Saturday, November 26, 2022

ಎಚ್ಚರವಿರಲಿ ಎಂದ ಬುದ್ಧ ಬೇರೆ ನಿಯಮ ಹೇಳಲಿಲ್ಲ

ಒಂದು ದಿನ ಬುದ್ಧನ ಶಿಷ್ಯ ಆನಂದ ಕೇಳಿದ 'ಒಂದು ವೇಳೆ ಸ್ತ್ರೀ ಎದುರಾದರೆ ಏನು ಮಾಡಬೇಕು?'

 

ಬುದ್ಧ ಉತ್ತರಿಸಿದ 'ನೆಲ ನೋಡಿ ಮಾತನಾಡು. ಅವಳನ್ನು ನೋಡಬೇಡ'

 

ಆನಂದ ಮರುಪ್ರಶ್ನೆ ಹಾಕಿದ 'ಅವಳನ್ನು ನೋಡಿ ಮಾತನಾಡುವ ಅವಶ್ಯಕತೆ ಬಂದರೆ?'

 

'ನೋಡು. ಆದರೆ ಮುಟ್ಟಬೇಡ' ಬುದ್ಧ ಸಮಾಧಾನದಿಂದ ಹೇಳಿದ.

 

ಆನಂದನ ಸವಾಲು ಮುಂದುವರೆಯಿತು 'ಒಂದು ವೇಳೆ ಮುಟ್ಟುವ ಅವಶ್ಯಕತೆ ಬಂದರೆ?'

 

'ಮೈ ಮೇಲೆ ಎಚ್ಚರವಿರಲಿ' ಎಂದು ಹೇಳಿದ ಬುದ್ಧ ಸುಮ್ಮನಾದ. ಮುಂದೆ ಬೇರೆ ಯಾವುದೇ ನಿಯಮ ಹೇಳಲಿಲ್ಲ.

 

ಬುದ್ಧ ಎಚ್ಚರವಿರಲಿ ಎಂದು ಹೇಳಿದ್ದು ನಮ್ಮ ಮನದ ಕಾಮನೆಗಳಿಂದ. ನಮ್ಮ ಮನದಾಸೆಗಳೇ ನಮ್ಮನ್ನು ದುಃಖಕ್ಕೆ ಈಡು ಮಾಡುತ್ತವೆ ಎಂದು ಅವನಾಗಲೇ ಅರಿತಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಕೂಡ ಸಾರಿದ.

 

ಇಂದಿಗೆ ನಮ್ಮ ಸುತ್ತ ಮುತ್ತಲಿನ ಜನಗಳನ್ನೇ ನೋಡಿ. ಬುದ್ಧನ ಮಟ್ಟಿಗೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಿನ ಎಚ್ಚರ ಹೊಂದಿರುತ್ತಾರೆ. ಎಚ್ಚರವಿರುವವರು ದುಶ್ಚಟಗಳಿಗೆ ದಾಸರಾಗುವಿದಿಲ್ಲ. ಅವಕಾಶ ಇದ್ದಾಗಲೂ ನಯವಾಗಿ ತಿರಸ್ಕರಿಸಿ  ಮುಂದೆ ಸಾಗುತ್ತಾರೆ. ಎಂತಹ ಕಷ್ಟಗಳೇ ಬರಲಿ, ಅವರು ಕೊಲೆ-ಸುಲಿಗೆಗಳಿಗೆ ಇಳಿಯುವುದಿಲ್ಲ. ಅವರನ್ನು ಕಾಯುತ್ತಿರುವುದು ಅದೇ ಎಚ್ಚರ.

 

ಅದೇ ಎಚ್ಚರ ಇರದ ಮನುಷ್ಯರನ್ನು ನೋಡಿ. ಕುಡಿತಕ್ಕೆ ದಾಸರಾಗಿರುತ್ತಾರೆ. ಜೂಜಾಟಕ್ಕೆ ಮನೆ ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ಸ್ವಾರ್ಥಕ್ಕೆ ಯಾರಿಗೆ ಬೇಕಾದರೂ ಅನ್ಯಾಯ ಮಾಡಲು ಹಿಂಜರಿಯುವುದಿಲ್ಲ. ಅವರು ಹೊರಗಡೆ ಎಷ್ಟೇ ಸಂತೋಷದಿಂದ ಇರುವಂತೆ ಕಂಡರೂ ಅದು ತೋರಿಕೆಯದ್ದಾಗಿರುತ್ತದೆ. ಏಕೆಂದರೆ ಸಂತೋಷದಿಂದ ಇರುವವನು ಇನ್ನೊಬ್ಬರಿಗೆ ಅನ್ಯಾಯ ಮಾಡಲು ಹೊರಡುವುದಿಲ್ಲ. ಮನದಲ್ಲಿ ಸಮಾಧಾನ ಇಲ್ಲದವನು ಮಾತ್ರ ಇನ್ನೊಬ್ಬರ ತಂಟೆಗೆ ಹೋಗಲು ಸಾಧ್ಯ.

 

ಎಚ್ಚರದ ಸಾಮರ್ಥ್ಯ ನಮ್ಮ ನಿಮ್ಮಲ್ಲಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಸುಖ ಸಂತೋಷಗಳು ಕೂಡ ಬೇರೆ ಬೇರೆ ಮಟ್ಟದಲ್ಲಿ ಇರುತ್ತವೆ. ಅತಿಯಾಸೆ ಪಟ್ಟವನು ಮಾತ್ರ ಹೆಚ್ಚಿನ ದುಃಖ ಹೊಂದಲು ಸಾಧ್ಯ. ಎಚ್ಚರ ವಹಿಸಿ ಆಸೆ ತೊರೆದವನಿಗೆ, ದುಃಖಗಳು ಅಷ್ಟಾಗಿ ಬಾಧಿಸುವುದಿಲ್ಲಆಸೆ ಪಡುವುದನ್ನು ಪ್ರಕೃತಿ ನಮ್ಮಲ್ಲಿ ಸಹಜ ಗುಣ ಧರ್ಮವನ್ನಾಗಿಸಿದೆ. ಆಸೆ ಪಡುವುದು ಸುಲಭ. ಅದನ್ನು ತೊರೆಯುವುದು ದುರ್ಲಭ. ಅದಕ್ಕೆ ಸಾಧಾರಣ ಮನುಷ್ಯ ಆಸೆಗಳ ತಿರುಗಣಿಗೆ ಬಿದ್ದು ಅದರ ಜೊತೆಗೆ ಬರುವ ದುಃಖಗಳನ್ನು ತಾಳಲಾರದೆ ಒದ್ದಾಡುತ್ತಾನೆ. ಅದಕ್ಕೆ ಬುದ್ಧ ಆಸೆಗಳನ್ನು ಹತೋಟಿಯಲ್ಲಿ ಇಟ್ಟುಕೋ ಎಂದ. ಎಚ್ಚರವಿರಲಿ ಎಂದು ಹೇಳಿದ.

 

ಕಷ್ಟದ ನಿರ್ಧಾರಗಳು ಬದುಕನ್ನು ಸುಲಭವಾಗಿಸುತ್ತವೆ. ಆದರೆ ಸುಲಭದ  ನಿರ್ಧಾರಗಳು ಬದುಕನ್ನು ಕಷ್ಟಮಯವನ್ನಾಗಿಸುತ್ತವೆ. ಎಚ್ಚರವಿರಲಿ ಎಂದು ಹೇಳಿದ ಬುದ್ಧ ಕಷ್ಟದ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದ. ಆಸೆಗಳನ್ನು ಗೆದ್ದ ಮೇಲೆ, ಇಲ್ಲವೇ ಅವುಗಳು ಹತೋಟಿಯಲ್ಲಿದ್ದರೆ ನಮ್ಮ ಜೀವನದಲ್ಲಿ ದುಃಖಗಳು ಕೂಡ ಅಷ್ಟೇ ದೂರದಲ್ಲಿ ಇರುತ್ತವೆ ಎನ್ನುವುದು ಅವನ ಜೀವನದ ಸಂದೇಶವಾಗಿತ್ತು.

 

ಅದಕ್ಕೆ 'ಎಚ್ಚರವಿರಲಿ' ಎನ್ನುವ ನಿಯಮ ಅಷ್ಟೇ ಸಾಕಾಗಿತ್ತು.

Thursday, November 17, 2022

Whitefield traffic woes may soften in 2023

A sleeping village got transformed into a buzzing IT hub. That is Whitefield suburb in Bangalore. Two decades ago, there were farm houses here but today 20 to 30 lakhs people come here everyday for work. It is really difficult for anyone in town planning to do justice in their jobs when the growth rate is so high.


Those who work in Whitefield come from all parts of Bangalore. Naturally the roads were clogged and traffic jams became frequent and average speed dropped to 10-15 km per hour. I am both a contributor to the traffic mess here (I worked 18 out of my 20 years here) and also a victim of lost productivity, health loss due to pollution.


Metro, if it is in Bangalore, it has to come to Whitefield. Work started here too many years ago. But the civil construction occupied half of road space which were already congested making the traffic problem even worse. My office commute time increased from 45 mins (20 years ago) to at least 2 hours in one direction. It was one of the reasons I started looking for a job elsewhere and that helped me stay away from Whitefield for 2 years. But destiny brought me back to Whitefield. Thanks to Corona, I did not have to come to office for two straight years. And now, I come 1-2 times a week.


Things don't remain the same. Civil construction work of Metro is almost complete. So roads do not have barricades bearing the name "Namma Metro", so vehicles can move on much easily. It is such a relief. And when Metro begins operations sometime in 2023, it will take many vehicles off the road. And Whitefield will become like other parts of Bangalore. There will be traffic but you are not scared to come to Whitefield.


When the peripheral ring road comes into action (don't know how many years it will take), it would reduce big trucks coming this way.


But the real change is, IT as an industry is not growing like before. It has become just another industry. New jobs being created in Whitefield won't be astronomical. And there are lots of residential spaces being constructed around Whitefield, people can live here and don't have to go back to center of the town.


All these things would mean the traffic jams in Whitefield were more likely problems of yester years and a part of memory you would not want to recall.


(Photo taken from office window at ITPL, Whitefield showing Metro line passing through and residential spaces coming up at a distance)

Tuesday, November 15, 2022

The pain will end when you’ve learned its lesson

  • Running away from issues won't solve them.
  • What you resist, persists.
  • Once you have learned the lessons, you can break patterns.
  • Be grateful and let go.


Thursday, November 10, 2022

ಆಸ್ತಿ ಎನ್ನುವ ಉರುಳು ಕಂಟಕ

ಎರಡು ವರುಷದ ಹಿಂದೆ 'ಆಸ್ತಿ ಜಗಳಗಳ ಸುತ್ತ' ಎನ್ನುವ ಕಿರು ಲೇಖನ ಬರೆದಿದ್ದೆ. ಮೂರು ತಲೆಮಾರುಗಳಕ್ಕಿಂತ ಹೆಚ್ಚಿಗೆ ಉಳಿಯದ ಆಸ್ತಿಗೆ ಬಡಿದಾಡಿ ಜನ ಹೇಗೆ ನೆಮ್ಮದಿ ಕಳೆದುಕೊಳ್ಳುತ್ತಾರೆ ಎನ್ನುವುದರ ಕುರಿತ ಲೇಖನ ಅದಾಗಿತ್ತು. (https://booksmarketsandplaces.blogspot.com/2020/01/blog-post.html). ಆಗ ಆಸ್ತಿ ಎನ್ನುವುದು ಉರುಳು ಕಂಟಕ ಎನ್ನುವ ಸ್ಪಷ್ಟತೆ ಮೂಡಿರಲಿಲ್ಲ.


ಆಸ್ತಿ ತರುವ ಅಧಿಕಾರ, ದವಲತ್ತು, ಸವಲತ್ತುಗಳು ಯಾರಿಗೆ ಬೇಡ? ಆದರೆ ಅದರ ಜೊತೆಗೆ ಆಪತ್ತುಗಳು ಕೂಡ ಬರುತ್ತವೆ. ಅದು ನಿಮ್ಮನ್ನು ನಿಮ್ಮ ಇಷ್ಟದ ಹಾಗೆ ಬದುಕಲು ಬಿಡುವುದಿಲ್ಲ. ನಿಮ್ಮವರೇ ನಿಮ್ಮಿಂದ ದೂರಾಗುತ್ತಾರೆ. ಅದುವರೆಗೆ ನಿಮ್ಮ ಮೇಲೆ ಬೀಳದ ಬೇಟೆಗಣ್ಣುಗಳು ನಿಮ್ಮ ಮೇಲೆ ಬೀಳತೊಡಗುತ್ತವೆ. ಕ್ರಮೇಣ ನೀವು ವರ್ತಿಸುವ ರೀತಿಯೇ ಬದಲಾಗಿಬಿಡುತ್ತದೆ.


ನೀವು ಶಂಕರ್ ನಾಗ್ ನಿರ್ದೇಶನದ, ಅಣ್ಣಾವ್ರು ಅಭಿನಯದ 'ಒಂದು ಮುತ್ತಿನ ಕಥೆ' ಚಿತ್ರ ನೋಡಿದ್ದೀರಾ? ಅದರಲ್ಲಿ ಸಮುದ್ರಾಳದಲಿ ಮುತ್ತು ಹುಡುಕುವ ಕಥಾ ನಾಯಕನಿಗೆ ಅಸಾಧಾರಣ ಗಾತ್ರದ, ಬೆಲೆ ಕಟ್ಟಲಾಗದ ಒಂದು ಮುತ್ತು ಸಿಗುತ್ತದೆ. ಅದರಿಂದ ತನ್ನ ಬಾಳು ಬದಲಾಗುತ್ತದೆ. ತನ್ನ ಮಗನನ್ನು ಶಾಲೆಗೆ ಕಳುಹಿಸಿ ಓದಿಸಬಹುದು ಎಂದೆಲ್ಲ ಅವನು ಕನಸು ಕಟ್ಟುತ್ತಾನೆ. ಆದರೆ ಅಲ್ಲಿಂದಲೇ ಅವನಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ. ಅದನ್ನು ಕೊಂಡುಕೊಳ್ಳಲು ವ್ಯಾಪಾರಸ್ಥರು ತಂತ್ರಗಾರಿಕೆ ಹೂಡುತ್ತಾರೆ. ಮಗನನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋದರೆ ವೈದ್ಯ ಆ ಮುತ್ತು ಕೊಡದಿದ್ದರೆ ಅವನ ಮಗನನ್ನು ಸಾಯಿಸುವುದಾಗಿ ಬೆದರಿಸುತ್ತಾನೆ. ದೇವಸ್ಥಾನ ಪೂಜಾರಿ ಮುತ್ತು ಕೊಟ್ಟರೆ ಮಾತ್ರ ಪೂಜೆ, ಇಲ್ಲದಿದ್ದರೆ ಇಲ್ಲ ಎಂದು ನಿರಾಕರಿಸುತ್ತಾನೆ. ಅಣ್ಣನ ಹಾಗೆ ಜೊತೆಗಿದ್ದವನು ಆ ಮುತ್ತು ಕದಿಯಲು ಪ್ರಯತ್ನಿಸುತ್ತಾನೆ. ಸ್ನೇಹಿತರೆಲ್ಲ ದೂರಾಗುತ್ತಾರೆ. ನಾಯಕನ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತವೆ. ಕೊನೆಗೆ ಅವನು ಆ ಮುತ್ತನ್ನು ಮತ್ತೆ ಸಮುದ್ರಕ್ಕೆ ಬೀಸಾಡಿ ಬರುವುದರೊಂದಿಗೆ ಆ ಚಿತ್ರ ಮುಗಿಯುತ್ತದೆ.


ಜಗತ್ತಿನ ಅಧಿಕಾರವೆಲ್ಲ ತನ್ನದಾಗಬೇಕು ಎಂದು ಬಯಸಿದ್ದ ಅಲೆಕ್ಸಾಂಡರ್. ಅವನು ಪರ್ಶಿಯಾದ ರಾಜನ ವಿರುದ್ಧ ಯುದ್ಧಕ್ಕೆ ಇಳಿದಾಗ, ಆ ಯುದ್ಧದಲ್ಲಿ ಎಲ್ಲರ ಕಣ್ಣು ಅಲೆಕ್ಸಾಂಡರ್ ಮೇಲೆ. ಕೆಂಪು ಶಿರಸ್ತ್ರಾಣ ಧರಿಸಿ, ಶ್ವೇತ ಕುದುರೆಯ ಬೆನ್ನೇರಿದವನ ಕಥೆ ಮುಗಿಸಲು ಎಲ್ಲ ಶತ್ರು ಸೈನಿಕರ  ಪ್ರಯತ್ನ. ಆದರೆ ಅಲೆಕ್ಸಾಂಡರ್ ತಲೆ ಕಾಯಲು ಒಂದು ದೊಡ್ಡ ಹಿಂಡೇ ಇತ್ತು. ಆ ಯುದ್ಧ ಅವನು ಗೆದ್ದರೂ, ಅವನ ಅದೃಷ್ಟ ಹಾಗೆ ಉಳಿಯುವುದಿಲ್ಲ. ಮುಂದೊಂದು ಯುದ್ಧದಲ್ಲಿ ಎದೆಗೆ ಬಿದ್ದ ಬಾಣ ಮಾಡಿದ ಗಾಯ ವಾಸಿಯಾಗದೆ ಅವನು ಅಸು ನೀಗುತ್ತಾನೆ. ಅವನ ಸೈನಿಕರಲ್ಲೇ ಪಂಗಡಗಳಾಗುತ್ತವೆ. ಅವನ ಹೆಣ ಕೂಡ ತಾಯ್ನಾಡಿಗೆ ಮರಳುವುದಿಲ್ಲ.


ಮೊಗಲ್ ದೊರೆಗಳನ್ನು ಗಮನಿಸಿ ನೋಡಿ. ಶಾಹ್ ಜಹಾನ್ ಮಗನಿಂದ ಬಂದಿಸಲ್ಪುಡುತ್ತಾನೆ. ಔರಂಗಜೇಬ್ ತನ್ನ ಸೋದರ ಸೋದರಿಯನ್ನೆಲ್ಲ ಯಮ ಪುರಿಗೆ ಅಟ್ಟುತ್ತಾನೆ. ವಿಜಯನಗರ ಸಾಮ್ರಾಜ್ಯ ಇತಿಹಾಸ ಗಮನಿಸಿ ನೋಡಿ. ಆ ರಾಜರುಗಳು ಯುದ್ಧ ಭೂಮಿಯಲ್ಲಿ ಪ್ರಾಣ ಬಿಟ್ಟದ್ದಕ್ಕಿಂತ, ಅಣ್ಣ ತಮ್ಮಂದಿರು ಹಾಕಿದ ವಿಷಕ್ಕೆ ಪ್ರಾಣ ಬಿಟ್ಟ ಪ್ರಕರಣಗಳೇ ಹೆಚ್ಚು. ಮುಂದೆ ರಾಜಾಧಿಕಾರದ ಬದಲು ಪ್ರಜಾಪ್ರಭುತ್ವ ಬಂತು. ಐದು ವರ್ಷಕ್ಕೆ ಒಮ್ಮೆ ಒಬ್ಬನಿಗೆ ರಾಜನಾಗುವ ಅವಕಾಶ. ಅದು ರಕ್ತಪಾತಗಳನ್ನು ಕಡಿಮೆ ಮಾಡಿದರೂ, ತಂತ್ರಗಾರಿಕೆ ನಿಲ್ಲಲಿಲ್ಲ. ನಮ್ಮ ಯಡಿಯೂರಪ್ಪನವರು ಎಷ್ಟು ಸಲ ಗದ್ದುಗೆ ಏರಿ ಅದನ್ನು ಕಳೆದುಕೊಂಡರು ನೆನಪಿಸಿಕೊಳ್ಳಿ.


ಇವೆಲ್ಲ ದೊಡ್ಡವರ ಕಥೆ ಆದರೆ, ನಮ್ಮಂತ ಸಾಧಾರಣ ಜನರ ಕಥೆ ಏನು ವಿಭಿನ್ನ ಅಲ್ಲ. ನಿಮಗೆ ಸ್ವಂತ ಮನೆ, ಹೊಲ, ಅಸ್ತಿ-ಪಾಸ್ತಿ ಇಲ್ಲವೇ? ನೀವು ಎಷ್ಟು ಅದೃಷ್ಟವಂತರು ಎಂದು ನಿಮಗೆ ಗೊತ್ತೇ  ಇಲ್ಲ. ನಿಮಗೆ ಇರುವ ನೆಮ್ಮದಿ ಯಾರು ಸುಲಭದಲ್ಲಿ ಕಸಿದುಕೊಳ್ಳಲು ಸಾಧ್ಯ ಇಲ್ಲ. ನೀವು ಪುಟದೊಂದು ಮನೆ ಕಟ್ಟಿಸಿಕೊಂಡಿದ್ದೀರಿ. ಆದರೆ ನಿಮ್ಮ ಸೋದರರಿಗೆ ಅದು ಸಾಧ್ಯ ಆಗಿಲ್ಲವೇ? ಆಗ ನಿಮಗೆ ಅಸೂಯೆಯ ಬಿಸಿ ತಟ್ಟುತ್ತಲೇ ಇರುತ್ತದೆ. ಅವರ-ನಿಮ್ಮ ಸಂಬಂಧದಲ್ಲಿ ವಿಶ್ವಾಸ ಸಾಧ್ಯವಿಲ್ಲ. ನಿಮ್ಮ ಬಂಧುಗಳೆಲ್ಲ ಬಡವರು ಆಗಿದ್ದು, ನೀವೊಬ್ಬರು ಮಾತ್ರ ಅನುಕೂಲಸ್ಥರು ಆಗಿದ್ದರೆ, ನಿಮ್ಮದು ರಣರಂಗದಲ್ಲಿನ ಅಲೆಕ್ಸಾಂಡರ್ ಪರಿಸ್ಥಿತಿ.


ಆಸ್ತಿ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಮೈಸೂರು ಮಹಾರಾಜರು ಮಾಡಿದ್ದ ಆಸ್ತಿ ಏನು ಕಡಿಮೆಯೇ? ಇಂದಿಗೆ ಅವರ ಕುಟುಂಬದವರು ಆ ಆಸ್ತಿ ಉಳಿಸಿಕೊಳ್ಳಲು ಮಾಡುತ್ತಿರುವ ಕಾನೂನು ಸಮರಗಳನ್ನು, ಹರ ಸಾಹಸಗಳನ್ನು ಗಮನಿಸಿ ನೋಡಿ. ಅವರು ತಮ್ಮ ಜೀವನ ಶಕ್ತಿಯನ್ನೆಲ್ಲ ಅದಕ್ಕೆ ವ್ಯಯಿಸುತ್ತಿದ್ದಾರೆ.


ಬೆಂಗಳೂರಿನಲ್ಲಿ ದೊಡ್ಡ ಆಸ್ತಿ ಮಾಡಿ ರಿಯಲ್ ಎಸ್ಟೇಟ್ ಧಂಧೆಯಲ್ಲರುವ ಜನರನ್ನು ಗಮನಿಸಿ ನೋಡಿ. ಅವರು ಎಲ್ಲಿ ಹೋದರೂ ಒಬ್ಬರೇ ಹೋಗುವುದಿಲ್ಲ. ಅವರ ಹಿಂದೇ-ಮುಂದೆ ಹುಡುಗರ ಪಡೆಯನ್ನೇ ಕಟ್ಟಿಕೊಂಡು ಬರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ಜೀವ ಹೋಗಬಹುದು ಎನ್ನುವ ಭಯ. ಅವರು ಶತ್ರುಗಳ ಕೈಯಲ್ಲಿ ಸಾಯುವುದಕ್ಕಿಂತ ತಮ್ಮ ಬಂಧುಗಳ ಹಾಕುವ ವಿಷಕ್ಕೆ ಸತ್ತು ಹೋಗುತ್ತಾರೆ. ಆ ವಿಷಯಗಳು ಖಾಸಗಿ ಆದ್ದರಿಂದ ಅವು ಎಲ್ಲೂ ಸುದ್ದಿಯಾಗುವುದಿಲ್ಲ. ಆಗ ಆಸ್ತಿಗೆ ಇನ್ನೊಬ್ಬ ಒಡೆಯ. ಅವನ ಜೀವನ ಕಾಲ ಎಷ್ಟೋ?


ಸುಮಾರು ೪.೫ ಶತಕೋಟಿ (ಬಿಲಿಯನ್) ವರ್ಷ ಇತಿಹಾಸ ಇರುವ ಭೂಮಿ, ತನಗೆ ಯಾರಾದರೂ ಒಡೆಯನು ಇದ್ದಾನೆ ಎಂದರೆ ಗಹ ಗಹಿಸಿ ನಗುತ್ತದೆ. ಅವನನ್ನು ತನ್ನಲ್ಲಿ ಲೀನವಾಗಿಸಿ ಇನ್ನೊಬ್ಬನಿಗೆ ಅವಕಾಶ ಮಾಡಿಕೊಡುತ್ತದೆ.

ಮನುಷ್ಯ ಕಲಿಯುವುದಿಲ್ಲ. ಕಲಿತ ಮನುಷ್ಯ ಆಸ್ತಿಗೆ ಆಸೆ ಪಡುವುದಿಲ್ಲ.