Friday, October 29, 2021

ಆಡಿಸಿ ನೋಡು, ಬೀಳಿಸಿ ನೋಡು, ಒಡೆಯದೆ ಬಿಡದು

ಲವವಿಕೆಯ ಅಪ್ಪು ಇನ್ನಿಲ್ಲ ಎಂದರೆ ಅದು ಬೇಸರಕ್ಕೂ ಮೀರಿದ ನೋವಿನ ಸಂಗತಿ. ದೈವದಾಟವೋ, ವಿಧಿಯ ಬರಹವೋ, ರಾಜಕುಮಾರನೆಂಬ ಗೊಂಬೆ ಉರುಳಿ ಬಿದ್ದು ಒಡೆದು ಹೋಗಿದೆ. 'ವಸಂತ ಗೀತ', 'ಎರಡು ನಕ್ಷತ್ರಗಳು', 'ಯಾರಿವನು?', 'ಭಕ್ತ ಪ್ರಹ್ಲಾದ', 'ಚಲಿಸುವ ಮೋಡಗಳು', 'ಹೊಸ ಬೆಳಕು' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಪ್ಪು ವನ್ನು ನೋಡುತ್ತಾ ಬೆಳೆದ ನನಗೆ, ಅಪ್ಪು ಒಬ್ಬ ನಟನಲ್ಲ, ಬದಲಿಗೆ ಕನ್ನಡ ಚಲನಚಿತ್ರರಂಗ ಪರಂಪರೆಯ ಒಂದು ಭಾಗ. 'ಬೆಟ್ಟದ ಹೂ' ಇಷ್ಟು ಬೇಗ ಬಾಡಿ ಹೋಗಬಾರದಿತ್ತು ಎಂದು ನಮಗೆ ಅನ್ನಿಸಿದರೂ, ಆಡಿಸುವಾತನ ಕರೆಗೆ ಯಾರು ಇಲ್ಲವೆನ್ನಲಾಗದು ಎನ್ನುವ ಸತ್ಯ ಅಪ್ಪು ನಮಗೆ ನೆನಪಿಸಿ ಹೋಗಿದ್ದಾರೆ. ಆತನಿಗೊಂದು ಭಾವಪೂರ್ಣ ಶೃದ್ಧಾಂಜಲಿ.


'ಕತ್ತಲಲ್ಲಿ ನ್ಯಾಯವಿಟ್ಟನು, 

ನಮ್ಮ ಶಿವ ಕಣ್ಣುಗಳ ಕಟ್ಟಿಬಿಟ್ಟನು

  

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು'




No comments:

Post a Comment