Monday, June 13, 2022

Movie Review: A Beautiful Mind

It is a twenty-year-old movie. My previous attempts to read the book and watch the movie did not go well as I did not find it interesting. But things fell into place now. I could not only make sense of the movie this time but awed by it.

 

John Nash arrives at Princeton with a scholarship to study mathematics. He is good at numbers but not so with people. One of his students, Alicia, falls in love with John and they get married. John’s talent for numbers attracts unusual attention. He gets involved with defense to help them in decoding Russian plots. As the situation turns violent, he decides not to continue with the project.

 

But soon he is chased by a psychiatrist and his assistants who admit him to a hospital. There he is diagnosed for a mental illness – schizophrenia. His work for a defense project was a hallucination. And three people he sees often are present only in his illusions. He is put on medication. Refusing to take the prescribed drugs, his situation becomes worse. But he slowly accepts his illusions and begins his attempts to put a distance between those three people who haunts him in his imagination.

 

John goes back to Princeton and his friend gives him a job to work from library. John though still sees those three people from his imagination, succeeds in ignoring them. He is given teaching responsibilities too in the University. Many years later he gets awarded a Nobel Prize for his work in Mathematics.

 

There is not anything beautiful in the movie. John’s mind is not beautiful but a mad one. But the support he gets from his wife is extraordinary. His illusions appear so real so his struggle to get through it too was an uphill task. 

The world of people suffering from mental illness is hard to imagine for ordinary one's. And that gap can be bridged by watching this movie. What damages hallucinations bring to a person can be well understood from this movie. While I was watching this movie, John’s hallucinations became mine too. So good is the performance of lead actor Russel Crowe.




ಚಲನ ಚಿತ್ರ ವಿಮರ್ಶೆ: ಗಂಗೂಬಾಯಿ ಕಠಿಯಾವಾಡಿ (ಹಿಂದಿ)

ಗಂಗಾ (ಅಲಿಯಾ ಭಟ್) ಉತ್ತಮ ಮನೆ ವಾತಾವರಣದಲ್ಲಿ ಬೆಳೆದವಳು ಆದರೆ ಅವಳಿಗೆ ಚಲನಚಿತ್ರಗಳಲ್ಲಿ ನಟಿಸುವಾಸೆ. ದೇವ್ ಆನಂದ್ ಅವಳ ಅಚ್ಚುಮೆಚ್ಚಿನ ನಟ. ಗಂಗಾಳಿಗೆ ಅವಳ ಪ್ರಿಯಕರ ಚಿತ್ರರಂಗದಲ್ಲಿ ಅವಕಾಶ ಕೊಡಿಸುವ ಆಸೆ ಒಡ್ಡಿ ಅವಳಿಗೆ ಮನೆಯಲ್ಲಿ ಯಾರಿಗೂ ತಿಳಿಸದಂತೆ ಆದರೆ ಒಡವೆಗಳನ್ನು ತೆಗೆದುಕೊಂಡು ಬರುವಂತೆ ತಿಳಿಸುತ್ತಾನೆ. ಅವನ ಜೊತೆ ಬಾಂಬೆಗೆ ಹೋಗುವ ಗಂಗಾಳಿಗೆ ಬೇರೆಯೇ ಭವಿಷ್ಯ ಕಾದಿರುತ್ತದೆ. ಅವಳ ಪ್ರಿಯಕರ ಅವಳನ್ನು ತನ್ನ ಆಂಟಿ ಮನೆ ಎಂದು ಹೇಳಿ ಒಂದು ವೇಶ್ಯಾಗೃಹಕ್ಕೆ ಅವಳನ್ನು ಸಾವಿರ ರುಪಾಯಿಗೆ ಮಾರಿ ಹೋಗಿಬಿಡುತ್ತಾನೆ. ಒಲ್ಲದ ಮನಸ್ಸಿನಿಂದ ಗಂಗಾ ಒಬ್ಬ ವೇಶ್ಯೆಯಾಗಿ ಬದಲಾಗುತ್ತಾಳೆ. ಅಲ್ಲಿ ಇರುವ ಹೆಣ್ಣು ಮಕ್ಕಳೆದೆಲ್ಲ ಹೆಚ್ಚು ಕಡಿಮೆ ಅದೇ ತರಹದ ಕಥೆಗಳು. ಮನೆ ಬಿಟ್ಟು ಹೋಗುವ ಮುನ್ನ ತಮ್ಮ ತಂದೆಗೆ ಭೇಟಿಯಾಗಿದ್ದರೆ ಅವನು ಅವರನ್ನು ಅಲ್ಲೇ ಉಳಿಸಿಕೊಂಡು ಈ ನರಕದಿಂದ ಪಾರು ಮಾಡಿರುತ್ತಿದ್ದ ಎಂದು ಹಲಬುವವರು. ತಂದೆ-ತಾಯಿಯನ್ನು ತುಂಬಾ ಪ್ರೀತಿಸುವವರು ಆದರೆ ಮನೆಗೆ ವಾಪಸ್ಸು ಹೋಗಲು ಹೆದರುವುವರು. ಅವರ ಕುಟುಂಬ ಅವರನ್ನು ಕ್ಷಮಿಸುತ್ತದೆಯೋ ಇಲ್ಲವೋ ಮತ್ತು ಸಮಾಜ ಅವರನ್ನು ಹೇಗೆ ನೋಡುತ್ತದೋ ಎನ್ನುವ ಹೆದರಿಕೆಯಿಂದ ಅಲ್ಲೇ ಉಳಿದುಕೊಂಡು ಪೂರ್ಣ ಪ್ರಮಾಣದ ವೇಶ್ಯೆಯರಾಗಿ ಜೀವನ ಮಾಡುತ್ತಿರುವವರು.


ಆದರೆ ಗಂಗಾ ಮಾತ್ರ ತನ್ನ ಘನತೆಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಒಂದು ದಿನ ಅವಳ ಹತ್ತಿರ ಬಂದವನೊಬ್ಬ ಅವಳಿಗೆ ದೈಹಿಕ ಚಿತ್ರಹಿಂಸೆ ನೀಡಿ ಅವಳಿಗೆ ಆಸ್ಪತ್ರೆ ಸೇರುವಂತೆ ಮಾಡುತ್ತಾನೆ. ಸಹಾಯ ಕೋರಿ ಗಂಗಾ ಅಲ್ಲಿಯ ಭೂಗತ ದೊರೆ ರಹೀಮ್ ಲಾಲಾ (ಅಜಯ್ ದೇವಗನ್) ಸಂಪರ್ಕಿಸುತ್ತಾಳೆ. ಅವಳನ್ನು ಸೋದರಿಯ ಹಾಗೆ ನೋಡುವ ಲಾಲಾ ಗಂಗಾಳಿಗೆ ದೈಹಿಕ ಹಿಂಸೆ ನೀಡಿದವನಿಗೆ ತಕ್ಕ ಶಾಸ್ತಿ ಕಲಿಸುತ್ತಾನೆ. ಅಲ್ಲಿಂದ ವೇಶ್ಯಾಗೃಹದ ನಾಯಕಿಯಾಗಿ ಬದಲಾಗುತ್ತಾಳೆ ಗಂಗಾ. ಮತ್ತು ಕಾಮಾಟಿಪುರದ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿ ಗೆದ್ದೂ ಬಿಡುತ್ತಾಳೆ. ಅವಳು ವೇಶ್ಯೆಯರ ಪರವಾಗಿ ದನಿ ಎತ್ತುತ್ತಾಳೆ. ಅವರ ಮಕ್ಕಳನ್ನು ಶಾಲೆಗೆ ಕಳಿಸುವ ಏರ್ಪಾಡು ಮಾಡುತ್ತಾಳೆ.


ಅವಳಿಗೆ ಒಬ್ಬ ಪ್ರಿಯಕರನೂ ಇದ್ದಾನೆ. ಆದರೆ ಮದುವೆ ಹೇಗೆ ಸಾಧ್ಯ. ಬದಲಿಗೆ ತನ್ನ ಸಹೋದ್ಯೋಗಿ ಒಬ್ಬಳ ಮಗಳನ್ನು ಅವನಿಗೆ ಮದುವೆ ಮಾಡಿಸುತ್ತಾಳೆ. ಅವಳೀಗ ತನ್ನ ಸಹೋದ್ಯೋಗಿ ಎಲ್ಲರ ಪ್ರತಿನಿಧಿ. ಕಾಮಾಟಿಪುರದಿಂದ ಅವರೆನ್ನೆಲ್ಲ ಹೊರ ಹೋಗಲು ಹೇಳಿದಾಗ ಅವಳು ತನ್ನ ಸಮುದಾಯವನ್ನು ಪ್ರತಿನಿಧಿಸುತ್ತಾಳೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾಳೆ. ಸ್ತ್ರೀ ಹಕ್ಕು ವೇದಿಕೆಯಲ್ಲಿ ಅವಳ ಭಾಷಣಕ್ಕೆ ಎಲ್ಲರೂ ತಲೆದೂಗುತ್ತಾರೆ. ಅವಳಿಗೆ ದೇಶದ ಪ್ರಧಾನಿ (ಅಂದಿನ ಪ್ರಧಾನಿ ಜವಾಹರಲಾಲ್ ನೆಹರು) ಅವರೊಂದಿಗೆ ವೇಶ್ಯೆಯರ ಸಮಸ್ಯೆ ಕುರಿತು ಮಾತನಾಡುವ ಅವಕಾಶ ಕೂಡ ದೊರಕುತ್ತದೆ. ಕಾಮಾಟಿಪುರದಿಂದ ಅವರನ್ನು ಹೊರ ಕಳಿಸುವ ಚರ್ಚೆ ಅಲ್ಲಿಗೆ ಮುಗಿಯುತ್ತದೆ.


ಇದು ನಿಜ ಜೀವನ ಆಧರಿಸಿ ಮಾಡಿದ ಚಿತ್ರ. ವೇಶ್ಯೆಯರ ಸಮಸ್ಯೆ ಕುರಿತು ಹಲವಾರು ಚಿತ್ರಗಳು ಬಂದಿವೆ. ಆದರೆ ವೇಶ್ಯೆ ಒಬ್ಬಳು ದನಿ ಎತ್ತಿ ಹೋರಾಟ ಮಾಡುವ ಚಿತ್ರ ಬಂದಿರಲಿಲ್ಲ. ಅಲಿಯಾ ಭಟ್ ಅವರ ಅಭಿನಯ ಅಮೋಘ. ಅಜಯ್ ದೇವಗನ್ ಅವರ ನಟನೆ ಕೂಡ ಗಮನ ಸೆಳೆಯುತ್ತದೆ. ಉಳಿದವರೆಲ್ಲ ಹೆಚ್ಚಾಗಿ ಹೊಸ ನಟರು ಆದರೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.


ಹೆಣ್ಣು ಮಕ್ಕಳನ್ನು ವೇಶ್ಯೆ ವೃತ್ತಿಗೆ ಇಳಿಸುವದರಲ್ಲಿ ಮೋಸದಿಂದ ಕರೆದೊಯ್ಯುವ ಗಂಡಸು ಎಷ್ಟು ಕಾರಣನೋ ಅಲ್ಲಿಂದ ಮುಂದಕ್ಕೆ ಕರೆದೊಯ್ಯುವ ಘರ್ ವಾಲಿ ಹೆಂಗಸರು ಕೂಡ ಅಷ್ಟೇ ಕಾರಣರು. ಹೆಣ್ಣು ಮಕ್ಕಳು ಮನೆ ಬಿಟ್ಟು ಓಡಿ ಹೋಗುವುದಕ್ಕಿಂತ ಮುಂಚೆ ಈ ಚಿತ್ರ ಒಮ್ಮೆ ನೋಡುವುದು ವಾಸಿ. ಹಾಗೆಯೆ ದೌರ್ಜನ್ಯ ತುಂಬಿದ ಸಮಾಜದಲ್ಲಿ ನ್ಯಾಯದ ಪರವಾಗಿ ನಿಲ್ಲುವ ಪಾತ್ರಗಳು ಕೂಡ ಈ ಚಿತ್ರದಲ್ಲಿ ಇವೆಯಲ್ಲ. ಮುಚ್ಚುಮರೆಯ ಲೋಕದಲ್ಲಿ ನಡೆಯುವ ಪಾಪಕಾರ್ಯಗಳ ಕಥೆಗಳನ್ನು ಆಲಿಸಲು ಈ ಚಿತ್ರ ಒಮ್ಮೆ ನೋಡಿ. ಈ ಚಿತ್ರ ನಿಮ್ಮ ಹೃದಯ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.   




ಊರಿಗೆ ಒಂದು ದಾರಿ ಆದರೆ ಯಡವಟ್ಟನಿಗೆ ಒಂದು ದಾರಿ

ಈ ಗಾದೆ ಮಾತು ನೀವು ಕೇಳಿಯೇ ಇರ್ತೀರಿ. ಅಥವಾ ಸಂದರ್ಭ ಬಂದಾಗ ನಿಮ್ಮ ಬಾಯಿಯಿಂದಲೇ ಆ ಮಾತು ಹೊರ ಬಂದಿರುತ್ತದೆ. ಆದರೆ ಊರಿಗೆ ಒಬ್ಬ ಯಡವಟ್ಟ ಮಾತ್ರ ಎಲ್ಲಿ ಇರುತ್ತಾನೆ? ಊರಿಗೆ ಒಬ್ಬಳೇ ಪದ್ಮಾವತಿ ಇರಬಹುದು ಆದರೆ ಯಡವಟ್ಟರು ಮಾತ್ರ ಬೇಕಾದಷ್ಟು ಸಿಗುತ್ತಾರೆ. ಹೆಚ್ಚು ಕಡಿಮೆ ಮನೆಗೆ ಒಬ್ಬರಂತೆ.


ಬೇರೆಯವರಿಗೆ ಯಡವಟ್ಟ ಎಂದು ಕರೆಯುವ ಮುನ್ನ ನಾವು ಹೇಗೆ ಎನ್ನುವ ಅರಿವು ನಮಗಿರಬೇಕಲ್ಲವೇ? ಮೊದ ಮೊದಲಿಗೆ ನಾನೇ ಯಡವಟ್ಟ ಎಂದುಕೊಂಡಿದ್ದೆ. ಆದರೆ ಸಾಕಷ್ಟು ಜನರನ್ನು ನೋಡಿದ ಮೇಲೆ, ಹಲವಾರು ದೊಡ್ಡ ಯಡವಟ್ಟರನ್ನು ಎದುರಿಸಿದ ಮೇಲೆ ನನ್ನ ಅಭಿಪ್ರಾಯ ಬದಲಾಗಿದೆ.


ಕುಟುಂಬದವರೆಲ್ಲ ಒಂದು ತರಹ ವಿಚಾರ ಮಾಡಿದರೆ ಅವರೊಳಗೆ ಒಬ್ಬ ಮಾತ್ರ ಬೇರೆಯದೇ ಲೋಕದಲ್ಲಿದ್ದು ಯಡವಟ್ಟ ಎನಿಸಿಕೊಳ್ಳುತ್ತಾನೆ. ಅವನಿಗೆ (ಅಥವಾ ಅವಳಿಗೆ) ಉಳಿದವರ ನೋವು, ಸಂಕಟ, ಹೆದರಿಕೆಗಳು ಅರ್ಥವಾಗದೇ ಹೋಗಿಬಿಡುತ್ತವೆ. ಮನೆ ತುಂಬಾ ದುಡಿಯುವವರ ನಡುವೆ ಖಾಲಿ ಕುಳಿತಿಕೊಳ್ಳುವ ಒಬ್ಬನಿಗೆ ಯಡವಟ್ಟ ಎನ್ನುವ ಹಣೆ ಪಟ್ಟ ಅಂಟಿಯೇ ಬಿಡುತ್ತದೆ. ಎಲ್ಲ ಯಡವಟ್ಟರು ಕೆಲಸಕ್ಕೆ ಬಾರದವರು ಎಂದೇನಿಲ್ಲ. ಎಷ್ಟೊಂದು ಸಲ ಹೊಸ ದಾರಿಯನ್ನು ಹುಡುಕುವುವವರೇ ಈ ಯಡವಟ್ಟರು. ಆದರೆ ಅಂತಹ ಯಡವಟ್ಟರು ನೂರಿಗೆ ಒಬ್ಬರು ಆದರೆ ಉಳಿದ ತೊಂಭತ್ತೊಂಭತ್ತು ಯಡವಟ್ಟರು ಅವರ ಕುಟುಂಬಗಳಿಗೆ ತಲೆನೋವಾಗಿಬಿಡುತ್ತಾರೆ.


ಇಷ್ಟಕ್ಕೂ ಯಡವಟ್ಟರು ಯಾರಿಗೂ ಅರ್ಥ ಆಗಲು ಸಾಧ್ಯ ಇಲ್ಲ ಎಂದೇನಿಲ್ಲ. ಬೇರೆ ಮನೆಗಳಲ್ಲಿನ ಯಡವಟ್ಟರು ತುಂಬಾ ಸುಲಭವಾಗಿ ನಮಗೆ ಅರ್ಥ ಆಗುತ್ತಾರೆ. ಏಕೆಂದರೆ ಅಲ್ಲಿ ನಮಗೆ ಯಾವುದೇ ಭಾವನೆಗಳಿಲ್ಲ. ಆದರೆ ನಮ್ಮ ಮನೆಯಲ್ಲಿನ ಯಡವಟ್ಟರನ್ನು ಗಮನಿಸಿದರೆ ನಮಗೆ ಅವರು ಅರ್ಥ ಆಗುವುದಕ್ಕಿಂತ ಹೆಚ್ಚು ನೋವೇ ಆಗುತ್ತದೆ. ಹಾಗಾಗಿ ಈ ಯಡವಟ್ಟರಿಗೆ ಸ್ವಲ್ಪವಾದರೂ ಸರಿ ದಾರಿಗೆ ತರಬೇಕೆಂದರೆ ನಮ್ಮ ಮನೆಯೊಳಗಿನ ಮಂದಿ ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹೊರಗಿನವರೇ ಆಗಬೇಕು. ಅಲ್ಲದೇ ಯಡವಟ್ಟರ ಸಂಪೂರ್ಣ ಬೇಕು-ಬೇಡಗಳನ್ನು ನಾವು ಗಮನಿಸಿಕೊಳ್ಳುವುದು ಬಿಟ್ಟರೆ ವಾಸ್ತವ ಲೋಕ ಅವರ ಧಿಮಾಕನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಸುತ್ತದೆ.


ಮನೆಗೆ ಒಬ್ಬ ಯಡವಟ್ಟ ಇದ್ದರೆ ಹೇಗೋ ಸುಧಾರಿಸಿಕೊಂಡು ಹೋಗಬಹುದು. ಆದರೆ ನಾಲ್ಕಾರು ಯಡವಟ್ಟರ ನಡುವೆ ನೀವು ಒಬ್ಬರೇ ಸಿಕ್ಕಿ ಹಾಕಿಕೊಂಡರೆ? ಅಲ್ಲಿಂದ ಜಾರಿಕೊಳ್ಳಬಹುದು. ಇಲ್ಲವೇ ಅವರ ನಡುವೆ ಸಿಕ್ಕಿ ಒದ್ದಾಡಬಹುದು. ಒಟ್ಟಿನಲ್ಲಿ ಈ ಯಡವಟ್ಟರು ನಮಗೆ ಜೀವನದ ಇತಿ-ಮಿತಿಗಳನ್ನು ತೋರಿಸಿಕೊಡುತ್ತಾರೆ. ಸಂಪೂರ್ಣ ಆನಂದಮಯ ಜೀವನಕ್ಕಿಂತ ಮನೆಯಲ್ಲೊಬ್ಬರು ಯಡವಟ್ಟ ಇರುವುದು ಆ ದೃಷ್ಟಿಯಿಂದ ಒಳ್ಳೆಯದೇನೋ?

Friday, June 10, 2022

ಡೋಪಮೈನ್ ಎನ್ನುವ ಅತಿಯಾಸೆ ಹುಟ್ಟಿಸುವ ರಾಸಾಯನಿಕ

ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಹಲವಾರು ರಾಸಾಯನಿಕಗಳಲ್ಲಿ ಒಂದು ಈ ಡೋಪಮೈನ್ (Dopamine). ಇದು ಸಂತೋಷ ಮತ್ತು ಆಸೆಗೆ ಸಂಬಂಧಿಸಿದ್ದು. ಆದರೆ ಸಂತೋಷ ಇದ್ದಲ್ಲಿ ದುಃಖ ಮತ್ತು ಆಸೆ ಇದ್ದಲ್ಲಿ ನಿರಾಸೆ ಸಹಜ ಅಲ್ಲವೇ. ಹಾಗಾಗಿ ಈ ಡೋಪಮೈನ್ ಪ್ರಮಾಣ ಹೆಚ್ಚಾದರೂ ಸಮಸ್ಯೆ, ಕಡಿಮೆ ಆದರೂ ಸಮಸ್ಯೆ.

 

ಹೊಸ ವಸ್ತು ಕೊಂಡುಕೊಳ್ಳುವುದಕ್ಕೆ ಮುನ್ನ ನಮ್ಮ ಮನದಲ್ಲಿ ಆ ವಸ್ತು ನಮ್ಮದಾದರೆ ಎಷ್ಟು ಚೆನ್ನ ಎಂದು ಅನಿಸುತ್ತದಲ್ಲವೇ? ಆ ಭಾವನೆಯನ್ನು ನಮ್ಮಲ್ಲಿ ಉಂಟು ಮಾಡುವ ರಾಸಾಯನಿಕವೇ ಈ ಡೋಪಮೈನ್. ಆದರೆ ಆ ವಸ್ತು ನಮ್ಮದಾದ ಮೇಲೆ ಅದು ಸಂತೋಷ ಉಂಟು ಮಾಡುವುದು ಕಡಿಮೆ ಆಗಿ ಮನಸ್ಸು ಬೇರೆಯ ವಸ್ತುವಿನ ಕಡೆಗೆ ಕಣ್ಣು ಹಾಕುತ್ತದೆ. ಇದು ಕೂಡ ಡೋಪಮೈನ್ ದೇ ಪ್ರಭಾವ. ಏಕೆಂದರೆ ಡೋಪಮೈನ್ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತದೆ. ಇತಿಹಾಸದ ಬಗ್ಗೆ ಅಲ್ಲ. ಅಲ್ಲದೆ ಇದರ ಅಡ್ಡ ಪರಿಣಾಮ ಎಂದರೆ ಅದು ನಿಮ್ಮ ಮನಸ್ಸನ್ನು ಇನ್ನು ಹೆಚ್ಚಿನ ವಸ್ತುಗಳಿಗೆ ಆಸೆ ಪಡುವಂತೆ ಮಾಡುತ್ತದೆ. ಉದಾಹರಣೆಗೆ ನೀವು ಮೊದಲನೇ ಬಾರಿಗೆ ಒಂದು ಕಾರು ಖರೀದಿಸಿ ಖುಷಿ ಪಟ್ಟಿದ್ದರೆ ಮುಂದಿನ ಸಲ ಅದೇ ತರಹದ ಕಾರು ನಿಮಗೆ ಮೊದಲಿನಷ್ಟು ಖುಷಿ ಹುಟ್ಟಿಸುವುದಿಲ್ಲ. ಬದಲಿಗೆ ನೀವು ಇನ್ನು ದೊಡ್ಡ ಬೆಲೆಯ ಕಾರು ಖರೀದಿಸಬೇಕು. ಮೊದಮೊದಲಿಗೆ ನೀವು ದಿನಕ್ಕೆ ಒಂದೇ ಸಿಗರೆಟ್ ಸೇದಿದರೆ ಕ್ರಮೇಣ ದಿನ ಕಳೆದಂತೆ ಅದರ ಪ್ರಮಾಣ ಹೆಚ್ಚುತ್ತಾ ಹೋಗುವಂತೆ ಮಾಡುತ್ತದೆ ಈ ಡೋಪಮೈನ್. ಆಸೆಗಳೇ ಆಗಲಿ ಅಥವಾ ದುಶ್ಚಟಗಳೇ ಆಗಲಿ ಅವುಗಳ ಪ್ರಮಾಣ ಹೆಚ್ಚುವಂತೆ ಮಾಡುತ್ತ ಹೋಗುತ್ತದೆ ಡೋಪಮೈನ್.

 

ಆದರೆ ಮೆದುಳು ಎನ್ನುವುದು ಮಾಯಾ ಪ್ರಪಂಚ. ನೀವು ಗಟ್ಟಿ ಮನಸ್ಸಿನಿಂದ ದುಶ್ಚಟಗಳಿಂದ ಮತ್ತು ಆಸೆಬುರುಕತನದಿಂದ ಹೊರ ಬಂದರೆ, ಮೊದಲಿಗೆ ಅದು ಕಿರಿಕಿರಿ ಮಾಡುತ್ತದೆ. ಆದರೆ ನೀವು ಜಗ್ಗದಿದ್ದಲ್ಲಿ ಅದು ಮತ್ತೆ ಮೆದುಳನ್ನು ಕಡಿಮೆ ಆಸೆಗಳಿಗೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳುತ್ತದೆ. ಆದರೆ ಡೋಪಮೈನ್ ಪ್ರಮಾಣ ತುಂಬಾ ಕಡಿಮೆ ಆದಲ್ಲಿ ಅದು ಮನುಷ್ಯನನ್ನು ಖಿನ್ನತೆಗೆ ದೂಡಿಬಿಡುತ್ತದೆ. ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಂತೆ ಮಾಡುತ್ತದೆ. ಹಾಗಾಗಿ ಇದರ ಪ್ರಮಾಣ ನಿಯಮಿತವಾಗಿದ್ದಷ್ಟು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಆಸೆಗಳಿಗೆ ಕಡಿವಾಣ ಹಾಕುವುದು, ಧ್ಯಾನ ಮಾಡುವುದು ಇದರ ಸಮತೋಲನಕ್ಕೆ ಸಹಾಯವಾಗುತ್ತವೆ.

 

ನಿಮ್ಮಲ್ಲಿ ಡೋಪಮೈನ್ ಸರಿ ಪ್ರಮಾಣದಲ್ಲಿ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಸುಲಭ. ನಿಮಗೆ ಸಣ್ಣ ಸಣ್ಣ ವಿಷಯಗಳು ಸಂತೋಷ ತರುವುದೇ ಇಲ್ಲವೇ ಎನ್ನುವುದು ಗಮನಿಸಿ ನೋಡಿ. ಉದಾಹರಣೆಗೆ ಒಂದು ಸೊಗಸಾದ ಸಂಜೆ, ಸೂರ್ಯಾಸ್ತ ಮೂಡಿಸಿದ ಆಕಾಶದಲ್ಲಿನ ರಂಗು ರಂಗಿನ ಚಿತ್ತಾರ, ನಾಯಿ ಮರಿ ಜೊತೆಗಿನ ಆಟ, ಒಂದು ಶೃಂಗಾರ ಕಾವ್ಯ ಈ ತರಹದ್ದು ನಿಮ್ಮಲ್ಲಿ ಸಂತೋಷ ಉಂಟು ಮಾಡಿದರೆ ನಿಮಗೆ ಅಭಿನಂದನೆಗಳು.

 

ಒಂದು ವೇಳೆ ನಿಮಗೆ ದುಡ್ಡು, ಕೀರ್ತಿ, ಆಸ್ತಿ ಇವು ಕೊಟ್ಟಷ್ಟು ಸಂತೋಷ ನಿಮಗೆ ಬೇರೆ ಏನು ಕೊಡುವುದಿಲ್ಲವಾದರೆ ನಿಮ್ಮಲ್ಲಿ ಡೋಪಮೈನ್ ಪ್ರಚೋದನೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ನಿಮಗೆ ಒಂದು ಸುಂದರ ಸ್ಥಳದಲ್ಲಿ ಮನೆ ಖರೀದಿಸುವ ತಾಕತ್ತು ಇರುತ್ತದೆ ಆದರೆ ಅದರ ಸಂತೋಷ ಅನುಭವಿಸುವ ಮನಸ್ಥಿತಿ ಇರುವುದಿಲ್ಲ. ಏಕೆಂದರೆ ನಿಮ್ಮಲ್ಲಿರುವ ಡೋಪಮೈನ್ ನಿಮ್ಮನ್ನು ಅಲ್ಲಿಗೆ ಸುಮ್ಮನಾಗಲು ಬಿಡುವುದಿಲ್ಲ.

 

ಹಾಗೆಯೆ ದುಶ್ಚಟಕ್ಕೆ ದಾಸರಾದವರು ಮತ್ತು ಜೀವನದಲ್ಲಿ ಬೇಸರಗೊಂಡವರು ಕ್ರಮೇಣ ಅವಕ್ಕೆ ಕಡಿವಾಣ ಹಾಕಿಕೊಂಡು, ಮನಸ್ಸನ್ನು ವಿಮುಖ ಮಾಡಿಕೊಂಡು, ಬೇರೆ ಕೆಲಸಗಳಲ್ಲಿ ತಲ್ಲೀನರಾಗುವ ಮೂಲಕ ಅದರಿಂದ ಹೊರಗೆ ಬಂದು ಬಿಡಬಹುದು. ಆದರೆ ನಮ್ಮನ್ನು ನಾವು ಗಮನಿಸಿಕೊಳ್ಳುವ ವ್ಯವಧಾನ ಇರಬೇಕಷ್ಟೆ.

 

ಇಂದಿನ ಅತಿ ವೇಗದ ಜೀವನದಲ್ಲಿ ಆಸೆಗಳಿಗೆ ಮಿತಿ ಇಲ್ಲದಂತೆ ಬದುಕುವ ನಾವುಗಳು ನಮ್ಮ ಬದುಕಿನ ರೀತಿ ಗಮನಿಸಿಕೊಳ್ಳುವದನ್ನು ಮರೆತೇ ಬಿಟ್ಟಿದ್ದೇವೆ. ಇವತ್ತಿನ ಮಾತು ಬಿಡಿ. ಸಾವಿರಾರು ವರುಷಗಳ ಹಿಂದೆಯೇ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಲಿಲ್ಲವೇ? ಆದರೆ ಅದಕ್ಕೆ ಡೋಪಮೈನ್ ಕಾರಣ ಎನ್ನುವುದನ್ನು ಇಂದಿನ ವೈದ್ಯಕೀಯ ವಿಜ್ಞಾನ ಬಿಡಿಸಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ಸಾಗುತ್ತಿವೆ. ಇಂದ್ರಿಯ ಮೋಹಗಳಿಗೆ ಸಿಲುಕುವುದನ್ನು ಬಿಡಿಸುವುದು ಕಲಿಸುವ ಧ್ಯಾನ ಕೂಡ ಮುಂದೆ ಒಂದು ದಿನ ವೈದ್ಯಕೀಯ ವಿಜ್ಞಾನದ ಅದರಲ್ಲೂ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣವಾಗಬಹುದು ಎನ್ನುವುದು ನನ್ನ ಅನಿಸಿಕೆ.


References:

1. Dopamine Nation by Anna Lembke (Book)

2. The Molecule of More by Daniel Z. Lieberman (Book)

3. Podcast: How Dopamine drives crave by Daniel Lieberman (Audio)

4. Podcast: Huberman Lab on Neuroscience (Audio)

Wednesday, June 8, 2022

ಹಾವುಗಳ ಪರವಾಗಿ ಎರಡು ಮಾತು

(ಇದು Ruskin Bond ಅವರು ಬರೆದ 'In Defense of Snakes' ಲೇಖನದ ಭಾವಾನುವಾದ)


ಹಾವನ್ನು ಕಂಡ ತಕ್ಷಣ ಜನ ಅದೇಕೆ ಅಷ್ಟು ತಬ್ಬಿಬ್ಬಾಗುತ್ತಾರೋ ತಿಳಿಯದು. 'ಹಾವು, ಹಾವು' ಎಂದು ಅರಚುತ್ತಾ ಸುತ್ತಲಿನ ಎಲ್ಲ ಜನರ ಗಮನ ಅದರ ಕಡೆಗೆ ಸೆಳೆದುಬಿಡುತ್ತಾರೆ. ಹಾವು ಅಷ್ಟರಲ್ಲಿ ಪಾರಾಗದಿದ್ದರೆ, ಅದು ಬಡಿಸಿಕೊಂಡು ಸಾಯುವುದು ಮಾತ್ರ ಗ್ಯಾರಂಟಿ. ಪಾಪದ ಹಾವು! ಹೊರಗಡೆ ಏಕೆ ಕಾಣಿಸಿಕೊಂಡಿತೋ? ಬಿಸಿಲು ಕಾಯಿಸಲೆಂದು ಬಂದಿತೋ, ಕಪ್ಪೆಯನ್ನು ಹಿಂಬಾಲಿಸಿಕೊಂಡು ಬಂತೋ ಅಥವಾ ರಸ್ತೆ ದಾಟಲು ನೋಡುತ್ತಿತ್ತೋ? ಆದರೆ ಅದನ್ನು ಕಂಡ ಜನ ಮಾತ್ರ ಅದಕ್ಕೆ ಒಂದು ಗತಿ ಕಾಣಿಸದೆ ಬಿಡುವುದಿಲ್ಲ.


ಆ ತರಹ ಸಾವು ಕಾಣುವ ಸಾಕಷ್ಟು ಹಾವುಗಳು ಎಲ್ಲ ವಿಷದ ಹಾವುಗಳಲ್ಲ. ಸುಮಾರು ೩೦೦ ವರ್ಗದ ಹಾವುಗಳಲ್ಲಿ, ಕೇವಲ ೩೦ ವರ್ಗದ ಹಾವು ಮಾತ್ರ ಅಪಾಯಕಾರಿ. ಅದರಲ್ಲಿ ಐದು ಜಾತಿಯ ಹಾವುಗಳು ಮಾತ್ರ ಮನುಷ್ಯನಿಗೆ ಜೀವ ಅಪಾಯ ಒಡ್ಡುವಷ್ಟು ವಿಷಕಾರಿಯಾಗಿವೆ. ಉಳಿದವುಗಳಲ್ಲಿ ವಿಷದ ಪ್ರಮಾಣ ತುಂಬಾ ಕಡಿಮೆ. ತಮ್ಮ ಬೇಟೆಗಳಾದ ಕಪ್ಪೆ, ಇಲಿಗಳನ್ನು ತಪ್ಪಿಸಿ ಕೊಂಡು ಹೋಗದಂತೆ ಅವುಗಳನ್ನು ನಿಷ್ಕ್ರಿಯಗೊಳಿಸಲು ಆ ಸಣ್ಣ ಪ್ರಮಾಣದ ವಿಷ ಹಾವುಗಳಿಗೆ ಸಹಾಯವಾಗುತ್ತದೆ. ಹೆಬ್ಬಾವುಗಳಿಗೆ ವಿಷವೇ ಬೇಕಿಲ್ಲ. ತಮ್ಮ ಬೇಟೆಯನ್ನು ಬಲವಾಗಿ ಸುತ್ತಿಕೊಂಡು, ಉಸಿರುಗಟ್ಟಿಸಿ, ಮೈ ಮೂಳೆಗಳೆನ್ನೆಲ್ಲ ಮುರಿದು ಹಾಕುತ್ತವೆ. ಆಮೇಲೆ ಅವನ್ನು ನುಂಗಿ ಹಾಕುತ್ತವೆ. ಆದರೆ ಅವಕ್ಕೆ ವರುಷಕ್ಕೆ ಎರಡು-ಮೂರು ಬಾರಿ ಮಾತ್ರ ದೊಡ್ಡ ಊಟ ಸಾಕು. ಅವುಗಳು ಹಸಿದಿರದಿದ್ದರೆ ಅವು ನಿಮ್ಮನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಮಲಗಿ ನಿದ್ದೆ ಹೊಡೆಯುತ್ತವೆ.


ಅಪಾಯಕಾರಿ ಹಾವುಗಳು ಅನವಶ್ಯಕ ನಿಮಗೆ ತೊಂದರೆ ಕೊಡುವದಿಲ್ಲ. ನೀವು ಅವುಗಳಿಗೆ ಪ್ರಚೋದಿಸಿದರೆ, ತುಳಿದರೆ ಮಾತ್ರ ನಿಮಗೆ ಅಪಾಯ ಎದುರಿಸದೆ ವಿಧಿ ಇಲ್ಲ. ಪ್ರತಿ ವರ್ಷ ಸಾವಿರಾರು ಜನ ಹಾವಿನ ಕಡಿತಕ್ಕೆ ಸತ್ತದ್ದು ಸುದ್ದಿಯಾಗುತ್ತದಲ್ಲ. ಅಲ್ಲಿ ಹಾವಿನ ಆಕ್ರಮಣಕಾರಿ ಪ್ರವೃತ್ತಿಗಿಂತ ಜನರ ಬೇಜವಾಬ್ದಾರಿತನವೇ ಹೆಚ್ಚಿನ ಸಲ ಕಾರಣವಾಗಿರುತ್ತದೆ. ಹಾವುಗಳು ಬೇಟೆಯಾಡುವುದಕ್ಕೆ ಕಚ್ಚುತ್ತವೆ ಹಾಗೆಯೆ ಅಪಾಯದಿಂದ ತಪ್ಪಿಸಿಕೊಳ್ಳಲು ಕೂಡ. ಆದರೆ ದ್ವೇಷದ ಕಾರಣ ಕೊಡುವುದು ಮಾತ್ರ ನಮ್ಮ ಕಲ್ಪನೆ.


ನಾನು ನಮ್ಮ ಮನೆಯ ಸುತ್ತ ಹಾವುಗಳು ಅಡ್ಡಾಡಿದರೂ ಅವುಗಳನ್ನು ಗಮನಿಸದಂತೆ ಇರುತ್ತೇನೆ. ಅದಕ್ಕೆ ಪ್ರತಿಫಲವಾಗಿ ನಮ್ಮ ಮನೆ ಅಂಗಳದಲ್ಲಿ ಕಪ್ಪೆಗಳ ಸಂತತಿ ಕಡಿಮೆ ಆಗಿದೆ. ರಾತ್ರಿ ಎಲ್ಲ ಕಪ್ಪೆ ವಟರುಗುಟ್ಟಿ ನಿದ್ದೆ ಹಾಳಾಗುವ ಸಂದರ್ಭಗಳು ಈಗ ಇಲ್ಲ. ಮನೆ ಹೊರಗಡೆ ಇರುವ ಆ ಹಸಿರು ಹಾವನ್ನು ಮನೆ ಒಳಗೆ ಬಿಟ್ಟು ಕೊಂಡರೆ, ಮನೆಯಲ್ಲಿ ಸೇರಿಕೊಂಡಿರುವ ಇಲಿಗಳ ಕಾಟ ಅದು ತಪ್ಪಿಸುತ್ತದೆ ಏನೋ ಎಂದು ಕೂಡ ವಿಚಾರ ಮಾಡುತ್ತೇನೆ. ಇಲ್ಲಿ ಸುತ್ತ ಮುತ್ತ ಇರುವ ಹಾವುಗಳನ್ನು ಕಂಡ ನನ್ನ ಸ್ನೇಹಿತರು ನನ್ನನ್ನು ಭೇಟಿಯಾಗಲು ಮನೆಗೆ ಬರುವುದು ನಿಲ್ಲಿಸಿದ್ದಾರೆ. ಹಾಗೆಯೇ ನನಗೆ ಸಾಲ ಕೊಟ್ಟವರೂ ಕೂಡ.