Sunday, May 16, 2021

ಸಹಜ ಸತ್ಯ

ಸಾವಿರದ ಮನೆಯ ಸಾಸಿವೆ ತಾರೆಂದ ಬುದ್ಧ,

ನೋವ ಮರೆಸುವುದಕ್ಕಲ್ಲ,

ಸಾವು ಸಹಜ ಎಂದು ತಿಳಿಸುವ ಪ್ರಬುದ್ಧ

ಸತ್ಯ ಮೆರೆಸುವುದಕ್ಕೆ;


ಆಸೆಯೇ ದುಃಖಕ್ಕೆ ಮೂಲವಾದರೆ, ಅತಿಯಾಸೆ?

ಮುಳುಗಿಸಿಬಿಡುವಷ್ಟು ದೊಡ್ಡ ಸಾಗರ,

ಮನೆ ಮನದ ನಾಲ್ಕು ಮೂಲೆಯಾದರೆ, ಆಕಾಶ?

ಬ್ರಹ್ಮಾಂಡವನ್ನೇ ಮನೆಯಾಗಿಸುವ ಆಗರ;

No comments:

Post a Comment