Sunday, January 28, 2024

One Sunday Morning

Distance covered: 75 km in 3 hours

Places: Manchanabele, Savanadurga


Tippagondanahalli Reservoir

Anjaneya waiting for his mask to be removed

Savana Durga 





Let's go!

Manchanabele Reservoir 

Savana Durga 

Thursday, January 4, 2024

ಆಶಾವಾದಿಯ ಕನಸುಗಳು ಮತ್ತು ನಿರಾಶಾವಾದಿಯ ಹತಾಶೆಗಳು

ಯಾವುದೇ ರಾಜಕಾರಣಿಯ ಭಾಷಣ ಕೇಳಿ ನೋಡಿ. ಅವರು ನಿಮಗೆ ಭವಿಷ್ಯದ ಕನಸು ಕಟ್ಟಿ ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಸ್ವಲ್ಪ ಜಾಣತನ ತೋರಿದರು ಸಾಕು. ಮುಂದೆ ಅವರು ದೊಡ್ಡ ಮನುಷ್ಯರಾಗುವ ಕನಸು ನೀವೇ ಕಾಣತೊಡಗುತ್ತೀರಿ. ಭರವಸೆ ಹುಟ್ಟಿಸುವ ಯಾವುದೇ ಕೆಲಸಗಾರನ ಭವಿಷ್ಯದ ಅಂದಾಜು ಎಲ್ಲರಿಗೂ ಮನವರಿಕೆ ಆಗಿರುತ್ತದೆ. ಮನುಷ್ಯ ಎಂತಹ ಸೋಮಾರಿಯೇ ಆಗಿರಲಿ ಅವನು ಕನಸು ಕಾಣದೆ ಇರಲಾರ. ಅದು ಆಶಾವಾದಿಯ ಜಗತ್ತು.


ಒಂದು ಕಾಲದಲ್ಲಿ ಕನಸು ಕಂಡು ಆದರೆ ಕೈ ಸುಟ್ಟುಕೊಂಡು ನಿರಾಶಾವಾದಿಯಾಗಿ ಬದಲಾಗಿರುತ್ತಾರಲ್ಲ. ಅವರಿಗೆ ಯಾವುದರಲ್ಲೂ ಭರವಸೆ ಇರುವುದಿಲ್ಲ. ಅವರದ್ದು ಬರೀ ಹತಾಶೆಯ ಮಾತುಗಳು. ನಮ್ಮ ದೇಶ ಬದಲಾಗೋದಿಲ್ಲ ಬಿಡಿ ಅನ್ನುತ್ತಾ ಇರುತ್ತಾರೆ. ಭಾರತದ ಉಪಗ್ರಹ ಚಂದ್ರನ ಮೇಲೆ ಇಳಿದದ್ದು ಅವರಿಗೆ ಸಾಧನೆ ಎನಿಸುವುದಿಲ್ಲ.ಸಂತೆ ವ್ಯಾಪಾರಕ್ಕೆ ಸ್ಮಾರ್ಟ್ ಫೋನ್ ಬಳಕೆಯಾಗುವುದು ಅವರಿಗೆ ಪ್ರಗತಿ ಎನಿಸುವುದಿಲ್ಲ. 'ಏನೇ ಆಗಲಿ ನಮ್ಮ ದೇಶದ ಕಥೆ ಇಷ್ಟೇ ಬಿಡಿ' ಎಂದೇ ಅವರು ಹೇಳುವುದು. ದೇಶದ ಕಥೆ ಹೇಗೆಯೇ ಇರಲಿ ನಿರಾಶಾವಾದಿಗಳ ಕಥೆ ಮಾತ್ರ ಅಲ್ಲಿಯೇ ಉಳಿದಿರುತ್ತದೆ.


ವಿಚಾರ ಮಾಡಿ ನೋಡಿ. ಒಂದು ವಯಸ್ಸಿನವರೆಗೆ (ಸುಮಾರು ೧೬-೧೮ ವರುಷದವರೆಗೆ)  ಮನುಷ್ಯ ಆಶಾವಾದಿಯಾಗಿದ್ದರೆ ತೊಂದರೆ ಏನಿಲ್ಲ. ಆದರೆ ಮುಂದೆಯೂ ಅವನು ವಿಪರೀತ ಕನಸುಗಾರನಾದರೆ, ಅವನಿಗೆ ಜೀವನ ಪೆಟ್ಟು ಕೊಡದೆ ಬಿಡುವುದಿಲ್ಲ. ನಿರಾಶಾವಾದಿಗಳ ಎಚ್ಚರಿಕೆ ಸ್ವಭಾವ ಅವರನ್ನು ಮತ್ತೆ ಎಡವದಂತೆ ಕಾಯುತ್ತದೆ. ಆದರೆ ಸಂಪೂರ್ಣ ಆಶಾವಾದಿಗಳು ಅಪಾಯಗಳನ್ನು ನಿರ್ಲಕ್ಷಿಸುವ ಸ್ವಭಾವ ಹೊಂದಿರುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ಮುಂದೆ ನಾವು ದೊಡ್ಡ ಮನುಷ್ಯರಾಗಬೇಕು ನಿಜ ಆದರೆ ಇಂದಿಗೆ ನಾವು ಎಚ್ಚರಿಕೆಯಿಂದ ಕೂಡ ಇರಬೇಕಾದದ್ದು ಅವಶ್ಯಕ ಅಲ್ಲವೇ?


ಸಂಪೂರ್ಣ ಆಶಾವಾದಿಯಾಗದೆ ಅಥವಾ ನಿರಾಶಾವಾದಿಯಾಗದೆ, ಎರಡರ ನಡುವಿನ ವಾಸ್ತವವಾದಿಯಾಗಿ ನೋಡಿ. ಅವನಿಗೆ ಜಗತ್ತು ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗುತ್ತದೆ. ಅವನಿಗೆ ಆಶಾವಾದಿಗೆ ಕಾಣುವ ಅವಕಾಶಗಳು ಮತ್ತು ನಿರಾಶಾವಾದಿಗೆ  ಕಾಣುವ ಅಪಾಯಗಳು ಎರಡು ಗೋಚರಿಸುತ್ತವೆ. ಅವನು ಸಮತೋಲನದಿಂದ, ಸಮಚಿತ್ತದಿಂದ ವರ್ತಿಸುತ್ತಾನೆ. ಅಪಾಯ ಗೊತ್ತಿರದ ಆಶಾವಾದಿ ಮತ್ತು ಪ್ರಯತ್ನ ನಿಲ್ಲಿಸಿರುವ ನಿರಾಶಾವಾದಿಗಿಂತ ಹೆಚ್ಚಿನ ಸಾಧನೆ ವಾಸ್ತವವಾದಿಯದ್ದಾಗಿರುತ್ತದೆ.


ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಕಾಂಕ್ಷಿಗಳು ಆಶಾವಾದಿಗಳಾಗಿದ್ದರು. ಅಪಾಯಗಳು ಅವರು ಮೈ ಮರೆತ ಕ್ಷಣಗಳಲ್ಲಿ ಅವರನ್ನು ಸಣ್ಣ ಯುದ್ಧಗಳಲ್ಲಿ ಅಳಿಸಿ ಹಾಕಿದವು. ನೆಪೋಲಿಯನ್ ವಾಟರ್ಲೂ ಕಾಳಗದಲ್ಲಿ ಸೋತ ಹಾಗೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯವನ್ನು ಐದು ಸಣ್ಣ ರಾಜ್ಯಗಳು ಒಟ್ಟಿಗೆ ಸೇರಿ ಸೋಲಿಸಿದ ಹಾಗೆ. ಹಾಗೆಯೆ ನಿರಾಶಾವಾದಿಗಳು ಯಾವ ಚರಿತ್ರೆಯ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಅವರು ಸಾಧಿಸುವ ಕೆಲಸಗಳಿಗೆ ಕೈ ಹಾಕಲೇ ಇಲ್ಲ.


ವಾಸ್ತವವಾದಿಗಳ ಉದಾಹರಣೆ ಕೊಡಿ ಎಂದು ಕೇಳಲೇಬೇಡಿ. ಅವರು ಎಲ್ಲೆಲ್ಲೂ ಇದ್ದಾರೆ. ಉದಾಹರಣೆಗೆ ನಿಮ್ಮ ಬ್ಯಾಂಕ್ ಮ್ಯಾನೇಜರ್. ಅವನು ಸಾಲ ಕೊಡುವ ಮುನ್ನ ನಿಮ್ಮ ಸಾಲ ವಾಪಸ್ಸು ಕೊಡುವ ತಾಕತ್ತು ಅಳೆಯುತ್ತಾನೆ. ಅವನು ನಿಮ್ಮ ಕನಸುಗಳಿಗಿಂತ ವಾಸ್ತವಕ್ಕೆ ಬೆಲೆ ಕೊಡುತ್ತಾನೆ. ನವ ಭಾರತ ಕಟ್ಟಿದ ಗಾಂಧಿ-ನೆಹರು-ಪಟೇಲ್ ವಾಸ್ತವವಾದಿಗಳಾಗಿದ್ದರು. ಅವರು ಭಾರತಕ್ಕೆ ಸ್ವತಂತ್ರ ತರುವ ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರುವಂತೆ ನೋಡಿಕೊಂಡರು. ಬಹುಕಾಲ ಬಾಳಿದ ಯಾವುದೇ ಸಂಘ-ಸಂಸ್ಥೆ, ಇಲ್ಲವೇ ದೇಶಗಳನ್ನೇ ಗಮನಿಸಿ ನೋಡಿ. ಅವುಗಳನ್ನು ವಾಸ್ತವವಾದಿಗಳೇ ಕಟ್ಟಿರುತ್ತಾರೆ. ಯುದ್ಧ ಮಾಡಿ ನಿರಾಶನಾದ ಸಾಮ್ರಾಟ್ ಅಶೋಕ, ಸಮಾಜ ಪ್ರಗತಿಗೆ ಪ್ರಯತ್ನ ಮಾಡುವ ಆಶಾವಾದಿಯೂ ಆಗಿದ್ದ. ಎಲ್ಲವನ್ನು ಹಿಂದೆ ಬಿಟ್ಟು ನಡೆದ ಬುದ್ಧ, ಶಾಂತಿ ಸಂದೇಶ ಸಾರುವ ಆಶಾವಾದಿಯೂ ಆಗಿದ್ದ. ಅದರ ಫಲ ಎಷ್ಟು ಜನ ಪಡೆದುಕೊಂಡರು ಎಂದು ವಿಚಾರ ಮಾಡದೆ ಇರುವ ನಿರಾಶಾವಾದಿಯೂ ಆಗಿದ್ದ.


ಆಶಾವಾದಿಗಳ ಪ್ರಯತ್ನ, ನಿರಾಶಾವಾದಿಗಳ ಎಚ್ಚರಿಕೆ ಈ ಎರಡರ ಸಮ್ಮಿಶ್ರಣ ಬದುಕನ್ನು ಸುಲಭವಾಗಿಸುತ್ತದೆ. ಅವುಗಳು ವಾಹನದಲ್ಲಿ ಆಕ್ಸಿಲರೇಟರ್ ಮತ್ತು ಬ್ರೆಕ್ ಎರಡರನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಂಡು ಮುಂದೆ ಸಾಗಿದ ಹಾಗೆ. ಕನಸುಗಳ ಜೊತೆಗೆ ಅಪಾಯಗಳನ್ನು ಸರಿದೂಗಿಸಿಕೊಂಡು ಹೋಗುವ ವಾಸ್ತವವಾದಿಗಳು ನಾವಾಗಬೇಕಲ್ಲವೇ? ನೀವು ಏನಂತೀರಿ?

Saturday, December 23, 2023

ಸಂಖ್ಯೆಗಳು, ಕಥೆಗಳು ಮತ್ತು ಭಾವನೆಗಳು

ನೀವು ಶಾಲೆ ಕಲಿಯುತ್ತಿದ್ದಾಗ ಗಣಿತದ ಸೂತ್ರಗಳನ್ನು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳನ್ನು ನೆನಪಿಟ್ಟುಕೊಳ್ಳಲು ಶ್ರಮ ಪಡುತ್ತಿದ್ರಿ. ಆದರೆ ಅಜ್ಜಿ ಹೇಳಿದ ಕಥೆಗಳು, ರಾಗವಾಗಿ ಹಾಡಲು ಕಲಿತ ಪದಗಳು, ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದ ತಮಾಷೆಯ ಮಾತುಗಳನ್ನು ನೆನಪಿಟ್ಟುಕೊಳ್ಳಲು ನಿಮಗೆ ಯಾವುದೇ ಶ್ರಮ ಬೇಕಿದ್ದಿರಲಿಲ್ಲ. ಹತ್ತಾರು ವರುಷಗಳ ನಂತರ ಸಿಕ್ಕ ಸ್ನೇಹಿತನೊಡನೆ, ಹಿಂದೆ ನೀವು  ಅವನನ್ನು ಗೇಲಿ ಮಾಡಿದ್ದು ಮತ್ತೆ ನೆನಪಿಸಿಕೊಂಡು ನಗಬಲ್ಲರಿ. ಆದರೆ ಆದರೆ ನಿಮಗೆ ನಾಲ್ಕನೇ ಕ್ಲಾಸಿನಲ್ಲಿ ಬಂದ ಅಂಕಗಳನ್ನು ನೆನಪಿಸಿಕೊಳ್ಳಲು ಕಷ್ಟ. ಯಾಕೆ ಹೀಗೆ ಎಂದು ಯೋಚಿಸಿದ್ದೀರಾ?

ಮನುಷ್ಯ ರೂಪುಗೊಂಡಿದ್ದೆ ಹಾಗೆ. ಲಕ್ಷಾಂತರ ವರುಷಗಳ ಹಿಂದೆ ಮನುಜ ಆದಿವಾಸಿಯಾಗಿ ಬದುಕುತ್ತಿದ್ದಾಗ ಅವನಿಗೆ ಭಾಷೆ, ಅಂಕೆ-ಸಂಖ್ಯೆಗಳ ಅರಿವಿರಲಿಲ್ಲ. ಅದು ಅವನಿಗೆ ಬೇಕಾಗಿದ್ದು ಇಲ್ಲ. ಆದರೆ ಅವನು ಕಾಡಿನಲ್ಲಿ ನೋಡಿದ ಪ್ರಾಣಿಗಳ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತುತ್ತಿದ್ದ. ಕ್ರಮೇಣ ಅದು ಚಿತ್ರಕಲೆಯಾಗಿ ಬದಲಾಗಿತು. ಅವನ ಹೆಂಡತಿ ಮಗುವಿಗೆ ಬರಿ ಗುನುಗುತ್ತ ಜೋಗುಳ ಹಾಡುತ್ತಿದ್ದಳು. ಮುಂದೆ ಅವುಗಳು ಹಾಡುಗಳಾಗಿ ಬದಲಾದವು. ಮನುಷ್ಯರ ಗುಂಪು ದೊಡ್ಡದಾದಂತೆಲ್ಲ ಅವರಿಗೆ ಕೇವಲ ಸಂಜ್ಞೆಗಳು ಸಾಕಾಗದೆ ಭಾಷೆಯ ಅವಶ್ಯಕತೆ ಮೂಡಿತು. ಆಡು ಭಾಷೆಗೆ ಲಿಪಿ ಮೂಡಲು ಇನ್ನು ಕೆಲವು ಸಾವಿರ ವರುಷಗಳೇ ಕಳೆದವು. ವಸ್ತುಗಳ ಬದಲಾವಣೆಗೆ, ವ್ಯಾಪಾರಕ್ಕೆ ಅನುಕೂಲವಾಗಲು ಅವನಿಗೆ ಸಂಖ್ಯೆಗಳ ಅವಶ್ಯಕತೆ ಮೂಡಿತು. ಬರೀ ಕೈ ಬೆರಳುಗಳ ಎಣಿಕೆ ಸಾಕಾಗದೆ ಸೊನ್ನೆಯನ್ನು ಸಂಖ್ಯಾ ಪದ್ದತಿಗೆ ಸೇರಿಸಿದರು. ಪ್ರಕೃತಿ ವಿಕಾಸದಲ್ಲಿ ಕೊನೆಗೆ ಬಂದದ್ದು ಸಂಖ್ಯೆ. ಹಾಗಾಗಿ ಮಾನವನ ಮೆದುಳು ಭಾಷೆಯನ್ನು ಸಲೀಸಾಗಿ ಕಲಿಯುವಷ್ಟು ಸಂಖ್ಯೆಗಳನ್ನು ಗ್ರಹಿಸುವುದಿಲ್ಲ. ಹಾಗೆಯೆ ಭಾಷೆಗಿಂತ ಮೊದಲು ಮನುಷ್ಯ ಹಾವ-ಭಾವಗಳನ್ನು ಉಪಯೋಗಿಸಿ ವ್ಯವಹರಿಸುತ್ತಿದ್ದ. ಅದಕ್ಕೆ ಮನುಷ್ಯನ ಮುಖದ ಮೇಲೆ ಮೂಡುವ ಎಷ್ಟೋ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತ ಪಡಿಸುವುದು ಕಷ್ಟ. ಅದಕ್ಕೆ ನೋಡಿ. ಎಂತಹ ಕಷ್ಟದ ವಿಷಯವೇ ಇರಲಿ, ಚಿತ್ರ ಬಿಡಿಸಿ ತೋರಿಸಿ ಅಥವಾ ಅಭಿನಯಿಸಿ ತೋರಿಸಿ. ಹೆಚ್ಚಿನ ವಿವರಣೆ ಕೊಡದೆ ನೀವು ಇನ್ನೊಬ್ಬರಿಗೆ ಸುಲಭದಲ್ಲಿ ವಿಷಯ ಅರ್ಥ ಮಾಡಿಸಬಹುದು.

ಕನ್ನಡ ನಾಡಿನ ಮೊದಲ ದೊರೆ ಮಯೂರ ವರ್ಮನ ಬಗ್ಗೆ ಜನ ಓದಿ ತಿಳಿದುಕೊಂಡಿದ್ದಕ್ಕಿಂತ ಚಲನಚಿತ್ರ ನೋಡಿ ಅರಿತವರೇ ಹೆಚ್ಚು. ಏಕೆಂದರೆ ಕಾದಂಬರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಚಲನಚಿತ್ರಗಳು ಸಾಧಾರಣ ಮನುಷ್ಯನಲ್ಲಿ ಭಾವಾವೇಶಗಳನ್ನು ಮೂಡಿಸುತ್ತವೆ. ಚಿತ್ರ ನೋಡಿ ಬಂದ ಜನಕ್ಕೆ ಮಯೂರ ವರ್ಮ ಯಾವ ಶತಮಾನದಲ್ಲಿ ಬದುಕಿದ್ದ ಎನ್ನುವ ವಿಷಯ ಗಮನಕ್ಕೆ ಬಾರದೆ ಹೋಗುತ್ತದೆ. ಆದರೆ ಮಯೂರನಿಗೆ ಬೀಳುತ್ತಿದ್ದ ಕನಸುಗಳು, ಅವನಲ್ಲಿ ಮೂಡುವ ರೋಷ, ಅವನ ಶೌರ್ಯ ಮತ್ತು 'ನಾನಿರುವುದೇ ನಿಮಗಾಗಿ' ಎನ್ನುವ ಹಾಡು ಅವರಿಗೆ ಮರೆಯಲು ಸಾಧ್ಯವೇ ಆಗುವುದಿಲ್ಲ. ಇದು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತವಲ್ಲ.

ಟೈಟಾನಿಕ್ ಚಿತ್ರ ನೆನಪಿಸಿಕೊಳ್ಳಿ. ಅದರಲ್ಲಿ ಲಕ್ಷಾಂತರ ಬೆಲೆ ಬಾಳುವ ಹಡಗು ಮುಳುಗಿ ಹೋಗುತ್ತದೆ. ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಚಿತ್ರ ನೋಡಿದ ಜನರಿಗೆ ನೆನಪಿನಲ್ಲಿ ಉಳಿಯುವುದು ನಾಯಕ-ನಾಯಕಿಯ ನಡುವಿನ ಪ್ರೀತಿ. ಮತ್ತು ಅದು ದುಃಖಾಂತ ಕಾಣುವ ರೀತಿ. ಅದು ಜನರ ಮನಸ್ಸಿನೊಳಗೆ ಇಳಿದಷ್ಟು ಬೇರೆ ವಿಷಯಗಳು ಇಳಿಯುವುದಿಲ್ಲ.

ಅಂಕೆ-ಸಂಖ್ಯೆಗಳಿಗೆ ಖಂಡಿತ ಮಹತ್ವ ಇದೆ. ಆದರೆ ಅದನ್ನು ಕಥೆಯ ರೂಪದಲ್ಲಿ ಹೇಳದೆ ಹೋದರೆ ಅದನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವುದು ಜನರಿಗೆ ಕಷ್ಟ. ಮತ್ತು ಕಥೆಯನ್ನು ನೀವು ಎಷ್ಟು ಪರಿಣಾಮಕಾರಿಯಾಗಿ ಹೇಳುತ್ತೀರೋ, ಅದು ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ನಾಟುತ್ತದೋ ಎನ್ನುವುದು ಆ ಕಥೆ ಹುಟ್ಟಿಸುವ ಭಾವನೆಗಳ ಮೇಲೆ ಅವಲಂಬಿತ ಆಗಿರುತ್ತದೆ. ಜನರ ಮನಸ್ಸಿನಲ್ಲಿ ಭಾವನೆಗಳನ್ನು ಹುಟ್ಟಿಸದ ಕಥೆ ಅಲ್ಪಾಯುಷಿ. ಹಾಗೆಯೇ ರಾಮಾಯಣ, ಮಹಾಭಾರತಗಳು ಚಿರಂಜೀವಿಗಳಾಗಿರುವುದಕ್ಕೆ ಕಾರಣ ಅವು ಹುಟ್ಟಿಸುವ ವಿಚಾರ ಮತ್ತು ಭಾವನೆಗಳು.

ಅಂಕೆ-ಸಂಖ್ಯೆ ಗಳಲ್ಲಿ ನುರಿತವರು ವ್ಯಾಪಾರಿಗಳಾದರು, ಶ್ರೀಮಂತರಾದರು ಹಾಗೆಯೆ ಸುಲಭದಲ್ಲಿ ಜನ ಅವರನ್ನು ಮರೆತು ಹೋದರು. ಆದರೆ ಭಾವನೆಗಳಿಗೆ ಸ್ಪಂದಿಸುವ ಬಸವಣ್ಣನವರ ವಚನಗಳು, ದಾಸರ ಪದಗಳು ಜನರ ಬಾಯಲ್ಲಿ ಚಿರಸ್ಥಾಯಿಯಾಗಿ ಉಳಿದು ಹೋದವು. ಕಾಲ ಬದಲಾದರೂ, ಭಾಷೆ, ಜೀವನಶೈಲಿ ಬದಲಾದರೂ, ಆಧುನಿಕ ಮನುಷ್ಯನ ಭಾವನೆಗಳಿಗೂ, ಆದಿವಾಸಿಯ ಮನಸ್ಸಿನ ಭಾವನೆಗಳಿಗೂ ಏನೂ ವ್ಯತ್ಯಾಸವಿಲ್ಲ. ಅವನನ್ನು ಗೆಲ್ಲಲು, ಅವನ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಾಧ್ಯ. ಮತ್ತು ಅದಕ್ಕೆ ಅಂಕೆ-ಸಂಖ್ಯೆ ಗಳಿಂತ ಕಥೆ-ಗೀತೆಗಳೇ ಸುಲಭದ ಹಾದಿ.

Tuesday, December 19, 2023

ಅಸೂಯೆ ಅತಿಯಾಸೆಯ ತಾಯಿ

ನಾನು ಚಿಕ್ಕವನಿದ್ದಾಗ (೮೦ ರ ದಶಕದಲ್ಲಿ) ಹಳ್ಳದಿಂದ, ದೂರದ ಮನೆಗಳಲ್ಲಿ ಆಳದಲ್ಲಿರುವ ನಲ್ಲಿಗಳಿಂದ ಕೊಡದಲ್ಲಿ ನೀರು ಹೊತ್ತು ತಂದ ನೆನಪಿದೆ. ಇದು ಪ್ರತಿನಿತ್ಯದ ಮನೆಯವರೆಲ್ಲರ  ಕೆಲಸವಾಗಿತ್ತು. ಬರೀ ನಮ್ಮನೆ ಅಷ್ಟೇ ಅಲ್ಲ. ಊರಲ್ಲಿರುವ ಎಲ್ಲರಿಗು ಕೊಡದಲ್ಲಿ ನೀರು ಹೊತ್ತು ತಂದರಷ್ಟೇ ಮನೆಯಲ್ಲಿ ನೀರು. ಆ ಪರಿಸ್ಥಿತಿಯಲ್ಲಿ ಹಬ್ಬ ಬಂದರೆ, ನೆಂಟರು ಬಂದರೆ ಮನೆಯಲ್ಲಿ ನೀರಿಗೇನು ಮಾಡುವುದು ಎನ್ನುವ ಚಿಂತೆ ನನ್ನ ತಾಯಿಯಾದಾಗಿರುತ್ತಿತ್ತು .

ಕಾಲ ಬದಲಾಯಿತು. ಮನೆ ಮುಂದಿನ ನಲ್ಲಿಗಳಿಗೆ ನೀರು ಬರಲಾರಂಭಿಸಿತು. ಕೆಲವರಿಗೆ ಬೋರ್ವೆಲ್ ಸೌಲಭ್ಯ. ಇನ್ನು ನೀರು ಕಡಿಮೆ ಬಿದ್ದರೆ ಟ್ಯಾಂಕರ್ ಗಳಿಂದ ನೀರು ತರಿಸಿಕೊಳ್ಳುವುದು ಕೂಡ ಈಗ ಸಾಧ್ಯ. ಗಂಡಸರಾದರೆ ಭುಜದ ಮೇಲೆ, ಹೆಂಗಸರಾದರೆ ಸೊಂಟದಲ್ಲಿ ಕೊಡ ಹೊತ್ತು ಬರುವ ನೋಟ ಈಗ ತೀರಾ ಅಪರೂಪ.

ಆಗಿನ ಕಾಲಕ್ಕೂ ಹೋಲಿಸಿ ನೋಡಿದರೆ ಈಗಿರುವ ಸೌಲಭ್ಯಗಳಿಗೆ ಅಂದಿನ ಕಾಲ ಏನು ಅಲ್ಲ. ಆದರೆ ಕೊಡದಲ್ಲಿ ನೀರು ಹೊತ್ತು ತರುವುದು ಒಂದು ಜವಾಬ್ದಾರಿ ಅಂದುಕೊಡದಿದ್ದ ನಮಗೆ ಅದು ದುಃಖದ ಸಂಗತಿ ಅಂತ ಅನಿಸಿಯೇ ಇರಲಿಲ್ಲ. ಊರ ಜನ ಕೊಡ ಹೊತ್ತು ತರುವಾಗ ನಮಗೆಲ್ಲಿಂದ ದುಃಖ? ಅದೇ ಈಗ ಯಾರಿಗಾದರೂ ಕೊಡದಲ್ಲಿ ನೀರು ಹೊತ್ತು ತನ್ನಿ ಎಂದರೆ ಅದು ತಮಗೆ ಕೊಟ್ಟ ಶಿಕ್ಷೆ ಎಂದುಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಾವೊಬ್ಬರೆ ನೀರನ್ನು ಹೊತ್ತ ತರಬೇಕಾದ ಪರಿಸ್ಥಿತಿ ಇದ್ದರೆ ಮಾತ್ರ ದುಃಖ. ಇಲ್ಲದಿದ್ದರೆ ಅದು ಸಾಮಾನ್ಯ ಅಂಶ ಅಷ್ಟೇ. ಅಲ್ಲಿ ದುಃಖ-ಸಂತೋಷ ಎರಡೂ ಇಲ್ಲ. ಇದು ಜೀವನದ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ನಿಮ್ಮ ಊರಲ್ಲಿ ಎಲ್ಲರು ಹರಿದ ಬಟ್ಟೆಗಳನ್ನು ಧರಿಸಿದರೆ ನಮಗೆ ಕೂಡ ಹರಿದ ಬಟ್ಟೆ ಧರಿಸುವದರಲ್ಲಿ ಯಾವ ಅವಮಾನ ಕೂಡ ಎನಿಸುವುದಿಲ್ಲ. ಅದೇ ಕೆಲವರು ಅಥವಾ ಸಾಕಷ್ಟು ಜನ ಒಳ್ಳೆಯ ಬಟ್ಟೆ ಧರಿಸಿದರೆ, ನಮಗೆ ಖಂಡಿತ ದುಃಖ ಅನಿಸುತ್ತದೆ. ಅವರಲ್ಲಿರುವ ವಸ್ತು ನಮ್ಮಲಿಲ್ಲ ಎನ್ನುವ ಹೋಲಿಕೆ ನಮ್ಮಲ್ಲಿ ಅಸೂಯೆ ಮೂಡಿಸುತ್ತದೆ. 

ಬೇರೆ ಯಾರ ಹತ್ತಿರವಿರದಿದ್ದ ವಸ್ತುವಿನ ಮೇಲೆ ನಮಗೆ ಆಸೆ ಮೂಡುವದೇ ಇಲ್ಲ. ಉದಾಹರಣೆಗೆ ನಮ್ಮ ಸುತ್ತ ಮುತ್ತಲಿನ ಜನ ತಮ್ಮ ಓಡಾಟಕ್ಕೆ ಪ್ರೈವೇಟ್ ಜೆಟ್ ಇಟ್ಟುಕೊಂಡಿರುವುದಿಲ್ಲ. ಆದರೆ ಅಂತಹ ಸುದ್ದಿಗಳನ್ನು ಟಿವಿ ಯಲ್ಲಿ ನೋಡಿದರೆ ಅಥವಾ ಪತ್ರಿಕೆಗಳಲ್ಲಿ ಓದಿದರೆ ಅದು ನಮಗೆ ಬೇಕು ಎನಿಸುವುದಿಲ್ಲ ಮತ್ತು ಅವರ ಮೇಲೆ ನಮಗೆ ಅಸೂಯೆ ಮೂಡುವುದಿಲ್ಲ. ಅದೇ ನಮ್ಮ ನೆರೆಯವರು ಅಥವಾ ಸಂಬಂಧಿಕರು ಒಂದು ದೊಡ್ಡ ಕಾರನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿಕೊಂಡರೆ ಆಗ ನಮ್ಮ ಪ್ರತಿಷ್ಠೆ ಭುಗಿಲೇಳುತ್ತದೆ. ಅಲ್ಲಿವರೆಗೆ ಕಾರಿನ ಆಸೆ ಇರದಿದ್ದ ನಾವುಗಳು ಅಸೂಯೆಯಿಂದ ಸಂಕಟಕ್ಕೀಡಾಗುತ್ತೇವೆ. ಹೊಸ ಆಸೆಯ ಹಿಂದೆ ಬೀಳುತ್ತೇವೆ.

ಊರ ಜನ ಕೊಡದಲ್ಲಿ ನೀರು ಹೊತ್ತು ತರುವಾಗ, ಅದೇ ಕೆಲಸ ಮಾಡಿದ ನಮಗೆ ಇರದಿದ್ದ ದುಃಖ ಈಗ ನಮ್ಮ ನೆರೆಯವರಿಗಿಂತ, ಹತ್ತಿರದ ಬಂಧುಗಳಿಗಿಂತ ಕಡಿಮೆ ಎನಿಸಿಕೊಳ್ಳುವುದು ದುಃಖ ಉಂಟು ಮಾಡುತ್ತದೆ. 'ಆಸೆಯೇ ದುಃಖದ ಮೂಲ' ಎಂದು ಹೇಳಿದ ಬುದ್ಧ, ಅಸೂಯೆ ಆಸೆಯ ತಾಯಿ ಎಂದು ಹೇಳುವುದು ಮರೆತು ಹೋದ.

ಬೇರೆಯವರಿಗಿಂತ ನಾವು ಕಡಿಮೆ ಅನಿಸಿಕೊಳ್ಳಬಾರದು ಎನ್ನುವ ಹೋಲಿಕೆ ನಮ್ಮಲ್ಲಿ ಅಸೂಯೆ ಮನೆ ಮಾಡುವಂತೆ ಮಾಡಿ, ನಮಗೆ ಉಪಯೋಗವಿರದ ಆಸೆಗಳಿಗೆ ಬಲಿಯಾಗುವಂತೆ ಮಾಡುತ್ತದೆ. ಅಸೂಯೆ ಇರದಿದ್ದರೆ ಅಲ್ಲಿ ಆಸೆಗಳಿಗೂ ಕಡಿವಾಣ ಇರುತ್ತದೆ. ಅದರಿಂದ ಏನು ಸಾರ್ಥಕತೆ ಇದೆ ಎನ್ನುವ ವಿವೇಕ ಕೂಡ ಇರುತ್ತದೆ. ಆದರೆ ಅಸೂಯೆ ಇದ್ದಲ್ಲಿ ಉಳಿದೆಲ್ಲ ಲೋಭ, ಮದ-ಮತ್ಸರಗಳು ಅತಿರೇಕಕ್ಕೆ ಹೋಗುತ್ತವೆ. ಸರಿ-ತಪ್ಪಿನ ತರ್ಕಗಳು, ವಿವೇಚನಗಳು ಕೆಲಸಕ್ಕೆ ಬಾರದೆ ಹೋಗುತ್ತವೆ.

ನಾವೊಬ್ಬರೆ ಕಾಡಿನಲ್ಲಿ ಮನೆ ಮಾಡಿಕೊಂಡು ಇರಲು ಸಾಧ್ಯವಿಲ್ಲ. ಸಮಾಜದಲ್ಲಿ ಬದುಕಿದಾಗ ಅಸೂಯೆ ಸಾಮಾನ್ಯ ಪ್ರಕ್ರಿಯೆ. ಆದರೆ ಅಸೂಯೆ ನಮ್ಮ ವಿವೇಚನೆ ದಾಟಿ ಹೋಗದಂತೆ ನೋಡಿಕೊಳ್ಳುವುದು ಮಾತ್ರ ನಮಗೆ ಬಿಟ್ಟಿದ್ದು. ನಮ್ಮಲ್ಲಿ ಆಸೆ ಹುಟ್ಟಿದಾಗ ಅದಕ್ಕೆ ಕಾರಣ ಅಸೂಯೆಯೋ ಎನ್ನುವುದು ಗಮನಿಸಿ ನೋಡಿ. ಇಲ್ಲದಿದ್ದರೆ ನಾವದರ ಬಲಿಪಶು ಅಷ್ಟೇ.

Friday, December 8, 2023

On The Life Expectancy

If you exclude accidents or wars, life expectancy has been in the range of 40 to 100. There were kings who died naturally in their 40's despite all the healthcare they could afford. Also, those who did home medication living to 100 and beyond.

In the ancient times, cavemen lived to see their 40th birthday at the most. Food was scarce (before agriculture). Fight with animals would mean instant death. If injured, he or she would die in few days as there was no medication like antiseptic, antibiotics available.

Once the human being learnt agriculture, he did not have to struggle for food everyday. And living in societies reduced the conflicts with animals to a greater extent. This dramatically helped the human species lifespan. They began to live longer.

Then  the development of medicines made things even better. It gave further boost to the lifespan.

Now, in today's age, there are two major factors affecting lifespan. Lifestyle & availability of healthcare facilities. 

1. Lifestyle: This is about kind of food we eat, presence or absence of physical exercises, do we sleep enough or not, habits affecting physical or mental health etc. If you take good care of your health, you are expected to live longer and the opposite makes you more vulnerable.

2. Healthcare facilities: Though healthcare facility is present but it is not equally distributed across the world. Many Asian & African villages lack a hospital even today. Even if there is one, it may not be well equipped to serve the needs.

These two factors determine how long one lives. In Japan, average life expectancy is above 80 years. The highest in the world. And in many African countries, the number is below 50. Global average is 71 years. If you happen to live in India, life expectancy is just 2 years lesser than global average, 69 years. And it is gradually getting better. Another populous country, China, has a number in higher 70's (or close to 80).

Well, this is average number. There are always people living above and below this number, influencing the average. If you brush your teeth twice a day, you add two years to the average. If you chew tobacco, you need to subtract couple of years from the average to arrive at your lifespan. Variety of factors affect how long we live.

If you say philosophically, it is not the number of years but the quality of lie lived is more important, well, that is not the subject matter of this article, it would be another blog post.