Friday, January 6, 2023

ರೈತ ಮತ್ತವನ ಕುದುರೆ

(ಇದು ಚೀನಾ ದೇಶದ ನೀತಿ ಕಥೆಯೊಂದರ ಭಾವಾನುವಾದ)


ಒಂದಾನೊಂದು ಕಾಲದಲ್ಲಿ ಚೀನಾ ದೇಶದಲ್ಲಿ ಒಬ್ಬ ರೈತನಿದ್ದ. ಅವನ ಕುದುರೆ ಕಳೆದು ಹೋಗಿತ್ತು. ನೆರೆ ಹೊರೆಯವರು ಬಂದು ಆ ರೈತನ ಹತ್ತಿರ 'ಎಷ್ಟು ಕೆಟ್ಟ ಸಂಗತಿ' ಎಂದು ರೈತನಿಗೆ ಹೇಳಿದರು. ರೈತ ಉತ್ತರಿಸಿದ 'ಇರಬಹುದು'.


ಕೆಲ ದಿನಗಳಿಗೆ ಕಳೆದು ಹೋಗಿದ್ದ ಕುದುರೆ ರೈತನ ಹತ್ತಿರ ವಾಪಸ್ಸಾಯಿತು. ಅದರ ಜೊತೆಗೆ ಇನ್ನು ನಾಲ್ಕು ಕಾಡು ಕುದುರೆಗಳು. ನೆರೆ ಹೊರೆಯವರು ರೈತನ ಹತ್ತಿರ ಬಂದು ಹೇಳಿದರು 'ಎಷ್ಟು ಒಳ್ಳೆಯ ಸಂಗತಿ'. ರೈತ ಉತ್ತರಿಸಿದ 'ಇರಬಹುದು'.


ಅದರ ಮರುದಿನ, ರೈತನ ಮಗ ಹೊಸದಾಗಿ ಬಂದು ಕಾಡು ಕುದುರೆಗಳನ್ನು ಪಳಗಿಸಲು ಹೋಗಿ ಕಾಲು ಮುರಿದುಕೊಂಡ. ನೆರೆ ಹೊರೆಯವರು ರೈತನ ಹತ್ತಿರ ಬಂದು ಹೇಳಿದರು 'ಎಷ್ಟು ಕೆಟ್ಟ ಸಂಗತಿ'. ರೈತ ಉತ್ತರಿಸಿದ 'ಇರಬಹುದು'.


ಅದಾಗಿ ಕೆಲ ದಿನಗಳಿಗೆ ಆ ದೇಶದಲ್ಲಿ ಯುದ್ಧ ಆರಂಭವಾಗಿ, ಸೈನ್ಯಕ್ಕೆ ಒತ್ತಾಯದಿಂದ ಭರ್ತಿ ಮಾಡಿ ಕೊಳ್ಳಲು ಸೈನ್ಯ ಅಧಿಕಾರಿಗಳು ಬಂದರು. ಅವರು ರೈತನ ಮಗನ ಕಾಲು ಮುರಿದಿದ್ದಕ್ಕೆ ಅವನನ್ನು ಕರೆದುಕೊಂಡು ಹೋಗಲಿಲ್ಲ. ನೆರೆ ಹೊರೆಯವರು ರೈತನ ಹತ್ತಿರ ಬಂದು ಹೇಳಿದರು 'ಎಷ್ಟು ಒಳ್ಳೆಯ ಸಂಗತಿ'. ರೈತ ಉತ್ತರಿಸಿದ 'ಇರಬಹುದು'.


ನೀತಿ: ಕೆಟ್ಟ ಘಟನೆಗಳು ಒಳ್ಳೆಯ ಪರಿಣಾಮಗಳನ್ನು ಬೀರಬಹುದು. ಹಾಗೆಯೆ ಒಳ್ಳೆಯ ಘಟನೆಗಳು ಕೆಟ್ಟ ಪರಿಣಾಮವನ್ನು ಕೂಡ.

No comments:

Post a Comment