Thursday, December 31, 2020

ವಿದಾಯ ೨೦೨೦; ಸುಸ್ವಾಗತ ೨೦೨೧!

ಈ ವರ್ಷ ಉಂಟು ಮಾಡಿದ ಭೀತಿ, ಕಸಿದುಕೊಂಡ ಸ್ವಾತಂತ್ರ್ಯ, ಆರ್ಥಿಕ ವ್ಯವಸ್ಥೆಗೆ ಆದ ಹಾನಿ ಅಪಾರ. ನಾವಲ್ಲದಿದ್ದರೆ, ನಮ್ಮ ಸ್ನೇಹಿತರು, ಬಂಧುಗಳು ಕೊರೊನ ಧಾಳಿಯ ನೇರ ಸಂಕಟ ಅನುಭವಿಸಿದ್ದಾರೆ. ಮಕ್ಕಳು ಶಾಲೆಯ ಕಡೆಗೆ ತಲೆಯೇ ಹಾಕಲಿಲ್ಲ. ಎಷ್ಟೋ ತಿಂಗಳುಗಳ ಕಾಲ ರಸ್ತೆ, ಮಾರುಕಟ್ಟೆಗಳು ಮುಕ್ತವಾಗಿ ಇರದಿದ್ದರೂ, ಇಂಟರ್ನೆಟ್ ಮುಕ್ತವಾಗಿ ಇತ್ತಲ್ಲ. ನಾವುಗಳು ಮನೆಯ ಒಂದು ರೂಮಿನಲ್ಲಿ ಸೇರಿಕೊಂಡು ಆಫೀಸ್ ಕೆಲಸ ಮಾಡುತ್ತ ಬಂದದ್ದಾಯ್ತು. ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆಯುತ್ತೆ ಅಂತಾರಲ್ಲ. ನಮಗೆ ಇದ್ದ ಅವಕಾಶಗಳಿಗೆ ಹೊಂದಿಕೊಂಡು, ಹಾಗೋ, ಹೀಗೋ, ವಿನೋದವೋ-ವಿಷಾದವೋ ಈ ವರ್ಷ ಕಳೆದದ್ದಾಯ್ತು.


ಸಾಂಕ್ರಾಮಿಕ ರೋಗಗಳು ನಮ್ಮ ಪೀಳಿಗೆಗೆ ಅನುಭವ ಇರದಿದ್ದರೂ, ಇತಿಹಾಸದ ಪುಸ್ತಕಗಳು ಅವು ಉಂಟು ಮಾಡಿದ ಅನಾಹುತಗಳನ್ನು ತಿಳಿಸಿ ಕೊಡುತ್ತವೆ. ಪ್ರಕೃತಿಯು ಕಾಲ ಕಳೆದಂತೆ ಹೊಸ ಜೀವಿಗಳನ್ನು ಹುಟ್ಟು ಹಾಕುತ್ತ,  ಇದ್ದವುಗಳನ್ನು ಮಾರ್ಪಡಿಸುತ್ತ, ಹೊಂದಾಣಿಕೆ ಮಾಡಿಕೊಳ್ಳದವನ್ನು ಹೊಸಕಿ ಹಾಕುತ್ತ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಆಗದ ಎಷ್ಟೋ ಜೀವಿಗಳು, ಪ್ರಾಣಿ-ಪಕ್ಷಿಗಳು ಭೂಮಿಯಿಂದ ಕಣ್ಮರೆಯಾಗಿ ಹೋಗಿವೆ. ಆದರೆ ಮನುಷ್ಯ ಪ್ರಾಣಿ ತನ್ನ ಬುದ್ದಿವಂತಿಕೆಯಿಂದ ಪ್ರಕೃತಿಯನ್ನು ತುಳಿಯಲು ನೋಡುತ್ತಾನಾದರೂ, ಸಾಧ್ಯವಾಗದಿದ್ದಾಗ ಬಲು ಬೇಗ ಹೊಂದಾಣಿಕೆ ಮಾಡಿಕೊಂಡು ಬದುಕು ಉಳಿಸಿಕೊಳ್ಳುತ್ತಾನೆ. ಆ ಹೊಂದಾಣಿಕೆ ಅವನನ್ನು ಉಳಿದೆಲ್ಲ ಜೀವಿಗಳಿಗಿಂತ ಭಿನ್ನವಾಗಿಸಿ, ಭೂಮಿ ಇರುವವರೆಗೆ ಮಾನವನೂ ಇರಲು ಸಾಧ್ಯ ಎನ್ನುವಂತೆ ಮಾಡಿದೆ.   


ಬರುವ ವರ್ಷ ಶುಭವಾಗಿರಲಿ ಎಂದು ನಾವೆಲ್ಲ ಹಾರೈಸಿದರು, ಅದು ತನ್ನ ಒಡಲಲ್ಲಿ ಏನೆಲ್ಲಾ ಇಟ್ಟುಕೊಂಡಿದೆಯೋ ಕಾದು ನೋಡಬೇಕು. ಅದು ಹೂಮಳೆ ಸುರಿಸಿದರು ಇಲ್ಲ ವಿಷ ಕಾರಿದರು ಹೊಂದಿಕೊಂಡು ಹೋಗಬೇಕು. ಅದನ್ನೇ ನಾವು ನಿನ್ನೆಯಿಂದ ಕಲಿತಿರುವುದು ಮತ್ತು ನಾಳೆಗೆ ಕೊಂಡೊಯ್ಯುತ್ತಿರುವುದು. ಇದನ್ನೇ ಒಂದು ಹಾಡಾಗಿಸಿದ್ದರಲ್ಲ ಚಿ.ಉದಯಶಂಕರ್. ರಾಜಣ್ಣನ ಧ್ವನಿಯಲ್ಲಿರುವ ಈ ಗೀತೆ ಕಾಲಾತೀತವೆನ್ನುವಂತೆ, ಹಿಂದಿಗೂ, ಇಂದಿಗೂ ಮತ್ತು ಮುಂದೆಯೂ ನಮ್ಮ ಜೀವನಕ್ಕೆ ಅನ್ವಯಿಸುತ್ತದೆ.


"ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, 

ಆಡುವ ಸಮಯದ ಗೊಂಬೆ ಮಾನವ"   


ನಿಜ, ನಾವು ನೀವೆಲ್ಲರೂ ಸಮಯದ ಗೊಂಬೆಗಳಲ್ಲವೇ? ವರ್ಷ ಒಂದು ಕಳೆದು ಇನ್ನೊಂದು ಬಂದರೇನು? ಆದರೂ ರೂಢಿ ತಪ್ಪದೆ, ನಿಮಗೆ ಹೊಸ ವರ್ಷ ಶುಭ ತರಲೆಂದು ಕೋರುತ್ತೇನೆ.



Tuesday, December 29, 2020

ಅವರು ನಮಗೇನು ಸಹಾಯ ಮಾಡಿದ್ದಾರೆ ಎಂದು ಕೇಳುವ ಮುನ್ನ

ನಾವೇ ಅಲ್ಲದಿದ್ದರೆ, ನಮ್ಮ ನಿಮ್ಮ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ಇರುತ್ತಾರೆ. ಅವರು ಯಾರಿಗಾದರೂ ಸಹಾಯ ಮಾಡುವ ಮುನ್ನ "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳುತ್ತಾರೆ. ಅವರಿಗೆ ಜೀವನ ಒಂದು ವ್ಯವಹಾರ ಎನಿಸಿದ್ದರೆ ಅದು ಅವರ ಅಭಿಪ್ರಾಯ. ಇದು ಲೌಕಿಕವಾಗಿ ಸಾಮಾನ್ಯ ವಿಷಯ ಎಂದು ಅನಿಸಿದರೂ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ನೋಡೋಣ.


ನಾವು ಹುಟ್ಟಿದ್ದು ಅಸಹಾಯಕ ಪರಿಸ್ಥಿತಿಯಲ್ಲಿ. ನಾವು ಇನ್ನು ಕೂಸಾಗಿದ್ದಾಗ ಅಮ್ಮ, ಅಜ್ಜಿ, ಅಕ್ಕ ಹೀಗೆ ಹಲವಾರು ವ್ಯಕ್ತಿಗಳು ಲಾಲನೆ ಪಾಲನೆ ಮಾಡಬೇಕಿತ್ತಲ್ಲವೇ? ಹಾಗೆಯೆ ನಾವು ಸತ್ತಾಗ ಕೂಡ ಯಾರೋ ನಮ್ಮನ್ನು ಹೊತ್ತುಕೊಂಡು ಹೋಗಬೇಕು. ಹುಟ್ಟು, ಸಾವಿನ ನಡುವೆ ಕೂಡ  ನಾವು ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ನಾವು ಶಾಲೆಯಲ್ಲಿದ್ದಾಗ ನಮ್ಮ ಪ್ರತಿಭೆ ಕಂಡು ಪ್ರೋತ್ಸಾಹಿಸಿದ ಶಿಕ್ಷಕರಿದ್ದರಲ್ಲವೇ? ಅವರು ಆ ಕೆಲಸ ಮಾಡದೇ, ಬರಿ ಪಾಠ ಮಾಡಿದ್ದರೂ ಕೂಡ ಅವರಿಗೆ ಸಂಬಳ ಬರುತ್ತಿತ್ತು. ಅವರು ಈ ಹುಡುಗ ತಮಗೆ ಯಾವ ಸಹಾಯ ಮಾಡಿದ್ದಾನೆ ಎಂದು ಕೇಳಿಕೊಳ್ಳಲಿಲ್ಲ. ಕೆಲವೊಮ್ಮೆ ಅವಸರದಲ್ಲಿದ್ದಾಗ ದಾರಿಯಲ್ಲಿ ನಮಗೆ ಲಿಫ್ಟ್ ಕೊಟ್ಟು ಸರಿಯಾದ ಸಮಯಕ್ಕೆ ನಮ್ಮನ್ನು ಸ್ಥಳಕ್ಕೆ ಮುಟ್ಟಿಸುತ್ತಾರಲ್ಲ ಅಪರಿಚಿತರು, ಅವರಿಗೆ ನಾವು ಯಾವ ಸಹಾಯ ಮಾಡಿದ್ದು? ಕೆಲವು ವರ್ಷಗಳ ಹಿಂದೆ ನಾನು ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾದಾಗ, ಅಲ್ಲೇ ಇದ್ದ ಕೆಲ ಮಂಗಳಮುಖಿಯರು ನಮ್ಮ ಸಹಾಯಕ್ಕಾಗಿ ಧಾವಿಸಿದ್ದರು. ನಮಗೆ ಅವರ ಪರಿಚಯ ಇದ್ದಿಲ್ಲ ಮತ್ತು ನಾವು ಅವರಿಗೆ ಹಿಂದೆ ಯಾವ ಸಹಾಯ ಮಾಡಿದ್ದಿಲ್ಲ. ಯಾವುದೊ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಿಲ್ಲುವ ಸ್ನೇಹಿತನಿಗೆ ನಾವು ಹಿಂದೆ ಸಹಾಯ ಮಾಡಿರಲೇಬೇಕು ಎಂದೇನಿದೆ? ಅವರೆಲ್ಲರೂ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ನಮ್ಮ ಬಗ್ಗೆ ಕೇಳಿಕೊಂಡಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು?


ಜಗತ್ತಿನಲ್ಲಿ ಸ್ವಾರ್ಥಿಗಳೇ ತುಂಬಿರಬಹುದು. ಆದರೆ ಸ್ವಾರ್ಥವನ್ನು ಮೆಟ್ಟಿ ನಿಲ್ಲುವ ಜನರೂ ಇದ್ದಾರಲ್ಲ. ಸ್ವತ ಬ್ರಹ್ಮಚಾರಿಯಾದ ಶಿವಕುಮಾರ ಸ್ವಾಮಿಗಳು ಸಿದ್ಧಗಂಗೆಯಲ್ಲಿ ಮಠ ಕಟ್ಟಿ, ಸಾವಿರಾರು ಜನರ ಮಕ್ಕಳಿಗೆ ಆಸರೆಯಾಗಲಿಲ್ಲವೇ? ಅವರ ಮನಸ್ಸಿನಲ್ಲಿ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎನ್ನುವ ಪ್ರಶ್ನೆ ಯಾವತ್ತೂ ಬಂದಿರಲಿಕ್ಕಿಲ್ಲ. ದಿನ ನಿತ್ಯ ದಾಸೋಹ ನಡೆಸುವ ಧರ್ಮಸ್ಥಳದ ಹೆಗ್ಗಡೆಯವರು ಬಂದಿರುವ ಭಕ್ತರಿಗೆ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಯಾವತ್ತಾದರೂ ಕೇಳಿದ್ದಾರೆಯೇ? ಸ್ವಾರ್ಥಿಗಳು ಸಾವಿರಾರು ಜನ ಇದ್ದರೂ, ಅದನ್ನು ಮೆಟ್ಟಿ ನಿಲ್ಲುವ ಒಬ್ಬೊಬ್ಬ ವ್ಯಕ್ತಿ ಸಮಾಜವನ್ನು ಮುನ್ನಡೆಸುತ್ತಾ ಹೋಗುತ್ತಾನೆ.


ನಾವು ಅಂತಹ ಮಹಾ ಪುರುಷರು ಆಗದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಕೈಲಾಗುವ ಸಣ್ಣ ಪುಟ್ಟ ಸಹಾಯ ಮಾಡಲು ನಾವು "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳಿಕೊಳ್ಳಬೇಕೇ? ಯಾರೋ ವಂಚಕರಿಗೆ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ. ಇಲ್ಲವೇ ಉದಾರಿಯಾಗಿ ದಾನ ಧರ್ಮಕ್ಕೆ ನಿಲ್ಲಿ ಎಂದೂ ಹೇಳುತ್ತಿಲ್ಲ. ಆದರೆ ನಿಜ ಅವಶ್ಯಕತೆ ಇದೆ ಎಂದು ನಮಗೆ ಅನಿಸಿದಲ್ಲಿ ಮತ್ತು ಆ ಸಹಾಯದಿಂದ ನಾವು ಹೆಚ್ಚು ಏನು ಕಳೆದುಕೊಳ್ಳುವಿದಿಲ್ಲ ಎಂದಲ್ಲಿ, ಆಗ ನಾವು ಪ್ರಶ್ನೆ ಕೇಳಿಕೊಳ್ಳುವ ಅಗತ್ಯವೇನಿದೆ? ನಮ್ಮಿಂದ ಸಹಾಯ ಪಡೆದ ಜನರಿಗೆ ನಮಗೆ ಸಹಾಯ ಮಾಡುವ ಸಾಮರ್ಥ್ಯ ಇರದೇ ಇರಬಹುದು ಅಥವಾ ಅಂತಹ ಪರಿಸ್ಥಿತಿ  ಬರದೇ ಹೋಗಬಹುದು. ಅಥವಾ ಅವರು ನಮ್ಮನ್ನು ಮರೆತು ಕೂಡ ಹೋಗಬಹುದು. ಯಾವುದೇ ಸಹಾಯಕ್ಕೆ ಮುನ್ನ ಅದರಿಂದ ನಮಗೇನು ಲಾಭ ಎಂದು ಕೇಳಿಕೊಳ್ಳುತ್ತಾ ಹೋದರೆ, ನಮ್ಮ ಸುತ್ತ ಮುತ್ತ ಅಂತಹ ಜನರೇ ತುಂಬುತ್ತ ಹೋಗುವುದಿಲ್ಲವೆ?


ಆದರೆ ನಮ್ಮ ಕುಟುಂಬದಲ್ಲೇ ಆ ಪ್ರಶ್ನೆ ಕೇಳುವ ಜನರಿದ್ದರೆ ಏನು ಮಾಡುವುದು? ಮತ್ತು ಅವರು ನಿಮ್ಮ ಕೈ ತಡೆದರೆ ನೀವು ಆಗೇನು ಮಾಡುವಿರಿ? ನನ್ನನ್ನು ಕುಟುಂಬದವರು ಬುದ್ಧಿಗೇಡಿ ಎಂದು ಕರೆದರೂ, ನನಗೆ ಮಾತ್ರ ಆ ಪ್ರಶ್ನೆ ಕೇಳಿಕೊಳ್ಳಲು ಆಗುತ್ತಿಲ್ಲ. ನನಗೆ ಹಿಂದೆ ಸಹಾಯ ಮಾಡಿದ ಅನೇಕ ಅಪರಿಚಿತರೇ ನನಗೆ ಆದರ್ಶ. ಅವರು ನನ್ನ ಜೊತೆ ಯಾವುದೇ ವ್ಯವಹಾರದ ಅಥವಾ ಋಣ ಸಂದಾಯದ ಮಾತು ಆಡಲಿಲ್ಲ. ಸ್ವಾರ್ಥಿಗಳು, ವಂಚಕರ ನಡುವೆಯೂ ಸಮಾಜದ ಬಗ್ಗೆ ವಿಶ್ವಾಸ ಹುಟ್ಟಿಸುವ ವ್ಯಕ್ತಿಗಳು, ಪ್ರತಿಫಲ ಬಯಸದೆ ಮಾಡುವ ಕೆಲಸಗಳು ಉಂಟು ಮಾಡುವ ನೆಮ್ಮದಿಯನ್ನು ತೋರಿಸಿಕೊಡುತ್ತಾರೆ ಅಲ್ಲವೇ? ಅವರು ಕೇಳಿಕೊಳ್ಳದ ಪ್ರಶ್ನೆ ನಾವೇಕೆ ಕೇಳಿಕೊಳ್ಳಬೇಕು?

Monday, December 28, 2020

My Walking Statistics of 2020

More than an year ago, I had installed the pedometer app "Step Set Go" on my cell phone. That started giving me a track of how much I walk on daily and weekly basis. Except occasional misses, my walking has been more or less consistent throughout 2020 and here are the consolidated numbers for the year.



It shows I clocked an average of 8 km per day. And 2,925 km's of walking in the year of 2020. This number surprised me for a while. If I could reach this number walking for less than 2 hours a day, what about those travelers in the past who almost walked from one town to another throughout the year? History documents many travelers like Marco Polo who had traveled from Europe to Mongolia twice on foot (mostly). And the Chinese traveler to India - Hiuen Tsang, who had walked thousands of kilometers. I had always wondered how they could achieve this and why they did not get tired out? Now my own statistics shows that walking few thousand kilometers a year is an easily achievable task. Just one needs to be willing and consistent.


Biology and Evolution indicate that human body is designed or evolved for walking. Our legs are way stronger than our hands. It shows our ancestors used legs more often than hands that made legs pack higher muscular power. As the transition from monkey to humans happened and our ancestors climbed down from tree to land, our feet structure got shaped differently than other four legged animals, helping us to stand up and not yet lose balance. That improved our survival rate as we could walk long distances searching for food. Though we took shelter in agriculture for food later, legs were the primary mode of transporting oneself. Though man tamed horses and invented bullock carts, majority of the population still walked. This continued till bicycles and later motor cars helped us improve our moving speeds and gradually replaced walking in the recent past. Our current generation rarely walks to work but our bodies which got shaped through thousands of years of evolution demand us to walk (or do any other physical exercise) to keep up in a better shape. No wonder what was natural to us in the past has become Doctor's prescription to keep us fit again.


Though walking has been part of my routine for many years, I was not this consistent before and did not record the statistics either. The year of pandemic made me more health conscious and the app on the phone helped me keep a track of the numbers and form a perspective. What is your fitness regime?

Tuesday, December 22, 2020

Elevating our perspectives

Next time when you meet a kid in the neighborhood, praise him (or her) that he (or she) is good at Math or Drawing. It does not matter he was good at it before or not, but now he wants to be. That is the power of praise.

Let us say you are among a group of friends or relatives. One of them challenges you saying you can’t achieve some thing. Your ego will be set on fire. You will focus all your energies on proving him wrong. Criticism can be a wonderful motivation too.

Take a step back and reflect. Both praise and criticism are external stimulants to which we react. But we can’t go on pleasing others around us, we would be tired soon. Similarly, we can’t go on proving all our opponents wrong. Our lives would become purposeless. Instead we need to be guided from our inner desire to achieve something.

Gandhi was undeterred by sarcasm of The British. Gandhi was just an example. Thomas Alva Edison was unfazed by his series of failures. Alexander the Great did not have a single moment of self-doubt. Praise him or criticize him, Buddha would smile, always. History is full of such personalities. All of them had one common thing. Clarity of thought and knowing what they wanted to achieve in their lives.

How does one get clarity? Wider the options you keep for yourself, the more confused you will be. Reject your thoughts based on their merit and retain only few that appeals to you most. Then it would become easy to focus and pursue. Some might get there by deductive thinking. Forcibly filter your ideas of life until you are left with actionable few. Repeat and revalidate until you are left with clear objectives. If you are struggling, meditation can help. It steadies your body, slows down your breathing, calms your nerves and then gradually rejects your thoughts. It produces clarity.

Once you have clarity, your life will become a meditation. Then you know what you want from life. When that becomes driving force, praise or criticism will fall on your wayside. Your elevated perspectives help you overcome shortsightedness, distractions and how others measure you. Clarity also gives you patience on your path towards your objectives.

Sunday, December 20, 2020

ಮೋಸದ ಮುನ್ನವೇ ಸಿಗುವ ಮುನ್ಸೂಚನೆಗಳು

ರಾಮಾಯಣದಲ್ಲಿನ ಸೀತಾಪಹರಣ ಪ್ರಸಂಗದ ನೆನಪು ಮಾಡಿಕೊಳ್ಳೋಣ. ಬಂಗಾರದ ಜಿಂಕೆ ಎನ್ನುವುದು ಇರಲು ಸಾಧ್ಯವಿಲ್ಲ. ಇದರಲ್ಲಿ ಏನೋ ಮೋಸವಿದೆ ಎಂದು ಸೀತೆಗೆ ಏಕೆ ಅನಿಸಲಿಲ್ಲ? ಅವಳು ಒಬ್ಬ ರಾಜನ ಮಗಳು. ಅವಳಿಗೆ ಎಲ್ಲ ವಿದ್ಯಾಭ್ಯಾಸ ದೊರಕಿತ್ತು. ಆದರೆ ಒಂದು ಕ್ಷಣ ವಿಚಾರ ಮಾಡದೇ ಜಿಂಕೆಯ ಮೇಲೆ ಮೋಹ ಪಟ್ಟಳು. ರಾಮನಿಗೆ ಅದನ್ನು ಹಿಡಿದು ತರಲು ಕೇಳಿದಳು. ರಾಮ ದೈವಾಂಶ ಸಂಭೂತನಲ್ಲವೇ? ಅವನಿಗೆ ಇದು ಮೋಸ ಎನ್ನುವುದು ಗೊತ್ತಾಗಿರಲಿಕ್ಕೂ ಸಾಕು. ಅವನು  ತನ್ನ ಪತ್ನಿಗೆ 'ಸಾಕು ಸುಮ್ಮನಿರು' ಅಥವಾ  'ಮುಂದೆ ನೋಡೋಣ' ಎಂದು ಹೇಳಿದ್ದರೆ ಸಾಕಾಗಿತ್ತು. ಅಸಮಾಧಾನ ಮುಗಿದ ನಂತರ ಬಂಗಾರದ ಜಿಂಕೆಯ ಮರ್ಮ ಸೀತೆಗೆ ಅರಿವಾಗುತಿತ್ತೇನೋ? ಆದರೆ, ಒಂದು ಕೈ ನೋಡೇ ಬಿಡೋಣ ಎಂದು ಬಿಲ್ಲನ್ನು ಹಿಡಿದು ರಾಮ ಹೊರಟ. ಅವನು ಎಷ್ಟು ಹೊತ್ತಾದರೂ ಬರದಿದ್ದಾಗ ,  ಸೀತೆಗೆ, ತನ್ನ ಗಂಡ ಪರಾಕ್ರಮಿ ಎಂದು ಗೊತ್ತಿದ್ದರೂ ಚಿಂತೆಯಾಯಿತು. ಲಕ್ಷ್ಮಣನಿಗೆ ನೋಡಿಕೊಂಡು ಬಾ ಎಂದು ಗಂಟು ಬಿದ್ದಳು. ಲಕ್ಷ್ಮಣ ಏನು ಸುಮ್ಮನೆ ಹೋಗಲಿಲ್ಲ. ಯಾವುದೊ ಮೋಸದ ಜಾಡು ಇಲ್ಲಿ ಇರಬಹುದು ಎಂದು ಊಹಿಸಿ ಒಂದು ಗೆರೆಯನ್ನು ಗೀಚಿ (ಲಕ್ಷ್ಮಣ ರೇಖೆ), ಯಾವುದೇ ಕಾರಣಕ್ಕೂ ಅದನ್ನು ದಾಟಿ ಬರದಂತೆ ತನ್ನ ಅತ್ತಿಗೆಗೆ ತಿಳಿಸಿಯೇ ಹೊರಟ. ಆದರೆ ಅದನ್ನು ಕೂಡ ಸೀತೆ ದಾಟಿ ಬಂದ ಮೇಲೆಯಲ್ಲವೇ ಅವಘಡ ಸಂಭವಿಸಿದ್ದು. ಮೋಸದ ಜಾಡು ಸಾಕಷ್ಟು ಮುನ್ಸೂಚನೆಗಳನ್ನು ನೀಡುತ್ತಾ ಹೋಗಿತ್ತು. ಪ್ರತಿಯೊಂದು ಹಂತದಲ್ಲೂ ಹಿಂದೆ ಸರಿಯುವ ಅವಕಾಶ ಇತ್ತು. ಆದರೆ ಅವುಗಳನ್ನೆಲ್ಲ ಕಡೆಗಣಿಸಿದಾಗ ನಡೆದದ್ದು ಅನಾಹುತ. ಹೌದು ಸ್ವಾಮಿ, ಇದು ಆಗದಿದ್ದರೆ ರಾಮಾಯಣ ಕಥೆ ಹೇಗೆ ಮುಂದೆ ಹೋಗುತಿತ್ತು ಎನ್ನುವಿರಾ? ಆಗಬಾರದ್ದೆಲ್ಲ ಒಂದಾದ ನಂತರ ಆಗುತ್ತಾ ಹೋದರೆ 'ಯಾರಿಗೆ ಬೇಕಿತ್ತು ಈ ರಾಮಾಯಣ' ಎಂದು ನಾವು ಆಗಾಗ ಹೇಳುವಿದಿಲ್ಲವೇ? ಅದು ಇದಕ್ಕೇನೋ?


ರಾಮಾಯಣದ ಮಾತು ಬಿಡಿ. ನಮಗೆ ಆಗುವ ದಿನ ನಿತ್ಯದ ಸಣ್ಣ ಪುಟ್ಟ ಮೋಸಗಳ ಬಗ್ಗೆ ವಿಚಾರ ಮಾಡಿ ನೋಡೋಣ. ಇನ್ನೂ ಚೆನ್ನಾಗಿ ಪರಿಚಯವಿರದ ಸ್ನೇಹಿತನೊಬ್ಬ ಸ್ವಲ್ಪ ಹಣ ಕೇಳುತ್ತಾನೆ. ಬೇರಾರು ನೆನಪಾಗದೆ ನೀವೇ ಏಕೆ ಅವನಿಗೆ ನೆನಪಾದೀರಿ ಎಂದು ನೀವು ವಿಚಾರ ಮಾಡದೇ ನೀವು ಅವನಿಗೆ ಹಣ ನೀಡಿದರೆ, ಅಲ್ಲಿ ನೀವು ಸಹಾಯ ಮಾಡಿದ್ದಕ್ಕಿಂತ ಪಾಠ ಕಲಿಯುವ ಸಂಭವವೇ ಹೆಚ್ಚು. ಸಾಕಷ್ಟು ಅನುಭಗಳಾದ ಮೇಲೆ ನಾನು ಅಂಥವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಅವನಿಗೆ ಹಣದ ಅವಶ್ಯಕತೆ ಹೇಗಾಯಿತು? ಅವನು ಅಂತಹ ಪರಿಸ್ಥಿತಿಗೆ ಬರುತ್ತಿರುವುದು ಇದೆ ಮೊದಲೋ, ಅಲ್ಲವಾದಲ್ಲಿ ಅವನು ಏಕೆ ಅದಕ್ಕೆ ತಯಾರಿ ಮಾಡಿಕೊಂಡಿರಲಿಲ್ಲ? ಅವನು ಕೇಳಿದ ಹಣಕ್ಕಿಂತ ಕಡಿಮೆ ಹಣ ಕೊಟ್ಟರೆ ಸಾಕಾಗುತ್ತದೋ? ಅಷ್ಟರಲ್ಲಿ ಅವನ ನಿಜ ಕಾರಣ ನನಗೆ ಅರಿವಾಗುತ್ತದೆ ಮತ್ತು ಅದು ನನಗೆ ತಿಳಿದದ್ದು ಅವನಿಗೂ ಗೊತ್ತಾಗುತ್ತದೆ. ಕೊನೆ ಎಂಬಂತೆ ನಾನು ಕೇಳುವುದು, ಯಾವಾಗ ವಾಪಸ್ಸು ನೀಡುತ್ತೀಯ ಮತ್ತು ಅದಕ್ಕೆ ನಿನಗೆ ಹೇಗೆ ಹಣ ಸಿಗುತ್ತದೆ? ಅಷ್ಟರಲ್ಲಿ ಆ ಹಣ ವಾಪಸ್ಸು ಬರುತ್ತೋ, ಇಲ್ಲವೋ ಎನ್ನುವ ಅಂದಾಜು ನನಗೆ ಸಿಕ್ಕಿರುತ್ತದೆ.


ವಂಚನೆ ದೊಡ್ಡದಾದಷ್ಟೂ ಮುನ್ಸೂಚನೆಗಳು ಅಧಿಕವಾಗಿಯೇ ಇರುತ್ತವೆ. ಆದರೆ ತಿಳಿದುಕೊಳ್ಳುವ ಜಾಣ್ಮೆ ನಮಗಿರಬೇಕಷ್ಟೆ. ನಾವು ಮಾಡಬೇಕಾದ್ದು ಇಷ್ಟೇ. ಮೊದಲನೆಯದು ವಂಚಕರು ಉಂಟು ಮಾಡುವ ಭ್ರಮೆಯಿಂದ ಹೊರ ಬಂದು ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳುವುದು. ನಂತರ ಅವರು  ನಿರೀಕ್ಷೆ ಮಾಡಿದೆ ಇರದಂತಹ ಕೆಲವು ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬು ಮಾಡುವುದು. ಆಗಲೂ ಸ್ಪಷ್ಟತೆ ದೊರೆಯದಿದ್ದರೆ, ಸ್ವಲ್ಪ ಕಾಲಾವಕಾಶ ಕೇಳಿ, ಇನ್ನೊಮ್ಮೆ ಅವರನ್ನು ಭೇಟಿಯಾಗುವುದು. ಮತ್ತೆ ಮತ್ತೆ ಭ್ರಮಾಲೋಕ ಸೃಷ್ಟಿಸುವುದು ಎಂತಹ ವಂಚಕನಿಗಾದರು ಕಷ್ಟದ ಕೆಲಸವೇ ಸರಿ. ನೀವು ಅಂತಹ ವೇಳೆಯಲ್ಲಿ, ನಿಮ್ಮ ಪ್ರಜ್ಞಾವಂತ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಆಲೋಚಿಸಿದಲ್ಲಿ ಇನ್ನೊಂದು ರಾಮಾಯಣಕ್ಕೆ ಅವಕಾಶವೇ ಇರದು.


ನಾನು ಹಿಂದೆ ಮನೆ ಕಟ್ಟುವಾಗ, ಅನೇಕ ಮೋಸಗಾರರ ಮತ್ತು ಅವರ ಕಾರ್ಯ ವೈಖರಿಗಳ ಪರಿಚಯವಾದವು. ಇವತ್ತಿಗೆ ಆ ತರಹದ ವಂಚನೆಗಳನ್ನು ಸುಲಭದಲ್ಲಿ ನಿಭಾಯಿಸುತ್ತೇನೆ. ಆದರೆ ಬೆಂಗಳೂರಿನಲ್ಲಿ ಜೀವಿಸುತ್ತಿರುವ ನನಗೆ, ಇನ್ನೂ ದೊಡ್ಡ ಮಟ್ಟದ ವಂಚನೆ ಮಾಡುವ ಮತ್ತು ಅದರಲ್ಲಿ ಸಾಕಷ್ಟು ಪಳಗಿದ ವ್ಯಕ್ತಿಗಳ ಪಟ್ಟುಗಳು ಅನುಭವಕ್ಕೆ ಬರುತ್ತಿವೆ. ಈ ವಿಷಯ ನನಗೆ ಬೇಡದಿದ್ದರೂ ಅಂಥವರ ನಡುವೆ ಬದುಕಬೇಕಾದ ಮತ್ತು ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ, ಹೊಸ ಪಾಠಗಳನ್ನು ಕಲಿಸುತ್ತಿವೆ. ಅವರ ಬಗ್ಗೆ ಮುಂದೆ ಯಾವಾಗಲಾದರೂ ಬರೆಯುತ್ತೇನೆ.