Friday, May 14, 2021

ವೈಪರೀತ್ಯಗಳ ಸಮಯ

ಚಾರ್ಲ್ಸ್ ಡಿಕನ್ಸ್ ಬರೆದ 'A Tale of Two Cities ' ಕಾದಂಬರಿಯ ಮೊದಲ ಕೆಲವು ಸಾಲುಗಳನ್ನು ತುಂಬಾ ಸಲ ಮತ್ತೆ ಮತ್ತೆ ಓದಿಕೊಂಡಿದ್ದೇನೆ. ಪ್ರಸ್ತುತ ಸಮಯಕ್ಕೆ ಅದು ತುಂಬಾ ಹೊಂದಿಕೊಳ್ಳುತ್ತದೆ ಕೂಡ. ಅದನ್ನು ನಿಮಗೂ ಓದಿಸಬೇಕೆನ್ನುವ ಆಸೆಯಿಂದ ಅದರ ಅನುವಾದದ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಹಾಗೆ ಅದರ 'Original' ಅನ್ನು ಕೂಡ ಕೊಟ್ಟಿದ್ದೇನೆ.
"ಅದು ಅತ್ಯುತ್ತಮವಾದ ಕಾಲ, ಅದು ಅತ್ಯಂತ ಕೆಟ್ಟ ಕಾಲ. ಅದು ವಿವೇಕತನದ ಸಮಯ, ಅದು ಕಡು ಮೂರ್ಖತನದ ಸಮಯ. ಅದು ನಂಬಿಕೆಯ ಯುಗ, ಅದು ಸದಾ ಸಂದೇಹ ಪಡುವ ಯುಗ. ಅದು ಬೆಳಕಿನ ಸಮಯ, ಅದು ಕಗ್ಗತ್ತಲಿನ ಸಮಯ. ಅದು ಭರವಸೆ ತರುವ ವಸಂತ, ಅದು ಹತಾಶೆ ತರುವ ಚಳಿಗಾಲ. ನಮ್ಮ ಮುಂದೆ ಎಲ್ಲ ಇದೆ, ನಮ್ಮ ಮುಂದೆ ಏನೂ ಇಲ್ಲ. ನಾವೆಲ್ಲರೂ ಸೀದಾ ಸ್ವರ್ಗಕ್ಕೆ ಹೋಗುತ್ತಿದ್ದೇವೆ, ನಾವೆಲ್ಲರೂ ಅದನ್ನು ಬಿಟ್ಟು ಇರುವ ಇನ್ನೊಂದು ಜಾಗಕ್ಕೆ ಹೋಗುತ್ತಿದ್ದೇವೆ"

"It was the best of times, it was the worst of times. It was the age of wisdom, it was the age of foolishness. It was the epoch of belief, it was the epoch of incredulity. It was the season of Light, it was the season Darkness. It was the spring of hope, it was the winter of despair. We had everything before us, we had nothing before us. We were all going direct to Heaven, we were all going direct the other way."

Wednesday, May 12, 2021

Reconstructing History: The Siege of Krishnapur

Ninety years before India got freedom, in 1857, many dramatic events led to ‘Sepoy Mutiny’. With struggle and losses, East India Company managed to quell the storm of rebellion. That story is reconstructed in this book and is told from the perspective of a company official (District Collector) and his companions.

Though it is conveniently called a work of fiction, it is a well-researched book based on facts collected through letters, dairies of East India Company officials of that time and other communications and journals. The city of Kanpur became a fictional town Krishnapur in this book. This book brings to life the culture, lifestyle of the British ruling in India during colonial times. Since this is a British version of the story, native Indians may find many perspectives mentioned in this book a bit unpleasant.

While the British were biased in believing that they had the right to rule India, the natives disagreed with them on many fronts and the suppression led to the spark of rebellion. Though the British were successful in regaining the control, the mutiny firmly led to a new beginning.

This book was awarded Booker Prize in 1973. Author J.G.Farrell produced three books which dealt with political consequences of British colonial rule.









Salman Rushdie: For those who love magic of a language

Even for Salman Rushdie’s fans, his books are hard to read and digest but they enchant and hook them up. While his non-fictional works appear rational, his fictions are very different. He employs ‘Magical Realism’, a style where-in protagonists of his plots have unnatural powers and he mixes up the characters from the real world with imaginary one’s. So, an ordinary reader would find it difficult to make sense of what he is reading. Well, Salman Rushdie is no ordinary writer. The reader should not pick his books like any other regular novel. If one can keep away the common notions, a finer world unravels.

Here is an excerpt from “Midnight’s Children”:

Unless, of course, there’s no such thing as chance; in which case Musa – for all his age and servility – was nothing less than a time-bomb, ticking away softly until his appointed time; in which case, we should either – optimistically – get up and cheer, because if everything is planned in advance, then we all have a meaning, and are spared of the terror of knowing ourselves to be random, without a why; or else, of course, we might – as pessimists – give up right here and now, understanding the futility of thought decision action, since nothing we think makes any difference any way; things will be as they will.




Sunday, May 9, 2021

ಪ್ರಕೃತಿಯ ಪ್ರತಿರೂಪವೇ ತಾಯಿ

ಆಗ ತಾನೇ ಹುಟ್ಟಿದ ಕರುವನ್ನು ನೆಕ್ಕುತ್ತ ಸ್ವಚ್ಛಗೊಳಿಸುವ ಹಸು, ಪ್ರಸವದ ನಂತರ ತನ್ನ ಮರಿಯನ್ನು ಹಿಂಗಾಲಿನಿಂದ ಒದ್ದು ಎಬ್ಬಿಸಿ ಸುರಕ್ಷಿತ ತಾಣಕ್ಕೆ ಕರೆದೊಯ್ಯುವ ಜಿರಾಫೆ, ಚೂಪಾದ ಹಲ್ಲಿದ್ದರೂ, ನೋವಾಗದಂತೆ ಮರಿಯನ್ನು ಬಾಯಲ್ಲಿ ಹಿಡಿದು ಬೇರೆ ಸ್ಥಳಕ್ಕೆ ಸಾಗಿಸುವ ಹುಲಿ, ಮೊಟ್ಟೆ ಒಡೆದು ಹೊರಬರುವವರೆಗೆ ದಿನಗಟ್ಟಲೆ ಕಾಯುವ ಮೊಸಳೆ, ಹುಳುಗಳನ್ನು ಹೆಕ್ಕಿ ತಂದು ಗೂಡಲ್ಲಿರುವ ಮರಿಗಳಿಗೆ ತಿನ್ನಿಸುವ ಪಕ್ಷಿಗಳು, ಮಕ್ಕಳ ಸಂತೋಷವನ್ನೇ ತಮ್ಮ ಸಂತೋಷವನ್ನಾಗಿ ಮಾಡಿಕೊಂಡ ನಮ್ಮ ನಿಮ್ಮೆಲ್ಲರ ತಾಯಂದಿರು ಇವರೆಲ್ಲ ಪ್ರಾಣಿ-ಪಕ್ಷಿ-ಮನುಷ್ಯ ಸಂತತಿಯ ಮುಂದುವರಿಕೆಯಲ್ಲಿ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

 

ಪ್ರಾಯ ಬಂದಾಗ, ಹಾರ್ಮೋನ್ ಬದಲಾವಣೆ ಮಾಡಿ ಸಂಗಾತಿಯನ್ನು ಹುಡುಕುವಂತೆ ಪ್ರೇರೇಪಿಸುವ ಪ್ರಕೃತಿ, ಹೊಸ ಪೀಳಿಗೆಯ ರಕ್ಷಣೆ-ಪೋಷಣೆಗೆ ತಾಯಿಯನ್ನು ಮಗುವಿನ ಜೊತೆಗೆ ಭಾವನೆಯ ಬಂಧದಲ್ಲಿ ಬಿಗಿಯುತ್ತದೆ. ತಾಯಿ ಪ್ರೀತಿಯನ್ನು ಪ್ರಕೃತಿ ಹುಟ್ಟಿಸಿದಿದ್ದರೆ ಹೊಸ ಪೀಳಿಗೆ ಉಳಿಯುವದಂತು? ಹಾಗಾಗಿ ತನ್ನದೇ ಪ್ರತಿರೂಪವನ್ನು ಪ್ರಕೃತಿ ತಾಯಿಯಲ್ಲಿ ಸೃಷ್ಟಿಸಿತು. ಹಾಗೆ ನೋಡಿದರೆ ಪ್ರತಿ ಹೆಣ್ಣಿನಲ್ಲೂ ಒಬ್ಬ ತಾಯಿ ಇರುತ್ತಾಳೆ. ತಮ್ಮಂದಿರ ಬೇಕು-ಬೇಡಗಳನ್ನು ತಾಯಿಯಷ್ಟೇ ಸೂಕ್ಷ್ಮವಾಗಿ ಗ್ರಹಿಸಬಲ್ಲ ಅಕ್ಕಂದಿರು, ಶಾಲೆಯಲ್ಲಿ ಪ್ರೀತಿಯಿಂದಲೇ ತಿದ್ದುವ ಶಿಕ್ಷಕರು ಹೀಗೆ ಪ್ರತಿಯೊಂದು ಹೆಣ್ಣಿನಲ್ಲಿ ತಾಯಿಯ ಭಾವ ಜಾಗೃತವಾಗಿರುತ್ತದೆ. ಅದು ಮನುಷ್ಯರಲ್ಲಷ್ಟೇ ಅಲ್ಲ. ಆನೆ ಹಿಂಡಿನಲ್ಲಿ ತಾಯಿಯಷ್ಟೇ ಕಾಳಜಿ ವಹಿಸುವ ಇತರೆ ಹೆಣ್ಣು ಆನೆಗಳು ಇರುತ್ತವೆ. ಕೋತಿ, ಗೊರಿಲ್ಲಾ ದಂತಹ ಸಂಘ ಜೀವಿಗಳು ಗುಂಪಲ್ಲಿರುವ ಮರಿಗಳನ್ನೆಲ್ಲ ಒಟ್ಟಿಗೆ ಬೆಳೆಸುತ್ತವೆ.

 

ಪ್ರಾಣಿ ಸಂಕುಲಕ್ಕೂ, ಮನುಷ್ಯರಿಗೂ ಇರುವ ವ್ಯತ್ಯಾಸ ಎಂದರೆ ತಾಯಿ ಪ್ರಾಣಿಗಳು, ತಮ್ಮ ಮರಿಗಳು ದೊಡ್ಡವರಾದ ಮೇಲೆ ತಮ್ಮ ಭಾವನೆಯನ್ನು ಕಡಿದುಕೊಂಡು ಮುಂದೆ ಸಾಗುತ್ತವೆ. ಆದರೆ ಮನುಷ್ಯರಲ್ಲಿ, ಜನ್ಮ ಕೊಟ್ಟ ತಾಯಿ ದೇವಕಿಗಾಗಲಿ, ಬೆಳೆಸಿದ ತಾಯಿ ಯಶೋದೆಗಾಗಲಿ ತಮ್ಮ ಮಕ್ಕಳು ಎಷ್ಟು ದೊಡ್ಡವರಾದರು ಪ್ರೀತಿ ಕರಗುವುದೇ ಇಲ್ಲ. ಕೆಲವೊಂದು ಸಲ ಅದು ಅತಿಯಾದದ್ದು ಉಂಟು. ಕುರುಡು ಪ್ರೇಮದ ತಾಯಿ ರಾಮಾಯಣಕ್ಕೆ ಕಾರಣವಾದರೆ, ಮಹತ್ವಾಕಾಂಕ್ಷೆ ಉಳ್ಳ ತಾಯಂದಿರು ಮಹಾಭಾರತಕ್ಕೆ ಕಾರಣರಾದರು. ಹಾಗೆಯೆ ಅದು ಹಲವು ಒಳ್ಳೆಯ ಬದಲಾವಣೆಗೂ ದಾರಿಯಾಗಿದೆ. ಛತ್ರಪತಿ ಶಿವಾಜಿ ಒಬ್ಬ ಸಾಹಸಿ ಆಗುವುದಕ್ಕೆ ಕಾರಣ ಆತನ ತಾಯಿಯೇ.

 

ಹೀಗೆ ಇತಿಹಾಸದ ಉದ್ದಕ್ಕೂ ತಾಯಿಯ ಪಾತ್ರ, ಅವರ ನಿಸ್ವಾರ್ಥ ಪ್ರೀತಿ, ಹೊಸ ಪೀಳಿಗೆಗಳನ್ನು ಪೋಷಿಸುವ ಅವರ ಆರೈಕೆಯ ಗುಣ, ಜಗತ್ತಿನಲ್ಲಿ ಜೀವ ಸಂಕುಲ ಮುಂದುವರೆಯಲು ಕಾರಣವಾಗಿದೆ. ಎಲ್ಲ ತಾಯಂದಿರಿಗೂ ಮತ್ತು ತಾಯಿ ಮನಸ್ಸಿನ ಸಹೃದಿಯಿಗಳಿಗೂ ನಮನ.

Saturday, May 1, 2021

ಆಸೆಬುರುಕರಿಗೆ ಅವಕಾಶ ಕೊಟ್ಟಿದ್ದು ನಾವೇ

೧೭೫೭ ನೇ ವರ್ಷದ ಜೂನ್ ತಿಂಗಳು. ವ್ಯಾಪಾರಕ್ಕೆಂದು ಕಲ್ಕತ್ತೆಗೆ ಬಂದಿಳಿದ ಬ್ರಿಟಿಷರು, ಕೋಟೆ ಕಟ್ಟಿ, ಯುದ್ಧ ಸಾಮಗ್ರಿ ಸಂಗ್ರಹಿಸುವುದನ್ನು ವಿರೋಧಿಸಿದ್ದು ಅಂದಿನ ಬಂಗಾಳದ ನವಾಬ ಸಿರಾಜುದ್ದೌಲ. ಬ್ರಿಟಿಷರು ಅಲ್ಲಿ ಸ್ವ-ರಕ್ಷಣೆಯ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ ಎಂದಿದ್ದು ನವಾಬನಿಗೆ ಸಮಂಜಸ ಅನ್ನಿಸಲಿಲ್ಲ. ಆಗ ನವಾಬನಿನ್ನು ಬಿಸಿ ರಕ್ತದ ಯುವಕ. ಯಾವುದೇ ಯುದ್ಧ ಗೆಲ್ಲಬಲ್ಲನೆಂಬ ಧೈರ್ಯ ಮತ್ತು ತಾಕತ್ತು ಅವನಿಗಿತ್ತು. ಆದರೆ ಇರದೇ ಇದ್ದದ್ದು  ಅನುಭವ ಮತ್ತು ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದೆಂಬ ಎಂಬ ಅಂದಾಜು. ಇತ್ತ ಬ್ರಿಟಿಷರ ಮುಂದಾಳತ್ವ ವಹಿಸಿದ್ದು ರಾಬರ್ಟ್ ಕ್ಲೈವ್. ಶ್ರೀಮಂತಿಕೆ, ಅಧಿಕಾರದ ಹಂಬಲದ ಹೊತ್ತು ಭಾರತಕ್ಕೆ ಬಂದವನು. ಲೂಟಿ ಹೊಡೆದ್ದರಲ್ಲಿ ತನಗೂ ಒಂದು ಪಾಲು ಇದೆ ಎನ್ನುವ ಮನಸ್ಥಿತಿ ಇದ್ದವನು.


ಪರಸ್ಪರರ ಅಸಮಾಧಾನ ಯುದ್ಧಕ್ಕೆ ಬಂದು ತಲುಪಲು ಹೆಚ್ಚು ಸಮಯ ಬೇಕಿರಲಿಲ್ಲ. ಹೂಗ್ಲಿ ನದಿಯ ದಡದಲ್ಲಿ, ಪ್ಲಾಸ್ಸಿ ಎನ್ನುವ ಸ್ಥಳದಲ್ಲಿ ಇಬ್ಬರು ಮುಖಾಮುಖಿಯಾದರು. ನವಾಬನದೊ ದೊಡ್ಡ ಸೈನ್ಯ. ೩೫,೦೦೦ ಜನ ಕಾಲಾಳುಗಳು, ೧೫,೦೦೦ ಕುದುರೆ ಸವಾರರು, ೫೩ ಫಿರಂಗಿಗಳೊಡನೆ ಬ್ರಿಟಿಷರ ನಾಶಕ್ಕಾಗಿ ಬಂದಿದ್ದ ನವಾಬ. ಬ್ರಿಟಿಷರ ಸೈನ್ಯದಲ್ಲಿದ್ದು ಮೂರು ಸಾವಿರ ಜನ ಮಾತ್ರ. ಆದರೂ ಯುದ್ಧ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದ್ದ ರಾಬರ್ಟ್ ಕ್ಲೈವ್ ದುರ್ಮಾರ್ಗಗಳನ್ನು ಹುಡುಕತೊಡಗಿದ್ದ. ನವಾಬನ ಸೈನ್ಯಾಧಿಕಾರಿಯಲ್ಲೊಬ್ಬನಾದ ಮಿರ್ ಜಾಫರ್ ಗೆ ನವಾಬನನ್ನಾಗಿ ಮಾಡುವ ಆಸೆ ತೋರಿಸಿ ಸೆಳೆದೇಬಿಟ್ಟ. ಒಂದು ವೇಳೆ ಮಿರ್ ಜಾಫರ್ ಕೊನೆ ಕ್ಷಣದಲ್ಲಿ ಹಿಂಜರಿದರೆ, ಯುದ್ಧ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದದ್ದರಿಂದ ನವಾಬನ ಜೊತೆ ಸಂಧಾನ ಮಾಡಿಕೊಂಡರಾಯಿತು ಎಂದು ಯೋಚಿಸಿದ್ದ ರಾಬರ್ಟ್ ಕ್ಲೈವ್. 


ಯುದ್ಧರಂಗದಲ್ಲಿ ಮುಖಾಮುಖಿಯಾದ ಸ್ವಲ್ಪ ಹೊತ್ತಿಗೆ ಮಿರ್ ಜಾಫರ್ ನ ಜೊತೆಗಿದ್ದ ದೊಡ್ಡ ಸೈನ್ಯ ಯುದ್ಧದಲ್ಲಿ ಪಾಲ್ಗೊಳದೇ ಹಿಂದಿರುಗಿತು. ಆಗ ಉಂಟಾದ ಗೊಂದಲ ಯುದ್ಧಕ್ಕೆ ಸನ್ನದ್ದರಾದವನ್ನು ಕೂಡ ಗಾಬರಿಗೊಳಿಸಿತು. ಬ್ರಿಟಿಷರ ಫಿರಂಗಿಗಳನ್ನು ಎದುರಿಸಿ ಹೋರಾಡುತ್ತಿದ್ದವರೂ ಕೂಡ, ಯುದ್ಧ ಬಿಟ್ಟು ಕಾಲ್ಕಿತ್ತರು. ನವಾಬನ ಸೈನ್ಯದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಬ್ರಿಟಿಷರಲ್ಲಿ ಆಗಿದ್ದು ೨೨ ಪ್ರಾಣ ಹಾನಿ ಮಾತ್ರ. ಒಂದು ನಿರ್ಣಾಯಕ ಯುದ್ಧವನ್ನು ಮೊದಲ ಬಾರಿಗೆ  ಸುಲಭದಲ್ಲಿ ಗೆದ್ದಿತ್ತು ಬ್ರಿಟಿಷ್ ಮೂಲದ ಈಸ್ಟ್ ಇಂಡಿಯಾ ಕಂಪನಿ. ಹಾಗೆಯೇ ಮಿರ್ ಜಾಫರ್ ನವಾಬನಾದರೂ, ತಾನು ಬ್ರಿಟಿಷರ ಕೈಗೊಂಬೆ ಎನ್ನುವುದು ಅರಿವಾಗಲು ತಡವಾಗಲಿಲ್ಲ.


ಅಲ್ಲಿಯವರೆಗೆ ವ್ಯಾಪಾರ ತರುವ ಲಾಭವನ್ನೇ ನೆಚ್ಚಿಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ ಯುದ್ಧ ಮಾಡುವುದು, ರಾಜ್ಯಭಾರ ಮಾಡುವುದು ಹೆಚ್ಚು ಲಾಭದಾಯಕ ಎನ್ನುವುದು ಕಂಡುಕೊಂಡಿತು. ಕ್ರಮೇಣವಾಗಿ ಇಡೀ ಭಾರತವನ್ನೇ ಆಳುವ ಅವರ ಯೋಜನೆಗೆ ಅಡಿಪಾಯ ಹಾಕಿದ್ದು ರಾಬರ್ಟ್ ಕ್ಲೈವ್ ಎನ್ನುವ ಲೂಟಿಕೋರ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮಾತ್ರ ನಮ್ಮ ಅರಾಜಕತೆ, ಒಳ-ಜಗಳ, ಸಮರ್ಥವಲ್ಲದ ಯುದ್ಧ ಕೌಶಲಗಳು, ದೊಡ್ಡ ಸಂಖ್ಯೆಯಲ್ಲಿದ್ದರೂ ಶಿಸ್ತಿರದ ಸೇನೆ, ಫಿರಂಗಿ-ಬಂದೂಕುಗಳನ್ನು ಭರ್ಚಿ ಹಿಡಿದು ಎದುರಿಸುವ ದಡ್ಡತನ.


ನಮ್ಮ ಮೂರ್ಖತನವನ್ನೇ ಬಂಡವಾಳ ಮಾಡಿಕೊಂಡು ಬ್ರಿಟಿಷರು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದು ಇತಿಹಾಸ. ಶಾಲಾ ಪುಸ್ತಕಗಳಲ್ಲಿ ಸಿಗದಂತಹ ಹಲವಾರು ಮಾಹಿತಿಗಳನ್ನು ನಾನು ಓದಿ ತಿಳಿದುಕೊಂಡಿದ್ದು 'The Anarchy'  ಎನ್ನುವ ಪುಸ್ತಕದ ಮೂಲಕ.