಶಸ್ಥರು ಹಿಂದುಸ್ಥಾನವನ್ನು ನೂರಾರು ವರುಷಗಳ ಕಾಲ ತೋಳ್ಬಲದಿಂದ ವೈರಿಗಳನ್ನು ಹೆದರಿಸಿ ರಾಜ್ಯಭಾರ ಮಾಡಿದರು. ಈಗ ಬೇರೆಯವರಿಗೆ ಅಧಿಕಾರ ನಡೆಸಲು ಅವಕಾಶ. ನಾವು ಆಳಿಸಿಕೊಳ್ಳುವವರಾಗುತ್ತೀವಿ. ಅವರು ಆಳುವವರಾಗುತ್ತಾರೆ. ನಮ್ಮ ಮೇಲೆ ಯಾರೂ ಅನುಕಂಪ ತೋರಿಸುವ ಅಗತ್ಯ ಇಲ್ಲ. ನಾವು ಬೇರೆಯವರ ವಂಶ ಕೊನೆಗೊಳಿಸಿಯೇ  ಸಿಂಹಾಸನ ಏರಿದ್ದು.


ಇಂದಿಗೆ ನಾವುಗಳು ಸಾವಿನ ತುದಿಯಲ್ಲಿ ನಿಂತಿದ್ದೇವೆ. ಕಳೆದ ಮೂರು ಹೊತ್ತಿನ ಊಟ ನಮಗೆ ಸಿಕ್ಕಿಯೇ ಇಲ್ಲ. ನಿಮ್ಮ ಮನೆಯಲ್ಲಿ ಏನಾದರು ತಿನ್ನಲಿಕ್ಕೆ ಇದ್ದರೆ ತಂದು ಕೊಡಿ"


ತನ್ನ ಮೆಲ್ಲನೆಯ ಧ್ವನಿಯ ಮಾತು ಮುಗಿಸಿದ ಕೊನೆಯ ಮೊಘಲ್ ಚಕ್ರವರ್ತಿ. ಅಲ್ಲಿಂದ ಅವನು ಹುಮಾಯುನ್ ನ ಸಮಾಧಿಗೆ ತೆರಳಿದ. ಅಲ್ಲಿ ಅವನನ್ನು ಬಂಧಿಸಲಾಯಿತು. ಬಂಧನದಲ್ಲಿ ತನ್ನ ಕೊನೆಯ ಉಸಿರು ಹೋಗುವವರೆಗೆ ಆಧ್ಯಾತ್ಮಿಕ ಸಾಧನೆಯ ಕಡೆಗೆ ತನ್ನ ಮನಸ್ಸು ಹೊರಳಿಸಿದ್ದ ಬಹದ್ದೂರ್ ಶಾಹ್ ಜಫರ್.


ಈ ನಿಜ ಕಥೆ ಎಲ್ಲಾ ಮಾನವರಿಗೂ ಎಚ್ಚರಿಕೆಯ ಘಂಟೆ. ಇದಾದ ಮೇಲೆಯೂ ಅಹಂಕಾರ ಕಡಿಮೆ ಮಾಡಿಕೊಳ್ಳದಿದ್ದರೆ ಅವರಿಗೆ ಜೀವನವೇ ಪಾಠ ಕಲಿಸುತ್ತದೆ.



Saturday, September 3, 2022

ಮನದಾಸೆಗಳನ್ನು ಗೆಲ್ಲದೇ ಮಠ ಕಟ್ಟುವವರು

ಕನ್ನಡ ನಾಡಿನಲ್ಲಿ ಮಠ ಕಟ್ಟಿದ ಸಂತರು ಅನೇಕ. ಸಿದ್ಧಾರೂಢರಿಂದ, ಶಿವಕುಮಾರ ಸ್ವಾಮಿಗಳವರೆಗೆ. ಅವರು ಕಟ್ಟಿದ ಮಠಗಳಿಂದ ಸಮಾಜಕ್ಕೆ ಆದ ಪ್ರಯೋಜನ ಅಪಾರ. ಮಠ ಬಿಟ್ಟು ಅವರಿಗೆ ಪ್ರತ್ಯೇಕ ಜೀವನ ಎನ್ನುವುದು ಇರಲಿಕ್ಕಿರಲಿಲ್ಲ. ಅಷ್ಟೇ ಪ್ರಮುಖವಾಗಿದ್ದದ್ದು ಚಿತ್ರದುರ್ಗದ ಬೃಹನ್ಮಠ. ಆದರೆ ಅದರ ಜವಾಬ್ದಾರಿ ಹೊತ್ತು ಹೆಸರು ಗಳಿಸಿದ್ದ ಮಠಾಧೀಶರು ತಂದುಕೊಂಡ ಅಪವಾದ ಜನಸಾಮಾನ್ಯರಿಗೆ ಮಠಗಳ ಮೇಲಿನ ನಂಬಿಕೆ ಕುಸಿಯುವಂತೆ ಮಾಡುತ್ತದೆ.


"Every saint has a past and every sinner has a future". ಎಲ್ಲ ಸಂತರಿಗೂ ಗತ ಕಾಲ ಇರುತ್ತದೆ. ಅದನ್ನು ದಾಟಿ ಬಂದ ಮೇಲೆ ಅವರು ಸಂತರಾಗುವುದು. ಆದರೆ ಅವರು ವರ್ತಮಾನದಲ್ಲೂ ಕೂಡ ಮನದಾಸೆಗಳಿಗೆ ಕಟ್ಟು ಬಿದ್ದರೆ, ಅವರಲ್ಲಿ ಲೈಂಗಿಕ ದಾಹ ಇಂಗಿರದಿದ್ದರೆ, ಅವರು ನಿಜವಾದ ಸಂತರಲ್ಲ. ಅವರು ಸಾಮಾನ್ಯ ಮನುಷ್ಯರಂತೆ ಸಂಸಾರಿಯಾಗುವುದು ವಾಸಿ. ಹೊರ ಜಗತ್ತಿಗೆ ಧರ್ಮ ಸಾರುತ್ತ, ಅಂತರಂಗದಲ್ಲಿ ಅಧರ್ಮದ ಕೆಲಸಗಳಿಗೆ ಇಳಿದರೆ ಅದು ಇತರೆ ಮಠಾಧೀಶರನ್ನು ಕೂಡ ಅನುಮಾನದಿಂದ ನೋಡುವಂತೆ ಮಾಡುತ್ತದೆ.


ಮಠಾಧೀಶರು ಕೂಡ ಕಾನೂನಿಗಿಂತ ದೊಡ್ದವರೇನಲ್ಲ ಎನ್ನುವುದು ಇವತ್ತಿನ ಬೆಳವಣಿಗೆಗಳು ಸಾಬೀತು ಪಡಿಸುತ್ತಿವೆ. ಆದರೆ ಮಠದ ಒಳಗಡೆ ಅವರೇ ಸರ್ವಾಧಿಕಾರಿಗಳು ಅಲ್ಲವೇ? ಅದನ್ನು ಅವರು ದುರುಪಯೋಗ ಮಾಡಿಕೊಂಡರೆ ಯಾರಿಗೆ ದೂರುವುದು? ಹಾಗಾಗಿ ಎಷ್ಟೋ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿ ಹೋಗಿಬಿಡಬಹುದು. ಮಠದ ಶಾಲೆಗಳಲ್ಲಿ ಓದುತ್ತಿರುವ ಎಷ್ಟು ವಿದ್ಯಾರ್ಥಿಗಳಿಗೆ ಮಠಾಧೀಶರನ್ನು ವಿರೋಧಿಸುವ ಧೈರ್ಯ ಇರುತ್ತದೆ? ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಅವರನ್ನು ಪ್ರತಿಭಟಿಸದಂತೆ ತಡೆಯಬಹುದು. ಅಲ್ಲದೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಠ ನಡೆಸುವವರು ಮಾಡುತ್ತಾರಲ್ಲ. ಅವೆಲ್ಲ ಸೇರಿ, ಸಮಸ್ಯೆ ದೊಡ್ಡ ಹಂತ ತಲುಪುವವರೆಗೆ ಸಾರ್ವಜನಿಕರಿಗೆ ಅದರ ಸುಳಿವು ಸಿಗದಂತೆ ಆಗಿಬಿಡುತ್ತದೆ. ಕೊನೆಗೆ ವಿಷಯ ಹೊರ ಬಿದ್ದಾಗ, ಎಲ್ಲ ಟಿವಿ ಚಾನೆಲ್ ಗಳು ಮುಗಿ ಬಿದ್ದು ಅದನ್ನೇ ತೋರಿಸುತ್ತಾರೆ. ಆಗ ತಮ್ಮ ಮಕ್ಕಳನ್ನು ಮಠದ ಶಾಲೆಗಳಲ್ಲಿ ಬಿಟ್ಟ ಪೋಷಕರಿಗೆ ಆತಂಕವಾಗುವುದು ಸಹಜ.


ಧರ್ಮ ಎತ್ತಿ ಹಿಡಿಯಬೇಕಾದವರು ಅಧರ್ಮದ ಹಾದಿ ತುಳಿದಾಗ ಅದರಿಂದ ಆಗುವ ಹಾನಿ ಅಪಾರ. ದೇವಸ್ಥಾನಕ್ಕೆ ಹೋದಾಗ ಪ್ರಸಾದವನ್ನು ಕಣ್ಣು ಮುಚ್ಚಿಕೊಂಡು ತಿನ್ನುವ ನಾವುಗಳು ಅದು ವಿಷ ಆಗಿರಬಹುದೇ ಎನ್ನುವ ವಿಚಾರ ಕ್ಷಣ ಕಾಲಕ್ಕೂ ಮಾಡುವುದಿಲ್ಲ. ಹಾಗೆಯೆ ಮಠದ ಶಾಲೆಗಳಿಗೆ ಈ ಘಟನೆಯಿಂದ ಆಗುವ ಆಘಾತ ಬಹು ಕಾಲದವರೆಗೆ ಕಣ್ಮರೆಯಾಗುವುದಿಲ್ಲ.

Wednesday, August 31, 2022

Happy Birthday Warren!

I like Warren Buffett for many reasons. But his being wealthy is not one of them. 


The first reason I like him is for the wisdom he has. It is not easy and not possible for everyone to come out of natural human biases and acquire the wisdom and temperament he possesses.


The second one is for living so long. He has taken care of his health. Had he not lived this long, wealth creation through compounding would not have worked for him. Had he died in his 60s, he would neither be on the list of the world's richest nor he would be this famous.


The third one is for sharing his knowledge. Remember, he never gives any stock tips but he teaches you how to fish. He has created a cult of investors who follow his style of investing. His annual general meetings are a treasure trove closely followed by a huge fan following. You not only learn investing from him but many of life's lessons. And the only other guy who shares the stage with him, Charlie Munger is another person who would teach you many of life's lessons with his short sentences but they will be loaded one's. 


The fourth reason for liking Warren is for sharing his wealth. Most of his wealth goes back to underprivileged parts of society. And the wealth that would get redistributed would do wonders where it is deployed.


The fifth one is for being a motivation to many. He goes out to colleges to talk to young men. He offers lessons on how he has made it. Watching his videos has helped me immensely to improve my temperament and turn from a trader to an investor.


I wish Warren Buffett all the best on his birthday and also thank him for shaping the minds of many investors including me.



 



Sunday, August 28, 2022

ಪಳಗಲಾರದ ಕುದುರೆಗೆ ಯಾರೂ ಬೆಲೆ ಕಟ್ಟುವುದಿಲ್ಲ

'ಗೆದ್ದರೆ ಸ್ವಾತಂತ್ರ್ಯ, ಸತ್ತರೆ ಸ್ವರ್ಗ' ಇದು ಕಿತ್ತೂರು ರಾಣಿ ಚೆನ್ನಮ್ಮ ಆಡಿದ ಮಾತು. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬದುಕಿದ್ದು ಹಾಗೇಯೇ. ಭಗತ್ ಸಿಂಗ್ ಆಗಲಿ, ಆಜಾದ್ ಆಗಲಿ, ಸುಭಾಷ್ ಚಂದ್ರ ಭೋಸ್ ಆಗಲಿ ಅವರೆಲ್ಲ ಬ್ರಿಟಿಷರಿಗೆ ಪಳಗಲಿಲ್ಲ. ಅವರು ಬ್ರಿಟಿಷರ ಆಸೆ, ಆಮಿಷಗಳಿಗೆ ಇಲ್ಲವೇ ಬೆದರಿಕೆಗಳಿಗೆ ಮಣಿಯಲಿಲ್ಲ. ಗಾಂಧಿಗೂ ಬ್ರಿಟಿಷರ ಕಾನೂನನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ಇತ್ತು. ಸ್ವಾತಂತ್ರ್ಯ ಅಲ್ಲದೆ ಕಡಿಮೆ ಯಾವುದಕ್ಕೂ ರಾಜಿ ಆಗಲು ಅವರು ಸಿದ್ಧರಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬ್ರಿಟಿಷರಿಗೆ ಪಳಗಲಾರದ ಕುದುರೆ ಆಗಿದ್ದರು. ಆದರೆ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಅಂತ್ಯ, ಅವರ ಸಾವು ಅಸಹಜ ಆಗಿತ್ತು. ಅದು ಸ್ವಾತಂತ್ರ್ಯ ಬಯಸಿದ್ದಕ್ಕೆ ಅವರು ತೆತ್ತ ಬೆಲೆ. ಅದೇ ಕಾರಣಕ್ಕೆ ಹೆಚ್ಚಿನ ಜನ ಸ್ವಾತಂತ್ರ್ಯ ಬಯಸದೆ ಹೇಗೋ ಒಂದು ಬದುಕಿರುವುದು ಬಯಸುತ್ತಾರೆ.


ಸ್ವಾತಂತ್ರ್ಯ ಎನ್ನುವ ಅಳಿವು ಉಳಿವಿನ ಹೋರಾಟ ಮನುಷ್ಯ ಭೂಮಿಗೆ ಬಂದಾಗಿನಿಂದ ಅವನ ಜೊತೆಯಾಗಿದೆ. ಆದಿವಾಸಿಯಾಗಿ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಮೊದಲಿಗೆ ಪ್ರಾಣಿಗಳೊಡನೆ ಹೋರಾಡುತ್ತಿದ್ದ. ನಂತರ ನಿಯಾಂಡರ್ ಥಲ್ ಎನ್ನುವ ಇನ್ನೊಂದು ಬಲಿಷ್ಠ ಮನುಷ್ಯ ವರ್ಗದ ಜೊತೆ ಜಾಣತನದಿಂದ ಹೋರಾಡಿ ಬದುಕುಳಿದ ಹೋಮೋ ಸೇಪಿಯನ್ಸ್ ಗಳು ನಾವು. ನಂತರ ನಾಗರೀಕತೆ ಬೆಳೆದರೂ, ದಬ್ಬಾಳಿಕೆ-ಸ್ವಾತಂತ್ರ್ಯ ಹೋರಾಟದ ತಿಕ್ಕಾಟ ನಿಲ್ಲಲಿಲ್ಲ. ಭಾರತದ ಮೇಲೆ ಎಷ್ಟು ಜನ ಧಾಳಿ ನಡೆಸಿ ತಮ್ಮ ದಬ್ಬಾಳಿಕೆ ಮೆರೆದಿಲ್ಲ? ಕೊನೆಗೆ ಬಂದವರು ಬ್ರಿಟಿಷರು. ಅವರು ಹೋದ ಮೇಲೆ ನಮ್ಮ ನಮ್ಮ ಜನಗಳ ನಡುವೆಯೇ ತಿಕ್ಕಾಟ ಮುಂದುವರೆದಿದೆ.


ಅದು ದೇಶ-ಪಂಗಡಗಳ ನಡುವಿನ ಸಮಸ್ಯೆ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬರೂ ತಮ್ಮ ಸ್ವಾತಂತ್ರ್ಯ ಹಕ್ಕನ್ನು ಉಳಿಸಿಕೊಳ್ಳುವ ಅಥವಾ ಇನ್ನೊಬ್ಬರಿಗೆ ಅಡಿಯಾಳಾಗಿ ಬದುಕುವ ಸಮಸ್ಯೆ. ಸಾಮಾನ್ಯವಾಗಿ ಜಗಳ-ಹೊಡೆದಾಟಗಳಿಂದ ದೂರ ಇರಲು ಬಯಸುವ ನಾನು ನನ್ನ ಸ್ವಾತಂತ್ರ್ಯ ವಿಷಯ ಬಂದಾಗ ಪೂರ್ತಿ ಶಕ್ತಿಯೊಂದಿಗೆ ಕಾದಾಡುತ್ತೇನೆ. ಬ್ರಿಟಿಷರಿಗೆ ಕಪ್ಪ ಕೊಡಲು ಬಯಸದ ಕಿತ್ತೂರು ರಾಣಿಯ ಹಾಗೆ. ನನ್ನಮೇಲೆ ಸವಾರಿ ಮಾಡಲು ಬಂದ ಎಲ್ಲರಿಗೂ, ಅದು ಆಫೀಸ್ ನಲ್ಲಿ ಬಾಸು, ಮನೆಯಲ್ಲಿ ಹೆಂಡತಿ, ಶ್ರೀಮಂತಿಕೆಯ ದರ್ಪ ಇರುವ ಸಂಬಂಧಿಗಳು, ರೌಡಿಗಳಂತೆ ಆಡುವ ಅಣ್ಣ-ತಮ್ಮಂದಿರು, ಸ್ನೇಹಿತರ ವೇಷದ ವಂಚಕರು ಹೀಗೆ ಎಲ್ಲರಿಗೂ ನನ್ನ ಹೋರಾಟದ ಬಿಸಿ ಮುಟ್ಟಿಸಿದ್ದೇನೆ. ಸೋಲಿನ ರುಚಿ ತೋರಿಸಿದ್ದೇನೆ. ಅವರಿಗೆ ಒಮ್ಮೆ ಸೋತರೆ ಆಯಿತು. ಅವರು ನಿಮ್ಮ ಮೇಲೆ ಸವಾರಿ ಮಾಡಲು ತೊಡಗುತ್ತಾರೆ. ನೀವು ಮನುಷ್ಯರಿಂದ ಪ್ರಾಣಿಯಾಗಿ ಬದಲಾಗಿ ಬಿಡುತ್ತೀರಿ. ಅದೇ ನೀವು ಪಳಗಲಾರದ ಕುದುರೆ ಆಗಿದ್ದರೆ, ನೀವು ನಿಮ್ಮ ಹಿಂದೆ ಬಿದ್ದವರನ್ನು ಹಿಂಗಾಲಿನಿಂದ ಝಾಡಿಸಿ ಬಿಡುತ್ತೀರಿ. ನಿಮ್ಮ ಬೆನ್ನೇರಿದರೆ ಅವರನ್ನು ಆಯಕಟ್ಟಿನ ಸ್ಥಳದಲ್ಲಿ ಕೆಡವುತ್ತೀರಿ. ಮತ್ತೆ ನಿಮ್ಮ ಸ್ವಾತಂತ್ರ್ಯ ಸಾಬೀತು ಪಡಿಸುತ್ತಿರಿ. ಅದೇ ಕಾರಣಕ್ಕೆ ನಾನು ದಬ್ಬಾಳಿಕೆ ಮಾಡುವುವರ ಜೊತೆಗೆ ಪೂರ್ತಿ ಶಕ್ತಿಯೊಂದಿಗೆ ಹೋರಾಡುತ್ತೇನೆ. ನನಗೆ ಒಮ್ಮೆ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ಅಥವಾ ಡಬಲ್ ಗೇಮ್ ಆಡಿದರೆ ಅವರಿಗೆ ಇನ್ನೊಮೆ ಅವಕಾಶ ಕೊಡದಂತೆ ಜಾಗರೂಕತೆ ವಹಿಸುತ್ತೇನೆ. ಅವರ ಮನೆಗೆ ಕಾಲಿಡುವುದಿಲ್ಲ ಮತ್ತು ಅವರು ನನ್ನ ಮನೆಗೆ ಕಾಲಿಡದಂತೆ ಮಾಡುತ್ತೇನೆ. ಇದೇ ಕಾರಣಕ್ಕೆ ನೌಕರಿಗಳನ್ನು ಬದಲಾಯಿಸಿದ್ದೇನೆ. ಒಬ್ಬಂಟಿಯಾದರು ಧಿಕ್ಕಾರ ಹೇಳಿದ್ದೇನೆ. ಆದರೆ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ನನ್ನ ಜೊತೆಗೆ ದಬ್ಬಾಳಿಕೆ ಮಾಡಲು ಬಂದವರು ನಾನು ಪಳಗಲಾರದ ಕುದುರೆ ಎನ್ನುವ ಅರಿವು ಬಂದೊಡನೆ ನನ್ನ ತಂಟೆ ಕೈ ಬಿಡುತ್ತಾರೆ. ಆದರೆ ಬದಲಾಗುವ ಕಾಲ ಹೊಸ ಜನರ ಸಂಪರ್ಕ ತರುತ್ತದೆ. ಕೆಲವರು ಗೆಳೆಯರು ಆದರೆ, ಕೆಲವರು ದಬ್ಬಾಳಿಕೆ ಮಾಡಲು ಪ್ರಯತ್ನಿಸಿ ಬೇರೆ ದಾರಿ ಇಲ್ಲದೆ ದೂರ ಸರಿಯುತ್ತಾರೆ.


ಪಳಗಿದ ಕುದುರೆಗೆ ಬೆಲೆ ಕಟ್ಟಿ ಮಾರಾಟ ಮಾಡಬಹುದು ಮತ್ತು ಅದನ್ನು ಸ್ವಾರ್ಥ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಆದರೆ ಪಳಗಲಾರದ ಕುದುರೆ ಬೇರೆಯವರ ದೌರ್ಜನ್ಯಕ್ಕೆ ಸಿಕ್ಕುವುದಿಲ್ಲ ಅಂದ ಮೇಲೆ ಅದಕ್ಕೆ ಬೆಲೆ ಯಾರು ಕಟ್ಟುತ್ತಾರೆ? ಬದಲಿಗೆ ಅದರ ಸಾವು ಬಯಸುತ್ತಾರೆ. ಹಾಗೇಯೇ ಇದು ಒಂದು ದಿನದ ಮಾತು ಅಲ್ಲ. ನೀವು ಸ್ವಾತಂತ್ರ್ಯ ಬಯಸಿದರೆ, ಮೊಗಲರಿಗೆ ಸಾಮಂತನಾಗಿ ಇರಲು ಒಪ್ಪದ ಶಿವಾಜಿಯ ಹಾಗೆ ನೀವು ಜೀವನ ಪೂರ್ತಿ ಕಾದಾಡುತ್ತ ಇರಬೇಕು. ಸ್ವಾತಂತ್ರ್ಯದ ಬೆಲೆ ತೆರಲು ತಯ್ಯಾರಾಗಿರಬೇಕು. ಆದರೆ ಯಾರೋ ಹೇಳಿದ ಹಾಗೆ ಬದುಕುವುದಕ್ಕಿಂತ ಅಪಾಯ ತಂದೊಡ್ಡುವ ಸ್ವಾತಂತ್ರ್ಯವೇ ನನಗೆ ಹೆಚ್ಚು ಪ್ರೀತಿ. ಬದುಕುವುದು ಸ್ವಲ್ಪ ದಿನವೇ ಆದರೂ, ನಾನು ಬದುಕುವುದು ನನ್ನ ಇಚ್ಛೆಯ ಹಾಗೆ.

Saturday, August 20, 2022

ಭಾರತಾಂಬೆಗೆ ಶರಣು

ಭಾರತ ಒಂದು ಭೂಭಾಗ ಎಂದುಕೊಂಡರೆ ಅದರ ಹೆಚ್ಚಿನ ಭಾಗವನ್ನು ಆಳಿದ ಮೊದಲ ರಾಜ ಅಶೋಕ ಚಕ್ರವರ್ತಿ. ಆ ನಂತರ ಉತ್ತರ, ದಕ್ಷಿಣ ಭಾಗಗಳನ್ನು ಬೇರೆ ಬೇರೆ ರಾಜರುಗಳು ಆಳಿದರೂ ಅವುಗಳು ಸಂಪರ್ಕದಲ್ಲಿದ್ದವು. ಆದರೆ ಮಹಾನ್ ಭಾರತದ ಕಲ್ಪನೆ ವಿದೇಶಿಯಗರಿಗೆ ನಮಗಿಂತ ಹೆಚ್ಚಾಗಿ ಇತ್ತು. ಭಾರತದ ಜೊತೆ ವ್ಯಾಪಾರ ಮಾಡಲು ವರ್ತಕರು ಹಾತೊರೆಯುತ್ತಿದ್ದರು. ಪ್ರವಾಸಿಗರು ಮುಗಿಬೀಳುತ್ತಿದ್ದರು. ಧಾಳಿಕೋರರು ಸಂಚು ಹೆಣೆಯುತ್ತಿದ್ದರು. ಅವರಿಗೆ ಸಿಂಧು ನದಿ ದಾಟಿದರೆ ಸಿಗುವ ಪ್ರದೇಶವೇ ಭಾರತ ಆಗಿತ್ತು. ಸಮುದ್ರ ಭಾಗದಿಂದ ಕೇರಳಕ್ಕೆ ಬಂದರೆ ಅದು ಕೂಡ ಅವರಿಗೆ ಭಾರತವೇ. ಗಾಳಿ ಬೀಸುವುದು ಹೆಚ್ಚು ಕಡಿಮೆ ಆಗಿ ಅವರ ಹಡಗು ಗೋವಾ ಗೆ ಬಂದು ಸೇರಿದರೆ ಅವರಿಗೆ ಅದು ಕೂಡ ಭಾರತವೇ. ಅದೇ ಇಂಗ್ಲಿಷರು ಸುತ್ತಿ ಬಳಸಿ ಕಲ್ಕತ್ತೆಗೆ ಬಂದರಲ್ಲ ಅದು ಕೂಡ ಭಾರತವೇ ಆಗಿತ್ತು. ಬ್ರಿಟಿಷರು ಭಾರತವನ್ನು ಒಟ್ಟುಗೂಡಿಸಿದ್ದು ಯಾವುದೇ ಸದುದ್ದೇಶ್ಶದಿಂದಲ್ಲ. ತಮ್ಮ ಆಡಳಿತ ಸುಗಮ ಆಗಲಿ ಎನ್ನುವುದಷ್ಟೆ ಆಗಿತ್ತು. ಆದರೆ ಇಂಡಿಯನ್ ರೈಲ್ವೇಸ್, ಇಂಡಿಯನ್ ಪೋಸ್ಟಲ್ ಸರ್ವಿಸ್ ಎನ್ನುವ ಸಂಸ್ಥೆಗಳು ಭಾರತದ ಉದ್ದಗಲಕ್ಕೂ ಹರಡಿ ಸಂಪರ್ಕ ಕಲ್ಪಿಸುವ ಜಾಲಗಳಾಗಿ ಹರಡಿಬಿಟ್ಟವು. ಅದರ ಸದುದ್ದೇಶ ಪಡೆದದ್ದು ಸ್ವತಂತ್ರ ಹೋರಾಟಗಾರರು.


ಮೋಹನ್ ದಾಸ್ ಎನ್ನುವ ವಕೀಲ ದಕ್ಷಿಣ ಆಫ್ರಿಕಾ ದಲ್ಲಿ ರೈಲಿನಿಂದ ಹೊರ ದಬ್ಬಿಸಿಕೊಂಡಾಗ ಅವನಲ್ಲಿ ಒಂದು ಸ್ವಾತಿಕ ಕಿಚ್ಚು ಮೂಡಿತ್ತು. ಅವಮಾನ ನುಂಗಲು ಸಿದ್ಧನಿರದ ಆತ ವ್ಯವಸ್ಥೆ ಬದಲಾಯಿಸಲು ಹೋರಾಟ. ಭಾರತಕ್ಕೆ ಮರಳಿ ಬಂದು ಮೊದಲ ಬಾರಿಗೆ ಅಹ್ಮದಾಬಾದ್ ನಲ್ಲಿ ಬಟ್ಟೆ ನೇಯುವ ಕಾರ್ಮಿಕರ ಪರವಾಗಿ ಉಪವಾಸ ಸತ್ಯಾಗ್ರಹ ಮಾಡಿದ. ಅವನ ಹಿಂದೆ ಜನರು ಮೂವತ್ತಿಗಿಂತ ಹೆಚ್ಚಿರಲಿಲ್ಲ. ಅದು ೧೯೧೯. ಆದರೆ ಅವನು ಸಾವಿರಾರು ಪಾತ್ರಗಳು ಬರೆದ. ನೂರಾರು ಊರು ಅಲೆದ. ಹೊಸ ನಾಯಕರನ್ನು ಹುಟ್ಟು ಹಾಕಿದ. ವಿದೇಶದ ಬಟ್ಟೆ ಸುಟ್ಟ. ಮತ್ತೆ ನೂಲುವುದನ್ನು ಕಲಿಸಿದ. ನಿಯಮಕ್ಕೆ ವಿರುದ್ಧವಾಗಿ ಸಮುದ್ರದ ನೀರಿನಿಂದ ಉಪ್ಪು ಮಾಡಲು ಹೊರಟ. ಹಲವಾರು ಬಾರಿ ಬಂಧನಕ್ಕೊಳಗಾದ. ಬಂಧಿಸಲು ಬಂದ ಬ್ರಿಟಿಷ್ ಪೊಲೀಸ್ ರಿಗೆ ನಿಮ್ಮ ಹತ್ತಿರ ಅರೆಸ್ಟ್ ವಾರೆಂಟ್ ಇದೆಯೇ ಎಂದು ಕೇಳಿದ ಮೊದಲ ಸ್ವಾತಂತ್ರ ಹೋರಾಟಗಾರ ಆತ. ಸಣ್ಣ ಮೈಯ, ಅಸಾಧಾರಣ ಧೈರ್ಯ ಇದ್ದ ವ್ಯಕ್ತಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎನ್ನುವ ಚಳುವಳಿ ಆರಂಭಿಸಿದ. ಅದು ೧೯೪೨. ಅಷ್ಟೊತ್ತಿಗೆಲ್ಲ ಆತನಿಗೆ ಮೂವತ್ತು ಕೋಟಿ ಹಿಂಬಾಲಕರು ಇದ್ದರು.


ಆದರೆ ಸ್ವಾತಂತ್ರ ಹೋರಾಟದಲ್ಲಿ ಸಾಕಷ್ಟು ಜನ ಮುಂಚೂಣಿಯಲ್ಲಿದ್ದರು. ಬಿಸಿ ರಕ್ತದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ತರಹದವರು. 'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ' ಎಂದ ಅಪ್ರತಿಮ ದೇಶ ಭಕ್ತ ಸುಭಾಷ್ ಚಂದ್ರ ಬೋಸ್ ಇದ್ದರು. ಆಧ್ಯಾತ್ಮಿಕವಾಗಿ ಕ್ಷೇತ್ರದಲ್ಲಿದ್ದರು ಭಾರತ ಸ್ವತಂತ್ರ ಹೊಂದುವುದು ಬಯಸಿದ್ದ ಸ್ವಾಮಿ ವಿವೇಕಾನಂದ, ಅರವಿಂದೋ ಘೋಷ್ ಇದ್ದರು. ಅವರೆಲ್ಲರ ದಾರಿ ಬೇರೆ ಬೇರೆ. ಆದರೆ ಉದ್ದೇಶ ಒಂದೇ. ಸ್ವಾತಂತ್ರ ಭಾರತ. ಎರಡನೇ ಜಾಗತಿಕ ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಬ್ರಿಟಿಷರು ಜಾಗತಿಕ ಬೆಳವಣಿಗೆಗಳ ಮೇಲೆ ತಮ್ಮ ಹಿಡಿತ ಕಳೆದುಕೊಂಡು ತಮ್ಮ ಅಧಿಕಾರವನ್ನು ಬಿಟ್ಟು ಕೊಡುತ್ತ ಹೋದರು. ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳು ಭಾರತ ಸ್ವಾತಂತ್ರ ಆಗುವುದು ಬಿಟ್ಟರೆ ದಾರಿಯೇ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿ ಆಗಿಬಿಟ್ಟಿತು.


ಎಪ್ಪತೈದು ವರ್ಷಗಳ ಬಳಿಕ ಇಂದು ಸ್ವಾತಂತ್ರ ಭಾರತದಲ್ಲಿ ಅಭಿವೃದ್ಧಿ ಸಮರ್ಪಕ ಏನು ಅನಿಸುವುದಿಲ್ಲ. ಆದರೂ ಕೂಡ ಇದು ನಮ್ಮ ಭಾರತ ಎನ್ನುವ ನಂಬಿಕೆ ನಮ್ಮಲ್ಲಿ ಮನೆ ಮಾಡಿದೆ. ಅಂದಿಗೆ ಸ್ವತಂತ್ರ ಹೋರಾಟಗಾರರು ನಮ್ಮನ್ನು ಒಟ್ಟಿಗೆ ತರಲು ಹರಪ್ರಯತ್ನ ಪಟ್ಟರೆ ಇಂದಿಗೆ ಹಬ್ಬಗಳು, ಚಿತ್ರರಂಗ, ಕ್ರಿಕೆಟ್, ಗಡಿ ಸಮಸ್ಯೆಗಳು ನಮ್ಮನ್ನು ಒಟ್ಟಿಗೆ ತರುತ್ತಿವೆ. ನಮ್ಮ ದೇಶ ತಡವಾಗಿ ಆದರೂ ಹಂತ ಹಂತವಾಗಿ ಬಲಿಷ್ಠ ರಾಷ್ಟ್ರ ಎನಿಸಿಕೊಳ್ಳುತ್ತಿದೆ. 


ನಮ್ಮ ಇಂದಿನ ಸಮಸ್ಯೆಗಳು ಬೇರೆ ಇವೆ. ಬೇರೆ ದೇಶಗಳ ಜನ ಮಂಗಳ ಗ್ರಹಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ನಾವು ಇತಿಹಾಸದಲ್ಲೇ ಕಳೆದು ಹೋಗಿದ್ದೇವೆ. ಅದರಿಂದ ಹೆಚ್ಚಿನ ಜನ ಹೊರ ಬಂದು ಹೊಸ ಪ್ರಯತ್ನಗಳನ್ನು ಜಾರಿ ಇಟ್ಟಾಗ ನಮ್ಮ ಭವಿಷ್ಯ ಕೂಡ ಉಜ್ವಲ ಆಗುತ್ತಾ ಹೋಗುತ್ತದೆ. ಎಲ್ಲ ಸಮಸ್ಯೆ ಮತ್ತು ಅವಕಾಶಗಳ ನಡುವೆ ಭಾರತಾಂಬೆ ನೂರು ಕೋಟಿ ಜನಕ್ಕೂ ಹೆಚ್ಚು ಜನರಿಗೆ ಆಶ್ರಯವಿತ್ತು ಸಲಹುತ್ತಿದ್ದಾಳೆ. ಅವಳಿಗೆ ಶರಣು!

Sunday, August 14, 2022

Goodbye, RJ!

He was known as Warren Buffett of India. While Warren is doing fine at 91, our own Rakesh Jhunjhunwala has passed away at 62.


He was trained to be Chartered Accountant but he found a way into equity markets. And he had a phenomenal success. From being just another guy to the 36th richest person in India makes a fantastic story. He had very sharp instincts to become a successful trader. That would have given him enough money to become a prudent long-term investor. It is not easy to put both hats of a trader and an investor on your head as they both require a completely different mindset. But RJ would do both at ease. Trading the opportunities in the market while sitting tight on investments believing that the Big Bull run in India has not started yet.


He has been an inspiration to many including me. Though I never followed his investments or style, I always looked up to him for his assessment of the economy, markets, valuations, changing trends, etc. He was never dual-minded. He had such a clarity of thought. Probably that gave him the convictions on his investments.


Though he made billions, he seems to have not done well on the health part. Had he lived longer, he would have done a greater service in bringing rationality to financial markets through his views and probably some social service through charity as well. 


Time is up. Goodbye, RJ!




Saturday, August 13, 2022

Life hacks against a narcissist

I do not have the luxury of going "No Contact" as I have kids with my narcissist.  Boundary of any form does not work as she draws sadistic pleasure in destroying those boundaries. Despite such odds, few things have worked well for me:


1. No dependence: I don't depend on my narcissistic partner for any of my stuff. I do things myself.

2. Minimum communication: For kids' sake, we need to communicate but I will keep it to a bare minimum with "Yes" or "No" replies. I neither initiate any discussion nor share my opinions with her.

3. "Same to you" reply for insults: If she tries to insult me, I will respond to it with a "Same to you" reply. If she accuses my parents, again I will say "Same to your parents" and end the conversation there. Tolerating abuse will encourage the narcissist to step up the game. And going into a lengthy argument with them is a waste of time.

4. "I don't trust you" to shut her off: If she tries to advise me or pulls me into a new game, I will just say "I don't trust you" and refuse to engage further. That shuts her off from extending the game.

5. Bring in witnesses: When she throws temper tantrums, I will call people nearby to become witnesses for the drama. Narcissists are scared of their masks falling off. So they will become normal again in no time. If there is no one available nearby, I will video record the drama on my cell phone without responding to her provocations. Narcissists don't want evidence created against them. That ensures drama comes to an end quickly.

6. Proactively guard my reputation: Narcisissts one or the other day will attempt to damage your reputation by spreading false information and making themselves a victim. So I proactively speak to people I care about such a possibility that ensures the smear campaign of the narcissist will not have the desired impact.

7. "Say Nice try" when gaslighted: When she attempts to gaslight me, I will say "Nice try" and smile calmly looking into her eyes. She understands that I see through her and her attempt to manipulate me fails miserably.

8. Meet flying monkeys with your supporters: I refuse to talk and walk away from the flying monkeys sent by the narcissist. I will face them only when I have people who support me are there for a countermeasure. That avoids bullying attempts by the flying monkeys.


Living with a narcissist is a pain. If you let them take control, your life would become miserable. It is better to manage them to keep the damage to a minimum. Meanwhile, don't forget to spend time away from the narcissist in the company of people you like to recharge your batteries. Keeping the energy drain from the narcissist to a minimum helps us survive and thrive.

Friday, August 12, 2022

ಕಾಡು ಕುದುರೆ ಓಡಿ ಬಂದಿತ್ತಾ…

ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಇಂದು ವಿಧಿವಶ ಆಗಿದ್ದಾರೆ. ಅವರು ಮುಂಚೂಣಿಗೆ ಬಂದಿದ್ದು "ಕಾಡು ಕುದುರೆ ಓಡಿ ಬಂದಿತ್ತಾ" ಹಾಡಿನ ಮೂಲಕ. ನಂತರ ಜನಪ್ರಿಯತೆ ಗಳಿಸಿದ್ದು ಸಂತ ಶಿಶುನಾಳ ಶರೀಫರ ಹಾಡುಗಳ ಮೂಲಕ. ೮೩ ವರುಷಗಳ ತುಂಬು ಜೀವನ  ನಡೆಸಿದ ಅವರು ಸಾಕಷ್ಟು ಪ್ರಶಸ್ತಿ, ಗೌರವಗಳಿಗೆ ಪಾತ್ರ ಆಗಿದ್ದಾರೆ. ಅವರ ಕಂಠದಿಂದ ಹಾಡುಗಳಲ್ಲಿ ಹೊರ ಹೊಮ್ಮುವ ಶಕ್ತಿ ಅವರು ಹಾಡಿದ್ದ ಹಾಡುಗಳನ್ನು ಜನರಿಗೆ ಹತ್ತಿರವಾಗಿಸುತ್ತವೆ. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದು ಶಾಸ್ತ್ರೀಯ ಸಂಗೀತ ಕಲೆತು ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಕನ್ನಡ ಸಂಸ್ಕೃತಿಯ ಭಾಗವಾಗಿದ್ದರು.

ಚಂದ್ರಶೇಖರ ಕಂಬಾರ ಅವರು ರಚಿಸಿದ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಹೀಗಿದೆ: 

ಕಾಡು ಕುದುರೆ ಓಡಿ ಬಂದಿತ್ತಾ
ಕಾಡು ಕುದುರೆ ಓಡಿ ಬಂದಿತ್ತಾ

ಊರಿನಾಚೆ ದೂರದಾರಿ 
ಸುರುವಾಗೊ ಜಾಗದಲ್ಲಿ 
ಮೂಡಬೆಟ್ಟ ಸೂರ್ಯ ಹುಟ್ಟಿ 
ಹೆಸರಿನ ಗುಟ್ಟ ಒಡೆವಲ್ಲಿ 
ಮುಗಿವೇ ಇಲ್ಲದ ಮುಗಿಲಿನಿಂದ 
ಜಾರಿಬಿದ್ದ ಉಲ್ಕೀ ಹಾಂಗ 
ಕಾಡಿನಿಂದ ಚಂಗನೆ ನೆಗೆದಿತ್ತ ||ಪ|| 

ಮೈಯಾ ಬೆಂಕಿ ಮಿರುಗತಿತ್ತ 
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ 
ಹೊತ್ತಿ ಉರಿಯೊ ಕೇಶರಾಶಿ 
ಕತ್ತಿನಾಗ ಕುಣೀತಿತ್ತ 
ಧೂಮಕೇತು ಹಿಂಬಾಲಿತ್ತ 
ಹೌಹಾರಿತ್ತ ಹರಿದಾಡಿತ್ತ 
ಹೈಹೈ ಅಂತ ಹಾರಿಬಂದಿತ್ತ ||1|| 

ಕಣ್ಣಿನಾಗ ಸಣ್ಣ ಖಡ್ಗ 
ಆಸುಪಾಸು ಝಳಪಿಸಿತ್ತ 
ಬೆನ್ನ ಹುರಿ ಬಿಗಿದಿತ್ತಣ್ಣ 
ಸೊಂಟದ ಬುಗುರಿ ತಿರಗತಿತ್ತ 
ಬಿಗಿದ ಕಾಂಡ ಬಿಲ್ಲಿನಿಂದ 
ಬಿಟ್ಟ ಬಾಣಧಾಂಗ ಚಿಮ್ಮಿ 
ಹದ್ದ ಮೀರಿ ಹಾರಿ ಬಂದಿತ್ತ ||2||
 
ನೆಲ ಒದ್ದು ಗುದ್ದ ತೋಡಿ 
ಗುದ್ದಿನ ಬದ್ದಿ ಒದ್ದಿಯಾಗಿ 
ಒರತಿ ನೀರು ಭರ್ತಿಯಾಗಿ 
ಹರಿಯೋಹಾಂಗ ಹೆಜ್ಜೀ ಹಾಕಿ 
ಹತ್ತಿದವರ ಎತ್ತಿಕೊಂಡು 
ಏಳಕೊಳ್ಳ ತಿಳ್ಳೀ ಹಾಡಿ 
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||3||


Song Link: https://www.youtube.com/watch?v=U6m9JSjH8fY

ಕೊನೆಯ ಸಾಲುಗಳನ್ನು ಮತ್ತೆ ಓದಿಕೊಳ್ಳಿ. ಕಾಡು ಕುದುರೆ ಹತ್ತಿದವರ ಎತ್ತಿಕೊಂಡು ಕಳ್ಳೆ ಮಳ್ಳೆ ಆಡಿಸಿ ಕೆಡವಿ ಹೋಗಿದೆ.

ಶಿವಮೊಗ್ಗ ಸುಬ್ಬಣ್ಣನವರಿಗೆ ಶ್ರದ್ಧಾಂಜಲಿಗಳು. 



ಹಾಸ್ಯ ಬರಹ: ಕೈಗೆ ಬಂದ ತುತ್ತು ...

ದೇವರು ಕರುಣಾಮಯಿ, ಅವನು ಎಲ್ಲರ ತಪ್ಪುಗಳನ್ನು ಮನ್ನಿಸುತ್ತಾನೆ ಎಂದು ಕೇಳಿದ್ದೆ. ಅದು ನನಗೆ ಅನುಭವ ಆಗುವ ಕಾಲ ಬಂದೇ ಬಿಟ್ಟಿತ್ತು. ಎರಡು ಮೂರು ದಿನಗಳಿಂದ ದುಸು-ಮುಸು ಎನ್ನುತ್ತಿದ್ದ ನನ್ನ ಪತ್ನಿ, ತನ್ನ ಅಕ್ಕಳ ಜೊತೆಗೆ ದೀರ್ಘ ಸಂಭಾಷಣೆ ಕೂಡ ಮಾಡಿ, ತನ್ನ ಬಟ್ಟೆ ಬರೆಗಳನ್ನು ಮಂಚದ ಮೇಲೆ ರಾಶಿ ಹಾಕಿ ಅವುಗಳನ್ನು ಪ್ಯಾಕ್ ಮಾಡುತ್ತಾ ತನ್ನ ದೃಢ ನಿರ್ಧಾರ ಘೋಷಿಸಿಯೇ ಬಿಟ್ಟಳು. 'ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನಗಿನ್ನು ನಿನ್ನ ಸಹವಾಸ ಸಾಕು!"

 

ಆ ಮಾತು ಕೇಳಿದ ತಕ್ಷಣ ಸಪ್ತ ಸಮುದ್ರಗಳು ಉಕ್ಕೇರಿದ ಹಾಗೆ ನನ್ನ ಹೃದಯ ಸಂತೋಷದ ಕಡಲಾಗಿತ್ತು. 'ಗಗನವೋ ಎಲ್ಲೋ, ಭೂಮಿಯು ಎಲ್ಲೋ" ಎಂದು ನಟಿ ಕಲ್ಪನಾರ ಹಾಗೆ ಗೆಜ್ಜೆ ಕಟ್ಟಿ ಕುಣಿಯಬೇಕು ಎನ್ನಿಸಿಬಿಟ್ಟಿತ್ತು. ಆದರೂ ಸಾವರಿಸಿಕೊಂಡು ಹೇಳಿದೆ "ಅಣ್ಣನ ಹತ್ತಿರ ಬಂದು ನಿನಗೆ ಸೇರಬೇಕಾದ ಆಸ್ತಿ ಪತ್ರಗಳನ್ನು ಬರೆಸಿಕೊಂಡು ಹೋಗು". ಇಷ್ಟಕ್ಕೂ ಅವಳು ಅರ್ಧ ಬಿಟ್ಟು ಪೂರ್ತಿ ಆಸ್ತಿ ತೆಗೆದುಕೊಂಡು ಹೋಗಲಿ. ಆಸ್ತಿ ಯಾವನಿಗೆ ಬೇಕು? ಬೇಕಿರುವುದು ಜೀವನದ ಸ್ವಾತಂತ್ರ್ಯ. "ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ" ಎನ್ನುವ ಹಾಗೆ ಎಲ್ಲದಕ್ಕೂ ಮೂಗು ತೂರಿಸುವ ಮೂದೇವಿ ಜೊತೆ ಯಾರು ಸಂಸಾರ ಮಾಡಿಕೊಂಡಿರುತ್ತಾರೆ? ಮಸ್ಕಿ ಭ್ರಮರಾಂಭ ದೇವಸ್ಥಾನದಲ್ಲಿ ನನ್ನ ಮದುವೆಯಲ್ಲಿ ಊಟ ಮಾಡಿದ ಜನರಿಗಿಂತ ಹೆಚ್ಚಿನ ಜನರಿಗೆ ಅನ್ನ ದಾನ ಮಾಡಿದರೆ ಆ ಪಾಪ ಸಂಪೂರ್ಣ ಕಳೆಯುತ್ತದೆ ಏನೋ? ಅದನ್ನು ಹೇಳಬಲ್ಲ ಯಾವ ಸ್ವಾಮಿಗಳ ಹೆಸರು ನನಗೆ ಆ ಕ್ಷಣಕ್ಕೆ ತೋಚಲಿಲ್ಲ.

 

ಇಷ್ಟಕ್ಕೂ ನಾನು ಮದುವೆ ಆಗಿದ್ದು 'ಮದುವೆ ಆಗದೆ ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಡದೆ ಮದುವೆ ಆಗುವುದಿಲ್ಲ' ಎನ್ನುವ ಮನಸ್ಥಿತಿಯಲ್ಲಿ ಇದ್ದಾಗ. ಮದುವೆ ಆದ ಸ್ನೇಹಿತರ ಅನುಭವ ಗಮನಿಸಿದರೆ ಕೆಲವು ಹಾಗೆ. ಕೆಲವು ಹೀಗೆ. ಒಂಥರಾ ಲಾಟರಿ ಇದ್ದ ಹಾಗೆ. ಯಾರೋ ಒಬ್ಬರು  ಲಾಟರಿ ಗೆದ್ದರೆ ಸಾವಿರಾರು, ಲಕ್ಷಾಂತರ ಜನ ದುಡ್ಡು ಕಳೆದುಕೊಳ್ಳುವುದಿಲ್ಲವೇ? ಆದರೆ ಈ ಗಂಡಸರಿಗೆ ಒಂದು ಹುಚ್ಚು ನಂಬಿಕೆ. ತಾವೇ ಗೆಲ್ಲುವುದು ಎನ್ನುವ ಆಸೆಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದುಬಿಡುತ್ತಾರೆ. ಹೂವಿನ ಗಿಡದಲ್ಲಿ ಹೂವು ಉಂಟು, ಮುಳ್ಳು ಉಂಟು. ಹೂವು ಬೇಗ ಬಾಡಿ ಹೋಗುತ್ತದೆ. ಆದರೆ ಮುಳ್ಳು? ಆಮೇಲೆ ಒಂದು ಹೂವಿಗೆ ಒಂದೇ ಮುಳ್ಳಲ್ಲ ಹಲವಾರು ಮುಳ್ಳುಗಳು. ಮದುವೆಯ ಆರಂಭದಲ್ಲಿ ಮಾತ್ರ ಹೂವು ಆಮೇಲೆ ಪಕಳೆಗಳೆಲ್ಲ ಉದುರಿ ಉಳಿಯುವುದು ಮೊನಚು ಮುಳ್ಳು ಮಾತ್ರ.

 

ಅದು ಏನೇ ಇರಲಿ. ದೇವರು ನನ್ನ ಪಾಲಿಗೆ ಕೊನೆಗೂ ಕಣ್ತೆರೆದಿದ್ದ. "ಭಾಗ್ಯದ ಬಾಗಿಲು" ಎನ್ನುವ ಅಣ್ಣಾವ್ರ ಚಲನ ಚಿತ್ರ ಇದೆಯಲ್ಲ. ಅದರ ಪೋಸ್ಟರ್ ಡೌನ್ಲೋಡ್ ಮಾಡಿ ವಾಟ್ಸಪ್ಪ್ ನಲ್ಲಿ ಸ್ನೇಹಿತ ಒಬ್ಬನಿಗೆ ಕಳಿಸಿದೆ. ಸಂಭ್ರಮ, ಉಲ್ಲಾಸ ಹಂಚಿಕೊಳ್ಳಲು ಸ್ನೇಹಿತರಿಗಿಂತ ಬೇರೆ ಯಾರು ಬೇಕು? ಅವನಿಗೆ ಹೊಟ್ಟೆ ಉರಿ ಆಯಿತೋ ಏನೋ? ಆದರೂ ತೋರಿಸಿಕೊಳ್ಳದೆ "ಯಾವಾಗ ಪಾರ್ಟಿ?" ಎಂದು ಮೆಸೇಜ್ ಕಳಿಸಿದ. ಮುಂದೆ ಏನೆಲ್ಲಾ ಮಾಡಬಹುದು ಎಂದು ಮನಸ್ಸು ಮಂಡಿಗೆ ತಿನ್ನತೊಡಗಿತ್ತು. 'ದಿಲ್ ಚಾಹತಾ ಹೈ", "ಜಿಂದಗಿ ನ ಮಿಲೆಗಾ ದುಬಾರಾ" ಚಿತ್ರಗಳಲ್ಲಿ ಸ್ನೇಹಿತರು ಪ್ರವಾಸ ಹೋಗುತ್ತಾರಲ್ಲ. ಹೇಗಾದರೂ ಮಂಗಳೂರಿನಿಂದ ಗೋವಾ ಗೆ ಡ್ರೈವ್ ಮಾಡಿಕೊಂಡ ಹೋಗಬೇಕೆನ್ನುವ ಆಸೆ ಬಾಕಿ ಉಳಿದಿತ್ತು. ಮತ್ತು ದಾರಿಯಲ್ಲಿನ ಪ್ರಕೃತಿಯ ರಮಣೀಯ ಸೊಬಗನ್ನು ಸವಿಯುವ ಇರಾದೆ. ಬೆಟ್ಟದ ತುದಿಯಿಂದ ವಿಶಾಲ ಸಮುದ್ರದ ಫೋಟೋಗಳನ್ನು ತೆಗೆಯುವಾಸೆ, ಕೆಂಪು ಸೂರ್ಯ ನೀರೊಳಗೆ ಮುಳುಗುವುದು, ಎಲ್ಲಿಗೂ ಹೋಗದೆ ಅಲ್ಲಿಯೇ ನಿಂತ ಒಂಟಿ ಬೋಟ್ ಗಳು ಹೀಗೆ ಅನೇಕ ಸನ್ನಿವೇಶಗಳು. ಚಿತ್ರ ತೆಗೆಯಲು ಅಲ್ಲಿ ಅವಕಾಶಗಳಿಗೇನು ಕಡಿಮೆ?

 

ಅದೇ ಐಡಿಯಾ ಹೆಂಡತಿಗೆ ಕೊಟ್ಟಿದ್ದರೆ ಅವಳು ಪ್ರವಾಸಕ್ಕೆ ಖಂಡಿತ ಒಪ್ಪಿಕೊಳ್ಳುತ್ತಿದ್ದಳು. ಆದರೆ ಅವಳ ಲಗೇಜ್ ಕಾರಿನಿಂದ ಹತ್ತಿ ಇಳಿಸುವದರಲ್ಲೇ ಕಾಲ ಕಳೆದು ಹೋಗುತ್ತಿತ್ತು. ಅವಳು ಬೆಳ್ಳಿಗೆ ರೆಡಿ ಆಗುವುದು ಕಾಯುತ್ತ ಕೂತು ತಾಳ್ಮೆಯೆಲ್ಲ ಕರಗಿ ಹೋಗುತ್ತಿತ್ತು. ಅವಳು ಮಾಡಿದ ಶಾಪಿಂಗ್ ವಸ್ತುಗಳನ್ನು ಹೊತ್ತು ತರುವ ಕೂಲಿ ಕೆಲಸ ನನ್ನದೇ. ಅವಳು ಬೀದಿಯಲ್ಲಿ ವ್ಯಾಪಾರಕ್ಕೆ ಇಳಿದರೆ ಸಾಕಷ್ಟು ಹೊತ್ತು ಸುಮ್ಮನೆ ಕೈ ಕಟ್ಟಿ ಬೀದಿಯಲ್ಲಿ ನಿಂತುಕೊಳ್ಳುವ ಕೆಲಸಕ್ಕಿಂತ ಶ್ರವಣ ಬೆಳಗೋಳದಲ್ಲಿ ಗೊಮ್ಮಟ ಆಗುವುದು ವಾಸಿ. ಅವಳು ಮೆಚ್ಚಿದ ಸೀರೆಗೆ ಎಷ್ಟು ಚೆಂದದ ಬಣ್ಣ, ಎಷ್ಟು ಚೆಂದದ ಡಿಸೈನ್ ಎಂದು ಹೊಗಳದೇ ಹೋದರೆ ನಿಮಗೆ ಟೇಸ್ಟ್ ಇಲ್ಲ ಎನ್ನುವ ಕಾಮೆಂಟ್ ಸದಾ ಸಿದ್ಧವಿರುತ್ತಿತ್ತು. ಸೂರ್ಯಾಸ್ತ ಆಕಾಶದಲ್ಲಿ ಮೂಡಿಸುವ ರಂಗು, ಪಕ್ಷಿಗಳ ರೆಕ್ಕೆ ಪುಕ್ಕದಲ್ಲಿ ಮೂಡಿರುವ ಆಕರ್ಷಕ ವಿನ್ಯಾಸಗಳು ಅವೆಲ್ಲ ಫ್ರೀ ಆದರಿಂದ ಅವುಗಳ ಬಗ್ಗೆ ಗಮನ ಹರಿಸುವ ಗೋಜಿಗೆ ಅವಳು ಹೋಗುತ್ತಲೇ ಇರಲಿಲ್ಲ. ಕ್ಯಾಮೆರಾದಲ್ಲಿ ಹೆಚ್ಚಿನ ಫೋಟೋಗಳು ಅವಳದೇ ಇರಬೇಕು. ಮತ್ತು ಫೋಟೋ ತೆಗೆದ ಮೇಲೆ ಅವಳು ಅದನ್ನು ನೋಡಿ ಓಕೆ ಇಲ್ಲ ನಾಟ್ ಓಕೆ ಎಂದು ಹೇಳುತ್ತಾಳೆ. ಅವಳು ಚೆಂದ ಕಾಣುವ ಹಾಗೆ ತೆಗೆಯದೆ ಇದ್ದರೆ ಒಂದು ನನ್ನ ಕ್ಯಾಮೆರಾ ಸರಿ ಇಲ್ಲ ಇಲ್ಲ ನನಗೆ ಫೋಟೋ ತೆಗೆಯಲು ಬರುವುದಿಲ್ಲ ಅಷ್ಟೇ. ಇಷ್ಟೆಲ್ಲಾ ಸಂಗತಿಗಳ ನಡುವೆ ಮಂಗಳೂರು ಶುರು ಆಗಿದ್ದೆಲ್ಲಿ? ಗೋವಾ ಮುಗಿದದ್ದು ಎಲ್ಲಿ ಎಂದು ಗೊತ್ತು ಕೂಡ ಆಗುತ್ತಿರಲಿಲ್ಲ.

 

ಶುಭ ವೇಳೆಯಲ್ಲಿ ಅಪಶಕುನ ಏಕೆ? ಪ್ರವಾಸ ಬಿಟ್ಟು ಬೇರೇನೂ ಮಾಡಬಹುದು? ಸದ್ಗುರು ಆಶ್ರಮಕ್ಕೋ ಇಲ್ಲವೇ ಹಿಮಾಲಯದ ಅಡಿಯಲ್ಲಿ ನಡೆಯುವ ಧ್ಯಾನ ಕೇಂದ್ರಗಳಿಗೆ ಹೋಗಿ ನಾಲ್ಕಾರು ದಿನ ತಣ್ಣಗೆ ಕುಳಿತು ಧ್ಯಾನ ಮಾಡಬಹುದು. ಮನೆಯಲ್ಲಿ ಧ್ಯಾನ ಮಾಡಲಿಕ್ಕೆ ಆಗುವುದಿಲ್ಲ ಎಂದಲ್ಲ. ಆದರೆ ಹೆಂಗಸರು ಏನಾದರು ಸಹಿಸಿಯಾರು. ತಮ್ಮ ಗಂಡ ಸಂತೋಷದಿಂದ ಮತ್ತು ನೆಮ್ಮದಿಯಿಂದ ಇರುವುದನ್ನು ಸಹಿಸಲಾರರು. ನನ್ನ ಹೆಂಡತಿ ಅಷ್ಟೇ ಅಲ್ಲ. ಮೊನ್ನೆ ಗೆಳೆಯರು ಸಿಕ್ಕಾಗ ಹೆಚ್ಚು ಕಡಿಮೆ ಎಲ್ಲ ಸ್ನೇಹಿತರ ದೂರು ಇದೆ ಆಗಿತ್ತು ಅವರೊಳಗೆ ವಿವಾಹ ವಿಚ್ಛೇದನ ಪಡೆದ ಸ್ನೇಹಿತನೊಬ್ಬ ನಮ್ಮನ್ನೆಲ್ಲ ಅಯ್ಯೋ ಪಾಪ ಎನ್ನುವಂತೆ ನೋಡುತ್ತಿದ್ದ. ನನಗೂ ಕೂಡ ಅವನ ಹಾಗೆ ನೆಮ್ಮದಿಯ ನಗೆ ಬೀರುವ ಸದವಕಾಶ ಹತ್ತಿರವೇ ಇದೆ ಎನ್ನುವ ಹರ್ಷದಿಂದ ನನ್ನ ಮುಖದಲ್ಲಿ ಮಂದಹಾಸ ಮೂಡಿತ್ತು. 

 

ಕೊನೆ ಕಾಲಕ್ಕೆ ಹೆಂಡತಿಯೇ ದಿಕ್ಕು ಎನ್ನುವ ಮಾತಿದೆಯಲ್ಲ. ಆದರೆ ನಿಜದಲ್ಲಿ ಅವಳು ಗಂಡನ ನಾಲಿಗೆ ಕಿತ್ತುಬಿಟ್ಟಿರುತ್ತಾಳೆ. ಕೊನೆ ಕಾಲದವರೆಗೆ ಹೆಂಡತಿಯ ಜೊತೆಗೆ ಬದುಕಿ ಯಾವ ನರಕಕ್ಕಾದರೂ ಸೈ ಎನ್ನುವಷ್ಟು ಅನುಭವ ಭೂಮಿ ಮೇಲೆಯೇ ಪಡೆಯುವುದಕ್ಕಿಂತ, ಕಾಲಕ್ಕಿಂತ ಸ್ವಲ್ಪ ಮೊದಲೇ ಸ್ನೇಹಿತರ ನಡುವೆಯೇ ಪ್ರಾಣ ಬಿಡುವುದೇ ವಾಸಿ. ಅವರು ನಮ್ಮನ್ನು ಮಣ್ಣು ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಆಮೇಲೆ ಶಪಿಸಿಸುವ ಗೋಜಿಗೆ ಹೋಗುವುದಿಲ್ಲ. ಸಾಕ್ರಟೀಸ್ ಹೇಳಿದ್ದ ನಿನಗೆ ಕೆಟ್ಟ ಹೆಂಡತಿ ಸಿಕ್ಕರೆ ನೀನು ತತ್ವಜ್ಞಾನಿ ಆಗುತ್ತಿ ಎಂದು. ಆದರೆ ಅವಳು ನಡುವೆಯೇ ಸೋಡಾಚೀಟಿ ಕೊಟ್ಟು ಮತ್ತೆ ನಿಮ್ಮ ಬದುಕು ನಿಮಗೆ ಮರಳಿ ಸಿಕ್ಕರೆ? ಸಾಕ್ರಟೀಸ್ ಹೇಳದೆಯೇ ಉಳಿಸಿದ ಮಾತುಗಳನ್ನು ನಾನು ಹೇಳಿ ಒಂದು ಪುಸ್ತಕ ಹೊರತರಬಹುದು. ಆಗ ಚರಿತ್ರೆಯಲ್ಲಿ ನನಗೆ ಒಂದು ಸ್ಥಾನ ಕೂಡ ದೊರಕಬಹುದು ಎಂದು ಎನಿಸಿ ರೋಮಾಂಚನ ಆಯಿತು. ಎಷ್ಟೆಲ್ಲಾ ಅವಕಾಶಗಳಿವೆ ಈ  ವಿಶಾಲ ಪ್ರಪಂಚದಲ್ಲಿ. ಮತ್ತೆ ಆ ಅವಕಾಶ ಕೊಟ್ಟ ಹೆಂಡತಿಗೆ ನನ್ನ ಪುಸ್ತಕ ಅರ್ಪಿಸಿ ಧನ್ಯವಾದ ಹೇಳಬೇಕು ಎಂದುಕೊಂಡೆ. ಅವಳು ನನ್ನ ಬಿಟ್ಟು ಹೋಗುವುದರಿಂದ ಏನೆಲ್ಲಾ ಬದಲಾವಣೆಗಳು.

 

ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಆಯಿತು. ಅಲ್ಲಿ ಅವನ ಹೆಂಡತಿ ಅವನ ಬೆನ್ನು ತಿವಿಯುತ್ತ ನಿಂತಿದ್ದರೆ ಅವನ ಜ್ಞಾನೋದಯ ಆಗುತ್ತಿತ್ತೇ? ನೆನಪಿಡಿ, ಬುದ್ಧ ಕಾಂತಿಯುತನಾಗಿ, ಮಂದಹಾಸನಾಗಿ, ಅರೆ ಕಣ್ಣು ತೆರೆದು ಕುಳಿತುಕೊಳ್ಳುವ ಧೈರ್ಯ ಮಾಡಿದ್ದೆ ಅವನ ಹೆಂಡತಿ ಅಲ್ಲಿಲ್ಲ ಎಂದು. ಇಷ್ಟಕ್ಕೂ ಹೆಂಡತಿಯರು ಎಂದರೆ ಕೆಟ್ಟವರು ಎಂದರೇನಲ್ಲ. ಆದರೆ ಅವರು ಹೆಂಡತಿಯರು ಅಷ್ಟೇ. ಅವರು ಸಂತೋಷ ಆಗಿರುವುದು ತಮ್ಮ ಗಂಡನಿಗೆ ಯಾವತ್ತೂ ತೋರಿಸಿಕೊಡುವುದಿಲ್ಲ. ಮತ್ತು ಗಂಡ ಸಂತೋಷ ಪಟ್ಟರೆ ಅವರಿಗೆ ನರಕ ಹೇಗಿರುತ್ತದೆ ಎಂದು ಕಣ್ಮುಂದೆಯೇ ತೋರಿಸಿಕೊಡಲು ಹಿಂದೆ ಮುಂದೆ ನೋಡುವದಿಲ್ಲ. ಅವಳು ತನ್ನ ಮಕ್ಕಳಿಗೆ ಕರುಣಾಮಯಿ, ತವರುಮನೆಯವರಿಗೆ ವಾತ್ಸಲ್ಯ ತೋರುವ ಮಗಳು, ಸಹೋದರಿ. ಆದರೆ ಗಂಡನಿಗೆ ಏಳು ಜನ್ಮದ ಕರ್ಮಗಳನ್ನು ಒಂದೇ ಜನುಮದಲ್ಲಿ ತೀರಿಸಿ ಹೋಗಲು ಬಂದಿರುವ ಯಮಲೋಕದ ಪ್ರತಿನಿಧಿ. ಮದುವೆ ಆಗುವವರೆಗೆ ಮಾತ್ರ ಅವಳು ಗಂಡಿಗೆ ಆಕರ್ಷಣೆ. ಆಮೇಲೆ ಗಂಡನನ್ನು ಬಟ್ಟೆ ಒಗೆದ ಮೇಲೆ ಹಿಂಡಿ ನೀರು ತೆಗೆಯುವ ಹಾಗೆ, ಗಂಡನ ಸಂತೋಷದ ಒಂದು ಹನಿ ಬಿಡದಂತೆ ಹಿಂಡಿ ತೆಗೆದುಬಿಡುತ್ತಾಳೆ. ಆದರೆ ನನಗೆ ಇನ್ನು ಆ ತಾಪತ್ರಯ  ಮುಗಿಯಿತು. ನಾನು ಸ್ವಚಂದ ಹಾರುವ ಹಕ್ಕಿ. ನನ್ನ ಸಂತೋಷ ಕಸಿದುಕೊಳ್ಳುವ ಕರಾರು ಮುಗಿದು ಹೋಗಿದೆ.

 

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ದೇವತೆಗಳು ಅಸ್ತು ಅನ್ನುವ ಮುಂಚೆಯೇ ಹೆಂಡತಿ ಮನಸ್ಸು ಬದಲಾಯಿಸಿದ್ದಳು. ಹೋಗುತ್ತಿರುವುದು ಎರಡು ದಿನಕ್ಕೆ ಅಷ್ಟೇ ಎಂದು ಘೋಷಿಸಿ ಬಂದ ಮೇಲೆ ಇನ್ನು ಪಿಕ್ಚರ್ ಬಾಕಿ ಇದೆ ಎನ್ನುವ ನೋಟ ಬೀರಿ ಹೋದಳು. ನನ್ನ ಕನಸಿನ ಸೌಧ  ಕ್ಷಣಾರ್ಧದಲ್ಲೇ ಕುಸಿದು ಬಿದ್ದಿತ್ತು. ಪುರಾಣ ಕಥೆಯ ಹರಿಶ್ಚಂದ್ರ ಅಸಹಾಯಕತೆಯಿಂದ ನಕ್ಷತ್ರಕನನ್ನು ನೋಡಿದಂತೆ ಅವಳನ್ನು ನೋಡಿದೆ. ಮನೆಯ ಗೋಡೆಯ ಮೇಲೆ ಇದ್ದ ಬುದ್ಧನ ಪೇಂಟಿಂಗ್ ನಲ್ಲಿ ಬುದ್ಧ ಕಣ್ಣು ಅರೆ ತೆರದಿದ್ದು ಏಕೆ ಎಂದು ಗೊತ್ತಾಗಿತ್ತು. ಆದರೆ ಈಗ ಅರೆ ಮುಚ್ಚಿದ್ದು ಏಕೆ ಎಂದು ಕೂಡ ಗೊತ್ತಾಯಿತು. ಸಾಂತ್ವನ ಹೇಳುವಂತೆ ಸಾಯಿಬಾಬ (ಇನ್ನೊಂದು ಗೋಡೆಯ ಮೇಲಿನ ಪೇಂಟಿಂಗ್) ಕರುಣೆಯ ನೋಟ ಬೀರುತ್ತಿದ್ದ. ಸ್ನೇಹಿತ ಮತ್ತೆ ಮೆಸೇಜ್ ಮಾಡಿದ್ದ 'ಯಾವಾಗ ಪಾರ್ಟಿ?' ಯಾವುದೇ ಉತ್ತರ ನೀಡದೆ, ಗಾಳಿ ಹೋದ ಬಲೂನಿನಂತೆ ಸುಮ್ಮನೆ ಹೊದ್ದು ಮಲಗಿದೆ.

Sunday, August 7, 2022

ಕಥೆ: ಮೂರ್ಖರ ಸಾಮ್ರಾಜ್ಯಕ್ಕೆ ಅವಿವೇಕಿ ರಾಜ

(ಇದು ಒಂದು ಜಾನಪದ ಕಥೆಯ ಭಾವಾನುವಾದ. ಇದನ್ನು A. K. ರಾಮಾನುಜನ್ ಅವರ 'Folktales from India' ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ.)

 

ಒಂದು ಮೂರ್ಖರ ಸಾಮ್ರಾಜ್ಯಕ್ಕೆ, ಅವಿವೇಕಿಯೊಬ್ಬ ರಾಜನಾಗಿದ್ದ. ಅವನಿಗೊಬ್ಬ ಪೆದ್ದ ಮಂತ್ರಿ ಕೂಡ ಇದ್ದ. ಅವರ ವಿಚಾರ ಮತ್ತು ನಡುವಳಿಕೆಗಳು ಬಲು ವಿಚಿತ್ರವಾಗಿದ್ದವು. ಅವರು ಹಗಲು-ರಾತ್ರಿಗಳನ್ನೇ ಬದಲಾಯಿಸಿದ್ದರು. ಅವರ ಆದೇಶದ ಪ್ರಕಾರ, ರೈತರು ತಮ್ಮ ಹೊಲಗಳಿಗೆ ರಾತ್ರಿ ಉತ್ತಲು ಹೋಗಬೇಕಿತ್ತು. ವ್ಯಾಪಾರಸ್ಥರು ಕತ್ತಲು ಆಗುವವರೆಗೆ ತಮ್ಮ ಅಂಗಡಿಗಳನ್ನು ತೆಗೆಯುವಂತಿರಲಿಲ್ಲ. ಮತ್ತು ಸೂರ್ಯೋದಯ ಆದೊಡನೆ ಎಲ್ಲರು ನಿದ್ದೆಗೆ ಜಾರಬೇಕಿತ್ತು. ಅದಕ್ಕೆ ತಪ್ಪಿದರೆ ಮರಣ ದಂಡನೆಯೇ ಶಿಕ್ಷೆ ಆಗಿತ್ತು.


ಒಂದು ದಿನ ಗುರು-ಶಿಷ್ಯರ ಜೋಡಿ ಆ ಪಟ್ಟಣಕ್ಕೆ ಆಗಮಿಸಿದರು. ಆದರೆ ಹಾಡು-ಹಗಲಿನಲ್ಲಿ ರಸ್ತೆಗಳೆಲ್ಲ ಖಾಲಿ-ಖಾಲಿ. ಎಲ್ಲರು ನಿದ್ದೆಗೆ ಜಾರಿದ್ದಾರೆ. ದನ-ಕರುಗಳು ಸಹಿತ ಆ ಅಭ್ಯಾಸಕ್ಕೆ ಹೊಂದಿಕೊಂಡುಬಿಟ್ಟಿದ್ದವು. ಅಲ್ಲಿಗೆ ಬಂದ ಈ ಗುರು-ಶಿಷ್ಯರು ಊರು ಸುತ್ತಿ, ಎಲ್ಲೂ ಊಟ ಸಿಗದೇ ಸುಸ್ತಾದರು. ಆದರೆ ರಾತ್ರಿಯಾದಂತೆ ಊರಿಗೆ ಕಳೆ ಬಂದು ಬಿಟ್ಟಿತು. ಹಸಿದಿದ್ದ ಆಗಂತುಕರು ದಿನಸಿ ಕೊಳ್ಳಲು ಅಂಗಡಿ ಒಂದಕ್ಕೆ ಹೋದರು. ಅಲ್ಲಿ ಅವರಿಗೆ ಪರಮಾಶ್ಚರ್ಯ. ಅಲ್ಲಿ ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅಕ್ಕಿ, ಬೇಳೆ, ಹಣ್ಣು, ತುಪ್ಪ, ತರಕಾರಿ ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅವರು ತಮಗೆ ಬೇಕಾದ್ದು ಕೊಂಡುಕೊಂಡು ಅಡುಗೆ ಮಾಡಿಕೊಂಡು ಊಟ ಮಾಡಿದರು.

 

ಅಷ್ಟೊತ್ತಿಗೆ ಗುರುವಿಗೆ ಅದು ಮೂರ್ಖರ ಸಾಮ್ರಾಜ್ಯ ಎಂದು ಅರ್ಥವಾಗಿತ್ತು. ಅವನು ತನ್ನ ಶಿಷ್ಯನಿಗೆ ಹೇಳಿದ. "ಇದು ನಾವಿರಬೇಕಾದ ಜಾಗ ಅಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿಂದ ಮುಂದಕ್ಕೆ ಹೋಗೋಣ." ಆದರೆ ಶಿಷ್ಯ ಹೊಟ್ಟೆಬಾಕ. ಅವನಿಗೆ ಬೇಕಾದದ್ದು ಕಡಿಮೆ ಖರ್ಚಿನಲ್ಲಿ ಭರ್ಜರಿ ಊಟ. ಅವನು ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ. ಗುರು ಅವನನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಿದ.

 

ಆ ಪಟ್ಟಣದಲ್ಲಿ ಮುಂದೊಂದು ದಿನ ಹಗಲು ಹೊತ್ತಿನಲ್ಲಿ ಎಲ್ಲರು ಮಲಗಿದ್ದಾಗ, ಶ್ರೀಮಂತ ವ್ಯಾಪಾರಿ ಒಬ್ಬನ ಮನೆಯಲ್ಲಿ ಕಳ್ಳತನ ಆಯಿತು. ಗೋಡೆಗೆ ಕನ್ನ ಕೊರೆದು ಕಳ್ಳ ಹೊರ ಬರುವಷ್ಟರಲ್ಲಿ ಗೋಡೆ ಕಳ್ಳನ ಮೇಲೆ ಕುಸಿದು ಅವನು ಮೃತ ಪಟ್ಟನು. ಕಳ್ಳನ ಸಂಬಂಧಿಕರು ರಾಜನ ಹತ್ತಿರ ನ್ಯಾಯ ಪರಿಹಾರಕ್ಕೆ ಹೋದರು. ಕಳ್ಳತನ ಅವರ ಪುರಾತನ ವೃತ್ತಿ. ಅದನ್ನು ಮಾಡುವಾಗ ಗೋಡೆ ಭದ್ರವಾಗಿ ಕಟ್ಟಿಸದೆ ಇದ್ದರಿಂದ ಕಳ್ಳ ಮೃತ ಪಟ್ಟಿದ್ದಾನೆ. ಅದರ ಸಲುವಾಗಿ ಅಪರಾಧಿಗಳನ್ನು ಶಿಕ್ಷಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡರು.

 

ರಾಜ ಅವರಿಗೆ ನ್ಯಾಯ ಒದಗಿಸುವುದಾಗಿ ಅಭಯವಿತ್ತ. ಕೂಡಲೇ ಆ ವ್ಯಾಪಾರಿಯನ್ನು ಕರೆ ತರಲು ಹೇಳಿದ. ಅಲ್ಲಿಗೆ ಬಂದ ವ್ಯಾಪಾರಿ ತನ್ನ ಅಹವಾಲು ಮಂಡಿಸಿದ. ಮನೆ ಅವನದೇ ಆದರೂ, ಅದು ಗೋಡೆ ಕಟ್ಟುವವನು ಭದ್ರವಾಗಿ ಕಟ್ಟದ್ದು ಕಳ್ಳ ಸಾಯಲು ಕಾರಣ ಎಂದು ಹೇಳಿದ. ಗೋಡೆ ಕಟ್ಟಿದವನನ್ನು ಅಲ್ಲಿಗೆ ಕರೆಸಿದರು. ಅವನು ಗೋಡೆ ಸರಿಯಾಗಿ ಕಟ್ಟದ್ದಕೆ ಕಾರಣ ಹೇಳಿದ. ಆ ದಿನ ಹುಡುಗಿಯೊಬ್ಬಳು ರಸ್ತೆಯಲ್ಲಿ ಆ ಕಡೆಗೆ, ಈ ಕಡೆಗೆ ಹಲವಾರು ಬಾರಿ ಓಡಾಡಿ ಅವಳ ಗೆಜ್ಜೆ ಸಪ್ಪಳದಿಂದ ಅವನು ವಿಮುಖನಾಗಿ ಗೋಡೆ ಭದ್ರವಾಗಿ ಕಟ್ಟಲು ಸಾಧ್ಯವಾಗಲಿಲ್ಲ ಎಂದು. ಆ ಹುಡುಗಿಯನ್ನು ಅಲ್ಲಿಗೆ ಬರ ಹೇಳಿದರು. ಆ ಹುಡುಗಿ ಅಂದು ಅಲ್ಲಿ ಸಾಕಷ್ಟು ಬಾರಿ ಓಡಾಡಲಿಕ್ಕೆ ಕಾರಣ, ಆ ರಸ್ತೆಯಲ್ಲಿದ್ದ ಅಕ್ಕಸಾಲಿಗನ ಅಂಗಡಿ. ಅವನು ಇವಳ ಆಭರಣ ಮಾಡಿಕೊಡದೆ ಆಗ ಬಾ, ಈಗ ಬಾ ಎಂದು ಸತಾಯಿಸುತ್ತಿದ್ದ. ಅದಕ್ಕೆ ಹಲವಾರು ಬಾರಿ ಅವನ ಅಂಗಡಿಗೆ ಹೋಗಬೇಕಾಗಿ ಬಂತು ಎಂದು ಹೇಳಿದಳು. ಅಕ್ಕಸಾಲಿಗನನ್ನು ರಾಜನ ಆಸ್ಥಾನಕ್ಕೆ ಕರೆಸಿದರು. ಅವನು ತನ್ನ ಕಥೆ ಹೇಳಿದ. ಒಬ್ಬ ವ್ಯಾಪಾರಿ ತನ್ನ ಆಭರಣಗಳನ್ನು ಮೊದಲು ಮಾಡಿಕೊಡಲು ಒತ್ತಡ ಹೇರಿದ್ದ. ಆ ಕಾರಣದಿಂದ ಅವನಿಗೆ ಹುಡುಗಿಯ ಆಭರಣ ಮಾಡಿಕೊಡಲು ಸಾಧ್ಯವಾಗದೆ ಸತಾಯಿಸಿದ್ದು ಎಂದು ಹೇಳಿದ. ಅವನಿಗೆ ತೊಂದರೆ ಕೊಟ್ಟ ವ್ಯಾಪಾರಿ ಬೇರೆ ಯಾರು ಅಲ್ಲ. ಗೋಡೆ ಬಿದ್ದು ಕಳ್ಳ ಸತ್ತನಲ್ಲ.  ಆ ಮನೆ ಮಾಲೀಕನೇ ಆಗಿದ್ದ. ತುಂಬಾ ಕ್ಲಿಷ್ಟಕರ ಸಮಸ್ಯೆ ಒಂದಕ್ಕೆ ಪರಿಹಾರ ಸಿಕ್ಕಿಯೇ ಬಿಟ್ಟಿತು. ರಾಜ-ಮಂತ್ರಿ  ಸೇರಿ ಆ ವ್ಯಾಪಾರಿಯೇ ಅಪರಾಧಿ ಎನ್ನುವ ನಿರ್ಧಾರಕ್ಕೆ ಬಂದರು ಮತ್ತು ಅವನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

 

ಆದರೆ ಆ ವ್ಯಾಪಾರಿಗೆ ತುಂಬಾ ವಯಸ್ಸಾಗಿ ಹೋಗಿತ್ತು. ಅವನು ತುಂಬಾ ಕೃಶನಾಗಿ ಹೋಗಿದ್ದ. ಅಷ್ಟು ತೆಳ್ಳನೆಯ ವ್ಯಕ್ತಿಗೆ ಮರಣ ದಂಡನೆ ಕೊಟ್ಟರೆ ಏನು ಚೆನ್ನ ಎಂದು ಮಂತ್ರಿಗೆ ಅನ್ನಿಸಿತು. ಅವನು ತನ್ನ ಅನಿಸಿಕೆ ರಾಜನಿಗೆ ಹೇಳಿದ. ರಾಜ ಕೂಡ ವಿಚಾರ ಮಾಡಿ ನೋಡಿದ. ಯಾರೋ ಒಬ್ಬರಿಗೆ ಶಿಕ್ಷೆ ಆಗಲೇಬೇಕು. ತೆಳ್ಳನೆಯ ವ್ಯಾಪಾರಿಯ ಬದಲು ಒಬ್ಬ ದಷ್ಟಪುಷ್ಟ ವ್ಯಕ್ತಿಯ ತಲೆ ಕತ್ತರಿಸಬೇಕು ಎನ್ನುವ ನಿರ್ಧಾರಕ್ಕೆ ಅವರು ಬಂದರು. ದಪ್ಪನೆಯ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದಾಗ ಅವರಿಗೆ ಸಿಕ್ಕಿದ್ದು ಗುರುವಿನ ಹಿಂದೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದ ಶಿಷ್ಯ. ಅವನು ಚೆನ್ನಾಗಿ ಉಂಡು ತಿಂದು ಬಲಿತಿದ್ದ. ರಾಜ ಭಟರು ಅವನನ್ನು ವಧಾ ಸ್ಥಾನಕ್ಕೆ ಎಳೆದುಕೊಂಡು ಬಂದರು. ಅವನಿಗೆ ತಾನು ಮಾಡಿದ ತಪ್ಪು ಏನೆಂದು ತಿಳಿಯದು. ಎಷ್ಟು ಕೇಳಿಕೊಂಡರು ರಾಜಭಟರು ಅವನನ್ನು ಬಿಡಲಿಲ್ಲ. ಕೊನೆಗೆ ಅವನು ತನ್ನ ಗುರುವಿನಲ್ಲಿ ಪ್ರಾರ್ಥಿಸಿದ. ಗುರುವಿಗೆ ದಿವ್ಯದೃಷ್ಟಿಯಲ್ಲಿ ಎಲ್ಲ ಅರ್ಥ ಆಯಿತು. ಶಿಷ್ಯನ ಪ್ರಾಣ ಉಳಿಸಲು ಅವರು ಅಲ್ಲಿಗೆ ದೌಡಾಯಿಸಿ ಬಂದರು. ಅವರು ತಮ್ಮ ಶಿಷ್ಯನಿಗೆ ಬೈಯುತ್ತಾ ಅವನ ಕಿವಿಯಲ್ಲಿ ಏನೋ ಹೇಳಿದರು.

 

ನಂತರ ರಾಜನನ್ನು ಉದ್ದೇಶಿಸಿ ಕೇಳಿದರು "ಓ, ಬುದ್ದಿವಂತರಲ್ಲಿ ಶ್ರೇಷ್ಠನಾದ ರಾಜನೇ, ಗುರು-ಶಿಷ್ಯರಲ್ಲಿ ಯಾರು ದೊಡ್ಡವರು?"

 

ರಾಜ ಹೇಳಿದ "ಗುರುವೇ ದೊಡ್ಡವನು. ಅದರಲ್ಲಿ ಸಂದೇಹವೇ ಇಲ್ಲ. ಏಕೆ ಈ ಪ್ರಶ್ನೆ?"

 

ಅದಕ್ಕೆ ಗುರುಗಳು ಹೇಳಿದರು "ಹಾಗಾದರೆ ಮೊದಲಿಗೆ ನನ್ನನ್ನು ವಧಿಸಿ. ನಂತರ ನನ್ನ ಶಿಷ್ಯನನ್ನು ವಧಿಸಿ."

 

ಅದನ್ನು ಕೇಳಿದ ಶಿಷ್ಯ ರೋಧಿಸತೊಡಗಿದ "ಮೊದಲು ನನ್ನನ್ನು ವಧಿಸಿ. ನನಗೆ ಮರಣದಂಡನೆ ಶಿಕ್ಷೆ ನೀಡಿ"

 

ರಾಜ ಗೊಂದಲಕ್ಕೀಡಾಗಿ ಗುರುವನ್ನು ಕೇಳಿದ "ಒಬ್ಬ ದಪ್ಪನೆಯ ಮನುಷ್ಯನಿಗೆ ಶಿಕ್ಷೆ ನೀಡುವುದಕ್ಕಾಗಿ ನಿಮ್ಮ ಶಿಷ್ಯನನ್ನು ಎಳೆದು ತಂದೆವು. ಆದರೆ ನೀವೇಕೆ ಸಾಯಲು ಇಷ್ಟ ಪಡುವಿರಿ?"

 

ಗುರು ರಾಜನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ, ಯಾರಿಗೂ ಕೇಳಿಸದಂತೆ ಮೆತ್ತನೆಯ ಧ್ವನಿಯಲ್ಲಿ ಹೇಳಿದ. "ಇಲ್ಲಿ ಯಾರು ಮೊದಲು ಸಾಯುವರೋ, ಅವರಿಗೆ ಮುಂದಿನ ಜನ್ಮದಲ್ಲಿ ಈ ರಾಜ್ಯಕ್ಕೆ ರಾಜನಾಗುವ ಯೋಗ ಇದೆ. ನಂತರ ಸತ್ತವನು ಮಂತ್ರಿಯಾಗಬೇಕು. ನಾನು ರಾಜನಾಗುವ ಆಸೆಯಿಂದ ಮೊದಲು ಸಾಯಲು ಇಚ್ಛಿಸುತ್ತೇನೆ."

 

ರಾಜ ಚಿಂತೆಗೆ ಬಿದ್ದ. ಅವನಿಗೆ ಮುಂದಿನ ಜನ್ಮದಲ್ಲೂ ತನ್ನ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡಲು ಇಷ್ಟ ಇರಲಿಲ್ಲ. ರಹಸ್ಯದಲ್ಲಿ ಮಂತ್ರಿಯನ್ನು ಕರೆದು ಸಮಾಲೋಚಿಸಿದ. ಅವರಿಬ್ಬರೂ ಮುಂದಿನ ಜನ್ಮದಲ್ಲಿ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡುವ ಬದಲು ತಾವೇ ಸತ್ತು ಮರು ಜನ್ಮದಲ್ಲಿ ರಾಜ ಮಂತ್ರಿಯಾಗಿ ಅಧಿಕಾರ ನಡೆಸುವ ಆಲೋಚನೆಗೆ ಬಂದರು. ತಮ್ಮ ಸೇವಕರಿಗೆ ಮರುದಿನ ಬೆಳಿಗ್ಗೆ ಗುರು-ಶಿಷ್ಯರ ತಲೆ ಕಡಿಯುವಂತೆ ಆದೇಶ ನೀಡಿದರು. ಆದರೆ ರಾತ್ರಿಯ ವೇಳೆ ಗುರು-ಶಿಷ್ಯರನ್ನು ಸೆರೆಮನೆಯಿಂದ ಆಚೆ ಕಳಿಸಿ, ಆ ಜಾಗದಲ್ಲಿ ತಾವು ಮುಸುಕು ಹಾಕಿಕೊಂಡು ಮಲಗಿದರು.

 

ಮರುದಿನ ಬೆಳಿಗ್ಗೆ ಅವರಿಬ್ಬರ ತಲೆ ಕಡಿಯಲಾಯಿತು. ಅವರ ಮುಸುಕು ತೆಗೆದ ಮೇಲೆ ಜನ ಗಾಬರಿ ಆದರು. ತಮ್ಮ ರಾಜ್ಯಕ್ಕೆ ಇನ್ನಾರು ದಿಕ್ಕು ಎಂದು ಆಲೋಚಿಸತೊಡಗಿದರು. ಯಾರೋ ಒಬ್ಬರು ಗುರು-ಶಿಷ್ಯರನ್ನು ಕೇಳಿ ನೋಡೋಣ ಎಂದು ಹೇಳಿದರು. ಶಿಷ್ಯ ಮಂತ್ರಿಯಾಗುವುದಕ್ಕೆ ತಕ್ಷಣ ಒಪ್ಪಿಕೊಂಡ. ಆದರೆ ಗುರು ಹಲವಾರು ಷರತ್ತುಗಳನ್ನು ಹಾಕಿದ. ಅವನು ಎಲ್ಲ ವಿಷಯಗಳನ್ನು ಬದಲು ಮಾಡುವ ಅಧಿಕಾರಕ್ಕೆ ಜನ ಒಪ್ಪಿಕೊಂಡ ಮೇಲೆ ಅವನು ರಾಜನಾದ. ಅಲ್ಲಿಂದ ಮುಂದೆ ಆ ರಾಜ್ಯದಲ್ಲಿ ಹಗಲು-ಹಗಲಾಗಿಯೇ ಮತ್ತು ರಾತ್ರಿ-ರಾತ್ರಿಯಾಗಿಯೇ ಬದಲಾಯಿತು.