Thursday, November 11, 2021

Book Summary: Autobiography of a Yogi

This book is not just the tale of Sri Paramahansa Yogananda. It is also account of his lineage of Guru’s, Sri Yukteshwar Giri and Lahiri Mahasaya. And many numerous yogis who had supernatural powers.

Determined to be a Yogi from childhood, Sri Paramahansa Yogananda captures vivid memories of his meetings with various yogi’s during his spiritual journey. One yogi who levitated during meditation, another who appeared in two different places at the same time, one who tamed wild tigers, one who never slept, another who never ate, and the list goes on and on. All these fetes appear to be supernatural to us which science can’t explain yet but are quite common in the world of spiritual practitioners. For those who could transcend materialistic inclinations and practice meditation for long periods, certain siddhis come naturally. That would be to foresee the future or the power to heal the ailing. But they are more interested in their spiritual sadhana than showing off their supernatural powers.

This book provides insight into the world of numerous such yogis, their ways of thinking and living which are very different than that of common men driven by sensual pleasures and hoarding of wealth. For those on the spiritual path, this book would certainly be a motivation and the yogi’s mentioned in this book would only increase their resolve to remain committed to the spiritual path.



Tuesday, November 9, 2021

ಎಲ್ಲಮ್ಮನ ಮಕ್ಕಳು

(William Dalrymple ಬರೆದ 'Nine Lives' ಪುಸ್ತಕದ 'The Daughters of Yellamma' ಅಧ್ಯಾಯದ ಭಾವಾನುವಾದ ಮತ್ತು ಕಿರು ರೂಪ)

 

"ಹೌದು, ಕೆಲವೊಂದು ಸಲ ಅದರಲ್ಲಿ ಸುಖ ಇದೆ" ಎಂದಳು ರಾಣಿಬಾಯಿ. "ಯಾರಿಗೆ ದೈಹಿಕ ಸುಖ ಹೊಂದುವುದು ಇಷ್ಟವಿಲ್ಲ? ಸುಂದರ ಯುವಕ, ಸೌಮ್ಯವಾಗಿ ನಡೆಸಿಕೊಳ್ಳುವಾಗ..."

 

ತನ್ನ ಮಾತನ್ನು ಅರೆಕ್ಷಣ ನಿಲ್ಲಿಸಿ, ಕೆರೆಯ ಕಡೆ ನೋಡುತ್ತಾ ತನ್ನಲ್ಲೇ ನಕ್ಕಳು. ಮರು ಘಳಿಗೆ ಅವಳ ಮುಖ ಕಪ್ಪಿಟ್ಟಿತು "ಇಲ್ಲಿನ ಜನ ಒರಟರು, ಬಾಂಬೆ ಯ ಹುಡುಗರ ಹಾಗಲ್ಲ"

 

"ದಿನಕ್ಕೆ ಎಂಟು ಜನ" ಎಂದು ಸೇರಿಸಿದಳು ಅವಳು ಸ್ನೇಹಿತೆ ಕಾವೇರಿ. "ಕೆಲವೊಂದು ಸಲ ಹತ್ತು. ಎಲ್ಲ ಗೊತ್ತಿಲ್ಲದ ಜನರು. ಅದೆಂತಹ ಜೀವನ?" ರಾಣಿಬಾಯಿ ಹೇಳಿದಳು "ಎಲ್ಲರು ನಮ್ಮ ಜೊತೆ ಮಲಗುತ್ತಾರೆ ಆದರೆ ಮದುವೆಯಾಗುವುದಿಲ್ಲ. ನಮ್ಮನ್ನು ಅಪ್ಪಿಕೊಳ್ಳುತ್ತಾರೆ ಆದರೆ ರಕ್ಷಿಸುವುದಿಲ್ಲ"

 

"ಇದನ್ನು ಬಿಟ್ಟು ನಮಗೆ ಬದಲಿ ದಾರಿಯೆಲ್ಲಿದೆ? ಓದು, ಬರಹ ಗೊತ್ತಿರದ ನಮಗೆ ಯಾರು ಕೆಲಸ ಕೊಡುತ್ತಾರೆ? ದೇಹ ಸೌಂದರ್ಯ ಕಳೆದು ಹೋದಾಗ ನಾವು ಒಂಟಿಯಾಗಿ ಹೋಗುತ್ತೇವೆ. ಮತ್ತೆ ರೋಗಗಳು? ಕಳೆದ ವಾರವಷ್ಟೇ ಗುಪ್ತ ರೋಗಕ್ಕೆ ದೇವದಾಸಿಯೊಬ್ಬಳು ತೀರಿ ಹೋದಳು"

 

"ಎಲ್ಲಮ್ಮ ಇದು ಹೀಗಾಗಲು ಬಯಸಿರಲಿಲ್ಲ. ಜಗತ್ತು ಇದನ್ನು ಮಾಡಿದ್ದು. ಮತ್ತು ರೋಗಗಳನ್ನು ಕೂಡ ಅದೇ ತಂದದ್ದು. ನಮ್ಮ ದೇವಿಗೆ ನಮ್ಮ ಕಣ್ಣೀರು ಒರೆಸುವುದು ಬಿಟ್ಟು ಬೇರೇನು ಮಾಡಲು ಸಾಧ್ಯ?"

 

ಬೆಳಗಾಂ ನಿಂದ ನಾವು ಬಂದಿದ್ದು ಸವದತ್ತಿಯ ಎಲ್ಲಮ್ಮಳ ದರುಶನಕ್ಕೆ. ರಾಣಿಬಾಯಿ, ಕಾವೇರಿ ಮತ್ತು ನಾನು. ಬೆಟ್ಟದ ಮೇಲೆ ದೇವಸ್ಥಾನ, ಪಕ್ಕದಲ್ಲೊಂದು ಹೊಂಡ. ಋಷಿ ಜಮದಗ್ನಿಯ ಹೆಂಡತಿ ಎಲ್ಲಮ್ಮ ಕಾಮದಾಸೆಗೆ ಸಿಲುಕಿ, ಗಂಡನಿಂದ ಶಾಪಗ್ರಸ್ಥಳಾದ ಕಥೆ ಇಲ್ಲೇ ನಡೆದಿದ್ದು ಎಂದು ಪ್ರತೀತಿ.

 

"ನನ್ನ ಹೆತ್ತವರು ನನ್ನನು ದೇವರಿಗೆ ಅರ್ಪಿಸಿದಾಗ ನನಗೆ ಕೇವಲ ಆರು ವರುಷ" ತನ್ನ ಕಥೆ ಹೇಳಲು ಶುರುವಿಟ್ಟಳು ರಾಣಿಬಾಯಿ. "ಅಂದಿಗೆ ನನಗೆ ಯಾವ ವಿಚಾರಗಳು ತಿಳಿದಿರಲಿಲ್ಲ. ನನ್ನ ಅಪ್ಪ ಇದರಿಂದ ನಮ್ಮ ಬಡತನ ಕಳೆದು ಹೋಗುವುದು ಎಂದು ಹೇಳಿದ್ದಷ್ಟೇ ಗೊತ್ತು. ದುಡ್ಡು ಗಳಿಸುವ ವಿಚಾರ ಇಷ್ಟ ಆದರೂ ಅದು ಎಲ್ಲಿಂದ ಬರುವುದು ಎಂದು ತಿಳಿದಿರಲಿಲ್ಲ"

 

"ನಾನು ಋತುಮತಿಯಾದ ಕೆಲವೇ ದಿನಗಳಿಗೆ, ನನ್ನನ್ನು ಪಕ್ಕದ ಹಳ್ಳಿಯ ಕುರಿ ಕಾಯುವವನಿಗೆ ೫೦೦ ರೂಪಾಯಿಗೆ ಮಾರಿ ಬಿಟ್ಟ. ಅಷ್ಟೊತ್ತಿಗೆಲ್ಲ ನಮ್ಮ ಪಕ್ಕದ ಗುಡಿಸಲುಗಳಿಗೆ ಗಂಡಸರು ಬಂದು ಹೋಗುವುದನ್ನು ಗಮನಿಸಿದ್ದ ನನಗೆ ಮುಂದೆ ಇರುವ ಜೇವನದ ಅಂದಾಜು ಸಿಗಲಾರಂಭಿಸಿತ್ತು. ಒಂದು ದಿನ ನನ್ನನ್ನು ಪಕ್ಕದ ಹಳ್ಳಿಗೆ ಕರೆದುಕೊಂಡು ಹೋಗಿ, ನನ್ನ ಚಿಕ್ಕಮ್ಮ, ಅವಳೂ ಕೂಡ ದೇವದಾಸಿ, ಅವಳ ಮನೆಯಲ್ಲಿ ಬಿಟ್ಟು ನನ್ನ ಮನೆಯವರೆಲ್ಲ ವಾಪಸ್ಸು ಹೋಗಿಬಿಟ್ಟರು. ಆಗ ಏನೋ ನಡೆಯುವುದರ ಸುಳಿವು ಸಿಕ್ಕ ನಾನು ದೊಡ್ಡ ದನಿಯಲ್ಲಿ ರೋದಿಸತೊಡಗಿದೆ. ನನ್ನ ದೇವದಾಸಿ ಚಿಕ್ಕಮ್ಮ, ನಾನು ಅಳಬಾರದು, ಇದು ನಮ್ಮ ಧರ್ಮ, ಅಳುವುದು ಮಂಗಳವಲ್ಲ ಎಂದು ಭೋದಿಸಿದಳು. ಗಂಡಸು ಬಂದೊಡನೆ ಮನೆಯಿಂದ ಹೊರ ನಡೆದಳು ಚಿಕ್ಕಮ್ಮ. ಬಂದವನು ಬಲಿಷ್ಠ, ಏನು ಹೊಡೆದರು, ಚೂರಿದರೂ ಬಿಡಲಿಲ್ಲ. ನನ್ನನ್ನು ಉಪಯೋಗಿಸಿಕೊಂಡು, ಒಪ್ಪಿಕೊಂಡಿದ್ದ ೫೦೦ ರೂಪಾಯಿ ಕೂಡ ಕೊಡದೆ ಓಡಿ ಹೋದ"

 

"ಮರುದಿನ ನನ್ನ ಚಿಕ್ಕಮ್ಮಳ ಮೇಲೆ ಕೂಗಾಡಿದೆ, ನೀನು ಒಬ್ಬ ಸೂಳೆ. ನನ್ನನ್ನು ಕೂಡ ಒಬ್ಬ ಸೂಳೆ ಮಾಡಿಬಿಟ್ಟೆ. ಅದಾಗಿ ಕೆಲ ದಿನಗಳಿಗೆ ಅದೇ ಚಿಕ್ಕಮ್ಮ ನನ್ನನ್ನು ಬಾಂಬೆ ಗೆ ಸುತ್ತಾಡಿಸಿವುದಕ್ಕೆ ಎಂದು ಕರೆದುಕೊಂಡು ಹೋದಳು. ಅದು ಕೂಡ ಒಂದು ಉಪಾಯ ಎಂದು ನನಗೆ ತಿಳಿಯದೆ ಹೋಯಿತು. ಸೀದಾ ಒಬ್ಬ ಘರವಾಲಿ ಮನೆಗೆ ಕರೆದುಕೊಂಡು ಹೋಗಿ ೨೦೦೦ ರೂಪಾಯಿಗೆ ನನ್ನನ್ನು ಮಾರಿಬಿಟ್ಟಳು. ಆ ಘರವಾಲಿ ನನಗೆ ಸೀದಾ ದಂಧೆಗೆ ಇಳಿಸಲಿಲ್ಲ. ಕೆಲವು ದಿನ ಅಲ್ಲಿ ಅಡಿಗೆ, ಮನೆ ಕೆಲಸ ಮಾಡಿಕೊಂಡಿದ್ದೆ. ಕ್ರಮೇಣ ದಂಧೆಗೆ ಇಳಿಯದೆ ಬೇರೆ ದಾರಿ ಇರಲಿಲ್ಲ. ಇಬ್ಬರು ಮಕ್ಕಳಾದವು. ಅಲ್ಲಿ ದುಡಿದ ದುಡ್ಡಿನಲ್ಲಿ ತಂಗಿಯ ಮದುವೆ ಮಾಡಿದೆ. ಊರಲ್ಲಿ ಎಂಟು ಎಕರೆ ಜಮೀನು ಖರೀದಿ ಮಾಡಿ, ಎಮ್ಮೆ ಸಾಕಿದ್ದೇನೆ. ಇಷ್ಟರಲ್ಲೇ ಈ ಕೆಲಸ ಬಿಟ್ಟು ಎಮ್ಮೆ ಹಾಲು ಮಾರಿ ಜೀವನ ಮಾಡುತ್ತೇನೆ."

 

"ನನ್ನ ದೊಡ್ಡ ಮಗಳು ಸಣ್ಣ ವಯಸ್ಸಿನಲ್ಲೇ ಯಾರದೋ ಜೊತೆ ಓಡಿ ಹೋದಳು. ಅವಳು ವಾಪಸ್ಸು ಬಂದ ಮೇಲೆ ಅವಳನ್ನು ಯಾರೂ ಮದುವೆ ಆಗಲು ಒಪ್ಪಲಿಲ್ಲ. ಅವಳನ್ನು ದೇವದಾಸಿ ಮಾಡಿಬಿಟ್ಟೆ. ಚಿಕ್ಕ ಮಗಳಿಗೆ ಚರ್ಮದ ಮೇಲೆ ಬಿಳಿ ಮಚ್ಛೆಗಳಿದ್ದವು. ಅವಳಿಗೆ ಮದುವೆ ಮಾಡಲು ಆಗದೆ ಅವಳನ್ನು ಕೂಡ ದೇವದಾಸಿಯನ್ನಾಗಿ ಮಾಡಿಬಿಟ್ಟೆ. ನನ್ನನ್ನು ದೇವರಿಗೆ ಅರ್ಪಿಸಿದಾಗ ನನ್ನ ತಾಯಿಯನ್ನು ಬೈದುಕೊಂಡಿದ್ದ ನಾನು ಅದೇ ಕೆಲಸ ಮಾಡದೆ ಬೇರೆ ದಾರಿಯೇ ಇರಲಿಲ್ಲ"

 

"ನಾನು ಮಾಡಿದ್ದ ಪಾಪಗಳಿಗೋ ಏನೋ, ಇಂದಿಗೆ ಅವರಿಬ್ಬರೂ ಜೀವಂತ ಇಲ್ಲ". ಅದೇನಾಯಿತು ಎಂದು ಸ್ಪಷ್ಟವಾಗಿ ರಾಣಿಬಾಯಿ ಹೇಳದಿದ್ದರೂ, ನನಗೆ ಬೇರೆಯವರಿಂದ ತಿಳಿಯಿತು ಅವರು ಬಲಿಯಾಗಿದ್ದು ಏಡ್ಸ್ ಗೆ ಎಂದು.

 

ಸಂಜೆ ಹೊತ್ತಿಗೆ ಕಾವೇರಿಯನ್ನು ಅವಳ ಮನೆ ತಲುಪಿಸಿ, ರಾಣಿಬಾಯಿ ಯನ್ನು ಅವಳ ಊರಿಗೆ ತಲುಪಿಸಲು ಕಾರು ಹತ್ತಿದೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದಳು ರಾಣಿಬಾಯಿ. "ನಮಗೆ, ದೇವದಾಸಿಯರಿಗೆ ಕೆಲ ಸೌಲಭ್ಯಗಳಿವೆ. ಹಬ್ಬಗಳಲ್ಲಿ ಜನ ನಮ್ಮ ಆಶೀರ್ವಾದ ತೆಗೆದುಕೊಳ್ಳುತ್ತಾರೆ. ನಾವು ದೇವಿಯ ಅವತಾರ ಎಂದು ಪೂಜೆ ಮಾಡುತ್ತಾರೆ. ನಾವು ಸಾಧಾರಣ ಸೂಳೆಯರಲ್ಲ. ನಮಗೆ ಘನತೆಯಿದೆ. ಆದರೆ ಸಂಭೋಗ, ಸಂಭೋಗವೇ. ಅಲ್ಲಿ ಯಾವ ದೈವತ್ವವು ಇಲ್ಲ."

 

"ರೋಗಗಳ ಬಗ್ಗೆ ನಿನಗೆ ಹೆದರಿಕೆ ಇಲ್ಲವೇ?" ನಾನು ಕೇಳಿದೆ.

 

"ಏಕಿಲ್ಲ? ಆದರೆ ನಾವು ಊಟ ಮಾಡಬೇಕೆಂದರೆ ನಮ್ಮ ಕೆಲಸ ಮುಂದುವರೆಸಲೇ ಬೇಕು. ದುಃಖ ಭರಿಸುವುದು ನಮ್ಮ ಕರ್ಮ. ಸಂತೋಷದ ಮುಖ ಹೊತ್ತು ಆಕರ್ಷಿಸಿಸದಿದ್ದರೆ ನಮ್ಮ ಹತ್ತಿರ ಬರುವರಾರು?" ರಾಣಿಬಾಯಿ ಉತ್ತರ ಕೊಟ್ಟಳು.

 

"ನಿನಗೆ ಭವಿಷ್ಯದ ಬಗ್ಗೆ ಆಸೆ ಇಲ್ಲವೇ?"

 

"ಏಕಿಲ್ಲ? ಅದಕ್ಕೆಂದೇ ಹೊಲ ಕೊಂಡುಕೊಂಡು ಎಮ್ಮೆ ಸಾಕಿದ್ದೇನೆ. ಇನ್ನು ಸ್ವಲ್ಪ ಹಣ ಉಳಿಸಿಕೊಂಡು ಅಲ್ಲಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುತ್ತೇನೆ"

 

ರಾಣಿಬಾಯಿಯನ್ನು ಅವಳ ಮನೆಗೆ ಬಿಟ್ಟು ಬೆಳಗಾಂ ಗೆ ಮರಳಿದೆ. ಅಲ್ಲಿ ದೇವದಾಸಿಯರ ಜೊತೆ ಕೆಲಸ ಮಾಡುವ NGO ಸಂಸ್ಥೆಯಲ್ಲಿ ರಾಣಿಬಾಯಿಯ ಬಗ್ಗೆ ಮತ್ತು ಅವಳ ನಿವೃತ್ತಿ ಯೋಜನೆ ಬಗ್ಗೆ  ವಿಚಾರಿಸಿದೆ. ಅಲ್ಲಿ ತಿಳಿದು ಬಂತು ಈಗಾಗಲೇ ರಾಣಿಬಾಯಿಗೆ ಅವಳ ಮಕ್ಕಳಿಗೆ ಇದ್ದ ರೋಗ ಅಂಟಿಕೊಂಡು ಕೆಲವು ತಿಂಗಳುಗಳೇ ಕಳೆದಿವೆ. ಔಷಧಗಳು ಕೆಲ ದಿನಗಳ ಮಟ್ಟಿಗೆ ರೋಗ ಲಕ್ಷಣಗಳನ್ನು ಕಡಿಮೆ ಮಾಡಿದರು, ಸಂಪೂರ್ಣ ಗುಣ ಮಾಡಲಾರವು. ಅವಳು ತನ್ನ ಜಮೀನಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುವುದಕ್ಕೆ ಈಗಾಗಲೇ ಕಾಲ ಮಿಂಚಿ ಹೋಗಿದೆ.

Saturday, November 6, 2021

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ

"ತುತ್ತು ಅನ್ನ ತಿನ್ನೋಕೆ, 

ಬೊಗಸೆ ನೀರು ಕುಡಿಯೋಕೆ,

ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ,

ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ"


ವಿಷ್ಣುವರ್ಧನ್ ಹಾಡಿದ ಈ ಹಾಡು ಅಂದಿಗೆ ಜನಪ್ರಿಯವಾಗಿತ್ತು. ಇಂದಿಗೂ ಕೇಳಲು ಯೋಗ್ಯವಾಗಿದೆ. ಇರುವ ಸ್ವಲ್ಪದರಲ್ಲೇ ಮನುಷ್ಯ ನೆಮ್ಮದಿಯಾಗಿ ಬದುಕಬಹುದು ಎನ್ನುವುದು ಅದರ ಸಂದೇಶವಾಗಿತ್ತು. ಆದರೆ ನಾವು ಬದುಕುವ ರೀತಿ ನೋಡಿ? ಇಂದಿಗೆ ತಿನ್ನುವುದಕ್ಕೆ ತುತ್ತು ಅನ್ನ ಸಾಕಾದರೂ, ನಾಳೆಗೆ, ನಾಡಿದ್ದಕ್ಕೆ ಹೀಗೆ ಮತ್ತೆ ತುತ್ತು ಅನ್ನ ಬೇಕಲ್ಲ. ಅದಕ್ಕೆ ಸಾಧ್ಯವಾದಷ್ಟು ಅಕ್ಕಿ ಪ್ಯಾಕೆಟ್ ಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಗೋದಾಮುಗಳಲ್ಲಿ ಕೆಲ ವರುಷಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ದಾಸ್ತಾನು ಲಭ್ಯ. ಕುಡಿಯುವುದು ಬೊಗಸೆ ನೀರೇ ಆದರೂ, ಮನೆಯಲ್ಲಿ ಸಾವಿರಾರು ಲೀಟರ್ ನೀರು ಹಿಡಿದಿಡುವ ಟ್ಯಾಂಕ್ ಕಟ್ಟಿಸುತ್ತೇವೆ. ಹಾಗೆಯೇ ಊರಿಗೊಂದು ಕೆರೆ, ನದಿಗೊಂದು ಆಣೆಕಟ್ಟು. ಅವೆಲ್ಲ ಮನುಷ್ಯನ ದಾಹ ನೀಗಿಸುವುದಕ್ಕೆ. ಒಂದು ದಿನಕ್ಕಲ್ಲ. ಬರಲಿರುವ ದಿನಗಳಿಗೂ ಕೂಡ. ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ. ಆದರೆ ನಮ್ಮ ಅಂದ ಚೆಂದಕೆ ಬೇಕು ಹಲವಾರು ಡಜನ್ ಬಟ್ಟೆಗಳು. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ. ಆದರೆ ನಮಗೆ ಬೇಕು ಕನಿಷ್ಠ ೩೦ x ೪೦ ಅಡಿಯ ಮನೆ. ಉಳ್ಳವರಿಗೆ ಅವರಿಗೆ ಅಂತಸ್ತಿಗೆ ತಕ್ಕಂತೆ ವಿಶಾಲವಾದ ಮನೆ.


ಪ್ರಕೃತಿ ಸೃಷ್ಟಿಸಿದ ಜೀವ ಸಂಕುಲದಲ್ಲಿ ಮನುಷ್ಯನನ್ನು ಹೊರತು ಪಡಿಸಿದರೆ, ಇಂತಹ ಅನುಕೂಲಗಳು  ಯಾವುದೇ ಪ್ರಾಣಿ, ಪಕ್ಷಿಗಿಲ್ಲ. ಅವುಗಳೆಲ್ಲ ಅಂದಿನ ಆಹಾರ ಅಂದೇ ಹುಡುಕಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸ. ಅವಕ್ಕೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವುದು ಕೂಡ ಗೊತ್ತಿಲ್ಲ. ಯಾವ ಹುಲಿ, ಸಿಂಹಕ್ಕೂ ಜಗತ್ತಿನಲ್ಲಿರುವ ಕಾಡಿಗೆಲ್ಲ ತಾನೊಬ್ಬನೇ ರಾಜ ಆಗಬೇಕೆನ್ನುವ ಆಸೆ ಇಲ್ಲ. ಆದರೆ ಮನುಷ್ಯ ಪ್ರಪಂಚದಲ್ಲಿ ಉಂಟು ಅಲೆಕ್ಸಾಂಡರ್, ನೆಪೋಲಿಯನ್, ಹಿಟ್ಲರ್. 


ಕಾಡು ಪೋಷಿಸಿದಷ್ಟು ಮಾತ್ರ ಜಿಂಕೆಗಳ ಇರಲು ಸಾಧ್ಯ. ಅವುಗಳ ಸಂಖ್ಯೆ ಹೆಚ್ಚಾಗದಂತೆ ಆಹಾರ ಸರಪಣಿಯ ಪಿರಮಿಡ್ ನಲ್ಲಿ ಹುಲಿಗಳಿವೆ. ಮನುಷ್ಯನನ್ನು ಬೇಟೆ ಆಡುವ ಪ್ರಾಣಿಗಳಿಗೆ ಉಳಿಗಾಲ ಎಲ್ಲಿದೆ? ಕಾಳ್ಗಿಚ್ಚು ಬಿದ್ದಾಗ ಅಳಿಲಿನಿಂದ ಆನೆಯವರೆಗೆ ಎಲ್ಲವೂ ಜೀವ ಕಳೆದುಕೊಳ್ಳುತ್ತವೆ. ಆದರೆ ಮನುಷ್ಯನಿಗೆ ಇಂತಹ ಅವಘಡಗಳಿಂದ ಪಾರಾಗುವ ಬಗೆ ಗೊತ್ತಿದೆ. ಮನುಷ್ಯ ಜನಸಂಖ್ಯೆಗೆ ಮಾತ್ರ ಇಲ್ಲ ಮಿತಿ.


ಮನುಷ್ಯ ಜನಸಂಖ್ಯೆ ಜಾಸ್ತಿಯಾದಂತೆಲ್ಲ, ಪ್ರಕೃತಿ ಮತ್ತು ಇತರ ಪ್ರಾಣಿ ಸಂಕುಲದ ಮೇಲೆ ಮನುಷ್ಯನ ದಬ್ಬಾಳಿಕೆ ಕೂಡ ಹೆಚ್ಚುತ್ತಾ ಹೋಗುತ್ತದೆ. ಕೆಲವು ಚಲನಚಿತ್ರಗಳಲ್ಲಿ ಮನುಷ್ಯ ನಿರ್ಮಿತ ರೋಬೋಟ್ ಗಳು ತಾವೇ ಪರಿಸ್ಥಿತಿಯನ್ನು ಕೈಗತ್ತಿಗೊಂಡು ತಮ್ಮನ್ನು ನಿರ್ಮಿಸಿದವರ ಮೇಲೆ ಧಾಳಿಗೆ ಮುಂದಾಗುತ್ತವಲ್ಲ. ಇಂದಿಗೆ ಪ್ರಕೃತಿಗೆ ಕೂಡ ಮನುಷ್ಯನ ಬಗ್ಗೆ ಹಾಗೆಯೇ ಅನಿಸುತ್ತಿರಬಹುದಲ್ಲವೇ?


ಮನುಷ್ಯರ ಜನಸಂಖ್ಯೆ ಮತ್ತು ದುರಾಸೆ ಕಡಿಮೆ ಆಗದಿದ್ದಲ್ಲಿ, ಪ್ರಕೃತಿ ತನ್ನ ಯೋಜನೆ ಬದಲಿಸದೆ ಇರದು. ಡೈನೋಸಾರ್ ಭೂಮಿಗೆ ಭಾರವಾದಾಗ ಪ್ರಕೃತಿಯ ಯಾವುದೊ ಯೋಜನೆಗೆ ಸಿಕ್ಕಿ ಕಣ್ಮರೆಯಾದವು. ಎಷ್ಟೋ ಮನುಷ್ಯ ನಾಗರಿಕತೆಗಳು (ಉದಾಹರಣೆಗೆ ಮಾಯನ್ ನಾಗರೀಕತೆ) ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ತಮ್ಮ ಅಸ್ತಿತ್ವ ಕಳೆದುಕೊಂಡವು. ಪ್ರಕೃತಿಯನ್ನು ಗೆಲ್ಲಲು ಹೊರಟವರು ತಾವೇ ಮರೆಯಾಗಿ ಹೋದರು. ತುತ್ತು ಅನ್ನ, ಬೊಗಸೆ ನೀರು ಸಾಕೆನಿಸಿದಿದ್ದರೆ ಅದಕ್ಕೂ ಕಲ್ಲು ಬೀಳುವ ಕಾಲ ಬರಬಹುದು. ಇದು ಬರೀ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಸಮಾಜದಲ್ಲಿ ಪ್ರತಿಷ್ಠೆಯ ಸ್ಪರ್ಧೆಗೆ ಬಿದ್ದ ಪ್ರತಿಯೊಬ್ಬರಿಗೂ ತುತ್ತು ಅನ್ನ, ಬೊಗಸೆ ನೀರು ಇವುಗಳ ಮಹತ್ವ ತಿಳಿಯದೆ ಹೋದರೆ ಅದನ್ನು ಕಲಿಸುವ ಕಾಲ ಬಂದೇ ಬಿಡುತ್ತದೆ.

Sunday, October 31, 2021

ಮೋಸಗಾರರ ತಣ್ಣನೆಯ ಕ್ರೌರ್ಯ ಗುರುತಿಸದೆ ಹೋದರೆ

ಹಣಕಾಸಿನ ವಿಚಾರದಲ್ಲಿ ಮೋಸ ಹೋದ ಅನುಭವಗಳು ಸಾಕಷ್ಟು ಜನರಿಗೆ ಆಗಿರುತ್ತದೆ. ಹಾಗೆಯೆ ಯಾವುದೊ ಕೆಲಸ ಮಾಡಿಕೊಡುತ್ತೇನೆ ಎಂದು ಕರೆದುಕೊಂಡು ಹೋಗಿ ನಡು ನೀರಿನಲ್ಲಿ ಕೈ ಬಿಟ್ಟು ಹೋಗುತ್ತಾರಲ್ಲ. ಅಂತಹ ಅನುಭವಗಳ ಬಗ್ಗೆ ಸಾಕಷ್ಟು ಸ್ನೇಹಿತರಿಂದ ಕೇಳಿ ತಿಳಿದುಕೊಂಡಿದ್ದೇನೆ. ಮರಾ ಮೋಸದಲ್ಲಿ ಆಗುವ ಕೊಲೆ, ಸುಲಿಗೆಗಳ ಬಗ್ಗೆ ದಿನ ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಇವೆಲ್ಲ ಘಟನೆಗಳಲ್ಲಿ ಮೋಸ ಹೋದವರು ಒಂದು ಮುಗ್ದರು ಇಲ್ಲವೇ ಯಾವುದೊ ಕುರುಡು ನಂಬಿಕೆಯಿಂದ ಬಂದು ಸಿಕ್ಕಿ ಹಾಕಿಕೊಂಡವರು. ಆದರೆ ಮೋಸ ಮಾಡುವವರು ಮಾತ್ರ ಚಾಣಾಕ್ಷರು. ಅವರಿಗೆ ಯಾರನ್ನು ಹೇಗೆ ಹಳ್ಳಕ್ಕೆ ಬೀಳಿಸಬೇಕು ಎನ್ನುವುದರಲ್ಲಿ ಪರಿಣಿತಿ ಇದೆ. ಮೋಸಗಾರರು ಯಾಕೆ ಮೋಸ ಮಾಡುತ್ತಾರೆ ಎಂದು ವಿಚಾರ ಮಾಡಿ ನೋಡಿದರೆ, ಅವರು ಕಷ್ಟ ಪಟ್ಟು ದುಡಿಯುವುದಕ್ಕೆ ಇಷ್ಟ ಪಡದೆ ಸುಲಭದ ಮಾರ್ಗಗಳನ್ನೇ ಆಯ್ದುಕೊಂಡಿರುತ್ತಾರೆ. ಆ ಕಲೆ ಒಮ್ಮೆ ಕರಗತವಾದರೆ ಸಾಕು, ಅವರು ಮನುಷ್ಯ ರಕ್ತದ ರುಚಿ ನೋಡಿದ ಹುಲಿಯ ಹಾಗೆ ನರಭಕ್ಷಕರಾಗಿ ತಯಾರಾಗಿ ಹೋಗುತ್ತಾರೆ. ಅಲ್ಲಿಂದ ಅವರಿಗೆ ಬೇರೆ ಯಾವ ವೃತ್ತಿಯು ರುಚಿಸುವುದಿಲ್ಲ. ಬೇಟೆ ಹುಲಿಯ ತಣ್ಣನೆಯ ಕ್ರೌರ್ಯ ಅವರಲ್ಲಿ ಮೈಗೂಡಿ ಬಿಡುತ್ತದೆ. ಮಿಕ ಬಲೆಗೆ ಬೀಳುವವರೆಗೆ ಬೇರೆಯೇ ಮುಸುಕು ಧರಿಸುವ ಅವರು, ತಮ್ಮ ನಿಜ ಗುಣವನ್ನು ತೋರಿಸಿಕೊಡುವುದು ತಮ್ಮ ಬೇಟೆಯನ್ನು ಸವಿಯುವಾಗಲೇ.

 

ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ, ಮೋಸಗಾರರ ಜಾಡನ್ನು ಗ್ರಹಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಅವರು ನಿಮ್ಮ ಜೊತೆಗೆ ಹಲವಾರು ವರುಷ ಪ್ರಾಮಾಣಿಕತೆಯಿಂದ ವ್ಯವಹರಿಸಿ, ನಿಮ್ಮ ನಂಬಿಕೆ ಗಳಿಸಿಕೊಂಡಿದ್ದರೆ, ಅವರ ಜೊತೆಗೆ ನಿಮ್ಮ ಮುನ್ನೆಚ್ಚರಿಕೆಗಳು ಕಡಿಮೆ ಮಟ್ಟದಲ್ಲಿ ಇರುತ್ತವೆ. ಹೀಗೆ ಒಂದು ನಿಮ್ಮ ಅಜಾಗರೂಕತೆಯ ಕ್ಷಣದಲ್ಲಿ, ನಂಬಿಕೆಯ ಸಂಪೂರ್ಣ ಲಾಭ ಪಡೆದು ನಿಮ್ಮನ್ನು ಅವರು ದೊಡ್ಡ ಕುತ್ತಿಗೆ ಸಿಕ್ಕಿಸಿಬಿಡುತ್ತಾರೆ. ಆಗ ನಿಮಗೆ ಬೇಟೆ ಹುಲಿಯ ಮತ್ತು ಅದರ ತಣ್ಣನೆಯ ಕ್ರೌರ್ಯದ ದರ್ಶನವಾಗುತ್ತ ಹೋಗುತ್ತದೆ. ನಿಮಗೆ ಸಾಮರ್ಥ್ಯವಿದ್ದಲ್ಲಿ ಅವರ ಕಪಿ ಮುಷ್ಟಿಯಿಂದ ಹೊರ ಬಂದು, ಅವರನ್ನು ದೂರ ಇಡುತ್ತೀರಿ.

 

ಒಂದು ವೇಳೆ ಈ ಮೋಸಗಾರರು ನಿಮ್ಮ ಕುಟುಂಬದವರೇ, ಅಥವಾ ನಿಮ್ಮ ಪತಿ, ಪತ್ನಿಯೇ ಆಗಿದ್ದರೆ? ಆಗ ಮೋಸದಿಂದ ಆದ ನಷ್ಟಕ್ಕಿಂತ, ನಂಬಿಕೆಗೆ ಆದ ಮೋಸ ಹೆಚ್ಚು ಇರಿಯುತ್ತದೆ. ಚಾಕು ಬೆನ್ನಿಗೆ ಬಿದ್ದಿದ್ದರು, ಅದು ಎದೆಗೆ ಇರಿದಿರುತ್ತದೆ. ಅರೆ, ಏಕೆ ಹೀಗಾಯ್ತು ಎಂದು ಅವಲೋಕಿಸಿದಾಗ, ಮೋಸದ ಹೆಜ್ಜೆ ಜಾಡುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಎಂತಹ ವ್ಯಕ್ತಿಯನ್ನು ನಂಬಿ ಬಿಟ್ಟೆನೆಲ್ಲಾ ಎಂದು ನಮಗೆ ನಾವೇ ಅಂದುಕೊಳ್ಳುತ್ತೇವೆ. ಆ ವ್ಯಕ್ತಿಗೆ ಕಷ್ಟ ಕಾಲದಲ್ಲಿ ನೀವು ಸಹಾಯ ಮಾಡಿದ್ದರಂತೂ ಮುಗಿದೇ ಹೋಯಿತು. 'ನೀನೆ ಸಾಕಿದ ಗಿಣಿ' ಹಾಡಿನ ಪ್ರತಿ ಪದದ ಭಾವಾರ್ಥ ನೀವು ಬಿಡಿಸಿ ಹೇಳಬಲ್ಲಿರಿ.

 

ಆಗಿ ಹೋದದ್ದಕ್ಕೆ ಕೊರಗುವುದಕ್ಕಿಂತ, ಮುಂದೆ ಮಾಡಬೇಕಾದ್ದರ ಬಗ್ಗೆ ಯೋಚಿಸುವುದು ಜಾಣತನ. ಆದರೆ ಮುಂದಿನ ದಾರಿಗಳು ಎಲ್ಲವೂ ನೋವಿನಿಂದ ಕೂಡಿರುತ್ತವಲ್ಲ. ನೀವು ಅವರನ್ನು ಕ್ಷಮಿಸಿದರೂ, ಅವರು ಮತ್ತೆ ಕತ್ತಿ ಮಸೆಯತೊಡಗುತ್ತಾರೆ. ಮತ್ತೆ ಅವರನ್ನು ನಂಬುವುದು ರಾತ್ರಿ ಕಂಡ ಭಾವಿಯಲ್ಲಿ ಹಗಲು ಬಿದ್ದ ಹಾಗೆ. ತಣ್ಣನೆಯ ಕ್ರೌರ್ಯದ ನರಭಕ್ಷಕ ಹುಲಿ ಬದಲಾದ ಕಥೆ ಎಲ್ಲಾದರೂ ಕೇಳಿದ್ದೀರಾ? ಸಾಧ್ಯವಾದಲ್ಲಿ ಆ ಸಂಬಂಧದಿಂದ ಹೊರ ಬರುವುದು ಇಲ್ಲವಾದಲ್ಲಿ ಮನಸ್ಸಿನಿಂದ ಕಿತ್ತು ಹಾಕುವುದು ನಿಮಗೆ ಉಳಿದಿರುವ ದಾರಿ. ಅವರಿಗಿರುವ ಆಯುಧಗಳನ್ನೆಲ್ಲ ಕಿತ್ತು ಹಾಕಿ, ಅವರಿಗೆ ನಿಮ್ಮನ್ನು ಘಾಸಿಗೊಳಿಸುವ ಮಾರ್ಗಗಳನ್ನೆಲ್ಲ ಮುಚ್ಚಿ ಹಾಕದಿದ್ದರೆ, ಮತ್ತೆ ಹಳೇ ಅನುಭವಗಳಿಗೆ ನೀವು ತಯಾರಾಗಬೇಕು. 'ಬ್ಲಾಕ್ ಮೇಲ್' ಮಾಡುವವರನ್ನು ನೀವು ಹೊರ ಸಮಾಜಕ್ಕೆ ಬಹಿರಂಗ ಪಡಿಸಿದಾಗ, ಅವರ ಆಟಗಳು ಮತ್ತು ಅವುಗಳಿಗಿರುವ ಕಿಮ್ಮತ್ತು ಇವುಗಳ ಸತ್ಯ ದರ್ಶನ ಅವರಿಗೆ ಆಗಿಯೇ ತೀರುತ್ತದೆ. ಆಗ ನಿಮ್ಮನ್ನು ಬಿಟ್ಟು ಬೇರೆ ಬಲಿಪಶುವನ್ನು ಅವರು ಹುಡುಕತೊಡಗುತ್ತಾರೆ. ಅವರೆಂದಿಗೂ ಬದಲಾಗುವುದಿಲ್ಲ. ಬದಲಾಗಬೇಕಾದದ್ದು ನಾವುಗಳು ಅಷ್ಟೇ.

Friday, October 29, 2021

ಆಡಿಸಿ ನೋಡು, ಬೀಳಿಸಿ ನೋಡು, ಒಡೆಯದೆ ಬಿಡದು

ಲವವಿಕೆಯ ಅಪ್ಪು ಇನ್ನಿಲ್ಲ ಎಂದರೆ ಅದು ಬೇಸರಕ್ಕೂ ಮೀರಿದ ನೋವಿನ ಸಂಗತಿ. ದೈವದಾಟವೋ, ವಿಧಿಯ ಬರಹವೋ, ರಾಜಕುಮಾರನೆಂಬ ಗೊಂಬೆ ಉರುಳಿ ಬಿದ್ದು ಒಡೆದು ಹೋಗಿದೆ. 'ವಸಂತ ಗೀತ', 'ಎರಡು ನಕ್ಷತ್ರಗಳು', 'ಯಾರಿವನು?', 'ಭಕ್ತ ಪ್ರಹ್ಲಾದ', 'ಚಲಿಸುವ ಮೋಡಗಳು', 'ಹೊಸ ಬೆಳಕು' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಪ್ಪು ವನ್ನು ನೋಡುತ್ತಾ ಬೆಳೆದ ನನಗೆ, ಅಪ್ಪು ಒಬ್ಬ ನಟನಲ್ಲ, ಬದಲಿಗೆ ಕನ್ನಡ ಚಲನಚಿತ್ರರಂಗ ಪರಂಪರೆಯ ಒಂದು ಭಾಗ. 'ಬೆಟ್ಟದ ಹೂ' ಇಷ್ಟು ಬೇಗ ಬಾಡಿ ಹೋಗಬಾರದಿತ್ತು ಎಂದು ನಮಗೆ ಅನ್ನಿಸಿದರೂ, ಆಡಿಸುವಾತನ ಕರೆಗೆ ಯಾರು ಇಲ್ಲವೆನ್ನಲಾಗದು ಎನ್ನುವ ಸತ್ಯ ಅಪ್ಪು ನಮಗೆ ನೆನಪಿಸಿ ಹೋಗಿದ್ದಾರೆ. ಆತನಿಗೊಂದು ಭಾವಪೂರ್ಣ ಶೃದ್ಧಾಂಜಲಿ.


'ಕತ್ತಲಲ್ಲಿ ನ್ಯಾಯವಿಟ್ಟನು, 

ನಮ್ಮ ಶಿವ ಕಣ್ಣುಗಳ ಕಟ್ಟಿಬಿಟ್ಟನು

  

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು'