Monday, April 26, 2021

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ

೧೯೬೧ ರಲ್ಲಿ ಬಿಡುಗಡೆಯಾದ ಕಪ್ಪು-ಬಿಳುಪು ಚಿತ್ರ 'ಕಣ್ತೆರೆದು ನೋಡು'. ಈ ಚಿತ್ರದಲ್ಲಿ ಕಣ್ಣು ಕಾಣಿಸದ ನಾಯಕನಿಗೆ ಕಂಠ ಸಿರಿಯ ಪ್ರತಿಭೆ. ಅವನಿಂದ ಹಾಡು ಹಾಡಿಸಿ ಹಣ ಸಂಗ್ರಹಿಸುವ ಜೊತೆಗಾರ. ಈ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿರುವ ಪುರಂದರ ದಾಸರ ಕೀರ್ತನೆ ಇಂಪಾಗಿ ಮೂಡಿ ಬಂದಿದೆ. "ಸಂತೆಯೊಳಗೆ ಇಟ್ಟು ಮಾರುವುದಲ್ಲ ಭಕ್ತಿಯ ಸವಿ" ಎಂದು ದಾಸರು ಹಾಡಿದರೂ, ಅದನ್ನೇ ಬಂಡವಾಳ ಮಾಡಿಕೊಂಡಿರುವ ನಮ್ಮ ಸಮಾಜದ ದ್ವಂದ್ವವನ್ನು ತೋರಿಸುತ್ತದೆ.




No comments:

Post a Comment