Sunday, May 7, 2023

ಐಹೊಳೆ ಮತ್ತು ಪಟ್ಟದಕಲ್ಲು ದೇಗುಲ ಸಮೂಹ

೬-೮ ನೇ ಶತಮಾನದ ಅವಧಿಯಲ್ಲಿ ಬಾದಾಮಿಯ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವಸ್ಥಾನಗಳ ಸಮೂಹ ಐಹೊಳೆಯಲ್ಲಿವೆ. ಹೆಚ್ಚಿನ ದೇವಸ್ಥಾನಗಳು ಶಿವ, ವಿಷ್ಣು ಮತ್ತು ದುರ್ಗೆಯನ್ನು ಪೂಜಿಸುವ ಮಂದಿರಗಳಾದರೆ, ಜೈನ ಮಂದಿರಗಳೇನೂ ಕಡಿಮೆ ಸಂಖ್ಯೆಯಲ್ಲಿಲ್ಲ. ಒಂದು ಬುದ್ಧ ಮಂದಿರ ಕೂಡ ಇಲ್ಲಿ ಕಾಣಬಹುದು. ಇದು ಆ ಕಾಲಘಟ್ಟದಲ್ಲಿ ಮೂರು ಧರ್ಮಗಳಿಗೂ ಪ್ರಾಶಸ್ತ್ಯ ಇತ್ತು ಎನ್ನುವುದು ತೋರಿಸುತ್ತದೆ. ಬೆಟ್ಟ ಕೊರೆದು ಗುಹೆಯಲ್ಲಿ ನಿರ್ಮಿಸಿದ ಮಂದಿರಗಳು, ಬೃಹದಾಕಾರದ ಕಲ್ಲುಗಳನ್ನು ಜೋಡಿಸಿ, ಅದರಲ್ಲೇ ಮಂಟಪ, ಗೋಪುರ ಕಟ್ಟಿ, ಅವುಗಳಲ್ಲಿ ಕಲೆ ಅರಳಿಸಿದ ದೇವಸ್ಥಾನಗಳು ಮನುಷ್ಯ ೧೫೦೦ ವರುಷಗಳ ಹಿಂದೆ ಕಲ್ಲನ್ನು ಪಳಗಿಸುವ ನೈಪುಣ್ಯ ಹೊಂದಿದ್ದ ಎಂದು ತೋರಿಸುತ್ತವೆ. ವಾಸ್ತುಶಿಲ್ಪದ ಪರಿಣಿತಿ ಕೂಡ ಆ ಕಾಲದಿಂದಲೇ ಆರಂಭ.


ಬಿರು ಬಿಸಿಲಿನ ಬಯಲು ಸೀಮೆಯಲ್ಲಿ ರಾಜ್ಯ ಕಟ್ಟಿ ಮೆರೆದ ಮನೆತನಗಳು ಅನೇಕ. ಅವರಿಗೆ ಬರೀ ಅಧಿಕಾರದ ಮೇಲಷ್ಟೇ ಆಸೆ ಇರಲಿಲ್ಲ. ತಮ್ಮ ಹೆಸರು ಅಜರಾಮರ ಆಗಲಿ ಎನ್ನುವ ಹೆಬ್ಬಯಕೆ ಕೂಡ ಅಷ್ಟೇ ಬಲವಾಗಿತ್ತು. ಕೋಟೆ, ಕೆರೆ, ದೇವಸ್ಥಾನಗಳ ಕಟ್ಟಿ ಸಮಾಜಕ್ಕೆ ಹಲವಾರು ಕೊಡುಗೆ ನೀಡಿ ಮಾನವನ ಏಳಿಗೆಗೆ ಕಾರಣರಾಗುತ್ತಾ ಹೋದರು. ಆದರೆ ಅವರಂತೆ ಇನ್ನೊಬ್ಬ ರಾಜನಿಗೆ ಕೂಡ ಅದೇ ಆಸೆ ಹುಟ್ಟುತ್ತದಲ್ಲ. ಆಗ ನಡೆದದ್ದು ಯುದ್ಧ. ಐಹೊಳೆ ಬಾದಾಮಿಯ ಚಾಲುಕ್ಯರಿಂದ, ರಾಷ್ಟ್ರಕೂಟರಿಗೆ ನಂತರ ಕಲ್ಯಾಣದ ಚಾಲುಕ್ಯರಿಗೆ, ದೆಹಲಿ ಸುಲ್ತಾನರಿಗೆ, ವಿಜಯನಗರದ ಅರಸರಿಗೆ, ಬಹಮನಿ ಸಾಮ್ರಾಜ್ಯಕ್ಕೆ ಹೀಗೆ ಬೇರೆ ಬೇರೆ ರಾಜ ಮನೆತನಗಳ ಆಳ್ವಿಕೆಗೆ ಒಳ ಪಡುತ್ತಾ ಬಂತು. ಮುಸ್ಲಿಮರ ಆಳ್ವಿಕೆ ಇದ್ದಾಗ ಲಾಡ್ ಖಾನ್ ಎನ್ನುವವ ಇಲ್ಲಿ ಗುಡಿಯೊಂದರಲ್ಲಿ ನೆಲೆಸಿದ್ದ. ಆಮೇಲೆ ಅವನ ಹೆಸರೇ ಆ ಗುಡಿಗೆ ಖಾಯಂ ಆಯಿತು.


ಐಹೊಳೆಗೆ ಹೋಲಿಸಿದರೆ ಪಟ್ಟದಕಲ್ಲಿನಲ್ಲಿ ದೇವಸ್ಥಾನಗಳ ಸಂಖ್ಯೆ ಕಡಿಮೆ. ಊರ ಹೆಸರೇ ಸೂಚಿಸುವಂತೆ ಚಾಲುಕ್ಯ ಅರಸರ ಪಟ್ಟಾಬ್ಜಿಷೇಕಕ್ಕೆ ಎಂದು ಕಟ್ಟಿದ ಊರಿನಲ್ಲಿ ದೇವಸ್ಥಾನಗಳ ಸಂಖ್ಯೆ ಕಾಲ ಕ್ರಮೇಣ ಹೆಚ್ಚುತ್ತಾ ಹೋಯಿತು. ವಿಶೇಷ ಎಂದರೆ ಇಲ್ಲಿನ ಕೆಲವು ದೇವಸ್ಥಾನಗಳನ್ನು ಕಟ್ಟಿಸಿದ್ದು ರಾಣಿಯರು. ಅದು ತಮ್ಮ ಗಂಡನ ವಿಜಯೋತ್ಸವಗಳ ನೆನಪಿಗಾಗಿ. ರಾಜ ಯುದ್ಧ ಮಾಡುವುದರಲ್ಲಿ ಗಮನ ಕೊಟ್ಟರೆ, ರಾಣಿಯರು ದೇವಸ್ಥಾನ ಕಟ್ಟುವ ಹೊಣೆ ಹೊತ್ತರೆನೋ? ಇಮ್ಮಡಿ ಪುಲಿಕೇಶೀ, ವಿಕ್ರಮಾದಿತ್ಯ ರಂತ ಚಾಲುಕ್ಯ ಮನೆತನದ ಅರಸರು ಗೆದ್ದ ಯುದ್ಧಗಳೇನು ಕಡಿಮೆಯೇ?


ಧರ್ಮ, ಇತಿಹಾಸ, ವಾಸ್ತುಶಿಲ್ಪ ಇವುಗಳಲ್ಲಿ ನಿಮಗೆ ಒಂದರಲ್ಲಿ ಆಸಕ್ತಿ ಇದ್ದರೂ ಸಾಕು. ಐಹೊಳೆ, ಪಟ್ಟದಕಲ್ಲು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಸಂದೇಹವಿಲ್ಲ.

Saturday, May 6, 2023

ಬಸವನಿದ್ದಲ್ಲಿ ಕಲ್ಯಾಣ

ಬಸವಣ್ಣವನವರು ತಾವು ಹುಟ್ಟಿದ ಕಾಲಮಾನದಲ್ಲಿ ಇದ್ದ ವಿಚಾರಗಳಿಗಿಂತ ಆಧುನಿಕತೆ ಹೊಂದಿದ್ದವರು. ಅನುಭವ ಮಂಟಪ ಆಗಲಿ, ಅಂತರ್ಜಾತಿ ವಿವಾಹಗಳೇ ಆಗಲಿ, ಲಿಂಗಾಯತ ಧರ್ಮವನ್ನು ಹುಟ್ಟಿ ಹಾಕಿದ್ದೆ ಆಗಲಿ, ತಾವು ವಚನಗಳನ್ನು ರಚಿಸುವುದಲ್ಲದೆ ಹಲವಾರು ಶರಣರಿಗೆ ವಚನ ರಚಿಸುವ ಪ್ರೋತ್ಸಾಹ ನೀಡಿ ಕನ್ನಡ ವಚನ ಸಾಹಿತ್ಯ ಸಮೃದ್ಧಿ ಇಷ್ಟೆಲ್ಲಾ ಕಾರ್ಯಗಳು ಜರುಗುವುದಕ್ಕೆ ಕಾರಣ ಆದರು. ಸನಾತನ ಧರ್ಮದ ಆಚಾರ-ವಿಚಾರಗಳನ್ನು ತಿರಸ್ಕರಿಸಿ 'ಕಾಯಕವೇ ಕೈಲಾಸ' ಎಂದು ಸಾರಿದರು. ಅವರ ಸಮಾಜ ಸುಧಾರಣೆ ಕಾರ್ಯಗಳನ್ನು ಅರಸೊತ್ತಿಗೆ ಒಪ್ಪದಿದ್ದಾಗ ಬಿಜ್ಜಳನ ರಾಜಧಾನಿಯನ್ನು ಬಿಟ್ಟು ಹೊರ ನಡೆದರು. ಕಲ್ಯಾಣದಲ್ಲಿ ಬಸವನಿಲ್ಲದಿದ್ದರೇನಂತೆ? ಬಸವನಿದ್ದಲ್ಲಿ ಕಲ್ಯಾಣ ಅಲ್ಲವೇ?


ಬಸವಣ್ಣವರ ಜೀವನ ದುರಂತ ಅಂತ್ಯ ಕಂಡರೂ, ಅವರು ಕಟ್ಟಿದ ಲಿಂಗಾಯತ ಧರ್ಮ ಬೆಳೆದು ಹೆಮ್ಮರ ಆಯಿತು. ಇಂದಿಗೂ ಪ್ರತಿಯೊಂದು ಲಿಂಗಾಯತ ಕುಟುಂಬದಲ್ಲಿ ಬಸವ ನಾಮಧೇಯರಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನಕ್ಕೆ ಕೂಡಲ ಸಂಗನ ಒಲಿಸಿಕೊಳ್ಳುವ ಪರಿ ಗೊತ್ತು?


ನೀವು ಬಸವಣ್ಣನನ್ನು ಮೆಚ್ಚುವವರು ಆಗಿದ್ದರೆ, ಬಾಗೇವಾಡಿಯಿಂದ ಶುರು ಮಾಡಿ, ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಅಲೆದು ಕೊನೆಯಲ್ಲಿ ಅವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಕಾಲ ಕಳೆದು ನೋಡಿ. ಅಲ್ಲಿ ದೇವಸ್ಥಾನದ ಪ್ರಾಂಗಣದ ಕಟ್ಟೆಗಳ ಮೇಲೋ ಇಲ್ಲವೇ ಹೊಳೆಯ ದಡದಲ್ಲೋ ನಿಮಗೆ ಬಸವಣ್ಣನವರ ದರ್ಶನವಾದಂತೆ ಅನಿಸುತ್ತದೆ. ಬಸವ ಎನ್ನುವ ಭಕರ ಧ್ವನಿಯಿಂದ, ಹೃದಯ ಮುಟ್ಟುವ  ವಚನಗಳ ಅರ್ಥಗಳ ಮೂಲಕ  ಬಸವಣ್ಣನವರು ನಿಮಗೆ ಒಲಿಯುತ್ತಾರೆ. ಅವರಿಗೆ ಕೂಡಲ ಸಂಗಮ ಒಲಿದ ಹಾಗೆ.

Tuesday, May 2, 2023

Ajay Piramal and Art & science of buying & selling businesses

There are multiple ways to invest in the equity market. Value Investing like Buffett, Growth investing like multiple investors picking small cap stocks and waiting for them to become large cap stocks. Many outsource it to fund managers by buying mutual fund units. Some just buy index funds. Few become co-investors with PE firms. Few take higher risks by investing into start-ups.

 

There is another way of investing which does not get discussed in the mainstream media. It is just following the entrepreneur. Had you believed in Narayana Murthy and Azim Premji thirty years ago and invested your money in the businesses they managed, what would be the returns on your investment? How about blindly following Elon Musk and put your money in Tesla early in the game? Just think about it. You would have earned handsome money and beaten the broader market.

 

I follow Ajay Piramal for similar reasons. I have invested in the businesses he manages because of him. His capital allocation skills are excellent. But he is well known for acquiring businesses, scaling them up and exiting at a premium. He did that with a pharma business. Now he is on his way to scaling his NBFC business. The earlier years of getting into lending business were more of learning years. Just providing wholesale loans to real estate developers was not profitable. In fact, he had to incur losses when the Covid had hit real estate industry hard. He had to de risk his business. Buying the bankrupt DHFL helped his firm to diversify into granular, low ticket retail loans. And he has built a team of professionals to manage the growth. Going by their loan book size, they are way bigger than many regional banks. Their eyes are set on getting a banking license, though it may take several years before they get one.

 

Knowing the person at the helm gives me confidence to invest in his business. It is my conviction, and I could go wrong if Ajay Piramal does not see success in the coming years. This is not an investment advice but sharing my conviction. Every business will have challenges but if you believe in the ability of the person at the top to overcome and make money, it is better I handover my money to him. I have just done that.




Monday, April 24, 2023

ಯಾರೇ ಕೂಗಾಡಲಿ, ರಾಜಣ್ಣ ನಿನಗೆ ಸಾಟಿಯಿಲ್ಲ

ಮುತ್ತತ್ತಿರಾಯನ ಆಶೀರ್ವಾದದಿಂದ ಮುತ್ತುರಾಜನಾಗಿ ಹುಟ್ಟಿ, ಹೊಟ್ಟೆಪಾಡಿಗೆ ನಾಟಕ ಕಂಪನಿ ಸೇರಿ, ನಂತರ ಸಿನೆಮಾದಲ್ಲಿ ರಾಜಕುಮಾರನಾಗಿ ಪರಿಚಯವಾಗಿ, 'ಬೇಡರ ಕಣ್ಣಪ್ಪ' ನಿಂದ 'ಜೀವನ ಚೈತ್ರ' ದವರೆಗೆ ಕನ್ನಡ ಚಿತ್ರರಂಗದ ಅನಭಿಷಕ್ತ ರಾಜನಾಗಿ ಮೆರೆದ ಅಣ್ಣಾವ್ರ ಜೀವನಗಾಥೆ ಕೂಡ ಅಷ್ಟೇ ಆಸಕ್ತಿದಾಯಕವಾದದ್ದು.


ರಾಜಕುಮಾರ ಅಂದರೆ ಕೇವಲ ನಟನಲ್ಲ. 'ನಾನಿರುವುದೇ  ನಿಮಗಾಗಿ' ಹಾಡಿನ ಮೂಲಕ ಕನ್ನಡದ ಮೊದಲ ರಾಜ ಮಯೂರವರ್ಮನ ಪಾತ್ರಕ್ಕೆ ಜೀವ ತುಂಬಿದ ವ್ಯಕ್ತಿಯನ್ನು ಕೇವಲ ನಟ ಎಂದು ಹೇಗೆ ಕರೆಯುವುದು? 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ ನಮ್ಮಲ್ಲಿ ಅಭಿಮಾನ ಮೂಡಿಸುವುದು ಕೇವಲ ನಟನಿಂದ ಸಾಧ್ಯವೇ? ಭಕ್ತಿ ಪ್ರಧಾನ ಚಿತ್ರಗಳಿಂದ ಬಾಂಡ್ ಚಿತ್ರಗಳವೆರೆಗೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ರಾಜಕುಮಾರ್ ಕನ್ನಡಿಗರ ಆರಾಧ್ಯ ದೈವವಾಗಿ ಬದಲಾದದ್ದು ಅವರ ವಿನಯದಿಂದ ಮತ್ತು ಅಗಾಧ ಪ್ರತಿಭೆಯಿಂದ.


'ಯಾರೇ ಕೂಗಾಡಲಿ, ಎಮ್ಮೆ ನಿನಗೆ ಸಾಟಿಯಿಲ್ಲ', 'ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ', 'ಚಿನ್ನದ ಗೊಂಬೆಯಲ್ಲ, ದಂತದ ಗೊಂಬೆಯಲ್ಲ' ಹೀಗೆ ಅವರ ನೂರಾರು ಹಾಡುಗಳು ಅಂದಿಗೂ, ಇಂದಿಗೂ ಮನರಂಜಿಸುವುದಲ್ಲದೆ ಬದುಕಿನ ದ್ವಂದ್ವಗಳಿಗೆ ಸಲಹೆ ನೀಡುವ ಸಂಗಾತಿಯಾಗುತ್ತವೆ. ಅದಕ್ಕೆ ಏನೋ, ಅವರು ಕಾಲವಾದರೂ ಮತ್ತೆ ರಾಜಣ್ಣ ನೆನಪಾಗುವುದು ಅವರ ಹಾಡುಗಳ ಮೂಲಕ ಮತ್ತು ಅವರ ಸಂಭಾಷಣೆಗಳ ಮೂಲಕ.


ಹೊಸ ಪೀಳಿಗೆ ರಾಜಣ್ಣ ಗೊತ್ತಿಲ್ಲ. ಆದರೆ ಹಿಂದಿನ ೨-೩ ಪೀಳಿಗೆಗಳಿಗೆ ರಾಜಣ್ಣ ಒಂದು ಆದರ್ಶಮಯ ಮತ್ತು ನೈತಿಕತೆ ಎತ್ತಿ ಹಿಡಿಯುವ ಜೀವನದ ಮಾರ್ಗ ತೋರಿಸಿದರು. ಅವರು ಚಿ, ಉದಯಶಂಕರ್ ಅವರ ಜೊತೆ ನಡೆಸಿದ ಸಂಭಾಷಣೆ ಇಲ್ಲಿದೆ. ಕೇಳಿ ನೋಡಿ.


https://fb.watch/k5WNUoQPTv/


Friday, April 21, 2023

ನೋವು ಮರೆತ ಸ್ಪಷ್ಟ ಗುರುತು

ಕೆಲ ವರುಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿ, ಮಧ್ಯಾಹ್ನದ ಹೊತ್ತಿಗೆ ಒಂದು NGO ಕಡೆಯಿಂದ ಒಂದು ಪ್ರಸ್ತುತಿ ಇದೆ ಎಂದು ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಿದರು. ಅದು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜವಾಬ್ದಾರಿಯಿಂದ ಚಲಾಯಿಸುವುದು ಮತ್ತು ರಸ್ತೆಯಲ್ಲಿ ಇರುವ ಇತರರ ಮೇಲೆ ಸಹಾನುಭೂತಿ ತೋರಿಸುವುದು ಅದರ ಕುರಿತಾಗಿತ್ತು. ನಮ್ಮ ಸಹೋದ್ಯೋಗಿಯೊಬ್ಬ ಅವರಿಗೆ ಪ್ರಶ್ನೆ ಕೇಳಿಯೇ ಬಿಟ್ಟ 'ನಿಮಗೇಕೆ ಇದರಲ್ಲಿ ಆಸಕ್ತಿ?' ಅವರು ಸಮಾಧಾನದಿಂದ ಉತ್ತರಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅವರ ಮಗಳ ಮೇಲೆ ಒಬ್ಬ ಲಾರಿ ಹತ್ತಿಸಿ ಸಹಾಯಕ್ಕೆ ನಿಲ್ಲದೆ ಹೋಗಿದ್ದ. ಬೇರೆಯವರು ಗಮನಿಸುವದಷ್ಟರಲ್ಲಿ ಅವಳು ತೀವ್ರ ರಕ್ತಸಾವ್ರದಿಂದ ಅಸು ನೀಗಿದ್ದಳು. ಅದನ್ನು ಆತ ನಮಗೆ ಯಾವುದೇ ನೋವಿಲ್ಲದೆ ವಿವರಿಸಿದ್ದ. ಮತ್ತು ಆ ಘಟನೆ ಒಂದು NGO ಸ್ಥಾಪನೆಗೆ ಕಾರಣ ಆಯಿತು ಎಂದು ವಿವರಿಸಿದ್ದ.


ಯಾರೇ ಆಗಲಿ, ತೀವ್ರ ನೋವಿಗೆ ಒಳಪಟ್ಟಾಗ ಖಿನ್ನತೆಗೆ ಒಳಗಾಗುತ್ತಾರೆ. ಅದು ತಮಗೆ ಏಕೆ ಆಯಿತು ಎನ್ನುವ ಪ್ರಶ್ನೆ ಮತ್ತೆ ಹಾಕಿಕೊಳ್ಳುತ್ತಾರೆ. 'ಸಾವಿರದ ಮನೆಯಿಂದ ಸಾಸಿವೆ ತಾ' ಎಂದ ಬುದ್ಧ ಅದು ಎಲ್ಲರಿಗೆ ಸಹಜ ಎನ್ನುವ ಮನವರಿಕೆ ಮಾಡಿಕೊಟ್ಟದ್ದನಲ್ಲವೇ? ಹಾಗೆಯೆ ಆ ನೋವನ್ನು ಭರಿಸುವ ಶಕ್ತಿ ಮನಸ್ಸಿಗೆ ಬಂದಾಗ ಅದು ಬೇರೆಯ ತರಹದ ವಿಚಾರಗಳನ್ನು ಮಾಡಲು ತೊಡಗುತ್ತದೆ. ಅದರಿಂದ ತಾವು ಕಲಿಯಬೇಕಾದ್ದು ಏನು ಎನ್ನುವ ಪ್ರಶ್ನೆ ಅವರಿಗೆ ಖಿನ್ನತೆಯಿಂದ ಹೊರ ಬರುವಂತೆ ಮಾಡುತ್ತದೆ. ಆ ತರಹ ಇನ್ನೊಬ್ಬರಿಗೆ ಆಗಬಾರದು ಎಂದರೆ ಏನು ಮಾಡಬೇಕು ಅನ್ನುವ ದಿಕ್ಕಿನಲ್ಲಿ ಕೆಲಸ ಪ್ರಾರಂಭಿಸುವದರೊಂದಿಗೆ ಆ ದುಃಖ ಬಹತೇಕ ಮರೆಯಾಗಿಬಿಡುತ್ತದೆ. ಅದು ನೋವು ಮರೆತ ಸ್ಪಷ್ಟ ಗುರುತು.


ಲೋಕ ಕಲ್ಯಾಣ ಮಾಡಿದ ಜನರ ಜೀವನ ಗಮನಿಸಿ ನೋಡಿ. ಅವರು ಮಠ ಕಟ್ಟಿದ್ದು, ಕೆರೆ ಕಟ್ಟಿದ್ದು ಜನ ಹಿತಕ್ಕಾಗಿ ಎಂದು ಮೇಲ್ನೋಟಕ್ಕೆ ಅನಿಸಿದರೂ, ಅದು ಅವರು ತಮ್ಮ ನೋವು ಮರೆಯುವ ಪ್ರಕ್ರಿಯೆಯ ಕೊನೆಯ ಹಂತ ಆಗಿರುತ್ತದೆ. ಯಾವುದೇ ನೋವು ತಿನ್ನದ ಮನುಷ್ಯ ಸ್ವಾರ್ಥಿಯಾಗಿ ಬಾಳುವ ಸಾಧ್ಯತೆ ಹೆಚ್ಚು. ಆದರೆ ತಾಯಿಯನ್ನು ವೈದ್ಯಕೀಯ ಚಿಕಿತ್ಸೆ ಇಲ್ಲದೆ ಕಳೆದುಕೊಂಡ ಮನುಷ್ಯ, ತಮ್ಮೂರಿನಲ್ಲೆಯೇ ಹೊಸ ಆಸ್ಪತ್ರೆ ಕಟ್ಟಿಸಲು ಹೊರಡುತ್ತಾನೆ. ತಾನು ಕಲಿತುಕೊಂಡ ವಿಷಯಗಳನ್ನು ಇತರ ಒಳಿತಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಅನಾಥರಾಗಿ ಬೆಳೆದವರು ಅನಾಥಾಶ್ರಮ ಕಟ್ಟಲು ಮುಂದಾಗುತ್ತಾರೆ. ಸಮಾಜದಿಂದ ತುಳಿತಕ್ಕೆ ಒಳಗಾದವರು, ಅದನ್ನು ತಮ್ಮದೇ ದಾರಿಯಲ್ಲಿ ತಡೆಗಟ್ಟುವ ಗಾಂಧಿ, ಅಂಬೇಡ್ಕರ್ ಆಗುತ್ತಾರೆ.


ಅದನ್ನು ಅವರು ಬರೀ ಸಮಾಜ ಸೇವೆಗೆಂದು ಮಾಡಿದರು ಎಂದುಕೊಳ್ಳಬೇಡಿ. ಮನಶಾಸ್ತ್ರದ ಪ್ರಕಾರ ಅದು ಅವರ ತಮ್ಮ ಆಂತರಿಕ ದಳ್ಳುರಿ ಶಮನ ಮಾಡಿಕೊಳ್ಳುವ ಪ್ರಕ್ರಿಯೆಯ ಒಂದು ಭಾಗ ಆಗಿತ್ತು ಅಷ್ಟೇ. ಅದು ಚಿಕ್ಕ ವಯಸ್ಸಿನಲ್ಲಿ ನೋವುಂಡ ಮನುಷ್ಯ ಮುಂದೆ ದೊಡ್ಡ ಸಾಧಕ ಆಗಲು ನೆರವಾಗುತ್ತದೆ. ಆದರೆ ನೋವುಗಳು ಕೊನೆ ವಯಸ್ಸಿನಲ್ಲಿ ಬಂದರೆ ಅವುಗಳು ಸಾವು ಬೇಗ ತಂದುಕೊಳ್ಳುವ ಸಾಧನ ಅಷ್ಟೇ.


ಯಾವುದೇ ಸಮಾಜ ಸುಧಾರಕ ನೋವು ನೋಡುತ್ತಾ ಸುಮ್ಮನೆ ಕೂಡುವುದಿಲ್ಲ. ಬುದ್ಧ ಜ್ಞಾನಿಯಾದ ಮೇಲೆ ಒಂದು ಮೂಲೆಯಲ್ಲಿ ಕುಳಿತು ಧ್ಯಾನ ಮಾಡುವ ಬದಲು ಅಲೆದಾಡುತ್ತ ಜನರ ಅಜ್ಞಾನ ಕಳೆಯುವ ಪ್ರಯತ್ನ ಮಾಡಿದ. ತನ್ನ ಹುಡುಕಾಟದ ನೋವು ಇತರರಿಗೆ ಆಗದೆ ಇರಲಿ ಎಂದು ತಾನು ತಿಳಿದುಕೊಂಡಿದ್ದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿದ. ಅದು ಅವನು ತನ್ನ ನೋವು ಮರೆತ ಸ್ಪಷ್ಟ ಗುರುತು ಆಗಿತ್ತು.