Wednesday, April 14, 2021

ಬೇವು ಬೆಲ್ಲದೊಳಿಡಲೇನು ಫಲ?

ಪುರಂದರ ದಾಸರು ದೇವರ ಕೀರ್ತನೆಗಳನ್ನು ಹಾಡಿದಷ್ಟೇ ಸುಲಭವಾಗಿ, ಮನುಷ್ಯ ಗುಣದ ಲೋಪ ದೋಷಗಳನ್ನು, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಾಕಷ್ಟು ಗೀತೆಗಳನ್ನು ಕೂಡ ರಚಿಸಿದ್ದಾರೆ. ಅಂತಹ ಒಂದು ಗೀತೆ "ಬೇವು ಬೆಲ್ಲದೊಳಿಡಲೇನು ಫಲ?". ಆ ಗೀತೆಗಳು ದಾಸರ ಕಾಲವಾದ  ೧೫ ನೇ ಶತಮಾನದ ಜನ ಸಾಮಾನ್ಯರ ಶೈಲಿ ತೋರಿಸುವುದಷ್ಟೇ ಅಲ್ಲ. ಬದಲಾಗದ ಮನುಷ್ಯನ ಗುಣಗಳು ಕಾಲಾತೀತ ಎನ್ನುವ ವಿಪರ್ಯಾಸವನ್ನು ಮಾರ್ಮಿಕವಾಗಿ ತೋರಿಸುತ್ತವೆ. ಹಾಗೆಯೇ ಮೋಹ-ಮದ ಇತ್ಯಾದಿ ವಿಕಾರಗಳು ತಹಬದಿಗೆ ಬಂದಾಗ, ಇಷ್ಟ ದೈವ ಹೃದಯದಾಳವನ್ನು ತಲುಪಲು ಸುಲಭ ಸಾಧ್ಯ ಎನ್ನುವ ಸತ್ಯ ಸಂದೇಶ ಕೂಡ ಸಾರುತ್ತವೆ. ಆದರೆ ಅದಕ್ಕೆ ಬರೀ ಗೀತೆಯನ್ನು ಆನಂದಿಸುವುದಷ್ಟೇ ಅಲ್ಲ, ಪುರಂದರರು ಕೇಳುವ ಪ್ರಶ್ನೆಗಳನ್ನು ನಮ್ಮ ಅಂತರಾಳದಲ್ಲಿ ಕೇಳಿ ಕೊಳ್ಳಬೇಕಲ್ಲವೇ?




No comments:

Post a Comment