Saturday, November 14, 2020

ಸುಮಧುರ ಗೀತೆಗಳ ರಚನಕಾರ: ದೊಡ್ಡರಂಗೇಗೌಡ

 'ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ...'

'ನಮ್ಮೂರ ಮಂದಾರ ಹೂವೆ ...'

'ತೇರ ಏರಿ ಅಂಬರದಾಗೇ ...'

'ಶ್ರೀ ರಾಮ ಬಂದವ್ನೆ, ಸೀತೆಯ ಕಾಣಲಿಕ್ಕೆ ...'

'ಕೊಲುಮಂಡೆ ಜಂಗಮದೇವರು ...'

 

ಕೇಳಲು ಇಂಪಾದ, ಪದ ಜೋಡಣೆಯ ಮಾಧುರ್ಯ ಹೊಂದಿದ ಇವೆಲ್ಲ ಜನಪ್ರಿಯ ಚಿತ್ರ ಗೀತೆಗಳನ್ನು ನೀವು ಕೇಳಿಯೇ ಇರ್ತೀರಿ. ಇವೆಲ್ಲವುಗಳನ್ನು ರಚಿಸಿದ್ದು  ಕವಿ ದೊಡ್ಡ ರಂಗೇಗೌಡರು. ಇವರು ಹುಟ್ಟಿ ಬೆಳೆದದ್ದು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ. ಕನ್ನಡ ಪ್ರಾಧ್ಯಾಪಕರಾಗಿ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು ಬೆಂಗಳೂರಿನ  ಕಾಲೇಜೊಂದರಲ್ಲಿ. ಆದರೆ ಇವರ ಜನಪ್ರಿಯರಾಗಿದ್ದು ಕವಿತೆಗಳ ಮೂಲಕ.  ಚಲನಚಿತ್ರಗಳಿಗೆ ಗೀತೆ, ಮತ್ತು ಸಂಭಾಷಣೆ ಅಲ್ಲದೆ ಹಲವಾರು ಭಾವಗೀತೆಗಳ ಸಂಕಲನಗಳನ್ನು ರಚಿಸಿದ್ದಾರೆ. ಮೂರು ಬಾರಿ ಅತ್ಯುತ್ತಮ ಗೀತ-ರಚನಾಕಾರ ಪ್ರಶಸ್ತಿ ಹಾಗೂ 'ಪದ್ಮ ಶ್ರೀ' ಪ್ರಶಸ್ತಿ ಇವರನ್ನು ಅರಸಿ ಬಂದಿವೆ. ಕವಿಯಾಗಿ ಅವರ ಅನುಭವಗಳು, ಅವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಮತ್ತು ಕವಿತೆ ಬರೆದಂತ ಸಂದರ್ಭಗಳು, ಇವುಗಳ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡರೆ ಎಷ್ಟು  ಚೆನ್ನ ಅಲ್ಲವೇ? ಅದಕ್ಕಾಗಿ ಈ ವಿಡಿಯೋ ವನ್ನು ನೋಡಿ.


https://www.youtube.com/watch?v=Dai-YsAIKTo






 

No comments:

Post a Comment